Tag: ಕಡಲತೀರ

  • ಡೆಸರ್ಟ್ ಸಫಾರಿ ಬಳಿಕ ಬಿಕಿನಿಯಲ್ಲಿ ಜಾನ್ವಿ, ಖುಷಿ ಕಪೂರ್ ಮೋಜು, ಮಸ್ತಿ

    ಡೆಸರ್ಟ್ ಸಫಾರಿ ಬಳಿಕ ಬಿಕಿನಿಯಲ್ಲಿ ಜಾನ್ವಿ, ಖುಷಿ ಕಪೂರ್ ಮೋಜು, ಮಸ್ತಿ

    ಮುಂಬೈ: ಬಾಲಿವುಡ್ ನಟಿ ಜಾನ್ವಿ ಕಪೂರ್ ಸಹೋದರಿ ಖುಷಿ ಕಪೂರ್ ಜೊತೆ ಬಿಕಿನಿ ತೊಟ್ಟು ಹಾಟ್ ಆಗಿ ಫೋಟೋಗಳಿಗೆ ಪೋಸ್ ನೀಡುವ ಮೂಲಕ ಪಡ್ಡೆಹುಡುಗರ ನಿದ್ದೆಗೇಡಿಸುತ್ತಿದ್ದಾರೆ.

    ತಮ್ಮ ಬ್ಯುಸಿ ಶೆಡ್ಯೂಲ್‍ಗಳಿಂದ ಬ್ರೇಕ್ ಪಡೆದುಕೊಂಡು ದುಬೈನಲ್ಲಿ ಸಹೋದರಿ ಖುಷಿ ಕಪೂರ್ ಜೊತೆಗೆ ಡೆಸರ್ಟ್ ಸಫಾರಿ ಮಾಡಿ ಸಖತ್ ಎಂಜಾಯ್ ಮಾಡಿದ್ದ ಜಾನ್ವಿ ಕಪೂರ್ ಇದೀಗ ಕಡಲ ತೀರದಲ್ಲಿ ಬಿಕಿನಿ ತೊಟ್ಟು ಸಖತ್ ಹಾಟ್ ಆ್ಯಂಡ್ ಬೋಲ್ಡ್ ಲುಕ್‍ನಲ್ಲಿ ಮಿಂಚಿದ್ದಾರೆ.

    Janhvi Kapoor

    ಈ ಫೋಟೋಗಳನ್ನು ಜಾನ್ವಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಫೋಟೋ ಜೊತೆಗೆ ಲುಂಗಿ ಡ್ಯಾನ್ಸ್ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್‍ಗೆ ಸಹೋದರಿ ಖುಷಿ “ವಾವ್” ಎಂದು ಕಾಮೆಂಟ್ ಮಾಡಿದರೆ, ನಟಿ ಕಿಯಾರಾ ಅಡ್ವಾಣಿ “ಉಫ್” ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಜಾನ್ವಿಯ ಚಿಕ್ಕಮ್ಮ ಮಹೀಪ್ ಕಪೂರ್ ಫೈರ್ ಎಮೋಜಿಗಳನ್ನು ಕಳುಹಿಸಿದ್ದಾರೆ. ಇದನ್ನೂ ಓದಿ:  ಡೆಸರ್ಟ್ ಸಫಾರಿಯನ್ನು ಎಂಜಾಯ್ ಮಾಡ್ತಿರೋ ಜಾನ್ವಿ, ಖುಷಿ ಕಪೂರ್

    ಕಡಲ ತೀರದ ಕತ್ತಲಿನಲ್ಲಿ ಜಾನ್ವಿ, ಖುಷಿ ಜೊತೆಗೆ ಬಿಕಿನಿಯಲ್ಲಿ ಫೋಟೋಗೆ ಪೋಸ್ ನೀಡಿರುವುದನ್ನು ಹಾಗೂ ಸಮುದ್ರದ ನೀರಿನಲ್ಲಿ ಆಟ ಆಡಿರುವುದನ್ನು, ವಾಟರ್ ಬೈಕ್ ರೈಡ್ ಮಾಡಿರುವುದನ್ನು ಕಾಣಬಹುದಾಗಿದೆ.

    Janhvi Kapoor

    ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ದಿವಂಗತ ನಟಿ ಶ್ರೀದೇವಿ ಮತ್ತು ನಿರ್ಮಾಪಕ ಬೋನಿ ಕಪೂರ್ ಅವರ ಪುತ್ರಿಯರು. ಜಾನ್ವಿ ಕಪೂರ್ ‘ಧಡಕ್’ ಚಿತ್ರದ ಮೂಲಕ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದ್ದರು. ಈ ಸಿನಿಮಾ ಮರಾಠಿ ಹಿಟ್ ಸಿನಿಮಾ ‘ಸೈರಾಟ್’ ಆಗಿದ್ದು, ಹಿಂದಿ ರಿಮೇಕ್‍ನಲ್ಲಿ ಇವರು ನಟಿಸಿದ್ದರು. ಜಾನ್ವಿ ಓಟಿಟಿಯಲ್ಲಿ ‘ಆಂಥಾಲಜಿ ಘೋಸ್ಟ್ ಸ್ಟೋರೀಸ್’ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಈ ಸಿನಿಮಾಗೆ ಜೋಯಾ ಅಖ್ತರ್ ನಿರ್ದೇಶನ ಮಾಡಿದ್ದರು. ಇದನ್ನೂ ಓದಿ: ಚಿಕ್ಕವಯಸ್ಸಿನ ಹುಡುಗನ ಜೊತೆ ಡೇಟಿಂಗ್ ಮಾಡುವ ಬಗ್ಗೆ ರಶ್ಮಿಕಾ ಉತ್ತರ ಏನು ಗೊತ್ತಾ?

     

    View this post on Instagram

     

    A post shared by Janhvi Kapoor (@janhvikapoor)

    ಜಾನ್ವಿ ಕಪೂರ್ ಬೆಳ್ಳಿಪರದೆ ಮೇಲೆ ಕೊನೆಯದಾಗಿ ‘ರೂಹಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರದಲ್ಲಿ ರಾಜ್‍ಕುಮಾರ್ ರಾವ್ ಮತ್ತು ವರುಣ್ ಶರ್ಮಾ ನಟಿಸಿದ್ದರು. ಪ್ರಸ್ತುತ ಈ ನಟಿ ಕರಣ್ ಜೋಹರ್ ನಿರ್ದೇಶನದ ತಖ್ತ್, ಗುಡ್ ಲಕ್ ಜೆರ್ರಿ ಮತ್ತು ದೋಸ್ತಾನಾ 2 ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

  • ಕಾಸರಕೋಡು ಇಕೋ ಬೀಚ್‍ಗೆ ಎರಡನೇ ಬಾರಿ ಅಂತರಾಷ್ಟ್ರೀಯ ಮಟ್ಟದ ಬ್ಲೂ ಫ್ಲಾಗ್ ಮಾನ್ಯತೆ

    ಕಾಸರಕೋಡು ಇಕೋ ಬೀಚ್‍ಗೆ ಎರಡನೇ ಬಾರಿ ಅಂತರಾಷ್ಟ್ರೀಯ ಮಟ್ಟದ ಬ್ಲೂ ಫ್ಲಾಗ್ ಮಾನ್ಯತೆ

    ಕಾರವಾರ: ವಿಶ್ವ ಮಟ್ಟದಲ್ಲಿ ಹೆಸರು ಮಾಡಿದ್ದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡ್ ಕಡಲತೀರದ ಇಕೋ ಬೀಚ್‍ನಲ್ಲಿ ಮಳೆಯ ಅಬ್ಬರ, ಸುನಾಮಿ ನಡುವೆಯೂ ಈ ವರ್ಷ ತನ್ನ ಗುಣಮಟ್ಟವನ್ನು ಕಾಯ್ದುಕೊಳ್ಳುವ ಮೂಲಕ ಅಂತರಾಷ್ಟ್ರೀಯ ಮಾನ್ಯತೆಯ ಬ್ಲೂ ಫ್ಲ್ಯಾಗ್ ಮಾನ್ಯತೆಯನ್ನು ಮತ್ತೆ ಪಡೆದಿದೆ.

    kasarkod eco beach

    ಪರಿಸರ ಸ್ನೇಹಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಕಡಲ ತೀರವನ್ನು ಪ್ರವಾಸೋದ್ಯಮ ಸ್ನೇಹಿಯಾಗಿ ಜಿಲ್ಲಾಡಳಿತ ನಿರ್ಮಾಣ ಮಾಡಿತ್ತು. ಕಳೆದ ವರ್ಷ ಸುಮಾರು 8 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಕಡಲತೀರದ ಸುಮಾರು 750 ಮೀಟರ್ ವ್ಯಾಪ್ತಿಯಲ್ಲಿ ಪ್ರವಾಸಿಗರು ಕುಳಿತುಕೊಳ್ಳಲು ವಿನೂತನ ಬಗೆಯ ಆಸನ ವ್ಯವಸ್ಥೆ, ವಾಚ್ ಟವರ್, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಪರಿಸರ ಸ್ನೇಹಿ ಸೌಲಭ್ಯಗಳ ವ್ಯವಸ್ಥೆಯನ್ನು ಮಾಡಲಾಗಿತ್ತು. ಇದನ್ನೂ ಓದಿ: ಸ್ಟೈಲಿಷ್ ಕೇಶ ವಿನ್ಯಾಸ, ಕ್ಲೀನ್ ಶೇವ್, ಟ್ರಿಮ್‍ಗೂ ತಾಲಿಬಾನ್ ನಿಷೇಧ

    kasarkod eco beach

    ಇದರೊಂದಿಗೆ ಮಕ್ಕಳ ಆಟಿಕೆಗಳನ್ನು ಸಹ ಅಳವಡಿಸಲಾಗಿದ್ದು, ಅಂತರಾಷ್ಟ್ರೀಯ ಗುಣಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಡಲತೀರದಲ್ಲಿ ಸ್ವಚ್ಛತೆಯನ್ನು ಸಹ ಕಾಯ್ದುಕೊಳ್ಳಲಾಗಿದೆ. ಇದಲ್ಲದೇ ಈ ಬಾರಿ ಸಹ ಬೀಚ್‍ಗೆ ಹಾನಿಯಾಗಿದ್ದರೂ, ಎಲ್ಲವನ್ನೂ ಸಮರ್ಪಕವಾಗಿ ಪುನಃ ನಿರ್ಮಿಸುವ ಮೂಲಕ ಇದೀಗ ಮತ್ತೊಮ್ಮೆ ವಿಶ್ವ ಮಟ್ಟದಲ್ಲಿ ತನ್ನನ್ನು ಗುರುತಿಸಿಕೊಂಡಿದೆ. ಇದನ್ನೂ ಓದಿ: ಬೆಳಗಾವಿ ಜನರ ಪ್ರೀತಿಗೆ ಬಿ.ಸಿ.ಪಾಟೀಲ್ ಸಂತಸ -“ರೈತರೊಂದಿಗೊಂದು ದಿನ” ಬಗ್ಗೆ ಕೌರವನ ಮಾತು

    kasarkod eco beach
    ಜಿಲ್ಲೆಯ ಇಕೋ ಕಡಲತೀರಕ್ಕೆ ಎರಡನೇಯ ಬಾರಿ ಅಂತರಾಷ್ಟ್ರೀಯ ಮಾನ್ಯತೆಯ ಬ್ಲೂ ಫ್ಲ್ಯಾಗ್ ಮನ್ನಣೆ ಸಿಕ್ಕಿರುವುದು ನಿಜಕ್ಕೂ ಹೆಮ್ಮೆಯ ವಿಚಾರವೇ. ಸದ್ಯ ಕೊರೊನಾ ಅಬ್ಬರದಿಂದಾಗಿ ಮಂಕಾಗಿರುವ ಉತ್ತರ ಕನ್ನಡ ಪ್ರವಾಸೋದ್ಯಮಕ್ಕೆ ಇದರಿಂದ ಒಂದಿಷ್ಟು ಚೇತರಿಕೆ ಕಾಣಲಿದೆ. ಇದನ್ನೂ ಓದಿ: ಮೂಕಜೀವಿಗಳ ಸಂಕಷ್ಟಕ್ಕೆ ಮಿಡಿಯುವ ಕೋಟೆನಾಡಿನ ಮಾನವೀಯತೆಯ ಹೃದಯ

    ಕಳೆದ ವರ್ಷ ಕೊರೊನಾ ಮೊದಲನೇಯ ಅಲೆಯ ಬಳಿಕ ಸಾಕಷ್ಟು ಪ್ರವಾಸಿಗರು ಬ್ಯೂಫ್ಲಾಗ್ ಕಡಲತೀರಕ್ಕೆ ಭೇಟಿ ನೀಡಿದ್ದರು. ಕುಟುಂಬಸ್ಥರು, ಮಕ್ಕಳು ಸಹ ಕಡಲತೀರಕ್ಕೆ ಆಗಮಿಸಿ ಎಂಜಾಯ್ ಮಾಡಲು ಅನುಕೂಲಕರ ವಾತಾವರಣ ಇರುವುದರಿಂದಾಗಿ ಪ್ರವಾಸಿಗರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಜೊತೆಗೆ ಕಡಲತೀರದ ನಿರ್ವಹಣೆಗಾಗಿಯೇ ಸಿಬ್ಬಂದಿ ನಿಯೋಜನೆ ಮಾಡಿದ್ದು, ಪ್ರತಿನಿತ್ಯ ಬೀಚ್‍ನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ಪ್ರವಾಸಿಗರ ಸುರಕ್ಷತೆಗೂ ಇದರಿಂದ ಅನುಕೂಲವಾಗಿತ್ತು. ಈ ಬಾರಿ ತೌಕ್ತೆ ಚಂಡಮಾರುತ ಅಪ್ಪಳಿಸಿದ ವೇಳೆ ಕಡಲತೀರದ ಒಂದು ಬದಿಗೆ ಕೊಂಚ ಹಾನಿಯಾಗಿತ್ತಾದರೂ ಇಲ್ಲಿನ ಸಿಬ್ಬಂದಿ ಕಡಲತೀರವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವ ಕೆಲಸ ಮಾಡಿದ್ದರು. ಈ ಹಿನ್ನಲೆ ಈ ಬಾರಿಯೂ ಸಹ ಕಡಲತೀರಕ್ಕೆ ಬ್ಯೂಫ್ಲ್ಯಾಗ್ ಮನ್ನಣೆ ಲಭಿಸುವಂತಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಖ್ಯಾತಿಯನ್ನು ಹೆಚ್ಚಿಸುವಂತಾಗಿದೆ.

  • ಕಡಲ ತೀರದಲ್ಲಿ ಕಡಲಾಮೆಗಳ 125 ಮೊಟ್ಟೆಗಳು ಪತ್ತೆ

    ಕಡಲ ತೀರದಲ್ಲಿ ಕಡಲಾಮೆಗಳ 125 ಮೊಟ್ಟೆಗಳು ಪತ್ತೆ

    ಕಾರವಾರ: ಬೃಹದಾಕಾರದ ಕಡಲಾಮೆಗಳ 125 ಮೊಟ್ಟೆಗಳು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡಿನಲ್ಲಿ ಪತ್ತೆಯಾಗಿದೆ.

    ಅಳಿವಿನಂಚಿನಲ್ಲಿರುವ ಬೃಹದಾಕಾರದ ಕಡಲಾಮೆ 125 ಮೊಟ್ಟೆಗಳು ಕಡಲತೀರದಲ್ಲಿ ಪತ್ತೆಯಾಗಿದ್ದು, ಅವುಗಳನ್ನು ರಕ್ಷಣೆ ಮಾಡಲಾಗಿದೆ. ಪ್ರತಿ ವರ್ಷ ಕಡಲಾಮೆಗಳು ಕಾಸರಕೋಡಿನ ಬಂದರು ಜಾಗದ ಬಳಿ ಮೊಟ್ಟೆ ಇಟ್ಟು 45 ದಿನದ ನಂತರ ಮರಿ ಮಾಡಿ ಕರೆದುಕೊಂಡು ಹೋಗುತ್ತವೆ. ಐದು ಅಡಿ ಸುತ್ತಳತೆಗೂ ಹೆಚ್ಚು ಹಾಗೂ ಮೂರು ಅಡಿಗೂ ಹೆಚ್ಚು ಈ ಆಮೆಗಳು ಬೆಳೆಯುತ್ತದೆ.

    ಸದ್ಯ ಅವನತಿಯ ಅಂಚಿನಲ್ಲಿರುವ ಈ ಆಮೆಗಳು ಸಮುದ್ರದ ತಡದಲ್ಲಿನ ಯಾಂತ್ರಿಕ ಬದಲಾವಣೆಯಿಂದಾಗಿ ತನ್ನ ವಂಶಗಳನ್ನು ಕಳೆದುಕೊಳ್ಳುತಿದ್ದು ಅಳಿವಿನಂಚಿಗೆ ತಲುಪಿದೆ. ಇಂದು ಅರಣ್ಯ ಇಲಾಖೆ ಈ ಮೊಟ್ಟೆಗಳನ್ನು ರಕ್ಷಣೆಮಾಡಿದ್ದು ಕೃತಕ ಶಾಖ ನೀಡಿ 45 ದಿನದ ನಂತರ ಸಮುದ್ರಕ್ಕೆ ಬಿಡಲಿದ್ದಾರೆ.

  • ಗೋವಾದಲ್ಲಿ ಮದ್ಯಪಾನ ಮಾಡೋ ಮುನ್ನ ಹುಷಾರ್ – ಬೀಳುತ್ತೆ ಬಾರೀ ದಂಡ

    ಗೋವಾದಲ್ಲಿ ಮದ್ಯಪಾನ ಮಾಡೋ ಮುನ್ನ ಹುಷಾರ್ – ಬೀಳುತ್ತೆ ಬಾರೀ ದಂಡ

    ಪಣಜಿ: ರಜೆ ಸಮಯದಲ್ಲಿ ಗೋವಾ ಪ್ರವಾಸಕ್ಕೆ ತೆರಳಿ ಅಲ್ಲಿನ ಕಡಲ ತೀರದಲ್ಲಿ ಮದ್ಯಪಾನ ಮಾಡುವ ಯೋಚನೆ ನಿಮಗೇನಾದರೂ ಇದ್ದರೆ ಈಗಲೇ ಜಾಗೃತರಾಗಿರಿ. ಇದರಿಂದ ನೀವೇ ತೊಂದರೆಗೆ ಸಿಲುಕಿ ಹಾಕಿಕೊಳ್ಳಬಹುದು. ಯಾಕಂದ್ರೆ ಇನ್ನು ಮುಂದೆ ಗೋವಾ ಕಡಲ ತೀರಗಳಲ್ಲಿ ಕುಡಿಯುವವರಿಗೆ 10,000 ರೂ. ದಂಡ ವಿಧಿಸಲು ಗೋವಾ ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದೆ.

    ಈ ಬಾರಿಯ ಹೊಸ ವರ್ಷದ ಸಂಭ್ರಮಾಚರಣೆಯ ನಂತರ ಹಲವು ಪ್ರದೇಶಗಳು ಬಾಟಲಿಗಳ ಕಸದ ರಾಶಿಯಿಂದ ತುಂಬಿದ್ದನ್ನು ಗಮನಿಸಿದ ಗೋವಾ ಪ್ರವಾಸೋದ್ಯಮ ಇಲಾಖೆ, ಇನ್ನು ಮುಂದೆ ಕಡಲ ತೀರದಲ್ಲಿ ಕೆಲವು ಪ್ರದೇಶಗಳಲ್ಲಿ ಕುಡಿಯುವ ಜನರಿಗೆ 10,000 ರೂ. ದಂಡ ವಿಧಿಸಲು ಮುಂದಾಗಿದೆ. ಅಲ್ಲದೇ ಪ್ರವಾಸಿಗರಿಗೆ ಎಚ್ಚರಿಕೆ ನೀಡುವ ಸಲುವಾಗಿ ಕೆಲವು ಮಂಡಳಿ(ಬೋರ್ಡ್)ಗಳನ್ನು ಸ್ಥಾಪಿಸಲಾಗಿದೆ ಎಂದು ಗೋವಾ ಪ್ರವಾಸೋದ್ಯಮ ನಿರ್ದೇಶಕ ಮೆನಿನೊ ಡಿಸೋಜಾ ಸುದ್ದಿಸಂಸ್ಥೆಗೆ ಹೇಳಿದ್ದಾರೆ.

    ರಾಜ್ಯದ ಪ್ರವಾಸೋದ್ಯಮ ಇಲಾಖೆ ತಿದ್ದುಪಡಿ ಕಾಯ್ದೆಯನ್ನು ಪೊಲೀಸರ ಮೂಲಕ ಜಾರಿಗೊಳಿಸಿದ್ದು, ಪ್ರವಾಸಿ ಪೊಲೀಸ್ ಪಡೆ ಇದ್ದರೆ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಈ ಹಿಂದೆ 2019ರ ಜನವರಿಯಲ್ಲಿ ರಾಜ್ಯ ಸರ್ಕಾರವು ಪ್ರವಾಸಿ ವ್ಯಾಪಾರ ಕಾಯ್ದೆ ತಿದ್ದುಪಡಿಯನ್ನು ಜಾರಿಗೊಳಿಸಿ ಅದರ ಅನ್ವಯ ಕಡಲ ತೀರದಲ್ಲಿ ಕುಡಿಯುವ ಒಬ್ಬ ವ್ಯಕ್ತಿಗೆ 2,000 ರೂ. ಮತ್ತು ಗುಂಪುಗಳಲ್ಲಿ ಕುಡಿಯುವವರಿಗೆ 10,000 ರೂ. ದಂಡ ವಿಧಿಸಲಾಗಿತ್ತು.

    ಅಲ್ಲದೆ ಶುಕ್ರವಾರ ಗೋವಾದಲ್ಲಿ ನಡೆಸಿದ ಕೊರೊನಾ ವೈರಸ್ ಪರೀಕ್ಷೆಯಲ್ಲಿ 83 ಜನರಿಗೆ ಪಾಸಿಟಿವ್ ಬಂದಿದ್ದು, ಸೋಂಕಿನಿಂದ 105 ಜನ ಚೇತರಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಇಲ್ಲಿಯವರೆಗೂ ಗೋವಾದಲ್ಲಿ ಸೋಂಕಿತರ ಸಂಖ್ಯೆ 51,709ಕ್ಕೆ ತಲುಪಿದ್ದು, ಈ ಪೈಕಿ 50,088 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಹಾಗೂ 744 ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಇದೀಗ ರಾಜ್ಯದಲ್ಲಿ 877 ಸಕ್ರಿಯ ಪ್ರಕರಣಗಳು ಉಳಿದಿದೆ.

  • 150 ಕೆಜಿ ತೂಕದ ‘ದೈತ್ಯ ಮೀನು’ ಸಮುದ್ರದ ದಡದಲ್ಲಿ ಪತ್ತೆ- ಫೋಟೋ ವೈರಲ್

    150 ಕೆಜಿ ತೂಕದ ‘ದೈತ್ಯ ಮೀನು’ ಸಮುದ್ರದ ದಡದಲ್ಲಿ ಪತ್ತೆ- ಫೋಟೋ ವೈರಲ್

    ಸಿಡ್ನಿ: 150 ಕೆಜಿ ತೂಕದ ದೈತ್ಯ ಮೀನು ಮಂಗಳವಾರ ಮಧ್ಯಾಹ್ನ ಆಸ್ಟ್ರೇಲಿಯದ ಕ್ವೀನ್ಸ್ ಲ್ಯಾಂಡ್ ನ ಕಡಲತೀರದಲ್ಲಿ ಪತ್ತೆಯಾಗಿದೆ.

    ಮಂಗಳವಾರ ಮಧ್ಯಾಹ್ನ ಮೂರ್ ಪಾರ್ಕ್ ಬೀಚ್ ನಲ್ಲಿ ಜಾನ್ ಮತ್ತು ರಿಲೆ ಲಿಂಡ್ಹೋಮ್ ಅವರು ವಾಕಿಂಗ್ ಮಾಡುವಾಗ ಈ ದೈತ್ಯ ಮೀನನ್ನ ಕಂಡಿದ್ದಾರೆ. ಲಿಂಡ್ಹೋಮ್ ಅವರು ಮೀನುಗಾರಿಕೆಗೆ ಸಂಬಂಧಿಸಿದ ಕೆಲಸ ಮಾಡುತ್ತಿದ್ದು ಇಂತಹ ಮೀನನ್ನು ನಾನು ಈವರೆಗೆ ಕಂಡಿರಲಿಲ್ಲ. ಆ ಮೀನು ಯಾವುದು ಎಂಬುದರ ಬಗ್ಗೆ ನನಗೆ ಯಾವುದೇ ಕಲ್ಪನೆಯಿಲ್ಲ ಎಂದು ಖಾಸಗಿ ವಾಹಿನಿಯೊಂದರಲ್ಲಿ ಹೇಳಿದ್ದಾರೆ.

    “ನಾನು ಬಹಳಷ್ಟು ಮೀನುಗಳನ್ನು ನೋಡಿದ್ದೇನೆ ಮತ್ತು ಬಹಳಷ್ಟು ದೊಡ್ಡ ಮೀನುಗಳನ್ನು ಕಂಡಿದ್ದೇನೆ. ಆದರೆ ನಾನು ಈ ರೀತಿಯ ಮೀನನ್ನ ಎಂದಿಗೂ ಕಾಣಲಿಲ್ಲ” ಎಂದು ಅವರು ಹೇಳಿದ್ದು, ಆ ಮೀನು ಅಂದಾಜು 1.5 ರಿಂದ 1.7 ಮೀಟರ್ ಉದ್ದ ಅಥವಾ ಸುಮಾರು 5 ಅಡಿ ಉದ್ದವಿದೆ ಎಂದು ಅಂದಾಜಿಸಿದ್ದಾರೆ.

    ರಿಲೆ ಲಿಂಡ್ಹೋಮ್ ಅವರು ಮೀನನ್ನು ಗುರುತಿಸಲು ಸಾರ್ವಜನಿಕ ಫೋರಂನಲ್ಲಿ ಅದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

    ಇದು ಕಾಡ್ ಜಾತಿಯ ಮೀನಾಗಿರಬಹುದು ಅಥವಾ ಗ್ರೌಪರ್ ಮೀನಿರಬಹುದು ಎಂದು ಕೆಲವರು ಊಹಿಸಿದ್ದಾರೆ. ಆದ್ರೆ ಒಬ್ಬ ವ್ಯಕ್ತಿ ಇದನ್ನು ಟ್ರಿಪ್ಲೆಟೈಲ್ ಎಂದು ಕರೆದಿದ್ದು, ಆತ ಹೇಳುತ್ತಿರುವುದು ಸರಿ ಇರಬಹುದು ಎನ್ನಿಸುತ್ತದೆ ಎಂದು ಮಿ.ಲಿಂಡ್ಹೋಮ್ ಅವರು ಖಾಸಗಿ ವಾಹಿನಿಗೆ ಹೇಳಿದ್ದಾರೆ.

    ಈ ದೈತ್ಯ ಮೀನಿನ ಫೋಟೋವನ್ನ ಲಿಂಡ್ಹೋಮ್ ಅವರು ಹಂಚಿಕೊಂಡ ಬಳಿಕ ಶೀಘ್ರದಲ್ಲೇ ಆ ಫೋಟೋ ವೈರಲ್ ಆಗಿದೆ. ಈ ಮೀನು ನಿರ್ದಿಷ್ಟವಾಗಿ ಯಾವ ಜಾತಿಗೆ ಸೇರಿದ್ದು ಎಂದು ಗುರುತಿಸುವುದು ಕಷ್ಟ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಮೀನು ಪತ್ತೆಯಾದ ಸ್ಥಿತಿಯಿಂದಾಗಿ ಅದನ್ನು ಗುರುತಿಸುವುದು ಕಷ್ಟವೇ. ಆದರೆ ಇದು ಕ್ವೀನ್ಸ್ ಲ್ಯಾಂಡ್ ಗ್ರೌಪರ್ ನಂತೆ ಕಾಣಿಸುತ್ತದೆ ಎಂದು ಕ್ವೀನ್ಸ್ ಲ್ಯಾಂಡ್ ಬೋಟಿಂಗ್ ಮತ್ತು ಫಿಶರೀಸ್ ಪ್ಯಾಟ್ರೋಲ್ ನವರು ಅವರು ಹೇಳಿದ್ದಾರೆ.