Tag: ಐಶ್ವರ್ಯಾ

  • BBK 11: ಕಂಟೆಂಟ್‌ಗೋಸ್ಕರ ಲವ್ ಆಗುತ್ತಾ?: ಚೈತ್ರಾಗೆ ಅನುಷಾ ಪ್ರಶ್ನೆ

    BBK 11: ಕಂಟೆಂಟ್‌ಗೋಸ್ಕರ ಲವ್ ಆಗುತ್ತಾ?: ಚೈತ್ರಾಗೆ ಅನುಷಾ ಪ್ರಶ್ನೆ

    ಬಿಗ್ ಬಾಸ್ ಮನೆಯ ‌(Bigg Boss Kannada 11) ಆಟ ಶುರುವಾಗಿ 10 ದಿನಗಳು ಕಳೆದಿವೆ. ಮೊದಲ ವಾರವೇ ಯಮುನಾ ಶ್ರೀನಿಧಿ ದೊಡ್ಮನೆಯಿಂದ ಕಿಕ್ ಔಟ್ ಆಗಿದ್ದಾರೆ. ಇದೆಲ್ಲದರ ನಡುವೆ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಲವ್ವಿ ಡವ್ವಿ ಶುರುವಾಗಿದೆ. ಧರ್ಮ (Dharma Keerthiraj) ಮತ್ತು ಐಶ್ವರ್ಯಾ (Aishwarya) ವಿಚಾರ ಮಾತನಾಡುತ್ತಾ ಕಂಟೆಂಟ್‌ಗೋಸ್ಕರ ಲವ್ ಆಗುತ್ತಾ? ಅಂತ ಚೈತ್ರಾಗೆ ಅನುಷಾ ಪ್ರಶ್ನಿಸಿದ್ದಾರೆ. ಇದನ್ನೂ ಓದಿ:ಹನಿಮೂನ್ ಫೋಟೋ ಶೇರ್ ಮಾಡಿ ಪತಿಗೆ ಸೋನಲ್ ಲವ್ಲಿ ವಿಶ್

    ದೊಡ್ಮನೆಯಲ್ಲಿ ಹೇಗೆ ಇದ್ದರೆ ವರ್ಕೌಟ್ ಆಗುತ್ತದೆ ಎನ್ನುವ ಪ್ರಶ್ನೆ ಚೈತ್ರಾ ಕುಂದಾಪುರ ಹಾಗೂ ನಟಿ ಅನುಷಾ ಮೂಡಿದೆ. ನನ್ನ ಜೊತೆ ಧರ್ಮ ಮಾತನಾಡಲು ಬಂದರೆ ಐಶ್ವರ್ಯಾ ಸಹಿಸಿಕೊಳ್ಳಲ್ಲ. ಐಶ್ವರ್ಯಾ ಮತ್ತು ಧರ್ಮ ಕೀರ್ತಿರಾಜ್ ಜೊತೆಯಾಗಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಧರ್ಮ ಅವರು ಐಶ್ವರ್ಯಾ ವಿಚಾರದಲ್ಲಿ ಪಾಸಿಟಿವ್ ಆಗಿ ಇದ್ದಾರೆ ಎಂದಿನಿಸುತ್ತಿದೆ. ಇಬ್ಬರೂ ಜೊತೆಯಾಗಿ ಅಡುಗೆ ಮಾಡೋದು ಹೀಗೆಯಲ್ಲಾ ನಡೆಯುತ್ತಿದೆ. ಕಂಟೆಂಟ್‌ಗೋಸ್ಕರ ಕೂಡ ಲವ್ ಆಗುತ್ತಾ? ಎಂದು ಅನುಷಾ (Anusha Rai) ಅವರು ಚೈತ್ರಾಗೆ (Chaithra Kundapura) ಪ್ರಶ್ನೆ ಕೇಳಿದ್ದಾರೆ. ಐಶ್ವರ್ಯಾ ಅವರು ಧರ್ಮ ಅವರ ಬಗ್ಗೆ ಆಸಕ್ತಿ ತೋರಿಸುತ್ತಿರುವ ರೀತಿ ನೋಡಿದ್ರೆ, ಇವರಿಬ್ಬರ ನಡುವೆ ಪ್ರೀತಿ ಮೂಡಿತೇ ಎನ್ನುವ ಪ್ರಶ್ನೆ ಅಲ್ಲಿರುವ ಸ್ಪರ್ಧಿಗಳಲ್ಲಿ ಮತ್ತು ಅಭಿಮಾನಿಗಳಲ್ಲಿಯೂ ಮೂಡಿದೆ.

    ಇದೇ ವೇಳೆ, ನಟಿ ಅನುಷಾ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿದ್ದಾರೆ. ನನಗೆ ಹೊರಗೆ ಬಾಯ್‌ಫ್ರೆಂಡ್ ಇಲ್ಲ. ಎಂಗೇಜ್‌ಮೆಂಟ್ ಕೂಡ ಆಗಿಲ್ಲ. ಯಾರಾದರೂ ಪ್ರೀತಿ (Love) ಕೊಡ್ತೀನಿ ಎಂದು ಬಂದರೆ ನಾನು ಅದಕ್ಕೆ ಯೆಸ್ ಎಂದು ಹೇಳುತ್ತೇನೆ. ಸರಿಯಾದ ವ್ಯಕ್ತಿ ಬಂದು ಅವನೇ ಕೇಳಿದರೆ ಯೆಸ್ ಎಂದು ಹೇಳುತ್ತೇನೆ ಎಂದಿದ್ದಾರೆ.

    ಇನ್ನೂ ಕೆಲವರು ಹೈಲೈಟ್ ಆಗಬೇಕು ಎಂಬ ಕಾರಣಕ್ಕೆ ಲವ್ ಮಾಡಿ ಗಿಮಿಕ್ ಮಾಡಿದ್ದು ಇದೆ. ದೊಡ್ಮನೆ ಆಟ ಮುಗಿದ ಮೇಲೆ ಒಬ್ಬರಿಗೊಬ್ಬರು ಗೊತ್ತೇ ಇಲ್ಲ ಎಂದು ಅನ್ನೋ ಹಾಗೆ ಇದ್ದಿದ್ದು ಇದೆ. ಹಾಗಾದ್ರೆ ಮುಂದಿನ ದಿನಗಳಲ್ಲಿ ಐಶ್ವರ್ಯಾ ಲವ್ ಧರ್ಮ ಲವ್ ಟ್ರ್ಯಾಕ್ ಯಾವ ರೀತಿಯಲ್ಲಿ ಸಾಗುತ್ತದೆ ಎಂಬುದನ್ನು ಕಾಯಬೇಕಿದೆ.

  • BBK 11: ‘ಬಿಗ್’ ಮನೆಗೆ ಹಂಸಾ, ಮೋಕ್ಷಿತಾ, ಐಶ್ವರ್ಯಾ, ಚೈತ್ರಾ, ಮಂಜು ಗ್ರ್ಯಾಂಡ್ ಎಂಟ್ರಿ

    BBK 11: ‘ಬಿಗ್’ ಮನೆಗೆ ಹಂಸಾ, ಮೋಕ್ಷಿತಾ, ಐಶ್ವರ್ಯಾ, ಚೈತ್ರಾ, ಮಂಜು ಗ್ರ್ಯಾಂಡ್ ಎಂಟ್ರಿ

    ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌ ಕನ್ನಡ 11ಕ್ಕೆ (Bigg Boss Kannada 11) ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಹಂಸಾ, ಐಶ್ವರ್ಯಾ, ಮೋಕ್ಷಿತಾ ಪೈ(Mokshitha Pai), ಉಗ್ರಂ ಖ್ಯಾತಿಯ ಮಂಜು, ರಂಜಿತ್‌ ಕುಮಾರ್‌ (Ranjith Kumar) ದೊಡ್ಮನೆಗೆ ಕಾಲಿಟ್ಟಿದ್ದಾರೆ. ಒಟ್ಟು ಬಿಗ್‌ ಬಾಸ್‌ಗೆ 17 ಸ್ಪರ್ಧಿಗಳ ಆಗಮನವಾಗಿದೆ.

    ದೊಡ್ಮನೆ ಆಟಕ್ಕೆ ಇಂದು (ಸೆ.29) ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಕಿರುತೆರೆ ನಟಿ ಹಂಸಾ, ನಾಗಿಣಿ 2 ಖ್ಯಾತಿಯ ಐಶ್ವರ್ಯಾ ಸಿಂದೋಗಿ, ಪಾರು ಖ್ಯಾತಿಯ ಮೋಕ್ಷಿತಾ ಪೈ, ಶನಿ ಸೀರಿಯಲ್‌ನ ರಂಜಿತ್‌ ಕುಮಾರ್‌, ಚೈತ್ರಾ ಕುಂದಾಪುರ (Chaithra Kundapura), ಉಗ್ರಂ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಮಂಜು ಬಿಗ್‌ ಬಾಸ್‌ ಮನೆಗೆ ಕಾಲಿಟ್ಟಿದ್ದಾರೆ.

    ದೊಡ್ಮನೆಯಲ್ಲಿ ಈಗ ಸ್ವರ್ಗ ಮತ್ತು ನರಕ ಎಂದು ಎರಡು ತಂಡಗಳಾಗಿ ಮಾಡಿ ಅದರಲ್ಲಿ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಬಿಗ್‌ ಬಾಸ್‌ ಮನೆಯ ಆಟದ ಬಗ್ಗೆ ಫ್ಯಾನ್ಸ್‌ಗೆ ಕೌತುಕ ಮೂಡಿಸಿದೆ.

    ಭವ್ಯಾ ಗೌಡ (Bhavya Gowda), ಯಮುನಾ, ಮಾನಸಾ, ತ್ರಿವಿಕ್ರಮ್‌, ಶಿಶಿರ್‌ ಶಾಸ್ತ್ರಿ, ಅನುಷಾ ರೈ, ಧರ್ಮ ಕೀರ್ತಿರಾಜ್‌, ಧನರಾಜ್‌, ಗೋಲ್ಡ್‌ ಸುರೇಶ್‌,ಗೌತಮಿ ದೊಡ್ಮನೆಯ ಸ್ಪರ್ಧಿಗಳಾಗಿದ್ದಾರೆ. ಪ್ರತಿದಿನ ರಾತ್ರಿ 9:30 ಶೋ ಪ್ರಸಾರವಾಗಲಿದೆ.

  • ಕೊರಿಯರ್ ಗರ್ಲ್ ಆಗಿ ಹೋಗಿ ಪ್ರಚಾರ ಮಾಡಿದ್ದೆ: ಡಿಕೆಶಿ ಪುತ್ರಿ

    ಕೊರಿಯರ್ ಗರ್ಲ್ ಆಗಿ ಹೋಗಿ ಪ್ರಚಾರ ಮಾಡಿದ್ದೆ: ಡಿಕೆಶಿ ಪುತ್ರಿ

    – ದಯವಿಟ್ಟು ಬಂದು ನಿಮ್ಮ ಜವಾಬ್ದಾರಿಯನ್ನು ಪೂರೈಸಿ

    ಬೆಂಗಳೂರು: ನಾನು ನನ್ನ ಚಿಕ್ಕಪ್ಪ ಮಾಡಿರುವ ಕೆಲಸಗಳ ಬಗ್ಗೆ ಜನರಿಗೆ ತಿಳಿಸುವ ನಿಟ್ಟಿನಲ್ಲಿ ಕೊರಿಯರ್ ಗರ್ಲ್ ಆಗಿ ಪ್ರಚಾರ ಮಾಡಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ (Aishwarya) ಹೇಳಿದ್ದಾರೆ.

    ಮತದಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಚಿಕ್ಕಪ್ಪನ ಪರವಾಗಿ ಅಪಾರ್ಟ್ ಮೆಂಟ್‍ಗಳಲ್ಲಿ ಮತಪ್ರಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕೆಲವೊಮದು ಬಾರಿ ನಮ್ಮ ಬ್ಯುಸಿ ಶೆಡ್ಯೂಲ್‍ನಲ್ಲಿ ಯಾರು ಎಷ್ಟು ಕೆಲಸ ಮಾಡಿದ್ದಾರೆ ಎಂಬುದನ್ನು ನಾವು ಮರೆತಿರುತ್ತೇವೆ. ಹೀಗಾಗ ಕೊರಿಯರ್ ಗರ್ಲ್ ಆಗಿ ಅವರು ಮಾಡಿರುವ ಕೆಲಸವನ್ನು ಜನಕ್ಕೆ ಹೇಲುವಂತಹ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.

    ನನಗೂ ಹೆಮ್ಮೆ ಇದೆ. ನಮ್ಮ ಸಂಸದನ ಮೇಲೆ ಹಾಗೂ ಅವರು ಮಾಡಿರುವ ಕೆಲಸದ ಮೇಲೆ ಮಗಳಿಗಿಂತ ಹೆಚ್ಚಾಗಿ ಒಬ್ಬಳು ವಿದ್ಯಾವಂತೆ ಆಗಿ, ನನಗೆ ಗೊತ್ತಿರುವುದನ್ನು ಜನಕ್ಕೆ ಹೇಳುವುದು ನನ್ನ ಕರ್ತವ್ಯ ಅಂದುಕೊಂಡು ಹೋಗಿ ಪ್ರಚಾರ ಮಾಡಿದ್ದೇನೆ. ಈ ಪ್ರಚಾರಕ್ಕೆ ತಕ್ಕ ಪ್ರತಿಫಲ ಸಿಗುತ್ತೆ ಅನ್ನುವ ವಿಶ್ವಾಸವಿದೆ. ಅಲ್ಲದೇ ಚಿಕ್ಕಪ್ಪ ಗೆದ್ದೇ ಗೆಲ್ತಾರೆ ಎಂಬ ಆತ್ಮವಿಶ್ವಾಸ ಕುಟುಂಬಕ್ಕಿದೆ ಎಂದರು.

    ಮತದಾನ ಮಾಡುವುದು ಹಕ್ಕು ಮಾತ್ರವಲ್ಲ ನಮ್ಮ ಜವಾಬ್ದಾರಿ ಕೂಡ ಆಗಿದೆ. ಹೀಗಾಗಿ ದಯವಿಟ್ಟು ಬಂದು ನಿಮ್ಮ ಜವಾಬ್ದಾರಿಯನ್ನು ಪೂರೈಸಿ. ಯಾಕೆಂದರೆ ಇವತ್ತು ನೀವು ಜವಾಬ್ದಾರಿಯಿಂದ ಮತ ಹಾಕಿದ್ರೆ ಮಾತ್ರ ನಾಳೆ ನಿಮಗೆ ಹಕ್ಕು ಸಿಗುವುದು. ಮುಂದೆ ಏನದ್ರೂ ತೊಂದರೆ ಆದ್ರೆ ನಿಮಗೆ ಪ್ರಶ್ನೆ ಮಾಡುವ ಹಕ್ಕಿದೆ. ದಯವಿಟ್ಟು ಬಂದು ನಿಮ್ಮ ಮತ ಚಲಾಯಿಸಿ. ನಿಮಗೆ ಯಾರು ಸರಿ ಅನಿಸ್ತಾರೋ ಅವರಿಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ಎಂದರು.

  • 2ನೇ ಮದುವೆಯಾದ ‘ಇಂಡಿಯನ್ 2’ ಚಿತ್ರ ನಿರ್ದೇಶಕನ ಪುತ್ರಿ

    2ನೇ ಮದುವೆಯಾದ ‘ಇಂಡಿಯನ್ 2’ ಚಿತ್ರ ನಿರ್ದೇಶಕನ ಪುತ್ರಿ

    ಗೇಮ್ ಚೇಂಜರ್, ಇಂಡಿಯನ್ 2 (Indian 2) ಸಿನಿಮಾಗಳ ಎಸ್. ಶಂಕರ್ ಅವರ ಪುತ್ರಿ ಐಶ್ವರ್ಯಾ (Aishwarya Shankar) ಮದುವೆಯು ಚೆನ್ನೈನಲ್ಲಿ ಅದ್ಧೂರಿಯಾಗಿ ನಡೆದಿದೆ. ಸ್ಟಾರ್ ನಿರ್ದೇಶಕನ ಪುತ್ರಿಯ ಮದುವೆಗೆ ನಯನತಾರಾ ದಂಪತಿ, ರಜನಿಕಾಂತ್, ಸೂರ್ಯ ಸೇರಿದಂತೆ ಅನೇಕರು ಭಾಗಿಯಾಗಿ ಶುಭಕೋರಿದ್ದಾರೆ.

    ಎಸ್. ಶಂಕರ್ (S Shankar) ಮಗಳು ಐಶ್ವರ್ಯಾ ಇದೀಗ ಸಹಯಕ ನಿರ್ದೇಶಕ ತರುಣ್ ಕಾರ್ತಿಕೇಯನ್ ಜೊತೆ ಜರುಗಿದೆ. ತಮ್ಮ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಸಹಾಯಕ ನಿರ್ದೇಶಕನ ಜೊತೆ ಐಶ್ವರ್ಯ ಮದುವೆ ಇಂದು (ಏ.15) ಗ್ರ್ಯಾಂಡ್‌ಯಾಗಿ ನಡೆದಿದೆ. ಇದನ್ನೂ ಓದಿ:‘ಕಂಗುವ’ ಸಿನಿಮಾದಲ್ಲಿ ಸೂರ್ಯ ಡಬಲ್ ರೋಲ್

    ಈ ಸಮಾರಂಭದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ, ನಟ ಚಿಯಾನ್ ವಿಕ್ರಮ್, ಮಣಿರತ್ನಂ, ಸುಹಾಸಿನಿ, ನಯನತಾರಾ, ತಲೈವ, ಕಮಲ್ ಹಾಸನ್ ಸೇರಿದಂತೆ ಸ್ಟಾರ್ ಕಲಾವಿದರ ದಂಡೇ ಶಂಕರ್ ಮಗಳ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಡೈರೆಕ್ಟರ್ ಶಂಕರ್ ಮಗಳು ಐಶ್ವರ್ಯಾ ಅವರು 2022ರಲ್ಲಿ ಕ್ರಿಕೆಟರ್ ರೋಹಿತ್ ದಾಮೋದರನ್ ಜೊತೆ ಮದುವೆಯಾಗಿತ್ತು. ಕೆಲ ಮನಸ್ತಾಪಗಳಿಂದ ಬೇಗನೇ ಈ ಮದುವೆ ಮುರಿದು ಬಿದ್ದಿತ್ತು. ಇಬ್ಬರ ಸಮ್ಮತಿಯ ಮೇರೆಗೆ ಡಿವೋರ್ಸ್ ಪಡೆದರು.

    ಇದೀಗ ತರುಣ್ ಜೊತೆ 2ನೇ ಮದುವೆಯಾಗಿ ಐಶ್ವರ್ಯಾ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ನಿರ್ದೇಶಕನ ಪುತ್ರಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ.

  • ಮಾಜಿ ಪತ್ನಿ ಮರೆತು ಸಿನಿಮಾಗೆ ವಿಶ್ ಮಾಡಿದ ಧನುಷ್‌

    ಮಾಜಿ ಪತ್ನಿ ಮರೆತು ಸಿನಿಮಾಗೆ ವಿಶ್ ಮಾಡಿದ ಧನುಷ್‌

    ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಪುತ್ರಿ ಐಶ್ವರ್ಯಾ (Aishwarya) ಮತ್ತು ನಟ ಧನುಷ್ (Actor Dhanush) ಜೋಡಿ ಕಳೆದ ವರ್ಷ ಡಿವೋರ್ಸ್ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಇದೀಗ ಮಾಜಿ ಪತ್ನಿ ಐಶ್ವರ್ಯಾ ಸಿನಿಮಾಗೆ ಶುಭಹಾರೈಸುವ ಮೂಲಕ ಧನುಷ್ ಮತ್ತೆ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ:ವಿಜಯ್ ರಾಜಕಾರಣಕ್ಕೆ ಎಂಟ್ರಿ: ಅಭಿನಂದನೆ ಸಲ್ಲಿಸಿದ ತಲೈವ

    ತಂಡಕ್ಕೆ ನನ್ನ ಶುಭ ಹಾರೈಕೆ. ಒಳ್ಳೆಯದಾಗಲಿ ಧನುಷ್ ಹಾರೈಸಿದ್ದಾರೆ. ‘ಸೂಪರ್‌ಸ್ಟಾರ್’ ಹ್ಯಾಶ್‌ಟ್ಯಾಗ್ ಹಾಕಿದ್ದಾರೆ. ಆದರೆ, ಅವರು ಎಲ್ಲಿಯೂ ಮಾಜಿ ಪತ್ನಿ ಐಶ್ವರ್ಯಾ ಹೆಸರನ್ನು ಉಲ್ಲೇಖ ಮಾಡಿಲ್ಲ. ಅವರನ್ನು ಟ್ಯಾಗ್ ಕೂಡ ಮಾಡಿಲ್ಲ. ಇದನ್ನು ಅನೇಕರು ಪ್ರಶ್ನೆ ಮಾಡಿದ್ದಾರೆ. ಪತ್ನಿ ಚಿತ್ರಕ್ಕೆ ಶುಭಕೋರಿದ ಮೇಲೆ ಅವರ ಪತ್ನಿಯ ಹೆಸರನ್ನು ಉಲ್ಲೇಖ ಮಾಡಲು ಏನು ಸಮಸ್ಯೆ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.

    ‘ಲಾಲ್ ಸಲಾಂ’ (Lal Salaam) ಸಿನಿಮಾ ಹಿಂದೂ ಹಾಗೂ ಮುಸ್ಲಿಂ ಧರ್ಮಗಳ ನಡುವೆ ನಡೆಯುವ ಘರ್ಷಣೆ ಮತ್ತು ಸಾಮರಸ್ಯದ ಕಥೆಯನ್ನು ಹೇಳಲಿದೆ. ಈ ಬಗ್ಗೆ ಟ್ರೈಲರ್‌ನಲ್ಲಿ ಸುಳಿವು ನೀಡಲಾಗಿದೆ. ಎಲ್ಲ ದೇವರೂ ಒಂದೇ ಎನ್ನುವ ಡೈಲಾಗ್ ಹೈಲೈಟ್ ಆಗಿದೆ. ಈ ಸಿನಿಮಾದಲ್ಲಿ ಆ್ಯಕ್ಷನ್ ಕೂಡ ಇದೆ. ತಲೈವಾ ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಮಗಳ ನಿರ್ದೇಶನದ ಸಿನಿಮಾಗೆ ರಜನಿಕಾಂತ್ ಸಾಥ್ ನೀಡಿದ್ದಾರೆ.

    ‘ಲಾಲ್ ಸಲಾಂ’ ಚಿತ್ರದಲ್ಲಿ ತಲೈವಾ ಅತಿಥಿಯಾಗಿ ಖಡಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಷ್ಣು ವಿಶಾಲ್, ವಿಕ್ರಾಂತ್, ಧನ್ಯಾ ಬಾಲಕೃಷ್ಣನ್ ಸೇರಿದಂತೆ ಹಲವರು ನಟಿಸಿದ್ದಾರೆ. ಈ ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಫೆ.9ರಂದು ಈ ಚಿತ್ರ ರಿಲೀಸ್ ಆಗಲಿದೆ. ಟ್ರೈಲರ್‌ನಲ್ಲಿ ತಲೈವಾ ಎಂಟ್ರಿ ನೋಡಿ ಫಿದಾ ಆಗಿರೋ ಅಭಿಮಾನಿಗಳು ‘ಲಾಲ್ ಸಲಾಂ’ ಚಿತ್ರ ನೋಡಲು ಕಾಯ್ತಿದ್ದಾರೆ.

  • ಗಂಡನಿಗೆ ಹೆಂಡ್ತಿ ಮೇಲೆ ಸಂಶಯ, ಮಾವನಿಗೆ ಸೊಸೆ ಮೇಲೆ ಅನುಮಾನ- ಸಿಕ್ಕ ಫಲಿತಾಂಶ ಆತ್ಮಹತ್ಯೆ

    ಗಂಡನಿಗೆ ಹೆಂಡ್ತಿ ಮೇಲೆ ಸಂಶಯ, ಮಾವನಿಗೆ ಸೊಸೆ ಮೇಲೆ ಅನುಮಾನ- ಸಿಕ್ಕ ಫಲಿತಾಂಶ ಆತ್ಮಹತ್ಯೆ

    ಬೆಂಗಳೂರು: ಕುಟುಂಬದಲ್ಲಿ ಹಣಕಾಸಿಗೇನು ಕೊರತೆ ಇರಲಿಲ್ಲ. ಕೋಟಿ ಕೋಟಿಯಷ್ಟು ಹಣ ಇದ್ರೂ ಹಣದ ದಾಹ ತೀರಲಿಲ್ಲ. ಹಣದ ದಾಹದ ಜೊತೆಗೆ ಗಂಡನಿಗೆ ಹೆಂಡತಿ ಮೇಲೆ ಸಂಶಯ. ಮಾವನಿಗೆ ಸೊಸೆ ಮೇಲೆ ಅನುಮಾನ. ಕೊನೆಗೆ ಸಿಕ್ಕ ಫಲಿತಾಂಶ ಆತ್ಮಹತ್ಯೆ.

    ಅಮೇರಿಕಾದಲ್ಲಿ (America) ಚೆನ್ನಾಗಿ ಓದಿ ಉನ್ನತ ವ್ಯಾಸಂಗ ಮಾಡಿದ್ದ ಐಶ್ವರ್ಯ ಚಂದ್ರಲೇಔಟ್ ನ (Chandra Layout) ನಿವಾಸಿ ಸುಬ್ರಹ್ಮಣಿಯವರ ಏಕೈಕ ಪುತ್ರಿ. ಸುಬ್ರಹ್ಮಣಿಯೂ ಆಸ್ತಿ ಅಂತಸ್ತಿನಲ್ಲಿ ಸ್ವಲ್ಪ ಚೆನ್ನಾಗಿಯೇ ಇದ್ದರು. ತನ್ನ ಮಗಳನ್ನ ತನಗಿಂತ ಸಿರಿವಂತನಿಗೆ ಕೊಟ್ಟು ಮದುವೆ ಮಾಡಬೇಕು ಅನ್ನೋ ಆಸೆ ಇತ್ತು. ಅದರಂತೆ ಹೆಸರಾಂತ ಡೈರಿ ರೀಚಿ ಐಸ್ ಕ್ರೀಂ ನ ಮಾಲೀಕರಾದ ಗಿರಿಯಪ್ಪ ಅವರ ಮಗ ರಾಜೇಶ್‍ಗೆ ಐದು ವರ್ಷದ ಹಿಂದೆ ಮದುವೆ ಮಾಡಿಕೊಟ್ಟಿದ್ರು. ಮದ್ವೆ ಮೊದ ಮೊದಲು ಜೀವನ ಚೆನ್ನಾಗಿಯೇ ಇತ್ತು.

    ಐಶ್ವರ್ಯ ಬಾಳಲ್ಲಿ ವಿಲನ್ ಆದ ಚಿಕ್ಕಪ್ಪ: ಗಿರಿಯಪ್ಪ ಸಂಬಂಧ ಕುದಿರಿಸಿದ್ದು ಐಶ್ವರ್ಯ ಚಿಕ್ಕಪ್ಪ ಅರ್ಥಾತ್ ಸುಬ್ರಹ್ಮಣಿಯ ತಮ್ಮ. ಅಣ್ಣನ ಮಗಳಿಗೆ ಒಳ್ಳೆಯ ಸಂಬಂಧ ನೋಡಿದ ರವೀಂದ್ರ ಸ್ರುಬ್ಮಹ್ಮಣಿಯ ಜೊತೆ ಆಸ್ತಿ ಕಲಹ ಮಾಡಿಕೊಂಡ. ಇದನ್ನ ಸೇಡು ತೀರಿಸಿಕೊಳ್ಳುವ ಸಲುವಾಗಿ ರವೀಂದ್ರ, ಗಿರಿಯಪ್ಪ ಮತ್ತು ರಾಜೇಶ್‍ಗೆ ಚಾಡಿ ಹೇಳಿಕೊಡಲು ಶುರು ಮಾಡಿದ್ದಾನೆ.

    ಐಶ್ವರ್ಯ ಮೇಲೆ ಸಂಶಯ ಬರೋ ಹಾಗೇ ಮಾಡಿದ್ದಾನೆ. ಬಳಿಕ ವರದಕ್ಷಿಣೆಗೆ ಪೀಡಿಸುವಂತೆ ಕಿವಿ ಊದಿದ್ದಾನೆ. ರವೀಂದ್ರ ಮಾತು ಕೇಳಿದ ಗಿರಿಯಪ್ಪ, ರಾಜೇಶ್, ಸೀತಾ ಎಲ್ಲಾ ಐಶ್ವರ್ಯಗೆ ಮಾನಸಿಕ ಹಿಂಸೆ ನೀಡಿದ್ದಾರೆ. ಇದನ್ನೂ ಓದಿ: ಮಲ್ಟಿನ್ಯಾಷನಲ್ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಗೆ 2 ಕೋಟಿ ವಂಚನೆ

    ಯಾವಾಗ ಅತ್ತೆ ಮಾವ, ಗಂಡ ನಾದಿನಿ ಎಲ್ಲಾ ಮೇಲಿಂದ ಮೇಲೆ ಹಿಂಸೆ ಕೊಡೋದಕ್ಕೆ ಶುರು ಮಾಡಿದ್ರೋ ಮನೆ ಬಿಟ್ಟು ಹೊರಗೆ ಬರೋ ನಿರ್ಧಾರ ಮಾಡಿ ತಂದೆ ಮನೆಗೆ ಐಶ್ವರ್ಯ ಬಂದು ಬಿಟ್ಟಿದ್ದಳು. ಆದರೆ ಅಲ್ಲೂ ನೆಮ್ಮದಿಯಾಗಿ ಇರೋದಕ್ಕೆ ಬಿಡದ ಗಂಡ ರಾಜೇಶ್ ಭಯಾನಕ ಹಿಂಸೆ ನೀಡಿದ್ದಾನೆ. ಇದರಿಂದ ಬೇಸತ್ತ ಐಶ್ವರ್ಯ ಎಳೆ ಎಳೆಯಾಗಿ ಕಷ್ಟದ ಬಗ್ಗೆ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಪ್ರಕರಣದ ತನಿಖೆ ನಡೆಸಿದ ಗೋವಿಂದರಾಜ ನಗರ ಪೊಲೀಸರು, ಅಗರ್ಭ ಶ್ರೀಮಂತ ಗಿರಿಯಪ್ಪ, ಸೀತಾ, ಐಶ್ವರ್ಯ ಪತಿ ರಾಜೇಶ್‍ನ ಬಂಧಿಸಿ ವಿಚಾರಣೆ ನಡೆಸಿದೆ. ತಾನು ಮಾಡಿದ ತಪ್ಪಿಗೆ ಹಿಂಸೆ ಅನುಭವಿಸಿದ ಐಶ್ವರ್ಯ ಇಹಲೋಕ ತ್ಯಜಿಸಿದ್ದಾಳೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತೆಲುಗು ಬಿಗ್ ಬಾಸ್ ಮನೆಗೆ ಕನ್ನಡದ ನಟಿ ಐಶ್ವರ್ಯಾ

    ತೆಲುಗು ಬಿಗ್ ಬಾಸ್ ಮನೆಗೆ ಕನ್ನಡದ ನಟಿ ಐಶ್ವರ್ಯಾ

    ನ್ನಡ ಕಿರುತೆರೆಯಲ್ಲಿ ‘ಅನುರೂಪ’, ‘ಸರ್ವ ಮಂಗಳ ಮಾಂಗಲ್ಯೇ’, ಸುಂದರಿ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಐಶ್ವರ್ಯಾ ಅವರು ದೊಡ್ಮನೆಗೆ ಕಾಲಿಡಲಿದ್ದಾರೆ. ತೆಲುಗು ಬಿಗ್ ಬಾಸ್‌ನಲ್ಲಿ (Bigg Boss) ಕನ್ನಡ ನಟಿ ಐಶ್ವರ್ಯಾ (Aishwarya) ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

    ಟಿವಿ ಲೋಕದ ಜನಪ್ರಿಯ ‘ಅನುರೂಪ’ ಸೀರಿಯಲ್‌ನಲ್ಲಿ ನಟ ರಿಷಿಗೆ ನಾಯಕಿಯಾಗಿ ನಟಿಸಿದ್ದ ಐಶ್ವರ್ಯಾ ಅವರು ರಮೇಶ್ ಅರವಿಂದ್ (Ramesh Aravind) ನಿರ್ಮಾಣದ ‘ಸುಂದರಿ’ ಸೇರಿದಂತೆ ಹಲವು ಸೀರಿಯಲ್‌ನಲ್ಲಿ ನಟಿಸಿದ್ದರು. ಸಂತು ಸ್ಟ್ರೈಟ್ ಫಾರ್ವರ್ಡ್’ ಸಿನಿಮಾದಲ್ಲಿ ಯಶ್ ತಂಗಿಯಾಗಿ ಐಶ್ವರ್ಯಾ ನಟಿಸಿದ್ದರು. ಇದನ್ನೂ ಓದಿ:ಜುಲೈ 23ಕ್ಕೆ ವಿಶ್ವಕುಂದಾಪ್ರ ಕನ್ನಡ ದಿನಕ್ಕೆ ಸಿಎಂ, ರಿಷಬ್ ಶೆಟ್ಟಿ- ಪ್ರಮೋದ್ ಶೆಟ್ಟಿ ಸಾಥ್

    ಇದೀಗ ಕನ್ನಡದ ಜೊತೆ ತೆಲುಗು ಸೀರಿಯಲ್‌ನಲ್ಲೂ ನಟಿ ಸದ್ದು ಮಾಡ್ತಿದ್ದಾರೆ. ತೆಲುಗು ಪ್ರೇಕ್ಷಕರ ಪ್ರೀತಿಯನ್ನ ಸಂಪಾದಿಸಿದ್ದಾರೆ. ದೊಡ್ಮನೆಗೆ ಹೋಗುವ ಆಫರ್ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

    ಇತ್ತೀಚಿಗಷ್ಟೇ ಬಿಗ್ ಬಾಸ್ ಸೀಸನ್ 7ರ (Bigg Boss Telagu 7) ನಟ ನಾಗಾರ್ಜುನ (Nagarjuna) ನಿರೂಪಣೆಯ ಪ್ರೋಮೋ ರಿವೀಲ್ ಆಗಿದೆ. ಫಸ್ಟ್ ಪ್ರೋಮೋಗೆ ಗುಡ್ ರೆಸ್ಪಾನ್ಸ್ ಸಿಕ್ಕಿದೆ. ಹಾಗೆಯೇ ಯಾರೆಲ್ಲಾ ತಾರೆಯರು ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ ಎಂಬ ಕುತೂಹಲ ಕೂಡ ನಿರ್ಮಾಣವಾಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿಗ್ ಬಾಸ್ ಶೋ ಪ್ರಸಾರವಾಗಲಿದೆ. ಸದ್ಯ ಕನ್ನಡದ ನಟಿ ಶೋಭಾ ಶೆಟ್ಟಿ, ಐಶ್ವರ್ಯಾ ಅವರು ತೆಲುಗು ಬಿಗ್ ಬಾಸ್‌ಗೆ ಹೋಗಲಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಇದು ನಿಜಾನಾ ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಐಶ್ವರ್ಯಾ ರಜನಿಕಾಂತ್ 2ನೇ ಮದುವೆ ವದಂತಿ: ಅಸಲಿ ಕಥೆ ಏನು?

    ಐಶ್ವರ್ಯಾ ರಜನಿಕಾಂತ್ 2ನೇ ಮದುವೆ ವದಂತಿ: ಅಸಲಿ ಕಥೆ ಏನು?

    ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಪುತ್ರಿ, ನಟ ಧನುಷ್ ಅವರ ಮಾಜಿ ಪತ್ನಿ ಐಶ್ವರ್ಯಾ (Aishwarya)  ಸದ್ಯದಲ್ಲೇ ಮತ್ತೊಂದು ಮದುವೆ (Marriage) ಆಗಲಿದ್ದಾರೆ ಎನ್ನುವ ಸುದ್ದಿ ತಮಿಳು ಸಿನಿಮಾ ರಂಗದಲ್ಲಿ ದಟ್ಟವಾಗಿತ್ತು. ಯುವ ನಟನ ಜೊತೆ ಐಶ್ವರ್ಯಾ ಮದುವೆಯಾಗಲಿದ್ದಾರೆ ಎನ್ನುವುದು ದೊಡ್ಡ ಸುದ್ದಿಯೂ ಆಗಿತ್ತು. ಸದ್ಯ ಲಾಲ್ ಸಲಾಂ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಐಶ್ವರ್ಯಾ ಈ ಸಿನಿಮಾದ ಶೂಟಿಂಗ್ ಮುಗಿಸಿಕೊಂಡು ಹಸೆಮಣೆ ಏರಲಿದ್ದಾರೆ ಎನ್ನುವಲ್ಲಿಗೆ ಸುದ್ದಿ ಸೇಲ್ ಆಗಿತ್ತು.

    ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ಇದೊಂದು ಕೇವಲ ವದಂತಿ ಎಂದು ಹೇಳಲಾಗುತ್ತಿದೆ. ನಟ ಧನುಷ್ (Dhanush) ಮತ್ತು ಐಶ್ವರ್ಯಾ ಇಬ್ಬರೂ ದೂರವಾಗಿದ್ದರೂ, ಇವರಿಗೆ ಇರುವ ಇಬ್ಬರು ಮಕ್ಕಳು ಎರಡೂ ಕಡೆ ಓಡಾಡುತ್ತಿದ್ದಾರೆ. ಹಾಗಾಗಿ ಧನುಷ್ ಮತ್ತು ಐಶ್ವರ್ಯಾ ಅವರನ್ನು ಮತ್ತೆ ಒಂದಾಗಿಸುವ ಪ್ರಯತ್ನಗಳು ನಡೆದಿವೆ ಎನ್ನಲಾಗುತ್ತಿದೆ. ಧನುಷ್ ಅವರ ಕುಟುಂಬದ ಜೊತೆ ರಜನಿ ಈ ಹಿಂದೆ ಮಾತನಾಡಿದ್ದರು.  ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ನಟಿ, ಡೆಲಿವರಿ ಆಗ್ತಿದ್ದಂತೆ ಶೂಟಿಂಗ್ ಹಾಜರಾದ ಮಮತಾ

    ಸದ್ಯ ಐಶ್ವರ್ಯಾ ‘ಲಾಲ್ ಸಲಾಂ’ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾದಲ್ಲಿ ರಜನಿಕಾಂತ್ ಕೂಡ ನಟಿಸುತ್ತಿದ್ದಾರೆ. ಮತ್ತೊಂದು ಕಡೆ ಧನುಷ್ ಕೂಡ ತಾವೇ ನಿರ್ದೇಶನ ಮಾಡುತ್ತಾ, ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಒಂದು ಚಿತ್ರ ರಿಲೀಸ್ಗೆ ರೆಡಿ ಇದೆ. ಮೊನ್ನೆಯಷ್ಟೇ ಮಕ್ಕಳನ್ನು ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಕರೆದುಕೊಂಡು ಬಂದು ಮುಡಿ ಕೊಟ್ಟಿದ್ದರು. ಈ ನಡುವೆ ಐಶ್ವರ್ಯಾ ಮದುವೆ ಸುದ್ದಿ ಬಂದಿದೆ.

    ಐಶ್ವರ್ಯಾ ಅವರ ಆಪ್ತರೇ ಖಚಿತ ಪಡಿಸಿದಂತೆ ಯಾವ ನಟನ ಜೊತೆಯೂ ಐಶ್ವರ್ಯಾ ಮದುವೆ ಆಗುತ್ತಿಲ್ಲವಂತೆ. ಇದೊಂದು ಕಪೋಕಲ್ಪಿತ ವರದಿ ಎಂದು ಹೇಳಿದ್ದಾರೆ. ಇಂತಹ ಸುದ್ದಿಗಳು ಅವರ ಕೆಲಸಕ್ಕೆ ತೊಂದರೆಯನ್ನುಂಟು ಮಾಡುತ್ತವೆ ಎಂದೂ ಅವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • `ಸಿಂಹಾದ್ರಿಯ ಸಿಂಹ’ ನಟಿ ಮೀನಾ ಜೊತೆ ಧನುಷ್ ಮದುವೆ

    `ಸಿಂಹಾದ್ರಿಯ ಸಿಂಹ’ ನಟಿ ಮೀನಾ ಜೊತೆ ಧನುಷ್ ಮದುವೆ

    ಪುಟ್ನಂಜ, ಚೆಲುವ, ಗ್ರಾಮದೇವತೆ, ಸಿಂಹಾದ್ರಿಯ ಸಿಂಹ (Simhadriya Simha) ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟಿ ಮೀನಾ (Meena) ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಪತಿಯ ಸಾವಿನ ನೋವಿನಿಂದ ಚೇತರಿಸಿಕೊಂಡಿರುವ ನಟಿ ಮೀನಾ ಅವರ 2ನೇ ಮದುವೆ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಕಾಲಿವುಡ್ ನಟ ಧನುಷ್ (Actor Dhanush) ಜೊತೆ ಮೀನಾ ಮದುವೆ ಎಂದು ಸುದ್ದಿಯಾಗಿದೆ. ಇದನ್ನೂ ಓದಿ: ಕರದಂಟು ಉದ್ಯಮಿ ಬೆನ್ನಿಗೆ ನಿಂತ ಅಶ್ವಿನಿ ಪುನೀತ್ ರಾಜ್ ಕುಮಾರ್

    ರಜನಿಕಾಂತ್ (Rajanikanth) ಪುತ್ರಿ ಐಶ್ವರ್ಯಾಗೆ ಧನುಷ್ ಡಿವೋರ್ಸ್ ನೀಡಿರೋದು ಎಲ್ಲರಿಗೂ ಗೊತ್ತೆ ಇದೆ. ಇಬ್ಬರೂ ಇದೀಗ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ಧನುಷ್ ಮತ್ತು ಮೀನಾ ಮದುವೆ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರ ಮದುವೆ ಬಗ್ಗೆ ಸಂದರ್ಶನವೊಂದರಲ್ಲಿ ನಟ ಬೈಲಾನ್ ರಂಗನಾಥನ್ ಮಾಹಿತಿ ಹಂಚಿಕೊಂಡಿದ್ದಾರೆ.

    ಧನುಷ್- ಮೀನಾ ಇಬ್ಬರು ಒಂಟಿ ಜೀವನ ನಡೆಸುತ್ತಿದ್ದಾರೆ. ಮುಂಬರುವ ಜುಲೈನಲ್ಲಿ ಇಬ್ಬರೂ ಮದುವೆಯಾಗುತ್ತಾರೆ ಎಂದು ಬೈಲಾನ್ ರಂಗನಾಥನ್ ಹೇಳಿದ್ದಾರೆ. ಈ ಸುದ್ದಿ ಕೇಳ್ತಿದ್ದಂತೆ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಅಷ್ಷಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ಕಾದುನೋಡಬೇಕಿದೆ.

  • ಟಾಪ್‌ಲೆಸ್ ಫೋಟೋಶೂಟ್‌ನಲ್ಲಿ ಕಂಗೊಳಿಸಿದ `ಗಾಳಿಪಟ’ ನಟಿ

    ಟಾಪ್‌ಲೆಸ್ ಫೋಟೋಶೂಟ್‌ನಲ್ಲಿ ಕಂಗೊಳಿಸಿದ `ಗಾಳಿಪಟ’ ನಟಿ

    ಸ್ಯಾಂಡಲ್‌ವುಡ್ (Sandalwood) ಬ್ಯೂಟಿ ಡೈಸಿ ಬೋಪಣ್ಣ (Daisy Bopanna) ಅವರು ಈಗ ಹೊಸ ಫೋಟೋಶೂಟ್ ಮೂಲಕ ಸುದ್ದಿಯಲ್ಲಿದ್ದಾರೆ. ಟಾಪ್ ತೆಗೆದು ಗುಲಾಬಿ ಹಿಡಿದು ಕ್ಯಾಮೆರಾ ಮುಂದೆ ಗಾಳಿಪಟ (Galipata) ನಟಿ ಬಂದಿದ್ದಾರೆ. ಈ ಕುರಿತ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

     

    View this post on Instagram

     

    A post shared by Daisy Bopanna (@daisybopanna)

    ರಾಮ ಶಾಮ ಭಾಮ, ಕ್ರೇಜಿ ಲೋಕ, ಐಶ್ವರ್ಯ, ತವರಿನ ಸಿರಿ, ಗಾಳಿಪಟ ಸೇರಿದಂತೆ ಹಲವು ಸಿನಿಮಾ ನಟಿಸಿದ ಕೊಡಗಿನ ಕುವರಿ ಡೈಸಿ ಬೋಪಣ್ಣ ಚಿತ್ರರಂಗದಿಂದ ದೂರಯುಳಿದ್ದಾರೆ. ಉದ್ಯಮಿ ಅಮಿತ್ ಜಾಜು 2011ರಲ್ಲಿ ಮದುವೆಯಾದರು. ಮದುವೆ, ಸಂಸಾರ ಎಂದು ಬ್ಯುಸಿಯಿರುವ ನಟಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ.

     

    View this post on Instagram

     

    A post shared by Daisy Bopanna (@daisybopanna)

    ಮದುವೆಯ ನಂತರ ಮತ್ತಷ್ಟು ಹಾಟ್ ಮತ್ತು ಫಿಟ್ ಆಗಿರುವ ನಟಿ ಡೈಸಿ ಇದೀಗ ಟಾಪ್‌ಲೆಸ್ ಫೋಟೋಶೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸುಂದರವಾದ ಲೈಟ್ ಪಿಂಕ್ ಕಲರ್ ರೋಸ್‌ಗಳನ್ನು ಹಿಡಿದು ಡೈಸಿ ಪೋಸ್ ಕೊಟ್ಟಿದ್ದಾರೆ. ನಟಿ ಕೂದಲನ್ನು ಫ್ರೀಯಾಗಿ ಬಿಟ್ಟು ಸಖತ್ ಸ್ಟೈಲಿಷ್ ಆಗಿ ಕಾಣಿಸಿದ್ದಾರೆ. ಕ್ಯಾಮೆರಾ ಕಣ್ಣಿಗೆ ಮುದ್ದಾಗಿ ನಟಿ ಪೋಸ್ ನೀಡಿದ್ದಾರೆ. ಸಿಂಪಲ್‌ ಆಗಿ ಮೇಕಪ್‌ ಮಾಡಿ, ಬಾಟಂ ವೇರ್‌ ಮಾತ್ರ ಧರಿಸಿದ್ದಾರೆ. ಇದನ್ನೂ ಓದಿ: 12 ವರ್ಷದ ದಾಂಪತ್ಯಕ್ಕೆ ಬ್ರೇಕ್ ಹಾಕಿದ್ಯಾಕೆ? ಡಿವೋರ್ಸ್ ಬಗ್ಗೆ ಬಾಯ್ಬಿಟ್ಟ ಅನುಪ್ರಭಾಕರ್

     

    View this post on Instagram

     

    A post shared by Daisy Bopanna (@daisybopanna)

    ಮತ್ತಷ್ಟು ಹಾಟ್ ಆಗಿ ಕಾಣಿಸಿಕೊಂಡಿರುವ ನಟಿ ಡೈಸಿ ಬೋಪಣ್ಣ ಅವರಿಗೆ ಮತ್ತೆ ಸಿನಿಮಾಗೆ ಕಮ್‌ಬ್ಯಾಕ್ ಆಗುವಂತೆ ಫ್ಯಾನ್ಸ್ ಮನವಿ ಮಾಡ್ತಿದ್ದಾರೆ. ಹೊಸ ಬಗೆಯ ಫ್ಯಾಷನ್ ಲುಕ್‌ನಿಂದ ನೆಟ್ಟಿಗರ ಗಮನ ಸೆಳೆಯುತ್ತಿರುವ ನಟಿ, ಸಿನಿಮಾಗಳಲ್ಲಿ ಮತ್ತೆ ನಟಿಸುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.