Tag: ಐಶ್ವರ್ಯಾ

  • ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ‘ಬಿಗ್ ಬಾಸ್’ ಸ್ಪರ್ಧಿಗಳು

    ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ‘ಬಿಗ್ ಬಾಸ್’ ಸ್ಪರ್ಧಿಗಳು

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಸ್ಪರ್ಧಿಗಳಾದ ಐಶ್ವರ್ಯಾ, ಶಿಶಿರ್ ಶಾಸ್ತ್ರಿ, ಮೋಕ್ಷಿತಾ ಪೈ (Mokshitha Pai) ಅವರು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ (Kollur Mookambika Temple) ಭೇಟಿ ನೀಡಿದ್ದಾರೆ. ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ಪ್ಯಾರಿಸ್ ಬೀದಿಯಲ್ಲಿ ಪ್ರಣಿತಾ ಸುಭಾಷ್ ಹಾಟ್ ಪೋಸ್

    ಜನವರಿ ಅಂತ್ಯದಲ್ಲಿ ‘ಬಿಗ್ ಬಾಸ್’ ಶೋಗೆ ಬ್ರೇಕ್ ಬಿದ್ದಿತ್ತು. ಹಲವು ಕಾರ್ಯಕ್ರಮಗಳಲ್ಲಿ ಬ್ಯುಸಿಯಿದ್ದ ಸ್ಪರ್ಧಿಗಳು ಇದೀಗ ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ, ಮೋಕ್ಷಿತಾ, ಶಿಶಿರ್ (Shishir), ಐಶ್ವರ್ಯಾ (Aishwarya) ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.

    ಇತ್ತೀಚೆಗೆ ಕೊಡಗಿನಲ್ಲಿ ‘ಬಿಗ್ ಬಾಸ್’ ಸ್ಪರ್ಧಿ ರಂಜಿತ್ ಅವರ ಎಂಗೇಜ್‌ಮೆಂಟ್ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಐಶ್ವರ್ಯಾ, ಮೋಕ್ಷಿತಾ, ಶಿಶಿರ್, ಭವ್ಯಾ ಗೌಡ, ಅನುಷಾ ರೈ ಭಾಗಿಯಾಗಿ ಶುಭಕೋರಿದ್ದರು.

  • ಐಶ್ವರ್ಯಾಗೆ ಲೈನ್‌ ಹೊಡೀತಿದ್ರಾ ಅಂತ ನನಗೆ ಡೌಟ್‌: ಧನರಾಜ್‌ಗೆ ಪತ್ನಿ ಫುಲ್‌ ಕ್ಲಾಸ್

    ಐಶ್ವರ್ಯಾಗೆ ಲೈನ್‌ ಹೊಡೀತಿದ್ರಾ ಅಂತ ನನಗೆ ಡೌಟ್‌: ಧನರಾಜ್‌ಗೆ ಪತ್ನಿ ಫುಲ್‌ ಕ್ಲಾಸ್

    ದಾ ಕಿತ್ತಾಟದಿಂದಲೇ ಹೈಲೆಟ್‌ ಆಗುತ್ತಿದ್ದ ಬಿಗ್ ಬಾಸ್ ಮನೆ (Bigg Boss Kannada 11) ಇದೀಗ ಕಳೆದ ಎರಡು ದಿನಗಳಿಂದ ಭಾವನಾತ್ಮಕ ಘಳಿಗೆಗಳಿಗೆ ಸಾಕ್ಷಿ ಆಗಿದೆ. ಸ್ಪರ್ಧಿಗಳ ಕುಟುಂಬಸ್ಥರು ಒಬ್ಬೊಬ್ಬರೇ ಎಂಟ್ರಿ ಆಗ್ತಿದ್ದು, ಸ್ಪೆಷಲ್‌ ಎಪಿಸೋಡ್‌ನಿಂದ ಪ್ರೇಕ್ಷಕರ ಮನ ಮುಟ್ಟುತ್ತಿದೆ. ಜೊತೆಗೆ ಸ್ಪರ್ಧಿಗಳಿಗೂ ಎನರ್ಜಿ ಸಿಗುತ್ತಿದೆ. ಇದನ್ನೂ ಓದಿ:ರೊಮ್ಯಾಂಟಿಕ್ ಪ್ರಿ ವೆಡ್ಡಿಂಗ್ ವಿಡಿಯೋ ಹಂಚಿಕೊಂಡ ‘ಸೀತಾರಾಮ’ ನಟಿ

    ಇದೀಗ ಧನರಾಜ್ ಆಚಾರ್‌ (Dhanraj Achar) ಅವರ ಕೂಡು ಕುಟುಂಬ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದೆ. ಇಡೀ ಕುಟುಂಬವನ್ನು ನೋಡಿ ಧನರಾಜ್ ಫುಲ್ ಹ್ಯಾಪಿ ಆಗಿದ್ದಾರೆ. ಮನೆಗೆ ಎಂಟ್ರಿ ಆಗ್ತಿದ್ದಂತೆಯೇ ಕುಟುಂಬದ ಸದಸ್ಯರೆಲ್ಲರೂ ಧನರಾಜ್‌ ಜೊತೆ ಹುಲಿ ಕುಣಿತದ ಸ್ಟೆಪ್ಸ್ ಹಾಕಿ ಖುಷಿ ಪಟ್ಟಿದ್ದಾರೆ. ಮನೆ ಮಂದಿಯೆಲ್ಲಾ ಬಿಗ್‌ ಬಾಸ್‌ಗೆ ಬಂದಿರೋದು ಧನರಾಜ್‌ ಸಂತಸ ದುಪ್ಪಟ್ಟು ಮಾಡಿದೆ.

    ಧನರಾಜ್‌ಗೆ ಮತ್ತೊಂದು ಸರ್ಪ್ರೈಸ್ ಅವರ ಮುದ್ದಿನ ಮಗಳು ಕೂಡ ಬಿಗ್ ಬಾಸ್‌ಗೆ ಬಂದಿದ್ದಾಳೆ. ಮೊದಲಿಗೆ ತೊಟ್ಟಿಲಲ್ಲಿ ಹಾಯಾಗಿ ಮಲಗಿರುವ ಮಗುವನ್ನು ಫೋಟೋವನ್ನು ಸ್ಕ್ರೀನ್ ಮೇಲೆ ತೋರಿಸಲಾಗಿತ್ತು. ಪ್ಲೀಸ್ ಮಗುವನ್ನು ಎತ್ತಿಕೊಳ್ಳಲು ಬಿಡಿ ಎಂದು ಬಿಗ್ ಬಾಸ್‌ಗೆ ಧನರಾಜ್‌ ಮನವಿ ಮಾಡಿಕೊಂಡಿದ್ದಾರೆ. ಅವರು ಭಾವುಕರಾಗಿದ್ದನ್ನು ನೋಡಿದ ಬಿಗ್ ಬಾಸ್, ಕೊನೆಗೆ ಮಗುವಿನ ಜೊತೆ ಕಾಲ ಕಳೆಯಲು ಅವಕಾಶ ಮಾಡಿ ಕೊಟ್ಟಿದ್ದಾರೆ. ಓಡಿ ಹೋಗಿ ಮಗುವನ್ನು ಎತ್ತಿಕೊಂಡ ಭಾವುಕರಾಗಿ ಎತ್ತಿ ಮುದ್ದಾಡಿದ್ದಾರೆ. ಮಗುವಿನ ಪಕ್ಕದಲ್ಲಿ ಮಲಗಿ ಕೆಲ ಸಮಯ ಕಳೆದಿದ್ದಾರೆ.

    ಬಳಿಕ ಪತ್ನಿ ಪ್ರಜ್ಞಾ ಧನರಾಜ್‌ಗೆ ಮುದ್ದಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ನಾನು ಇಲ್ಲದೇ ನಿಮಗೆ ಭಾರೀ ಖುಷಿಯಾಗಿದೆ ಎಂದು ಪ್ರೀತಿಯಿಂದ ಹೊಡೆಯಲು ಶುರು ಮಾಡಿದ್ದಾರೆ. ಎಲ್ಲದಕ್ಕೂ ಐಶ್ವರ್ಯಾ ಹೆಸರು ತೆಗೆದುಕೊಳ್ತಿದ್ದೀರಿ. ನೀವು ಐಶ್ವರ್ಯಾಗೆ ಲೈನ್ ಹೊಡೆಯುತ್ತಿದ್ದೀರಾ ಅಂತಾ ಡೌಟ್ ಎನ್ನುತ್ತಾ ಕೆನ್ನೆಗೆ ಹೊಡೆದಿದ್ದಾರೆ. ಪತಿಯ ಕಾಲೆಳೆದಿದ್ದಾರೆ. ಇವರಿಬ್ಬರ ಕ್ಯೂಟ್ ಕಿತ್ತಾಟವನ್ನು ನೋಡಿದ ಇತರೆ ಸ್ಪರ್ಧಿಗಳು ನಕ್ಕಿದ್ದಾರೆ.

  • BBK 11: ಐಶ್ವರ್ಯಾ ಸಖತ್ ಆಗಿದ್ದಾಳೆ ಎಂದ ರಜತ್‌ಗೆ ಪತ್ನಿ ಕ್ಲಾಸ್

    BBK 11: ಐಶ್ವರ್ಯಾ ಸಖತ್ ಆಗಿದ್ದಾಳೆ ಎಂದ ರಜತ್‌ಗೆ ಪತ್ನಿ ಕ್ಲಾಸ್

    ನ್ನಡದ ‘ಬಿಗ್ ಬಾಸ್ ಸೀಸನ್ 11’ರ (Bigg Boss Kannada 11) ಆಟ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ. 93 ದಿನಗಳನ್ನು ಪೂರೈಸಿರುವ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳ ಕುಟುಂಬಸ್ಥರು ಎಂಟ್ರಿ ಕೊಟ್ಟಿದ್ದಾರೆ. ರಜತ್ (Rajath) ಅವರ ಫ್ಯಾಮಿಲಿ ಮನೆಗೆ ಎಂಟ್ರಿ ಕೊಟ್ಟಿದೆ. ತರಲೆ ಮಾಡೋ ಪತಿ ರಜತ್‌ಗೆ ಪತ್ನಿ ಸಖತ್‌ ಆಗಿ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಈ ಕುರಿತ ಪ್ರೋಮೋವನ್ನು ವಾಹಿನಿ ಹಂಚಿಕೊಂಡಿದೆ. ಇದನ್ನೂ ಓದಿ:ರಶ್ಮಿಕಾ ಸಿನಿಮಾ ಕೆರಿಯರ್‌ಗೆ 8 ವರ್ಷ- ಫ್ಯಾನ್ಸ್‌ಗೆ ಥ್ಯಾಂಕ್ಯೂ ಎಂದ ನಟಿ

    ಮೊದಲು ಬಿಗ್ ಬಾಸ್‌ಗೆ ರಜತ್ ಪತ್ನಿ ಅಕ್ಷಿತಾ ಬಂದಿದ್ದರು. ಆಗ ರಜತ್ ಹೆಂಡತಿಗೆ ನನ್ನ ಮಗಳು ಎಲ್ಲಿ ಅಂತ ಕೇಳಿದರು. ಆಗ ಅಕ್ಷಿತಾ ಬಂದಿಲ್ಲ ಅಂತ ಸುಳ್ಳು ಹೇಳಿದ್ದರು. ಆಗ ರಜತ್ ಬಿಗ್ ಬಾಸ್ ಇವರನ್ನು ಆಚೆ ಕಳುಹಿಸಿ ಡೋರ್ ಓಪನ್ ಮಾಡಿ ಅಂತ ಹೇಳಿದ್ದಾರೆ. ಬಳಿಕ ಮನೆ ಮಂದಿಯ ಎದುರು ಏನು ಎಲ್ಲರ ತೊಡೆ ಮೇಲೆ ಹೋಗಿ ಕುಳಿತುಕೊಳ್ಳುತ್ತೀದ್ದೀರಾ? ಏನ್ ಕಥೆ ಎಂದು ರಜತ್ ಪತ್ನಿ ಪ್ರಶ್ನೆ ಮಾಡಿದ್ದಾರೆ. ಅದಷ್ಟೇ ಅಲ್ಲ, ಐಶ್ವರ್ಯಾ ನೋಡಿ ಏನ್ ಅಂದ್ರಿ ಅವತ್ತು ಎಂದು ಕೇಳಿದ್ದಾರೆ. ಅದಕ್ಕೆ ರಜತ್, ಐಶ್ವರ್ಯಾ (Aishwarya Shindogi) ಸಖತ್ ಆಗಿದ್ದಾಳೆ, ಅದಕ್ಕೆ ಹಾಗೆ ಅಂದೆ ಅದರಲ್ಲಿ ಏನಿದೆ ಎಂದು ಪ್ರತಿಯುತ್ತರ ನೀಡಿದ್ದಾರೆ. ಅದಕ್ಕೆ ಪತ್ನಿ (Akshita Rajath) ನಗುತ್ತಲೇ ರಜತ್‌ಗೆ ಪೆಟ್ಟು ಕೊಡಲು ಮುಂದಾಗಿದ್ದಾರೆ.

    ಇದಾದ ಕೆಲವು ನಿಮಿಷಕ್ಕೆ ಬಿಗ್ ಬಾಸ್ ಮನೆಗೆ ರಜತ್ ಅವರ ಇಬ್ಬರು ಮಕ್ಕಳು ಎಂಟ್ರಿ ಕೊಟ್ಟಿದ್ದಾರೆ. ಇಬ್ಬರು ಮಕ್ಕಳನ್ನು ನೋಡುತ್ತಿದ್ದಂತೆ ರಜತ್ ಕಣ್ಣಲ್ಲಿ ನೀರು ಬಂದಿದೆ. ಅಪ್ಪ ಮಾತಾಡಿ ಅಪ್ಪ ಅಂತ ಮಗಳು ರಜತ್‌ರನ್ನು ಅಪ್ಪಿಕೊಂಡಿದ್ದಾರೆ. ಇದನ್ನೂ ನೋಡಿದ ಮನೆ ಮಂದಿ ಭಾವುಕರಾಗಿದ್ದಾರೆ.

    ಇನ್ನೂ 50 ದಿನಗಳನ್ನು ಪೂರೈಸಿದ್ದ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು ರಜತ್ ಕಿಶನ್. ಸಹ ಸ್ಪರ್ಧಿಗಳಿಗೆ ಠಕ್ಕರ್ ಕೊಡುತ್ತಾ ಉತ್ತಮವಾಗಿ ರಜತ್ ಆಟ ಆಡುತ್ತಿದ್ದಾರೆ.

  • ಶಿಶಿರ್‌ ತುಂಬಾ ಒಳ್ಳೆಯ ವ್ಯಕ್ತಿ: ಮದುವೆ ಬಗ್ಗೆ Bigg Boss ಐಶ್ವರ್ಯಾ ರಿಯಾಕ್ಷನ್‌

    ಶಿಶಿರ್‌ ತುಂಬಾ ಒಳ್ಳೆಯ ವ್ಯಕ್ತಿ: ಮದುವೆ ಬಗ್ಗೆ Bigg Boss ಐಶ್ವರ್ಯಾ ರಿಯಾಕ್ಷನ್‌

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟಕ್ಕೆ ತೆರೆ ಬೀಳಲು ಇನ್ನೇನು ಕೆಲವೇ ದಿನಗಳು ಬಾಕಿಯಿವೆ. ಈ ವಾರಾಂತ್ಯ ಐಶ್ವರ್ಯಾ ಶಿಂಧೋಗಿ ದೊಡ್ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಇನ್ನೂ ಬಿಗ್ ಬಾಸ್‌ನಲ್ಲಿ ಶಿಶಿರ್ ಶಾಸ್ತ್ರಿ ಜೊತೆ ಉತ್ತಮ ಒಡನಾಟ ಹೊಂದಿದ್ದ ಐಶ್ವರ್ಯಾ ಮದುವೆ ಕುರಿತಯ ಮಾತನಾಡಿದ್ದಾರೆ. ಶಿಶಿರ್ (Shishir Shastry) ಮನೆ ಕಡೆಯಿಂದ ಮದುವೆ ಪ್ರಪೋಸಲ್ ಬಂದ್ರೆ ಐಶ್ವರ್ಯಾ ರಿಯಾಕ್ಷನ್ ಏನು? ಎಂಬುದನ್ನು ಮಾತನಾಡಿದ್ದಾರೆ.

    ನನ್ನ ಮತ್ತು ಶಿಶಿರ್ ಮಧ್ಯೆ ಇರೋದು ಜೆನ್ಯೂನ್ ಆಗಿರುವಂತಹ ಫ್ರೆಂಡ್‌ಶಿಪ್. ಅದು ಬಿಟ್ಟು ಇನ್ನೇನು ಇಲ್ಲ. ನಾವಿಬ್ಬರೂ 2016ರಲ್ಲಿ ಒಟ್ಟಿಗೆ ಮೂವಿ ಮಾಡಿದ್ದೇವೆ. ಅಲ್ಲಿಂದ ನಾವಿಬ್ಬರಿಗೂ ಪರಿಚಯ ಆಗಿತ್ತು. ಆವಾಗ ಶಿಶಿರ್ ಅವರ ವ್ಯಕ್ತಿತ್ವ ಹೇಗಿತ್ತೋ, ಹಾಗೆಯೇ ಬಿಗ್ ಬಾಸ್ ಮನೆಯೊಳಗೆ ಬಂದಾಗಲೂ ಹಾಗೇ ಇತ್ತು. ಅದರ ನಂತರ ನಮಗೆ ಫೋನ್ ಸಂಪರ್ಕ ಏನು ಇರಲಿಲ್ಲ. ಬಿಗ್ ಬಾಸ್‌ಗೆ ಬಂದ್ಮೇಲೆಯೇ ಮತ್ತೆ ಪರಿಚಯ ಆಯ್ತು. ನನಗೆ ಅವರು ಸ್ಟ್ರಾಂಗ್ ಎಮೋಷನಲಿ ಬೆಂಬಲ ಕೊಟ್ಟಿದ್ದಾರೆ ಎಂದು ನಟಿ ತಿಳಿಸಿದ್ದಾರೆ. ಇದನ್ನೂ ಓದಿ:ನನ್ನ ಮನಸ್ಸಿಗೆ ನೋವು ಮಾಡಬೇಡಿ: ಫ್ಯಾನ್ಸ್‌ಗೆ ಶಾಕ್ ಕೊಟ್ಟ ಯಶ್

    ನನಗೆ ಹಲವಾರು ಕಡೆ ಅನ್ಯಾಯ ಆದಾಗ ನನ್ನ ಪರ ಶಿಶಿರ್ ನಿಂತಿದ್ದಾರೆ. ಅಷ್ಟು ಬಿಟ್ಟರೇ ನಮ್ಮ ನಡುವೆ ಏನಿಲ್ಲ. ಶಿಶಿರ್ ನನಗೆ ಕ್ಲೋಸ್ ಫ್ರೆಂಡ್ ಆಗಿದ್ದಾರೆ. ಫ್ಯಾನ್ಸ್‌ಗೆ ಬೇಸರ ಆಗಿದ್ರೆ ಸಾರಿ, ಅವರು ತುಂಬಾ ಒಳ್ಳೆಯ ವ್ಯಕ್ತಿ ಎಂದು ಐಶ್ವರ್ಯಾ ಶಿಂಧೋಗಿ (Aishwarya Shindogi) ಮಾತನಾಡಿದ್ದಾರೆ.

  • BBK 11: ವರಸೆ ಬದಲಿಸಿದ ಸ್ಪರ್ಧಿ: ಐಶ್ವರ್ಯಾ ಮುಖಕ್ಕೆ ಟೀ ಚೆಲ್ಲಿದ ಭವ್ಯಾ

    BBK 11: ವರಸೆ ಬದಲಿಸಿದ ಸ್ಪರ್ಧಿ: ಐಶ್ವರ್ಯಾ ಮುಖಕ್ಕೆ ಟೀ ಚೆಲ್ಲಿದ ಭವ್ಯಾ

    ‘ಬಿಗ್‌ ಬಾಸ್‌ ಕನ್ನಡ 11’ರ (Bigg Boss Kannada 11)  ಆಟ 90ನೇ ದಿನದತ್ತ ಮುನ್ನುಗ್ಗುತ್ತಿದೆ. ದೊಡ್ಮನೆಯಾಟ ಕೊನೆ ಹಂತಕ್ಕೆ ಬರುವುದರಿಂದ ಸ್ಪರ್ಧಿಗಳಲ್ಲಿ ಪೈಪೋಟಿ ಹೆಚ್ಚಾಗಿ ನಡೆದಿದೆ. ಇನ್ನೂ ಭಾನುವಾರ ಸಂಚಿಕೆಯಲ್ಲಿ ಸುದೀಪ್‌ ಅವರಿಂದ ಭವ್ಯಾ ಕಿಚ್ಚ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಐಶ್ವರ್ಯಾ (Aishwarya) ಮುಖಕ್ಕೆ ಭವ್ಯಾ (Bhavya Gowda) ಟೀ ಚೆಲ್ಲಿದ್ದಾರೆ. ಇದನ್ನೂ ಓದಿ:ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ ಕಿಚ್ಚ

    ಬಿಗ್ ಬಾಸ್ ಮನೆಯಲ್ಲಿ ಎಚ್ಚೆತ್ತಿಕೊಳ್ಳಿ ಎಂದು ಟಾಸ್ಕ್ ಶುರುವಾಗಿದ್ದು, ಸ್ಪರ್ಧಿಗಳ ಮುಖಕ್ಕೆ ಟೀ ಅನ್ನು ಹಾಕಲಾಗಿದೆ. ಇದರಲ್ಲಿ ಕೇವಲ ಐಶ್ವರ್ಯ ಮುಖಕ್ಕೆ ಭವ್ಯಾ ಮಾತ್ರ ಟೀ ಚೆಲ್ಲಿಲ್ಲ. ಇದೇ ರೀತಿ ಎಚ್ಚೆತ್ತುಕೊಳ್ಳಿ ಎಂದು ಹನುಮಂತು ಮುಖಕ್ಕೆ ಧನರಾಜ್, ಗೌತಮಿ ಮುಖಕ್ಕೆ ರಜತ್, ಚೈತ್ರಾ ಮುಖಕ್ಕೆ ಮಂಜು, ಮಂಜು ಮುಖಕ್ಕೆ ಗೌತಮಿ, ಮೋಕ್ಷಿತಾ ಮುಖಕ್ಕೂ ಚಹಾ ಚೆಲ್ಲಲಾಗಿದೆ. ಅಂದರೆ ಇವರೆಲ್ಲಾ ಮನೆಯಲ್ಲಿ ಎಚ್ಚೆತ್ತುಕೊಳ್ಳಬೇಕಿದೆ ಎಂದು ಹೇಳಲಾಗಿದೆ.

    ಬಿಗ್‌ ಬಾಸ್‌ ಅಣತಿಯಂತೆ ಮನೆಯಲ್ಲಿ ಸದಸ್ಯರ ಪೈಕಿ ಎಚ್ಚೆತ್ತುಕೊಳ್ಳಬೇಕಿರುವ ಸದಸ್ಯ ಯಾರು ಎಂದು ಘೋಷಿಸಬೇಕಿದೆ.  ಈ ಹಿನ್ನೆಲೆಯಲ್ಲಿ ಗೌತಮಿ, ಹನುಮಂತು, ಚೈತ್ರಾ, ಮೋಕ್ಷಿತಾ, ಮಂಜು ಇವರು ಇನ್ನಷ್ಟು ಎಚ್ಚೆತ್ತುಕೊಂಡು ಸ್ಪರ್ಧೆ ಮಾಡಬೇಕಿದೆ. ನೀವು ಟಾಸ್ಕ್‌ನಲ್ಲಿ ಇನ್ನಷ್ಟು ಸುಧಾರಿಸಿಕೊಳ್ಳಬೇಕು ಎಂದು ಟೀ ಚೆಲ್ಲಲಾಗಿದೆ. ಗೌತಮಿಗೆ ಹೆದರಿಕೊಂಡು ಮಂಜು ಮಾತನಾಡಲ್ಲ ಎಂಬ ಆರೋಪಕ್ಕೆ ಸ್ನೇಹಿತನ ಮೇಲೆ ಟೀ ಎರಚಿ ಎಚ್ಚೆತ್ತುಕೊಳ್ಳಿ ಎಂದು ವಾರ್ನಿಂಗ್‌ ಕೊಟ್ಟಿದ್ದಾರೆ.

    ಚೈತ್ರಾ ಕುಂದಾಪುರ ಹಾಗೂ ಐಶ್ವರ್ಯಾ ನಡುವೆ ಮಾತಿನ ಸಮರ ನಡೆದಿದೆ. ನಿಮ್ಮ ಆಟಗಳಿಗೆ ಈ ವಾರ ನಾನು ಬಲಿಪಶು ಆದೆ ಎಂದು ಚೈತ್ರಾಗೆ ಐಶ್ವರ್ಯಾ ಗುಡುಗಿದ್ದಾರೆ. ಇಬ್ಬರ ನಡುವೆ ಸೇಡಿನ ಕಿಡಿ ಹತ್ತಿಕೊಂಡಿದೆ. ನೀನು ಯಾವಳೇ ಎ.. ಅನ್ನೋಕೆ ಎಂದು ಚೈತ್ರಾ ಏಕವಚನದಲ್ಲೇ ಮಾತನಾಡಿದ್ದಾರೆ. ಬಾಯಿ ಮುಚ್ಚೆ ಸಾಕು ಎಂದು ಐಶ್ವರ್ಯಾ ವಿರುದ್ಧ ರಾಂಗ್‌ ಆಗಿದ್ದಾರೆ ಫೈರ್‌ ಬ್ರ್ಯಾಂಡ್‌ ಚೈತ್ರಾ.

  • BBK 11: ಕತ್ತಲೆ ಬೆಳಕಿನ ಆಟದಲ್ಲಿ ಗೆಲ್ಲೋದು ಯಾರು?- ಐಶ್ವರ್ಯಾ, ಭವ್ಯಾಗೆ ಬಿಗ್ ಟಾಸ್ಕ್

    BBK 11: ಕತ್ತಲೆ ಬೆಳಕಿನ ಆಟದಲ್ಲಿ ಗೆಲ್ಲೋದು ಯಾರು?- ಐಶ್ವರ್ಯಾ, ಭವ್ಯಾಗೆ ಬಿಗ್ ಟಾಸ್ಕ್

    ನ್ನಡದ ‘ಬಿಗ್ ಬಾಸ್ 11’ರ (Bigg Boss Kannada 11) ಆಟ ರೋಚಕವಾಗಿದೆ. ಕ್ಯಾಪ್ಟನ್ ಪಟ್ಟ ಏರಲು ಐಶ್ವರ್ಯಾ, ಭವ್ಯಾ (Bhavya Gowda) ನಡುವೆ ಪೈಪೋಟಿ ನಡೆದಿದೆ. ಬಿಗ್ ಬಾಸ್ ಕೊಟ್ಟ ಕತ್ತಲೆ ಬೆಳಕಿನ ಆಟದಲ್ಲಿ ಟ್ವಿಸ್ಟ್ ಕೊಡಲಾಗಿದೆ. ಸದ್ಯ ಕುತೂಹಲ ಮೂಡಿಸುವಂತಹ ಪ್ರೋಮೋವೊಂದನ್ನು ವಾಹಿನಿ ಹಂಚಿಕೊಂಡಿದೆ. ಇದನ್ನೂ ಓದಿ:ಸ್ಪೆಷಲ್ ಸಾಂಗ್‌ಗೆ ನೇಹಾ ಶೆಟ್ಟಿ ಗ್ರೀನ್ ಸಿಗ್ನಲ್

    ನಿನ್ನೆ ನಡೆದ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಕಡೆಯದಾಗಿ ಸಹ ಸ್ಪರ್ಧಿಗಳನ್ನು ಸೋಲಿಸಿ ಐಶ್ವರ್ಯಾ ಮತ್ತು ಭವ್ಯಾ ಉಳಿದುಕೊಂಡಿದ್ದರು. ಇದೀಗ ಇವರಿಬ್ಬರ ನಡುವೆ ಕ್ಯಾಪ್ಟನ್ಸಿಗಾಗಿ ಟಫ್ ಫೈಟ್ ನಡೆದಿದೆ. ಆ್ಯಕ್ಟಿವಿಟಿ ರೂಮ್‌ನಲ್ಲಿ ಕಾಲ ಕಾಲಕ್ಕೆ ಲೈಟ್ ಆನ್ ಮತ್ತು ಆಫ್ ಆಗುತ್ತದೆ. ಆಗ ಒಂದೊಂದೇ ಬಣ್ಣಗಳನ್ನು ಆಯಾ ಬಣ್ಣವನ್ನು ಸೂಚಿಸುವ ಪೆಡಾಸ್ಟಲ್‌ಗಳ ಮೇಲೆ ಇಡಬೇಕು. ಈ ಕತ್ತಲೆ ಬೆಳಕಿನ ಆಟದಲ್ಲಿ ಭವ್ಯಾ, ಐಶ್ವರ್ಯಾ (Aishwarya) ಇವರಲ್ಲಿ ಯಾರು ಗೆಲ್ತಾರೆ ಎಂಬುದು ಕ್ಯೂರಿಯಸ್ ಆಗಿದೆ.

    ಗೆದ್ದವರು ಮನೆಯ ಕ್ಯಾಪ್ಟನ್ ಪಟ್ಟವನ್ನು ಅಲಂಕರಿಸಲಿದ್ದಾರೆ. ಇನ್ನೂ ಭವ್ಯಾ ಈಗಾಗಲೇ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಐಶ್ವರ್ಯಾ ಒಮ್ಮೆ ತ್ರಿವಿಕ್ರಮ್ ಜೊತೆ ಜೋಡಿ ಕ್ಯಾಪ್ಟನ್ ಆಗಿದ್ದರು. ಈ ಬಾರಿ ಸಿಂಗಲ್ ಕ್ಯಾಪ್ಟನ್ ಆಗಿ ದರ್ಬಾರ್ ಮಾಡಬೇಕು ಎಂಬುದು ಅಭಿಮಾನಿಗಳ ಆಶಯ. ಆದರೆ ಈ ಬಾರಿ ಭವ್ಯಾ ಕ್ಯಾಪ್ಟನ್ ಪಟ್ಟ ಏರಿದ್ದಾರೆ ಎಂಬುದು ಸದ್ಯ ಹರಿದಾಡುತ್ತಿರುವ ಸುದ್ದಿ. ಎಲ್ಲದ್ದಕ್ಕೂ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.

  • ಎಲಿಮಿನೇಷನ್‌ನಲ್ಲಿ ಟ್ವಿಸ್ಟ್- ಚುಚ್ಚು ಮಾತು ಕೇಳಿ ಕಣ್ಣೀರಿಟ್ಟ ಚೈತ್ರಾ

    ಎಲಿಮಿನೇಷನ್‌ನಲ್ಲಿ ಟ್ವಿಸ್ಟ್- ಚುಚ್ಚು ಮಾತು ಕೇಳಿ ಕಣ್ಣೀರಿಟ್ಟ ಚೈತ್ರಾ

    ದೊಡ್ಮನೆಯಲ್ಲಿ ಸದ್ಯ ಉಳಿದಿರೋದು ಈಗ 12 ಸ್ಪರ್ಧಿಗಳು. ಈ ವಾರ ಇಬ್ಬರಲ್ಲಿ ಒಬ್ಬರು ಎಲಿಮಿನೇಷನ್ ಆಗೋ ಸಾಧ್ಯತೆ ಇದೆ. ಆ ಇಬ್ಬರು ಯಾರು ಅನ್ನೋದು ಈಗಾಗಲೇ ಫೈನಲ್ ಆಗಿದೆ. ಐಶ್ವರ್ಯಾ ಹಾಗೂ ಚೈತ್ರಾ ಕುಂದಾಪುರ ಡೇಂಜರ್ ಜೋನ್‌ಗೆ ಹೋಗಿದ್ದು, ಇಬ್ಬರಿಗೂ ಬಿಗ್ ಬಾಸ್ ಮನೆಯಲ್ಲಿ ಬೇರೆ, ಬೇರೆ ದಾರಿ ತೋರಿಸಲಾಗಿದೆ. ಇನ್ನೂ ಎಲಿಮಿನೇಷನ್‌ನಲ್ಲಿ ಟ್ವಿಸ್ಟ್‌ ಕೊಡಲಾಗಿದ್ದು, ಸ್ಪರ್ಧಿಗಳ ಚುಚ್ಚು ಮಾತು ಕೇಳಿ ಕಣ್ಣೀರಿಟ್ಟಿದ್ದಾರೆ.

    ಈ ವಾರಾಂತ್ಯ ಎಲಿಮಿನೇಷನ್ ಪ್ರಕ್ರಿಯೆಯಲ್ಲೂ ಸುದೀಪ್ (Sudeep) ಟ್ವಿಸ್ಟ್ ಕೊಟ್ಟಿದ್ದಾರೆ. ಬಿಗ್ ಬಾಸ್ ಐಶ್ವರ್ಯಾ ಹಾಗೂ ಚೈತ್ರಾ ಕುಂದಾಪುರ ಅವರನ್ನ ಸೀಕ್ರೆಟ್ ರೂಮ್‌ಗೆ ಕಳುಹಿಸಲಾಗಿದೆ. ಐಶ್ವರ್ಯಾ ಅವರನ್ನ ಆಕ್ಟಿವಿಟಿ ರೂಮ್‌ಗೆ ಕಳುಹಿಸಿದ್ರೆ, ಚೈತ್ರಾ ಅವರು ಕನ್ಫೆಷನ್ ರೂಮ್‌ಗೆ ಎಂಟ್ರಿ ಕೊಟ್ಟಿದ್ದಾರೆ.

    ವೀಕೆಂಡ್‌ ಎಪಿಸೋಡ್‌ನಲ್ಲಿ ಸುದೀಪ್ ಅವರು ಚೈತ್ರಾ ಮತ್ತು ಐಶ್ವರ್ಯ ಅವರೇ ಒಬ್ಬರು ಹೋಗ್ತಿರೋ, ಇಬ್ಬರು ಹೋಗ್ತಿರೋ ಅನ್ನೋ ಸಸ್ಪೆನ್ಸ್ ಹೆಚ್ಚಿಸಿದ್ದಾರೆ. ಅಂತಿಮವಾಗಿ ಇಬ್ಬರು ಹೊರಗಡೆ ಹೋಗ್ತಾರೆ. ಆದರೆ ಐಶ್ವರ್ಯಾ ಹಾಗೂ ಚೈತ್ರಾ ಮೇನ್ ಡೋರ್ ಇಂದ ಹೊರಗಡೆ ಹೋಗಿಲ್ಲ.

    ಚೈತ್ರಾ ಅವರು ಬಿಗ್ ಬಾಸ್ ಹೇಳೋ ತನಕ ಕನ್ಫೆಷನ್ ರೂಮ್‌ನಿಂದ ಹೊರಗೆ ಬರುವಂತಿಲ್ಲ. ಅಲ್ಲಿಂದನೇ ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಾ ಇರೋದನ್ನೆಲ್ಲಾ ನೋಡ್ತಿದ್ದಾರೆ. ಐಶ್ವರ್ಯಾ ಔಟ್ ಆದ್ರಾ? ಹೇಗೆ ಎಂಬುದನ್ನು ಸಸ್ಪೆನ್ಸ್ ಆಗಿ ಇಟ್ಟಿದ್ದಾರೆ. ಹನುಮಂತ ‘ಚೈತ್ರ ಅಲ್ಲ ಹೋದಳು ಪಾಪ’ ಎಂದರೆ ಧನರಾಜ್ ಅವರು ಚೈತ್ರಾಗೆ ಟಾ ಟಾ, ಬೈ, ಬೈ ಮಾಡಿದ್ದಾರೆ. ಚೈತ್ರಾ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ರಜತ್ ಅವರು ಜನಕ್ಕೆ ಈ ಯಮ್ಮ ಮಾತಾಡಿದ್ದೇ ಮಾತನಾಡುತ್ತಿದ್ದಾಳೆ ಅಂತ ಇರಿಟೇಟ್ ಅನ್ನಿಸಿರಬಹುದು ಎಂದಿದ್ದಾರೆ. ಈ ಎಲ್ಲಾ ಮಾತುಗಳನ್ನ ಚೈತ್ರಾ ಅವರು ಕೇಳಿಸಿಕೊಂಡಿದ್ದು, ನಿಜವಾದ ಬಿಗ್ ಬಾಸ್ ಮನೆಯ ಆಟ ಅಂದ್ರೆ ಇದೆ ಎಂದು ಚುಚ್ಚು ಮಾತುಗಳನ್ನ ಕೇಳಿ ಗಳಗಳನೇ ಅತ್ತಿದ್ದಾರೆ. ಹಾಗಾದ್ರೆ ಮುಂದೆ ಏನಾಗಲಿದೆ ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕುತೂಹಲ ಮೂಡಿಸಿದೆ.

  • ಗುಂಪು ಕಟ್ಟಿಕೊಂಡು ಬರಲ್ಲ, ಸಿಂಗಲ್ ಸಿಂಹದ ರೀತಿ ಹೊಡೆಯುತ್ತೇನೆ: ಗುಡುಗಿದ ಚೈತ್ರಾ

    ಗುಂಪು ಕಟ್ಟಿಕೊಂಡು ಬರಲ್ಲ, ಸಿಂಗಲ್ ಸಿಂಹದ ರೀತಿ ಹೊಡೆಯುತ್ತೇನೆ: ಗುಡುಗಿದ ಚೈತ್ರಾ

    ‘ಬಿಗ್ ಬಾಸ್ ಕನ್ನಡ 11’ರ ಆಟಕ್ಕೆ ಶೋಭಾ (Shobha Shetty) ಮತ್ತು ರಜತ್ (Rajath) ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಬಂದ್ಮೇಲೆ ಅಸಲಿ ಆಟ ಶುರುವಾಗಿದೆ. ರೋಚಕ ತಿರುವುಗಳನ್ನು ಪಡೆದು ಮುನ್ನುಗ್ಗುತ್ತಿದೆ. ಇದೀಗ ಚೈತ್ರಾ ಕೈಯಲ್ಲಿದ್ದ ಹಣವನ್ನು ಭವ್ಯಾ ಟೀಮ್ ಯಾಮಾರಿಸಿ ಕಸಿದುಕೊಂಡು ಹೋಗಿದ್ದಾರೆ. ಅದಕ್ಕೆ, ಗುಂಪು ಕಟ್ಟಿಕೊಂಡು ಬರಲ್ಲ. ಸಿಂಗಲ್ ಸಿಂಹ ರೀತಿ ಹೊಡೆಯುತ್ತೇನೆ ಎಂದು ಚೈತ್ರಾ ಖಡಕ್ ಆಗಿ ಹೇಳಿದ್ದಾರೆ.

    ‘ಬಿಗ್ ಬಾಸ್’ ಮನೆಯಲ್ಲಿ ಈಗ ನೀಲಿ ಮತ್ತು ಕೆಂಪು ಎಂಬ ಎರಡು ತಂಡಗಳು ರಚೆನೆ ಆಗಿದ್ದು, ಆ ತಂಡಗಳ ನಡುವೆ ಬಿಗ್ ಫೈಟ್ ಏರ್ಪಟ್ಟಿದೆ. ಕೆಂಪು ಬಣ್ಣದ ಟೀಮ್‌ಗೆ ಶೋಭಾ ಕ್ಯಾಪ್ಟನ್, ನೀಲಿ ಬಣ್ಣದ ಟೀಮ್‌ಗೆ ಭವ್ಯಾ ಕ್ಯಾಪ್ಟನ್ ಆಗಿದ್ದಾರೆ. ಇವೆರಡು ತಂಡಗಳ ಸದಸ್ಯರ ಬಳಿ ಹಣವಿದೆ. ಸದ್ಯ ಆ ಹಣವನ್ನು ಕಿತ್ತುಕೊಳ್ಳುವುದಕ್ಕೆ ಎರಡು ಟೀಮ್ ಕಡೆಯಿಂದ ಸ್ಕೆಚ್ ರೆಡಿ ಆಗಿದೆ. ಇದನ್ನೂ ಓದಿ:ನಾಗಾರ್ಜುನ ಅಕ್ಕಿನೇನಿ ಸೋದರಳಿಯನ ಜೊತೆ ಮೀನಾಕ್ಷಿ ಚೌಧರಿ ಮದುವೆ?- ಸ್ಪಷ್ಟನೆ ನೀಡಿದ ನಟಿ

    ಇಂದು (ನ.21) ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಚೈತ್ರಾ ಬಳಿಯಿದ್ದ ಹಣವನ್ನು ಭವ್ಯಾ ತಂಡದ ಗೌತಮಿ ಯಾಮಾರಿಸಿ ಎತ್ತಿಕೊಂಡು ಬಂದಿದ್ದಾರೆ. ಅದಕ್ಕೆ ಚೈತ್ರಾ (Chaithra Kundapura) ಫುಲ್ ಖಡಕ್ ಆಗಿ, ಎಲ್ಲರೂ ಅತ್ಯಂತ ಕೀಳುಮಟ್ಟಕ್ಕೆ ಇಳಿದಿದ್ದಾರೆ. ಗುಂಪುಗಾರಿಕೆ ಮಾಡ್ಕೊಂಡು ಕುತಂತ್ರತನವನ್ನು ನಾನು ಮಾಡೋದಿಲ್ಲ. ಡ್ರಾಮಾ ಕ್ವೀನ್‌ಗಳು ಯಾರು ಎಂದು ಗೊತ್ತಾಯ್ತು. ನನ್ನ ಆಟವನ್ನು ಇನ್ಮೇಲೆ ಶುರು ಮಾಡ್ತೀನಿ ಎಂದು ಗುಡುಗಿದ್ದಾರೆ. ಗುಂಪು ಕಟ್ಕೊಂಡು ಪ್ಲ್ಯಾನ್ ಮಾಡ್ಕೊಂಡು ಬರಲ್ಲ, ಸಿಂಗಲ್ ಸಿಂಹ ಥರ ಹೊಡೀತಿನಿ ಅಂತ ಗರ್ಜಿಸಿದ್ದಾರೆ ಚೈತ್ರಾ.

    ಅಂದಹಾಗೆ, ನಿನ್ನೆಯ ಸಂಚಿಕೆಯಲ್ಲಿ (ನ.20) ಎದುರಾಳಿ ತಂಡದ ಐಶ್ವರ್ಯಾ ಬಳಿಯಿದ್ದ 2000 ಹಣವನ್ನು ಕದ್ದುಕೊಂಡು ಬಂದಿದ್ದರು ಚೈತ್ರಾ. ಇದು ಐಶ್ವರ್ಯಾಗೆ ಬಹಳ ನೋವು ತರಿಸಿತ್ತು. ಅದಕ್ಕೀಗ ಚೈತ್ರಾ ಹಣವನ್ನು ಭವ್ಯಾ ತಂಡದವರು ಯಾಮಾರಿಸಿ ತಿರುಗೇಟು ಕೊಟ್ಟಿದ್ದಾರೆ.

  • BBK 11: ಮೈ ಮುಟ್ಟಬೇಡಿ, ಕಾಲು ನೆಟ್ಟಗಿದೆ: ಐಶ್ವರ್ಯಾಗೆ ಚೈತ್ರಾ ಆವಾಜ್

    BBK 11: ಮೈ ಮುಟ್ಟಬೇಡಿ, ಕಾಲು ನೆಟ್ಟಗಿದೆ: ಐಶ್ವರ್ಯಾಗೆ ಚೈತ್ರಾ ಆವಾಜ್

    ಬಿಗ್ ಬಾಸ್ ಮನೆಯ ಆಟ (Bigg Boss Kannada 11) ಶುರುವಾದ ದಿನದಿಂದ ಜಗಳದ ಮೂಲಕವೇ ಹೈಲೆಟ್ ಆಗುತ್ತಿದೆ. ಮನರಂಜನೆಗಿಂತ ಸ್ಪರ್ಧಿಗಳ ಕಿರಿಕ್ ನೋಡಿ ಸ್ವತಃ ವೈಲ್ಡ್ ಕಾರ್ಡ್ ಎಂಟ್ರಿ ಹನುಮಂತ ಕೂಡ ದಂಗಾಗಿದ್ದಾರೆ. ಕ್ಯಾಪ್ಟನ್ ಆಗಿರೋ ತ್ರಿವಿಕ್ರಂ ರೂಲ್ಸ್‌ವೊಂದನ್ನು ಬ್ರೇಕ್ ಮಾಡಿದ್ದಾರೆ. ಈ ವೇಳೆ, ಚೈತ್ರಾಗೆ (Chaithra Kundapura) ಪಾಠ ಮಾಡಲು ಬಂದ ಐಶ್ವರ್ಯಾ ಮೇಲೆ ಕಿಡಿಕಾರಿದ್ದಾರೆ. ನನ್ನ ಮೈ ಮುಟ್ಟಬೇಡಿ, ಕಾಲು ನೆಟ್ಟಗಿದೆ ಎಂದು ಐಶ್ವರ್ಯಾಗೆ ಚೈತ್ರಾ ಆವಾಜ್ ಹಾಕಿದ್ದಾರೆ.

    ಈ ಬಾರಿ ತ್ರಿವಿಕ್ರಂ (Trivikram) ಹಾಗೂ ಐಶ್ವರ್ಯಾ (Aishwarya) ಜೋಡಿ ಕ್ಯಾಪ್ಟನ್ ಆಗಿದ್ದಾರೆ. ಈ ರೀತಿ ಜೋಡಿಯೊಂದು ಒಟ್ಟಿಗೆ ಕ್ಯಾಪ್ಟನ್ ಆಗಿರೋದು ಬಿಗ್ ಬಾಸ್ ಇತಿಹಾಸದಲ್ಲಿ ಇದೇ ಮೊದಲು. ಕ್ಯಾಪ್ಟನ್ ರೂಮ್‌ನಲ್ಲಿ ವಿಶೇಷ ಸವಲತ್ತುಗಳು ಇರುತ್ತವೆ. ಇನ್ನೂ ನಿಯಮಗಳ ಪ್ರಕಾರ, ಕ್ಯಾಪ್ಟನ್ ಹೊರತು ಯಾರೂ ಕೂಡ ಈ ರೂಂನ ಬಳಕೆ ಮಾಡಬಾರದು. ಆದರೆ, ಈ ನಿಯಮವನ್ನು ತ್ರಿವಿಕ್ರಂ ಬ್ರೇಕ್ ಮಾಡಿದ್ದಾರೆ.

    ಆಟದ ತಂತ್ರಗಾರಿಕೆಯ ಕುರಿತು ಮಾತನಾಡಲು ಚೈತ್ರಾರನ್ನು ಕ್ಯಾಪ್ಟನ್ ರೂಮ್‌ಗೆ ಕರೆದುಕೊಂಡು ಹೋಗಿದ್ದಾರೆ ತ್ರಿವಿಕ್ರಂ. ಇದನ್ನು ಗಮನಿಸಿದ ಐಶ್ವರ್ಯಾ ಅವರು ಕ್ಯಾಪ್ಟನ್ ಹೊರತುಪಡಿಸಿ ಮತ್ಯಾರೂ ಆ ರೂಂನ ಬಳಕೆ ಮಾಡುವಂತಿಲ್ಲ ಎಂದು ಹೇಳಿದರು. ಆದರೆ, ಇದನ್ನು ತ್ರಿವಿಕ್ರಂ ಒಪ್ಪಲಿಲ್ಲ. ಇದನ್ನೂ ಓದಿ:ಫ್ಯಾನ್ಸ್‌ಗೆ ಸಿಹಿಸುದ್ದಿ- ಹೊಸ ರಿಲೀಸ್ ಡೇಟ್ ಅನೌನ್ಸ್ ಮಾಡಿದ ‘ಪುಷ್ಪ 2’ ಟೀಮ್

    ಆ ಬಳಿಕ ಐಶ್ವರ್ಯಾ ಅವರು, ಚೈತ್ರಾನ ಕೈ ಹಿಡಿದು ಎಳೆದು ತರುವ ಪ್ರಯತ್ನ ಮಾಡಿದ್ದಾರೆ. ಇದರಿಂದ ಚೈತ್ರಾ ಸಿಟ್ಟಾದರು. ಕೈ ಮುಟ್ಟಿ ಮಾತನಾಡಬೇಡಿ. ನನ್ನ ಕಾಲು ನೆಟ್ಟಗಿದೆ ಎಂದು ಕೂಗಾಡಿದರು ಚೈತ್ರಾ. ಆ ಬಳಿಕ ಸುಮ್ಮನಾದರು ಐಶ್ವರ್ಯಾ. ನಂತರ ತ್ರಿವಿಕ್ರಂ ಜೊತೆ ಸಿಟ್ಟು ಮಾಡಿಕೊಂಡರು. ಇಬ್ಬರ ನಡುವೆ ವಾಕ್ಸಮರ ನಡೆಯಿತು.

  • BBK 11: ತ್ರಿವಿಕ್ರಮ್‌ ಕೊಟ್ಟ ಟ್ವಿಸ್ಟ್‌- ಮೋಕ್ಷಿತಾ, ಐಶ್ವರ್ಯಾಗೆ ‌’ಬಿಗ್‌‌ ಬಾಸ್’ ಶಾಕ್

    BBK 11: ತ್ರಿವಿಕ್ರಮ್‌ ಕೊಟ್ಟ ಟ್ವಿಸ್ಟ್‌- ಮೋಕ್ಷಿತಾ, ಐಶ್ವರ್ಯಾಗೆ ‌’ಬಿಗ್‌‌ ಬಾಸ್’ ಶಾಕ್

    ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ (Bigg Boss Kannada 11) ಸ್ಪರ್ಧಿಗಳ ನಡುವೆ ಜಗಳವೇ ಹೆಚ್ಚಾಗಿದೆ. ಈ ನಡುವೆ ಮನೆಯ ದಿನಸಿ ವಸ್ತುಗಳು ಖಾಲಿ ಆಗಿವೆ. ಮತ್ತೆ ದಿನಸಿ ವಸ್ತುಗಳನ್ನು ಮರಳಿ ನೀಡಬೇಕು ಎಂದರೆ ಬಿಗ್ ಬಾಸ್ ಕೆಲವು ಷರತ್ತುಗಳನ್ನು ಹೇಳಿದ್ದಾರೆ. ದಿನಸಿ ಬೇಕು ಅಂದರೆ ಕೆಲವು ಸ್ಪರ್ಧಿಗಳು ಒಂದಷ್ಟು ವಸ್ತುಗಳನ್ನು ತ್ಯಾಗ ಮಾಡಬೇಕು. ಈ ಹಿನ್ನೆಲೆ ಮೋಕ್ಷಿತಾ ಪೈ (Mokshitha Pai) ಮತ್ತು ಐಶ್ವರ್ಯಾಗೆ (Aishwary) ಬಿಗ್‌ ಬಾಸ್‌ ಶಾಕ್‌ ಕೊಟ್ಟಿದ್ದಾರೆ. ಇದನ್ನೂ ಓದಿ:ದೀಪಿಕಾ ಪಡುಕೋಣೆ ಜೊತೆ ಕೆಲಸ ಮಾಡುವುದು ಸುಲಭ- ಹೊಗಳಿದ ಇಮ್ತಿಯಾಜ್ ಅಲಿ

    ಕಳೆದ ಎರಡು ಎಪಿಸೋಡ್‌ನಿಂದ ಬಿಗ್ ಬಾಸ್ ಆದೇಶಗಳು ಟೆಲಿಫೋನ್ ಮೂಲಕ ಬರುತ್ತಿವೆ. ಒಬ್ಬೊಬ್ಬರನ್ನು ಕರೆದು ಒಂದೊಂದು ರೀತಿಯಲ್ಲಿ ಸೂಚನೆಗಳನ್ನು ನೀಡಿದ್ದಾರೆ. ತ್ರಿವಿಕ್ರಮ್ ಅವರನ್ನು ಕರೆದು, ಈ ಮನೆಯಲ್ಲಿ ಇರಲು ಯೋಗ್ಯತೆ ಇಲ್ಲದ ಇಬ್ಬರ ಹೆಸರನ್ನು ಸೂಚಿಸಿ ಎಂದಿದ್ದಾರೆ. ಅದಕ್ಕೆ ತ್ರಿವಿಕ್ರಮ್ ಅವರು ಮೋಕ್ಷಿತಾ ಪೈ ಮತ್ತು ಐಶ್ವರ್ಯಾ ಅವರ ಹೆಸರನ್ನು ತಿಳಿಸಿದರು.

    ಮೋಕ್ಷಿತಾ ಪೈ ಮತ್ತು ಐಶ್ವರ್ಯಾಗೆ ಸಂಬಂಧಿಸಿದ ಯಾವುದೇ ವಸ್ತುಗಳು ಕೂಡ ಈ ಮನೆಯಲ್ಲಿ ಇರಬಾರದು. ಎಲ್ಲವನ್ನೂ ತಂದು ಸ್ಟೋರ್ ರೂಮ್‌ನಲ್ಲಿ ಇರಿಸಿ ಎಂದು ಬಿಗ್ ಬಾಸ್ ಕಡೆಯಿಂದ ಆದೇಶ ಬಂತು. ಒಂದು ಕ್ಲಿಪ್ ಕೂಡ ಇರಬಾರದು ಎಂದು ತ್ರಿವಿಕ್ರಮ್ ಹೇಳಿದರು. ಬಿಗ್‌ ಬಾಸ್‌ ಆದೇಶದಂತೆ ಮೋಕ್ಷಿತಾ ಹಾಗೂ ಐಶ್ವರ್ಯಾ ತಮ್ಮ ಎಲ್ಲಾ ವಸ್ತುಗಳನ್ನು ನೀಡಿದ್ದಾರೆ. ಇದಾದ ಬಳಿಕ ಮನೆಮಂದಿಗೆ ದಿನಸಿ ಪದಾರ್ಥಗಳನ್ನು ಬಿಗ್‌ ಬಾಸ್‌ ನೀಡಿದ್ದಾರೆ.  ಆದರೆ ಅವರ ಬಟ್ಟೆಯ ಬ್ಯಾಗ್‌ಗಳನ್ನಾದರೂ ಬಿಗ್‌ ಬಾಸ್‌ ವಾಪಸ್‌ ನೀಡುತ್ತಾರಾ? ಕಾದುನೋಡಬೇಕಿದೆ.