Tag: ಓಂ ಸಾಯಿ ಪ್ರಕಾಶ್

  • ಬಿಡುಗಡೆಗೆ ರೆಡಿಯಾದ ‘ಜಗ್ಗಿ ಜಗನ್ನಾಥ’ – ದುನಿಯಾ ರಶ್ಮಿಗೆ ಸಿಗುತ್ತಾ ಬ್ರೇಕ್!

    ಬಿಡುಗಡೆಗೆ ರೆಡಿಯಾದ ‘ಜಗ್ಗಿ ಜಗನ್ನಾಥ’ – ದುನಿಯಾ ರಶ್ಮಿಗೆ ಸಿಗುತ್ತಾ ಬ್ರೇಕ್!

    ಸೂರಿ ನಿರ್ದೇಶನದ ಸೂಪರ್ ಹಿಟ್ ಚಿತ್ರ ದುನಿಯಾ ಮೂಲಕ ಚಿರಪರಿಚಿತವಾದ ಟ್ಯಾಲೆಂಟೆಡ್ ನಟಿ ರಶ್ಮಿ. ಚಿತ್ರದ ಯಶಸ್ಸಿನ ನಂತರ ದುನಿಯಾ ರಶ್ಮಿ ಎಂದೇ ಖ್ಯಾತಿಯಾಗಿರೋ ಈಕೆ ದುನಿಯಾ ನಂತರ ಮುರಾರಿ, ಮಂದಾಕಿನಿ, ಅಕ್ಕ-ತಂಗಿ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ರೂ ಕೂಡ ಯಾವ ಸಿನಿಮಾಗಳು ಕೈ ಹಿಡಿಯಲಿಲ್ಲ, ಹೆಸರೂ ತಂದು ಕೊಡಲಿಲ್ಲ. ಒಂದಷ್ಟು ದಿನಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದ ದುನಿಯಾ ರಶ್ಮಿ ನಂತರ ಪ್ರತ್ಯಕ್ಷವಾಗಿದ್ದು ಬಿಗ್ ಬಾಸ್ ಸೀಸನ್-7ರ ವೇದಿಕೆಯಲ್ಲಿ. ಗೆದ್ದು ಸೋತು ಮತ್ತೆ ಗೆಲುವಿಗಾಗಿ ಹಂಬಲಿಸುತ್ತಿರುವ ಈ ಮುದ್ದು ಮುಖದ ಚೆಲುವೆ ಈಗ ಜಗ್ಗಿ ಜಗನ್ನಾಥ್ ಚಿತ್ರದ ಮೂಲಕ ಆ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

    ಹೌದು, ಓಂ ಸಾಯಿ ಪ್ರಕಾಶ್ ನಿರ್ದೇಶನದ ಆ್ಯಕ್ಷನ್ ಓರಿಯೆಂಟೆಡ್ ಜಗ್ಗಿ ಜಗನ್ನಾಥ ಸಿನಿಮಾದಲ್ಲಿ ದುನಿಯಾ ರಶ್ಮಿ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದ ಪ್ರಾಮಿಸಿಂಗ್ ಟ್ರೈಲರ್ ಸದ್ದು ಮಾಡ್ತಿದೆ. ಮುಗ್ಧ ಹಳ್ಳಿ ಹುಡುಗಿ ಪಾತ್ರದಲ್ಲಿ ದುನಿಯಾ ರಶ್ಮಿ ಚಿತ್ರದಲ್ಲಿ ನಟಿಸಿದ್ದು, ಈ ಪಾತ್ರವನ್ನು ಹಾಗೂ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆ ಎಂಬ ಭರವಸೆಯಲ್ಲಿದ್ದಾರೆ ದುನಿಯಾ ರಶ್ಮಿ.

    ನವ ನಟ ಲಿಖಿತ್ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದು, ಆ್ಯಕ್ಷನ್ ಜೊತೆಗೆ ಮಾಫಿಯ ಕಥೆಯೂ ಚಿತ್ರದಲ್ಲಿದೆ. ಮೊಟ್ಟ ಮೊದಲ ಬಾರಿ ಆ್ಯಕ್ಷನ್ ಸಿನಿಮಾಗೆ ನಿರ್ದೇಶನ ಮಾಡಿರುವ ಓಂ ಸಾಯಿ ಪ್ರಕಾಶ್ ಕೂಡ ಈ ಚಿತ್ರದ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಸಾಯಿ ಕುಮಾರ್ ಪೊಲೀಸ್ ಸೂಪರ್ ಕಾಪ್ ಆಗಿ ಜಗ್ಗಿ ಜಗನ್ನಾಥ್ ಚಿತ್ರದಲ್ಲಿ ಡೈಲಾಗ್ ಮೂಲಕ ಅಬ್ಬರಿಸಿದ್ದಾರೆ. ಪದ್ಮಜಾ ರಾವ್, ತಬಲ ನಾಣಿ, ಪವನ್ ಸೇರಿದಂತೆ ಹಲವು ಕಲಾವಿದರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ. ಫೆಬ್ರವರಿ 28ಕ್ಕೆ ಚಿತ್ರ ಬಿಡುಗಡೆಯಾಗುತ್ತಿದ್ದು, ದುನಿಯಾ ರಶ್ಮಿ ಕರಿಯರ್ ಗೆ ಜಗ್ಗಿ ಜಗನ್ನಾಥ ಬ್ರೈಟ್ ಫ್ಯೂಚರ್ ನೀಡುತ್ತಾನಾ ಅನ್ನೋದನ್ನ ಕಾದು ನೋಡಬೇಕು.

  • ಜಗ್ಗಿ ಜಗನ್ನಾಥ ಇದು ಓಂ ಸಾಯಿ ಪ್ರಕಾಶ್ ಸಿನಿಮಾ

    ಜಗ್ಗಿ ಜಗನ್ನಾಥ ಇದು ಓಂ ಸಾಯಿ ಪ್ರಕಾಶ್ ಸಿನಿಮಾ

    ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಯಾರಿಗೆ ಗೊತ್ತಿಲ್ಲ ಹೇಳಿ. ಚಂದನವನಕ್ಕೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರೋ ಇವ್ರು, ಭಕ್ತಿ ಪ್ರಧಾನ, ಪ್ಯಾಮಿಲಿ ಸೆಂಟಿಮೆಂಟ್ ಸಿನಿಮಾಗಳಿಂದಲೇ ಹೆಸರುವಾಸಿ. ಇವ್ರು ಇತ್ತೀಚೆಗೆ ಆ್ಯಕ್ಷನ್ ಕಟ್ ಹೇಳಿರೋ ಜಗ್ಗಿ ಜಗನ್ನಾಥ ಚಿತ್ರ ಇದೇ ತಿಂಗಳ 28ಕ್ಕೆ ಬಿಡುಗಡೆಯಾಗುತ್ತಿದೆ.

    ಚಿತ್ರದ ವಿಶೇಷ ಅಂದ್ರೆ ಇದು ಮಾಸ್ ಸಬ್ಜೆಕ್ಟ್ ಇರೋ ಸಿನಿಮಾ. ಅದ್ರಲ್ಲೇನಿದೆ ವಿಶೇಷ ಅಂದ್ಕೋಬೇಡಿ ವಿಶೇಷ ಇದೆ. ಓಂ ಸಾಯಿ ಪ್ರಕಾಶ್ ಮೊದಲಿನಿಂದಲೂ ಭಕ್ತಿ ಪ್ರಧಾನ, ಸೆಂಟಿಮೆಂಟ್ ಕಂಟೆಂಟ್ ಇರೋ ಸಿನಿಮಾಗಳಿಗೆ ಹೆಸರುವಾಸಿ ಅನ್ನೋದು ಎಲ್ಲರಿಗು ಗೊತ್ತೆ ಇದೆ. ಆದ್ರೆ ಫರ್ ದಿ ಫಸ್ಟ್ ಟೈಂ ಓಂ ಸಾಯಿ ಪ್ರಕಾಶ್ ಮಾಸ್ ಸಬ್ಜೆಕ್ಟ್ ಇರೋ ಸಿನಿಮಾ ಡೈರೆಕ್ಟ್ ಮಾಡಿರೋದು. ಇನ್ನೊಂದು ವಿಶೇಷ ಅಂದ್ರೆ ಹೊಸ ಪ್ರತಿಭೆಯನ್ನು ನಾಯಕ ನಟನಾಗಿ ತಮ್ಮ ಚಿತ್ರದಲ್ಲಿ ಇಂಟ್ರಡ್ಯೂಸ್ ಮಾಡ್ತಿರೋದು. ಈ ಎಲ್ಲ ಅಂಶಗಳಿಂದ ಸಾಯಿ ಪ್ರಕಾಶ್ ಅವ್ರ ಜಗ್ಗಿ ಜಗನ್ನಾಥ್ ಸಿನಿಮಾ ಸಖತ್ ಸದ್ದು ಮಾಡ್ತಿದೆ. ಟ್ರೈಲರ್ ಕೂಡ ಮಾಸ್ ಡೈಲಾಗ್, ಆಕ್ಷನ್ ದೃಶ್ಯಗಳಿಂದ ಸಖತ್ ಸೌಂಡ್ ಮಾಡ್ತಿದೆ.

    ಸದ್ದಿಲ್ಲದೆ ಶೂಟಿಂಗ್ ಮುಗಿಸಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರೋ ಜಗ್ಗಿ ಜಗನ್ನಾಥ್ ಚಿತ್ರ ಮಾಫಿಯಾ, ಲವ್ ಸ್ಟೋರಿ, ಆ್ಯಕ್ಷನ್ ಸಬ್ಜೆಕ್ಟ್ ಒಳಗೊಂಡಿದ್ದು, ಸಾಯಿ ಪ್ರಕಾಶ್ ಸಿನಿಮಾ ಅಭಿಮಾನಿಗಳಿಗೆ ಹೊಸ ಫೀಲ್ ನೀಡೋದಂತೂ ಖಂಡಿತ. ಹೊಸ ಪ್ರತಿಭೆ ಲಿಖಿತ್ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದು, ದುನಿಯಾ ರಶ್ಮಿ ನಾಯಕ ನಟಿಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಡೈಲಾಗ್ ಕಿಂಗ್ ಖ್ಯಾತಿಯ ಸಾಯಿ ಕುಮಾರ್ ಪೊಲೀಸ್ ಆಗಿ ಮತ್ತದೇ ಹಳೆ ಖದರ್‍ನಲ್ಲಿ ಮಾಸ್ ಪಂಚ್ ಡೈಲಾಗ್ ಮೂಲಕ ಕಂ ಬ್ಯಾಕ್ ಮಾಡಿದ್ದಾರೆ.

    ಎ.ಎಂ ನೀಲ್ ಸಂಗೀತ ಸಂಯೋಜನೆ ಚಿತ್ರಕ್ಕಿದ್ದು, ಹೆಚ್.ಜಯರಾಜು, ಜಿ.ಶಾರಾದ ಜಗ್ಗಿ ಜಗನ್ನಾಥ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಓಂ ಸಾಯಿ ಪ್ರಕಾಶ್ ಈ ಹಿಂದಿನ ಸಿನಿಮಾ ನೋಡಿದವರು ಈ ಹೊಸ ಪ್ರಯತ್ನವನ್ನು ಯಾವ ರೀತಿ ಸ್ವೀಕರಿಸುತ್ತಾರೆ ಅನ್ನೋದಕ್ಕೆ ಫೆಬ್ರವರಿ 28ಕ್ಕೆ ಥಿಯೇಟರ್ ಅಂಗಳದಲ್ಲಿ ಉತ್ತರ ಸಿಗಲಿದೆ.

  • ಡೈಲಾಗ್ ಕಿಂಗ್ ಈಸ್ ಬ್ಯಾಕ್!

    ಡೈಲಾಗ್ ಕಿಂಗ್ ಈಸ್ ಬ್ಯಾಕ್!

    ಪೊಲೀಸ್ ಡೈರಿ, ಅಗ್ನಿ ಸಿನಿಮಾಗಳಲ್ಲಿ ಪೊಲೀಸ್ ಸೂಪರ್ ಕಾಪ್ ಆಗಿ ಪವರ್ ಫುಲ್ ಡೈಲಾಗ್ ಮೂಲಕ ಖಾಕಿಗೆ ಹೊಸ ಖದರ್ ತಂದುಕೊಟ್ಟಿದ್ದ ಡೈಲಾಗ್ ಕಿಂಗ್ ಸಾಯಿ ಕುಮಾರ್ ಅವ್ರನ್ನ ಮರೆಯೋಕಾಗುತ್ತಾ..? ತಮ್ಮ ಚಿತ್ರಗಳಲ್ಲಿ ಖಾಕಿಗೆ ಹೊಸ ಖದರ್ ತಂದುಕೊಟ್ಟಿದ್ದ ಸಾಯಿ ಕುಮಾರ್ ತಮ್ಮ ಡೈಲಾಗ್ ಡೆಲಿವರಿ ಸ್ಟೈಲ್‍ನಿಂದಲೇ ಹೊಸ ಟ್ರೆಂಡ್ ಸೃಷ್ಟಿಸಿದ್ರು. ಈಗಲೂ ಆ ಡೈಲಾಗ್‍ಗಳು ಫೇಮಸ್ ಆಗಿವೆ.

    ಸಾಯಿ ಕುಮಾರ್ ರನ್ನು ಮತ್ತೆ ಖಾಕಿಯಲ್ಲಿ ನೋಡಲು, ಡೈಲಾಗ್ ಕಣ್ತುಂಬಿಕೊಳ್ಳಲು ಸಿನಿ ರಸಿಕರು ವರ್ಷಗಳಿಂದ ಕಾಯ್ತಾಯಿದ್ರು. ಈಗ ಆ ಸಮಯ ಬಂದಿದೆ. ಅದೇ ಖದರ್, ಅಷ್ಟೇ ಪವರ್ ಫುಲ್ ಡೈಲಾಗ್, ಅದೇ ಮ್ಯಾನರಿಸಂ ಮೂಲಕ ಮತ್ತೆ ಡೈಲಾಗ್ ಕಿಂಗ್ ಪೊಲೀಸ್ ಸೂಪರ್ ಕಾಪ್ ಆಗಿ ರೀ ಎಂಟ್ರಿ ಕೊಟ್ಟಿದ್ದಾರೆ. ಆ ಚಿತ್ರದ ಹೆಸರೇ ಜಗ್ಗಿ ಜಗನ್ನಾಥ್. ದುಷ್ಟರ ಪಾಲಿಗೆ ಸಿಂಹಸ್ವಪ್ನವಾದ ಪೊಲೀಸ್ ಅಧಿಕಾರಿಯಾಗಿ ಬಣ್ಣ ಹಚ್ಚಿರುವ ಸಾಯಿಕುಮಾರ್ ತಮ್ಮ ಹಳೆಯ ಲುಕ್ಕಲ್ಲಿ, ಹೊಸ ಖದರ್ನೊಂದಿಗೆ ಗಮನ ಸೆಳೆಯುತ್ತಿದ್ದಾರೆ.

    ಎಸ್, ಡೈಲಾಗ್ ಕಿಂಗ್ ಸಾಯಿ ಕುಮಾರ್ ಬಿಡುಗಡೆಗೆ ಸಿದ್ಧವಾಗಿರೋ ಜಗ್ಗಿ ಜಗನ್ನಾಥ ಚಿತ್ರದಲ್ಲಿ ಪವರ್ ಫುಲ್ ಪೊಲೀಸ್ ಆಗಿ ಬಣ್ಣ ಹಚ್ಚಿದ್ದಾರೆ. ಚಿತ್ರದ ಜನರ್ದಸ್ತ್ ಟ್ರೈಲರ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದ್ದು, ಡೈಲಾಗ್ ಕಿಂಗ್ ಎನರ್ಜಿಟಿಕ್ ಅಂಡ್ ಖದರ್ ತುಂಬಿರೋ ಮಾಸ್ ಡೈಲಾಗ್‍ಗಳು ಈಗಾಗಲೇ ಟ್ರೈಲರ್ ನಲ್ಲಿ ಮಿಂಚು ಹರಿಸಿದೆ. ಬಹು ದಿನಗಳಿಂದ ಸಾಯಿ ಕುಮಾರ್ ಡೈಲಾಗ್ ಮಿಸ್ ಮಾಡಿಕೊಂಡಿದ್ದ ಸಿನಿರಸಿಕರಿಗೆ ಈ ಚಿತ್ರ ಭರಪೂರ ಮನರಂಜನೆ ನೀಡಲಿದೆ.

    ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ನಿರ್ದೇಶನದ ಈ ಚಿತ್ರದಲ್ಲಿ ಸಾಯಿಕುಮಾರ್, ಲಿಖಿತ್, ದುನಿಯಾ ರಶ್ಮಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಮಾಫಿಯ, ರೌಡಿಸಂ ಕಥಾನಕವುಳ್ಳ ಮಾಸ್ ಸಬ್ಜೆಕ್ಟ್ ಜಗ್ಗಿ ಜಗನ್ನಾಥ ಚಿತ್ರದಲ್ಲಿದ್ದು, ಸಾಯಿ ಕುಮಾರ್ ದುಷ್ಟರನ್ನ ಬಗ್ಗು ಬಡಿಯೋ ಪವರ್ ಫುಲ್ ಪೊಲೀಸ್ ಆಫಿಸರ್ ಆಗಿ ಬಣ್ಣ ಹಚ್ಚಿದ್ದಾರೆ. ಹೆಚ್, ಜಯರಾಜ್, ಜಿ. ಶಾರದಾ ಜಗ್ಗಿ ಜಗನ್ನಾಥ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಎ. ಎಂ ನೀಲ್ ಸಂಗೀತ ನಿರ್ದೇಶನ ಇರುವ ಈ ಚಿತ್ರ ಇದೇ ಫೆಬ್ರವರಿ 28ಕ್ಕೆ ಬಿಡುಗಡೆಯಾಗುತ್ತಿದೆ.

  • ‘ಜಗ್ಗಿ ಜಗನ್ನಾಥ್’ ಸಿನಿಮಾದಲ್ಲಿ ಅಬ್ಬರಿಸಿದ ಸಾಯಿಕುಮಾರ್!

    ‘ಜಗ್ಗಿ ಜಗನ್ನಾಥ್’ ಸಿನಿಮಾದಲ್ಲಿ ಅಬ್ಬರಿಸಿದ ಸಾಯಿಕುಮಾರ್!

    ಸಾಯಿಕುಮಾರ್ ಅವರ ಖಡಕ್ ಡೈಲಾಗ್ ಕೇಳೋಕೆ ಅದೇನೋ ಒಂಥರ ಖುಷಿ. ತನ್ನ ಡೈಲಾಗ್ ನಿಂದಲೇ ಡೈಲಾಗ್ ಕಿಂಗ್ ಎನಿಸಿಕೊಂಡವರು. ಇದೀಗ ಅದೇ ಖಡಕ್ ಡೈಲಾಗ್ ಹೊಡೆಯಲು ರೆಡಿಯಾಗಿದ್ದಾರೆ. ಹೌದು ಸಾಯಿಕುಮಾರ್ ಅಭಿನಯದ ‘ಜಗ್ಗಿ ಜಗನ್ನಾಥ್’ ಸಿನಿಮಾ ಇದೇ ತಿಂಗಳ 28ಕ್ಕೆ ತೆರೆ ಕಾಣಲಿದೆ. ಅದಕ್ಕೂ ಮುನ್ನ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಸಖತ್ ಸದ್ದು ಮಾಡುತ್ತಿದೆ.

    ಟ್ರೇಲರ್ ನೋಡಿದವರಿಗೆ ಸಿನಿಮಾ ಹೇಗಿರಲಿದೆ ಎಂಬುದು ಅರ್ಥವಾಗಿದೆ. ಪಕ್ಕಾ ಆ್ಯಕ್ಷನ್ ಕಮ್ ಲವ್ ಸ್ಟೋರಿ. ಸಾಯಿ ಕುಮಾರ್ ಇದ್ರೆ ಅಲ್ಲೊಂದು ರೌಡಿಸಂ ಡೈಲಾಗ್ ಗಳ ಸುರಿಮಳೆ ಅಲ್ವೆ. ಅದೇ ರೀತಿ ಸಿನಿಮಾದಲ್ಲಿ ಗನ್ನು, ಮಚ್ಚು-ಲಾಂಗು ಬೀಸುತ್ತೆ, ರಕ್ತ ಹರಿಯುತ್ತೆ, ಡೈಲಾಗ್ ಗಳ ಸುರಿಮಳೆ ಸುರಿಯುತ್ತೆ. ಹೆಚ್ಚು ರೌಡಿಸಂ ದೃಶ್ಯಗಳೆ ಟ್ರೇಲರ್ ನಲ್ಲಿ ಓಡಾಡುತ್ತಿವೆ. ಇದರ ನಡುವೆ ಕಾಮಿಡಿ ಜೊತೆಗೆ ನಾಯಕನಿಗೊಂದು ಲವ್ ಸ್ಟೋರಿ ಇರುವುದು ಟ್ರೇಲರ್ ನಲ್ಲಿ ವ್ಯಕ್ತವಾಗಿದೆ.

    ನಾಯಕ ಲಿಕಿತ್ ರಾಜ್ ಅಭಿನಯ ಕೂಡ ಮೆಚ್ಚುವಂತಿದೆ. ಪಕ್ಕಾ ಮಾಸ್ ಸ್ಟೋರಿಗೆ ಮ್ಯಾಚ್ ಆಗಿದ್ದಾರೆ. ಇನ್ನು ಸಿನಿಮಾದಲ್ಲಿ ತಾಯಿ-ಮಗನ ಸೆಂಟಿಮೆಂಟ್ ಅಂಶ ಕೂಡ ಇದೆ. ನಾಯಕ ಮತ್ತು ಖಡಕ್ ಪೊಲೀಸ್ ಆಫೀಸರ್ ಆಗಿರುವ ಸಾಯಿ ಪ್ರಕಾಶ್ ನಡುವೆ ಜುಗಲ್ ಬಂದಿ ಕ್ರಿಯೇಟ್ ಆಗುವ ದೃಶ್ಯಗಳು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿವೆ. ನಾಯಕ ರೌಡಿಸಂ, ಪ್ರೇಯಸಿಯ ಮುಗ್ಧತೆ, ತಾಯಿಯನ್ನ ಯಾರೋ ಕೊಲ್ಲುವುದು, ನಾಯಕ ಮುಂದೇನು ಮಾಡ್ತಾನೆ ಎಂಬೆಲ್ಲಾ ಪ್ರಶ್ನೆಗಳನ್ನು ಹುಟ್ಟುವಂತೆ ಮಾಡಿದ್ದಾರೆ ಓಂ ಸಾಯಿ ಪ್ರಕಾಶ್. ಇದೇ 28 ರಂದು ಸಿನಿಮಾ ತೆರೆಗೆ ಬರಲಿದ್ದು, ಈ ಎಲ್ಲಾ ಪ್ರಶ್ನೆಗಳಿಗೆ ಥಿಯೇಟರ್ ನಲ್ಲೆ ಉತ್ತರ ಕಂಡುಕೊಳ್ಳಬೇಕಿದೆ.

    ಶ್ರೀಮೈಲಾರಲಿಂಗೇಶ್ವರ ಮೂವೀಸ್ ಲಾಂಛನದಲ್ಲಿ ಹೆಚ್.ಜಯರಾಜು ಹಾಗೂ ಜಿ.ಶಾರದ ನಿರ್ಮಾಣದ ಚಿತ್ರವಿದು. ಎ.ಎಂ.ನೀಲ್ ಸಂಗೀತ ನೀಡಿದ್ದಾರೆ. ರೇಣುಕುಮಾರ್ ಛಾಯಾಗ್ರಹಣವಿದ್ದು, ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಸಾಯಿ ಸರ್ವೇಶ್ ಸಾಹಿತ್ಯ ನೀಡಿದ್ದಾರೆ. ಬಾಬು ಸಂಕಲನ ಮಾಡಿದ್ದಾರೆ. ಸಾಯಿ ಕುಮಾರ್ ಹಾಗೂ ಲಿಖಿತ್ ರಾಜ್ ಜತೆಗೆ ತಬಲಾ ನಾಣಿ, ಪದ್ಮಜಾ ರಾವ್, ಲಯ ಕೋಕಿಲ, ಮೈಕೋ ನಾಗರಾಜ್, ಪೆಟ್ರೋಲ್ ಪ್ರಸನ್ನ, ಕಡ್ಡಿಪುಡಿ ಚಂದ್ರು ಸೇರಿದಂತೆ ಅನೇಕರು ತಾರಾಬಳಗದಲ್ಲಿದ್ದಾರೆ.