Tag: ಏರ್ ಶೋ

  • ಏರ್ ಶೋನಿಂದ ಟ್ರಾಫಿಕ್ ಬಿಸಿ – 1 ಕಿ.ಮೀ ಜಾಮ್

    ಏರ್ ಶೋನಿಂದ ಟ್ರಾಫಿಕ್ ಬಿಸಿ – 1 ಕಿ.ಮೀ ಜಾಮ್

    ಬೆಂಗಳೂರು: ಇಂದಿನಿಂದ ಯಲಹಂಕದ ವಾಯುನೆಲೆಯಲ್ಲಿ ಏರೋ ಇಂಡಿಯಾ ಶೋ ಆರಂಭವಾಗಿದ್ದು, ಇದರಿಂದ ಟ್ರಾಫಿಕ್‍ಗೂ ಬಿಸಿ ತಟ್ಟಿದೆ.

    ಯಲಹಂಕ ಏರ್ ಪೋರ್ಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಯಲಹಂಕ ವಾಯನೆಲೆ ಹತ್ತಿರ ಒಂದು ಕಿಲೋ ಮೀಟರ್ ಟ್ರಾಫಿಕ್ ಜಾಮ್ ಆಗಿದೆ. ವಾಹನಗಳು ಬೆಂಗಳೂರು ನಗರ ಮತ್ತು ಬೇರೆ ಬೇರೆ ಕಡೆಗಳಿಂದ ಏರೋ ಶೋ ಕಡೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಹೋಗುವವರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಇಂದು ಏರ್ ಶೋ 2019ಕ್ಕೆ ಚಾಲನೆ- ಹೇಗಿರಲಿದೆ ಇಂದಿನ ಏರ್ ಶೋ?

    ಏರ್ ಪೋರ್ಟ್ ರಸ್ತೆ ಯಲಹಂಕ ವಾಯನೆಲೆ ಹತ್ತಿರ ಗಣ್ಯ, ಅತಿಗಣ್ಯ, ತುರ್ತು ವಾಹನ, BMTC, KSRTC ಹೊರತುಪಡಿಸಿ ಸಾರಿಗೆ ಸಂಚಾರಕ್ಕೆ ನಿಷೇಧ ಮಾಡಲಾಗಿದೆ. ಇತ್ತ ಹೆಬ್ಬಾಳ ಫ್ಲೈಓವರ್ ನಿಂದ MVIT ಜಂಕ್ಷನ್‍ವರೆಗೂ ಭಾರೀ ವಾಹನ ಸಂಚಾರವನ್ನು ನಿಷೇಧಿಸಿದ್ದು, ಲಾರಿ, ಟ್ರಕ್, ಖಾಸಗಿ ಬಸ್ ಇತರೆ ಭಾರೀ ಸರಕು ಸಾಗಾಣೆ ವಾಹನ ನಿಷೇಧ ಮಾಡಲಾಗಿದೆ.

    ಬೆಂಗಳೂರು, ಹೈದರಾಬಾದ್, ಚಿಕ್ಕಬಳ್ಳಾಪುರ ಕಡೆಗಳಿಂದ ಹೋಗುವ ಬರುವ ವಾಹನಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಇತ್ತ ಏರ್ ಪೋರ್ಟ್ ರಸ್ತೆ, ದೊಡ್ಡಬಳ್ಳಾಪುರ ರಸ್ತೆಗಳ ರಸ್ತೆ ಬದಿ ವಾಹನಗಳನ್ನು ಪಾರ್ಕಿಂಗ್ ಮಾಡುವಾಗಿಲ್ಲ. ನಾಗೇನಹಳ್ಳಿ ಗೇಟ್‍ನಿಂದ ಗಂಟಿಗಾನಹಳ್ಳಿ ಮೂಲಕ ಆ್ಯಂಬಿಯನ್ಸ್ ಡಾಬಾವರೆಗೆ ರಸ್ತೆ ಬದಿ ವಾಹನಗಳ ಪಾರ್ಕಿಂಗ್ ನನ್ನು ನಿಷೇಧಿಸಲಾಗಿದೆ.

    ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸುಗಮ ಸಂಚಾರ ವ್ಯವಸ್ಥೆಗಾಗಿ 3 ಡಿಸಿಪಿ, 7 ಎಸಿಪಿ, 33 ಪೊಲೀಸ್ ಇನ್ಸ್ ಪೆಕ್ಟರ್ಸ್, 137 ಪಿಎಸ್‍ಐ, 211 ಎಸ್‍ಡಿಐ, 447 ಹೆಡ್ ಕಾನ್ಸ್ ಟೇಬಲ್ ಮತ್ತು 648 ಪಿಸಿಗಳು ಸೇರಿದಂತೆ ಒಟ್ಟು 1478 ಜನ ಸಂಚಾರಿ ಪೊಲೀಸರ ನಿಯೋಜನೆಯನ್ನು ಮಾಡಲಾಗಿದೆ.

    ಪರ್ಯಾಯ ಮಾರ್ಗ:
    ಮೇಖ್ರಿ, ಹೆಬ್ಬಾಳ ಭಾಗದಲ್ಲಿ ಟ್ರಾಫಿಕ್ ಬಿಸಿ ತಟ್ಟೋದ್ರಿಂದ ಕೆಐಎಎಲ್‍ಗೆ ಹೋಗುವ ಪ್ರಯಾಣಿಕರಿಗೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಪಶ್ಚಿಮ ಭಾಗದಿಂದ ಕೆಂಪೇಗೌಡ ಏರ್ ಪೋರ್ಟ್ ಗೆ ಹೋಗುವವರು ಗೊರುಗುಂಟೆ ಪಾಳ್ಯ, ಬಿಇಎಲ್ ಮಾರ್ಗ, ಗಂಗಮ್ಮ ಸರ್ಕಲ್, ದೊಡ್ಡಬಳ್ಳಾಪುರ ರಸ್ತೆಯಿಂದ ಹೋಗಬಹುದು. ಪೂರ್ವ ಭಾಗ, ಕೆಆರ್ ಪುರಂ, ಹೆಣ್ಣೂರು ಮಾರ್ಗವಾಗಿ ಸಾಗಬಹುದು. ದಕ್ಷಿಣ ಭಾಗ ಮೈಸೂರು ರಸ್ತೆ ನಾಯಂಡಹಳ್ಳಿ ಮಾರ್ಗವಾಗಿ ಬಿಇಎಲ್ ಮಾರ್ಗವಾಗಿ ಕೆಐಎಎಲ್‍ಗೆ ತಲುಪಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಏರ್ ಶೋ ಅಬ್ಬರದಲ್ಲಿ ನಾಗರ ಹಾವುಗಳ ಮಾರಣಹೋಮ

    ಏರ್ ಶೋ ಅಬ್ಬರದಲ್ಲಿ ನಾಗರ ಹಾವುಗಳ ಮಾರಣಹೋಮ

    ಬೆಂಗಳೂರು: ಭಾರತದ ಹೆಮ್ಮೆಯ ಏರ್ ಶೋಗೆ ಬೆಂಗಳೂರಿನಲ್ಲಿ ಇಂದಿನಿಂದ ಚಾಲನೆ ಸಿಗಲಿದೆ. ಏರ್ ಶೋಗೂ ಮುನ್ನ ಈ ಬಾರಿ ಮರೆಯಲಾರದ ದುರಂತ ನಡೆದು ಹೋಗಿದೆ. ಆದರೆ ಪ್ರತಿ ಬಾರಿಯ ಏರ್ ಶೋನಲ್ಲಿ ಕೂಡ ಮಾರಣಹೋಮಕ್ಕೆ ಮುಹೂರ್ತ ಫಿಕ್ಸ್ ಆದಂತೆ ಅಮಾಯಕ ಜೀವಗಳ ನೆತ್ತರು ಏರ್ ಶೋ ಅಬ್ಬರದಲ್ಲಿ ಸದ್ದಿಲ್ಲದೇ ಹರಿದುಹೋಗುತ್ತದೆ.

    ನೀಲನಭದಲ್ಲಿ ಲೋಹದ ಹಕ್ಕಿಗಳ ಕಲರವ ಆಗಸದಲ್ಲಿ ಶತ್ರುಗಳ ಎದೆ ನಡುಗಿಸುವ ಯುದ್ಧ ವಿಮಾನದ ವೈಮಾನಿಕ ಪ್ರದರ್ಶನ ಇಂದಿನಿಂದ ನಡೆಯಲಿದೆ. ಇದು ಬೆಂಗಳೂರಿನ ಹೆಮ್ಮೆ ಕೂಡ. ಆದರೆ ಪ್ರತಿವರ್ಷವೂ ಏರ್ ಶೋ ಸಮಯದಲ್ಲಿ ನಾಗರಹಾವುಗಳ ರಕ್ತತರ್ಪಣವೇ ನಡೆಯುತ್ತೆ. ಏರ್ ಶೋ ನಡೆಯುವ ಸ್ಥಳ ನಾಗರಹಾವುಗಳ ಅವಾಸಸ್ಥಾನವಾಗಿದೆ.

    ಏರ್ ಶೋ ಸಮಯದಲ್ಲಿ ಭೂಮಿ ವೈಬ್ರೇಟ್ ಆಗೋದ್ರಿಂದ ಹಾವುಗಳು ಹೊರ ಬರುತ್ತೆ. ಏರ್ ಶೋ ಸಮಯದಲ್ಲಿ ಸಾಕಷ್ಟು ಜನ ಬರೋದ್ರಿಂದ ಹಾವುಗಳನ್ನು ಕಂಡ ತಕ್ಷಣ ಜನ ಅಥವಾ ಅಲ್ಲಿನ ಸೆಕ್ಯೂರಿಟಿ ಸಿಬ್ಬಂದಿ ಕೊಲ್ಲುತ್ತಾರಂತೆ. ಪ್ರತಿ ಏರ್ ಶೋ ಸಮಯದಲ್ಲಿ 20 ರಿಂದ 25 ನಾಗರಹಾವುಗಳು ಸಾವನ್ನಪ್ಪುತ್ತವಂತೆ.

    ಹಾವುಗಳ ಮಾರಣ ಹೋಮ ತಡೆಯೋದಕ್ಕೆ ಈ ಬಾರಿ ಉರಗ ತಜ್ಞರು ಸ್ವಯಂಪ್ರೇರಿತರಾಗಿ ಏರ್ ಶೋಗೆ ಹೋಗುವ ಚಿಂತನೆಯಲ್ಲಿದ್ದಾರೆ. ಬಿಬಿಎಂಪಿಯಿಂದ ಕೂಡ ಈ ಬಾರಿ ಹೆಚ್ಚುವರಿಯಾಗಿ ಉರಗತಜ್ಞರನ್ನು ನೇಮಕ ಮಾಡಿದ್ದು ಹಾವುಗಳನ್ನು ಕೊಲ್ಲದೇ ನಾವೇ ಸೂಕ್ತ ಸ್ಥಳಕ್ಕೆ ರಕ್ಷಣೆ ಮಾಡಿ ರವಾನಿಸುತ್ತೇವೆ. ಹಾವುಗಳು ಭಯಕ್ಕೆ ಹೊರಗಡೆ ಬರುತ್ತವೆ. ಆದ್ರೆ ದಯವಿಟ್ಟು ಅವುಗಳನ್ನು ಕೊಲ್ಲದೆ ನಮಗೆ ಮಾಹಿತಿ ನೀಡಿ ಎಂದು ಉರಗ ತಜ್ಞರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂದು ಏರ್ ಶೋ 2019ಕ್ಕೆ ಚಾಲನೆ- ಹೇಗಿರಲಿದೆ ಇಂದಿನ ಏರ್ ಶೋ?

    ಇಂದು ಏರ್ ಶೋ 2019ಕ್ಕೆ ಚಾಲನೆ- ಹೇಗಿರಲಿದೆ ಇಂದಿನ ಏರ್ ಶೋ?

    ಬೆಂಗಳೂರು: ಸೂರ್ಯಕಿರಣ್ ಆಗಸದಿಂದ ಧರೆಗುರುಳಿದ ಕಹಿ ನೆನಪಿನ ಮಧ್ಯೆಯೇ ಇಂದು ಬೆಂಗಳೂರಿನಲ್ಲಿ ಏರ್ ಶೋ 2019 ನಡೆಯಲಿದೆ. ಯಲಹಂಕ ವಾಯುನೆಲೆಯಲ್ಲಿ ದೇಶ-ವಿದೇಶದ ಯುದ್ಧ ವಿಮಾನಗಳ ಖದರ್ ಮಧ್ಯೆಯೇ ನಭೋಮಂಡಲದಲ್ಲಿ ತ್ರಿವರ್ಣ ಧ್ವಜದ ಚಿತ್ತಾರ ಮೂಡಿಸಿ ದೇಶಭಕ್ತಿಯ ಕಿಚ್ಚು ಹಚ್ಚುತ್ತಿದ್ದ ಸೂರ್ಯಕಿರಣ್ ಇಲ್ಲದೆ ಈ ಬಾರಿ ಏರ್ ಶೊ ಕೊಂಚ ಸಪ್ಪೆಯಾಗಲಿದೆ.

    ನೀಲನಭದಲ್ಲಿ ಸಾರಂಗದ ವೈಯಾರ ಸೂರ್ಯಕಿರಣನ ನರ್ತನ, ಆಗಸದಲ್ಲಿ ಯುದ್ಧ ವಿಮಾನಗಳ ಘರ್ಜನೆ. ಇದರ ಮಧ್ಯೆಯೇ ಆಗಸವನ್ನೇ ಸೀಳಿಕೊಂಡು ಥೇಟು ಹೀರೋನಂತೆ ಎಂಟ್ರಿ ಕೊಡಲಿರುವ ಸುಖೋಯ್ ಹಾಗೂ ಎಲ್ಲರ ಗಮನ ಸೆಳೆದ ರಫೇಲ್ ಆಗಮನವಾಗಲಿದೆ.

    ಇಂದು ಬೆಳಗ್ಗೆ 10 ಗಂಟೆಗೆ ಏರ್ ಶೋ ಉದ್ಘಾಟನೆಯಾಗಲಿದ್ದು, ಫೆ. 24ರವರೆಗೆ ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳ ಕಲರವ ಶುರುವಾಗಲಿದೆ. ಆದರೆ ಮಂಗಳವಾರ ಸೂರ್ಯಕಿರಣ್ ಲಘು ಯುದ್ಧ ವಿಮಾನ ತಾಲೀಮು ನಡೆಸುವ ವೇಳೆಯೇ ಧರೆಗುರುಳಿರೋದ್ರಿಂದ ಇಂದು ಸೂರ್ಯಕಿರಣ್ ನಭದಲ್ಲಿ ಕೌತುಕ ಮೂಡಿಸಲ್ಲ. ಏರ್ ಶೋನಲ್ಲಿ ಸೂರ್ಯನಿಲ್ಲದೆ ಈ ಬಾರಿ ಕೊಂಚ ಶೋ ಡಲ್ ಆಗಲಿದೆ.

    ರೆಕ್ಕೆ ಬಡಿಯದ ಹಕ್ಕಿಗಳ ಕಸರತ್ತು ಹೀಗಿರಲಿದೆ..
    * ರಫೇಲ್ ಯುದ್ಧ ವಿಮಾನದ ಪ್ರದರ್ಶನ
    * ಅಮೇರಿಕಾದಿಂದ ಹಾರಿಬಂದಿದೆ ಗ್ಲೋಬ್ ಮಾಸ್ಟರ್ ದೈತ್ಯವಿಮಾನ
    * ಎಚ್‍ಎಲ್‍ನಿಂದ ಪ್ರದರ್ಶನವಾಗಲಿದೆ ಅತ್ಯಂತ ಪುಟ್ಟ ವಿಮಾನ
    * ದೇಶ ವಿದೇಶದ ಸುಮಾರು 54 ದೇಶದ ಯುದ್ಧವಿಮಾನಗಳ ಪ್ರದರ್ಶನ
    * ಬ್ಯಾಟಿಕ್ಸ್ ಲಲನೆಯರಿಂದ ಯುದ್ಧವಿಮಾನದಲ್ಲಿಯೇ ನರ್ತನ
    * ಸಾರಂಗ್ ಅಬ್ಬರ ಧ್ರುವ ಹಾರಾಟ ತೇಜಸ್ ಸುಖೋಯ್ ಅದ್ಭುತ ಪ್ರದರ್ಶನ
    * ಸ್ವೀಡನ್ ಗ್ರೈಪೆನ್ ಯುದ್ಧ ವಿಮಾನ ಹಾರಾಟ

    ಟ್ರಾಫಿಕ್ ಬಿಸಿ:
    * ಏರ್ ಶೋ ಸಮಯದಲ್ಲಿ ಜನಸಾಗರ ನೆರೆಯೋದರಿಂದ ಟ್ರಾಫಿಕ್ ಬಿಸಿ ತಟ್ಟಲಿದೆ. ಮೇಖ್ರಿ, ಹೆಬ್ಬಾಳ ಭಾಗದಲ್ಲಿ ಟ್ರಾಫಿಕ್ ಬಿಸಿ ತಟ್ಟೋದ್ರಿಂದ ಕೆಐಎಎಲ್‍ಗೆ ಹೋಗುವ ಪ್ರಯಾಣಿಕರಿಗೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಪಶ್ಚಿಮ ಭಾಗದಿಂದ ಕೆಂಪೇಗೌಡ ಏರ್‍ಪೋರ್ಟ್‍ಗೆ ಹೋಗುವವರು ಗೊರುಗುಂಟೆ ಪಾಳ್ಯ, ಬಿಇಎಲ್ ಮಾರ್ಗ, ಗಂಗಮ್ಮ ಸರ್ಕಲ್, ದೊಡ್ಡಬಳ್ಳಾಪುರ ರಸ್ತೆಯಿಂದ ಹೋಗಬಹುದು. ಪೂರ್ವ ಭಾಗ, ಕೆಆರ್ ಪುರಂ, ಹೆಣ್ಣೂರು ಮಾರ್ಗವಾಗಿ ಸಾಗಬಹುದು. ದಕ್ಷಿಣ ಭಾಗ ಮೈಸೂರು ರಸ್ತೆ ನಾಯಂಡಹಳ್ಳಿ ಮಾರ್ಗವಾಗಿ ಬಿಇಎಲ್ ಮಾರ್ಗವಾಗಿ ಕೆಐಎಎಲ್‍ಗೆ ತಲುಪಬಹುದು.

    ಆನ್‍ಲೈನ್‍ನಲ್ಲಿ ಏರ್ ಶೋ ಟಿಕೆಟ್ ಬುಕ್ ಮಾಡಿಕೊಂಡು ಏರ್ ಶೋವನ್ನು ಕಣ್ತುಂಬಿಸಿಕೊಳ್ಳಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 1 ಸಾವಿರ ಅಡಿಯಿಂದ ಬಿದ್ದರೂ ಇಬ್ಬರು ಪೈಲಟ್‍ಗಳು ಬಚಾವ್ – ಮತ್ತೊಬ್ಬ ಪೈಲಟ್ ಸಾವಿಗೆ ಕಾರಣವೇನು?

    1 ಸಾವಿರ ಅಡಿಯಿಂದ ಬಿದ್ದರೂ ಇಬ್ಬರು ಪೈಲಟ್‍ಗಳು ಬಚಾವ್ – ಮತ್ತೊಬ್ಬ ಪೈಲಟ್ ಸಾವಿಗೆ ಕಾರಣವೇನು?

    ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಏರ್ ಶೋ 12ನೇ ಆವೃತ್ತಿಯ ಏರೋ ಇಂಡಿಯಾಗೆ ಬುಧವಾರ ಅಧಿಕೃತ ಚಾಲನೆ ಸಿಗಲಿದೆ. ಆದರೆ ಅದಕ್ಕೂ ಮುನ್ನವೇ ಮಂಗಳವಾರ ನಡೆದ ತಾಲೀಮಿನಲ್ಲಿ ಅವಘಡ ಸಂಭವಿಸಿದ್ದು ಸೂರ್ಯಕಿರಣ್ ಪೈಲಟ್ ಸಾಹಿಲ್ ಗಾಂಧಿ ದುರಂತದಲ್ಲಿ ಸಾವನ್ನಪ್ಪಿದ್ದರೆ, ಮತ್ತಿಬ್ಬರು ಪೈಲಟ್‍ಗಳಾದ ವಿಟಿ ಶೆಲ್ಕೆ ಹಾಗೂ ಸ್ಕ್ವಾಡ್ರನ್ ಲೀಡರ್ ತೇಜೇಶ್ವರ್ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದಾರೆ.

    ನಡೆದಿದ್ದೇನು?
    ಯಲಹಂಕ ವಾಯುನೆಲೆಯಲ್ಲಿ ಬೆಳಗ್ಗೆ 11.30ರ ಸುಮಾರಿಗೆ ಸೂರ್ಯ ಕಿರಣ್ ವಿಮಾನಗಳ ತಾಲೀಮು ಆರಂಭವಾಗಿತ್ತು. ಆಗಸದಲ್ಲಿ ಶಿಸ್ತು ಬದ್ಧವಾಗಿ ತಾಲೀಮು ನಡೆಯುತ್ತಿದ್ದಾಗ 11.35ರ ಸುಮಾರಿಗೆ ವಿಮಾನಗಳು ಮುಖಾಮುಖಿಯಾಗಿ ಡಿಕ್ಕಿಯಾಗಿತ್ತು. ಇದರ ಪರಿಣಾಮ ನಿಯಂತ್ರಣ ತಪ್ಪಿದ ವಿಮಾನಗಳು ನೆಲದತ್ತ ಉರುಳತೊಡಗಿತು.

    ವಿಮಾನದಲ್ಲೇ ಸಾವನ್ನಪ್ಪಿದ ಪೈಲಟ್:
    ಎರಡು ವಿಮಾನದಲ್ಲಿ 3 ಮಂದಿ ಪೈಲಟ್‍ಗಳು ಇದ್ದರು. ವಿಮಾನ ಡಿಕ್ಕಿಯಾಗುತ್ತಿದಂತೆ ಇಬ್ಬರು ಪೈಲಟ್‍ಗಳು ಪ್ಯಾರಾಚೂಟ್ ಸಹಾಯದಿಂದ ವಿಮಾನದಿಂದ ಕೆಳಗಡೆ ಹಾರಿದ್ದಾರೆ. ಆದರೆ ಕಾಕ್‍ಪಿಟ್ ಹಿಂದೆ ಕುಳಿತಿದ್ದ ಸಾಹಿದ್ ಗಾಂಧಿಗೆ ಮಾತ್ರ ವಿಮಾನದಿಂದ ಹೊರ ಬರಲು ಸಾಧ್ಯವಾಗಿರಲಿಲ್ಲ. ಅಂತಿಮ ಕ್ಷಣದವರೆಗೂ ಕಾಕ್ ಪಿಟ್ ಓಪನ್ ಮಾಡಲು ಎಷ್ಟೇ ಪ್ರಯತ್ನ ನಡೆಸಿದರೂ ಕೂಡ ವಿಮಾನ ಓಪನ್ ಆಗದ ಕಾರಣ ವಿಮಾನ ನೆಲಕ್ಕೆ ಉರುಳುತ್ತಿದಂತೆ ಸಾವನ್ನಪ್ಪಿದ್ದಾರೆ.

    ವಿಮಾನದ ಒಂದು ಭಾಗ ಸ್ಥಳೀಯ ಮನೆಯೊಂದರ ಮೇಲೆ ಬಿದ್ದ ಪರಿಣಾಮ ಮನೆ ಭಾಗಶಃ ಹಾನಿಯಾಗಿತ್ತು. ನೋಡ ನೋಡುತ್ತಿದಂತೆ ಧರೆಗುರುಳಿದ ವಿಮಾನ ಹೊತ್ತಿ ಉರಿಯತೊಡಗಿತು. ಇದಕ್ಕೂ ಮುನ್ನ ವಿಮಾನ ದಿಕ್ಕು ತಪ್ಪುತ್ತಿದ್ದಂತೆ ಎಚ್ಚೆತ್ತ ಇಬ್ಬರು ಪೈಲಟ್‍ಗಳು ಪ್ಯಾರಾಚೂಟ್ ಬಳಸಿ ಸಾವಿರ ಅಡಿ ಮೇಲಿನಿಂದ ಜಿಗಿದಿದ್ದರು. ಪ್ಯಾರಾಚೂಟ್ ಸಹಾಯವಿದ್ದರೂ ಕೂಡ 1 ಸಾವಿರ ಅಡಿ ಎತ್ತರದಿಂದ ಜಿಗಿದ ಪರಿಣಾಮ ಇಬ್ಬರು ಪೈಲಟ್‍ಗಳು ಗಂಭೀರವಾಗಿ ಗಾಯಗೊಂಡಿದ್ದರು. ಕ್ಷಣ ಮಾತ್ರದಲ್ಲಿ ನಡೆದ ಘಟನೆಯಿಂದ ಎಚ್ಚೆತ್ತ ಅಧಿಕಾರಿಗಳು ಏರ್ ಅಂಬುಲೆನ್ಸ್ ಹೆಲಿಕಾಪ್ಟರ್ ನಲ್ಲಿ ಇಬ್ಬರನ್ನು ಸೇನಾ ಆಸ್ಪತ್ರೆಗೆ ದಾಖಲಿಸಿದರು. ಬಹುಬೇಗ ಚಿಕಿತ್ಸೆ ಲಭಿಸಿದ ಕಾರಣ ಇಬ್ಬರು ಪೈಲಟ್‍ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಬಡವಾಣೆಯ ಜನ ಕಂಗಾಲು:
    ವಾಯುನೆಲೆಯ ಪಕ್ಕದ ದಂಡಿಗೆನಹಳ್ಳಿಯಲ್ಲಿ ಎರಡು ವಿಮಾನಗಳು ಧರೆಗೆ ಅಪ್ಪಳಿಸಿದವು. ಒಂದು ವಿಮಾನ ಬಡಾವಣೆಯ ಮನೆಗೆ ತಾಗಿಬಿದ್ದರೆ, ಮತ್ತೊಂದು ವಿಮಾನ 300 ಮೀಟರ್ ದೂರದ ಶೆಡ್ ಪಕ್ಕದಲ್ಲಿ ಬಿದ್ದಿದೆ. ಭಾರೀ ಶಬ್ಧ ಕೇಳಿ ಮನೆಯಿಂದ ಹೊರ ಬಂದ ಬಡಾವಣೆಯ ಜನ ಚೆಲ್ಲಾಪಿಲ್ಲಿಯಾಗಿ ಓಡಿ ಹೋಗಿದ್ದರು. ಕೂಡಲೇ 15ಕ್ಕೂ ಹೆಚ್ಚು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದವು. ಘಟನೆ ಕುರಿತು ಸಂಜೆ ವೇಳೆಗೆ ಅಧಿಕೃತ ಮಾಹಿತಿ ನೀಡಿದ ವಾಯುಪಡೆ ಪೈಲಟ್ ಸಾವನ್ನಪ್ಪಿದ್ದನ್ನು ಖಚಿತ ಪಡಿಸಿತ್ತು.

    ಶೋದಲ್ಲಿ ಸೂರ್ಯಕಿರಣ್ ಇರಲ್ಲ:
    ಈ ಬಾರಿ ಏರೋ ಶೋ ನಲ್ಲಿ ಸೂರ್ಯ ಕಿರಣ್ ಹಾರಾಟ ಇರುವುದಿಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ವಿಮಾನವನ್ನೂ ನಾವು ತಪಾಸಣೆ ಮಾಡಿ ಹಾರಾಟ ನಡೆಸುತ್ತೇವೆ. ಇಂದಿನ ಘಟನೆ ದುರದೃಷ್ಟಕರವಾಗಿದ್ದು, ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಈ ಬಗ್ಗೆ ಈಗಲೇ ಏನೂ ಹೇಳಲು ಆಗುವುದಿಲ್ಲ. ತನಿಖೆ ನಡೆದ ಬಳಿಕವಷ್ಟೇ ಸತ್ಯಾಸತ್ಯತೆ ತಿಳಿಯಲಿದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೂರ್ಯಕಿರಣ್ ಪತನ – ಓರ್ವ ಪೈಲಟ್ ಸಾವು, ಇಬ್ಬರು ಆಸ್ಪತ್ರೆಗೆ ದಾಖಲು: ಘಟನೆ ಹೇಗಾಯ್ತು?

    ಸೂರ್ಯಕಿರಣ್ ಪತನ – ಓರ್ವ ಪೈಲಟ್ ಸಾವು, ಇಬ್ಬರು ಆಸ್ಪತ್ರೆಗೆ ದಾಖಲು: ಘಟನೆ ಹೇಗಾಯ್ತು?

    ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ ಏರ್ ಶೋದ ಅಭ್ಯಾಸದ ವೇಳೆ ಸೂರ್ಯಕಿರಣ್ ವಿಮಾನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಪೈಲಟ್ ಸಾವನ್ನಪ್ಪಿದ್ದು, ಇಬ್ಬರು ಪೈಲಟ್‍ಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ.

    ಈ ಕುರಿತು ಮಾಹಿತಿ ನೀಡಿರುವ ಆಗ್ನಿಶಾಮಕ ದಳದ ಡಿಜಿಪಿ ಎಂಎನ್ ರೆಡ್ಡಿ ಅವರು, ಎರಡು ವಿಮಾನಗಳ ನಡುವೆ ಆಕಾಶದಲ್ಲೇ ಡಿಕ್ಕಿ ಸಂಭವಿಸಿದ್ದು, ಇದರಲ್ಲಿ ಪೈಲಟ್ ಒಬ್ಬರು ಸಾವನ್ನಪ್ಪಿದ್ದಾರೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

    ವಾಯುಪಡೆ ಅಧಿಕಾರಿಗಳು ಈ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡುತ್ತಾರೆ. ನಾಳೆ ಏರ್ ಶೋ ಬಗ್ಗೆಯೂ ಅವರ ಸ್ಪಷ್ಟಪಡಿಸಲಿದ್ದಾರೆ. ಅಪಘಾತ ಸಂಭವಿಸಲು ಕಾರಣ ಏನು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ವಾಯುಯಾನ ಇಲಾಖೆ ಘಟನೆ ಕುರಿತು ತನಿಖೆ ನಡೆಸಿ ಮಾಹಿತಿ ನೀಡಲಾಗುತ್ತದೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ಇಬ್ಬರು ಪೈಲಟ್‍ಗಳ ಸಾವಿನಿಂದ ಪಾರಾಗಿದ್ದಾರೆ. ಆದರೆ ಮೃತ ಪಟ್ಟ ಪೈಲಟ್ ಹೆಸರಿನ ಬಗ್ಗೆ ನನಗೆ ಮಾಹಿತಿ ಇಲ್ಲ. ಶೀಘ್ರವೇ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

    ಘಟನೆಯ ಪ್ರತ್ಯಕ್ಷದರ್ಶಿ ಮಾತನಾಡಿ, ಘಟನೆ ನಡೆದ ತಕ್ಷಣ ನಾವು ಸ್ಥಳಕ್ಕೆ ಬಂದಿದ್ದೇವು. ಆದರೆ ಕ್ಷಣಾರ್ಧದಲ್ಲಿ ಬೆಂಕಿ ಎಲ್ಲೆಡೆ ಹಬ್ಬಿತ್ತು. ಘಟನೆ ನಡೆದ ಸ್ಥಳದಲ್ಲೇ ಹುಲ್ಲಿನ ಬಣವೆ ಇದ್ದ ಕಾರಣ ಬೆಂಕಿ ಮತ್ತಷ್ಟು ಹೆಚ್ಚಾಯಿತು. ಒಂದು ಬದಿಯಲ್ಲಿ ಪೈಲಟ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅವರನ್ನು ಕೂಡಲೇ ಸೇನಾ ಅಧಿಕಾರಿಗಳು ಅವರನ್ನು ಆಸ್ಪತ್ರೆಗೆ ದಾಖಲಿಸುವ ಕಾರ್ಯ ನಡೆಸಿದರು. ಅಲ್ಲದೇ ವಿಮಾನದ ಭಾಗ ಮನೆಯ ಮೇಲೆ ಬಿದ್ದಿದ್ದು, ಮನೆಗೂ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.

    ಸ್ಥಳದಲ್ಲಿ ವ್ಯಕ್ತಿಯೊಬ್ಬರ ತಲೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆದರೆ ಇದರ ಬಗ್ಗೆ ಇನ್ನು ಅನುಮಾನ ಇದೆ. ಆದರೆ ಪೊಲೀಸರು ಸ್ಥಳಕ್ಕೆ ಬಂದ ವೇಳೆ ಅದು ವ್ಯಕ್ತಿಯ ತಲೆಯ ಭಾಗವೇ ಎಂದು ಮಾಹಿತಿ ನೀಡಿದ್ದರು. ಆ ಬಳಿಕ ಸಾರ್ವಜನಿಕರಿಗೆ ಸ್ಥಳಕ್ಕೆ ತೆರಳಲು ಅವಕಾಶ ನೀಡಲಿಲ್ಲ. ಉನ್ನತ ಮಟ್ಟದ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿಸಿದರು.

    ಸದ್ಯ ಘಟನೆ ನಡೆದ ಸ್ಥಳಕ್ಕೆ ವಾಯುಪಡೆ ಅಧಿಕಾರಿಗಳು, ತಾಂತ್ರಿಕ ವರ್ಗ ಸೇರಿದಂತೆ ಬೆಂಗಳೂರು ಪೊಲೀಸ್ ಕಮಿಷನರ್ ಸುನೀಲ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುರಂತದ ಕುರಿತು ಏರೋ ಇಂಡಿಯಾದಿಂದ ಇದೂವರೆಗೆ ಯಾವುದೇ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ.

    https://www.youtube.com/watch?v=S8anwX84c_8

    https://www.youtube.com/watch?v=0Ds2mZmS_PY

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯದುವೀರ್ ಒಡೆಯರಿಂದ ಸರಸ್ವತಿ ಪೂಜೆ- ಏರ್‌ಶೋ ಕಣ್ತುಂಬಿಕೊಂಡ ಪ್ರವಾಸಿಗರು

    ಯದುವೀರ್ ಒಡೆಯರಿಂದ ಸರಸ್ವತಿ ಪೂಜೆ- ಏರ್‌ಶೋ ಕಣ್ತುಂಬಿಕೊಂಡ ಪ್ರವಾಸಿಗರು

    ಮೈಸೂರು: ವಿಶ್ವ ವಿಖ್ಯಾತ ದಸರಾದ ಹಿನ್ನೆಲೆ ಮೈಸೂರು ಅರಮನೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸರಸ್ವತಿ ಪೂಜೆ ಮಾಡಿದರು.

    ಬೆಳಗ್ಗೆ 10:15 ರಿಂದ 10:45 ರ ವರೆಗೆ ಸಲ್ಲುವ ಶುಭಲಗ್ನದಲ್ಲಿ ಕನ್ನಡಿ ತೊಟ್ಟಿಯಲ್ಲಿ ಸರಸ್ವತಿ ಭಾವಚಿತ್ರಕ್ಕೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು. ನವರಾತ್ರಿ ಪೂಜಾ ಕೈಂಕರ್ಯಗಳಲ್ಲಿ ಸರಸ್ವತಿ ಪೂಜಾ ಪ್ರಧಾನವಾದ ಆಚರಣೆಯಾಗಿದೆ. ಇಂದು ಸಂಜೆ ದರ್ಬಾರ್ ನಂತರ ಕನ್ನಡಿ ತೊಟ್ಟಿಯಲ್ಲಿ ಕಾಳರಾತ್ರಿ ಪೂಜೆ, ಮಹಿಷಾಸುರನ ಸಂಹಾರ ನಡೆಯಲಿದೆ.

    ದಸರಾದ ಪ್ರಮುಖ ಅಕರ್ಷಣೆಯಾದ ಏರ್ ಶೋವನ್ನು ಸಚಿವ ಜಿಟಿ ದೇವೇಗೌಡ ಹಾಗೂ ಸಾರಾ ಮಹೇಶ್ ಉದ್ಘಾಟಿಸಿದರು. ನಗರದ ಬನ್ನಿ ಮಂಟಪದಲ್ಲಿ ನಡೆಯುತ್ತಿರುವ ವೈಮಾನಿಕ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಮುಗಿ ಬೀಳುತ್ತಿದ್ದಾರೆ.

    ಬಾನಂಗಳದಲ್ಲಿ ಲೋಹದ ಹಕ್ಕಿಗಳ ಹಾರಾಟ ಕಲರವದಿಂದ ಕೂಡಿದ್ದು, ಆಗಸದಲ್ಲಿ ಭಾರತದ ತ್ರಿವರ್ಣ ಧ್ವಜ ಮೂಡಿತು. ಆಗಸದಲ್ಲಿ ಯೋಧರಿಂದ ಸ್ಕೈ ಡೈವಿಂಗ್, ಸರ್ಜಿಕಲ್ ಆಪರೇಷನ್ ಸೇರಿದಂತೆ ನಾನಾ ಸಾಹಸ ಪ್ರದರ್ಶನ ನಡೆಯಿತು. ಬಾನೆತ್ತರದ ಸ್ಕೈಡೈವಿಂಗ್ ನೆರೆದಿದ್ದ ಪ್ರವಾಸಿಗರ ಮೈ ನವಿರೇಳಿಸಿತು. ಹೆಲಿಕಾಪ್ಟರ್ ನಿಂದ 115 ಅಡಿ ಎತ್ತರದಿಂದ ಯೋಧರು ಪುಷ್ಪಾರ್ಚನೆ ಮಾಡಿದರು.

    ಮೈಸೂರಿನ ಹಾಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಾಕು ಪ್ರಾಣಿಗಳು ಪ್ರದರ್ಶನ ಪ್ರಾಣಿ ಪ್ರಿಯರಲ್ಲಿ ಸಂತಸ ಮೂಡಿಸಿತು. ಈ ಪ್ರದರ್ಶನದಲ್ಲಿ ಡಾಬರ್ ಮನ್, ಜರ್ಮನ್ ಶೆಫರ್ಡ್, ಮುದೋಳ, ಡ್ಯಾಷೆಂಡ್, ಲ್ಯಾಬ್ರಡಾರ್, ರಾರಯಟ್, ವ್ಹೀಲರ್, ಪಿಟ್‍ಬುಲ್, ಸೇಂಟ್ ಬರ್ನಾಟ್, ಸೈಬೀರಿಯನ್ ಹಸ್ಕಿ ಸೇರಿದಂತೆ 21 ಜಾತಿಯ ನಾಯಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಾಣಿ ಪ್ರೀಯರ ಮನಸ್ಸು ಗೆದ್ದವು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರು ದಸರಾ: ಭಾನುವಾರ ನಡೆಯಲಿದೆ ಏರ್ ಶೋ

    ಮೈಸೂರು ದಸರಾ: ಭಾನುವಾರ ನಡೆಯಲಿದೆ ಏರ್ ಶೋ

    ಮೈಸೂರು: ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಭಾನುವಾರ ನಡೆಯಲಿರುವ ಏರ್ ಶೋ ಕಾರ್ಯಕ್ರಮದ ನಿಮಿತ್ತ ವಾಯುಪಡೆಯ ಹೆಲಿಕಾಪ್ಟರ್ ಗಳು ಶನಿವಾರ ಬನ್ನಿಮಂಟಪದಲ್ಲಿ ತಾಲೀಮು ನಡೆಸಿದವು.

    ಈ ಬಾರಿ ಮೈಸೂರು ದಸರಾ ಮಹೋತ್ಸವ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಈ ಬಾರಿ ವಿಶೇಷವಾಗಿ ವಾಯುಸೇನಾ ಪಡೆಗಳು ಏರ್ ಶೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇಂದು ಬನ್ನಿಮಂಟಪದಲ್ಲಿ ಇದರ ಪ್ರಾಯೋಗಿಕ ತಾಲೀಮನ್ನು ಕೈಗೊಂಡಿದ್ದವು. ಏರ್ ಫೋರ್ಸ್ ನ ವೀರಯೋಧರು ಅಗಸದಲ್ಲಿ ತ್ರಿವರ್ಣ ಧ್ವಜ ಮೂಡಿಸಿದ್ದರು. ಇದು ಪ್ರೇಕ್ಷಕರ ಗಮನವನ್ನು ಸೆಳೆದಿತ್ತು. ತಾಲೀಮಿನಲ್ಲೇ 5 ರಿಂದ 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಲೋಹದ ಹಕ್ಕಿಗಳ ಹಾರಾಟವನ್ನು ವೀಕ್ಷಣೆ ಮಾಡಿದ್ದಾರೆ.

    ಭಾನುವಾರ 11 ಗಂಟೆಗೆ ಬನ್ನಿಮಂಟಪದಲ್ಲಿ ಲೋಹದ ಹಕ್ಕಿಗಳು ಆರ್ಭಟಿಸಲಿದ್ದು, ಏರ್ ಫೋರ್ಸ್ ಎರಡು ಯುದ್ಧ ವಿಮಾನಗಳು ಸಹ ಏರ್‍ಶೋನಲ್ಲಿ ಭಾಗಿಯಾಗಲಿವೆ. ಏರ್ ಶೋ ವೇಳೆ 1,130 ಅಡಿ ಎತ್ತರದಿಂದ ಸ್ಕೈ ಡೈವಿಂಗ್ ಹಾಗೂ 1,130 ಅಡಿ ಎತ್ತರದಿಂದ ಹಗ್ಗದ ಮೂಲಕ ವಿಮಾನದಿಂದ ಸೈನಿಕರು ಇಳಿಯುವ ಪ್ರದರ್ಶನವೂ ಕೂಡ ಇರುತ್ತದೆ. ಇದರ ಜೊತೆ 1,105 ಅಡಿ ಎತ್ತರದಿಂದ ಚಾಮುಂಡೇಶ್ವರಿ ಪುಷ್ಪಾರ್ಚನೆಯನ್ನು ಸಲ್ಲಿಸಲಿವೆ. ಹೀಗಾಗಿ ಬನ್ನಿಮಂಟಪಕ್ಕೆ ಜನಸಾಗರವೇ ಹರಿದು ಬರವು ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ..

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಕ್ಷಣಾ ಸಚಿವಾಲಯಕ್ಕೆ ವಂದನೆ ಸಲ್ಲಿಸಿದ್ರು ಸಿಎಂ ಎಚ್‍ಡಿಕೆ

    ರಕ್ಷಣಾ ಸಚಿವಾಲಯಕ್ಕೆ ವಂದನೆ ಸಲ್ಲಿಸಿದ್ರು ಸಿಎಂ ಎಚ್‍ಡಿಕೆ

    ಬೆಂಗಳೂರು: ಏರೋ ಇಂಡಿಯಾ ಪ್ರದರ್ಶನ ಈ ಬಾರಿ ಬೆಂಗಳೂರಿನಲ್ಲೇ ನಡೆಯುವುದು ಅಧಿಕೃತವಾಗಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಕ್ಷಣಾ ಸಚಿವಾಲಯಕ್ಕೆ ವಂದನೆಗಳನ್ನು ಸಲ್ಲಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಸಿಎಂ, ಏರೋ ಇಂಡಿಯಾ ಪ್ರದರ್ಶನ ಈ ಬಾರಿಯೂ ಬೆಂಗಳೂರಿನಲ್ಲಿಯೇ ಜರುಗಲಿದೆ. ಇದು ನನಗೆ ತುಂಬಾ ಸಂತೋಷ ತಂದಿದೆ. ಬೆಂಗಳೂರಿನಿಂದ ಬೇರೆಡೆಗೆ ಸ್ಥಳಾಂತರಿಸಲಾಗುವುದು ಎನ್ನುವ ವಿಷಯ ಆತಂಕ ತಂದಿತ್ತು. ಪ್ರತಿಷ್ಠಿತ ಏರ್ ಶೋ ಇಲ್ಲಿಯೇ ಮುಂದುವರಿಸುತ್ತಿರುವುದಕ್ಕಾಗಿ ರಕ್ಷಣಾ ಸಚಿವಾಲಯಕ್ಕೆ ವಂದನೆ ಸಲ್ಲಿಸುತ್ತೇನೆ ಅಂತ ಹೇಳಿದ್ದಾರೆ.

    2019ರ ಏರೋ ಇಂಡಿಯಾ ಏರ್ ಶೋ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಸಲು ಕೇಂದ್ರ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಲಕ್ನೋದಲ್ಲಿ ಏರ್ ಶೋ ನಡೆಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೇಂದ್ರದ ಮೇಲೆ ಒತ್ತಡ ಹಾಕಿದ್ದರು. ಹೀಗಾಗಿ ಕೇಂದ್ರ ಸರ್ಕಾರ ಲಕ್ನೋದಲ್ಲಿ ನಡೆಸಲು ಸಿದ್ಧತೆ ನಡೆಸಿದೆ ಎನ್ನುವ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಈ ಸುದ್ದಿ ಪ್ರಕಟವಾಗುತ್ತಿದ್ದಂತೆ ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಬೆಂಗಳೂರಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಆಗಮಿಸಿದ್ದ ವೇಳೆ ಈ ಪ್ರಶ್ನೆ ಕೇಳಿದ್ದಕ್ಕೆ ವಿವಿಧ ರಾಜ್ಯಗಳು ಏರ್ ಶೋ ನಡೆಸುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿಸಿದರೇ ಹೊರತು ಬೆಂಗಳೂರಿನಲ್ಲೇ ನಡೆಯಲಿದೆ ಎನ್ನುವುದನ್ನು ತಿಳಿಸಿರಲಿಲ್ಲ. ಈ ಎಲ್ಲ ಕಾರಣದಿಂದ ಏರ್ ಶೋ ಬೆಂಗಳೂರಿನಲ್ಲಿ ನಡೆಯುತ್ತಾ ಎನ್ನುವ ಅನುಮಾನ ಎದ್ದಿತ್ತು.

    2019ರ ಫೆಬ್ರವರಿ 20-24ರ ವರೆಗೆ ಮೆಗಾ ಏರ್ ಶೋ ನಡೆಸಲು ಸಿದ್ಧತೆ ನಡೆದಿದೆ. 1996ರಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ ಆಯೋಜನೆಯಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಈಗ ಅಧಿಕೃತ, ಬೆಂಗ್ಳೂರಿನಲ್ಲೇ 2019ರ ಏರ್ ಶೋ!

    ಈಗ ಅಧಿಕೃತ, ಬೆಂಗ್ಳೂರಿನಲ್ಲೇ 2019ರ ಏರ್ ಶೋ!

    ನವದೆಹಲಿ: 2019ರ ಏರೋ ಇಂಡಿಯಾ ಏರ್ ಶೋ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಸಲು ಕೇಂದ್ರ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಈ ಮೂಲಕ ಉತ್ತರ ಪ್ರದೇಶದ ಲಕ್ನೋಗೆ ಏರ್ ಶೋ ಸ್ಥಳಾಂತರವಾಗಲಿದೆ ಎನ್ನುವ ಸುದ್ದಿಗೆ ಪೂರ್ಣವಿರಾಮ ಬಿದ್ದಿದೆ.

    ಲಕ್ನೋದಲ್ಲಿ ಏರ್ ಶೋ ನಡೆಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೇಂದ್ರದ ಮೇಲೆ ಒತ್ತಡ ಹಾಕಿದ್ದರು. ಹೀಗಾಗಿ ಕೇಂದ್ರ ಸರ್ಕಾರ ಲಕ್ನೋದಲ್ಲಿ ನಡೆಸಲು ಸಿದ್ಧತೆ ನಡೆಸಿದೆ ಎನ್ನುವ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.

    ಈ ಸುದ್ದಿ ಪ್ರಕಟವಾಗುತ್ತಿದ್ದಂತೆ ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಬೆಂಗಳೂರು ನಗರದಲ್ಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ರಕ್ಷಣಾ ಇಲಾಖೆಯ ಭೂಮಿಯನ್ನು ವರ್ಗಾಯಿಸುವ ಕುರಿತು ರಕ್ಷಣಾ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಆಗಸ್ಟ್ 4 ರಂದು ಬೆಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಏರ್ ಶೋ ನಡೆಸಲು ವಿವಿಧ ರಾಜ್ಯಗಳಿಂದ ಪ್ರಸ್ತಾಪ ಬಂದಿದೆ. ಆದರೆ ಅಂತಿಮವಾಗಿಲ್ಲ ಎಂದು ಪ್ರತಿಕ್ರಿಯಿಸಿದ್ದರು. ಈ ಎಲ್ಲ ಕಾರಣದಿಂದ ಏರ್ ಶೋ ಬೆಂಗಳೂರಿನಲ್ಲಿ ನಡೆಯುತ್ತಾ ಎನ್ನುವ ಅನುಮಾನ ಎದ್ದಿತ್ತು.

    ಕೇಂದ್ರ ಸರ್ಕಾರ 2019ರ ಫೆಬ್ರವರಿ 20-24ರ ವರೆಗೆ ಮೆಗಾ ಏರ್ ಶೋ ನಡೆಸಲು ಸಿದ್ಧತೆ ನಡೆಸಿದೆ.. 1996ರಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ ಆಯೋಜನೆಯಾಗುತ್ತಿದೆ.

    ಈ ಹಿಂದೆ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಅವರು ಏರ್ ಶೋವನ್ನು ಗೋವಾದಲ್ಲಿ ನಡೆಸಲು ಉತ್ಸುಕರಾಗಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕ ಕನ್ನಡಿಗರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಳಿಕ ಮನೋಹರ್ ಪರಿಕ್ಕರ್ ಅವರೇ ಗೋವಾದಲ್ಲಿ ಏರ್ ಶೋ ನಡೆಯುವ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳಿ ವಿಚಾರವನ್ನು ತಣ್ಣಗೆ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಏರ್ ಶೋ ಯಾವುದೇ ಕಾರಣಕ್ಕೂ ಸ್ಥಳಾಂತರಗೊಳ್ಳುವುದಿಲ್ಲ: ಕೇಂದ್ರ ಸಚಿವ ಅನಂತ್ ಕುಮಾರ್

    ಏರ್ ಶೋ ಯಾವುದೇ ಕಾರಣಕ್ಕೂ ಸ್ಥಳಾಂತರಗೊಳ್ಳುವುದಿಲ್ಲ: ಕೇಂದ್ರ ಸಚಿವ ಅನಂತ್ ಕುಮಾರ್

    ಬೆಂಗಳೂರು: ನಗರದಲ್ಲಿ ನಡೆಯುತ್ತಿದ್ದ ಏರ್ ಶೋ ಯಾವುದೇ ಕಾರಣಕ್ಕೂ ಲಕ್ನೋಗೆ ಸ್ಥಳಾಂತರಗೊಳ್ಳುವುದಿಲ್ಲವೆಂದು ರಾಸಾಯನಿಕ ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಅನಂತಕುಮಾರ್ ಸ್ಪಷ್ಟನೆ ನೀಡಿದ್ದಾರೆ.

    ಏರ್ ಶೋ ಕುರಿತು ಉಂಟಾಗಿರುವ ಗೊಂದಲಕ್ಕೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ ಅವರು, 2019ರಲ್ಲಿ ಬೆಂಗಳೂರಿನಲ್ಲಿ ನಡೆಯುವ ಏರ್ ಶೋ ಲಕ್ನೋಗೆ ಸ್ಥಳಾಂತರಗೊಳ್ಳುವುದಿಲ್ಲವೆಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಈ ವಿಚಾರವಾಗಿ ನಾನು ಸಹ ಖುದ್ದು ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್‍ರವರೊಂದಿಗೆ ಮಾತನಾಡಿದ್ದೇನೆ. ಅವರು ಸಹ ಸ್ಥಳಾಂತರಗೊಳ್ಳುವ ಯಾವುದೇ ನಿರ್ಧಾವಿಲ್ಲವೆಂದು ಹೇಳಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಏರ್ ಶೋ ಲಕ್ನೋಗೆ ಶಿಫ್ಟ್ ಆಗಲ್ಲ: ಬಿಎಸ್‍ವೈ

    ಏರ್ ಶೋ ಸ್ಥಳಾಂತರ ಕುರಿತು ಎದ್ದಿರುವ ಊಹಾಪೋಹಗಳಿಗೆ ಜನರು ಕಿವಿಗೊಡಬಾರದು, ಕಳೆದ ಬಾರಿಯೂ ಸಹ ಇಂತಹುದೇ ಗೊಂದಲ ಏರ್ಪಟ್ಟಿತ್ತು. ಕೇಂದ್ರ ಸರ್ಕಾರವು ಸ್ಥಳಾಂತರ ಕುರಿತು ಎಲ್ಲಿಯೂ ಮಾಹಿತಿ ನೀಡಿಲ್ಲ. 2019ರಲ್ಲಿ ನಡೆಯುವ ಏರ್ ಶೋ ಬೆಂಗಳೂರಿನಲ್ಲೇ ನಡೆಯಲಿದೆ ಎಂದು ಹೇಳಿದ್ದಾರೆ.

    ಏರ್ ಶೋ ಲಕ್ನೋಗೆ ಸ್ಥಳಾಂತರವಾಗುತ್ತಿದೆ ಎನ್ನುವ ಸುದ್ದಿ ಪ್ರಕಟವಾದ ಬೆನ್ನಲ್ಲೆ ಕಾಂಗ್ರೆಸ್, ಬಿಜೆಪಿ ನಾಯಕರ ನಡುವೆ ವಾಕ್ಸಮರ ಆರಂಭವಾಗಿತ್ತು. ಅಷ್ಟೇ ಅಲ್ಲದೇ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪ್ರಧಾನಿ ಮೋದಿಗೆ ಪತ್ರ ಬರೆದು ಯಾವುದೇ ಕಾರಣಕ್ಕೂ ಲಕ್ನೋಗೆ ಸ್ಥಳಾಂತರ ಮಾಡಬಾರದು ಎಂದು ಮನವಿ ಮಾಡಿದ್ದರು. ಇದನ್ನೂ ಓದಿ: ಏರ್ ಶೋ ಉಳಿಸಿಕೊಳ್ಳಲು ಅಖಾಡಕ್ಕೆ ಇಳಿದ ಎಚ್‍ಡಿಕೆ-ಮೋದಿಗೆ ಪತ್ರ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv