Tag: ಔಟ್

  • ಫ್ರೀ ಹಿಟ್ ಎಸೆತಕ್ಕೆ ಔಟ್ – ಕೆಟ್ಟ ದಾಖಲೆ ಬರೆದ ಆರ್‌ಸಿಬಿ ಇಬ್ಬರು ಆಟಗಾರರು

    ಫ್ರೀ ಹಿಟ್ ಎಸೆತಕ್ಕೆ ಔಟ್ – ಕೆಟ್ಟ ದಾಖಲೆ ಬರೆದ ಆರ್‌ಸಿಬಿ ಇಬ್ಬರು ಆಟಗಾರರು

    – ಕ್ರಿಕೆಟ್ ಇತಿಹಾಸದಲ್ಲೇ ಮೂರನೇ ಬಾರೀ ಫ್ರೀ ಹಿಟ್‍ನಲ್ಲಿ ರನೌಟ್

    ಅಬುಧಾಬಿ: ಐಪಿಎಲ್‍ನಲ್ಲಿ ಎರಡು ಬಾರಿ ಫ್ರೀ ಹಿಟ್ ಬಾಲಿನಲ್ಲೇ ರಾಯಲ್ ಚಾಲೆಜಂರ್ಸ್ ಬೆಂಗಳೂರು ತಂಡದ ಆಟಗಾರರು ಔಟ್ ಆಗಿ ಕೆಟ್ಟ ದಾಖಲೆ ಬರೆದಿದ್ದಾರೆ.

    ಶುಕ್ರವಾರ ಅಬುಧಾಬಿ ಮೈದಾನದಲ್ಲಿ ನಡೆದ ಐಪಿಎಲ್-2020ಯ ಎಲಿಮಿನೇಟರ್-1 ಪಂದ್ಯದಲ್ಲಿ ಬೆಂಗಳೂರು ತಂಡ ಹೀನಾಯವಾಗಿ ಸೋತಿದೆ. ಈ ಮೂಲಕ ಐಪಿಎಲ್-2020ಯಿಂದ ಹೊರಗೆ ಬಿದ್ದಿದೆ. ಆದರೆ ಶುಕ್ರವಾರದ ಪಂದ್ಯದಲ್ಲಿ ಆರ್‌ಸಿಬಿ ಆಟಗಾರ ಮೊಯೀನ್ ಅಲಿ ಫ್ರೀ ಹಿಟ್ ಬಾಲಿನಲ್ಲಿ ರನೌಟ್ ಆಗುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ.

    ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ ಮೊದಲೇ ಮೂರು ವಿಕೆಟ್‍ಗಳನ್ನು ಕಳೆದುಕೊಂಡು ಅಪಾಯಕ್ಕೆ ಸಿಲುಕಿತ್ತು. ಈ ವೇಳೆ 3ನೇ ಆಟಗಾರನಾಗಿ ಆರೋನ್ ಫಿಂಚ್ ಔಟ್ ಆದ ನಂತರ ಮೊಯೀನ್ ಅಲಿಯವರು ಕಣಕ್ಕಿಳಿದಿದ್ದರು. ಈ ವೇಳೆ 10ನೇ ಓವರ್ 4ನೇ ಬಾಲನ್ನು ನದೀಮ್ ಅವರು ನೋಬಾಲ್ ಹಾಕಿದರು. ನಂತರದ ಫ್ರೀ ಹಿಟ್ ಬಾಲನ್ನು ಆಫ್ ಸೈಡ್ ಕಡೆಗೆ ಭಾರಿಸಿದ ಅಲಿ ರನ್ ಹೋಡಲು ಬಂದರು. ಆದರೆ ರಶೀದ್ ಖಾನ್ ನಾನ್ ಸ್ಟ್ರೈಕ್‍ನಲ್ಲಿದ್ದ ವಿಕೆಟ್‍ಗೆ ನೇರವಾಗಿ ಬಾಲನ್ನು ಎಸೆದ ಕಾರಣ ರನೌಟ್‍ಗೆ ಬಲಿಯಾದರು.

    https://twitter.com/PageTrending/status/1324729181767266305

    ಈ ಮೂಲಕ ಫ್ರೀ ಹಿಟ್‍ನಲ್ಲಿ ಔಟ್ ಆದ ಎರಡನೇ ಆರ್‌ಸಿಬಿ ಆಟಗಾರ ಎಂಬ ಕೆಟ್ಟ ದಾಖಲೆಯನ್ನು ಮೊಯೀನ್ ಅಲಿ ಬರೆದರು. ಪಂದ್ಯದ ಬಳಿಕ ಕ್ರಿಕೆಟ್ ಅಭಿಮಾನಿಗಳು ಅಲಿ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ 2017ರ ಐಪಿಎಲ್‍ನಲ್ಲಿ ಆರ್‌ಸಿಬಿ ಪರವಾಗಿ ಆಡುತ್ತಿದ್ದ ಕೇದರ್ ಜಾಧವ್ ಕೂಡ ಫ್ರೀ ಹಿಟ್‍ನಲ್ಲಿ ಔಟ್ ಆಗಿದ್ದರು. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಅವರು ನೋಬಾಲ್ ಎಸೆದು ಫ್ರೀ ಹಿಟ್‍ನಲ್ಲಿ ಜಾಧವ್ ಅವರನ್ನು ರನೌಟ್ ಮಾಡಿದ್ದರು.

    ಫ್ರೀ ಹಿಟ್ ಬ್ಯಾಟ್ಸ್ ಮನ್‍ಗೆ ವರವಿದ್ದಂತೆ ಈ ಬಾಲಿನಲ್ಲಿ ಆತ ವಿಕೆಟ್ ಆದರೂ ಕ್ಯಾಚ್ ಕೊಟ್ಟರು ಔಟ್ ಇರುವುದಿಲ್ಲ. ಈ ಬಾಲಿನಲ್ಲಿ ರನೌಟ್ ಆಗುವುದು ಅಪರೂಪ. ಆದರೆ ಕ್ರಿಕೆಟ್ ಇತಿಹಾಸದಲ್ಲಿ ಮೂರು ಬಾರಿ ಈ ಘಟನೆ ನಡೆದಿದ್ದು, ಎರಡು ಬಾರಿ ಐಪಿಎಲ್‍ನಲ್ಲಿ ನಡೆದಿರುವುದು ವಿಶೇಷವಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲೂ ಫ್ರೀಹಿಟ್‍ನಲ್ಲಿ ಬ್ಯಾಟ್ಸ್ ಮನ್ ಔಟ್ ಆಗಿದ್ದು, 2006ರಲ್ಲಿ ಜೋಹಾನ್ಸ್ ಬರ್ಗ್‍ನಲ್ಲಿ ನಡೆದ ಮೊದಲ ಟಿ-20 ಪಂದ್ಯದಲ್ಲಿ ಆಫ್ರಿಕಾದ ರಾಬಿನ್ ಪೀಟರ್ಸನ್, ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಫ್ರೀ ಹಿಟ್‍ನಲ್ಲಿ ರನೌಟ್ ಆಗಿದ್ದರು.

    ಶುಕ್ರವಾರದ ಎಲಿಮಿನೇಟರ್-1 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜೇಸನ್ ಹೋಲ್ಡರ್ ಅವರ ದಾಳಿಗೆ ತತ್ತರಿಸಿ ಆರಂಭಿಕ ಆಘಾತಕ್ಕೆ ಒಳಗಾಯ್ತು. ಆದರೆ ಕೊನೆಯಲ್ಲಿ ಎಬಿ ಡಿವಿಲಿಯರ್ಸ್ ಕುಸಿದ ಆರ್‌ಸಿಬಿಗೆ ಆಸರೆಯಾದರು. ಪರಿಣಾಮ ನಿಗದಿತ 20 ಓವರಿನಲ್ಲಿ 131 ರನ್ ಪೇರಿಸಿತು. ಈ ಗುರಿನ್ನು ಬೆನ್ನಟ್ಟಿದ ಹೈದರಾಬಾದ್ ತಂಡ ಕೇನ್ ವಿಲಿಯಮ್ಸನ್ ಅವರ ಭರ್ಜರಿ ಬ್ಯಾಟಿಂಗ್‍ನಿಂದ ಇನ್ನೂ 2 ಬಾಲ್ ಇರುವಂತೆ ಗೆದ್ದು ಬೀಗಿ ಆರ್‍ಸಿಬಿಯನ್ನು ಐಪಿಎಲ್‍ನಿಂದ ಹೊರಗಟ್ಟಿತು.

  • ನಿಜವಾಗಿ ಧೋನಿಯ ರನೌಟ್ ಆಗಿದ್ರಾ – ಪಂದ್ಯಕ್ಕೆ ತಿರುವು ಕೊಟ್ಟ 2 ನಿಮಿಷದ ವಿಡಿಯೋ ನೋಡಿ

    ನಿಜವಾಗಿ ಧೋನಿಯ ರನೌಟ್ ಆಗಿದ್ರಾ – ಪಂದ್ಯಕ್ಕೆ ತಿರುವು ಕೊಟ್ಟ 2 ನಿಮಿಷದ ವಿಡಿಯೋ ನೋಡಿ

    ಹೈದಾರಬಾದ್: ಮುಂಬೈ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಧೋನಿ ರನೌಟ್ ಆಗದೇ ಇದ್ದರೆ ಚೆನ್ನೈ ಚಾಂಪಿಯನ್ ಆಗಿ ಹೊರ ಹೊಮ್ಮುತಿತ್ತಾ ಎನ್ನುವ ಚರ್ಚೆ ಈಗ ಜೋರಾಗಿದೆ.

    ಹೌದು. 12.3ನೇ ಓವರ್ ನಲ್ಲಿ ಚೆನ್ನೈ ತಂಡ 3 ವಿಕೆಟ್ ಕಳೆದುಕೊಂಡು 81 ರನ್ ಗಳಿಸಿ ಸುಭದ್ರವಾಗಿತ್ತು. ಹಾರ್ದಿಕ್ ಪಾಂಡ್ಯ ಎಸೆದ 13ನೇ ಓವರಿನ 4 ಎಸೆತವನ್ನು ವಾಟ್ಸನ್ ಎಡಗಡೆ ಹೊಡೆದು ಸಿಂಗಲ್ ರನ್ ಓಡಿದರು. ಈ ವೇಳೆ ಮಾಲಿಂಗ ಸರಿಯಾಗಿ ಪಾಂಡ್ಯ ಅವರ ಕೈಗೆ ಥ್ರೋ ಮಾಡದ ಕಾರಣ ಧೋನಿ ಮತ್ತೊಂದು ರನ್ ಗಾಗಿ ಓಡಿದರು.

    ಈ ಸಂದರ್ಭದಲ್ಲಿ ಬಾಲ್ ಮಿಡ್ ಆಫ್ ನಲ್ಲಿ ಫೀಲ್ಡ್ ಮಾಡುತ್ತಿದ್ದ ಇಶಾನ್ ಕಿಶನ್ ಕೈ ಸೇರಿತ್ತು. ಕೂಡಲೇ ಅವರು ನೇರವಾಗಿ ವಿಕೆಟ್‍ಗೆ ಥ್ರೋ ಮಾಡಿ ಬೇಲ್ಸ್ ಹಾರಿಸಿದರು. ಬಹಳ ಕಷ್ಟದ ತೀರ್ಮಾನ ಮೂರನೇ ಅಂಪೈರ್ ನಿಗೆಲ್ ಲಾಂಗ್ ಹಲವು ಕೋನಗಳಿಂದ ಪರಿಶೀಲಿಸಿ ಕೊನೆಗೆ 2 ರನ್ ಗಳಿಸಿದ್ದ ಧೋನಿ ಔಟ್ ಎಂದು ತೀರ್ಪು ನೀಡಿದರು.

    ಬ್ಯಾಟ್ ಮೂಲಕ ಕ್ರೀಸ್ ಮುಟ್ಟುತ್ತಿದ್ದಾಗ ವಿಕೆಟಿನಲ್ಲಿರುವ ದೀಪ ಮೊಳಗಿದ ಹಿನ್ನೆಲೆಯಲ್ಲಿ ಈ ತೀರ್ಪಿನ ಬಗ್ಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಧೋನಿ ಔಟ್ ಆಗದೇ ಇದ್ದರೂ ಮೂರನೇ ಅಂಪೈರ್ ತಪ್ಪು ನಿರ್ಧಾರ ಪ್ರಕಟಿಸಿದ್ದಾರೆ ಎಂದು ಧೋನಿ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.

    https://twitter.com/Atheist_Krishna/status/1127818025128714241

    ವೀಕ್ಷಕ ವಿವರಣೆಗಾರರು ಟಿವಿ ರಿಪ್ಲೇ ಪ್ರಸಾರಗೊಂಡ ಆರಂಭದಲ್ಲಿ ಧೋನಿ ಸೇಫ್ ಎಂದೇ ಹೇಳಿದ್ದರು. ನಂತರ ಇದು ಬಹಳ ಕ್ಲಿಷ್ಟಕರ ಸನ್ನಿವೇಶ. ಇಡೀ ಫಲಿತಾಂಶವನ್ನು ಬದಲಾಯಿಸಬಲ್ಲ ತೀರ್ಪು ಇದಾಗಬಹುದು ಎಂದು ಊಹಿಸಿದ್ದರು. ಹೀಗಾಗಿ ಈ ತೀರ್ಪು ಪ್ರಕಟಿಸಲು ಅಂಪೈರ್ 2 ನಿಮಿಷ ತೆಗೆದುಕೊಂಡು ಅಂತಿಮವಾಗಿ ಔಟ್ ಎಂದು ಪ್ರಕಟಿಸಿದರು.

    ಒಂದು ವೇಳೆ ಧೋನಿ ಔಟಾಗದೇ ಇದ್ದರೆ ಪಂದ್ಯದ ಫಲಿತಾಂಶವೇ ಬದಲಾಗುತಿತ್ತು. ಈ ಬಾರಿ ಧೋನಿ ಅದೃಷ್ಟ ಕೈ ಕೊಟ್ಟಿತ್ತು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಇನ್ನು ಕೆಲವರು ಅಂಪೈರ್ ಸಹಾಯದಿಂದ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಿದೆ ಎಂದು ಬರೆದು ನಿಗೆಲ್ ಲಾಂಗ್ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

  • ಓವರಿನ 7ನೇ ಎಸೆತಕ್ಕೆ ಔಟ್- ಬಿಗ್ ಬ್ಯಾಶ್ ಲೀಗ್‍ನಲ್ಲಿ ವಿವಾದಕ್ಕೆ ಕಾರಣವಾಯ್ತು ತೀರ್ಪು

    ಓವರಿನ 7ನೇ ಎಸೆತಕ್ಕೆ ಔಟ್- ಬಿಗ್ ಬ್ಯಾಶ್ ಲೀಗ್‍ನಲ್ಲಿ ವಿವಾದಕ್ಕೆ ಕಾರಣವಾಯ್ತು ತೀರ್ಪು

    ಪರ್ತ್: ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಅಂಪೈರ್ ಧೋನಿ ಎಲ್‍ಬಿ ಔಟ್ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಈಗ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಶ್ ಲೀಗ್(ಬಿಬಿಎಲ್) ನಲ್ಲಿ ಬ್ಯಾಟ್ಸ್ ಮನ್ ಔಟ್ ಆಗಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.

    ಭಾನುವಾರ ಪರ್ತ್ ಸ್ಕೋಚರ್ಸ್ ಮತ್ತು ಸಿಡ್ನಿ ಸಿಕ್ಸರ್ ತಂಡಗಳ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಡ್ನಿ ಸಿಕ್ಸರ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತ್ತು. ಭಾರೀ ಮೊತ್ತವನ್ನು ಬೆನ್ನಟ್ಟಲು ಕ್ರೀಸ್ ಗೆ ಇಳಿದ ಆರಂಭಿಕ ಆಟಗಾರ ಮೈಕಲ್ ಕ್ಲಿಂಗರ್ ಔಟ್ ಆಗಿರುವ ವಿಷಯ ಈಗ ದೊಡ್ಡ ವಿವಾದವಾಗಿ ಹೊರಹೊಮ್ಮಿದೆ.

    ಪಂದ್ಯದಲ್ಲಿ ಪರ್ಥ್ ಸ್ಕಾರ್ಚರ್ಸ್ ತಂಡದ ಮೈಕಲ್ ಕ್ಲಿಂಗರ್ ಎರಡನೇ ಓವರಿನ 7ನೇ ಎಸೆತದಲ್ಲಿ ಔಟ್ ಆಗಿದ್ದಾರೆ. 2 ರನ್ ಗಳಿಸಿದ ಮೈಕಲ್ ನೇರವಾಗಿ ಸ್ವೀವ್ ಓ ಕೀಫಿ ಅವರಿಗೆ ಕ್ಯಾಚ್ ನೀಡಿದ್ದಾರೆ. ಆದರೆ ಅದು ಎರಡನೇ ಓವರ್ ನ ಏಳನೇ ಎಸೆತ ಎನ್ನುವುದನ್ನು ಅಂಪೈರ್ ಸೇರಿದಂತೆ ಎಲ್ಲರು ಮರೆತಿದ್ದರು. ಇತ್ತ ಕ್ಯಾಚ್ ಪಡೆದ ಸ್ವೀವ್ ಸಂಭ್ರಮದಲ್ಲಿದ್ರೆ, ಮೈಕಲ್ ಸೇರಿದಂತೆ ಎಲ್ಲರು ಗೊಂದಲದಲ್ಲಿದ್ದರು.

    ಬೌಲರ್ ಬೆನ್ ಆ ಓವರ್ ನಲ್ಲಿ ಯಾವುದೇ ವೈಡ್ ಅಥವಾ ನೋ ಬಾಲ್ ಹಾಕಿರಲಿಲ್ಲ. ಆದರೂ ಅಂಪೈರ್ ಏಳನೇ ಎಸೆತಕ್ಕೆ ಅವಕಾಶ ನೀಡಿದ್ದು ದೊಡ್ಡ ಚರ್ಚೆಗೆ ನಾಂದಿಯಾಗಿದೆ. ಔಟ್ ಬಳಿಕ ತೀರ್ಪನ್ನು ಮರು ಪರಿಶೀಲನೆ ನಡೆಸಿದಾಗ ಬೌಲರ್ ಒಂದು ಓವರ್ ನಲ್ಲಿ ಆರರ ಬದಲಾಗಿ ಏಳು ಎಸೆತ ಹಾಕಿರುವುದು ಖಚಿತವಾಗಿದೆ. ಬೌಲ್ ಸಂಖ್ಯೆಯನ್ನು ಅಂಪೈರ್ ಅಥವಾ ಕಮೆಂಟರಿ ನೀಡುವವರು ಅಥವಾ ಪಂದ್ಯದ ಯಾವ ಅಧಿಕಾರಿಗಳು ಗಮನಿಸದೇ ಇದ್ದಿದ್ದರಿಂದ ಈ ಎಡವಟ್ಟು ಸಂಭವಿಸಿದೆ.

    ಲೈವ್ ಪ್ರಸಾರದ ಜೊತೆಗೆ ಈಗ ಕ್ರಿಕೆಟ್ ನಲ್ಲಿ ಸಾಕಷ್ಟು ತಂತ್ರಜ್ಞಾನಗಳು ಬಂದಿದ್ದರೂ ಈ ರೀತಿ ಎಡವಟ್ಟು ನಡೆದಿದ್ದು ಹೇಗೆ? ಈ ತೀರ್ಪನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಂಪೈರ್ ಈ ಎಸೆತವನ್ನು ಡೆಡ್ ಬಾಲ್ ಎಂದು ಪರಿಗಣಿಸಬೇಕಿತ್ತು ಎಂದು ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    178 ರನ್ ಗಳ ಗುರಿ ಬೆನ್ನಟ್ಟಿದ ಪರ್ತ್ ಸ್ಕೋಚರ್ಸ್ 18.5 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 178 ರನ್ ಗಳಿಸಿತು. ಕೆಮರೂನ್ ಬೆನ್‍ಕ್ರಾಫ್ಟ್ 87 ರನ್(61 ಎಸೆತ, 8 ಬೌಂಡರಿ, 1 ಸಿಕ್ಸರ್) ಅಸ್ಟಿನ್ ಟರ್ನರ್ 60 ರನ್(30 ಎಸೆತ, 4 ಬೌಂಡರಿ, 3 ಸಿಕ್ಸರ್) ಸಿಡಿಸಿ ತಂಡಕ್ಕೆ ಗೆಲುವನ್ನು ತಂದುಕೊಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂಪೈರ್ ಔಟ್ ನೀಡಿದ್ರು ಬ್ಯಾಟ್ಸ್‌ಮನ್‌ಗೆ ಮತ್ತೆ ಆಡಲು ಅವಕಾಶ ಕೊಟ್ಟ ಫೀಲ್ಡಿಂಗ್ ಟೀಂ – ವಿಡಿಯೋ

    ಅಂಪೈರ್ ಔಟ್ ನೀಡಿದ್ರು ಬ್ಯಾಟ್ಸ್‌ಮನ್‌ಗೆ ಮತ್ತೆ ಆಡಲು ಅವಕಾಶ ಕೊಟ್ಟ ಫೀಲ್ಡಿಂಗ್ ಟೀಂ – ವಿಡಿಯೋ

    ಸಿಡ್ನಿ: ಪಂದ್ಯದ ವೇಳೆ ರನ್ ಕದಿಯಲು ಯತ್ನಿಸಿದ ಆಟಗಾರ ರನೌಟ್ ಎಂದು 3ನೇ ಅಂಪೈರ್ ತೀರ್ಪು ನೀಡಿದ್ರು ಎದುರಾಳಿ ತಂಡದ ಆಟಗಾರರು ಮತ್ತೆ ಬ್ಯಾಟಿಂಗ್ ನಡೆಸಲು ಅವಕಾಶ ನೀಡಿದ ಘಟನೆ ಆಸೀಸ್ ಬಿಗ್ ಬ್ಯಾಶ್ ಲೀಗ್ ಆರಂಭಿಕ ಪಂದ್ಯದಲ್ಲಿ ನಡೆದಿದೆ.

    ಲೀಗ್‍ನ ಆರಂಭಿಕವಾಗಿ ಇಂದು ಆಡಿಲೇಡ್ ಸ್ಟ್ರೇಕರ್ಸ್ ಹಾಗೂ ಬ್ರಿಸ್ಬೇನ್ ಹೀಟ್ ತಂಡಗಳ ನಡುವೆ ಪಂದ್ಯ ನಡೆಯುತ್ತಿತ್ತು. ಬ್ರಿಸ್ಬೇನ್ ಹೀಟ್ ತಂಡದ ಬ್ಯಾಟಿಂಗ್ ನಡೆಸುತ್ತಿದ್ದ 13 ನೇ ಓವರ್ 3ನೇ ಎಸೆತದಲ್ಲಿ ಜೇಮ್ಸ್ ಪ್ಯಾಟಿನ್‍ಸನ್ ರನ್ ಕದಿಯಲು ಯತ್ನಿಸಿದರು. ಈ ವೇಳೆ ರನೌಟ್ ಮಾಡಲು ಯತ್ನಿಸಿದ ಆಡಿಲೇಡ್ ತಂಡದ ಆಟಗಾರರು ಅಂಪೈರ್ ಗೆ ಮನವಿ ಸಲ್ಲಿಸಿದರು.

    ಆಡಿಲೇಡ್ ತಂಡದ ಆಟಗಾರರ ಮನವಿ ಸ್ವೀಕರಿಸಿದ ಆನ್‍ಫೀಲ್ಡ್ ಅಂಪೈರ್ 3ನೇ ಅಂಪೈರ್ ಗೆ ಮನವಿ ಸಲ್ಲಿಸಿದರು. ಈ ವೇಳೆ ದೃಶ್ಯಗಳನ್ನ ಪರಿಶೀಲನೆ ನಡೆಸಿದ 3ನೇ ಅಂಪೈರ್ ರನೌಟ್ ಆಗದಿದ್ದರು ಔಟ್ ಎಂದು ತೀರ್ಪು ನೀಡಿದರು. ಇದನ್ನು ಕಂಡ ಜೇಮ್ಸ್ ಪ್ಯಾಟಿನ್‍ಸನ್ ಕ್ಷಣ ಕಾಲ ಶಾಕ್ ಆಗಿ ಮೈದಾನದಲ್ಲೇ ನಿಂತರು. ದೃಶ್ಯಗಳಲ್ಲಿ ಬ್ಯಾಟ್ಸ್ ಮನ್ ಔಟಾದಿದ್ದನ್ನು ಗಮನಿಸಿದ ಆಡಿಲೇಡ್ ಸ್ಟ್ರೇಕರ್ಸ್ ತಂಡದ ಆಟಗಾರು ತಮ್ಮ ಔಟ್ ಮನವಿಯನ್ನು ವಾಪಸ್ ಪಡೆದು ಮತ್ತೆ ಜೇಮ್ಸ್ ಪ್ಯಾಟಿನ್‍ಸನ್‍ಗೆ ಆಡಲು ಅವಕಾಶ ನೀಡಿ ಕ್ರೀಡಾ ಸ್ಫೂರ್ತಿ ಮೆರೆದರು.

    ಅಂಪೈರ್ ತೀರ್ಪು ಕಂಡ ಆನ್ ಫೀಲ್ಡ್ ಅಂಪೈರ್ ಗಳಾದ ಸೈಮನ್ ಫ್ರೈ, ಪಾಲ್ ವಿಲ್ಸನ್ ಸೇರಿದಂತೆ ಪಂದ್ಯದ ವೀಕ್ಷಕ ವಿವರಣೆಕಾರರು ಕೂಡ ಒಂದು ಕ್ಷಣ ಶಾಕ್ ಒಳಗಾಗಿದ್ದರು. ಸದ್ಯ ಪಂದ್ಯ 3ನೇ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಗ್ರೇಗ್ ಡೇವಿಡ್‍ಸನ್ ತೀರ್ಪಿನ ವಿರುದ್ಧ ಕ್ರಿಕೆಟ್ ವಿಶ್ಲೇಷಕರು ಟೀಕೆ ಮಾಡಿದ್ದಾರೆ.

    ಅಂಪೈರ್ ತೀರ್ಪಿನ ವಿರುದ್ಧ ಬಳಿಕ ಏನು ಮಾಡಲಾದ ಜೇಮ್ಸ್ ಪ್ಯಾಟಿನ್‍ಸನ್ ಪೆವಿಲಿಯನ್ ನತ್ತ ನಡೆಯುತ್ತಿದ್ದರು, ಆದರೆ ಆಡಿಲೇಡ್ ಸ್ಟ್ರೇಕರ್ಸ್ ಆಟಗಾರರು ಅಂಪೈರ್ ತಪ್ಪಿನ ಅರಿವಾಗಿ ಮತ್ತೆ ಆಡಲು ಅವಕಾಶ ನೀಡಿದರು. ಆಟಗಾರರ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾಲ್ ಬ್ಯಾಟ್ ಗೆ ತಾಗಿಲ್ಲ, ಆಟಗಾರರು ಮನವಿ ಮಾಡಿಲ್ಲ ಆದ್ರೂ ಬ್ಯಾಟ್ಸ್ ಮನ್ ಔಟ್!

    ಬಾಲ್ ಬ್ಯಾಟ್ ಗೆ ತಾಗಿಲ್ಲ, ಆಟಗಾರರು ಮನವಿ ಮಾಡಿಲ್ಲ ಆದ್ರೂ ಬ್ಯಾಟ್ಸ್ ಮನ್ ಔಟ್!

    ಮುಂಬೈ: ಬಾಲ್ ಬ್ಯಾಟ್ಸ್ ಮನ್‍ನ ಪ್ಯಾಡ್ ಗೆ ತಾಗಿಲ್ಲ, ವಿಕೆಟ್ ಬೀಳಿಸಲಿಲ್ಲ. ಅಷ್ಟೇ ಅಲ್ಲದೇ ಫೀಲ್ಡರ್ ಗಳು ಯಾರು ಔಟ್ ಗೆ ಮನವಿ ಸಲ್ಲಿಸಲೇ ಇಲ್ಲ. ಆದರೆ ಬ್ಯಾಟ್ಸ್ ಮನ್ ಔಟ್ ಎಂದು ಅಂಪೈರ್ ತೀರ್ಪು ನೀಡಿದ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಟೀಂ ಇಂಡಿಯಾದ ಎಡಗೈ ಆಟಗಾರ ಯವರಾಜ್ ಸಿಂಗ್ ಈ ವಿಡಿಯೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಾಕಿದ ಬಳಿಕ ವೈರಲ್ ಆಗಿದ್ದ ವಿಡಿಯೋ ಈಗ ಮತ್ತಷ್ಟು ವೈರಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆಗುತ್ತಿದೆ.

    ಈ ವಿಡಿಯೋದಲ್ಲಿ, ನೀವು ಇದೂವರೆಗೆ ನೋಡಿರದ ಅಪರೂಪದ ಔಟ್ ಪ್ರಕರಣ ಇದಾಗಿದ್ದು, ಬಾಲ್ ಬ್ಯಾಟ್ಸ್ ಮನ್ ಬ್ಯಾಟ್ ಗೆ ತಾಗಿಲ್ಲ, ಅಷ್ಟೇ ಅಲ್ಲದೇ ಆಟಗಾರರು ಔಟ್ ಗೆಂದು ಮನವಿ ಸಲ್ಲಿಸಲೇ ಇಲ್ಲ. ಆದರೂ ಅಂಪೈರ್ ಬೆರಳನ್ನು ಎತ್ತಿ ಔಟ್ ಎಂದು ತೀರ್ಪು ನೀಡಿದ್ದಾರೆ ಎಂಬುದಾಗಿ ಅಕ್ಷರಗಳಲ್ಲಿ ಪ್ರಕಟವಾಗಿದೆ.

    ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕ್ರಿಕೆಟ್ ಸಂಖ್ಯಾಶಾಸ್ತ್ರಜ್ಞ ಮೋಹನ್ ದಾಸ್ ಮೆನನ್ ಟ್ವೀಟ್ ಮಾಡಿ, ಧನ ಸಹಾಯಕ್ಕಾಗಿ 2007ರಲ್ಲಿ ಆಯೋಜನೆಗೊಂಡಿದ್ದ ಕ್ರಿಕೆಟ್ ಪಂದ್ಯದ ವಿಡಿಯೋ ಇದಾಗಿದೆ. ಈ ಪಂದ್ಯದಲ್ಲಿ ಬ್ಯಾಟ್ಸ್ ಮನ್ ಒಬ್ಬ ಒಂದೇ ಓವರ್ ನಲ್ಲಿ ಸತತವಾಗಿ ಎರಡು ಬಾಲ್ ಗಳನ್ನು ಹೊಡೆಯದೇ ಇದ್ದಲ್ಲಿ ಔಟ್ ಎಂದು ಘೋಷಿಸುವ ನಿಯಮವನ್ನು ಮೊದಲೇ ಅಳವಡಿಸಲಾಗಿತ್ತು. ಹೀಗಾಗಿ ಆತ ಬಾಲನ್ನು ಹೊಡೆಯದೇ ಇದ್ದ ಕಾರಣ ಔಟ್ ಎಂದು ಅಂಪೈರ್ ತೀರ್ಪು ನೀಡಿದ್ದಾರೆ ಎಂದು ತಿಳಿಸಿದ್ದಾರೆ.

    ಈ ವರ್ಷ ಜೂನ್ 30ರಂದು ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನು ಆಡಿರುವ ಯುವರಾಜ್ ಸಿಂಗ್ ಫಿಟ್ ನೆಸ್ ಸಮಸ್ಯೆ ಮತ್ತು ಕಳಪೆ ಫಾರ್ಮ್ ನಿಂದಾಗಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

    304 ಎಕದಿನ ಪಂದ್ಯಗಳ 278 ಇನ್ನಿಂಗ್ಸ್ ಮೂಲಕ ಒಟ್ಟು 8701 ರನ್ ಹೊಡೆದಿರುವ ಯುವಿ 58 ಟಿ 20 ಪಂದ್ಯಗಳ 51 ಇನ್ನಿಂಗ್ಸ್ ಆಡಿ 1177 ರನ್ ಬಾರಿಸಿದ್ದಾರೆ. 40 ಟೆಸ್ಟ್ ಪಂದ್ಯಗಳ 62 ಇನ್ನಿಂಗ್ಸ್ ಆಡಿರುವ ಯುವರಾಜ್ ಸಿಂಗ್ ಒಟ್ಟು 1900 ರನ್ ಹೊಡೆದಿದ್ದಾರೆ.

    ????????????

    A post shared by Yuvraj Singh (@yuvisofficial) on

    https://youtu.be/MHFgWsfZBk4