Tag: ಐಪಿಎಲ್

  • 2018 ಐಪಿಎಲ್ ಹರಾಜು – ಮೊದಲ ದಿನವೇ ಆಟಗಾರರಿಗೆ ಧಮಾಕಾ

    2018 ಐಪಿಎಲ್ ಹರಾಜು – ಮೊದಲ ದಿನವೇ ಆಟಗಾರರಿಗೆ ಧಮಾಕಾ

    ಬೆಂಗಳೂರು: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಟಗಾರರ ಹರಾಜು ಪ್ರಕ್ರಿಯೆ ನಗರದಲ್ಲಿ ನಡೆಯುತ್ತಿದ್ದು, ಟೀಂ ಪ್ರಾಂಚೈಸಿಗಳು ಹಣದ ಹೊಳೆ ಹರಿಸಿ ಆಟಗಾರರನ್ನು ಖರೀಧಿಸಿದ್ದಾರೆ. ಅದರಲ್ಲೂ ಈ ಬಾರಿಯ ಐಪಿಎಲ್‍ನಲ್ಲಿ ಕರ್ನಾಟಕದ ಆಟಗಾರರಿಗೆ ನಿರೀಕ್ಷೆ ಮೀರಿದ ಬಂಪರ್ ಆಫರ್ ಲಭಿಸಿದೆ.

    ಪ್ರಮುಖವಾಗಿ ಈ ಬಾರಿ 2 ಕೋಟಿ ರೂ. ಮೂಲ ಬೆಲೆ ನಿಗದಿಪಡಿಸಿದ್ದ ಕೆ.ಎಲ್ ರಾಹುಲ್ ರನ್ನು ಕಿಂಗ್ಸ್ ಇಲೆವೆನ್ ತಂಡ ಬರೋಬ್ಬರಿ 11 ಕೋಟಿ ರೂ. ಕೊಟ್ಟು ಖರೀದಿಸಿದೆ. ಅದೇ ರೀತಿ ಮನೀಶ್ ಪಾಂಡೆಗೆ 11 ರೂ. ಕೋಟಿ ಕೊಟ್ಟು ಸನ್ ರೈಸರ್ಸ್ ಹೈದರಾಬಾದ್ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಕರುಣ್ ನಾಯರ್ ಅವರಿಗೆ 5.6 ಕೋಟಿ ರೂ. ನೀಡಿ ಪಂಜಾಬ್ ಖರೀದಿಸಿದೆ. ರಾಬಿನ್ ಉತ್ತಪ್ಪ ಅವರನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 6.40 ಕೋಟಿ ರೂ. ನೀಡಿ ಖರೀದಿಸಿದೆ.

     ಇಂದು ಹರಾಜಿನಲ್ಲಿ ಅತಿ ಹೆಚ್ಚು ಮೊತ್ತ ಪಡೆದ ಟಾಪ್ ಟೆನ್ ಆಟಗಾರರ ಪಟ್ಟಿ
    1. ಬೆನ್ ಸ್ಟೋಕ್ಸ್ – ರಾಜಸ್ಥಾನ ರಾಯಲ್ಸ್ – 12.5 ಕೋಟಿ ರೂ.
    2. ಮನೀಶ್ ಪಾಂಡೆ – ಸನ್‍ರೈಸರ್ಸ್ ಹೈದ್ರಾಬಾದ್ – 11 ಕೋಟಿ ರೂ.
    3. ಕೆ. ಎಲ್ ರಾಹುಲ್ – ಕಿಂಗ್ಸ್ ಇಲೆವೆನ್ ಪಂಜಾಬ್ – 11 ಕೋಟಿ ರೂ.
    4. ಕ್ರಿಸ್ ಲಿನ್ – ಕೊಲ್ಕತ್ತಾ ನೈಟ್ ರೈಡರ್ಸ್ – 9.6 ಕೋಟಿ ರೂ.
    5. ಮಿಚೆಲ್ ಸ್ಟಾರ್ಕ್ – ಕೊಲ್ಕತ್ತಾ ನೈಟ್ ರೈಡರ್ಸ್ -9.4 ಕೋಟಿ ರೂ.
    6. ಗ್ಲೇನ್ ಮ್ಯಾಕ್ಸ್ ವೆಲ್ – ಡೆಲ್ಲಿ ಡೇರ್ ಡೆವಿಲ್ಸ್ – 9 ಕೋಟಿ ರೂ.
    7. ಕೃನಾಲ್ ಪಾಂಡ್ಯ – ಮುಂಬೈ ಇಂಡಿಯನ್ಸ್‌ – 8.8 ಕೋಟಿ ರೂ.
    8. ಸಂಜು ಸ್ಯಾಮ್ಸನ್‌ – ರಾಜಸ್ಥಾನ ರಾಯಲ್ಸ್‌ – 8 ಕೋಟಿ ರೂ.
    9. ಕೇದಾರ್‌ ಜಾಧವ್‌ –  ಚೆನ್ನೈ ಸೂಪರ್‌ ಕಿಂಗ್ಸ್‌ – 7.8 ಕೋಟಿ ರೂ.
    10. ಆರ್.ಅಶ್ವಿನ್ – ಕಿಂಗ್ಸ್ ಇಲೆವೆನ್ ಪಂಜಾಬ್ – 7.6 ಕೋಟಿ ರೂ.

    https://twitter.com/IPLCricket/status/957241773977415680

    ಹರಾಜಿನಲ್ಲಿ ಖರೀದಿಯಾದ ಯುವ ಆಟಗಾರರು :
    1) ಸಿದ್ಧಾರ್ಥ್ ಕೌಲ್ – ಸನ್ ರೈಸರ್ಸ್ ಹೈದರಾಬಾದ್ – 3.8 ಕೋಟಿ ರೂ.
    2) ಬಸಿಲ್ ಥಾಂಪಿ – ಸನ್ ರೈಸರ್ಸ್ ಹೈದರಾಬಾದ್ -95 ಲಕ್ಷ ರೂ.
    3) ಸೂರ್ಯ ಕುಮಾರ್ ಯಾದವ್ – ಮುಂಬೈ ಇಂಡಿಯನ್ಸ್ – 3.2 ಕೋಟಿ ರೂ.
    4) ಶುಬ್ಮಾನ್ ಗಿಲ್ – ಕೊಲ್ಕತ್ತಾ ನೈಟ್ ರೈಡರ್ಸ್ – 1.8 ಕೋಟಿ ರೂ.
    5) ಕುಲ್ವಂತ್ ಖೇಜ್ರೋಲಿಯಾ – ರಾಯಲ್ ಚಾಲೆಂಜರ್ಸ್ ಬೆಂಗಳೂರು – 85 ಲಕ್ಷ

    https://twitter.com/IPLCricket/status/957239277162778624

    ಹರಾಜಿನಲ್ಲಿ ಮಾರಾಟವಾಗದ ಪ್ರಮುಖ ಆಟಗಾರರು : ಐಪಿಎಲ್‍ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಹೊಂದಿರುವ ಕ್ರಿಸ್ ಗೇಲ್ ಹಾಗೂ ವಿಕೆಟ್ ದಾಖಲೆ ಹೊಂದಿರುವ ಲಸಿಂತ್ ಮಲಿಂಗಾ ಇಬ್ಬರೂ ಮಾರಾಟವಾಗದೇ ಉಳಿದರು. ಐಸಿಸಿ ಟಿ-20 ಬೌಲಿಂಗ್ ರ್ಯಾಂಕಿಂಗ್‍ನಲ್ಲಿ ನಂ. 1 ಸ್ಥಾನದಲ್ಲಿರುವ ನ್ಯೂಜಿಲೆಂಡ್‍ನ ಇಶ್ ಸೋಧಿ, ವೇಗದ ಬೌಲರ್ ಇಶಾಂತ್ ಶರ್ಮಾ, ಟಿಮ್ ಸೌಥಿ, ಮುರಳಿ ವಿಜಯ್, ಜಾಯ್ ರೂಟ್, ಹಿಮಾಂಶು ರಾಣಾ, ಮುಚೇಲ್ ಜಾನ್ಸನ್ ಮಾರಟವಾಗದೆ ಉಳಿದರು.

    https://twitter.com/IPLCricket/status/957238327240949760

    https://twitter.com/IPLCricket/status/957216135132471296

  • ಕ್ರಿಕೆಟ್ ಇತಿಹಾಸದಲ್ಲೇ ಸರ್ವಶ್ರೇಷ್ಠ ಕ್ಯಾಚ್ – ವಿಡಿಯೋ ನೋಡಿ

    ಕ್ರಿಕೆಟ್ ಇತಿಹಾಸದಲ್ಲೇ ಸರ್ವಶ್ರೇಷ್ಠ ಕ್ಯಾಚ್ – ವಿಡಿಯೋ ನೋಡಿ

    ಮೆಲ್ಬರ್ನ್: ಕ್ರಿಕೆಟ್‍ನಲ್ಲಿ ಎಂತೆಂಥಾ ಕ್ಯಾಚ್‍ಗಳನ್ನು ನೀವು ನೋಡಿರುತ್ತೀರಿ. ಆದ್ರೆ ಕ್ರಿಕೆಟ್ ಇತಿಹಾಸದಲ್ಲೇ ಸರ್ವಶ್ರೇಷ್ಠ ಎನ್ನಬಹುದಾದ ಕ್ಯಾಚ್ ಒಂದು ಬಿಗ್ ಬ್ಯಾಷ್‍ನಲ್ಲಿ ದಾಖಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಐಪಿಎಲ್ ಮಾದರಿಯಲ್ಲೇ ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ-20 ಟೂರ್ನಿ ಬಿಗ್‍ಬ್ಯಾಷ್‍ನ 35ನೇ ಪಂದ್ಯದ ಒಂದು ಕ್ಯಾಚ್ ಇದೀಗ ಕ್ರಿಕೆಟ್ ಪ್ರೇಮಿಗಳನ್ನು ನಿಬ್ಬೆರಗಾಗುವಂತೆ ಮಾಡಿದೆ. ಅತೀಥೇಯ ಮೆಲ್ಬರ್ನ್ ರೆನಗೇಡ್ಸ್ ಹಾಗೂ ಅಡಿಲೇಡ್ ಸ್ಟ್ರೈಕರ್ಸ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಸ್ಟ್ರೈಕರ್ಸ್, ರೆನಗೇಡ್ಸ್ ಗೆಲುವಿಗೆ 174 ರನ್‍ಗಳ ಗುರಿ ನೀಡಿತ್ತು.

    ಚೇಸಿಂಗ್ ವೇಳೆ 15 ಓವರ್  ಗಳಲ್ಲಿ ರೆನಗೇಡ್ಸ್ 100 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಸ್ಟ್ರೈಕರ್ಸ್ ಪರ 15ನೇ ಓವರ್ ಎಸೆಯಲು ಬಂದ ರಶೀದ್ ಖಾನ್ ಅವರ ಮೊದಲನೇ ಎಸೆತವನ್ನು ಕ್ರೀಸ್‍ನಲ್ಲಿದ್ದ ಡ್ವೈನ್ ಬ್ರಾವೋ ಸಿಕ್ಸರ್ ಗೆ  ಅಟ್ಟಲು ಬಲವಾಗಿಯೇ ಬಾರಿಸಿದ್ದರು.

    ಇನ್ನೇನು ಬಾಲ್ ಬೌಂಡರಿ ಗೆರೆ ದಾಟಿತು ಎನ್ನುವಷ್ಟರಲ್ಲಿಯೇ ಅಲ್ಲೊಂದು ಮಹಾ ಮ್ಯಾಜಿಕ್ ನಡೆಯಿತು. ಬೌಂಡರಿ ಲೈನ್ ಬಳಿ ಕ್ಷೇತ್ರರಕ್ಷಣೆಯಲ್ಲಿದ್ದ ಬೆನ್ ಲಾಫ್ಲಿನ್ ದೂರದಿಂದ ಓಡಿ ಬಂದು ಚಿರತೆಯಂತೆ ಜಂಪ್ ಮಾಡಿ ಸಿಕ್ಸರ್ ತಡೆದು ಚೆಂಡನ್ನು ಮತ್ತೆ ಮೈದಾನಕ್ಕೆ ವಾಪಸ್ ಎಸೆದರು.

    ಇದೇ ವೇಳೆ ಮೈದಾನದಲ್ಲಿದ್ದ ಮತ್ತೋರ್ವ ಫೀಲ್ಡರ್ ಜಾಕ್ ವೆರರಾಲ್ಡ್ ಮಿಂಚಿನ ವೇಗದಲ್ಲಿ ಬಹುದೂರ ಹಾರಿ ಅತ್ಯದ್ಭುತ ರೀತಿಯಲ್ಲಿ ಕ್ಯಾಚ್ ಪಡೆದು ಎಲ್ಲರನ್ನೂ ನಿಬ್ಬೆರಗಾಗಿಸಿದ್ರು. ಅಂತಿಮವಾಗಿ ಅಡಿಲೇಡ್ ಸ್ಟ್ರೈಕರ್ಸ್ 26 ರನ್‍ಗಳಿಂದ ಪಂದ್ಯವನ್ನು ಗೆದ್ದು ಬೀಗಿತು.

    https://twitter.com/haceeb/status/955465784121286656

  • 2017ರ ಗೂಗಲ್ ಸರ್ಚ್ ನಲ್ಲಿ ಸನ್ನಿ ಲಿಯೋನ್ ನಂಬರ್ 1: 2ನೇ ಸ್ಥಾನದಲ್ಲಿ ಬಿಗ್ ಬಾಸ್ ಸ್ಪರ್ಧಿ!

    2017ರ ಗೂಗಲ್ ಸರ್ಚ್ ನಲ್ಲಿ ಸನ್ನಿ ಲಿಯೋನ್ ನಂಬರ್ 1: 2ನೇ ಸ್ಥಾನದಲ್ಲಿ ಬಿಗ್ ಬಾಸ್ ಸ್ಪರ್ಧಿ!

    ಮುಂಬೈ: ಈ ವರ್ಷ ಭಾರತದಲ್ಲಿ ಅತೀ ಹೆಚ್ಚು ಬಾರಿ ಗೂಗಲ್‍ ನಲ್ಲಿ ಸರ್ಚ್ ಆದ ನಟಿಯರಲ್ಲಿ ಬಾಲಿವುಡ್ ಹಾಟ್ ಬ್ಯೂಟಿ ಸನ್ನಿ ಲಿಯೋನ್ ಮೊದಲನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

    ಹೌದು. ಭಾರತದಲ್ಲೇ ಸನ್ನಿ ಲಿಯೋನ್ ಹೆಸರನ್ನು ಗೂಗಲ್‍ ನಲ್ಲಿ ಅತಿಯಾಗಿ ಸರ್ಚ್ ಮಾಡಲಾಗಿದೆ. ಇದಾದ ಬಳಿಕ ಎರಡನೇ ಸ್ಥಾನವನ್ನು ಬಿಗ್ ಬಾಸ್ ಸ್ಪರ್ಧಿ ಆರ್ಶಿ ಖಾನ್ ಪಡೆದುಕೊಂಡಿದ್ದು, ಮೂರನೇ ಸ್ಥಾನವನ್ನು ಸಪ್ನಾ ಚೌಧರಿ ಪಡೆದುಕೊಂಡಿದ್ದಾರೆ. ನಾಲ್ಕನೇ ಸ್ಥಾನವನ್ನು ಗಾಯಕಿ ವಿದ್ಯಾ ವಾಕ್ಸ್ ಹಾಗೂ ಐದನೇ ಸ್ಥಾನವನ್ನು ನಟಿ ದಿಶಾ ಪಠಾಣಿ ಪಡೆದುಕೊಂಡಿದ್ದಾರೆ.

    ಎಸ್‍ಎಸ್ ರಾಜಮೌಳಿ ನಿರ್ದೇಶನದ ‘ಬಾಹುಬಲಿ- ದಿ ಕನ್‍ಕ್ಲೂಶನ್’ ಚಿತ್ರ ಈ ವರ್ಷ ಗೂಗಲ್ ನಲ್ಲಿ ಟಾಪ್ ಟ್ರೆಂಡಿಂಗ್ ಆಗಿದ್ದ ಸರ್ಚ್ ವಿಷಯ. ಬಾಹುಬಲಿ-2 ಚಿತ್ರದ ನಂತರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2ನೇ ಸ್ಥಾನವನ್ನು ಪಡೆದುಕೊಂಡಿದೆ. ಪಂದ್ಯದ ಲೈವ್ ಸ್ಕೋರ್ ತಿಳಿಯಲು ಜನರು ಗೂಗಲ್ ಸರ್ಚ್ ಮಾಡಿದ್ದಾರೆ.

    ಈ ವರ್ಷ ಅತಿಯಾಗಿ ಸರ್ಚ್ ಆಗಿರುವ ಟಾಪ್ ಟ್ರೆಂಡಿಂಗ್ ಎಂಟರ್ ಟೈನರ್, ಟಾಪ್ ಟ್ರೆಂಡಿಂಗ್ ಮೂವಿಸ್, ಟಾಪ್ ಟ್ರೆಂಡಿಂಗ್ ಸಾಂಗ್ಸ್, ಟಾಪ್ ಟೆಂಡ್ರಿಂಗ್ ನ್ಯೂಸ್ ಇವೆಲ್ಲದರ ಬಗ್ಗೆ ಗೂಗಲ್ ಮಾಹಿತಿ ನೀಡಿದೆ. ಒಟ್ಟಾರೆ ಟಾಪ್ ಟ್ರೆಂಡಿಂಗ್ ಸರ್ಚ್‍ನಲ್ಲಿ ದಂಗಲ್ ಚಿತ್ರ ಮೊದಲ ಸ್ಥಾನದಲ್ಲಿದ್ದು, ಹಾಫ್ ಗರ್ಲ್ ಫ್ರೆಂಡ್ ಎರಡನೇ ಸ್ಥಾನದಲ್ಲಿದೆ. ಆದಾದ ಬಳಿಕ ಬದ್ರಿನಾಥ್ ಕೀ ದುಲ್ಹಾನಿಯಾ ಹಾಗೂ ಚಾಂಪಿಯನ್ಸ್ ಟ್ರೋಫಿ ಮೂರನೇ ಮತ್ತು ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

    ಟಾಪ್ ಟ್ರೆಂಡಿಂಗ್ ಬಾಲಿವುಡ್ ಸಾಂಗ್ಸ್ ನಲ್ಲಿ ಅರ್ಜುನ್ ಕಪೂರ್ ನಟಿಸಿದ ಮುಬಾರಖಾನ್ ಚಿತ್ರದ ‘ಹವಾ ಹವಾ’ ಹಾಡು ಮೊದಲನೇ ಸ್ಥಾನದಲ್ಲಿದೆ. ಟಾಪ್ ಟ್ರೆಂಡಿಂಗ್ ನ್ಯೂಸ್ ನಲ್ಲಿ ಸಿಬಿಎಸ್‍ಇ ಫಲಿತಾಂಶ, ಉತ್ತರಪ್ರದೇಶ ಚುನಾವಣೆ ಹಾಗೂ ಜಿಎಸ್‍ಟಿ ಒಳಗೊಂಡಿದೆ.

                                                                                                  ಆರ್ಶಿ ಖಾನ್
                                                                                                  ಸಪ್ನಾ ಚೌಧರಿ
                                                                                                                 ವಿದ್ಯಾ ವಾಕ್ಸ್ 

     

                                                                                                            ದಿಶಾ ಪಠಾಣಿ

  • ಐಪಿಎಲ್ ಗೊಂದಲ: ಧೋನಿ ಚೆನ್ನೈ ತಂಡದಲ್ಲಿ ಆಡೋದು ಡೌಟ್!

    ಐಪಿಎಲ್ ಗೊಂದಲ: ಧೋನಿ ಚೆನ್ನೈ ತಂಡದಲ್ಲಿ ಆಡೋದು ಡೌಟ್!

    ಮುಂಬೈ: ಫೆಬ್ರವರಿಯಲ್ಲಿ ನಡೆಯಲಿರುವ ಐಪಿಎಲ್ 11ನೇ ಆವೃತ್ತಿಯ ಹರಾಜು ಪ್ರಕ್ರಿಯೆಯನ್ನು ಇಂಗ್ಲೆಂಡ್‍ನಲ್ಲಿ ನಡೆಸಲು ಎರಡು ತಂಡಗಳ ಮಾಲೀಕರು ಮನವಿ ಮಾಡಿದ್ದಾರೆ. ಆದರೆ ಉಳಿದ ಫ್ರಾಂಚೈಸಿಗಳು ಇದಕ್ಕೆ ಸಮ್ಮತಿ ಸೂಚಿಸದ ಕಾರಣ ಹರಾಜು ಪ್ರಕ್ರಿಯೆಯನ್ನು ಭಾರತದಲ್ಲೇ ಮುಂದುವರಿಸಲು ನಿರ್ಧರಿಸಲಾಗಿದೆ.

    ಐಪಿಎಲ್ 11ನೇ ಆವೃತ್ತಿಗೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಐಪಿಎಲ್ ಆಡಳಿತ ಮಂಡಳಿಯ ಮಹತ್ವದ ಸಭೆ ಮುಂಬೈನಲ್ಲಿ ನಡೆಯಿತು. ಇದೇ ವೇಳೆ ತಂಡದಲ್ಲಿ ಸ್ಟಾರ್ ಆಟಗಾರರನ್ನು ಉಳಿಸಿಕೊಳ್ಳುವ `ರಿಟೇನ್’ ಪದ್ಧತಿಯನ್ನು ಕೈ ಬಿಡುವಂತೆ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಆಗ್ರಹಿಸಿವೆ.

    ಮೂಲಗಳ ಪ್ರಕಾರ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ 5 ರಿಂದ 6 ಆಟಗಾರರನ್ನು ತನ್ನಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದೆ. ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಧೋನಿ, ಸುರೇಶ್ ರೈನಾ, ರವೀಂದ್ರ ಜಡೇಜಾ, ಫಾಪ್ ಡುಪ್ಲೆಸ್ಸಿ, ಹಾಗೂ ಡ್ವೈನ್ ಬ್ರಾವೋರನ್ನು ತಂಡದಲ್ಲಿ ಉಳಿಸಿಕೊಳ್ಳಲು ಪ್ಲಾನ್ ಮಾಡಿದೆ. ಇದಕ್ಕೆ ಇನ್ನೊಂದು ತಂಡ ವಿರೋಧ ವ್ಯಕ್ತಪಡಿಸಿದೆ. ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್, ಸನ್‍ರೈಸರ್ಸ್ ಹೈದ್ರಾಬಾದ್ ಹಾಗೂ ಡೆಲ್ಲಿ ಡೇರ್ ಡೇವಿಲ್ಸ್ ತಲಾ ಮೂರು ಅಟಗಾರರನ್ನು ತಮ್ಮಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿವೆ.

    ಇಬ್ಬರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಕಿಂಗ್ಸ್ ಇಲೆವನ್ ಪಂಜಾಬ್ ಮನವಿ ಮಾಡಿದೆ. ಆದರೆ ರಿಟೇನ್ ಪದ್ಧತಿಯ ಕುರಿತು ಸಭೆಯಲ್ಲಿ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಒಂದು ವೇಳೆ ರಿಟೇನ್ ಪದ್ಧತಿಯನ್ನು ಕೈ ಬಿಟ್ಟರೆ ಐಪಿಎಲ್ ತಂಡಗಳ ಸಂಪೂರ್ಣ ಚಿತ್ರಣವೇ ಬದಲಾಗಲಿದೆ. ಈ ವೇಳೆ ಸಿಎಸ್‍ಕೆಗೆ ಮರಳಲು ತುದಿಗಾಲಲ್ಲಿ ನಿಂತಿರುವ ಕೂಲ್ ಕ್ಯಾಪ್ಟನ್ ಧೋನಿ, ಅದೇ ತಂಡಕ್ಕೆ ಮರಳುವುದು ಸಂದೇಹವಾಗಿದೆ.

    ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿ ಐಪಿಎಲ್‍ನಿಂದ ಎರಡು ವರ್ಷಗಳ ಕಾಲ ಟೂರ್ನಿಯಿಂದ ಅಮಾನತಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಈ ಬಾರಿ ಟೂರ್ನಿಗೆ ಮರಳಲಿವೆ. ಈ ತಂಡಗಳ ಆಟಗಾರರು ಕಳೆದೆರಡು ಆವೃತ್ತಿಗಳಲ್ಲಿ ರೈಸಿಂಗ್ ಪುಣೆ ಜಯಂಟ್ಸ್ ಹಾಗೂ ಗುಜರಾತ್ ಲಯನ್ಸ್ ತಂಡಗಳನ್ನು ಪ್ರತಿನಿಧಿಸಿದ್ದರು. ಈ ಬಾರಿ ಮತ್ತೆ ಎಲ್ಲಾ ಅಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಸಭೆಯ ಬಳಿಕ ಮಾತನಾಡಿದ ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ, ರಿಟೇನ್ ಪದ್ಧತಿ, ಆಟಗಾರರ ಸಂಬಳ, ತಂಡದ ಸದಸ್ಯರ ಸಂಖ್ಯೆ, ಪಂದ್ಯಗಳ ಹಕ್ಕು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಕುರಿತು ಮುಂದಿನ ಕೆಲ ವಾರಗಳಲ್ಲಿ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದರು.

    ಇದನ್ನೂ ಓದಿ: ಐಪಿಎಲ್ ಪ್ರಸಾರದ ಹಕ್ಕು ಸ್ಟಾರ್ ಇಂಡಿಯಾ ಪಾಲು: ಎಷ್ಟು ಕೋಟಿ ಬಿಡ್? ಇನ್ನು ಮುಂದೆ 1 ಪಂದ್ಯದ ಟಿವಿ ಶುಲ್ಕ ಎಷ್ಟು ಗೊತ್ತಾ?

     

    https://www.facebook.com/MSDhoni/posts/1926010637622156

    https://www.facebook.com/Seenumama/photos/pcb.1103706643095460/1103706599762131/?type=3&theater

    https://www.facebook.com/Seenumama/photos/pcb.1103706643095460/1103706619762129/?type=3&theater

    https://www.facebook.com/msdhoni7781/photos/pcb.1453118581403674/1453118448070354/?type=3&theater

    https://www.facebook.com/msdhoni7781/photos/pcb.1453118581403674/1453118384737027/?type=3&theater

    https://www.facebook.com/msdhoni7781/photos/pcb.1453118581403674/1453118424737023/?type=3&theater

  • ಡೋಪಿಂಗ್ ಸುಳಿಯಲ್ಲಿ ಭಾರತೀಯ ಕ್ರಿಕೆಟ್ ಆಟಗಾರ

    ಡೋಪಿಂಗ್ ಸುಳಿಯಲ್ಲಿ ಭಾರತೀಯ ಕ್ರಿಕೆಟ್ ಆಟಗಾರ

    ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯಿಂದ ಮಾನ್ಯತೆ ಪಡೆದ ಕ್ರಿಕೆಟಿಗನೊಬ್ಬ ನಿಷೇಧಿತ ಉದ್ದೀಪನ ಮದ್ದು ಸೇವನೆ ಮಾಡಿರುವ ಪ್ರಕರಣವೊಂದು ಈಗ ಬೆಳಕಿಗೆ ಬಂದಿದೆ.

    ವಿಶ್ವ ಉದ್ದೀಪನಾ ಮದ್ದು ನಿಗ್ರಹ ದಳ(ವಾಡಾ) 2016ರಲ್ಲಿ ಬಿಸಿಸಿಐನಿಂದ ಮಾನ್ಯತೆ ಪಡೆದ 138 ಮಂದಿ ಆಟಗಾರರನ್ನು ಡೋಪಿಂಗ್ ಪರೀಕ್ಷೆಗೆ ಒಳಪಡಿಸಿತ್ತು. ಈ ಪರೀಕ್ಷೆಯಲ್ಲಿ ಓರ್ವ ಆಟಗಾರ ನಿಷೇಧಿತ ಮದ್ದು ಸೇವಿಸಿರುವುದುದ ದೃಢಪಟ್ಟಿದೆ.

    ನಿಷೇಧಿತ ಮದ್ದು ಸೇವಿಸಿದ ಆಟಗಾರನ ಹೆಸರು ಬಹಿರಂಗವಾಗಿಲ್ಲ. ಆಟಗಾರ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿಲ್ಲ. ಬದಲಾಗಿ ಬಿಸಿಸಿಐ ಆಯೋಜಿಸುವ ರಣಜಿ ಟ್ರೋಫಿ, ದುಲೀಪ್ ಟ್ರೋಫಿ, ಐಪಿಎಲ್ ಅಥವಾ ಇರಾನಿ ಟ್ರೋಫಿ ಆಡಿರುವ ದೇಶೀಯ ಆಟಗಾರ ಎನ್ನುವ ಮಾಹಿತಿ ಲಭ್ಯವಾಗಿದೆ.

    ಈ ವಿಚಾರದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಬಿಸಿಸಿಐ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ವಾಡಾದಿಂದ ಇದೂವರೆಗೂ ನಮಗೆ ಯಾವುದೇ ವರದಿ ಬಂದಿಲ್ಲ. ಅಷ್ಟೇ ಅಲ್ಲದೇ ಈಗಲೇ ಆ ಕ್ರಿಕೆಟ್ ಆಟಗಾರನ ಹೆಸರನ್ನು ಬಹಿರಂಗಪಡಿಸುವ ಸ್ಥಿತಿಯಲ್ಲಿ ಇಲ್ಲ ಎಂದು ತಿಳಿಸಿದ್ದಾರೆ.

    ಆಟಗಾರನ ಮೂತ್ರದ ಮಾದರಿಯ ಪರೀಕ್ಷೆಯಲ್ಲಿ ನಿಷೇಧಿತ ಮದ್ದು ಸೇವಿಸಿರುವುದು ದೃಢಪಟ್ಟಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    2013ರ ಐಪಿಎಲ್ ಆವೃತ್ತಿ ವೇಳೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರದೀಪ್ ಸಾಂಗ್ವಾನ್ ಡೋಪಿಂಗ್ ಸುಳಿಯಲ್ಲಿ ಸಿಲುಕಿದ್ದರು. ಇದಾದ ಬಳಿಕ ಭಾರತದ ಕ್ರಿಕೆಟ್ ವಲಯದಲ್ಲಿ ಬೆಳಕಿಗೆ ಬರುತ್ತಿರುವ ಎರಡನೇ ಪ್ರಕರಣ ಇದಾಗಿದೆ.

  • ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮತ್ತೆ ಆಡಲಿದ್ದಾರಾ ಧೋನಿ?

    ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮತ್ತೆ ಆಡಲಿದ್ದಾರಾ ಧೋನಿ?

    ನವದೆಹಲಿ: 2018ರ ಇಂಡಿಯನ್ ಪ್ರೀಯರ್ ಲೀಗ್(ಐಪಿಎಲ್) ಆವೃತ್ತಿಯಲ್ಲಿ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ಪರ ಧೋನಿ ಆಡುವ ಸಾಧ್ಯತೆ ಹೆಚ್ಚಾಗಿದೆ.

    ಕಳೆದ ಎರಡು ಐಪಿಎಲ್ ಆವೃತ್ತಿಗಳಿಂದ ಮ್ಯಾಚ್ ಫಿಕ್ಸಿಂಗ್ ಆರೋಪದಡಿ ನಿಷೇಧಕ್ಕೆ ಒಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್‍ಕೆ) ಮತ್ತು ರಾಜಸ್ತಾನ್ ರಾಯಲ್(ಆರ್‍ಆರ್) ತಂಡಗಳು ಮತ್ತೆ 2018 ರ ಆವೃತ್ತಿಯಲ್ಲಿ ಭಾಗವಹಿಸುತ್ತಿವೆ. ಈ ಎರಡು ತಂಡಗಳ ಪರ ಆಡುತ್ತಿದ್ದ ಆಟಗಾರರನ್ನು ಮತ್ತೆ ತಂಡಕ್ಕೆ ಮರಳಿ ಪಡೆಯಲು ಅವಕಾಶವನ್ನು ನೀಡುವಂತೆ ಐಪಿಎಲ್ ಆಡಳಿತ ಮಂಡಳಿಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ.

    ಈ ಹಿಂದೆ ಸಿಎಸ್‍ಕೆ ಮತ್ತು ಆರ್‍ಆರ್ ತಂಡಗಳ ಪರ ಆಡುತ್ತಿದ್ದ ಹಲವು ಆಟಗಾರರು ಕಳೆದ ಎರಡು ವರ್ಷಗಳ ಆವೃತ್ತಿಗಳಲ್ಲಿ ರೈಸಿಂಗ್ ಪುಣೆ ಮತ್ತು ಗುಜರಾತ್ ಲಯನ್ಸ್ ಪರ ಆಡಿದ್ದರು. ಈ ಕುರಿತು ಹೇಳಿಕೆ ನೀಡಿರುವ ಐಪಿಎಲ್ ಆಡಳಿತ ಮಂಡಳಿ, ಒಬ್ಬ ಭಾರತೀಯ ಆಟಗಾರ ಹಾಗೂ ಇಬ್ಬರು ವಿದೇಶಿ ಆಡಗಾರರನ್ನು ಸೇರಿ ಕನಿಷ್ಠ ಪಕ್ಷ ಮೂವರು ಆಟಗಾರರನ್ನು ಹಿಂಪಡೆಯಲು ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದೆ.

    ಇನ್ನೂಳಿದಂತೆ ಸಿಎಸ್‍ಕೆ ಪರ ಆಡುತ್ತಿದ್ದ ಸುರೇಶ್ ರೈನಾ ಮತ್ತು ರವೀಂದ್ರ ಜಡೇಜಾ ಸಹ ತಂಡವನ್ನು ಮರಳುವ ನಿರೀಕ್ಷೆ ಇದೆ.

    ಈ ಕುರಿತು ತಂಡದ ಪ್ರಾಂಚೈಸಿಗಳು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಮೂರು ಅಥವಾ ಐವರು ಆಟಗಾರರನ್ನು ಹಿಂಪಡೆಯುವ ಕುರಿತು ತೀರ್ಮಾನವನ್ನು ಕೈಗೊಳ್ಳಲಾಗುವುದು ಎಂದು ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ತಿಳಿಸಿದ್ದಾರೆ.

    ಈ ಹಿಂದೆ ಭಾರತ ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ವೇಳೆ ಧೋನಿ ಚೆನ್ನೈನಲ್ಲಿ ಇಂಡಿಯಾ ಸಿಮೆಂಟ್ಸ್ ಕಚೇರಿಗೆ ಭೇಟಿ ನೀಡಿದ್ದರು. ಈ ವೇಳೆಯೇ ಧೋನಿ ಮತ್ತೆ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನುವ ಸುದ್ದಿ ಪ್ರಕಟವಾಗಿತ್ತು. ಅದಕ್ಕೂ ಮೊದಲು ಧೋನಿ ಜುಲೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜರ್ಸಿ ಧರಿಸಿದ್ದ ಫೋಟೋವನ್ನು ಫೇಸ್ ಬುಕ್‍ನಲ್ಲಿ ಅಪ್ಲೋಡ್ ಮಾಡುವ ಮೂಲಕ ಮರಳಿ ತಂಡಕ್ಕೆ ಹಿಂದಿರುಗವ ಬಗ್ಗೆ ಸುಳಿವು ನೀಡಿದ್ದರು.

    https://www.facebook.com/MSDhoni/posts/1926010637622156

    https://www.facebook.com/Seenumama/photos/pcb.1103706643095460/1103706599762131/?type=3&theater

    https://www.facebook.com/Seenumama/photos/pcb.1103706643095460/1103706619762129/?type=3&theater

    https://www.facebook.com/msdhoni7781/photos/pcb.1453118581403674/1453118448070354/?type=3&theater

    https://www.facebook.com/msdhoni7781/photos/pcb.1453118581403674/1453118384737027/?type=3&theater

    https://www.facebook.com/msdhoni7781/photos/pcb.1453118581403674/1453118424737023/?type=3&theater

  • ಐಪಿಎಲ್ ಸ್ಪಾಟ್ ಫಿಕ್ಸಿಂಗ್: ಶ್ರೀಶಾಂತ್ ಮೇಲಿನ ಅಜೀವ ನಿಷೇಧ ತೆರವಿಗೆ ತಡೆ

    ಐಪಿಎಲ್ ಸ್ಪಾಟ್ ಫಿಕ್ಸಿಂಗ್: ಶ್ರೀಶಾಂತ್ ಮೇಲಿನ ಅಜೀವ ನಿಷೇಧ ತೆರವಿಗೆ ತಡೆ

    ಕೊಚ್ಚಿ: ಭಾರತೀಯ ಕ್ರಿಕೆಟ್ ತಂಡದಲ್ಲಿ ಮರಳಿ ಸ್ಥಾನವನ್ನು ಪಡೆಯಬೇಕೆಂಬ ಆಸೆ ಹೊಂದಿದ್ದ ಕ್ರಿಕೆಟಿಗ ಎಸ್ ಶ್ರೀಶಾಂತ್‍ಗೆ ಭಾರೀ ಹಿನ್ನಡೆಯಾಗಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶ್ರೀಶಾಂತ್ ಮೇಲೆ ವಿಧಿಸಿದ್ದ ಅಜೀವ ನಿಷೇಧವನ್ನು ತೆರವುಗೊಳಿಸಲು ಕೇರಳ ಹೈಕೋರ್ಟ್ ತಡೆ ನೀಡಿದೆ.

    ಆಗಸ್ಟ್ ತಿಂಗಳಿನಲ್ಲಿ ಕೇರಳ ಹೈಕೋರ್ಟ್ ಬಿಸಿಸಿಐಗೆ ಶ್ರೀಶಾಂತ್ ಮೇಲಿನ ಅಜೀವ ನಿಷೇಧವನ್ನು ತೆರವುಗೊಳಿಸುವಂತೆ ಆದೇಶವನ್ನು ನೀಡಿತ್ತು. ಆದರೆ ಬಿಸಿಸಿಐ, ಈ ಆದೇಶವನ್ನು ಪುನರ್ ಪರಿಶೀಲಿಸುವಂತೆ ಅರ್ಜಿಯನ್ನು ಸಲ್ಲಿಸಿತ್ತು. ಬಿಸಿಸಿಐ ಮನವಿಯನ್ನು ಪರಿಶೀಲಿಸಿದ ಹೈ ಕೋರ್ಟ್‍ನ ವಿಭಾಯ ಪೀಠವು ಬಿಸಿಸಿಐ ಪುನರ್ ಪರಿಶೀಲನಾ ಅರ್ಜಿಯನ್ನು ಎತ್ತಿ ಹಿಡಿದಿದ್ದು, ಶ್ರೀಶಾಂತ್ ಮೇಲಿನ ಅಜೀವ ನಿಷೇಧ ತೆರವಿಗೆ ತಡೆ ನೀಡಿದೆ.

    ಕೋರ್ಟ್ ತೀರ್ಪಿನ ಕುರಿತು ಪ್ರತಿಕ್ರಿಯಿಸಿರುವ ಶ್ರೀಶಾಂತ್ ನ್ಯಾಯಕ್ಕಾಗಿ ನಿರಂತರ ಹೋರಾಟ ನಡೆಸುವುದಾಗಿ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಇದು ಅತ್ಯಂತ ಕೆಟ್ಟ ತೀರ್ಮಾನವಾಗಿದ್ದು, ನನಗೆ ಮಾತ್ರ ವಿಶೇಷ ಕಾನೂನು ಏಕೆ? ನಿಜವಾದ ಅಪರಾಧಿಗಳು ಎಲ್ಲಿ? ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ತಂಡಗಳ ವಿರುದ್ಧ ಯಾವ ಕ್ರಮನ್ನು ಕೈಗೊಳ್ಳಲಾಗಿದೆ ಎಂದು ಬಿಸಿಸಿಐಗೆ ಪ್ರಶ್ನಿಸಿದ್ದಾರೆ. ನನಗೆ ನನ್ನ ಕುಟುಂಬ ಹಾಗೂ ನನ್ನನ್ನು ನಂಬುವ ಹಲವು ಆತ್ಮೀಯರ ಬೆಂಬಲವಿದ್ದು, ನಿಷೇಧ ತೆರವಿನ ವಿಚಾರದಲ್ಲಿ ನಿರಂತರವಾಗಿ ಹೋರಾಟವನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ.

    2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಶ್ರೀಶಾಂತ್ ಜೊತೆಗೆ ರಾಜಸ್ಥಾನ್ ರಾಯಲ್ಸ್ ತಂಡದ ಅಜಿತ್ ಚಾಂಡೀಲ, ಅಂಕಿತ್ ಚೌಹಾಣ್, ಅಲ್ಲದೇ ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ತಂಡಗಳನ್ನು ಎರಡು ವರ್ಷಗಳ ಕಾಲ ನಿಷೇಧವನ್ನು ವಿಧಿಸಲಾಗಿತ್ತು.

     

  • ಐಪಿಎಲ್ ಪ್ರಸಾರದ ಹಕ್ಕು ಸ್ಟಾರ್ ಇಂಡಿಯಾ ಪಾಲು: ಎಷ್ಟು ಕೋಟಿ ಬಿಡ್? ಇನ್ನು ಮುಂದೆ 1 ಪಂದ್ಯದ ಟಿವಿ ಶುಲ್ಕ ಎಷ್ಟು ಗೊತ್ತಾ?

    ಐಪಿಎಲ್ ಪ್ರಸಾರದ ಹಕ್ಕು ಸ್ಟಾರ್ ಇಂಡಿಯಾ ಪಾಲು: ಎಷ್ಟು ಕೋಟಿ ಬಿಡ್? ಇನ್ನು ಮುಂದೆ 1 ಪಂದ್ಯದ ಟಿವಿ ಶುಲ್ಕ ಎಷ್ಟು ಗೊತ್ತಾ?

    ಮುಂಬೈ: 2018ರಿಂದ 2022ರವರೆಗಿನ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಜಾಗತಿಕ ಪ್ರಸಾರದ ಹಕ್ಕನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿದೆ.

    ಸೋಮವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ 16,347 ಕೋಟಿ ರೂ. ನೀಡಿ ಟಿವಿ ಮತ್ತು ಡಿಜಿಟಲ್ ಮೀಡಿಯಾದ ಹಕ್ಕನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿದೆ.

    ಭಾರತದಲ್ಲಿ ಪ್ರಸಾರದ ಹಕ್ಕಿಗಾಗಿ ಸೋನಿ ಪಿಕ್ಚರ್ಚ್ 11,050 ಕೋಟಿ ರೂ. ಹಣವನ್ನು ಬಿಡ್ ಮಾಡಿದ್ದರೆ ಸ್ಟಾರ್ ಇಂಡಿಯಾ 6196.94 ಕೋಟಿ ರೂ. ಹಣವನ್ನು ಭಾರತದ ಪ್ರಸಾರಕ್ಕೆ ಬಿಡ್ ಮಾಡಿತ್ತು. ಆದರೆ ಸೋನಿ ಪಿಕ್ಚರ್ಸ್ ಇತರ ಹಕ್ಕು ಗಳಿಗೆ ಬಿಡ್ ಮಾಡದ ಕಾರಣ ಅಂತಿಮವಾಗಿ ಐಪಿಎಲ್ ಪ್ರಸಾರದ ಹಕ್ಕನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿತು.

    ಈ ಬಿಡ್ ಪ್ರಕ್ರಿಯೆಯಲ್ಲಿ ಯುಪ್ ಟಿವಿ, ಗಲ್ಫ್ ಡಿಟಿಎಚ್ ಒಎಸ್‍ಎನ್, ಪರ್‍ಫಾರ್ಮ್ ಮೀಡಿಯಾ, ಏರ್‍ಟೆಲ್, ರಿಲಯನ್ಸ್ ಜಿಯೋ, ಟೈಮ್ಸ್ ಇಂಟರ್ ನೆಟ್, ಫೇಸ್‍ಬುಕ್, ಅಮೆಜಾನ್, ಇಎಸ್‍ಪಿಎನ್ ಡಿಜಿಟಲ್ ಮೀಡಿಯಾಗಳು ಭಾಗವಹಿಸಿತ್ತು.

    ಭಾರತದಲ್ಲಿ ಡಿಜಿಟಲ್ ಪ್ರಸಾರದ ಹಕ್ಕಿಗೆ ಏರ್‍ಟೆಲ್, ರಿಲಯನ್ಸ್ ಜಿಯೋ, ಟೈಮ್ಸ್ ಇಂಟರ್ ನೆಟ್, ಫೇಸ್‍ಬುಕ್ ಬಿಡ್ ಮಾಡಿತ್ತು.

    ಹಕ್ಕು ಇಷ್ಟೊಂದು ಮೊತ್ತಕ್ಕೆ ಹರಾಜು ಆದ ಕಾರಣ ಐಪಿಎಲ್ ಪ್ರತಿ ಪಂದ್ಯದ ಟಿವಿ ಶುಲ್ಕ 2018ರಿಂದ ಹೆಚ್ಚಾಗಲಿದೆ. ಈ ಹಿಂದೆ ಒಂದು ಪಂದ್ಯಕ್ಕೆ  15 ಕೋಟಿ ರೂ. ಆಗಿದ್ದರೆ, ಇನ್ನು ಮುಂದೆ ಈ ಮೌಲ್ಯ ಮೂರು ಪಟ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಈಗ ಭಾರತದ ಒಂದು ಏಕದಿನ ಪಂದ್ಯಕ್ಕೆ ಟಿವಿ ಶುಲ್ಕ 45 ಕೋಟಿ ರೂ. ಇದ್ದರೆ, ಐಪಿಎಲ್ ನಲ್ಲಿ 55 ಕೋಟಿ ರೂ.ಗೆ ಏರಿಕೆಯಾಗಬಹುದು ಎಂದು ಕ್ರಿಕೆಟ್ ಸಂಖ್ಯಾಶಾಸ್ತ್ರಜ್ಞ ಮೋಹನ್ ದಾಸ್ ಮೆನನ್ ಹೇಳಿದ್ದಾರೆ.

    2008ರಲ್ಲಿ ಸೋನಿ ಪಿಕ್ಚರ್ಸ್ ನೆಟ್ ವರ್ಕ್ ಐಪಿಎಲ್ ಬಿಡ್ ಗೆದ್ದುಕೊಂಡಿತ್ತು. ಇದು 10 ವರ್ಷ ಅವಧಿಯದ್ದಾಗಿದ್ದು, ಒಟ್ಟು 8200 ಕೋಟಿ ರೂ. ನೀಡಿ ಬಿಡ್ ಗೆದ್ದಿತ್ತು. ಮೂರು ವರ್ಷ ಐಪಿಎಲ್ ಡಿಜಿಟಲ್ ಹಕ್ಕನ್ನು ನೋವಿ ಡಿಜಿಟಲ್ 2015 ರಲ್ಲಿ 302.2 ಕೋಟಿ ರೂ. ನೀಡಿ ಪಡೆದುಕೊಂಡಿತ್ತು.

    ಬೇರೆ ದೇಶಗಳಿಗೆ ನಡೆಯುವ ಕೂಟಗಳಿಗೆ ಹೋಲಿಕೆ ಮಾಡಿದರೆ ಐಪಿಎಲ್ ಬಿಡ್ ಕಡಿಮೆ ಇದ್ದು, ಅಮೆರಿಕದಲ್ಲಿ ನಡೆಯುತ್ತಿರುವ ನ್ಯಾಷನಲ್ ಫುಟ್‍ಬಾಲ್ ಲೀಗ್(ಎನ್‍ಎಫ್‍ಎಲ್)  ಒಂದು ವರ್ಷಕ್ಕೆ 6 ಶತಕೋಟಿ ಡಾಲರ್(ಅಂದಾಜು 38,442 ಸಾವಿರ ಕೋಟಿ ರೂ.) ಬಿಡ್ ಆಗುತ್ತಿದೆ.

    ಇದನ್ನೂ ಓದಿ: ಐಪಿಎಲ್‍ನ ಜಸ್ಟ್ 10 ಸೆಕೆಂಡ್ ಜಾಹಿರಾತಿಗೆ ಎಷ್ಟು ಹಣ? ನಗದು ಬಹುಮಾನ ಎಷ್ಟು?

    https://twitter.com/IPL/status/904620781354631168

     

  • ಐಪಿಎಲ್ ಕ್ರಿಕೆಟ್: ಟಿವಿ ಸ್ಕ್ರೀನ್‍ನಲ್ಲಿ ಕಾಣೋ ಕೆಂಪು, ಹಸಿರು ಪಟ್ಟಿಯ ಅರ್ಥ ಏನು?

    ಐಪಿಎಲ್ ಕ್ರಿಕೆಟ್: ಟಿವಿ ಸ್ಕ್ರೀನ್‍ನಲ್ಲಿ ಕಾಣೋ ಕೆಂಪು, ಹಸಿರು ಪಟ್ಟಿಯ ಅರ್ಥ ಏನು?

    ಬೆಂಗಳೂರು: ಐಪಿಎಲ್ ಪಂದ್ಯದ ಟಿವಿ ಸ್ಕ್ರೀನ್ ನಲ್ಲಿ ಕಾಣುವ ಲೈವ್ ಸ್ಕೋರ್ ಬೋರ್ಡ್ ಕಳೆದ ಐಪಿಎಲ್‍ಗಳಿಂದ ಈ ಬಾರಿ ಮತ್ತಷ್ಟು ಆಕರ್ಷವಾಗಿ ಕಾಣುತ್ತಿದ್ದು ಇದಕ್ಕೆ ಈಗ ಮತ್ತೊಂದು ಟಿಕ್ಕರ್ ಸೇರಿಸಲಾಗಿದೆ.

    ಇಲ್ಲಿಯವರೆಗೆ ಸ್ಕ್ರೀನ್ ನಲ್ಲಿ ಇಬ್ಬರು ಬ್ಯಾಟ್ಸ್ ಮನ್ ಗಳ ಹೆಸರು, ಅವರ ಹೊಡೆದ ರನ್, ಬೌಲರ್ ಹೆಸರು ಮತ್ತು ಆತನ ಓವರ್, ಒಟ್ಟು ರನ್, ಎಷ್ಟು ವಿಕೆಟ್ ಹೋಗಿದೆ, ಎಷ್ಟು ಓವರ್ ಆಗಿದೆ, ಒಂದು ಓವರ್‍ನಲ್ಲಿ ಎಷ್ಟು ರನ್ ಆಗಿದೆ, ರನ್ ರೇಟ್ ಎಷ್ಟಿದೆ, ಎಷ್ಟು ಬಾಲಿನಲ್ಲಿ ಎಷ್ಟು ರನ್ ಬೇಕು ಎನ್ನುವ ಮಾಹಿತಿಯನ್ನು ತೋರಿಸಲಾಗುತಿತ್ತು. ಆದರೆ ಈಗ ತಂಡದ ಒಟ್ಟು ಮೊತ್ತ ಮತ್ತು ಆ ತಂಡ ಗಳಿಸಬೇಕಾದ ಟಾರ್ಗೆಟ್ ಮಧ್ಯೆ ಕೆಂಪು ಮತ್ತು ಹಸಿರು ಬಣ್ಣಗಳಿರುವ ಹೊಸ ಮೀಟರ್ ಪಟ್ಟಿ ಬಂದಿದೆ.

    ಈ ಹೊಸ ಪಟ್ಟಿ ವಿಶೇಷತೆ ಏನೆಂದರೆ ಕೆಲವೊಮ್ಮೆ ಪ್ರತಿ ಓವರ್‍ಗೆ ಒಮ್ಮೆ ಬದಲಾದರೆ ಒಮ್ಮೊಮ್ಮೆ ಬದಲಾಗದೇ ಇರುತ್ತದೆ. ಹೀಗಾಗಿ ಈ ಪಟ್ಟಿಯನ್ನು ಯಾಕೆ ಸ್ಕ್ರೀನ್ ನಲ್ಲಿ ತೋರಿಸುತ್ತಿದ್ದಾರೆ ಎನ್ನುವುದಕ್ಕೆ ಇಲ್ಲಿ ಮಾಹಿತಿಯನ್ನು ನೀಡಲಾಗಿದೆ.

    #1. ಈ ಮೀಟರ್ ಪಟ್ಟಿ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಮಾತ್ರ ಕಾಣುತ್ತದೆ.

    #2. ಮಧ್ಯದಲ್ಲಿರುವ ಪಾಯಿಂಟ್ ಒಂದು ತಂಡ ಗೆಲ್ಲಲು ಆ ಓವರ್ ನಲ್ಲಿ ಎಷ್ಟು ರನ್ ಗಳಿಸಬೇಕು ಎನ್ನುವ ವಿವರವನ್ನು ನೀಡುತ್ತದೆ.

    #3. ಎಡಗಡೆಯ ಭಾಗ ಕೆಂಪು ಬಣ್ಣವನ್ನು ಪ್ರತಿನಿಧಿಸಿದರೆ ಬಲಗಡೆಯ ಭಾಗ ಹಸಿರು ಬಣ್ಣವನ್ನು ಪ್ರತಿನಿಧಿಸುತ್ತದೆ. ಈ ಬಣ್ಣದ ಗೆರೆ ಪ್ರತಿ ಓವರ್‍ಗೆ ಬದಲಾಗುತ್ತಿರುತ್ತದೆ.

    #3 ಈಗ ತಂಡವೊಂದು ಆ ಪಂದ್ಯವನ್ನು ಜಯಗಳಿಸಲು ಪ್ರತಿ ಓವರ್‍ಗೆ 8 ರನ್ ಹೊಡೆಯಬೇಕು ಎಂದು ಭಾವಿಸಿಕೊಳ್ಳಿ. ಆ ತಂಡ ಆ ಓವರ್‍ನಲ್ಲಿ 7 ರನ್ ಗಳಿಸಿದರೆ ಬೇಕಾಗಿರುವ ರನ್ ರೇಟ್‍ಗಿಂತ ಹಿಂದೆ ಇದೆ ಎನ್ನುವುದನ್ನು ವೀಕ್ಷಕರಿಗೆ ವಿವರಿಸಲು ಕೆಂಪು ಪಟ್ಟಿಯನ್ನು ತೋರಿಸುತ್ತದೆ. ಒಂದು ವೇಳೆ ಬೇಕಾಗಿದ್ದ ರನ್ ಗಿಂತಲೂ ಹೆಚ್ಚು ರನ್ ಬಂದರೆ ಉದಾ. ಆ ಓವರ್‍ಗೆ 10 ರನ್ ಬಂದರೆ ಹಸಿರು ಪಟ್ಟಿಯ ಮೀಟರ್ ಕಾಣುತ್ತದೆ.

    #4. ಸಿಕ್ಸರ್, ಬೌಂಡರಿ ಸಿಡಿದಾಗ ಅಥವಾ ಎಸೆತಗಳಿಗೆ ರನ್ ಬಾರದೇ ಇದ್ದಾಗ ಈ ಟಿಕ್ಕರ್ ಬಣ್ಣ ಬದಲಾಗುತ್ತಿರುತ್ತದೆ.

  • ಐಪಿಎಲ್ ಮ್ಯಾಚ್‍ಗೂ ಸರ್ಕಾರಿ ಕಾರೇ ಬೇಕು – ವಿವಿಐಪಿ ಸಂಸ್ಕೃತಿಗಿಲ್ಲ ಬ್ರೇಕ್

    ಐಪಿಎಲ್ ಮ್ಯಾಚ್‍ಗೂ ಸರ್ಕಾರಿ ಕಾರೇ ಬೇಕು – ವಿವಿಐಪಿ ಸಂಸ್ಕೃತಿಗಿಲ್ಲ ಬ್ರೇಕ್

    ಬೆಂಗಳೂರು: ಜನ ಸೇವೆಯೇ ಜನಾರ್ದನ ಸೇವೆ ಅನ್ನೋದು ಹಳೇ ಮಾತು. ಸರ್ಕಾರಿ ಕೆಲಸಕ್ಕೆ ಕೊಟ್ಟಿರೋ ಕಾರು ಸ್ವಕಾರ್ಯಕ್ಕೂ ಬಳಕೆ ಇದು ಅಧಿಕಾರಿಗಳ ಮಾತು.

    ಹೌದು. ಸರ್ಕಾರಿ ಕೆಲಸಕ್ಕೆ ಅಂತ ಕೊಟ್ಟಿರೋ ಕಾರನ್ನ ಸ್ವಂತ ಕೆಲಸಕ್ಕೆ ಅಧಿಕಾರಿಗಳು ಬಳಸುತ್ತಿರೋದು ಬೆಳಕಿಗೆ ಬಂದಿದೆ. ಐಪಿಎಲ್ ಮ್ಯಾಚ್ ನೋಡೋಕೆ ಅಧಿಕಾರಿಗಳು ತಮ್ಮ ಫ್ಯಾಮಿಲಿಗಾಗಿ ಸರ್ಕಾರಿ ಕಾರುಗಳನ್ನ ದುರ್ಬಳಕೆ ಮಾಡಿಕೊಳ್ತಿದ್ದಾರೆ.

    ಪೊಲೀಸ್ ಅಧಿಕಾರಿಗಳ ಕಾರು, ಸರ್ಕಾರಿ ವಾಹನಗಳು ಅಷ್ಟೇ ಅಲ್ಲ ಬಿಎಂಟಿಸಿ ಸಾರಥಿ ವಾಹನದಲ್ಲಿ ಸರ್ಕಾರಿ ಅಧಿಕಾರಿಗಳ ಕುಟುಂಬಸ್ಥರು ಐಪಿಎಲ್ ಮ್ಯಾಚ್ ನೋಡೋಕೆ ಹೋಗ್ತಾರೆ. ಈ ಎಲ್ಲಾ ದೃಶ್ಯಾವಳಿಗಳು ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ವಿವಿಐಪಿ  ಸಂಸ್ಕೃತಿ ಬೇಡ ಅನ್ನೋ ಕಾರಣಕ್ಕೆ ಕೇಂದ್ರ ಸರ್ಕಾರ ಹೊಸ ಕಾನೂನು ತಂದು ಅಧಿಕಾರಿಗಳು ಹಾಗೂ ಗಣ್ಯವ್ಯಕ್ತಿಗಳ ಕಾರಿನ ಮೇಲೆ ಕೆಂಪು ದೀಪ ಬಳಕೆ ನಿಷೇಧಿಸಿದೆ. ಕೇವಲ ತುರ್ತು ಸೇವೆ ಒದಗಿಸುವಂತಹ ವಾಹನಗಳಾದಂತಹ ಆಂಬುಲೆನ್ಸ್, ಅಗ್ನಿಶಾಮಕ ವಾಹನಗಳಲ್ಲಿ ಮಾತ್ರ ಕೆಂಪು ದೀಪ ಬಳಸಬಹುದಾಗಿದೆ.