Tag: ಐತಿಹಾಸಿಕ

  • ಬೆಳೆಗೆ ಬೆಲೆ ಸಿಗಲೆಂದು ದೇವರ ಮೊರೆಹೋದ ರೈತ – ಕುರುಡುಮಲೆ ವಿನಾಯಕನಿಗೆ 2 ಟನ್ ದ್ರಾಕ್ಷಿ ಅಲಂಕಾರ

    ಬೆಳೆಗೆ ಬೆಲೆ ಸಿಗಲೆಂದು ದೇವರ ಮೊರೆಹೋದ ರೈತ – ಕುರುಡುಮಲೆ ವಿನಾಯಕನಿಗೆ 2 ಟನ್ ದ್ರಾಕ್ಷಿ ಅಲಂಕಾರ

    ಕೋಲಾರ: ಚಿಕ್ಕಬಳ್ಳಾಪುರ ಮೂಲದ ರೈತರೊಬ್ಬರು ಬೆಳೆದ ಫಸಲಿಗೆ ಉತ್ತಮ ಬೆಲೆ ಸಿಗುವಂತೆ ಕೋರಿ ಜಿಲ್ಲೆಯ ಮುಳಬಾಗಿಲು ತಾಲೂಕಿನ ಇತಿಹಾಸ ಪ್ರಸಿದ್ಧ ಕುರುಡುಮಲೆ ವಿನಾಯಕನಿಗೆ ದ್ರಾಕ್ಷಾ ಫಲ ಅಲಂಕಾರ ಮಾಡಿಸಿದ್ದಾರೆ.

    ತಾವು ಬೆಳೆದ ಫಸಲಿಗೆ ಉತ್ತಮ ಬೆಲೆ ಸಿಗುವಂತೆ ಬೇಡಿಕೊಂಡಿದ್ದು, ವಿನಾಯಕನ ಈ ವಿಶೇಷ ಅಲಂಕಾರಕ್ಕಾಗಿ 2 ಟನ್ ದ್ರಾಕ್ಷಿ ನೀಡಿದ್ದಾರೆ. ನೂರಾರು ಭಕ್ತರು ವಿಶೇಷ ಅಲಂಕಾರದ ಗಣೇಶನ ದರ್ಶನ ಪಡೆದಿದ್ದಾರೆ. ಇದನ್ನೂ ಓದಿ: ದೌರ್ಜನ್ಯದಿಂದ ಮೃತಪಟ್ಟ ಎಸ್ಸಿ-ಎಸ್ಟಿ ಕುಟುಂಬ ಸದಸ್ಯರಿಗೂ ಇನ್ಮುಂದೆ ಸರ್ಕಾರಿ ನೌಕರಿ

    ಐತಿಹಾಸಿಕ ಹಿನ್ನೆಲೆಯಿರುವ ಈ ದೇವಾಲಯಕ್ಕೆ ಮಹಾಭಾರತದ ಕಾಲದಲ್ಲಿ ಶ್ರೀಕೃಷ್ಣ ಬಂದು ಪೂಜೆ ನೇರವೇರಿಸಿದ್ದರು ಎಂಬ ಪ್ರತೀತಿ ಇದೆ. ಅದಕ್ಕಾಗಿಯೇ ಹಿರಿಯ ರಾಜಕಾರಣಿಗಳು ಚುನಾವಣೆಗೂ ಮುನ್ನ ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ಅದರಂತೆಯೇ ರೈತರು ತಾವು ಬೆಳೆದ ಬೆಳೆಗೆ ಮುಂದಿನ ದಿನಗಳಲ್ಲಿ ಉತ್ತಮ ಬೆಲೆ ಸಿಗಲಿ ಎಂದು ಹರಿಕೆ ಹೊತ್ತು ಪೂಜೆ ಸಲ್ಲಿಸುತ್ತಿದ್ದಾರೆ ಎಂದು ಮುಜರಾಯಿ ಇಲಾಖೆಯ ಕಾರ್ಯನಿರ್ವಹಣಾಧಿಕಾರಿ ಚೆಲುವ ಸ್ವಾಮಿ ತಿಳಿಸಿದ್ದಾರೆ.

  • 7 ಸುತ್ತಿನ ಕೋಟೆ ರಕ್ಷಿಸಿ ವಿಶ್ವಪರಂಪರೆ ಪಟ್ಟಿಗೆ ಸೇರಿಸಿ – ಸ್ಥಳೀಯರಿಂದ ಆಗ್ರಹ

    7 ಸುತ್ತಿನ ಕೋಟೆ ರಕ್ಷಿಸಿ ವಿಶ್ವಪರಂಪರೆ ಪಟ್ಟಿಗೆ ಸೇರಿಸಿ – ಸ್ಥಳೀಯರಿಂದ ಆಗ್ರಹ

    ಚಿತ್ರದುರ್ಗ: ವಿನಾಶದ ಅಂಚಿನಲ್ಲಿರುವ ಐತಿಹಾಸಿಕ ಪ್ರವಾಸಿ ತಾಣ, ಚಿತ್ರದುರ್ಗದ 7 ಸುತ್ತಿನ ಕೋಟೆಯನ್ನು ರಕ್ಷಿಸಿ ವಿಶ್ವಪರಂಪರೆ ತಾಣಗಳ ಪಟ್ಟಿಗೆ ಸೇರಿಸುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.

    ವಿಶ್ವದಲ್ಲಿ ಎಲ್ಲೂ ಈ ರೀತಿಯ 7 ಸುತ್ತಿನ ಕೋಟೆ ಇಲ್ಲ. ಅದ್ದರಿಂದ ಈ ಕೋಟೆಗೆ ನಿತ್ಯವೂ ಸಾವಿರಾರು ಜನ ಪ್ರವಾಸಿಗರು ಬರುತ್ತಾರೆ. ಈ ಕೋಟೆಯಲ್ಲಿರೋ ಸಾವಿರಾರು ದೇಗುಲಗಳು, ಬುರುಜು, ಬತ್ತೇರಿಗಳು, ಓಬವ್ವನ ಕಿಂಡಿ ಸೊಬಗನ್ನು ಸವಿದು ಆನಂದಿಸುತ್ತಾರೆ. ಹೀಗಾಗಿ ಈ ಐತಿಹಾಸಿಕ ತಾಣದಿಂದ ಪುರಾತತ್ವ ಇಲಾಖೆಗೆ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದೆ.

    ವಿಶ್ವಪರಂಪರೆ ಪಟ್ಟಿಗೆ ಸೇರಿಸಬೇಕಾದ ಎಲ್ಲಾ ಅರ್ಹತೆಗಳು ಇದ್ದರೂ ಸಹ ಈ ಕೋಟೆಯನ್ನು ಇನ್ನೂ ವಿಶ್ವಪರಂಪರೆ ಪಟ್ಟಿಗೆ ಸೇರಿಸದೇ ಇರುವುದು ದುರದೃಷ್ಟಕರ. ಹೀಗಾಗಿ ಈ ಬಾರಿಯಾದರೂ ಈ ಐತಿಹಾಸಿಕ ಸ್ಮಾರಕವನ್ನು ವಿಶ್ವಪರಂಪರೆ ಪಟ್ಟಿಗೆ ಸೇರಿಸಬೇಕೆಂದು ಇತಿಹಾಸ ಸಂಶೋಧಕರು ಆಗ್ರಹಿಸಿದ್ದಾರೆ.

    ಕೋಟೆಗೆ ನಿತ್ಯ ಪ್ರವಾಸಿಗರು ಬರುವುದರಿಂದ ರಕ್ಷಣೆ ಹಾಗು ಸ್ವಚ್ಛತೆಯ ಜವಾಬ್ದಾರಿಯನ್ನು ಪುರತತ್ವ ಇಲಾಖೆ ವಹಿಸಿಕೊಂಡಿದೆ. ಆದರೆ ಕೋಟೆಯ ಬುರುಜುಗಳು ಹಾಗು ಕೋಟೆಯ ತಡೆಗೋಡೆಗಳು ಬೀಳುವ ಸ್ಥಿತಿಗೆ ತಲುಪಿವೆ. ಆದರೆ ಇಲಾಖೆ ಮಾತ್ರ ಏನು ಆಗಿಲ್ಲವೆಂಬಂತೆ ಕಣ್ಮುಚ್ಚಿ ಕುಳಿತಿದೆ. ಹೀಗಾಗಿ ಕೂಡಲೇ ಕೋಟೆಯ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಂಡು ರಕ್ಷಿಸಬೇಕೆಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಐತಿಹಾಸಿಕ ತಿಮ್ಮರಾಯಸ್ವಾಮಿ ದೇವಾಲಯದಲ್ಲಿ ಅದ್ಧೂರಿಯಾಗಿ ನಡೆಯಿತು ಪುಷ್ಪ ಯಾಗ!

    ಐತಿಹಾಸಿಕ ತಿಮ್ಮರಾಯಸ್ವಾಮಿ ದೇವಾಲಯದಲ್ಲಿ ಅದ್ಧೂರಿಯಾಗಿ ನಡೆಯಿತು ಪುಷ್ಪ ಯಾಗ!

    ಬೆಂಗಳೂರು: ಆಷಾಢ ಮಾಸ ಹಿನ್ನೆಲೆಯಲ್ಲಿ ಆನೇಕಲ್‍ನ ಐತಿಹಾಸಿಕ ಶ್ರೀ ತಿಮ್ಮರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪುಷ್ಪ ಯಾಗವನ್ನ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿಸಲಾಯಿತು.

    ಸುಮಾರು 10 ಕ್ಕೂ ಹೆಚ್ಚು ವಿವಿಧ ರೀತಿಯ 150 ಕೆಜಿ ಪುಷ್ಪಗಳನ್ನ ಬಳಸಿ ಈ ಪುಷ್ಪಯಾಗವನ್ನ ನಡೆಸಲಾಯಿತು. ಮಂತ್ರ ಪುಷ್ಪಗಳಿಂದ ಪುರೋಹಿತರು ಶ್ರೀ ತಿಮ್ಮರಾಯಸ್ವಾಮಿ ಉತ್ಸವ ಮೂರ್ತಿಗೆ ಹೂಗಳನ್ನ ಸಮರ್ಪಣೆ ಮಾಡಿದರು.

     

    ಆನೇಕಲ್‍ನ ಹಲವು ಭಕ್ತರು ಯಾಗ ಮಾಡಲು ಪುಷ್ಪಗಳನ್ನ ದೇವಾಲಯಕ್ಕೆ ನೀಡಿದ್ದರು. ಅಲ್ಲದೇ ಸುಮಾರು 2 ಗಂಟೆಗಳ ಕಾಲ ವೇದ ಮಂತ್ರ ಘೋಷಣೆಯೊಂದಿಗೆ ಅಪರೂಪದ ಪುಷ್ಪ ಯಾಗವನ್ನ ನಡೆಸಲಾಯಿತು. ತಿಮ್ಮರಾಯಸ್ವಾಮಿ ದೇವಾಲಯದ ಈ ಅಪರೂಪದ ವಿದ್ಯಮಾನವನ್ನ ಸಾವಿರಾರು ಜನ ಕಣ್ಣು ತುಂಬಿಕೊಳ್ಳುವ ಮೂಲಕ ದೇವರ ಕೃಪೆಗೆ ಪಾತ್ರರಾದರು.