Tag: ಏಷ್ಯಾ ಬುಕ್ ಆಫ್ ರೆಕಾರ್ಡ್‌

  • 3 ವರ್ಷದ ನಿರಾಣಿ ಮೊಮ್ಮಗನಿಂದ ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌!

    3 ವರ್ಷದ ನಿರಾಣಿ ಮೊಮ್ಮಗನಿಂದ ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌!

    ಬಾಗಲಕೋಟೆ: ಮಾಜಿ ಸಚಿವ ಮುರುಗೇಶ್ ನಿರಾಣಿ (Murugesh Nirani) ಅವರ ಮೊಮ್ಮಗ ಸಮರ್ಥ ವಿಜಯ್ ನಿರಾಣಿ (Samarth Vijay Nirani) 3 ವರ್ಷ 1 ತಿಂಗಳಲ್ಲಿ ಗಾಲ್ಪ್ ಕಾರ್ಟ್ ಓಡಿಸಿ‌ ಇಂಡಿಯಾ ಬುಕ್ ಆಫ್‌ ರೆಕಾರ್ಡ್ (India Book Of Record), ಏಷ್ಯಾ ಬುಕ್ ಆಫ್‌ ರೆಕಾರ್ಡ್ (Asia book Of Record) ಬರೆದಿದ್ದಾನೆ‌.

    ಸಮರ್ಥ ಚಿಕ್ಕಂದಿನಿಂದಲೂ ಎಲೆಕ್ಟ್ರಿಕ್ ಕಾರುಗಳನ್ನು (Electric Car) ಓಡಿಸುತ್ತಿದ್ದ. ಒಂದು ದಿನ ಕಾರ್ಖಾನೆ ವೀಕ್ಷಣೆ ಮಾಡುವುದಕ್ಕೆ ಈಗ ಇರುವ ಗಾಲ್ಪ್ ಕಾರ್ಟ್ (Golf Cart) ಓಡಿಸುತ್ತೇನೆ ಎಂದು ಹಠ ಮಾಡಿದಾಗ ಈತನಿಗೆ ಒಮ್ಮೆ ಕಾರ್ಟ್ ಓಡಿಸುವ ಬಗ್ಗೆ ಮನೆಯವರು ಮಾಹಿತಿ ನೀಡಿದ್ದರು.

    ಒಂದು ಸಾರಿ ನೋಡಿ ತಿಳಿದುಕೊಂಡ ಸಮರ್ಥ ಮೂರು ವರ್ಷ ಹತ್ತು ತಿಂಗಳಲ್ಲೇ ಗಾಲ್ಪ್ ಕಾರ್ಟ್ ವಾಹನ ಓಡಿಸಿ ಮನೆಯವರಿಗೆ ಅಚ್ಚರಿ ಮೂಡಿಸಿದ್ದ. ತಾನೊಬ್ಬನೇ ಅಲ್ಲದೇ ತಂದೆ ವಿಜಯ್, ತಾಯಿ ಸುಶ್ಮಿತಾ, ಅಜ್ಜಿ ಕಮಲಾ ನಿರಾಣಿ ಸೇರಿದಂತೆ ಎಲ್ಲಾ ಕುಟುಂಬಸ್ಥರನ್ನು ಕೂರಿಸಿಕೊಂಡು ಗಾಲ್ಪ್ ಕಾರ್ಟ್ ಓಡಿಸಿದ್ದ.  ಇದನ್ನೂ ಓದಿ: ಹಾಸನಾಂಬೆ ಹುಂಡಿ ಎಣಿಕೆ – 9 ದಿನದಲ್ಲಿ 12.63 ಕೋಟಿ ಹಣ ಸಂಗ್ರಹ

    ಸಮರ್ಥನ ಪ್ರತಿಭೆಯನ್ನು ನೋಡಿ ಮುರುಗೇಶ್ ನಿರಾಣಿ, ಅವರ ಮಗ ವಿಜಯ್ ಹಾಗೂ ಪತ್ನಿ ಸುಶ್ಮಿತಾ ಅವರು ಇಂಡಿಯಾ ಬುಕ್ ಆಫ್‌ ರೆಕಾರ್ಡ್ ಹಾಗೂ ಏಷ್ಯಾ ಬುಕ್ ಆಫ್‌ ರೆಕಾರ್ಡ್ ಸಂಸ್ಥೆಗೆ ವಿಡಿಯೋ ಮಾಡಿ‌ ಕಳುಹಿಸಿದ್ದರು.

    ವಿಡಿಯೋ ಗಮನಿಸಿ ಮುಧೋಳ‌ ನಗರಕ್ಕೆ ಬಂದ ಇಂಡಿಯಾ, ಏಷಿಯಾ ಬುಕ್ ಆಫ್‌ ರೆಕಾರ್ಡ್ ಜಡ್ಜ್‌ಗಳು ಸ್ಥಳದಲ್ಲಿ ಪರೀಕ್ಷೆ ‌ಮಾಡಿದ್ದಾರೆ. ಬಾಲಕ ಸಮರ್ಥನ ಚಾಲನೆ ಕಂಡು ಇಂಡಿಯಾ ಬುಕ್ ಆಫ್‌ ರೆಕಾರ್ಡ್, ಏಷ್ಯಾ ಬುಕ್ ಆಫ್‌ ರೆಕಾರ್ಡ್ ಪ್ರಶಸ್ತಿ ಪದ‌ಕ‌ ನೀಡಿ ಗೌರವಿಸಿದ್ದಾರೆ.

    ಸಮರ್ಥ ಕೇವಲ ಎರಡು ವರ್ಷದವನಿದ್ದಾಗಲೂ 22 ಸಂಸ್ಕೃತ ಶ್ಲೋಕ ಹೇಳಿ ಸುದ್ದಿಯಾಗಿದ್ದ. ಲಿಮ್ಕಾ ಹಾಗೂ ಗಿನ್ನಿಸ್ ದಾಖಲೆಗೂ ಅರ್ಜಿ ಸಲ್ಲಿಸಿದ್ದು ಅಲ್ಲೂ ಕೂಡ ದಾಖಲೆ ಬರೆಯುತ್ತಾನೆ ಎಂಬ ವಿಶ್ವಾಸದಲ್ಲಿ ಸಮರ್ಥನ ಪೋಷಕರಿದ್ದಾರೆ.

  • ಡಾ. ವಿಷ್ಣುವರ್ಧನ್ ಹೆಸರಿನಲ್ಲಿ ಮತ್ತೊಂದು ದಾಖಲೆ

    ಡಾ. ವಿಷ್ಣುವರ್ಧನ್ ಹೆಸರಿನಲ್ಲಿ ಮತ್ತೊಂದು ದಾಖಲೆ

    ಸಾಹಸ ಸಿಂಹ ಡಾ. ವಿಷ್ಣುವರ್ಧನ್ (Dr. Vishnuvardhan) ಹೆಸರಿನಲ್ಲಿ ಮತ್ತೊಂದು ದಾಖಲೆ (Record) ಸೃಷ್ಟಿಯಾಗಿದೆ. ವೀರಕಪುತ್ರ ಶ್ರೀನಿವಾಸ್ ಮತ್ತು ವಿಷ್ಣು ಸೇನಾನಿಗಳು ವಿಷ್ಣುವರ್ಧನ್ ಹುಟ್ಟು ಹಬ್ಬದಂದು ಕಟೌಟ್ ಜಾತ್ರೆ ಮಾಡಿದ್ದರು. ನೆಚ್ಚಿನ ನಟನ 52 ಕಟೌಟ್‌ಗಳನ್ನು ಅಂದು ಬೆಂಗಳೂರಿನ ಬಾಲಣ್ಣ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್ ಅವರ ಸ್ಮಾರಕದ ಮುಂದೆ ನಿಲ್ಲಿಸಿದ್ದರು. ಇದನ್ನು ಪರಿಗಣಿಸಿ ಏಷ್ಯಾ ಬುಕ್ ಮತ್ತು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಅದು ದಾಖಲಾಗಿದೆ.

    ಈ ಕುರಿತು ಮಾತನಾಡಿರುವ ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ‘ಯಜಮಾನರು ಈಗಾಗಲೇ ಹಲವು ದಾಖಲೆಗಳನ್ನು ಬರೆದಿದ್ದಾರೆ. ಅವೆಲ್ಲವೂ ಯಾರೂ ಅಳಿಸಲಾಗದ ದಾಖಲೆಗಳಾಗಿ ಉಳಿದಿವೆ. ಇದೀಗ ಅವರ ಹೆಸರು ಏಷ್ಯಾ ಬುಕ್‌ ಮತ್ತು ಇಂಟರ್‌ ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ದಾಖಲಾಗಿದ್ದು ಹೆಮ್ಮೆ ಅನಿಸುತ್ತದೆ’ ಎಂದರು.

    ಈ ದಾಖಲೆಗೆ ಕಾರಣೀಕರ್ತರಾದ ಎಲ್ಲಾ ಐವತ್ತು ಸೇನಾನಿಗಳಿಗೆ ನನ್ನ ಮನದಾಳದ ಅಭಿನಂದನೆಗಳು. ನಿಮ್ಮಿಂದಲೇ ಇದು ಸಾಧ್ಯವಾಗಿದ್ದು ಎಂದಿದ್ದಾರೆ ಶ್ರೀನಿವಾಸನ್. ಇನ್ನೂ ಹಲವು ದಾಖಲೆಗಳಿಗೆ ಕಟೌಟ್ ಜಾತ್ರೆಯು ಕಾರಣವಾಗಲಿ ಎಂದೂ ಅವರು ಮಾತನಾಡಿದ್ದಾರೆ.

    ಭಾರತೀಯ ಸಿನಿಮಾ ರಂಗದಲ್ಲಿ ಈವರೆಗೂ ಯಾರೂ ಮಾಡದೇ ಇರುವ ದಾಖಲೆ ಇದಾಗಿದ್ದು, ಕನ್ನಡದ ನಟರೊಬ್ಬರು ಇಂತಹ ದಾಖಲಗೆ ಅರ್ಹರಾಗಿದ್ದು, ಅಭಿಮಾನಿಗಳಿಗೆ ಸಹಜವಾಗಿಯೆ ಸಂಭ್ರಮ ತಂದಿದೆ. ಈ ಕಟೌಟ್ ಜಾತ್ರೆಯು ಮಾದರಿಯಾಗಿದೆ.

    ಡಾ. ವಿಷ್ಣುವರ್ಧನ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 50 ವರ್ಷಗಳಾದ ಹಿನ್ನಲೆಯಲ್ಲಿ ಅವರ 50 ಸೇನಾನಿಗಳು ಡಾ. ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ ಅವರ ನೇತೃತ್ವದಲ್ಲಿ 2022ರ ಸೆಪ್ಟೆಂಬರ್‌ 18 ರಂದು ಬೆಂಗಳೂರಿನ ಡಾ. ವಿಷ್ಣು ಪುಣ್ಯಭೂಮಿಯಲ್ಲಿ 51 ಬೃಹತ್‌ ಕಟೌಟ್‌ಗಳನ್ನು ಸ್ಥಾಪಿಸಿ ‘ಕಟೌಟ್‌ ಜಾತ್ರೆ’ ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಆ ಕಟೌಟ್‌ಗಳಿಗೆ ಬೃಹತ್‌ ಹಾರಗಳನ್ನು ಸಹ ಹಾಕಿಸಿದ್ದರು. ಪೊಲೀಸ್‌ ಇಲಾಖೆಯ ಪ್ರಕಾರ ಎರಡೂವರೆ ಲಕ್ಷ ಕನ್ನಡಿಗರು ಈ ಕಟೌಟ್‌ ಜಾತ್ರೆಯಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ಒಂದೇ ಸಿನಿಮಾದಲ್ಲಿ ರಜನಿಕಾಂತ್-ಕಮಲ್ ಹಾಸನ್

    ಅಂದೇ ಈ ಕಟೌಟ್‌ ಜಾತ್ರೆಯನ್ನು ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ದಾಖಲಿಸಲು ಮನವಿಯನ್ನು ಸಲ್ಲಿಸಲಾಗಿತ್ತು. ಆ ಸಂಸ್ಥೆಯು ನಮ್ಮ ದಾಖಲೆ ಸಂಬಂಧ ಅನೇಕ ಹಂತದ ಪರೀಕ್ಷೆಗಳನ್ನು ನಡೆಸಿದರಲ್ಲದೆ, ಖುದ್ದಾಗಿ ಸ್ಥಳ ಪರಿಶೀಲನೆಯನ್ನು ಸಹ ಮಾಡಿದ್ದರು. ಇದೀಗ ಆ ಎಲ್ಲಾ ಹಂತದ ಪರೀಕ್ಷೆಗಳೂ ಮುಗಿದಿದ್ದು, ಈ ಕಟೌಟ್ ಜಾತ್ರೆಯು ಏಷ್ಯಾ ಬುಕ್‌ ಆಫ್‌ ‌ ರೆಕಾರ್ಡ್‌ನಲ್ಲಿ ದಾಖಲೆಯಾಗಿ ದಾಖಲೆಯಾಗಿದೆ. ಆ ದಾಖಲೆಯ ಸರ್ಟಿಫಿಕೇಟ್‌ ಮತ್ತು ಪದಕ ಇಂದು ನಮಗೆ ತಲುಪಿದವು.

    ತೆರೆಮುಂದೆ ತೆರೆಹಿಂದೆ ನುಡಿದಂತೆ ನಡೆದ ಮೇರುನಟನ ಹೆಸರಲ್ಲಿ ಇಂತಹದ್ದೊಂದು ದಾಖಲೆಯನ್ನು ಅವರಿಲ್ಲದ ಹೊತ್ತಿನಲ್ಲಿ ಸ್ಥಾಪಿಸಲು ಸಾಧ್ಯವಾಗಿದ್ದಕ್ಕೆ ನಿಜಕ್ಕೂ ಹೆಮ್ಮೆಪಡುತ್ತೇವೆ. ಈ ದಾಖಲೆಯು ಡಾ. ವಿಷ್ಣುವರ್ಧನ್ ಅವರ ಅಗಲಿಕೆಯ 13 ವರ್ಷಗಳ ನಂತರವೂ ಅವರ ನೆನಪನ್ನು ಹಸಿರಾಗಿಡುವ ಕೆಲಸವನ್ನು ಅವರ ಅಭಿಮಾನಿಗಳು ನಿರಂತರವಾಗಿ ಮಾಡುತ್ತಿರುವುದರ ದ್ಯೋತಕವಾಗಿದೆ. ಈ ಕಟೌಟ್‌ ಜಾತ್ರೆಗೆ ಬೆನ್ನೆಲುಬಾಗಿ ನಿಂತ 50 ಸೇನಾನಿಗಳಿಗೆ, ಯೋಜನೆ ಕರ್ಯಸಾಧುಗೊಳಿಸಿದ ಆನಂದ್‌ ರಾಚ್‌, ಕಟೌಟ್‌ ವಿನ್ಯಾಸ ಮಾಡಿದ ರಾಜುವಿಷ್ಣು ಮತ್ತು ಈ ಸಂಸ್ಥೆಗಳ ಜೊತೆ ಸಂವಹನ ನಡೆಸಿ, ಸಾಧ್ಯವಾಗಿಸಿದ ಸಾಹಿತಿ ಜನಾರ್ಧನ್‌ ರಾವ್‌ ಅವರಿಗೆ ಧನ್ಯವಾದಗಳನ್ನು ಅರ್ಪಿಸಲು ಇಚ್ಚಿಸುತ್ತೇನೆ ಎಂದಿದ್ದಾರೆ ವೀರಕಪುತ್ರ ಶ್ರೀನಿವಾಸ್. ಇದನ್ನೂ ಓದಿ: ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಫಿಲ್ಮ್ ಚೇಂಬರ್ ಅಧ್ಯಕ್ಷರ ನಿಯೋಗ