Tag: ಐಡಿ ಕಾರ್ಡ್

  • ಬೆಂಗಳೂರಿನ ಪಿಜಿಗಳಿಗೆ ಪೊಲೀಸ್ ಇಲಾಖೆಯಿಂದ ಹೊಸ ಮಾರ್ಗಸೂಚಿ – ಐಡಿ ಕಾರ್ಡ್ ವಿತರಣೆಗೆ ಚಿಂತನೆ

    ಬೆಂಗಳೂರಿನ ಪಿಜಿಗಳಿಗೆ ಪೊಲೀಸ್ ಇಲಾಖೆಯಿಂದ ಹೊಸ ಮಾರ್ಗಸೂಚಿ – ಐಡಿ ಕಾರ್ಡ್ ವಿತರಣೆಗೆ ಚಿಂತನೆ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಪಿಜಿಗಳು (PG) ಇನ್ಮುಂದೆ ಮತ್ತಷ್ಟು ಸ್ಮಾರ್ಟ್ ಆಗಲಿವೆ. ಪಿಜಿಗಳಿಗೆ ಪೊಲೀಸ್ ಇಲಾಖೆಯಿಂದ ಹೊಸ ಮಾರ್ಗಸೂಚಿ ಪ್ರಕಟಿಸುತ್ತಿದ್ದಂತೆ ಪಿಜಿ ಅಸೋಸಿಯೇಷನ್ ಹೊಸ ನಿರ್ಧಾರಕ್ಕೆ ಬಂದಿದೆ. ಪೊಲೀಸರಿಗೆ ನೆರವಾಗಲು ಹಾಗೂ ಪಿಜಿಯಲ್ಲಿದ್ದವರ ಸುರಕ್ಷತೆಗೆ ಐಡಿ ಕಾರ್ಡ್ ವ್ಯವಸ್ಥೆಯನ್ನು ಜಾರಿ ಮಾಡಲು ಮುಂದಾಗಿದೆ.

    ಬೆಂಗಳೂರಿನಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಹಾಗೂ ಪಿಜಿ ನಿವಾಸಿಗಳ ಸುರಕ್ಷತೆ, ಭದ್ರತೆಯ ವಿಚಾರಕ್ಕೆ ಪೊಲೀಸ್ ಇಲಾಖೆಯಿಂದ ಹೊಸ ಮಾರ್ಗಸೂಚಿ ಪ್ರಕಟ ಮಾಡಲಾಗಿತ್ತು. ಇದೀಗ ಪೊಲೀಸರಿಗೆ ಸಹಾಯಕಾರಿಯಾಗಲು ಪಿಜಿ ಅಸೋಸಿಯೇಷನ್ ಮತ್ತಷ್ಟು ಸ್ಮಾರ್ಟ್ ಪ್ಲ್ಯಾನ್ ಮಾಡಿದೆ. ಪಿಜಿಯಲ್ಲಿ ವಾಸ ಮಾಡುವವರಿಗೆ ಇನ್ಮುಂದೆ ಪಿಜಿ ಅಡ್ಮಿಶನ್‌ನ ಐಡಿ ಕಾರ್ಡ್‌ ನೀಡಲು ಚಿಂತನೆ ನಡೆಸುತ್ತಿದೆ. ಜೊತೆಗೆ ಫ್ಯಾಮಿಲಿ ಹಾಗೂ ಸ್ನೇಹಿತರ ಫೋನ್ ನಂಬರ್‌ಗಳನ್ನು ಸಂಗ್ರಹಿಸಿಕೊಳ್ಳಲು ಮುಂದಾಗಿದೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್‌ – ರಾಜ್ಯದ ಹಲವೆಡೆ ಮನೆ, ಕಚೇರಿಗಳ ಮೇಲೆ ದಾಳಿ

    ನಗರದಲ್ಲಿ 25 ಸಾವಿರಕ್ಕೂ ಅಧಿಕ ಪಿಜಿಗಳಿವೆ. ಪಾಲಿಕೆ, ಬೆಸ್ಕಾಂ, ಜಲಮಂಡಳಿ ಪ್ರಕಾರ 50 ಸಾವಿರಕ್ಕೂ ಅಧಿಕ ಪಿಜಿಗಳಿವೆ. ಪೊಲೀಸರ ತನಿಖೆ ಹಾಗೂ ಪಿಜಿ ವಾಸಿಗಳ ಸುರಕ್ಷತೆಯ ನಿಟ್ಟಿನಲ್ಲಿ ಆಯಾ ಪಿಜಿಗಳಲ್ಲಿ ಅಡ್ಮಿಷನ್ ಐಡಿ ಕಾರ್ಡ್ ವಿತರಿಸಿ ಅದನ್ನು ಪ್ರತಿ ತಿಂಗಳಿಗೊಮ್ಮೆ ರಿನಿವಲ್ ಮಾಡೋಕೆ ಪಿಜಿ ಅಸೋಸಿಯೇಷನ್ ನಿರ್ಧರಿಸಿದೆ. ನ್ನು ಪಿಜಿ ಅಸೋಸಿಯೇಷನ್ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಈ ಪ್ಲ್ಯಾನ್ ಅನ್ನು ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ. ಪಿಜಿ ಮಾಲೀಕರ ಐಡಿ ಕಾರ್ಡ್ ಪ್ಲ್ಯಾನ್, ಪೊಲೀಸರ ತನಿಖೆಗಳಿಗೆ ಮತ್ತಷ್ಟು ಸಹಾಯಕಾರಿಯಾಗಲಿದೆ. ಇದನ್ನೂ ಓದಿ: ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಕೊಬ್ಬರಿ ಬೆಂಕಿಗಾಹುತಿ

  • RRR ಚಿತ್ರದ ಸೆಟ್‍ನಲ್ಲಿ ಹೀರೋಗೂ ಇದೆ ಐಡಿ ಕಾರ್ಡ್

    RRR ಚಿತ್ರದ ಸೆಟ್‍ನಲ್ಲಿ ಹೀರೋಗೂ ಇದೆ ಐಡಿ ಕಾರ್ಡ್

    ಹೈದ್ರಾಬಾದ್: ತೆಲುಗಿನ ಜನಪ್ರಿಯ ನಟ, ಆರ್​ಆರ್​ಆರ್ ಚಿತ್ರದ ನಾಯಕರಲ್ಲೊಬ್ಬರಾದ ಜೂನಿಯರ್ ಎನ್‍ಟಿಆರ್ ಅವರಿಗೆ ಶೂಟಿಂಗ್ ಸೆಟ್‍ನಲ್ಲಿ ಮೊದಲ ಬಾರಿಗೆ ಐಡಿ ಕಾರ್ಡ್ಅನ್ನು ನೀಡಲಾಗಿದೆ.

    ಜೂನಿಯರ್ ಎನ್‍ಟಿಆರ್ ಐಡಿ ಕಾರ್ಡ್ ಅನ್ನು ಧರಿಸಿ, ಫೋಟೊಗೆ ಪೋಸ್ ನೀಡಿದ್ದಾರೆ. ಎಲ್ಲರನ್ನೂ ಸೆಳೆದಿರುವುದು ಅವರ ಹಿಂದೆ ಕುಳಿತಿರುವ ರಾಜಮೌಳಿ ಅವರ ಭಂಗಿ. ನನಗೂ ಐಡಿ ಕಾರ್ಡ್ ಇದೆ ಎಂಬ ಭಾವದಲ್ಲಿ ತಮ್ಮ ಐಡಿ ಕಾರ್ಡ್‍ಅನ್ನೂ ರಾಜಮೌಳಿ ಎತ್ತಿ ತೋರಿಸುತ್ತಿದ್ದಾರೆ. ಜೂ.ಎನ್‍ಟಿಆರ್ ಹಂಚಿಕೊಂಡಿರುವ ಮತ್ತೊಂದು ಫೋಟೋದಲ್ಲಿ ತಮ್ಮ ಐಡಿ ಕಾರ್ಡ್‍ನ ಕ್ಲೋಸ್ ಅಪ್ ಫೋಟೋವನ್ನು ಶೇರ್ ಮಾಡಿದ್ದಾರೆ.

     

    View this post on Instagram

     

    A post shared by Jr NTR (@jrntr)

    ಇತ್ತೀಚೆಗೆ ಐಡಿ ಕಾರ್ಡ್ ಧರಿಸಿಯೇ ಇರಲಿಲ್ಲ. ಅದರಲ್ಲೂ ಚಿತ್ರೀಕರಣದ ಸೆಟ್‍ಗಳಲ್ಲಿ ಐಡಿ ಕಾರ್ಡ್ ಧರಿಸಿಯೇ ಇರಲಿಲ್ಲ, ಇದೇ ಮೊದಲ ಬಾರಿಯಾಗಿದೆ ಎಂದು ಜೂನಿಯರ್ ಎನ್‍ಟಿಆರ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಬಿಗ್ ಬಜೆಟ್‍ನಲ್ಲಿ ಆರ್​ಆರ್​ಆರ್ ತಯಾರಾಗುತ್ತಿದ್ದು, ಹಲವಾರು ಕ್ಷೇತ್ರಗಳಲ್ಲಿ ಹೊಸತನ್ನು ಪರಿಚಯಿಸುತ್ತಿದೆ. ಅದಕ್ಕೆ ಜೂನಿಯರ್ ಎನ್‍ಟಿಆರ್ ಅವರಿಗೆ ಐಡಿ ಕಾರ್ಡ್ ಕೊಟ್ಟಿದ್ದನ್ನೂ ಸೇರಿಸಿಕೊಳ್ಳಬಹುದು ಬಿಡಿ ಎಂದು ಅಭಿಮಾನಿಗಳು ಹಾಸ್ಯ ಚಟಾಕಿ ಹಾರಿಸಿದ್ದಾರೆ.

     

    View this post on Instagram

     

    A post shared by SS Rajamouli (@ssrajamouli)

    ರಷ್ಯಾದ ಉಕ್ರೇನ್‍ನಲ್ಲಿ ಚಿತ್ರದ ಮುಖ್ಯ ಭಾಗಗಳನ್ನು ಚಿತ್ರೀಕರಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ. ಉಕ್ರೇನ್‍ಗೆ ವಿಮಾನ ಲ್ಯಾಂಡ್ ಆಗುವ ಸಂದರ್ಭವನ್ನೂ ಚಿತ್ರತಂಡ ಈ ಮೊದಲು ಹಂಚಿಕೊಂಡಿತ್ತು. ಸುಮಾರು 450ಕೋಟಿ ಬಜೆಟ್‍ನಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು ಅಕ್ಟೋಬರ್ 13ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ.

  • ಸೇನಾ ಐಡಿ ಕಾರ್ಡನ್ನು ದುರುಪಯೋಗ ಮಾಡಿಕೊಳ್ಳುತ್ತಿರಲಿಲ್ಲ- ಗುರು ಪತ್ನಿ

    ಸೇನಾ ಐಡಿ ಕಾರ್ಡನ್ನು ದುರುಪಯೋಗ ಮಾಡಿಕೊಳ್ಳುತ್ತಿರಲಿಲ್ಲ- ಗುರು ಪತ್ನಿ

    – ಭಾರತೀಯ ಸೇನೆಗೆ ಧನ್ಯವಾದ ಸಲ್ಲಿಕೆ

    ಮಂಡ್ಯ: ನನ್ನ ಪತಿಯ ಸಾವಿಗೆ ಕಾರಣನಾದ ಮಾಸ್ಟರ್ ಮೈಂಡ್ ಉಗ್ರನ ಹತ್ಯೆ ಖುಷಿ ತಂದಿದೆ ಎಂದು ಗುಡಿಗೆರೆ ಕಾಲೋನಿಯಲ್ಲಿ ಹುತಾತ್ಮ ಯೋಧ ಗುರು ಪತ್ನಿ ಕಲಾವತಿ ಸೇನೆಗೆ ಧನ್ಯವಾದ ತಿಳಿಸಿದ್ದಾರೆ.

    ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಕಲಾವತಿ ಅವರು, ಉಗ್ರನ ಹತ್ಯೆಗೆ ಖುಷಿ ಪಡುತ್ತೇನೆ. ಈ ದೇಶದಲ್ಲಿ ಉಗ್ರ ಎಂಬ ಪದ ಇತಿಹಾಸ ಸೇರಬೇಕು. ಉಗ್ರರು ಇದ್ದರು ಎಂಬುದಷ್ಟೇ ಮಾತನಾಡಬೇಕು. ಆದರೆ ಉಗ್ರರು ಇನ್ನೂ ಇದ್ದಾರೆ ಎಂಬ ಪದ ಇರಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಾವು ಕೆಆರ್‍ಎಸ್‍ಗೆ ಹೋಗಿದ್ದೇವು. ಅಲ್ಲಿ ನಾನು ಕನ್ನಂಬಾಡಿ ಕಟ್ಟೆಯ ಮೇಲೆ ನೋಡಬೇಕು ಅಲ್ಲಿಗೆ ಕರೆದುಕೊಂಡು ಹೋಗಿ ಎಂದು ಕೇಳಿದ್ದೆ. ಅದಕ್ಕೆ ನನ್ನ ಪತಿ ಆ ರೀತಿಯೆಲ್ಲ ಹೋಗಬಾರದು ಎಂದು ಹೇಳಿದ್ದರು. ಈ ವೇಳೆ ನಮ್ಮ ಜೊತೆ ಬಂದಿದ್ದ ಸ್ನೇಹಿತರು ನಿಮ್ಮ ಐಡಿ ಕಾರ್ಡ್ ತೋರಿಸಿ ಕರೆದುಕೊಂಡು ಹೋಗಿ ಎಂದು ಕೇಳಿದ್ದರು. ಆಗ ನನ್ನ ಪತಿ ಸೇನೆಯ ಕಾರ್ಡನ್ನು ದುರುಪಯೋಗ ಮಾಡಿಕೊಳ್ಳಬಾರದು ಎಂದು ಹೇಳಿದ್ದರು. ನಾನು ದೇವಸ್ಥಾನಕ್ಕೆ ಹೋದಾಗ ತುಂಬಾ ಜನರಿದ್ದರೂ, ಅಲ್ಲೂ ಕಾರ್ಡ್ ತೋರಿಸುತ್ತಿರಲಿಲ್ಲ. ಲೈನಿನಲ್ಲೇ ನಿಂತು ಹೋಗುತ್ತಿದ್ದರು. ಅವರು ಕುಟುಂಬದವರಿಗಾಗಿ ಸೇನೆ ಐಡಿ ಕಾರ್ಡನ್ನು ದುರುಪಯೋಗ ಮಾಡಿಕೊಳ್ಳುತ್ತಿರಲಿಲ್ಲ ಎಂದು ಪತಿಯ ಕರ್ತವ್ಯ ನಿಷ್ಠೆಯ ಬಗ್ಗೆ ಹೇಳಿದ್ದಾರೆ.

    ದೇಶದ ಜನ ಕೇಳುತ್ತಿದ್ದಾರೆ ಎಂದು ಸೈನಿಕರು ಈಗಷ್ಟೇ ಉಗ್ರರ ವಿರುದ್ಧ ದಾಳಿ ಮಾಡಿ ಸುಮ್ಮನಾಗಬಾರದು. ಉಗ್ರರ ಮೇಲಿನ ದಾಳಿ ಅವರ ನಾಶವಾಗುವವರೆಗೂ ನಿರಂತರವಾಗಿರಬೇಕು. ಉಗ್ರರ ವಿರುದ್ಧ ಹೋರಾಡುತ್ತಿರುವ ಯೋಧರು ಸುರಕ್ಷಿತವಾಗಿರಲಿ. ನನ್ನ ಪರಿಸ್ಥಿತಿ ಅವರ ಮನೆಯವರಿಗೆ ಬಾರದಿರಲಿ. ಸರ್ಕಾರ ನಮ್ಮ ಸೈನಿಕರಿಗೆ ಹೆಚ್ಚಿನ ರಕ್ಷಣೆ ನೀಡಲಿ ಎಂದು ಹುತಾತ್ಮ ಯೋಧನ ಪತ್ನಿ ಕಲಾವತಿ ಹೇಳಿದರು.

    https://www.youtube.com/watch?v=5LubBl3CkXQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಗ್ಗದಿಂದ ಬಿಗಿದು ಚಾಕುವಿನಿಂದ ಕತ್ತು ಕೊಯ್ದು ಯೋಧರಿಂದಲೇ ಯೋಧನ ಕೊಲೆ!

    ಹಗ್ಗದಿಂದ ಬಿಗಿದು ಚಾಕುವಿನಿಂದ ಕತ್ತು ಕೊಯ್ದು ಯೋಧರಿಂದಲೇ ಯೋಧನ ಕೊಲೆ!

    ಬೆಂಗಳೂರು: ಯೋಧರೊಬ್ಬರನ್ನು ಹಗ್ಗದಿಂದ ಕತ್ತು ಬಿಗಿದು ನಂತರ ಚಾಕುವಿನಿಂದ ಕತ್ತು ಕೊಯ್ದು ಇಬ್ಬರು ಯೋಧರೇ ಕೊಲೆ ಮಾಡಿದ ಘಟನೆ ಬೆಂಗಳೂರಿನ ವಿವೇಕನಗರದ ಎಎಸ್‍ಸಿ ಸೆಂಟರ್ ಮತ್ತು ಕಾಲೇಜು ಕ್ಯಾಂಪಸ್ ನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಪಂಕಜ್ ಕೊಲೆಯಾದ ಯೋಧ. ಮೂರು ದಿನಗಳ ಹಿಂದೆ ಪಂಕಜ್ ರನ್ನು ಮುರಳಿಕೃಷ್ಣ ಹಾಗೂ ಧನರಾಜ್ ಎಂಬ ಯೋಧರೇ ಕೊಲೆ ಮಾಡಿದ್ದರು. ಪಂಕಜ್ ಮೂಲತ ಉತ್ತರಪ್ರದೇಶದವರಾಗಿದ್ದು, ಆರೋಪಿಗಳಿಬ್ಬರು ಆಂಧ್ರಪ್ರದೇಶದವರು ಎಂದು ತಿಳಿದು ಬಂದಿದೆ.

    ಇದೇ ತಿಂಗಳು 23ರಂದು ಘಟನೆ ನಡೆದಿದ್ದು, ಪಂಕಜ್ ಕೊಠಡಿಯಲ್ಲಿ ಮಲಗಿದ್ದಾಗ ಹಗ್ಗದಿಂದ ಪಂಕಜ್ ನ ಕತ್ತು ಬಿಗಿದು ನಂತರ ಚಾಕುವಿನಿಂದ ಕತ್ತು ಕೊಯ್ದು ಆರೋಪಿಗಳಾದ ಮುರುಳಿಕೃಷ್ಣ ಮತ್ತು ಧನರಾಜ್ ಕೊಲೆಗೈದಿದ್ದಾರೆ ಎಂದು ಡಿಸಿಪಿ ಚಂದ್ರಗುಪ್ತ ಹೇಳಿದ್ದಾರೆ.

    ಏನಿದು ಪ್ರಕರಣ?
    ಮುರುಳಿಕೃಷ್ಣ ಕೊಲೆಯಾದ ಪಂಕಜ್ ಐಡಿ ಕಾರ್ಡ್ ನನ್ನು ಕದ್ದಿದ್ದ. ಐಡಿ ಕಾರ್ಡ್ ಕದ್ದ ನಂತರ ಈ ಬಗ್ಗೆ ಸೇನೆಯಲ್ಲಿ ಆಂತರಿಕ ತನಿಖೆ ಎದುರಿಸುತ್ತಿದ್ದ. ಕದ್ದಿರುವ ಬಗ್ಗೆ ಸಾಕ್ಷಿ ಹೇಳದಂತೆ ಪಂಕಜ್ ಅವರಿಗೆ ಧಮ್ಕಿ ಹಾಕಿದ್ದ. ಈ ಪ್ರಕರಣದಿಂದ ಹಿಂದೆ ಸರಿಯುವಂತೆ ಸಹ ಇಬ್ಬರು ಬೆದರಿಕೆ ಹಾಕಿದ್ದರು. ಆದರೆ ಪಂಕಜ್ ಇದಕ್ಕೆ ಒಪ್ಪದೇ ಇದ್ದಾಗ ಒಂದೇ ಊರಿನ ಸ್ನೇಹಿತನ ಜೊತೆ ಸೇರಿ ಮುರುಳಿಕೃಷ್ಣ ಕೊಲೆ ಮಾಡಿದ್ದಾನೆ.

    ಮುರುಳಿಕೃಷ್ಣ ಹಾಗೂ ಧನರಾಜ್, ಪಂಕಜ್ ರನ್ನು ಕೊಲೆ ಮಾಡಿದ ನಂತರ ಮೃತದೇಹವನ್ನು ಆರ್ಮಿ ಟ್ರಕ್ ನಲ್ಲಿ ತೆಗೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ರಾತ್ರೋ ರಾತ್ರಿ ಸುಟ್ಟು ಹಾಕಿದ್ದಾರೆ. ನಂತರ ಏನು ತಿಳಿಯದಂತೆ ನಾಟಕವಾಡಿ ಕೊಠಡಿಗೆ ಬಂದು ಮಲಗಿಕೊಂಡಿದ್ದಾರೆ ಎಂದು ಡಿಸಿಪಿ ಚಂದ್ರಗುಪ್ತ ತಿಳಿಸಿದ್ದಾರೆ.

    ಈ ಬಗ್ಗೆ ವಿವೇಕನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.