Tag: ಏರ್ ಶೋ

  • ಏರ್ ಶೋ ಬೆಂಕಿ ಅವಘಡಕ್ಕೂ ಪುಲ್ವಾಮಾ ದಾಳಿಗೂ ಲಿಂಕ್ ಇದೆಯಾ – ಘಟನೆಯನ್ನು ರಾಜಕೀಯಗೊಳಿಸಿದ್ರಾ ಕರಂದ್ಲಾಜೆ?

    ಏರ್ ಶೋ ಬೆಂಕಿ ಅವಘಡಕ್ಕೂ ಪುಲ್ವಾಮಾ ದಾಳಿಗೂ ಲಿಂಕ್ ಇದೆಯಾ – ಘಟನೆಯನ್ನು ರಾಜಕೀಯಗೊಳಿಸಿದ್ರಾ ಕರಂದ್ಲಾಜೆ?

    – ರಾಜ್ಯ ಸರ್ಕಾರ ರಕ್ಷಣೆ ನೀಡಬೇಕಿತ್ತು
    – ದೇಶದ್ರೋಹಿಗಳು ಕೃತ್ಯ ಎಸಗಿದ್ರಾ?
    – ರಾಜ್ಯ, ಕೇಂದ್ರದಿಂದ ಜಂಟಿ ತನಿಖೆಗೆ ಆಗ್ರಹ

    ಉಡುಪಿ: ಬೆಂಗಳೂರಿನ ಏರ್ ಶೋ ದುರಂತಕ್ಕೆ ದೇಶದ್ರೋಹಿ ಲಿಂಕ್ ಇದ್ಯಾ? ಇದೂ ಒಂಥರಾ ಕಾಶ್ಮೀರದ ಪುಲ್ವಾಮಾ ದಾಳಿಯ ಮುಂದುವರಿದ ಭಾಗನಾ? ದೇಶದ್ರೋಹಿಗಳು ಈ ಕೃತ್ಯದಲ್ಲಿ ತೊಡಗಿರಬಹುದಾ? ಇಂತದ್ದೊಂದು ಸಂಶಯವನ್ನು ಸಂಸದೆ ಶೋಭಾ ಕರಂದ್ಲಾಜೆ ವ್ಯಕ್ತಪಡಿಸಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶೋಭಾ ಕರಂದ್ಲಾಜೆ, ಬೆಂಗಳೂರು ಏರ್ ಶೋ ಸಂದರ್ಭದ ಬೆಂಕಿ ಅನಾಹುತದ ಬಗ್ಗೆ ಎಲ್ಲಾ ಆಯಾಮದಲ್ಲಿ ಉನ್ನತಮಟ್ಟದ ತನಿಖೆಯಾಗಬೇಕು. ಏರ್ ಶೋ ಕೇಂದ್ರ ಸರ್ಕಾರ, ಕೇಂದ್ರದ ವಿವಿಧ ಇಲಾಖೆಯ ಆಯೋಜನೆಯಾಗಿತ್ತು. ಕಾರ್ಯಕ್ರಮಕ್ಕೆ ಸಂಪೂರ್ಣ ರಕ್ಷಣೆ ಕೊಡಬೇಕಾದದ್ದು ರಾಜ್ಯ ಸರ್ಕಾರದ ಜವಾಬ್ದಾರಿ. ಏರ್ ಶೋಗೆ ದೇಶ ವಿದೇಶದಿಂದ ಜನ ಬಂದಿದ್ದಾರೆ. ಬಹಳ ಜನ ಪೈಲೆಟ್ ಗಳು ವಿವಿಐಪಿಗಳು ಬಂದಿದ್ದರು. ಈ ನಡುವೆ ರಾಜ್ಯ ಸರ್ಕಾರದ ಬೇಜವಾಬ್ದಾರಿ ವರ್ತನೆ ತೋರಿದಿದೆ ಎಂದು ಆಕ್ರೋಶ ಹೊರಹಾಕಿದರು.

    ಏರ್ ಶೋ ಬೆಂಕಿ ಅವಘಡದಲ್ಲಿ ಏನು ಒಂದು ಸಂಶಯ ಕಾಡುತ್ತಿದೆ. ಇಷ್ಟೊಂದು ವಾಹನಗಳು ಸುಡಬೇಕು ಅಂದ್ರೆ ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಘಟನೆಗೂ ಇದಕ್ಕೂ ಸಂಬಂಧವಿದೆಯಾ ಎಂಬುದರ ಬಗ್ಗೆ ತನಿಖೆ ನಡೆಯಬೇಕಿದೆ. ಯಾರಾದರೂ ದೇಶದ್ರೋಹಿಗಳು ಈ ಕೆಲಸವನ್ನು ಮಾಡಿದ್ರಾ ಅಥವಾ ಆಕಸ್ಮಿಕ ಬೆಂಕಿ ಅವಘಡನಾ ಎಂಬುದರ ಬಗ್ಗೆ ಸೂಕ್ತ ತನಿಖೆಯ ಅವಶ್ಯಕತೆಯಿದೆ. ರಾಜ್ಯ ಸರ್ಕಾರ ತನ್ನ ತಪ್ಪಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬೆಂಕಿ ಅವಘಡದಲ್ಲಿ 300 ಜನರು ಕಾರು ಕಳೆದುಕೊಂಡಿದ್ದಾರೆ. ಹಲವರು ಕಾರಿನಲ್ಲಿ ಇರಿಸಿದ ದಾಖಲೆಗಳು ಕಳೆದುಕೊಂಡಿದ್ದು, ಈ ಸಂಬಂಧ ರಾಜ್ಯ ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ ತನಿಖೆ ನಡೆಸಬೇಕೆಂದು ಶೋಭಾ ಕರಂದ್ಲಾಜೆ ಅಗ್ರಹಿಸಿದರು.

    ಏರ್ ಶೋ ಶಿಫ್ಟ್ ಆಗುವಾಗ ನಾವು ಧನಿ ಎತ್ತಿದ್ದೆವು. ಮತ್ತೆ ಕರ್ನಾಟಕಕ್ಕೆ ಅದನ್ನು ತಂದಿದ್ದೇವೆ. ಇಂತಹ ಘಟನೆ ನಮಗೆ ಶೋಭೆ ತರುವುದಿಲ್ಲ. ರಾಜ್ಯ ಸರ್ಕಾರ ತನ್ನ ತಪ್ಪನ್ನು ಬೇರೆಯವರ ಮೇಲೆ ಹೊರಿಸುತ್ತಿದೆ. ರಕ್ಷಣೆ ಕೊಡಲು ಆಗುದಿಲ್ಲ ಅಂದರೆ ಏನರ್ಥ? ರಾಜ್ಯ ಪೊಲೀಸ್, ಅಗ್ನಿಶಾಮಕ ಇಲಾಖೆ ಏನು ಮಾಡುತ್ತಿತ್ತು.? ಎಂದು ಸಂಸದೆ ಶೋಭಾ ಕರಂದ್ಲಾಜೆ ಸಾಲು ಸಾಲು ಪ್ರಶ್ನೆಗಳನ್ನು ಮಾಡಿದ್ದಾರೆ.

    ಕಾರು ನಿಲ್ಲಿಸಿದ ಜಾಗದಲ್ಲಿ ಪೊಲೀಸರಿಲ್ಲ, ಅಗ್ನಿಶಾಮಕದಳದ ಸಿಬ್ಬಂದಿ ಇರಲಿಲ್ಲ. ಪಾರ್ಕಿಂಗ್ ಜಾಗದಲ್ಲಿ ಯಾವುದೇ ರಕ್ಷಣಾ ವ್ಯವಸ್ಥೆ ಮಾಡಿರಲಿಲ್ಲ. ಕರ್ನಾಟಕದ ರಕ್ಷಣಾ ಇಲಾಖೆಯ ಜವಾಬ್ದಾರಿಯನ್ನು ಮರೆತಿದೆ. ಏರ್ ಶೋ ಬೆಂಗಳೂರಿನಲ್ಲಿಯೇ ನಡೆಯಬೇಕೆಂದು ಸಿಎಂ ಸೇರಿದಂತೆ ಎಲ್ಲರು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಜೊತೆ ಮಾತನಾಡಿ ಬೆಂಗಳೂರಿನಲ್ಲಿ ನಡೆಸುವಂತೆ ಮನವಿ ಮಾಡಿಕೊಳ್ಳುತ್ತೇವೆ. ನಮಗೆ ಬೇಕು ಎಂದು ಏರ್ ಶೋ ತಂದಾಗ ರಕ್ಷಣೆ ನೀಡಬೇಕಾದ ರಾಜ್ಯ ಸರ್ಕಾರ ಭದ್ರತೆ ನೀಡುವಲ್ಲಿ ವಿಫಲವಾಗಿದೆ ಎಂದು ನಾನು ನಿನ್ನೆಯೇ ಟ್ವೀಟ್ ಮಾಡಿದ್ದೇನೆ ಎಂದು ಕರಂದ್ಲಾಜೆ ತಿಳಿಸಿದರು.

    ಶೋಭಾ ಕರಂದ್ಲಾಜೆ ಹೇಳಿಕೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ ಅಭಿಪ್ರಾಯ ತಿಳಿಸಿ

    https://www.youtube.com/watch?v=BUA3pczdc3w

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಏರ್ ಶೋ ಅಗ್ನಿ ದುರಂತಕ್ಕೆ ವಿಮೆಗಾಗಿ ಯಲಹಂಕ ಆರ್​ಟಿಓ ಓಪನ್

    ಏರ್ ಶೋ ಅಗ್ನಿ ದುರಂತಕ್ಕೆ ವಿಮೆಗಾಗಿ ಯಲಹಂಕ ಆರ್​ಟಿಓ ಓಪನ್

    -ಸ್ಥಳದಲ್ಲೇ ಕೌಂಟರ್ ತೆಗೆದ ವಿಮೆ ಕಂಪನಿಗಳು

    ಬೆಂಗಳೂರು: ಬೆಂಗಳೂರಿನ ಯಲಹಂಕದ ಬಳಿಯ ಏರ್ ಶೋನಲ್ಲಿ ಶನಿವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ 300ಕ್ಕೂ ಹೆಚ್ಚು ಕಾರುಗಳು ಭಸ್ಮವಾಗಿವೆ. ಇದೀಗ ವಾಹನ ಮಾಲೀಕರು ಕಣ್ಣೀರು ಹಾಕ್ತಿದ್ದಾರೆ. ಸಾಲ ಸೋಲ ಮಾಡಿ, ಇಎಂಐಗಳನ್ನ ಕಟ್ಟಿಕೊಂಡು ಬರ್ತಿದ್ದವರು ಅಯ್ಯೋ… ಹೀಗಾಗೋಯ್ತಲ್ಲ ಅಂತ ತಲೆ ಮೇಲೆ ಕೈ ಹೊತ್ತುಕೊಂಡಿದ್ದಾರೆ.

    ಏರ್ ಶೋನಲ್ಲಿ ಧಗಧಗಿಸಿ ಹೋದ ಕಾರ್ ಗಳು ಮಾಲೀಕರು ಇದೀಗ ಇನ್ಸುರೆನ್ಸ್ ಪಡೆಯೋಕೆ ಪರದಾಡುತ್ತಿದ್ದಾರೆ. ಆದ್ರೆ, ನ್ಯಾಚುರಲ್ ಡಿಸಾಸ್ಟರ್ ಅಂತ ಈ ಘಟನೆಯನ್ನು ಘೋಷಣೆ ಮಾಡಿದ್ರೆ ಬಹುತೇಕ ಎಲ್ಲಾ ವಾಹನಗಳಿಗೆ ಹಂಡ್ರೆಡ್ ಪರ್ಸೆಂಟ್ ವಿಮೆ ಸಿಗಲಿದೆ. ಹೀಗಾಗಿ, ವಿಮಾ ಕಂಪನಿಗಳು ಸಹ ಘಟನಾ ಸ್ಥಳದಲ್ಲೇ ಕೌಂಟರ್ ತೆಗೆದಿವೆ. ಸುಟ್ಟು ಹೋಗಿರುವ ಕಾರ್‍ಗಳನ್ನು ಪತ್ತೆ ಹಚ್ಚಿದ ಮಾಲೀಕರು ರಿಜಿಸ್ಟ್ರೇಷನ್ ನಂಬರ್ ಬರೆದಿದ್ದಾರೆ.

    ಇವತ್ತೂ ಸಹ ಯಲಹಂಕ ಆರ್ ಟಿಒ ಕಚೇರಿ ಓಪನ್ ಇರುತ್ತೆ. ವಾಹನ ನೊಂದಣಿ, ಚಾಲನಾ ಪತ್ರಗಳ ವಿವರಗಳನ್ನ ಪಡೆಯಲು ಸಾರಿಗೆ ಇಲಾಖೆ ಯಲಹಂಕದಲ್ಲಿ ಸಹಾಯ ಕೇಂದ್ರ ಆರಂಭಿಸಲಾಗಿದೆ. ಸಹಾಯ ಕೇಂದ್ರದ ದೂರವಾಣಿ ಸಂಖ್ಯೆ 080-29729908, ಮೊ. 9449864050 ಕಾರು ಮಾಲೀಕರು ಸಹಾಯ ಕೇಂದ್ರದ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

    ಇನ್ಸುರೆನ್ಸ್ ಗಾಗಿ ಏನೇನು ಮಾಡಬೇಕು..?
    * ವಾಹನ ಮಾಲೀಕರು ಮೊದಲು ಕಂಪ್ಲೆಂಟ್ ಕೊಡಬೇಕು.
    * ಆ ಕಂಪ್ಲೆಂಟ್ ಕಾಪಿಯನ್ನು ಇಟ್ಕೊಂಡು ವಿಮೆಗೆ ಅಪ್ಲೈ ಮಾಡಬೇಕು.
    * ಇನ್ಶುರೆನ್ಸ್ ಕಚೇರಿಗೆ ಮೂಲ ದಾಖಲಾತಿಗಳನ್ನು ಸಲ್ಲಿಸಬೇಕು.
    * ಮೂಲ ದಾಖಲಾತಿ ಇಲ್ಲದಿದ್ದರೆ ನಕಲು ಪ್ರತಿಗಳನ್ನು ಸಲ್ಲಿಸಿ ಇನ್ಸುರೆನ್ಸ್ ಗೆ ಅರ್ಜಿ ಸಲ್ಲಿಸಿ.
    * ಮೂಲ ದಾಖಲಾತಿ ಕಳೆದುಹೋಗಿದ್ದರೆ ಆರ್ ಟಿಒ ಕಚೇರಿಗೆ ಭೇಟಿ ನೀಡಿ ನಕಲು ದಾಖಲಾತಿಗಳನ್ನು ಪಡೆದುಕೊಳ್ಳಿ.

    * ನಂತರ ಎಲ್ಲಾ ದಾಖಲಾತಿ ಸಮೇತ ಕಂಪ್ಲೆಂಟ್ ಕಾಪಿಯನ್ನು ಇನ್ಸುರೆನ್ಸ್ ಆಫೀಸ್ ಗೆ ಸಲ್ಲಿಸಿ.
    * ಆಗ ಇನ್ಸುರೆನ್ಸ್ ಕಂಪನಿ ಎಲ್ಲಾ ದಾಖಲಾತಿಗಳನ್ನು ಪರಿಶೀಲನೆ ನಡೆಸುತ್ತದೆ.
    * ಒಂದು ವೇಳೆ ಹೊರ ರಾಜ್ಯದಲ್ಲಿ ನೋಂದಣಿಯಾಗಿದ್ದರೆ ಎಲ್ಲಿ ನೋಂದಣಿಯಾಗಿದೆ, ಕೊನೆಗೆ ಯಾರು ರಿಜಿಸ್ಟ್ರರ್ ಮಾಡಿದ್ರು ಅನ್ನೋ ದಾಖಲೆಯೊಂದಿಗೆ ಕಂಪ್ಲೆಂಟ್ ಕಾಪಿ ಸಮೇತ ವಿಮೆಗೆ ಅರ್ಜಿ ಸಲ್ಲಿಸಿ.
    * ಮೊದಲನೆಯದಾಗಿ ನಿಮ್ಮ ಇನ್ಸುರೆನ್ಸ್ ಕೊನೆಯಾಗಿರಬಾರದು. ಮಾನ್ಯವಾಗಿರಬೇಕು.
    * ಇನ್ಸುರೆನ್ಸ್ ನವೀಕರಣ ಆಗಿರಬೇಕು
    * ಎಲ್ಲಾ ದಾಖಲಾತಿಗಳು ಸರಿಯಾಗಿದ್ದರೆ ಆರ್ ಟಿಒ ಕಚೇರಿಯಿಂದ ಒಂದೇ ಬಾರಿಗೆ ಅಪ್ರೂವಲ್ ಮಾಡೋ ಕ್ರಮದ ಭರವಸೆ.

    ಏರ್‍ಶೋ ಎಂದಿನ ವೇಳಾಪಟ್ಟಿಯಂತೆ ಇವತ್ತೂ ಮುಂದುವರಿಯಲಿದೆ. ಊಹಾಪೋಹಗಳಿಗೆ ಕಿವಿಕೊಡಬೇಡಿ ಅಂತಾ ಡಿಫೆನ್ಸ್ ಅಧಿಕಾರಿಗಳು ಹೇಳಿದ್ದಾರೆ. ದುರಂತರದ ಬಳಿಕ ಆಯೋಜಕರು ಎಚ್ಚೆತ್ತುಕೊಂಡಿದ್ದು, ಕಾರ್ ಪಾರ್ಕಿಂಗ್‍ಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ವೀಕೆಂಡ್ ಆಗಿರೋ ಕಾರಣ ಸಾವಿರಾರು ಮಂದಿ ಆಗಮಿಸಬಹುದು. ಆದರೆ ಘಟನೆಯಿಂದ ವೀಕ್ಷಕರ ಸಂಖ್ಯೆ ಕಡಿಮೆಯೂ ಆಗಬಹುದು. ಯಾವುದೇ ಕಾರಣಕ್ಕೂ ಏರ್ ಶೋ ರದ್ದಾಗಲ್ಲ. ಎಂದಿನಂತೆ ನಡೆಯಲಿದೆ.

    https://www.youtube.com/watch?v=ISKqdrigZd0

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಏರ್ ಶೋ ಅಗ್ನಿ ಅವಘಡದಲ್ಲಿ ಕಾರು ಕಳೆದುಕೊಂಡವರು ಹೇಗೆ ಇನ್ಸೂರೆನ್ಸ್ ಪಡೆಯಬಹುದು – ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

    ಏರ್ ಶೋ ಅಗ್ನಿ ಅವಘಡದಲ್ಲಿ ಕಾರು ಕಳೆದುಕೊಂಡವರು ಹೇಗೆ ಇನ್ಸೂರೆನ್ಸ್ ಪಡೆಯಬಹುದು – ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

    ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರ್ ಶೋ ವೇಳೆ ಉಂಟಾಗಿದ್ದ ಅಗ್ನಿ ಅವಘಡದಲ್ಲಿ 500ಕ್ಕೂ ಹೆಚ್ಚು ಕಾರುಗಳು ಬೆಂಕಿಗೆ ಸಿಕ್ಕಿ ಸುಟ್ಟು ಕರಕಲಾಗಿದ್ದು, ಹಲವರು ಲಕ್ಷಾಂತರ ರೂ. ಮೌಲ್ಯದ ಕಾರುಗಳನ್ನು ಕಳೆದುಕೊಂಡಿದ್ದಾರೆ. ಆದರೆ ಕಾರು ಕಳೆದುಕೊಂಡ ಸಾರ್ವಜನಿಕರ ನೆರವಿಗೆ ರಾಜ್ಯ ಸಾರಿಗೆ ಆಗಮಿಸಿದ್ದು, ಸಂತ್ರಸ್ತರಿಗೆ ಸಿಗಬೇಕಾದ ಎಲ್ಲಾ ದಾಖಲೆಗಳನ್ನು ನೀಡಲಾಗುತ್ತದೆ. ಕಾನೂನಿ ನಿಯಮಗಳ ಪ್ರಕಾರ ದಾಖಲೆ ಸಲ್ಲಿಸಿ ಪರಿಹಾರ ಪಡೆಯಿರಿ ಎಂದು ಇಲಾಖೆಯ ಜಂಟಿ ನಿರ್ದೇಶಕರಾದ ಜ್ಞಾನೇಂದ್ರ ಕುಮಾರ್ ಮಾಹಿತಿ ನೀಡಿದ್ದಾರೆ.

    ಅನಿರೀಕ್ಷಿತವಾಗಿ ಅವಘಡ ನಡೆದಿದ್ದು, ಇಂತಹ ಪರಿಸ್ಥಿತಿಯಲ್ಲಿ ವಿಮೆ ಪಡೆಯಲು ಸಾಧ್ಯವಿದೆ. ಇದಕ್ಕೆ ವಾಹನದ ಮಾಲೀಕರು ಪೊಲೀಸರಿಗೆ ದೂರು ನೀಡಬೇಕು. ದೂರು ನೀಡುವ ಸಂದರ್ಭದಲ್ಲಿ ವಾಹನ ದಾಖಲೆಗಳನ್ನು ನೀಡಬೇಕಾಗುತ್ತದೆ. ಆದರೆ ಅಧಿಕೃತ ದಾಖಲೆ ಇಲ್ಲದಿದ್ದರೆ ಆರ್‍ಟಿಒ ಕಚೇರಿಗೆ ತೆರಳಿ ನಕಲು ದಾಖಲೆಗಳನ್ನು ಪಡೆದು ದೂರು ಸಲ್ಲಿಸಬಹುದಾಗಿದೆ. ಪೊಲೀಸ್ ದೂರನ್ನು ಅಗತ್ಯ ದಾಖಲಾತಿಗಳೊಂದಿಗೆ ವಿಮೆ ಸಂಸ್ಥೆಗೆ ನೀಡಿದರೆ ನಿಯಮಗಳ ಅನುಸಾರ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

    ಸಾಮಾನ್ಯವಾಗಿ ವಾಹನ ಖರೀದಿ ಮಾಡಿ 15 ವರ್ಷ ಆಗಿದ್ದರೆ ರಿನೀವಲ್ (ವಿಮೆ ನವೀಕರಣ) ಮಾಡಿಸಬೇಕು. ಹಳದಿ ಬೋರ್ಡ್ ವಾಹನ ಆದರೆ ವಾಹನದ ಕಂಡಿಷನ್ ಪ್ರಮಾಣ ಪತ್ರ ನೀಡಬೇಕು. ಎಲ್ಲಾ ದಾಖಲೆಗಳು ಅವಧಿಯ ಒಳಗೆ ಇರಬೇಕಾಗುತ್ತದೆ. ವಿಮಾ ಸಂಸ್ಥೆಗಳು ಕೇಳುವ ಎಲ್ಲಾ ದಾಖಲೆಗಳನ್ನು ಸಾರಿಗೆ ಇಲಾಖೆ ನೀಡುತ್ತದೆ. ಒನ್ ಟೈಮ್ ಆಪಿಯರೇನ್ಸ್ ನಲ್ಲೇ ಇದನ್ನು ನೀಡಲು ಸದ್ಯ ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

    ಸಹಾಯ ಕೇಂದ್ರ: ವಾಹನ ಮಾಲೀಕರ ಅನುಕೂಲಕ್ಕಾಗಿ ವಾಹನ ನೊಂದಣಿ ಮತ್ತು ಚಾಲನಾ ಪತ್ರ ವಿವರಗಳನ್ನು ಪಡೆಯಲು ಬೇಕಾದ ವಿಧಾನಗಳನ್ನು ತಿಳಿದುಕೊಳ್ಳಲು ಸಾರಿಗೆ ಇಲಾಖೆ ಸಹಾಯವಾನಿಯನ್ನು ಆರಂಭಿಸಿದೆ. ಯಲಹಂಕದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸಹಾಯ ಕೇಂದ್ರ ಆರಂಭಿಸಲಾಗಿದ್ದು, 080-2972 9908 ಹಾಗೂ ಮೊಬೈಲ್ ಸಂಖ್ಯೆ 94498 64050 ನಂಬರ್ ಗಳನ್ನು ಸಂಪರ್ಕಿಸಬಹುದು. ನಾಳೆ ಭಾನುವಾರ ಸರ್ಕಾರಿ ರಜಾ ದಿನವವಾದರೂ ಕೂಡ ಸಹಾಯ ಕೇಂದ್ರ ತೆರೆದಿರುತ್ತದೆ ಎಂಬ ಮಾಹಿತಿ ಲಭಿಸಿದೆ.

    ವಾಹನ ವಿಮೆ ನಿಯಮವೇನು?
    ವಾಹನ ವಿಮೆಯಲ್ಲಿ ಒಟ್ಟು ಮೂರು ವಿಧಗಳಿದ್ದು, ಪ್ರಮುಖ ಕಾರು ತಯಾರಿಕಾ ಕಂಪನಿಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿಮಾ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ವಿಮಾ ಪಾಲಿಸಿಯನ್ನು ಗ್ರಾಹಕರಿಗೆ ನೀಡುತ್ತಾರೆ. ರಸ್ತೆ ಅಪಘಾತ, ಅಗ್ನಿ ಆಕಸ್ಮಿಕ, ಸಿಡಿಲು, ಗಲಭೆ, ಭೂಕಂಪ, ಚಂಡಮಾರುತ ಸೇರಿದಂತೆ ಕಳ್ಳತನ ಇತ್ಯಾದಿ ಸಂದರ್ಭಗಳನ್ನು ವಿಮೆಯಲ್ಲಿ ಸೇರಿರುತ್ತೆ. ವಿಮೆ ಸಂಪೂರ್ಣವಾಗಿ ವಿಮೆ ಮೊತ್ತ ಮತ್ತು ವಾಹನದ ಬಗೆಯ ಮೇಲೆ ನಿಂತಿರುತ್ತೆ.

    ಎಲ್ಲ ವಾಹನಗಳಿಗೂ ಸಿಗಲ್ಲ ಇನ್ಯೂರೆನ್ಸ್..!
    ಅಪಘಾತದಲ್ಲಿ ಸಂದರ್ಭದಲ್ಲಿ ವಿಮೆ ಮಾಡಿಸಿದ ಎಲ್ಲಾ ವಾಹನಗಳಿಗೂ ಶೇ. 100 ರಷ್ಟು ಹಣ ಹಿಂದಿರುವುದಿಲ್ಲ. ಕಾರು ವಿಮೆಯಲ್ಲಿ ಒಟ್ಟು ಮೂರು ವಿಧಗಳಿದ್ದು, ಕಾಂಪ್ರಹೆನ್ಸೀವ್ ವಿಮೆ (ಸಮಗ್ರ ವಿಮೆ), ಥರ್ಡ್ ಪಾರ್ಟಿ ವಿಮೆ ಹಾಗೂ ಇತ್ತೀಚೆಗೆ ಬಂಪರ್ ಟು ಬಂಪರ್ ವಿಮೆ ಚಾಲ್ತಿಯಲ್ಲಿದೆ.

    ಸಮಗ್ರ ವಿಮೆಯಲ್ಲಿ ಗಾಡಿಯ ಮೌಲ್ಯ ಹಾಗೂ ವಿಮೆಯ ಮೊತ್ತದ ಮೇಲೆ ವಿಮೆ ಮೊತ್ತ ಸಿಗುತ್ತೆ. ಗಾಡಿ ಹೊಸತಾಗಿದ್ದರೆ ಬಹುತೇಕ ವಿಮಾ ಮೊತ್ತ ಹೆಚ್ಚಿರುತ್ತೆ. ಆದರೆ ಕಾಂಪ್ರೋಹೆನ್ಸಿವ್ ಇನ್ಸೂರೆನ್ಸ್ ಪಾಲಿಸಿಯಲ್ಲಿ ದುರಂತ ಸಂಭವಿಸಿದಾಗ ಕಾರಿನ ರಬ್ಬರ್, ನೈಲಾನ್ ಹಾಗೂ ಪ್ಲಾಸ್ಟಿಕ್ ವಸ್ತುಗಳಿಗೆ ಕೇವಲ ಫಿಫ್ಟಿ ಪರ್ಸೆಂಟ್ ವಿಮೆ, ಫೈಬರ್ ಗ್ಲಾಸ್‍ಗಳಿಗೆ ಶೇ. 30ರಷ್ಟು ವಿಮೆ ಹಾಗೂ ಗಾಜಿನಿಂದ ತಯಾರಿಸಲಾದ ಭಾಗಗಳಿಗೆ ಯಾವುದೇ ಇನ್ಸೂರೆನ್ಸ್ ಸಿಗುವುದಿಲ್ಲ. ಈ ಸಂದರ್ಭದಲ್ಲಿ ಅರ್ಧ ಹಣ ಮಾತ್ರ ಗ್ರಾಹಕರಿಗೆ ಲಭ್ಯವಾಗುತ್ತದೆ. ಗಾಡಿ ಒಂದು ವರ್ಷದ ಒಳಗಿದ್ದರೆ ಮಾತ್ರ ಬಹುತೇಕರಿಗೆ ಈ ಪಾಲಿಸಿನಲ್ಲಿ ದುಡ್ಡು ಸಿಗಬಹುದು. ಗಾಡಿ ಹಳೆಯದಾಗಿದ್ರೆ ಅರ್ಧದಷ್ಟೇ ಹಣ ಸಿಗುವ ಸಾಧ್ಯತೆಗಳಿವೆ.

    ಥರ್ಡ್ ಪಾರ್ಟಿ ಇನೂರೆನ್ಸ್:
    ದೊಡ್ಡ ಮೊತ್ತದ ವಿಮೆ ಕಟ್ಟಲಾರದವರು ಸಾಮಾನ್ಯ ಥರ್ಡ್ ಪಾರ್ಟಿ ಇನೂರೆನ್ಸ್ ಹೊಂದಿರುತ್ತಾರೆ. ಹಳೆಯ ಕಾರು ಹೊಂದಿರುವವರು, ಹಳೆಯ ಕಾರು ಖರೀದಿಸುವವರು ಭಾದ್ಯತಾ ವಿಮೆಯನ್ನು ಮಾಡಿಕೊಂಡಿರುತ್ತಾರೆ. ಈ ವಿಮೆ ಮಾಡಿಕೊಂಡರೆ ಬಹುತೇಕ ಅರ್ಧದಷ್ಟು ವಿಮೆ ಮಾತ್ರ ಸಿಗಲಿದೆ. ಅತ್ಯಂತ ಕಡಿಮೆ ವಿಮೆಯ ದುಡ್ಡು ವಾಪಾಸು ಸಿಗುತ್ತೆ.

    ಬಂಪರ್ ಟು ಬಂಪರ್ ಟು ಇನ್ಸೂರೆನ್ಸ್:
    ಬಹುತೇಕ ಲಕ್ಸುರಿ ಗಾಡಿಗಳು ಬಂಪರ್ ಟು ಬಂಪರ್ ಇನ್ಸುರೆನ್ಸ್ ಮಾಡಿಕೊಂಡಿರುತ್ತಾರೆ. ಈ ಇನ್ಸೂರೆನ್ಸ್ ಮಾಡಿಕೊಂಡರೆ ಬಹುತೇಕ 100% ವಿಮೆ ಪಾವತಿಯಾಗುತ್ತೆ. ಆದರೆ ವಾಹನ ತೀರಾ ಹಳೆಯದಾಗಿದರೆ ಈ ಇನ್ಯೂರೆನ್ಸ್ ಕೂಡ ಲಾಭವಿಲ್ಲ. ನೈಸರ್ಗಿಕ ವಿಪತ್ತು ಎಂದು ಎಂದು ಈ ಘಟನೆಯನ್ನು ಘೋಷಣೆ ಮಾಡಿದರೆ ಬಹುತೇಕ ಎಲ್ಲಾ ವಾಹನಗಳಿಗೆ ಶೇ.100 ರಷ್ಟು ವಿಮೆ ಸಿಗಲಿದೆ. ಇಲ್ಲದಿದ್ದರೆ ಆಯಾಯ ವಿಮೆಯ ಮೇಲೆ ಹಾಗೂ ಇನ್ಸೂರೆನ್ಸ್ ಬೆಲೆಯ ಮೇಲೆಯೆ ವಿಮೆ ದೊರೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುತ್ತಲಿನ ಕಾರು ಧಗಧಗ – ನ್ಯಾನೋ ಮಾತ್ರ ಸೇಫ್

    ಸುತ್ತಲಿನ ಕಾರು ಧಗಧಗ – ನ್ಯಾನೋ ಮಾತ್ರ ಸೇಫ್

    ಬೆಂಗಳೂರು: ಏರ್ ಶೋ ಅಗ್ನಿ ಅವಘಡದಲ್ಲಿ ನೂರಾರು ಕಾರುಗಳು ಬೆಂಕಿಯ ನರ್ತನಕ್ಕೆ ಸುಟ್ಟು ಕರಕಲಾಗಿದ್ದಾರೆ, ಅಚ್ಚರಿ ಎಂಬಂತೆ ನ್ಯಾನೋ ಕಾರು ಮಾತ್ರ ಸೇಫ್ ಆಗಿದೆ.

    ಪಾರ್ಕಿಂಗ್ ನಲ್ಲಿದ್ದ ಕಾರು ಬೆಂಕಿಯ ಪ್ರಭಾವಕ್ಕೆ ಮುಂಭಾಗ ಬಂಪರ್ ಮಾತ್ರ ಕರಗಿದ್ದು, ಇಂಜಿನ್ ಸೇರಿದಂತೆ ಬೇರೆ ಯಾವುದೇ ಭಾಗಕ್ಕೆ ಹಾನಿ ಆಗಿಲ್ಲ. ಆದರೆ ನ್ಯಾನೋ ಕಾರಿನ ಸುತ್ತಲು ಇದ್ದ ಐಶಾರಾಮಿಗಳು ಕಾರುಗಳು ಮಾತ್ರ ಮಾಲೀಕರ ಕಣ್ಣ ಮುಂದೆಯೇ ನೋಡ ನೋಡುತ್ತಿದಂತೆ ಬೆಂಕಿಗೆ ಆಹುತಿಯಾಗಿದೆ.

    ಮೂಲತಃ ನಾಗಪುರ ವ್ಯಕ್ತಿಗೆ ಸೇರಿದ ಕಾರು ಇದ್ದಾಗಿದೆ ಎಂಬ ಮಾಹಿತಿ ಲಭಿಸಿದೆ. ಘಟನೆಯಲ್ಲಿ 150 ಕ್ಕೂ ಹೆಚ್ಚು ಬೈಕ್, 300ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲಾಗಿದ್ದು, ವಾರಾಂತ್ಯದ ರಜೆಯನ್ನು ಕಳೆಯಲು ಬಂದ ಬೆಂಗಳೂರಿನ ಜನರಿಗೆ ಇದೊಂದು ಶಾಕ್ ಆಗಿತ್ತು ಎಂದೇ ಹೇಳಬಹುದಾಗಿದೆ. ಇದನ್ನೂ ಓದಿ:ಮದ್ವೆಯಾಗಿ ಮೊದ್ಲ ಬಾರಿಗೆ ಪತಿಯ ಮನೆಗೆ ಈ ಕಾರಿನಲ್ಲೇ ಬಂದಿದ್ದೆ: ಕಾರ್ ಮಾಲಕಿ ಕಣ್ಣೀರು

    ರತನ್ ಟಾಟಾ ಅವರ ಕನಸಿನ ಕಾರು ಎಂದೇ ಖ್ಯಾತಿ ಪಡೆದಿದ್ದ ನ್ಯಾನೋ ಕಾರನ್ನು ಭಾರತದಲ್ಲೇ ಕಡಿಮೆ ಬೆಲೆಗೆ ತಯಾರಿಸಲಾಗಿತ್ತು. ಈ ಮಾದರಿಯ ಕಾರು ಪ್ರಪಂಚದಲ್ಲೇ ಅಗ್ಗದ ಕಾರು ಎಂಬ ಖ್ಯಾತಿಯನ್ನು ಪಡೆದಿತ್ತು. ದೇಶದ ಮಧ್ಯಮ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಕಾರನ್ನು ಟಾಟಾ ಮೋಟಾರ್ಸ್ ಸಂಸ್ಥೆ ವಿನ್ಯಾಸ ಮಾಡಿತ್ತು. ಇದನ್ನೂ ಓದಿ:1 ಸಾವಿರ ಕಾರ್ ಪಾರ್ಕ್ ಮಾಡಿದ್ದ ಜಾಗದಲ್ಲಿ ಬೆಂಕಿ ಅವಘಡ: ಅಗ್ನಿಶಾಮಕ ದಳದ ಡಿಜಿಪಿ

    ಸದ್ಯ ದುರಂತದಲ್ಲಿ ಹಾನಿಗೊಂಡಿರುವ ಕಾರುಗಳ ಬಗ್ಗೆ ಸ್ಥಳದಲ್ಲಿ ಪ್ರಾಥಮಿಕ ಮಾಹಿತಿ ನೀಡಲಾಗುತ್ತಿದೆ. ನಾಳೆ ಯಲಹಂಕ ಪೊಲೀಸ್ ಠಾಣೆಯಲ್ಲಿ ಕಾರು ಸುಟ್ಟು ಕರಕಲಾಗಿರುವ ಕಾರುಗಳ ಬಗ್ಗೆ ಅಧಿಕೃತ ಪತ್ರವನ್ನು ಪಡೆಯಬಹುದಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಏರೋ ಅಗ್ನಿ ಅವಘಡಕ್ಕೆ ಕಾರಣ ಏನು ಎಂಬ ಬಗ್ಗೆ ಅನುಮಾನ ಮೂಡಿದ್ದು, ಬೆಂಗಳೂರಿನಿಂದ ಏರ್ ಶೋ ಶಿಫ್ಟ್ ಮಾಡಲು ಇಂತಹ ಪ್ರಯತ್ನ ನಡೆಸಿದ್ದರಾ ಎಂಬ ಪ್ರಶ್ನೆಯನ್ನ ಏರ್ ಶೋದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ದುರಂತ ಕಾರಣ ತಿಳಿಯಲು ಇಲಾಖೆ ತನಿಖೆ ನಡೆಸಲು ಆದೇಶ ನೀಡಿದೆ.

    https://www.youtube.com/watch?v=odvGPUDiklw

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಏರ್ ಶೋ ಬೆಂಕಿ ಅವಘಡದಲ್ಲಿ ಪವಾಡಸದೃಶ ಪಾರಾದ ಬಾಲಕಿ!

    ಏರ್ ಶೋ ಬೆಂಕಿ ಅವಘಡದಲ್ಲಿ ಪವಾಡಸದೃಶ ಪಾರಾದ ಬಾಲಕಿ!

    ಬೆಂಗಳೂರು: ಏರ್ ಶೋ ನಡೆಯುತ್ತಿದ್ದ ವೇಳೆ ಪಾರ್ಕಿಂಗ್ ಸ್ಥಳದಲ್ಲಾದ ಬೆಂಕಿ ಅನಾಹುತದಿಂದ ಬಾಲಕಿಯೊಬ್ಬಳು ಪವಾಡ ರೀತಿಯಲ್ಲಿ ಪಾರಾಗಿರುವ ಸಂಗತಿ ಬೆಳಕಿಗೆ ಬಂದಿದೆ.

    ಏರ್ ಶೋ ನೋಡಲು ಬಂದಿದ್ದ ಕಿರಣ್ ಸಿಂಗ್ ಎಂಬವರ ಮಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇಂದು ಏರ್ ಶೋ ನೋಡಲು ಕಿರಣ್ ಸಿಂಗ್ ಕುಟುಂಬ ಸಮೇತರಾಗಿ ಹೋಗಿದ್ದರು. ಆದರೆ ಸ್ಥಳದಲ್ಲಿ ಬಿಸಿಲು ತುಂಬಾ ಇದ್ದ ಕಾರಣ ಕಿರಣ್ ಅವರ ಮಗಳು ಕಾರಿನಲ್ಲಿ ಮಲಗಿರುತ್ತೇನೆ ಎಂದು ಹೋಗಿದ್ದಳು. ಬಳಿಕ ಬೆಂಕಿ ಅನಾಹುತ ನಡೆಯುವ ಅರ್ಧ ಗಂಟೆಯ ಮೊದಲಷ್ಟೇ ಮಗಳನ್ನು ಕಾರಿನಿಂದ ಕಿರಣ್ ಸಿಂಗ್ ಕರೆದುಕೊಂಡು ಹೋಗಿದ್ದರು. ನಂತರ ಪುನಃ ಬಂದು ನೋಡುವಷ್ಟರಲ್ಲಿ ಕಾರು ಸುಟ್ಟು ಕರಕಲಾಗಿತ್ತು. ಕಾರು ಹೋದರು ಚಿಂತೆ ಇಲ್ಲ. ಮಗಳು ಬದುಕಿ ಉಳಿದಿದ್ದೇ ಸಾಕು ಎಂದು ತಂದೆ ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ:ಮದ್ವೆಯಾಗಿ ಮೊದ್ಲ ಬಾರಿಗೆ ಪತಿಯ ಮನೆಗೆ ಈ ಕಾರಿನಲ್ಲೇ ಬಂದಿದ್ದೆ: ಕಾರ್ ಮಾಲಕಿ ಕಣ್ಣೀರು

    ಪಬ್ಲಿಕ್ ಟಿವಿ ಜೊತೆ ಘಟನೆ ಕುರಿತು ಕರೆ ಮಾಡಿ ಮಾತನಾಡಿದ ಕಿರಣ್ ಸಿಂಗ್, ಯಾಕೋ ಸುಸ್ತಾಗುತ್ತಿದೆ ಎಂದು ಮಗಳು ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ನಮ್ಮ ಹೋಂಡಾ ಸಿಟಿ ಕಾರಿನೊಳಗೆ ಹೋಗಿ ಮಲಗಿದ್ದಳು. ಬಳಿಕ ಅನಾಹುತ ನಡೆಯುವ ಕೇವಲ ಅರ್ಧ ಗಂಟೆ ಮುನ್ನವಷ್ಟೇ ನನ್ನ ಪತ್ನಿ ಮಗಳನ್ನು ಕರೆತರಲು ಹೇಳಿದ್ದಕ್ಕೆ ಕಾರ್ ಬಳಿ ಹೋಗಿ ಶೋ ನೋಡಲು ಆಕೆಯನ್ನು ವಾಪಾಸ್ ಕರೆದುಕೊಂಡು ಬಂದೆ. ಅದೃಷ್ಟವಶಾತ್ ದೇವರ ಧಯೆಯಿಂದ ನಮ್ಮ ಮಗಳು ಉಳಿದಳು ಎಂದು ತಿಳಿಸಿದರು. ಇದನ್ನೂ ಓದಿ:1 ಸಾವಿರ ಕಾರ್ ಪಾರ್ಕ್ ಮಾಡಿದ್ದ ಜಾಗದಲ್ಲಿ ಬೆಂಕಿ ಅವಘಡ: ಅಗ್ನಿಶಾಮಕ ದಳದ ಡಿಜಿಪಿ

    ಏರೋ ಇಂಡಿಯಾ 2019ರ ಏರ್ ಶೋ ಅಗ್ನಿ ಅವಘಡ ಸಂಭವಿಸಿದ್ದು, ಸದ್ಯಕ್ಕೆ ಬೆಂಕಿಯನ್ನು ನಿಯಂತ್ರಣಕ್ಕೆ ಬಂದಿದೆ. ಆದರೆ ಪರಿಸ್ಥಿತಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕ ಸಾರ್ವಜನಿಕರಿಗೆ ಸ್ಥಳಕ್ಕೆ ಅವಕಾಶ ನೀಡಲಾಗುವುದು ಎಂದು ಅಗ್ನಿಶಾಮಕ ದಳದ ಡಿಜಿಪಿ ಎಂಎನ್ ರೆಡ್ಡಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಏರ್ ಶೋ ನಡೆಯುತ್ತಿರುವ ಕಾರಣ ಸ್ಥಳದಲ್ಲಿ 1 ಸಾವಿರ ಕಾರುಗಳು ಪಾರ್ಕ್ ಮಾಡಲಾಗಿತ್ತು. ಶೋಗೆ ಹೆಚ್ಚಿನ ಜನರು ಆಗಮಿಸಿದ ಕಾರಣ ಕಾರುಗಳನ್ನು ಮೈದಾನದಂತಹ ಪ್ರದೇಶದಲ್ಲಿ ತಾತ್ಕಾಲಿವಾಗಿ ನಿಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು. ಸ್ಥಳದಲ್ಲಿ ಹುಲ್ಲು ಹೆಚ್ಚಾಗಿರುವುದರಿಂದ ಗಾಳಿಗೆ ಬೆಂಕಿ ಬಹುಬೇಗ ಹರಡಿದೆ. ಪರಿಣಾಮ 300ಕ್ಕೂ ಹೆಚ್ಚು ಕಾರುಗಳು ಹಾನಿಯಾಗಿದೆ ಎಂದು ಸ್ಪಷ್ಟನೆ ನೀಡಿದರು.

    https://www.youtube.com/watch?v=Dqyc4h3Tc1Y

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ವೆಯಾಗಿ ಮೊದ್ಲ ಬಾರಿಗೆ ಪತಿಯ ಮನೆಗೆ ಈ ಕಾರಿನಲ್ಲೇ ಬಂದಿದ್ದೆ: ಕಾರ್ ಮಾಲಕಿ ಕಣ್ಣೀರು

    ಮದ್ವೆಯಾಗಿ ಮೊದ್ಲ ಬಾರಿಗೆ ಪತಿಯ ಮನೆಗೆ ಈ ಕಾರಿನಲ್ಲೇ ಬಂದಿದ್ದೆ: ಕಾರ್ ಮಾಲಕಿ ಕಣ್ಣೀರು

    -ಪುಟ್ಟ ಮಗುವಿನಂತೆ ನೋಡಿಕೊಳ್ತಿದ್ರು

    ಬೆಂಗಳೂರು: ನಾನು ಮದುವೆಯಾಗಿ ಪತಿಯ ಮನೆಗೆ ಮೊದಲ ಬಾರಿಗೆ ಹೋಗಬೇಕಾದರೆ ಇದೇ ಕಾರು ನನ್ನನ್ನು ಕರೆದುಕೊಂಡು ಹೋಗಿತ್ತು. ಪುಟ್ಟ ಮಗುವಿನ ರೀತಿ ಕಾರನ್ನು ನೋಡಿಕೊಂಡಿದ್ವಿ, ಈಗ ತುಂಬಾ ನೋವಾಗುತ್ತಿದೆ ಎಂದು ಏರೋ ಇಂಡಿಯಾ ಶೋನಲ್ಲಿ ನಡೆದ ಅಗ್ನಿ ದುರಂತದಲ್ಲಿ ಕಾರ್ ಕಳೆದುಕೊಂಡ ಮಹಿಳೆಯೊಬ್ಬರು ಕಣ್ಣೀರು ಹಾಕಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕಾರು ಕಳೆದುಕೊಂಡ ಅರ್ಚನಾ ಅವರು, ಟಿಕೆಟ್ ಎಲ್ಲ ಕ್ಲಿಯರ್ ಮಾಡಿಕೊಂಡು ಒಳಗೆ ಹೋಗಿದ್ದೆವೆ. ಆದರೆ ಐದು ನಿಮಿಷಗಳಲ್ಲಿಯೇ ಅಲ್ಲಿಂದ ಹೊಗೆ ಬರುತ್ತಿತ್ತು. ಏರ್ ಶೋ ನಡೆಯುತ್ತಿದ್ದ ಜಾಗದಿಂದ ಪಾಕ್ ಪಾರ್ಕಿಂಗ್ ಮಾಡಿದ್ದ ಜಾಗಕ್ಕೂ ಸುಮಾರು 2-3 ಕಿ.ಮೀ ದೂರವಿತ್ತು. ಹೀಗಾಗಿ ನಮಗೆ ಏನಾಯ್ತು ಎಂದು ಗೊತ್ತಾಗಿಲ್ಲ ಎಂದು ನಡೆದ ಘಟನೆಯ ಬಗ್ಗೆ ವಿವರಿಸಿದ್ದಾರೆ.

    ಸ್ವಲ್ಪ ಸಮಯದ ನಂತರ ನನ್ನ ಸಹೋದರಿ ಫೋನ್ ಮಾಡಿ ಮಾಧ್ಯಮಗಳಲ್ಲಿ ಅಗ್ನಿ ಅವಘಡ ಆಗಿದೆ ಎಂದು ಸುದ್ದಿ ಬರುತ್ತಿದೆ ಅಂತ ಹೇಳಿದ್ದಳು. ತಕ್ಷಣ ನಾವು ಬಂದು ನೋಡಿದಾಗ ಸಾಲು ಸಾಲು ಕಾರುಗಳಿಗೂ ಬೆಂಕಿ ಹೊತ್ತಿಕೊಂಡಿತ್ತು. ಯಾವ ಕಾರು ಎಂದು ಕಂಡು ಹಿಡಿಯಲು ಸಾಧ್ಯವಾಗದ ರೀತಿಯಲ್ಲಿ ಎಲ್ಲವೂ ಸುಟ್ಟು ಹೋಗಿವೆ. ಸ್ವಲ್ಪ ಸ್ವಲ್ಪ ಮಾರ್ಕ್ ನೋಡಿಕೊಂಡು ನಮ್ಮ ಕಾರನ್ನು ಹುಡುಕಬೇಕು. ಆದರೆ ಕಾರ್ ನೋಡಿದರೆ ದುಃಖವಾಗಿದೆ. ಎಲ್ಲರಿಗೂ ಇದೊಂದು ದೊಡ್ಡ ಆಘಾತವಾಗಿದೆ. ಆದರೆ ಜನಕ್ಕೆ ಏನು ಆಗದಿದ್ದರೆ ಸಾಕು, ಪೊಲೀಸರು ಮತ್ತು ಇಲ್ಲಿನ ಜನರು ಸಹಾಯ ಮಾಡುತ್ತಿದ್ದಾರೆ ಎಂದು ಅರ್ಚನಾ ಹೇಳಿದ್ದಾರೆ.

    ಇದೆಲ್ಲಾ 5-10 ನಿಮಿಷದಲ್ಲಿ ಆಗಿದೆ. ನಮ್ಮ ಕಾರು ಐ-20 ಆಗಿದ್ದು, ನನಗೆ ಇತ್ತೀಚೆಗೆ ಮದುವೆಯಾಗಿದೆ. ನಾನು ಮದುವೆಯಾಗಿ ಪತಿಯ ಮನೆಗೆ ಮೊದಲ ಬಾರಿಗೆ ಹೋಗಬೇಕಾದರೆ ಇದೇ ಕಾರು ನನ್ನನ್ನು ಕರೆದುಕೊಂಡು ಹೋಗಿತ್ತು. ನಮ್ಮ ಮನೆಯವರು ಮೂರು ವರ್ಷಗಳ ಹಿಂದೆ ಕಾರ್ ತೆಗೆದುಕೊಂಡಿದ್ದು, ಕಾರನ್ನು ತುಂಬಾ ಪ್ರೀತಿಯಿಂದ ನೋಡಿಕೊಂಡಿದ್ದರು. ನಮ್ಮ ಮನೆಯವರಲ್ಲಿ ಒಬ್ಬರಂತೆ ಕಾರಿನ ಮೇಲೆ ತುಂಬಾ ಅಫೆಕ್ಷನ್ ಇತ್ತು. ಆದರೆ ಇಂದು ಈ ರೀತಿ ಆಗಿದೆ ತುಂಬಾ ನೋವಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.

    ನಮ್ಮ ಮನೆಯವರು ಮದುವೆಯಾಗಿಂದ ಅದನ್ನು ಪುಟ್ಟ ಮಗುವಿನಂತೆ ನೋಡಿಕೊಳ್ಳುತ್ತಿದ್ದರು. ಅವರಿಗೆ ಕಾರ್ ಎಂದರೆ ತುಂಬಾ ಪ್ರೀತಿ ಇದೆ. ನನ್ನಿಂದ ಅವರಿಗೂ ತುಂಬಾ ನೋವಾಗಿದೆ. ಇದೇ ಮೊದಲ ಬಾರಿಗೆ ಈ ರೀತಿಯಾಗಿ ಅವಘಡ ಏರೋ ಇಂಡಿಯಾದಲ್ಲಿ ಆಗಿದೆ. ಆದರೆ ಈ ಅವಘಡದಿಂದ ಯಾರಿಗೂ ತೊಂದರೆ ಆಗಬಾದರು. ಎಲ್ಲರೂ ಸಣ್ಣ ಸಣ್ಣ ಸೇವಿಂಗ್ಸ್ ಇಟ್ಟುಕೊಂಡು ಕಾರ್ ತೆಗೆದುಕೊಂಡಿರುತ್ತಾರೆ. ಈ ರೀತಿ ಆದರೆ ಮಧ್ಯಮ ವರ್ಗದ ನಮಗೆ ತುಂಬಾ ನೋವಾಗುತ್ತದೆ ಎಂದು ಹೇಳಿದ್ದಾರೆ.

    https://www.youtube.com/watch?v=NCs_XVL0SKE

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 1 ಸಾವಿರ ಕಾರ್ ಪಾರ್ಕ್ ಮಾಡಿದ್ದ ಜಾಗದಲ್ಲಿ ಬೆಂಕಿ ಅವಘಡ: ಅಗ್ನಿಶಾಮಕ ದಳದ ಡಿಜಿಪಿ

    1 ಸಾವಿರ ಕಾರ್ ಪಾರ್ಕ್ ಮಾಡಿದ್ದ ಜಾಗದಲ್ಲಿ ಬೆಂಕಿ ಅವಘಡ: ಅಗ್ನಿಶಾಮಕ ದಳದ ಡಿಜಿಪಿ

    ಬೆಂಗಳೂರು: ಏರೋ ಇಂಡಿಯಾ 2019ರ ಏರ್ ಶೋ ಅಗ್ನಿ ಅವಘಡ ಸಂಭವಿಸಿದ್ದು, ಸದ್ಯಕ್ಕೆ ಬೆಂಕಿಯನ್ನು ನಿಯಂತ್ರಣಕ್ಕೆ ಬಂದಿದೆ. ಪರಿಸ್ಥಿತಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕ ಸಾರ್ವಜನಿಕರಿಗೆ ಸ್ಥಳಕ್ಕೆ ಅವಕಾಶ ನೀಡಲಾಗುವುದು ಎಂದು ಅಗ್ನಿಶಾಮಕ ದಳದ ಡಿಜಿಪಿ ಎಂಎನ್ ರೆಡ್ಡಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಏರ್ ಶೋ ನಡೆಯುತ್ತಿರುವ ಕಾರಣ ಸ್ಥಳದಲ್ಲಿ 1 ಸಾವಿರ ಕಾರುಗಳು ಪಾರ್ಕ್ ಮಾಡಲಾಗಿತ್ತು. ಶೋಗೆ ಹೆಚ್ಚಿನ ಜನರು ಆಗಮಿಸಿದ ಕಾರಣ ಕಾರುಗಳನ್ನು ಮೈದಾನದಂತಹ ಪ್ರದೇಶದಲ್ಲಿ ತಾತ್ಕಾಲಿವಾಗಿ ನಿಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು. ಸ್ಥಳದಲ್ಲಿ ಹುಲ್ಲು ಹೆಚ್ಚಾಗಿರುವುದರಿಂದ ಗಾಳಿಗೆ ಬೆಂಕಿ ಬಹುಬೇಗ ಹರಡಿದೆ. ಪರಿಣಾಮ 300ಕ್ಕೂ ಹೆಚ್ಚು ಕಾರುಗಳು ಹಾನಿಯಾಗಿದೆ ಎಂದು ಸ್ಪಷ್ಟನೆ ನೀಡಿದರು.

    ವಾಹನ ಮಾಲೀಕರಿಗೆ ಸ್ಥಳಕ್ಕೆ ತೆರಳಲು ಅವಕಾಶ ನೀಡಿಲ್ಲ. ಬೆಂಕಿ ಹೆಚ್ಚಾಗಲು ಕಾರಣ ಏನೆಂಬುವುದನ್ನು ತಿಳಿಯಲು ಸ್ಥಳ ಪರಿಶೀಲನೆ ನಡೆಸುವ ಅಗತ್ಯವಿದೆ. ಆದ್ದರಿಂದ ಸ್ಥಳಕ್ಕೆ ತೆರಳಲು ಅವಕಾಶ ನೀಡಿಲ್ಲ. ಸಂಪೂರ್ಣವಾಗಿ ಬೆಂಕಿಯನ್ನು ಹತೋಟಿಗೆ ತೆಗೆದುಕೊಂಡ ಬಳಿಕ ಎಲ್ಲರಿಗೂ ಅವಕಾಶ ನೀಡಲಾಗುವುದು.

    ಸ್ಥಳದಲ್ಲಿ ಬೆಂಕಿ ಹೊತ್ತಿಕೊಂಡ ಮೇಲೆ ಬ್ಲಾಸ್ಟ್ ಕೂಡ ಸಂಭವಿಸಿದೆ. ಆದ್ದರಿಂದಲೇ ಮತ್ತಷ್ಟು ಬೆಂಕಿಯ ಜ್ವಾಲೆ ಹೆಚ್ಚಾಯಿತು. ತಾತ್ಕಾಲಿಕವಾಗಿ ಏರ್ ಶೋ ಪ್ರದರ್ಶನಕ್ಕೆ ತಡೆ ನೀಡಲಾಗಿದೆ. ಪರಿಸ್ಥಿತಿ ಹತೋಟಿ ತೆಗೆದುಕೊಳ್ಳುವ ಕಾರ್ಯ ಮುಂದುವರಿದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ತಿಳಿಸಿದರು.

    https://twitter.com/KarFireDept/status/1099226119255945216

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 100ಕ್ಕೂ ಹೆಚ್ಚು ಕಾರುಗಳಿಗೆ ಬೆಂಕಿ-ಏರ್ ಶೋ ಸ್ಥಗಿತ

    100ಕ್ಕೂ ಹೆಚ್ಚು ಕಾರುಗಳಿಗೆ ಬೆಂಕಿ-ಏರ್ ಶೋ ಸ್ಥಗಿತ

    -ಏರೋ ಇಂಡಿಯಾ ಶೋನಲ್ಲಿ ಅಗ್ನಿದೇವನ ರುದ್ರ ನರ್ತನ

    ಬೆಂಗಳೂರು: ನಗರದ ಯಲಹಂಕ ವಾಯುನೆಲೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 100ಕ್ಕೂ ಹೆಚ್ಚು ಕಾರುಗಳಿಗೆ ಬೆಂಕಿ ಹತ್ತಿಕೊಂಡಿದ್ದರಿಂದ ಏರ್ ಶೋ ಸ್ಥಗಿತಗೊಳಿಸಲಾಗಿದೆ. ಸ್ಥಳಕ್ಕೆ 10ಕ್ಕೂ ಹೆಚ್ಚು ಅಗ್ನಿಶಾಮಕದಳದ ವಾಹನಗಳು ಆಗಮಿಸಿದ್ದು, ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

    ಪಾರ್ಕಿಂಗ್ ಗೇಟ್ ನಂಬರ್ 5ರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಯಲಹಂಕ ವಾಯುನೆಲೆಯಲ್ಲಿಯ ಏರ್ ಶೋ ಸ್ಥಗಿತಗೊಂಡಿದೆ. ಪಾರ್ಕಿಂಗ್ ಲಾಟ್ ಬಳಿ ಒಣಹುಲ್ಲು ಹೆಚ್ಚಾಗಿದ್ದು, ಸಿಗರೇಟ್ ಹಾಕಿದ್ದರಿಂದ ಬೆಂಕಿ ಹತ್ತಲು ಕಾರಣ ಎಂದು ಹೇಳಲಾಗುತ್ತಿದೆ. ಬೆಂಕಿ ಅವಘಡ ಸಂಭವಿಸುತ್ತಿದ್ದಂತೆ ವಾಹನದ ಮಾಲೀಕರು ಪಾರ್ಕಿಂಗ್ ಸ್ಥಳಕ್ಕೆ ಬಂದಿದ್ದಾರೆ. ಪೊಲೀಸರು ಯಾರನ್ನು ಒಳಗಡೆ ಬಿಡುತ್ತಿಲ್ಲ.

    ಯಲಹಂಕದ ಬಳಿ ದಟ್ಟವಾದ ಹೊಗೆ ಕಾಣಿಸಿಕೊಂಡಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. ಯಲಹಂಕ ಮತ್ತು ಹೆಬ್ಬಾಳದ ಕಡೆ ಪ್ರಯಾಣ ಬೆಳೆಸುವವರು ಮಾರ್ಗ ಬದಲಿಸಿಕೊಳ್ಳುವುದು ಉತ್ತಮ. ಇಂದು ಮತ್ತು ನಾಳೆ ಸಾರ್ವಜನಿಕರಿಗೆ ಏರ್ ಶೋ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಈ ಹಿನ್ನೆಲೆಯಲ್ಲಿ ವೀಕೆಂಡ್ ಎಂದು ಸಾವಿರಾರು ಸಂಖ್ಯೆಯಲ್ಲಿ ಜನರು ಏರ್ ಶೋ ಕಣ್ತುಂಬಿಕೊಳ್ಳಲು ಆಗಮಿಸಿದ್ದರು.

    ಬೆಂಕಿ ಅವಘಡ ಸಂಭವಿಸಿದ ವೇಳೆ ಸ್ಥಳದಲ್ಲಿ ಸಾರ್ವಜನಿಕರು ಇಲ್ಲದ ಕಾರಣ ಪ್ರಾಣಹಾನಿ ಸಂಭವಿಸಿಲ್ಲ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ. ತಮ್ಮ ಮುಂದೆಯೇ ನೆಚ್ಚಿನ ಕಾರು ಅಗ್ನಿದೇವನಿಗೆ ಆಹುತಿ ಆಗುತ್ತಿರೋದನ್ನು ಕಂಡು ಕೆಲವರು ಕಣ್ಣೀರು ಹಾಕುತ್ತಿದ್ದಾರೆ. ಮತ್ತೆ ಕೆಲವರು ನಮ್ಮ ಕಾರುಗಳನ್ನು ತೆಗೆದುಕೊಳ್ಳಲು ಒಳಗೆ ಬಿಡಿ ಎಂದು ಭದ್ರತಾ ಸಿಬ್ಬಂದಿ ಜೊತೆಗೆ ವಾಗ್ವಾದಕ್ಕೆ ಇಳಿಯುತ್ತಿದ್ದಾರೆ.

    https://www.youtube.com/watch?v=lVsSt2_gisQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಏರ್ ಶೋನಲ್ಲಿಂದು ಮಹಿಳೆಯರ ಹವಾ- ತೇಜಸ್ ವಿಮಾನದಲ್ಲಿ ಹಾರಾಡಲಿದ್ದಾರೆ ಪಿ.ವಿ ಸಿಂಧು

    ಏರ್ ಶೋನಲ್ಲಿಂದು ಮಹಿಳೆಯರ ಹವಾ- ತೇಜಸ್ ವಿಮಾನದಲ್ಲಿ ಹಾರಾಡಲಿದ್ದಾರೆ ಪಿ.ವಿ ಸಿಂಧು

    ಬೆಂಗಳೂರು: ಇಂದಿನ ಏರ್ ಶೋನಲ್ಲಿ ಮಹಿಳೆಯರು ಹವಾ ಸೃಷ್ಟಿಸಲಿದ್ದಾರೆ. ಲೋಹದ ಹಕ್ಕಿಗಳನ್ನು ಮಹಿಳಾ ಪೈಲೆಟ್ ಗಳು ಚಲಾಯಿಸುತ್ತಿದ್ದಾರೆ.

    ಮಾರ್ಚ್ 8ರ ಮಹಿಳಾ ದಿನಾಚರಣೆ ಪ್ರಯುಕ್ತ ಇಂದಿನ ಏರ್ ಇಂಡಿಯಾ ಶೋದಲ್ಲಿ ಮಹಿಳಾ ಪೈಲಟ್‍ಗಳೇ ಆಗಸದಲ್ಲಿ ಕಸರತ್ತು ಮಾಡಿ ಪವರ್ ತೋರಿಸಲಿದ್ದಾರೆ. ಇಂದು ಬೆಳಗ್ಗೆ 9.30ಕ್ಕೆ 6 ಜನ ಮಹಿಳೆಯರು ಪ್ಯಾರಾಜೂಪರ್ಸ್ ಪ್ರದರ್ಶನ ನೀಡಲಿದ್ದಾರೆ.

    ಇಂದು ಮಧ್ಯಾಹ್ನ 12 ಗಂಟೆಗೆ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅವರು ತೇಜಸ್ ವಿಮಾನದಲ್ಲಿ ಹಾರಾಡಲಿದ್ದಾರೆ. ಇಂದು ಮತ್ತು ನಾಳೆ ಮಾತ್ರ ಏರ್ ಶೋ ನಡೆಯಲಿದೆ. ಹಾಗಾಗಿ ಈ 2 ದಿನ ಜನಸಾಗರವೇ ಹರಿದುಬರಲಿದೆ. ಇದರಿಂದ ಟ್ರಾಫಿಕ್ ಬಿಸಿಯೂ ತಟ್ಟಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv