Tag: ಕಂಚಿನ ಪುತ್ಥಳಿ

  • ಪುನೀತ್ ರಾಜ್‍ಕುಮಾರ್ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಹೆಚ್ಚಿದ ಬೇಡಿಕೆ!

    ಪುನೀತ್ ರಾಜ್‍ಕುಮಾರ್ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಹೆಚ್ಚಿದ ಬೇಡಿಕೆ!

    ಬೆಂಗಳೂರು: ಕರುನಾಡಿನ ಯುವರತ್ನ ಧ್ರುವತಾರೆಯಾಗಿ ಆಕಾಶದಲ್ಲಿ ಮಿನುಗುತ್ತಿದ್ದಾರೆ. ಅವರು ನಮ್ಮಿಂದ ಅಗಲಿದ್ದಾರೆ ಅನ್ನೋ ಸತ್ಯನ ಒಪ್ಪಿಕೊಳ್ಳೋಕೆ ಮನಸ್ಸಾಗ್ತಿಲ್ಲ. ಹೀಗಿರೋವಾಗ ಅಭಿಮಾನಿಗಳು ಅಪ್ಪುನ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕೆಲವೆಡೆ ರಸ್ತೆಗಳಿಗೂ ಪುನೀತ್ ಹೆಸರು ಇಡಲಾಗಿದೆ.

    ಪುನೀತ್ ರಾಜ್‍ಕುಮಾರ್ ಇನ್ನಿಲ್ಲ ಎಂಬ ಸತ್ಯ ಒಪ್ಪಲು ಯಾರು ಸಿದ್ಧರಿಲ್ಲ. ಅಪ್ಪು ಇದ್ದಷ್ಟು ದಿನ ಜನರ ಜೊತೆಗೇ ಇದ್ರು. ಜನರ ಜೊತೆ ಸಿಂಪಲ್ ಆಗಿಯೇ ಬೆರೆಯುತ್ತಿದ್ದರು. ಅಭಿಮಾನಿಗಳ ಜೊತೆ ಕುಳಿತು ಊಟ ಮಾಡುತ್ತಿದ್ದರು. ಈಗ ವೀರಕನ್ನಡಿಗ ಚಿರನಿದ್ರೆಗೆ ಜಾರಿದ್ದಾರೆ. ಹಾಗಾಗಿ ಈಗ ಅಪ್ಪು ಪ್ರತಿಮೆ ನಿರ್ಮಿಸಲು ತಯಾರಿ ನಡೆಯುತ್ತಿದೆ. ಇದನ್ನೂ ಓದಿ: ಪವರ್ ಸ್ಟಾರ್ ಸಮಾಧಿ ಬಳಿ ಅಭಿಮಾನಿಗಳ ಕಣ್ಣೀರಧಾರೆ

    ಬೆಂಗಳೂರಿನ ಹಲವೆಡೆ ಅಪ್ಪು ಪುತ್ಥಳಿ ಇಡಲು ಆರ್ಡರ್‍ಗಳು ಶಿಲ್ಪಿ ಮನೆ ಬಾಗಿಲು ತಟ್ಟುತ್ತಿದೆ. ಚನ್ನಸಂದ್ರ ಶಿವಕುಮಾರ್ ಎಂಬ ಶಿಲ್ಪಿಗೆ ಈಗಾಗಲೇ 13ಕ್ಕೂ ಹೆಚ್ಚು ಅಪ್ಪು ಕಂಚಿನ ಪ್ರತಿಮೆಗೆ ಅಡ್ವಾನ್ಸ್ ಬುಕ್ ಆಗಿದೆ. ಮುಂದಿನ ಎರಡು ದಿನಗಳಲ್ಲಿ ವರ್ಕ್ ಸಹ ಶುರುವಾಗಲಿದೆ. ಇತ್ತ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲೂ ಅಧಿಕಾರಿ ಹಾಗೂ ನೌಕರರ ಸಂಘದ ವತಿಯಿಂದ ಪುತ್ಥಳಿ ಇಡಲು ಕಮೀಷನರ್ ಅನುಮತಿ ಕೇಳಲಾಗಿದೆ. 3 ಅಡಿಯ ಪುನೀತ್ ಕಂಚಿನ ಪುತ್ಥಳಿ ಸಿದ್ಧವಾಗಲಿದೆ ಎಂದು ಸಂಘದ ಅಧ್ಯಕ್ಷ ಅಮೃತ್ ರಾಜ್ ಹೇಳಿದರು. ಇದನ್ನೂ ಓದಿ: ನ.16ಕ್ಕೆ ಪ್ಯಾಲೇಸ್ ಗ್ರೌಂಡ್‍ನಲ್ಲಿ ಪವರ್ ಸ್ಟಾರ್‌ಗೆ ನುಡಿ ನಮನ

    ರಸ್ತೆಗಳಿಗೆ ‘ಅಪ್ಪು’ ಹೆಸರು..!
    ಅಭಿಮಾನಿಗಳ ಅಭಿಮಾನಕ್ಕೆ, ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪುನೀತ್ ಮೇಲಿನ ಅಭಿಮಾನದಿಂದ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶಿರವಾಳ ಗ್ರಾಮಸ್ಥರು ತಮ್ಮ ಗ್ರಾಮದ ವೃತ್ತವೊಂದಕ್ಕೆ ಪುನೀತ್ ರಾಜ್‍ಕುಮಾರ್ ವೃತ್ತ ಎಂದು ನಾಮಕರಣ ಮಾಡಿದ್ದಾರೆ. ಬೆಂಗಳೂರಿನಲ್ಲಿ ರಸ್ತೆಯೊಂದಕ್ಕೆ ಪುನೀತ್ ಹೆಸ್ರು ನಾಮಕರಣ ಮಾಡಬೇಕಂಬ ವಿಚಾರವಾಗಿ ರಾಘಣ್ಣ ಮಾತನಾಡಿದ್ದಾರೆ. ರಸ್ತೆಗೆ ಹೆಸರಿಡಬೇಕಾ ಅಥವಾ ಪುತ್ಥಳಿ ಮಾಡಬೇಕಾ ಗೊತ್ತಿಲ್ಲ. ನಾವು ಬಯೋಸೋದಿಲ್ಲ. ಇದೆಲ್ಲಾ ಜನರ ಪ್ರೀತಿ ಅಂದ್ರು. ಇದನ್ನೂ ಓದಿ: ಪುನೀತ್ ಸಾವಿನ ರಹಸ್ಯ ಒಂದೊಂದೇ ಬಯಲು!

    6ನೇ ದಿನದ ಪುಣ್ಯಸ್ಮರಣೆ ಆಚರಣೆ ಹಿನ್ನೆಲೆ ಮಂಡ್ಯದ ಮದ್ದೂರು ತಾಲೂಕಿನ ತೊಪ್ಪನಹಳ್ಳಿ ಗ್ರಾಮದಲ್ಲಿ ಪುನೀತ್ ಇಷ್ಟ ಪಡುವ ಮಾಂಸದೂಟ ಹಾಕಿ ಶ್ರದ್ಧಾಂಜಲಿ ಕೋರಲಾಯ್ತು. ಗ್ರಾಮಸ್ಥರು ನೂರಾರು ಮಂದಿಗೆ ಮಾಂಸದೂಟವನ್ನು ಹಾಕಿದರು. ದಾವಣಗೆರೆ ಸಿದ್ದಲಿಂಗೇಶ್ವರ ಶಾಲಾ ಮಕ್ಕಳು ವಿಶೇಷ ನಮನ ಸಲ್ಲಿಸಿದ್ರು. ಮಿಸ್ ಯು ಅಪ್ಪು ಎಂದು ಬ್ಲೈಂಡ್ ಪೋಲ್ಡರ್ ಡ್ರಾಯಿಂಗ್ ಮಾಡಿ ನಮನ ಸಲ್ಲಿಸಿದ್ರು.

    ಅಪ್ಪು ನಮ್ಮಿಂದ ಭೌತಿಕವಾಗಿ ದೂರ ಆಗಿದ್ದಾರೆ ಅಷ್ಟೇ. ಅವರ ಕೆಲಸ, ಸಿನಿಮಾದಿಂದ ಜನರ ಜೊತೆಗೇ ಇದ್ದಾರೆ. ಅಪ್ಪು ಇಲ್ಲ ಎಂಬ ಭಾವನೆ ದೂರ ಮಾಡಲು ಅಭಿಮಾನಿಗಳು ಈಗ ಪುತ್ಥಳಿಯನ್ನು ನಿರ್ಮಿಸೋಕೆ ನಿರ್ಧರಿಸಿದ್ದಾರೆ.

  • ಡಾ.ವಿಷ್ಣುವರ್ಧನ್ ಕಂಚಿನ ಪುತ್ಥಳಿ ಮಂದಿರದಲ್ಲಿ ನಾಗರಹಾವು ಪ್ರತ್ಯಕ್ಷ್ಯ!

    ಡಾ.ವಿಷ್ಣುವರ್ಧನ್ ಕಂಚಿನ ಪುತ್ಥಳಿ ಮಂದಿರದಲ್ಲಿ ನಾಗರಹಾವು ಪ್ರತ್ಯಕ್ಷ್ಯ!

    ಬೆಂಗಳೂರು: ನಗರದ ಹೊರವಲಯ ನೆಲಮಂಗಲ ಪಟ್ಟಣದ ಹೊನ್ನಗಂಗಯ್ಯನ ಪಾಳ್ಯದಲ್ಲಿರುವ ಡಾ.ವಿಷ್ಣುವರ್ಧನ್ ಕಂಚಿನ ಪುತ್ಥಳಿಯಲ್ಲಿ ನಾಗರಹಾವೊಂದು ಪ್ರತ್ಯಕ್ಷ್ಯ ವಾಗಿ ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು.

    ವಿಷ್ಣು ಅಭಿಮಾನಿಗಳು ಕಂಚಿನ ಪುತ್ಥಳಿ ಇರುವ ಮಂದಿರದಲ್ಲಿ ಇಂದು ಬೆಳಗ್ಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಈ ಸಂಧರ್ಭದಲ್ಲಿ ಐದೂವರೆ ಅಡಿ ಉದ್ದದ 8 ರಿಂದ 9 ವರ್ಷದ ದೈತ್ಯ ನಾಗರಹಾವು ಪ್ರತ್ಯಕ್ಷ್ಯವಾಗಿದೆ. ಈ ವೇಳೆ ಆತಂಕಗೊಂಡ ಸ್ಥಳೀಯರು ಉರಗ ರಕ್ಷಕರಿಗೆ ದೂರವಾಣಿ ಕೆರೆ ಮಾಡಿದ್ದು, ಸ್ಥಳಕ್ಕೆ ಬಂದ ಸ್ನೇಕ್ ಲೋಕೇಶ್ ಅವರು ಹಾವನ್ನ ರಕ್ಷಣೆ ಮಾಡಿದ್ದರೆ.

    ನೆಲಮಂಗಲ ಪಟ್ಟಣದ ಹೊನ್ನಗಂಗಯ್ಯನ ಪಾಳ್ಯದಲ್ಲಿ ಅಭಿಮಾನಿಗಳು ಡಾ.ವಿಷ್ಣುವರ್ಧನ್ ಸೇವಾ ಸಮಿತಿ ಎಂಬ ಸಂಘವನ್ನ ನಿರ್ಮಾಣ ಮಾಡಿಕೊಂಡು ಕಂಚಿನ ಪುತ್ಥಳಿಯ ಮಂದಿರವನ್ನ ಕಳೆದ ಐದು ವರ್ಷದ ಹಿಂದೆಯೇ ನಿರ್ಮಿಸಿದ್ದರು. ಸೋಮವಾರ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ 68ನೇ ಹುಟ್ಟು ಹಬ್ಬವಿದ್ದು, ಈ ನಾಗರಹಾವು ಪ್ರತ್ಯಕ್ಷ್ಯದಿಂದ ಸ್ಥಳೀಯರಲ್ಲಿ ಹಾಗೂ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

    ಇದೇ ರೀತಿ ಈ ಪುತ್ಥಳಿಯ ಬಳಿ ನಾಲ್ಕೈದು ಬಾರಿ ನಾಗರಹಾವುಗಳು ಕಾಣಿಸಿಕೊಂಡಿವೆ. ಪೊದೆ ಹಾಗೂ ಹುತ್ತಗಳು ಇರುವ ಕಾರಣದಿಂದ ಉರಗಗಳು ಸರ್ವೇ ಸಾಮನ್ಯವಾಗಿ ಕಾಣಿಸುತ್ತವೆ ಎಂದು ಉರಗ ರಕ್ಷಕ ಸ್ನೇಕ್ ಲೋಕೇಶ್ ತಿಳಿಸಿದ್ದಾರೆ.