Tag: ಔರಂಗಬಾದ್

  • ರೀಲ್ಸ್‌ಗಾಗಿ ಕಾರು ರಿವರ್ಸ್‌ ತೆಗೆಯಲು ಹೋಗಿ 300 ಅಡಿ ಆಳಕ್ಕೆ ಬಿದ್ದು ಯುವತಿ ಸಾವು

    ರೀಲ್ಸ್‌ಗಾಗಿ ಕಾರು ರಿವರ್ಸ್‌ ತೆಗೆಯಲು ಹೋಗಿ 300 ಅಡಿ ಆಳಕ್ಕೆ ಬಿದ್ದು ಯುವತಿ ಸಾವು

    ಔರಂಗಬಾದ್: ರೀಲ್ಸ್‌ಗಾಗಿ (Reels) ಯುವತಿಯೊಬ್ಬಳು ಕಾರು ಚಲಾವಣೆ ಮಾಡಲು ಹೋಗಿ ಆಕ್ಸಿಲರೇಟರ್ ಒತ್ತಿದ ಪರಿಣಾಮ ಕಾರು ರಿವರ್ಸ್ ಹೋಗಿ ಪ್ರಪಾತಕ್ಕೆ ಬಿದ್ದು ಯುವತಿ ಸಾವನ್ನಪ್ಪಿದ ಘಟನೆ ಔರಂಗಬಾದ್‌ನಲ್ಲಿ (Aurangabad) ನಡೆದಿದೆ.

    ಸೋಮವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ಮಾಹಿತಿ ಪ್ರಕಾರ, ಶ್ವೇತಾ ಸುರ್ವಾಸೆ ಮತ್ತು ಆಕೆಯ ಸ್ನೇಹಿತ ಹನುಮಾನ್ ನಗರದ ನಿವಾಸಿ ಸೂರಜ್ ಸಂಜಯ್ ಮುಳೆ (25) ಮಧ್ಯಾಹ್ನ ಔರಂಗಾಬಾದ್‌ನಿಂದ ಟೊಯೊಟಾ ಎಟಿಯೋಸ್ ಕಾರಿನಲ್ಲಿ ಖುಲ್ತಾಬಾದ್ ತಾಲೂಕಿನ ಸುಲಿಭಂಜನ್‌ನಲ್ಲಿರುವ ದತ್ತ ಮಂದಿರ ಪ್ರದೇಶಕ್ಕೆ ಬಂದಿದ್ದರು. ಶ್ವೇತಾ ಮೊಬೈಲ್ ರೀಲ್ಸ್‌ಗಾಗಿ ಕಾರು ಓಡಿಸುತ್ತೇನೆ ಎಂದು ಸ್ನೇಹಿತನಿಗೆ ಹೇಳಿದಳು. ಇದನ್ನೂ ಓದಿ: ನೀಟ್ ಪರೀಕ್ಷೆಯಲ್ಲಿ ಅಕ್ರಮ- 0.001 %ರಷ್ಟು ನಿರ್ಲಕ್ಷ್ಯ ಕಂಡುಬಂದ್ರೂ ಕೂಲಂಕುಷವಾಗಿ ನಿಭಾಯಿಸಬೇಕು: ಸುಪ್ರೀಂ

    ಇದಕ್ಕೆ ಒಪ್ಪಿದ ಸ್ನೇಹಿತ ವಿಡಿಯೋ ಚಿತ್ರೀಕರಿಸುತ್ತಿದ್ದ. ಇತ್ತ ಶ್ವೇತಾ ಡ್ರೈವಿಂಗ್ ಮಾಡಲು ಹೋಗಿ ಕಾರು ರಿವರ್ಸ್ ಗೇರ್‌ನಲ್ಲಿದ್ದಾಗ ಆಕಸ್ಮಿಕವಾಗಿ ಆಕ್ಸಿಲರೇಟರ್ ಒತ್ತಿದ್ದಾಳೆ. ಈ ಪರಿಣಾಮ ಕಾರು ಹಿಂದಕ್ಕೆ ಹೋಗಿ ಪ್ರಪಾತಕ್ಕೆ ಬಿದ್ದಿದೆ. ರಕ್ಷಣಾ ಕಾರ್ಯಾಚರಣೆ ಸಿಬ್ಬಂದಿ ಆಕೆಯನ್ನು ತಲುಪಲು ಒಂದು ಗಂಟೆ ತೆಗೆದುಕೊಂಡರು. ಅಲ್ಲಿಂದ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದರು. ಇದನ್ನೂ ಓದಿ: ಕಾರವಾರದಲ್ಲಿ ಗೋವಾಗೆ ಕಳ್ಳಸಾಗಾಟವಾಗುತ್ತಿದ್ದ 41 ಕಪ್ಪೆಗಳ ರಕ್ಷಣೆ

    ಸೂಲಿಭಂಜನದಲ್ಲಿರುವ ದತ್ತ ಮಂದಿರ ಪ್ರದೇಶವು ತನ್ನ ವಿಹಂಗಮ ನೋಟಗಳಿಗೆ ಹೆಸರುವಾಸಿಯಾಗಿದೆ. ವಿಶೇಷವಾಗಿ ಮಳೆಗಾಲದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಘಟನೆಯಲ್ಲಿ ಕಾರು ಹಿಂದಕ್ಕೆ ಚಲಿಸಿ ಪ್ರಪಾತಕ್ಕೆ ಬಿದ್ದ ವೀಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ದರ್ಶನ್‌ ಫಾರ್ಮ್ ಹೌಸ್‌ ನೋಡಿಕೊಳ್ಳುತ್ತಿದ್ದ ಮ್ಯಾನೇಜರ್‌ ಆತ್ಮಹತ್ಯೆ

  • 200 ರೂ. ಸಾಲ ತೀರಿಸಲು ಭಾರತಕ್ಕೆ ಬಂದ ಕೀನ್ಯಾ ಸಂಸದ

    200 ರೂ. ಸಾಲ ತೀರಿಸಲು ಭಾರತಕ್ಕೆ ಬಂದ ಕೀನ್ಯಾ ಸಂಸದ

    ನವದೆಹಲಿ: ಮಹಾರಾಷ್ಟ್ರದ ಔರಂಗಬಾದ್‍ನ ಕಿರಾಣಿ ಅಂಗಡಿಯಲ್ಲಿ ಮಾಡಿದ್ದ 200 ರೂ. ಸಾಲವನ್ನು ತೀರಿಸಲು 30 ವರ್ಷಗಳ ನಂತರ ಕೀನ್ಯಾ ದೇಶದ ಸಂಸದರೊಬ್ಬರು ಭಾರತಕ್ಕೆ ಆಗಮಿಸಿ ಅಚ್ಚರಿ ಮೂಡಿಸಿದ್ದಾರೆ.

    ಪೂರ್ವ ಆಫ್ರಿಕಾದ ಕೀನ್ಯಾ ದೇಶದ ಸಂಸದರಾಗಿರುವ ರಿಚರ್ಡ್ ತಾಂಗ್, ಅವರು ತಾನು ವಿದ್ಯಾರ್ಥಿಯಾಗಿದ್ದಾಗ ಔರಂಗಬಾದ್‍ನ ಕಿರಾಣಿ ಅಂಗಡಿಯೊಂದರಲ್ಲಿ ಮಾಡಿದ ಸಾಲವನ್ನು ತೀರಿಸಲು 30 ವರ್ಷಗಳ ನಂತರ ಮಹಾರಾಷ್ಟ್ರದ ಔರಂಗಬಾದ್‍ಗೆ ಆಗಮಿಸಿ ಹುಬ್ಬೇರಿಸುವಂತೆ ಮಾಡಿದ್ದಾರೆ.

    https://www.facebook.com/hontongi/photos/a.1506471763013526/2301989836795044/?

    ಕೀನ್ಯಾ ದೇಶದ ನ್ಯಾರಿಬರಿ ಚಚೆ ಕ್ಷೇತ್ರದ ಸಂಸದ ರಿಚರ್ಡ್ ತಾಂಗ್. 1985-89 ರಲ್ಲಿ ಔರಂಗಬಾದ್‍ನ ಸ್ಥಳೀಯ ಕಾಲೇಜ್ ಕಾಲೇಜ್‍ನಲ್ಲಿ ಮ್ಯಾನೇಜ್‍ಮೆಂಟ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದರು. ಅವರು ಮರಳಿ ತಾಯ್ನಾಡಿಗೆ ಹೋಗುವ ಸಂದರ್ಭದಲ್ಲಿ ಬಸ್ ಚಾರ್ಜ್‍ಗೆ ಹಣ ಇರಲಿಲ್ಲ. ಹೀಗಾಗಿ ಔರಂಗಬಾದ್‍ನ ವಾಂಖೇಡೆನಗರದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಎಸ್.ಕೆ.ಗಾವ್ಲಿ ಬಳಿ 200 ರೂ. ಸಾಲ ಕೊಡು ನಿನಗೆ ಮರಳಿಸುತ್ತೇವೆ ಎಂದು ಸಾಲ ಪಡೆದಿದ್ದರು.

    https://www.facebook.com/hontongi/photos/pcb.2300650836928944/2300650730262288/?

    ತಾಯ್ನಾಡಿಗೆ ಮರಳಿದ ನಂತರ ಸಾಲ ತೀರಿಸುವುದನ್ನು ಮರೆತಿರಲಿಲ್ಲ. ಹೀಗಾಗಿ ಸಾಲ ಪಡೆದು 30 ವರ್ಷ ಕಳೆದರೂ ಇದೀಗ ಆ ಹಣವನ್ನು ಮರಳಿಸಲು ಕೀನ್ಯಾದಿಂದ ಮರಳಿದ್ದಾರೆ. ಕೀನ್ಯಾದಿಂದ ಮರಳುತ್ತಿದ್ದಂತೆ ನೇರವಾಗಿ ಗಾವ್ಲಿಯ ಕಿರಾಣಿ ಅಂಗಡಿಗೆ ತೆರಳಿದ್ದಾರೆ. ಪ್ರಾರಂಭದಲ್ಲಿ ರಿಚರ್ಡ್ ಅವರನ್ನು ಪತ್ತೆ ಹಚ್ಚಲು ಕಿರಾಣಿ ಅಂಗಡಿ ಮಾಲೀಕ ಗ್ವಾಲಿಗೆ ಸಾಧ್ಯವಾಗಿಲ್ಲ. ನಂತರ ಸಂಸದ ರೀಚರ್ಡ್ ಅವರೇ ಗಾವ್ಲಿಯನ್ನು ಗುರುತಿಸಿ ಮಾತನಾಡಿಸಿದ್ದಾರೆ.

    ಗಾವ್ಲಿ ಆಶ್ಚರ್ಯಚಿಕಿತರಾಗಿ ಕುಣಿದು ಕುಪ್ಪಳಿಸಿದ್ದಾರೆ. ಅಲ್ಲದೆ, ನನ್ನ ಕಣ್ಣನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

    ಗಾವ್ಲಿಯನ್ನು ಭೇಟಿಯಾದ ನಂತರ ಸಂಸದ ರೀಚರ್ಡ್ ಅವರಿಗೂ ಸಹ ಭಾವನೆ ತುಂಬಿ ಬಂದಿದ್ದು, ನಾನು ಔರಂಗಬಾದ್‍ನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ತುಂಬಾ ಕಷ್ಟದ ಸ್ಥಿತಿಯಲ್ಲಿದ್ದೆ. ಆಗ ಗಾವ್ಲಿ ನನಗೆ ಸಹಾಯ ಮಾಡಿದರು. ನಾನು ತಾಯ್ನಾಡಿಗೆ ಮರಳಬೇಕು ಹಣ ಕೊಡಿ ನಾನು ಮರಳಿ ಬಂದು ನಿಮಗೆ ಹಣ ತೀರಿಸುತ್ತೇನೆ ಎಂದು ಹೇಳಿದ್ದೆ. ಹೀಗಾಗಿ ಇದೀಗ 200 ರೂ.ಹಣ ಮರುಪಾವತಿಸಲು ಬಂದಿದ್ದೇನೆ. ನಾನು ಗಾವ್ಲಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ವೃದ್ಧ ಗಾವ್ಲಿ ಹಾಗೂ ಹಾಗೂ ಆತನ ಮಕ್ಕಳಿಗೆ ದೇವರು ಒಳ್ಳೆಯದು ಮಾಡಲಿ, ಅವರು ನನಗೆ ಒಂದು ಅದ್ಭುತವಿದ್ದಂತೆ. ಅವರು ಊಟಕ್ಕೆ ನನ್ನನ್ನು ಹೋಟೆಲ್‍ಗೆ ಕರೆದೊಯ್ಯುತ್ತಿದ್ದರು. ಆದರೆ, ನಾನು ಅವರ ಮನೆಯಲ್ಲಿಯೇ ಊಟ ಮಾಡುವಂತೆ ಹಠ ಹಿಡಿದೆ. ಅವರ ಮನೆಯಲ್ಲಿಯೇ ಊಟ ಮಾಡಿದೆ ಎಂದು ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಔರಂಗಬಾದ್‍ನಿಂದ ಹೊರಡುವಾಗ ಸಂಸದ ರೀಚರ್ಡ್ ಅವರು ಗಾವ್ಲಿಯನ್ನು ಕೀನ್ಯಾಗೆ ಬರುವಂತೆ ಕೇಳಿಕೊಂಡಿದ್ದಾರೆ.