Tag: ಓಜಿಕುಪ್ಪ ಗ್ಯಾಂಗ್

  • ಮತ್ತೆ ಓಜಿಕುಪ್ಪಂ ಗ್ಯಾಂಗ್ ಹಾವಳಿ- ಹಾಡಹಗಲೇ ಗಮನಬೇರೆಡೆ ಸೆಳೆದು ದರೋಡೆ

    ಮತ್ತೆ ಓಜಿಕುಪ್ಪಂ ಗ್ಯಾಂಗ್ ಹಾವಳಿ- ಹಾಡಹಗಲೇ ಗಮನಬೇರೆಡೆ ಸೆಳೆದು ದರೋಡೆ

    ನೆಲಮಂಗಲ: ಟೈರ್ ಪಂಚರ್ ಮಾಡಿ ವ್ಯಕ್ತಿಯ ಗಮನ ಬೇರೆಡೆ ಸೆಳೆದು, ಕಾರಿನಲ್ಲಿದ್ದ 1.45 ಲಕ್ಷ ರೂ. ನಗದು ದೋಚಿ, ದರೋಡೆಕೋರರು ಪರಾರಿಯಾದ ಬೆಂಗಳೂರು ಹೊರವಲಯದ ನೆಲಮಂಗಲ ಪಟ್ಟಣದಲ್ಲಿ ಘಟನೆ ನಡೆದಿದೆ.

    ನೆಲಮಂಗಲ ಪಟ್ಟಣದ ಇಂಡಿಯನ್ ಓವರ್ಸೀಸ್ ಬ್ಯಾಂಕ್‍ನಿಂದ 1.45 ಲಕ್ಷ ರೂ. ಹಣವನ್ನು ಡ್ರಾ ಮಾಡಿಕೊಂಡು ಹೋಗುತ್ತಿದ್ದ ಪಾಂಡುರಂಗ ಅವರಿಗೆ ನಿಮ್ಮ ಕಾರ್ ಪಂಚರ್ ಆಗಿದೆ ಎಂದು ದರೋಡೆಕೋರರು ಹೇಳಿದ್ದರು. ಅವರ ಮಾತನ್ನು ನಂಬಿದ ಪಾಡುರಂಗ ಅವರು ಕಾರಿನಿಂದ ಕೆಳಗಿಳಿದಾಗ ದರೋಡೆಕೋರರು ಕ್ಷಣಾರ್ಧದಲ್ಲಿ ಕಾರಿನ ಗ್ಲಾಸ್ ಒಡೆದು ಹಣವನ್ನು ದೋಚಿ ಪರಾರಿಯಾಗಿದ್ದಾರೆ.

    ಈ ಗ್ಯಾಂಗ್ ಓಜಿಕುಪ್ಪಂನ ಗ್ಯಾಂಗ್ ಎಂದು ಶಂಕಿಸಲಾಗಿದ್ದು, ಎರಡು ಬೈಕ್‍ಗಳಲ್ಲಿ ಬಂದ ನಾಲ್ಕು ಜನರ ತಂಡವು ಕೃತ್ಯ ಎಸೆಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಾರ್ವಜನಿಕರು ಈ ಗ್ಯಾಂಗ್ ಬಗ್ಗೆ ಎಚ್ಚರ ವಹಿಸಬೇಕು ಎಂದು ತಿಳಿಸಿದ್ದಾರೆ. ಜೊತೆಗೆ ಗಮನ ಬೇರೆಡೆಗೆ ಸೆಳೆಯುವ ಯುವಕರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

  • ಹಣದ ಬ್ಯಾಗ್ ಕದ್ದು ಎಸ್ಕೇಪ್ ಆಗ್ತಿದ್ದ ಓಜಿಕುಪ್ಪಂ ಗ್ಯಾಂಗ್ ಸದಸ್ಯನಿಗೆ ಗೂಸ

    ಹಣದ ಬ್ಯಾಗ್ ಕದ್ದು ಎಸ್ಕೇಪ್ ಆಗ್ತಿದ್ದ ಓಜಿಕುಪ್ಪಂ ಗ್ಯಾಂಗ್ ಸದಸ್ಯನಿಗೆ ಗೂಸ

    ಬೆಂಗಳೂರು: ಹಣದ ಬ್ಯಾಗ್ ಕದ್ದು ಎಸ್ಕೇಪ್ ಆಗ್ತಿದ್ದ ಓಜಿಕುಪ್ಪಂ ಗ್ಯಾಂಗ್ ಸದಸ್ಯನೊಬ್ಬನನ್ನು ಸ್ಥಳೀಯರು ಕಂಬಕ್ಕೆ ಕಟ್ಟಿ ಗೂಸ ಕೊಟ್ಟಿದ್ದಲ್ಲದೆ, ಕೆಳಗೆ ಹಾಕ್ಕೊಂಡು ತುಳಿದು ಧರ್ಮದೇಟು ಕೊಟ್ಟ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಬ್ಯಾಂಕ್ ನಿಂದ ಹಣ ತೆಗೆದುಕೊಂಡು ಬರುವ ಜನರ ಗಮನ ಬೇರೆಡೆಗೆ ಹೋಗುವಂತೆ ಮಾಡಿ, ಹಣ ಲಪಟಾಯಿಸೋದರಲ್ಲಿ ಓಜಿಕುಪ್ಪಂ ಗ್ಯಾಂಗ್ ಸದಸ್ಯರು ನಿಸ್ಸೀಮರು. ಗುರುವಾರ ಹಣ ಲಪಟಾಯಿಸಲು ಹೋಗಿ ಸಿಕ್ಕಿಬಿದ್ದ ಓಜಿಕುಪ್ಪಂ ಗ್ಯಾಂಗ್ ಸದಸ್ಯನಿಗೆ ಸ್ಥಳೀಯರು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಅಷ್ಟೇ ಅಲ್ಲದೆ ಆತನನ್ನು ಕೆಳಗೆ ಬೀಳಿಸಿ ಒದೆ ಕೊಟ್ಟಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.

    ಅಲ್ಲದೆ ಖತರ್ನಾಕ್ ಖದೀಮ ಹೇಗೆ ಹಣ ದೋಚಲು ಹೊಂಚು ಹಾಕಿದ್ದ, ಸ್ಥಳೀಯರ ಕೈಗೆ ಸಿಕ್ಕಿಬಿದ್ದ ದೃಶ್ಯಗಳು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೃದ್ದರೊಬ್ಬರು ಬ್ಯಾಂಕ್‍ನಿಂದ ಹಣ ತೆಗೆದುಕೊಂಡು ಚೀಲವನ್ನು ಹಿಡಿದುಕೊಂಡು ಬರುತ್ತಿರುತ್ತಾರೆ. ಇವರ ಹಿಂದೆಯೇ ನಡೆದುಕೊಂಡು ಬಂದು ಫಾಲೊ ಮಾಡೊ ಓಜಿಕುಪ್ಪಂ ಗ್ಯಾಂಗ್ ಸದಸ್ಯ, ಬ್ಯಾಂಕ್‍ನಿಂದ ಸ್ವಲ್ಪ ದೂರ ವೃದ್ಧ ಬರುತ್ತಿದ್ದ ಹಾಗೆ ನಿಮ್ಮ ಶರ್ಟ್ ಮೇಲೆ ಗಲೀಜು ಬಿದ್ದಿದೆ ನೋಡಿ ಎಂದು ವೃದ್ಧನಿಗೆ ಹೇಳಿದ್ದಾನೆ.

    ಕ್ಷಣಾರ್ಧದಲ್ಲಿ ಅವರ ಗಮನ ಬೇರೆಡೆಗೆ ಹೋಗುವಂತೆ ಮಾಡಿ, ವೃದ್ಧರ ಹಣದ ಬ್ಯಾಗ್ ಕಸಿದು ಓಜಿಕುಪ್ಪಂ ಗ್ಯಾಂಗ್‍ನ ಮತ್ತೊಬ್ಬ ಕಳ್ಳ ಓಡಿಹೋಗಲು ಯತ್ನಿಸಿದ್ದಾನೆ. ಈ ವೇಳೆ ಮತ್ತೊಬ್ಬ ಕಳ್ಳ ಬೈಕಿನಲ್ಲಿ ಆತನನ್ನು ಕರೆದುಕೊಂಡು ಹೋಗಲು ಬಂದಿದ್ದಾನೆ. ಆದರೆ ಆಗ ಬೈಕ್ ಸ್ವಲ್ಪ ಮುಂದೆ ಹೋಗಿದ್ದರಿಂದ ಹಣ ಕಸಿದ ಕಳ್ಳ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆಗ ಅಲ್ಲಿಂದ ಎಸ್ಕೇಪ್ ಆಗಲು ಹಣದ ಚೀಲ ಎಸೆದು ಕಳ್ಳ ಓಡಿದ್ದಾನೆ. ಈ ವೇಳೆ ಆತನನ್ನು ಬೆನ್ನಟ್ಟಿದ ಸ್ಥಳೀಯರು ಆತನನ್ನು ಹಿಡಿದು, ಕಂಬಕ್ಕೆ ಕಟ್ಟಿ ಥಳಿಸಿ, ಚಳಿ ಬಿಡಿಸಿದ್ದಾರೆ.

    ಹಲವು ಕಳ್ಳತನ ಪ್ರಕರಣದಲ್ಲಿ ಓಜಿಕುಪ್ಪಂ ಗ್ಯಾಂಗ್ ಭಾಗಿಯಾಗಿದೆ. ಆದರೆ ಇದೇ ಮೊದಲ ಬಾರಿಗೆ ಈ ಗ್ಯಾಂಗ್‍ನ ಸದಸ್ಯನನ್ನು ರೆಡ್ ಹ್ಯಾಂಡಾಗಿ ಹಿಡಿದ ಸ್ಥಳೀಯರು ಸರಿಯಾಗೇ ಥಳಿಸಿ ಪಾಠ ಕಲಿಸಿದ್ದಾರೆ.

  • 10 ರೂ. ತೋರಿಸಿ ಲಕ್ಷ ಲಕ್ಷ ಕಳವು ಮಾಡುತ್ತಿದ್ದ ಓಜಿಕುಪ್ಪಂ ಕಳ್ಳರ ಅರೆಸ್ಟ್

    10 ರೂ. ತೋರಿಸಿ ಲಕ್ಷ ಲಕ್ಷ ಕಳವು ಮಾಡುತ್ತಿದ್ದ ಓಜಿಕುಪ್ಪಂ ಕಳ್ಳರ ಅರೆಸ್ಟ್

    – ಬಂಧಿತರಿಂದ 11.80 ಲಕ್ಷ ರೂ., 2 ಬೈಕ್ ವಶ

    ಚಿಕ್ಕಬಳ್ಳಾಪುರ: ನಡು ರಸ್ತೆಯಲ್ಲಿ ಹತ್ತು, ಇಪ್ಪತ್ತು, ಐವತ್ತು ರೂಪಾಯಿ ಬಿಸಾಡಿ ಅಮಾಯಕರಿಂದ ಲಕ್ಷ ಲಕ್ಷ ದೋಚುತ್ತಿದ್ದ ಕುಖ್ಯಾತ ಓಜಿಕುಪ್ಪಂ ಗ್ಯಾಂಗ್‍ನ ಇಬ್ಬರು ಕಳ್ಳರನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.

    ರಾಜೇಶ್, ಶಣ್ಮುಗಂ ಬಂಧಿತ ಆರೋಪಿಗಳು. ಆಂಧ್ರ ಪ್ರದೇಶ, ಕರ್ನಾಟಕ ಗಡಿನಾಡಿನಲ್ಲಿ ಪೋಲಿಸರ ನಿದ್ದೆ ಕೆಡಿಸಿದ್ದ ಈ ಗ್ಯಾಂಗ್ ಎ.ಟಿ.ಎಂ, ಬ್ಯಾಂಕ್, ಎ.ಪಿ.ಎಂ.ಸಿ ಮಾರುಕಟ್ಟೆಗಳಲ್ಲಿ ಬರುವ ಸಾಮಾನ್ಯ ಜನರನ್ನು ಟಾರ್ಗೆಟ್ ಮಾಡಿ, ಕೈತುಂಬ ಹಣ ದೋಚಿಕೊಂಡು ಕ್ಷಣಾರ್ಧದಲ್ಲಿ ಪರಾರಿಯಾಗುತ್ತಿದ್ದರು.

    ಗ್ಯಾಂಗ್ ಹಿನ್ನೆಲೆ ಏನು?:
    ರಸ್ತೆಯಲ್ಲಿ 10, 20 ರೂಪಾಯಿ ಬಿಸಾಡಿ ನಿಮ್ಮ ದುಡ್ಡು ಬಿದ್ದಿದೆ ನೋಡಿ ಎಂದು ಗಮನ ಬೇರೆಡೆ ಸೆಳೆಯುವತ್ತಿದ್ದ ಓಜಿಕುಪ್ಪಂ ಗ್ಯಾಂಗ್ ಅಮಾಯಕರ ಹಣವನ್ನು ಎಗರಿಸುತ್ತಿದ್ದು. ಈ ಓಜಿಕುಪ್ಪಂ ಜಾಲ ಇತ್ತೀಚೆಗೆ ಆಂಧ್ರ, ಕರ್ನಾಟಕ ಗಡಿನಾಡು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಚಿಂತಾಮಣಿ, ಚಿಕ್ಕಬಳ್ಳಾಪುರ ಗೌರಿಬಿದನೂರು, ಬಾಗೇಪಲ್ಲಿ ಗುಡಿಬಂಡೆ ಹಾಗೂ ಆಂಧ್ರದ ಗೊರಂಟ್ಲದಲ್ಲಿ ಹೆಚ್ಚು ಆಕ್ವೀವ್ ಆಗಿತ್ತು.

    ಸಾಮಾನ್ಯ ಜನರು ಪ್ರತಿದಿನ ಈ ಮೋಸದ ಜಾಲಕ್ಕೆ ಸಿಲುಕಿ ತಮ್ಮಲ್ಲಿರುವ ಹಣವನ್ನ ಕಳೆದುಕೊಳ್ತುತ್ತಿದ್ದರು. ಇದೆ ಗ್ಯಾಂಗ್‍ನ ಇಬ್ಬರು ಚಿಕ್ಕಬಳ್ಳಾಪುರ ನಗರದಲ್ಲಿ ತಮ್ಮ ಕೈಚಳಕ ತೋರಿ ಕೊಳವನಹಳ್ಳಿ ನಿವಾಸಿ ಜಯರಾಮಯ್ಯ ಹಾಗೂ ರತ್ನಮ್ಮ ದಂಪತಿ ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ಬಂದಿದ್ದ ಮೂರುವರೆ ಲಕ್ಷ ರೂ. ಹಣವನ್ನು ಕಳ್ಳತನ ಮಾಡಿದ್ದರು. ಹೀಗಾಗಿ ರತ್ನಮ್ಮ ಜಯರಾಮಯ್ಯರಿಂದ ದೂರು ಪಡೆದ ಚಿಕ್ಕಬಳ್ಳಾಪುರ ನಗರ ಠಾಣೆ ಪೋಲಿಸರು, ಆರೋಪಿಗಳು ಬಳಸಿದ್ದ ಮೊಬೈಲ್ ಗಳ ಮೂಲಕ ಟ್ರೇಸ್ ಮಾಡಿ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ.

    ಪ್ರತಿ ದಿನ ಒಂದೊಂದು ಊರಿನಲ್ಲಿ ಕಾರ್ಯಾಚರಣೆ ನಡೆಸುವ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ನಗಾರಿ ಮಂಡಲಂನ ಓ.ಜಿ.ಕುಪ್ಪಂ ಗ್ಯಾಂಗ್, ಬ್ಯಾಂಕ್, ಎ.ಟಿ.ಎಂ, ವಾಣಿಜ್ಯ ಸ್ಥಳಗಳಲ್ಲಿ ಹಣ ಪಡೆದು ಬರುವವರನ್ನು ಗುರಿಯಾಗಿಸಿ ಸ್ಕೆಚ್ ಹಾಕುತ್ತಿದ್ದರು. ಬಳಿಕ ಅವರಿಗೆ ಮತ್ತು ಬರುವ ಔಷಧ, ತುರಕೆ ಔಷಧ ಅಥವಾ ರಸ್ತೆಯಲ್ಲಿ ಹತ್ತು, ಇಪ್ಪತ್ತು ರೂಪಾಯಿ ಬಿಸಾಡಿ ನೋಡಿ ನಿಮ್ಮ ಹಣ ಬಿದ್ದಿದೆ ಎಂದು ಅವರ ಗಮನ ಸೆಳೆದು ಸಾರ್ವಜನಿಕರ ಹಣ ಲೂಟಿ ಮಾಡುತ್ತಿದ್ದರು.

    ಸದ್ಯ ಬಂಧಿತ ಆರೋಪಿಗಳಿಂದ 11.80 ಲಕ್ಷ ರೂ., 2 ಬೈಕ್ ಜಪ್ತಿ ಮಾಡಿದ್ದಾರೆ. ಅಲ್ಲದೆ ಆರೋಪಿಗಳ ಬಂಧನದಿಂದ ಹಲವು ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದು, ಹಣ ಕಳೆದುಕೊಂಡ ಸಾಮಾನ್ಯ ಜನರಿಗೆ ಮರಳಿ ಹಣ ಸಿಗುವಂತೆ ಮಾಡಲು ಪೊಲೀಸರು ಯಶಸ್ವಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡಿಸಿಪಿ ಅಣ್ಣಮಲೈ ತಂಡದಿಂದ ಖತರ್ನಾಕ್ ಓಜಿಕುಪ್ಪಂ ಗ್ಯಾಂಗ್ ಅರೆಸ್ಟ್

    ಡಿಸಿಪಿ ಅಣ್ಣಮಲೈ ತಂಡದಿಂದ ಖತರ್ನಾಕ್ ಓಜಿಕುಪ್ಪಂ ಗ್ಯಾಂಗ್ ಅರೆಸ್ಟ್

    ಬೆಂಗಳೂರು: ಬ್ಯಾಂಕಿಗೆ ಹೋಗುವ ಗ್ರಾಹಕರನ್ನು ಟಾರ್ಗೆಟ್ ಮಾಡಿ ಹಣ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಓಜಿಕುಪ್ಪಂ  ಗ್ಯಾಂಗ್ ಸದಸ್ಯರನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.

    ಪ್ರವೀಣ್, ರಮೇಶ್, ರಾಜು, ಕಾರ್ತಿಕ್, ಅಂಕಯ್ಯಾ ಅಲಿಯಾಸ್ ಬಾಬು ಬಂಧಿತ ಆರೋಪಿಗಳು. ನಗರ ಸೇರಿದಂತೆ ಹಲವು ಕಡೆ ಬ್ಯಾಂಕ್ ತೆರಳುವ ಗ್ರಾಹಕರನ್ನ ಟಾರ್ಗೆಟ್ ಮಾಡುತ್ತಿದ್ದ ಈ ಗ್ಯಾಂಗ್ ಕ್ಷಣಾರ್ಧದಲ್ಲಿ ಹಣ ದೋಚಿ ಪರಾರಿಯಾಗುತ್ತಿದ್ದರು.

    ಬ್ಯಾಂಕ್ ಗ್ರಾಹಕರನ್ನೇ ಗುರಿ ಮಾಡಿ ಕಳ್ಳತನ ಮಾಡುತ್ತಿದ್ದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲು ಡಿಸಿಪಿ ಅಣ್ಣಾಮಲೈ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ಇದರಂತೆ ಸುಬ್ರಮಣ್ಯಪುರ ಎಸಿಪಿ ಮಹದೇವ್ ಮುಂದಾಳತ್ವದ ತಂಡ ಆರೋಪಿಗಳ ಚಲನ ವಲನಗಳ ಮೇಲೆ ನಿಗಾವಹಿಸಿ ಇಂದು ಖತರ್ನಾಕ್ ಗ್ಯಾಂಗಿನ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

    ಗ್ಯಾಂಗ್ ಕಾರ್ಯಾಚರಣೆ ಹೀಗಿತ್ತು: ಬ್ಯಾಂಕ್​ನಲ್ಲಿ  50ಸಾವಿರಕ್ಕಿಂತ ಹೆಚ್ಚಿನ ಹಣ ಡ್ರಾ ಮಾಡಿದ ಗ್ರಾಹಕರನ್ನು ಮಾತ್ರ  ಗ್ಯಾಂಗ್ ಟಾರ್ಗೆಟ್ ಮಾಡುತ್ತಿದ್ದರು. ಮೊದಲು ಬ್ಯಾಂಕ್ ಒಳಗಿದ್ದ ಗ್ಯಾಂಗ್ ಸದಸ್ಯ ಇತರೇ ಸದಸ್ಯರಿಗೆ ತಮ್ಮ ಗುರಿ ಯಾರು ಎಂದು ಖಚಿತ ಪಡಿಸುತ್ತಿದ್ದ. ಬಳಿಕ ಹಣ ಪಡೆದ ಗ್ರಾಹಕ ಬ್ಯಾಂಕ್ ನಿಂದ ಹೊರ ಬರುತ್ತಿದಂತೆ ಆತನ ಮೇಲೆ ಕೆರೆತ ಆರಂಭವಾಗುವ ಸ್ಪ್ರೇ ಮಾಡುತ್ತಿದ್ದರು. ಬಳಿಕ ಆತನನ್ನು ಹಿಂಬಾಲಿಸುತ್ತಿದ್ದರು. ಹಣ ಪಡೆದ ಗ್ರಾಹಕ ತುರಿಕೆ ಅನುಭವವಾಗಿ ವಾಹನ ನಿಲ್ಲಿಸಿ ನೀರಿನಿಂದ ತೊಳೆದುಕೊಳ್ಳಲು ಹೋಗುತ್ತಿದ್ದಂತೆ ಗ್ಯಾಂಗಿನ ಸದಸ್ಯರು ಹಣ ದೋಚಿ ಪರಾರಿಯಾಗುತ್ತಿದ್ದರು. ಇದೇ ರೀತಿ ಹಲವು ಕಡೆ ಗ್ರಾಹಕರ ಹಣ ದೋಚಿದ್ದರು.

    ಸದ್ಯ ಬಂಧಿತ ಆರೋಪಿಗಳಿಂದ 5 ಲಕ್ಷ ಹಣ ರೂ. ಹಣ ಹಾಗೂ ಕೃತ್ಯಕ್ಕೆ ಬಳಕೆ ಮಾಡುತ್ತಿದ್ದ 2 ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಓಜಿಕುಪ್ಪಂ ಗ್ಯಾಂಗ್ ಬಂಧನದಿಂದ ನಗರದ ದಕ್ಷಿಣ ವಿಭಾಗದಲ್ಲಿ ಸುಮಾರು 19 ಪ್ರಕರಣಗಳು ಬೆಳಕಿಗೆ ಬಂದಿದೆ. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com

  • ಉದ್ಯಾನ ನಗರಿ ಜನರೇ ಎಚ್ಚರ ಎಚ್ಚರ.. – ಮತ್ತೆ ಸಿಟಿಗೆ ಓಜಿಕುಪ್ಪಂ ಗ್ಯಾಂಗ್ ಎಂಟ್ರಿ

    ಉದ್ಯಾನ ನಗರಿ ಜನರೇ ಎಚ್ಚರ ಎಚ್ಚರ.. – ಮತ್ತೆ ಸಿಟಿಗೆ ಓಜಿಕುಪ್ಪಂ ಗ್ಯಾಂಗ್ ಎಂಟ್ರಿ

    ಬೆಂಗಳೂರು: ಸಿಲಿಕಾನ್ ಜನರೇ ಹುಷಾರಾಗಿರಿ. ಹಣ ಕ್ಯಾರಿ ಮಾಡುವಾಗ ಇದ್ದಕ್ಕಿದ್ದಂತೆ ನಿಮ್ಮ ಹಣ ಮಾಯವಾಗುತ್ತದೆ. ಯಾಕೆಂದರೆ ಸಿಟಿಗೆ ಸೈಲೆಂಟ್ ಆಗಿ 30 ಜನರ ಓಜಿಕುಪ್ಪಂ ಗ್ಯಾಂಗ್ ಎಂಟ್ರಿ ಕೊಟ್ಟಿದ್ದಾರೆ.

    ಹೌದು… ಕೆಲ ವರ್ಷಗಳ ಹಿಂದೆ ಬೆಂಗಳೂರು ಜನತೆಯ ನಿದ್ದೆಗೆಡಿಸಿದ್ದ ಗ್ಯಾಂಗ್ ನಲ್ಲಿ ಪ್ರಮುಖವಾದದ್ದು ಓಜಿಕುಪ್ಪಂ ಗ್ಯಾಂಗ್ ಒಂದಾಗಿದೆ. ಈ ಗ್ಯಾಂಗ್ ಆಂಧ್ರದಿಂದ ರೈಲುಗಳ ಮೂಲಕ ನಗರಕ್ಕೆ ಎಂಟ್ರಿಯಾಗುತ್ತವೆ. ಎಂಟ್ರಿಯಾದ ತಕ್ಷಣ ಹೊಸ ಸಿಮ್ ಖರೀದಿ ಮಾಡಿ ಕೆಲಸ ಮುಗಿದ ತಕ್ಷಣ ಅಲ್ಲೇ ಎಸೆದು ಪರಾರಿಯಾಗುತ್ತಾರೆ.

    ಇವರು ರೈಲ್ವೆ ನಿಲ್ದಾಣದ ಆಸುಪಾಸುಗಳಲ್ಲೇ ವಾಸ ಮಾಡುತ್ತಾರೆ. ಈ ಗ್ಯಾಂಗ್ ಜನರ ಗಮನವನ್ನು ಬೇರೆಡೆಗೆ ಸೆಳೆಯುವಲ್ಲಿ ಎತ್ತಿದ ಕೈ. ಅದರಲ್ಲೂ ಪ್ರಮುಖವಾಗಿ ಬ್ಯಾಂಕ್ ಗಳಿಂದ ಹಣ ತೆಗೆದುಕೊಂಡು ಹೊರಬರುವವರನ್ನೇ ಟಾರ್ಗೆಟ್ ಮಾಡುತ್ತಾರೆ. ಬಳಿಕ ನಿಮ್ಮ ಕಾರು ಪಂಚರ್ ಆಗಿದೆ, ನಿಮ್ಮ ದುಡ್ಡು ಕೆಳಗೆ ಬಿದ್ದಿದೆ ಮತ್ತು ಬಟ್ಟೆ ಮೇಲೆ ಗಲೀಜು ಆಗಿದೆ ಅಂತ ಗಮನ ಬೇರೆಡೆ ಸೆಳೆದು ಕ್ಷಣಾರ್ಧದಲ್ಲಿ ಹಣ ಕದ್ದು ಪರಾರಿಯಾಗುತ್ತಾರೆ. ಎಸ್ಕೇಪ್ ಆಗ್ತಾರೆ.

    ಒಂದು ಬಾರಿ ಇವರು ಹಣ ಕದ್ದು ಹೋದರೆ ವರ್ಷಗಳೆ ಕಳೆದು ಹೋದ ಮೇಲೆ ವಾಪಸ್ ಬರುತ್ತಾರೆ. ಈಗಾಗಲೇ ನಗರದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೈಚಳಕ ತೋರಿಸುವುದಕ್ಕೆ ಹೋಗಿ ನಾಲ್ವರು ಸಿಕ್ಕಿಬಿದ್ದಿದ್ದಾರೆ.

    ವಿಚಾರಣೆ ವೇಳೆ ಒಟ್ಟು ಮೂವತ್ತು ಜನರ ತಂಡ ಸಿಟಿ ಬಂದಿರುವುದಾಗಿ ಮಾಹಿತಿ ನೀಡಿದ್ದಾರೆ. ಐದಾರು ಟೀಂ ಗಳಾಗಿ ಡಿವೈಡ್ ಆಗಿ ಗಮನ ಬೇರೆಡೆ ಸೆಳೆದು ಕೈಚಳಕ ಶುರುಮಾಡಿದ್ದಾರೆ. ಮತ್ತೆ ಓಜಿಕುಪ್ಪಂ ಗ್ಯಾಂಗ್ ಸಿಟಿಗೆ ಎಂಟ್ರಿಯಾಗಿರುವ ವಿಚಾರ ತಿಳಿದ ಸಿಟಿ ಪೊಲೀಸರು, ನಗರದ ಎಲ್ಲಾ ವಿಭಾಗಗಳಲ್ಲೂ ವಿಶೇಷ ತಂಡ ರಚಿಸಿ ಆರೋಪಿಗಳ ಬೆನ್ನುಬಿದ್ದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv