Tag: ಕಂಪ್ಯೂಟರ್ ಆಪರೇಟರ್

  • ಎಸಿಬಿ ದಾಳಿ- ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದ ಕಂಪ್ಯೂಟರ್ ಆಪರೇಟರ್

    ಎಸಿಬಿ ದಾಳಿ- ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದ ಕಂಪ್ಯೂಟರ್ ಆಪರೇಟರ್

    ಚಿತ್ರದುರ್ಗ: ಕಂಪ್ಯೂಟರ್ ಆಪರೇಟರ್ ಲಂಚ ಸ್ವೀಕರಿಸುವ ವೇಳೆ ಎಸಿಬಿ ಕೈಗೆ ಸಿಕ್ಕಿಬಿದ್ದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಿವಿಪುರ ಗ್ರಾಮಪಂಚಾಯ್ತಿಯಲ್ಲಿ ನಡೆದಿದೆ.

    ಹಳ್ಳಿಗಾಡಲ್ಲಿ ದುಡಿಮೆ ಇಲ್ಲದ ಕೈಗಳಿಗೆ ಕೆಲಸ ನೀಡಲು ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ತಂದಿದೆ. ಆದರೆ ಕೆರೆ ಹೂಳೆತ್ತುವ ಕಾಮಗಾರಿಯ ಹಣ ಬಿಡುಗಡೆ ಮಾಡಲು ಸಹ ಲಂಚ ಪಡೆಯುತಿದ್ದ ಕಂಪ್ಯೂಟರ್ ಆಪರೇಟರ್ ನರೇಂದ್ರಬಾಬು ಎಸಿಬಿ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಇದನ್ನೂ ಓದಿ: ಮಾಲೀಕನನ್ನು ಚಿರತೆ ಬಾಯಿಂದ ತಪ್ಪಿಸಿದ ಶ್ವಾನ

    ವಿವಿಪುರದಲ್ಲಿ ಯೋಜನೆಯ ಹಣ ಬಿಡುಗಡೆ ಮಾಡಲು ಓಂಕಾರಪ್ಪ ಎಂಬವರ ಬಳಿ ಗ್ರಾಮಪಂಚಾಯ್ತಿ ಕಂಪ್ಯೂಟರ್ ಆಪರೇಟರ್ ನರೇಂದ್ರಬಾಬು 5000 ರೂ. ಲಂಚ ಕೇಳಿದ್ದರು. ಆಗ ನೊಂದ ಓಂಕಾರಪ್ಪ ಎಸಿಬಿ ಅಧಿಕಾರಿಗಳ ಮೊರೆ ಹೋಗಿದ್ದರು. ಈ ವೇಳೆ ಗ್ರಾಮಪಂಚಾಯ್ತಿ ಕಚೇರಿ ಮೇಲೆ ದಿಢೀರ್ ದಾಳಿ ನಡೆಸಿ, ಕಾರ್ಯಾಚರಣೆ ನಡೆಸುವಾಗ ಎಸಿಬಿ ಬಲೆಗೆ ನರೆಂದ್ರಬಾಬು ಬಿದ್ದಿದ್ದಾರೆ.

    ಎಸಿಬಿ ಪಿ.ಐ.ಪ್ರವೀಣ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಓಂಕಾರಪ್ಪ ಬಳಿ 5000 ರೂ. ಲಂಚ ತೆಗೆದುಕೊಳ್ಳುತ್ತಿದ್ದ ವೇಳೆ ನರೇಂದ್ರಬಾಬು ಸಿಕ್ಕಿಬಿದ್ದು, ಇಂಗು ತಿಂದ ಮಂಗನಂತಾಗಿದ್ದಾರೆ. ಇದನ್ನೂ ಓದಿ: 10 ಮಂದಿ ದರೋಡೆಕೋರರನ್ನು ಬಂಧಿಸಿದ ಶಿರಾಳಕೊಪ್ಪ ಪೊಲೀಸರು

  • ಥಂಬ್ ಹಾಕಲು ಬಂದಾಗ ಸೊಂಟ ಮುಟ್ಟಿ ಕಂಪ್ಯೂಟರ್ ಆಪರೇಟರ್‌ನಿಂದ ಕಿರುಕುಳ

    ಥಂಬ್ ಹಾಕಲು ಬಂದಾಗ ಸೊಂಟ ಮುಟ್ಟಿ ಕಂಪ್ಯೂಟರ್ ಆಪರೇಟರ್‌ನಿಂದ ಕಿರುಕುಳ

    – ಸಿಸಿ ಕ್ಯಾಮೆರಾದಲ್ಲಿ ಸೆರೆ

    ದಾವಣಗೆರೆ: ಕಂಪ್ಯೂಟರ್ ಆಪರೇಟರ್ ಅಟೆಂಡರ್ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ದಾವಣಗೆರೆ ತಾಲೂಕಿನ ಹೊನ್ನೂರು ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.

    ಕಂಪ್ಯೂಟರ್ ಆಪರೇಟರ್ ವೆಂಕಟೇಶ್ ಮಹಿಳೆಗೆ ಲೈಂಗಿಕ ಕಿರುಕುಳ ಕೊಟ್ಟ ವ್ಯಕ್ತಿ. ಕಳೆದ ಫೆಬ್ರವರಿ 15 ಮತ್ತು 18 ರಂದು ನಡೆದ ಲೈಂಗಿಕ ಕಿರುಕುಳ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ವೈರಲ್ ಆಗಿದ್ದು, ವೆಂಕಟೇಶ್ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಮಹಿಳೆ ಹೊನ್ನೂರು ಗ್ರಾಮ ಪಂಚಾಯಿತಿಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಹಿಳೆ ಕಳೆದ 5 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಕಂಪ್ಯೂಟರ್ ಆಪರೇಟರ್ ವೆಂಕಟೇಶ್ ಕಿರುಕುಳ ನೀಡುತ್ತಿದ್ದಾನೆ. ಪ್ರತಿದಿನ ಥಂಬ್ ಮೂಲಕ ಹಾಜರಾತಿ ಹಾಕುವ ವೇಳೆ ಮಹಿಳೆ ಸೊಂಟ ಮುಟ್ಟುತ್ತಿದ್ದನು. ಮಹಿಳೆ ವಿರೋಧ ಮಾಡಿದರೂ ಕಾಮುಕ ವೆಂಕಟೇಶ್ ಮಾತ್ರ ಮತ್ತೆ ಮತ್ತೆ ಸೊಂಟ ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದನು.

    ಕಳೆದ ಫೆಬ್ರವರಿ 15 ಮತ್ತು 18 ರಂದು ಇದೇ ರೀತಿ ಮಾಡಿದ್ದಾನೆ. ನಂತರ ಮಹಿಳೆ ಹಾಜರಾತಿ ಹಾಕುವುದಕ್ಕೆ ಹೋಗಿಲ್ಲ. ಬಳಿಕ ಸಿಸಿ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯವನ್ನ ಪಡೆದು ಇದೀಗ ಆತನ ಬಣ್ಣವನ್ನ ಬಯಲು ಮಾಡಿದ್ದಾರೆ. ನನಗೆ ವೆಂಕಟೇಶ್‍ನಿಂದ ಲೈಂಗಿಕ ಕಿರುಕುಳ ಹೆಚ್ಚಾಗಿದೆ. ನನಗೆ ನ್ಯಾಯಬೇಕು ಎಂದು ನೊಂದ ಮಹಿಳೆ ಆಗ್ರಹಿಸಿದ್ದಾರೆ.

    ಮಹಿಳೆ ಕಚೇರಿಯಲ್ಲಿ ನಡೆಯ ಘಟನೆಯ ಬಗ್ಗೆ ಕುಟುಂಬದಲ್ಲಿ ತಿಳಿಸಿದ್ದಾರೆ. ಆಗ ಕುಟುಂಬದವರು ಮಹಿಳೆ ಬೆಂಬಲಕ್ಕೆ ನಿಂತಿದ್ದಾರೆ. ವೆಂಕಟೇಶ್ ಪ್ರಭಾವಿ ವ್ಯಕ್ತಿಯಾಗಿದ್ದು, ನಮಗೆ ಜೀವ ಬೆದರಿಕೆ ಹಾಕಿದ್ದಾನೆ. ಕಾನೂನಿನ ಮೂಲಕ ಆತನಿಗೆ ಸರಿಯಾದ ಶಿಕ್ಷೆಯಾಗಬೇಕೆಂದು ಮಹಿಳೆ ಪತಿ ಸುರೇಶ್ ಆಗ್ರಹಿಸಿದ್ದಾರೆ.

    ಈ ಸಂಬಂಧ ಈಗಾಗಲೇ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಅಲ್ಲದೇ ಜಿಲ್ಲಾ ಪಂಚಾಯಿತಿ ಸಿಇಓ ಅವರು, ಕಾನೂನಿನಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಗ್ರಾಮ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಮಾಡಿ ನಂತರ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದ್ದಾರೆ.