ಸಿನಿರಸಿಕರ ಸದ್ಯದ ಅಡಿಕ್ಷನ್ ಈ ಅನಿತಾ, ಗಂಡ್ ಹೈಕ್ಳ ಪಾಲಿನ ಮುದ್ದು ದೇವತೆ. `ಏಕ್ ಲವ್ ಯಾ’ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಪರಿಚಿತರಾದ ನಟಿ ರೀಷ್ಮಾ ನಾಣಯ್ಯ, ಒಂದು ಕಡೆ ಫೋಟೋಶೂಟ್ನಿಂದ ಗಂಡ್ ಹೈಕ್ಳ ನಿದ್ದೆಗೆಡಿಸುತ್ತಿದ್ದರೆ, ಇನ್ನೊಂದ್ ಕಡೆ ಸೂಪರ್ ಸ್ಟಾರ್ ಚಿತ್ರಗಳಿಗೆ ನಾಯಕಿಯಾಗುವ ಮೂಲಕ ಸದ್ದು ಮಾಡ್ತಿದ್ದಾರೆ.
ಡೈರೆಕ್ಟರ್ ಪ್ರೇಮ್ ನಿರ್ದೇಶನದ `ಏಕ್ ಲವ್ ಯಾ’ ಚಿತ್ರದಲ್ಲಿ ರಾಣಾಗೆ ನಾಯಕಿಯಾಗಿ ನಟಿಸಿದ್ದ ಕೊಡಗಿನ ಬೆಡಗಿ ರೀಷ್ಮಾ, ನಟಿಸಿದ ಮೊದಲ ಚಿತ್ರದಲ್ಲೇ ಮನೋಜ್ಞವಾಗಿ ನಟಿಸಿ ಸೈ ಎನಿಸಿಕೊಂಡಿದ್ರು. `ರಾಣಾ’ ಮತ್ತು `ಮಾರ್ಗ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಗ್ಯಾಪಲ್ಲೊಂದು ರೀಷ್ಮಾ ಮಾಡಿಸಿರುವ ಫೋಟೋಶೂಟ್ ನೋಡುರನ್ನ ಇಂಪ್ರೇಸ್ ಮಾಡ್ತಿದೆ.
ನಟಿ ರೀಷ್ಮಾ ವೆಸ್ಟರ್ನ್ ಲುಕ್ಕಿನಲ್ಲಿ ಚೇರ್ ಮೇಲೆ ಕುಳಿತು ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಕಣ್ಣು ಕುಕ್ಕುವ ಅವತಾರದಲ್ಲಿ ಕಾಣಿಸಿಕೊಂಡಿರುವ ಅನಿತಾ ಕ್ಯೂಟ್ ಲುಕ್ಕಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸದ್ಯ ರೀಷ್ಮಾ ಹೊಸ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇದನ್ನೂ ಓದಿ:2ನೇ ಚಿತ್ರ ರಿಲೀಸೇ ಆಗಿಲ್ಲ. 3, 4 ಮತ್ತು 5ನೇ ಸಿನಿಮಾ ಒಪ್ಪಿಕೊಂಡ ಯಂಗ್ ರೆಬೆಲ್ ಸ್ಟಾರ್
`ಏಕ್ ಲವ್ ಯಾ’ ಚಿತ್ರದ ನಂತರ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರೋ ಈ ಕೊಡಗಿನ ಕುವರಿ ಸದ್ಯ ಸ್ಯಾಂಡಲ್ವುಡ್ನ ಇಬ್ಬರು ಸೂಪರ್ ಸ್ಟಾರ್ಗಳ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸದ್ಯದಲ್ಲೇ ಈ ಚಿತ್ರದ ಕುರಿತು ರಿವೀಲ್ ಮಾಡಲಿದೆ ಚಿತ್ರತಂಡ. ಒಟ್ನಲ್ಲಿ ನಟಿಸಿರೋ ಒಂದೇ ಚಿತ್ರಕ್ಕೆ, ನೆಚ್ಚಿನ ನಟಿಗೆ ಸಾಕಷ್ಟು ಚಿತ್ರಗಳ ಆಫರ್ ಬರುತ್ತಿರೋದನ್ನ ಕೇಳಿ ರೀಷ್ಮಾ ಫ್ಯಾನ್ಸ್ ದಿಲ್ಖುಷ್ ಆಗಿದ್ದಾರೆ.
ಸೌಂದರ್ಯದ ಜೊತೆ ಪ್ರತಿಭೆಯಿರೋ ಮತ್ತೊರ್ವ ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದಾರೆ. `ಏಕ್ ಲವ್ ಯಾ’ ಚಿತ್ರದ ಮೂಲಕ ಚಂದನವನಕ್ಕೆ ಪರಿಚಿತರಾದ ಕೊಡಗಿನ ಕುವರಿ ರೀಷ್ಮಾ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.
ನಿರ್ದೇಶಕ ಪ್ರೇಮ್ ಗರಡಿಯಲ್ಲಿ ಪಳಗಿದ ಪ್ರತಿಭಾವಂತ ನಟಿ ರೀಷ್ಮಾ ನಾಣಯ್ಯ, ನಟಿಸಿರೋ ಮೊದಲ ಚಿತ್ರದಲ್ಲೇ ತಾನೆಂತಹ ನಟಿ ಅನ್ನೋದನ್ನ ಪ್ರೂವ್ ಮಾಡಿದ್ರು. ಈ ಚಿತ್ರದ ಅನಿತಾ ಪಾತ್ರಧಾರಿಯಾಗಿ ಸೈ ಎನಿಸಿಕೊಂಡರು. ಈಗ ರೀಷ್ಮಾಗಾಗಿ ಒಳ್ಳೊಳ್ಳೆ ಪಾತ್ರಗಳು ಅರಸಿ ಬರುತ್ತಿವೆ.
ಸದ್ಯ ನಂದಕಿಶೋರ್ ನಿರ್ದೇಶನದ `ರಾಣಾ’ ಚಿತ್ರದಲ್ಲಿ ಶ್ರೇಯಸ್ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆಕ್ಷನ್ ಜೊತೆ ಲವ್ಸ್ಟೋರಿಯಿರೋ ರಾಣಾಗೆ ಜೋಡಿಯಾಗಿ ಸಾಥ್ ನೀಡಿದ್ದಾರೆ. ಇನ್ನು ಆ ದಿನಗಳು ಚೇತನ್ ನಟನೆಯ ʻಮಾರ್ಗʼ ಚಿತ್ರದಲ್ಲೂ ರೀಷ್ಮಾ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ಕೆಲವು ಪ್ರಾಜೆಕ್ಟ್ ಮಾತುಕತೆಯಲ್ಲಿದೆ. ಈ ಎರಡು ಚಿತ್ರಗಳಲ್ಲೂ ವಿಭಿನ್ನ ಪಾತ್ರದ ಮೂಲಕ ಕೊಡಗಿ ಬೆಡಗಿ ರೀಷ್ಮಾ ರಂಜಿಸೋದು ಗ್ಯಾರೆಂಟಿ. ಇದನ್ನು ಓದಿ:ದೇಹಾಕಾರದಲ್ಲಿ ನನಗೂ ಸಮಸ್ಯೆ ಇವೆ, ಬಾಡಿ ಶೇಮಿಂಗ್ ಬಗ್ಗೆ ಶಾಂಕಿಗ್ ಸುದ್ದಿ ಕೊಟ್ಟ ವೈಷ್ಣವಿ
ಇನ್ನು ಸಾಮಾಜಿಕ ಜಾಲತಾಣದಲ್ಲೂ `ಏಕ್ ಲವ್ ಯಾ’ ನಟಿಯ ಫೀವರ್ ಜೋರಾಗಿದೆ. ಸಿನಿಮಾ ವಿಷ್ಯ ಮಾತ್ರವಲ್ಲದೇ ಕಲರ್ಫುಲ್ ಅವತಾರದಲ್ಲಿ ಬೋಲ್ಡ್ ಲುಕ್ನಿಂದ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಸದ್ಯ ಈ ಫೋಟೋಗಳು ಪಡ್ಡೆ ಹೈಕ್ಳ ಹಾರ್ಟ್ ಫೇವರೇಟ್ ಆಗಿದೆ. ನೆಚ್ಚಿನ ನಟಿ ರೀಷ್ಮಾಳ ಮುಂಬರುವ ಚಿತ್ರಕ್ಕಾಗಿ ಫ್ಯಾನ್ಸ್ ಕಾಯ್ತಿದ್ದಾರೆ.
ಕೊಪ್ಪಳ: ಏಕ್ ಲವ್ ಯಾ ಸಿನಿಮಾ ತಂಡ ಇಂದು ಕೊಪ್ಪಳಕ್ಕೆ ಭೇಟಿ ನೀಡಿದ್ದು, ಈ ವೇಳೆ ನಿರ್ದೇಶಕ ಪ್ರೇಮ್ ಹಾಗೂ ನಟಿ ರಕ್ಷಿತಾ ಅವರನ್ನು ನೋಡಲು ಜನ ಮುಗಿಬಿದ್ದರು.
ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿರೋ ಶಿವ ಚಿತ್ರಮಂದಿರಕ್ಕೆ ಪ್ರೇಮ್, ರಕ್ಷಿತಾ ಭೇಟಿ ಕೊಟ್ಟಿದ್ದಾರೆ. ಈ ವೇಳೆ ರೈತರು ಪ್ರೇಮ್ ಹಾಗೂ ರಕ್ಷಿತಾಗೆ ಹಸಿರು ಶಾಲು ಹೊದಿಸಿ ಸನ್ಮಾನ ಮಾಡಿದರು. ಈ ವೇಳೆ ಪ್ರೇಮ್, ರಕ್ಷಿತಾರನ್ನು ನೋಡಲು ನೂರಾರು ಅಭಿಮಾನಿಗಳು ಜಮಾಯಿಸಿದರು. ಇದನ್ನೂ ಓದಿ: ಬಾಹುಬಲಿ ಕಟ್ಟಪ್ಪನ ಬಗ್ಗೆ ಪ್ರಭಾಸ್ ಹೇಳಿದ್ದೇನು ಗೊತ್ತಾ?
ರಕ್ಷಿತಾ ನಿರ್ಮಾಣದಲ್ಲಿ ಹಾಗೂ ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬಂದಿರುವ ರಾಣಾ ಅಭಿನಯದ ‘ಏಕ್ ಲವ್ ಯಾ’ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಂಭ್ರಮದ ಸಕ್ಸಸ್ ಖುಷಿಯಲ್ಲಿರುವ ‘ಏಕ್ ಲವ್ ಯಾ’ ಚಿತ್ರತಂಡ ರಾಜ್ಯ ಪ್ರವಾಸವನ್ನು ಮಾಡುತ್ತಿದೆ.
ಬೆಂಗಳೂರು: ಭವಿಷ್ಯದಲ್ಲಿ ರಾಜಕೀಯಕ್ಕೆ ಬರಲು ಅವಕಾಶ ಸಿಕ್ಕರೆ ನೋಡೋಣ ಎನ್ನುವ ಮೂಲಕ ರಾಜಕೀಯ ಪ್ರವೇಶದ ಬಗ್ಗೆ ಚಂದನವನದ ನಟ, ನಿರ್ದೇಶಕ ಪ್ರೇಮ್ ಸುಳಿವನ್ನು ನೀಡಿದರು.
‘ಏಕ್ ಲವ್ ಯಾ’ ಸಿನಿಮಾ ಪ್ರಚಾರಕ್ಕಾಗಿ ಬಂದ ಪ್ರೇಮ್ ರಾಜಕೀಯ ಎಂಟ್ರಿ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನಾವು ಚುನಾವಣೆಗೆ ನಿಲ್ಲದಿದ್ದರೂ, ಜನರಿಗಾಗಿ ಕೆಲಸ ಮಾಡುತ್ತಿದ್ದೇವೆ. ಪ್ರೇಮ್ ಫೌಂಡೇಶನ್ ಟ್ರಸ್ಟ್ ಮಾಡಿದ್ದೇವೆ. ಈ ಮೂಲಕ ಹಲವು ಜನರಿಗೆ ಸಹಾಯ ಮಾಡಿದ್ದೇವೆ. ನನ್ನ ತಾಯಿ ಹೆಸರಲ್ಲಿ ವಿದ್ಯಾರ್ಥಿಗಳಿಗೆ, ರೈತರಿಗಾಗಿ ಸಹಾಯ ಮಾಡಿದ್ದೇವೆ. ಇದನ್ನು ನಾವು ಹೇಳಿಕೊಳ್ಳಬೇಕು ಎಂಬುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಕೊನೆಗೂ ತನ್ನ ಕನಸು ನೆರವೇರಿತು ಎಂದ ಪ್ರಭಾಸ್ !
ಸಮಾಜಸೇವೆ ಎಂದರೆ ಜನರು ಇರುವಲ್ಲಿಗೆ ಹೋಗಿ ಮಾಡಬೇಕು ಎಂದು ಇಲ್ಲ. ನಮ್ಮ ಕೈಯಲ್ಲಿ ಆದ ಸಹಾಯವನ್ನು ನಾವು ಮಾಡುತ್ತಿದ್ದೇವೆ. ಅದಕ್ಕೆ ರಾಜಕೀಯಕ್ಕೆ ಬಂದು ಮಾಡಬೇಕು ಎಂಬುದಿಲ್ಲ ಎಂದು ನಕ್ಕರು.
ರಾಜಕೀಯ ವಿಷಯಕ್ಕೆ ಬಂದ್ರೆ. ನಾನು ಮಂಡ್ಯದಲ್ಲಿ ಚುನಾವಣೆಗೆ ನಿಲ್ಲುತ್ತೇನೆ ಎಂದೇ ಎಷ್ಟೋ ಜನರು ಹೇಳುತ್ತಿದ್ದರು. ಆದರೆ ಅಲ್ಲಿ ನನ್ನ ಅಣ್ಣ ರೆಬೆಲ್ ಸ್ಟಾರ್ ಅಂಬಿ ಇರುವವರೆಗೂ ನಾನು ಆ ಕ್ಷೇತ್ರದಲ್ಲಿ ನಿಲ್ಲುವುದಿಲ್ಲ ಎಂಬುದು ಸಹ ಎಲ್ಲರಿಗೂ ತಿಳಿದಿತ್ತು. ಅವರಿಟ್ಟ ಹೆಜ್ಜೆಯನ್ನು ನಾವು ತುಳಿಯುವುದಕ್ಕೆ ಆಗುವುದಿಲ್ಲ. ಅವರು ಮಹಾನ್ ವ್ಯಕ್ತಿ. ಭವಿಷ್ಯದಲ್ಲಿ ಏನಾದರೂ ಅವಕಾಶ ಬಂದ್ರೆ ನೋಡೋಣ ಎಂದು ರಾಜಕೀಯಕ್ಕೆ ಎಂಟ್ರಿ ಬಗ್ಗೆ ಸುಳಿವನ್ನು ಕೊಟ್ಟರು.
ನನಗೆ ಯಾವುದೇ ಪಕ್ಷಕ್ಕೆ ಸೇರಬೇಕು ಎಂಬುದಿಲ್ಲ. ಸಹಜವಾಗಿ ನನಗೆ ಎಲ್ಲ ಪಕ್ಷದಲ್ಲಿಯೂ ನನ್ನ ಹಿರಿಯರು, ಸ್ನೇಹಿತರು, ಹಿತೈಷಿಗಳು ಇದ್ದಾರೆ. ಅದಕ್ಕೆ ಇದೇ ಪಕ್ಷ ಸೇರಬೇಕು ಎಂದು ನಾನು ಹೇಳಲಾಗುವುದಿಲ್ಲ. ಪ್ರೇಮ್ ಒಬ್ಬ ರೈತರ ಮಗ ಎಂದು ಎಲ್ಲರೂ ನನಗೆ ಆರ್ಶೀವಾದವನ್ನು ಮಾಡಿದ್ದಾರೆ. ಎಲ್ಲ ಪಕ್ಷದವರು ನನ್ನನ್ನು ಪ್ರೀತಿಯಿಂದ ಕರೆಯುತ್ತಾರೆ ಎಂದರು. ಇದನ್ನೂ ಓದಿ: ಮದುವೆಗೂ ಮುನ್ನ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ ವಧು – ವೀಡಿಯೋ ವೈರಲ್
ಪ್ರಸ್ತುತ ನನ್ನ ‘ಏಕ್ ಲವ್ ಯಾ’ ಸಿನಿಮಾ ಬಿಡುಗಡೆಯಾಗುತ್ತಿದೆ. ಮುಂದೆ ಐತಿಹಾಸಿಕ ಸಿನಿಮಾ ಮಾಡಬೇಕು ಎಂದುಕೊಂಡಿದ್ದೇನೆ. ಸದ್ಯಕ್ಕೆ ನನಗೆ ತಲೆಯಲ್ಲಿ ಅದೇ ಇದೆ. ಅದರ ಕಡೆ ಹೆಚ್ಚು ಗಮನಕೊಡಬೇಕು. ಭವಿಷ್ಯದಲ್ಲಿ ರಾಜಕೀಯದ ಬಗ್ಗೆ ನೋಡೋಣ. ನೀವು ಇದ್ದೀರಾ ಅಲ್ಲ ನೀವು ಹೋಗಿ ಎಂದರೆ ಹೋಗೋಣ ಎಂದು ಹೇಳಿದರು.
ಬೆಂಗಳೂರು: ಅಪ್ಪು ಅವರಿಗೆ ಅವಮಾನ ಮಾಡುವ ಉದ್ದೇಶ ಮತ್ತು ಆಲೋಚನೆ ಯಾವ ಕನ್ನಡಿಗರಿಗೂ ಇರುವುದಿಲ್ಲ ಎಂದು ಸ್ಯಾಂಡಲ್ವುಡ್ ನಟಿ ರಚಿತಾ ರಾಮ್ ತಿಳಿದ್ದಾರೆ.
ಏಕ್ ಲವ್ ಯಾ ಸಿನಿಮಾ ತಂಡ ಸಾಂಗ್ ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಿತ್ತು, ಈ ವೇಳೆ ನಟ ಪವರ್ ಪುನೀತ್ ರಾಜ್ಕುಮಾರ್ ಫೋಟೋ ಮುಂದೆ ಏಕ್ ಲವ್ ಯಾ ಸಿನಿಮಾ ತಂಡ ಶಾಂಪೇನ್ ಚಿಮ್ಮಿಸಿತ್ತು. ಹೀಗಾಗಿ ಇದೇನು ಶ್ರದ್ಧಾಂಜಲಿ ಕಾರ್ಯಕ್ರಮವೋ ಅಥವಾ ಸಂಭ್ರಮಾಚರಣೆಯ ಕಾರ್ಯಕ್ರಮವೋ ಎಂದು ಅಪ್ಪು ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.
ಸದ್ಯ ಈ ನಟಿ ರಚಿತಾ ರಾಮ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫೋಸ್ಟ್ವೊಂದನ್ನು ಶೇರ್ ಮಾಡಿಕೊಳ್ಳುವ ಮೂಲಕ ಅಪ್ಪು ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. ‘ನಿನ್ನೆಯ ಏಕ್ ಲವ್ ಯಾ ಸಿನಿಮಾದ ಸಾಂಗ್ ಲಾಂಚ್ ಕಾರ್ಯಕ್ರಮದಲ್ಲಿ ಅಪ್ಪು ಭಾವಚಿತ್ರದ ಎದುರು ಶಾಂಪೇನ್ ಬಾಟಲ್ ಓಪನ್ ಮಾಡಿ ಹಾಡನ್ನು ಬಿಡುಗಡೆಗೊಳಿಸಿರುವ ಬಗ್ಗೆ ನಿಮ್ಮೆಲ್ಲರಿಗೆ ಅಸಮಾಧಾನವಾಗಿದೆ. ಆ ಬಗ್ಗೆ ದಯವಿಟ್ಟು ಕ್ಷಮೆ ಇರಲಿ ನಾನೂ ಕೂಡ ಚಿತ್ರದ ಭಾಗವಾಗಿರುವುದರಿಂದ, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಿಂದ ಕ್ಷಮೆ ಕೇಳುತ್ತೇನೆ. ಇದನ್ನೂ ಓದಿ: ಅಪ್ಪುಗೆ ಅವಮಾನ ಮಾಡಲು ಯಾರಿಂದಲೂ ಸಾಧ್ಯವಿಲ್ಲ, ಮಾಡುವುದೂ ಇಲ್ಲ: ರಕ್ಷಿತಾ
ಅಪ್ಪು ಅವರಿಗೆ ಅವಮಾನ ಮಾಡುವ ಉದ್ದೇಶ, ಆಲೋಚನೆ ಯಾವ ಕನ್ನಡಿಗರಿಗೂ ಇರುವುದಿಲ್ಲ. ಅದಾಗಿಯೂ ಉದ್ದೇಶಪೂರ್ವಕವಲ್ಲದ ತಪ್ಪನ್ನು ಅಭಿಮಾನಿಗಳು ಮನ್ನಿಸುತ್ತಾರೆಂದು ನಂಬಿದ್ದೇನೆ’ ಎಂದು ಕೇಳಿಕೊಂಡಿದ್ದಾರೆ. ಆದರೂ ಸಮಾಧಾನಗೊಳ್ಳದ ಅಪ್ಪು ಅಭಿಮಾನಿಗಳು ರಚಿತಾ ರಾಮ್ ಅವರಿಗೆ ಸಖತ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ಅಪ್ಪುಗೆ ಅವಮಾನ ಮಾಡುವ ಉದ್ದೇಶ ಇರಲಿಲ್ಲ: ಪ್ರೇಮ್ ಕ್ಷಮೆ
ಶುಕ್ರವಾರ ಏಕ್ ಲವ್ ಯಾ ಸಿನಿಮಾ ತಂಡ ಸಾಂಗ್ ರಿಲೀಸ್ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಈ ವೇಳೆ ಅಪ್ಪುಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಆದರೆ ಶ್ರದ್ಧಾಂಜಲಿ ವೇಳೆ ಅಪ್ಪು ಫೋಟೋ ಮುಂದೆ ನಟಿ ರಕ್ಷಿತಾ ಪ್ರೇಮ್ ಶಾಂಪೇನ್ ಚಿಮ್ಮಿಸಿದ್ದರು. ಈ ವೇಳೆ ಅಪ್ಪು ಅವರ ಫೋಟೋ ಎಲ್ಇಡಿ ಮೇಲೆ ಬಂದಿದೆ. ಈ ಸುದ್ದಿ ಪಬ್ಲಿಕ್ ಟಿವಿಯಲ್ಲಿ ಪ್ರಸಾರ ಆಗಿತ್ತು. ಇದನ್ನು ಗಮನಿಸಿದ ಸಾರಾ ಗೋವಿಂದ್ ಅವರು, ಅಪ್ಪು ಅಗಲಿಕೆ ನೋವಿನಿಂದ ಹೊರಬಂದಿಲ್ಲ. ಆದರೆ ಇಲ್ಲಿ ಅಪ್ಪು ಅವರಿಗೆ ಅವಮಾನ ಮಾಡಿದಂತಾಗಿದೆ. ಹೀಗಾಗಿ ಚಿತ್ರತಂಡ ಕೂಡಲೇ ಕ್ಷಮೆ ಕೇಳಬೇಕು ಎಂದು ಸೂಚನೆ ನೀಡಿದ್ದರು. ಅಂತೆಯೇ ಇದೀಗ ಪ್ರೇಮ್ ಹಾಗೂ ಅಕುಲ್ ಬಾಲಾಜಿ, ನಟಿ ರಕ್ಷಿತಾ ಪ್ರೇಮ್ ಸೇರಿದಂತೆ ಇಡೀ ಚಿತ್ರತಂಡ ಕ್ಷಮೆ ಕೇಳಿದೆ.
ಬೆಂಗಳೂರು: ತಾಂತ್ರಿಕ ಕಾರಣದಿಂದ ಎಡವಟ್ಟು ಆಗಿದೆ ಎಂದು ನಿರೂಪಕ ಅಕುಲ್ ಬಾಲಾಜಿ ಪಬ್ಲಿಕ್ ಟಿವಿ ಮೂಲಕ ರಾಜ್ಯದ ಜನತೆ ಬಳಿ ಕ್ಷಮೆ ಕೇಳಿದರು.
ಅಪ್ಪುಗೆ ‘ಏಕ್ ಲವ್ ಯಾ’ ಚಿತ್ರತಂಡ ಅಪಮಾನ ಮಾಡಿದೆ ಎಂಬ ಆರೋಪ ಸಂಬಂಧ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅಕುಲ್ ಬಾಲಾಜಿ, ಇದನ್ನು ನಾವು ಬೇಕು ಎಂದು ಮಾಡಿಲ್ಲ. ತಾಂತ್ರಿಕ ಕಾರಣದಿಂದ ಸಣ್ಣ ಎಡವಟ್ಟು ಆಗಿದೆ. ಇದಕ್ಕೆ ರಾಜ್ಯದ ಜನತೆಗೆ ತಂಡದ ಪರವಾಗಿ ನಾನು ಕ್ಷಮೆಯನ್ನು ಕೇಳುತ್ತೇನೆ ಎಂದು ತಿಳಿಸಿದರು.
ಯಾರು ಸಹ ಉದ್ದೇಶಪೂರ್ವಕವಾಗಿ ಮಾಡುವುದಿಲ್ಲ. ಅದು ಅಲ್ಲದೇ ಅಪ್ಪುವನ್ನು ಕಳೆದುಕೊಂಡು 15 ದಿನಗಳಾಗಿರುವ ಈ ಸಮಯದಲ್ಲಿ ಯಾರು ಈ ರೀತಿ ಮಾಡುವುದಿಲ್ಲ. ಆದರೆ ತಾಂತ್ರಿಕ ಕಾರಣದಿಂದ ಈ ಸಮಸ್ಯೆ ಸಂಭವಿಸಿದೆ. ಅಪ್ಪುವಿಗೆ ಶ್ರದ್ಧಾಂಜಲಿ ಅರ್ಪಿಸಿ ನಂತರ ನಾವು ಕಾರ್ಯಕ್ರಮವನ್ನು ಮಾಡಿದ್ದೇನೆ. ಎಲ್ಲರಿಗೂ ಈ ವಿಚಾರ ನೋವಾಗಿದೆ. ಅವರನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ನಾವು ಮುಂದೆ ಹೋಗುತ್ತೇವೆ ಎಂದು ಈ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೆವು ಎಂದು ತಿಳಿಸಿದರು. ಇದನ್ನೂ ಓದಿ: ಅಪ್ಪುಗೆ ಅವಮಾನ ಮಾಡುವ ಉದ್ದೇಶ ಇರಲಿಲ್ಲ: ಪ್ರೇಮ್ ಕ್ಷಮೆ
ರಕ್ಷಿತಾ ಅವರು ಶ್ಯಾಂಪೇನ್ ಓಪನ್ ಮಾಡುವಾಗ ಸಾಂಗ್ ಬರಬೇಕಿತ್ತು. ಆದರೆ ಸಾಂಗ್ ಗೂ ಮೊದಲು ಪ್ರೇಮ್ ಅವರು ಅಪ್ಪು ಬಗ್ಗೆ ಅದ್ಭುತವಾಗಿ ಹೇಳಿದಂತಹ ಮಾತುಗಳು ಬರುತ್ತೆ ಎಂದು ತಿಳಿದುಕೊಂಡಿರಲಿಲ್ಲ. ಅದಕ್ಕೆ ಶ್ಯಾಂಪೇನ್ ಓಪನ್ ಮಾಡಿದ್ದು ಹೊಂದಾಣಿಕೆಯಾಗಿಲ್ಲ ಎಂದು ತಿಳಿಸಿದರು.
ಸಣ್ಣ ಪುಟ್ಟ ದೋಷಗಳು ಇರುತ್ತೆ!
ನಾನು ಕಾರ್ಯಕ್ರಮವನ್ನು ನಿರೂಪಣೆ ಮಾಡಲು ಹೋಗಿದ್ದೆ. ಇದು ಪೂರ್ತಿ ತಂಡ ನಿರ್ಧರಿಸಿದೆ. ಇದು ಲೈವ್ ಆಗಿದ್ದರಿಂದ ನಮ್ಮ ಕೈಯಲ್ಲಿ ಏನೂ ಇರಲಿಲ್ಲ. ನಾವು ರೆಕಾರ್ಡ್ ಶೋ ಆಗಿದ್ದರೆ ಏನಾದರೂ ಮಾಡಬಹುದಿತ್ತು. ಎಲ್ಲ ಕಾರ್ಯಕ್ರಮದಲ್ಲಿಯೂ ಸಣ್ಣ ಪುಟ್ಟ ದೋಷಗಳು ಇರುತ್ತೆ. ರೆಕಾರ್ಡ್ ಆಗಿದ್ದರೆ ಎಡಿಟಿಂಗ್ ಸಮಯದಲ್ಲಿ ಬದಲಾವಣೆ ಮಾಡುತ್ತಾರೆ. ಆದರೆ ಇದು ಲೈವ್ ಆಗಿದ್ದರಿಂದ ಆ ರೀತಿ ಮಾಡಲು ಸಾಧ್ಯವಾಗಲಿಲ್ಲ. ಇದು ತಾಂತ್ರಿಕ ಕಾರಣದಿಂದ ಆಗಿರುವ ತಪ್ಪಾಗಿದೆ ಎಂದು ತಿಳಿಸಿದರು.
ಒಳ್ಳೆಯ ಗೆಳೆಯ
ಯಾರಿಗೂ ಅಪ್ಪು ಅವರನ್ನು ಮರೆಯುವುದಕ್ಕೆ ಆಗುವುದಿಲ್ಲ. ಅವರು ನನ್ನ ಒಳ್ಳೆಯ ಗೆಳೆಯ ಸಹ ಆಗಿದ್ದರು. ಏನೇ ಆದರೂ ಕೆಲಸ ಮಾಡಬೇಕು, ಮುಂದೆ ಹೋಗಬೇಕು ಎಂದು ಅವರು ಯಾವಾಗಲೂ ಹೇಳುತ್ತಿದ್ದರು. ಆ ಒಂದು ಮಾತನ್ನು ತೆಗೆದುಕೊಂಡು ನಾವು ಮುಂದೆ ಹೋದೆವು ಎಂದು ನೆನೆದರು.
ಚಿಯರ್ಸ್ ಮಾಡಿದ ತಕ್ಷಣ ಸಾಂಗ್ ಬರುತ್ತೆ ಎಂದುಕೊಂಡಿದ್ದೆವು. ಆದರೆ ಬೇರೆ ಬಂದಿದ್ದರಿಂದ ಅದು ಮ್ಯಾಚ್ ಆಗಿಲ್ಲ. ನಾವು ಯಾರು ಬೇಕು ಎಂದು ಈ ರೀತಿ ಮಾಡಿಲ್ಲ. ನಾವು ಅಪ್ಪುಗೆ ತುಂಬಾ ಹತ್ತಿರದವರು. ಎಲ್ಲರೂ ಅರ್ಥ ಮಾಡಿಕೊಳ್ಳುತ್ತಾರೆ ಎಂದುಕೊಂಡಿದ್ದೇವೆ. ಈ ರೀತಿ ಆಗಬಾರದು ಎಂದು ನಾವು ತಿಳಿದುಕೊಳ್ಳುತ್ತೇವೆ ಆದರೆ ಆಗಿದೆ. ಅದಕ್ಕೆ ನಾವು ಕ್ಷಮೆ ಕೇಳುತ್ತೇನೆ ಎಂದರು. ಇದನ್ನೂ ಓದಿ: ಅಪ್ಪು ಭಾವಚಿತ್ರಕ್ಕೆ ಮುತ್ತಿಟ್ಟು ಅಜ್ಜಿ ಭಾವುಕ – ವೀಡಿಯೋ ವೈರಲ್
‘ಏಕ್ ಲವ್ ಯಾ’ ಸಿನಿಮಾದ ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ಶ್ಯಾಂಪೇನ್ ಬಾಟಲ್ ಓಪನ್ ಮಾಡಬೇಕಾದಾಗ ಪುನೀತ್ ಅವರ ಫೋಟೋ ಬ್ಯಾಗ್ರೌಂಡ್ ನಲ್ಲಿ ಬಂದಿದ್ದು, ಈ ಹಿನ್ನೆಲೆ ಅಭಿಮಾನಿಗಳು ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಇದು ಶ್ರದ್ಧಾಂಜಲಿ ಕಾರ್ಯಕ್ರಮನಾ ಅಥವಾ ಪಾರ್ಟಿನಾ ಎಂದು ವಿರೋಧವನ್ನು ವ್ಯಕ್ತಪಡಿಸಿ ಸಿನಿಮಾ ತಂಡದವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಲಾಗಿತ್ತು. ಈ ಹಿನ್ನೆಲೆ ತಂಡ ಕ್ಷಮೆಯನ್ನು ಕೇಳುತ್ತಿದ್ದು, ಇದು ಬೇಕೆಂದು ಮಾಡಿಲ್ಲ ಎಂದು ಹೇಳುತ್ತಿದ್ದಾರೆ.
ಬೆಂಗಳೂರು: ಸ್ಯಾಂಡಲ್ವುಡ್ ನಟ ಪುನೀತ್ ರಾಜ್ಕುಮಾರ್ ಅವರ ಫೋಟೋ ಮುಂದೆ ‘ಏಕ್ ಲವ್ ಯಾ’ ಸಿನಿಮಾ ತಂಡ ಶಾಂಪೇನ್ ಚಿಮ್ಮಿಸಿ ಸಂಭ್ರಮಮಾಚರಣೆ ಮಾಡಿರುವುದು ಅಪ್ಪು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಏಕ್ ಲವ್ ಯಾ ಸಿನಿಮಾ ತಂಡ ಸಾಂಗ್ ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಿತ್ತು, ಈ ವೇಳೆ ಅಪ್ಪುಗೆ ಶ್ರದ್ಧಾಂಜಲಿ ಅರ್ಪಿಸಲಾಯಿತ್ತು. ಆದರೆ ಶ್ರದ್ಧಾಂಜಲಿ ವೇಳೆ ಅಪ್ಪು ಫೋಟೋ ಮುಂದೆ ನಟಿ ರಕ್ಷಿತಾ ಶಾಂಪೇನ್ ಚಿಮ್ಮಿಸಿದ್ದಾರೆ. ಈ ವೇಳೆ ಅಪ್ಪು ಫೋಟೋ ಎಲ್ ಇಡಿ ಮೇಲೆ ಬಂದಿದೆ. ಈ ಕುರಿತಾಗಿ ಚಿತ್ರತಂಡ ಕ್ಷಮೆ ಕೇಳ ಬೇಕು ಎಂದು ಸಾರಾಗೋವಿಂದ್ ಅವರು ಹೇಳಿದ್ದರು.
ಅಪ್ಪು ಅಗಲಿಕೆ ನೋವಿನಿಂದ ಹೊರ ಬಂದಿಲ್ಲ. ಆದರೆ ಏಕ್ ಲವ್ ಯಾ ಸಿನಿಮಾ ತಂಡ ಅಪ್ಪು ಫೋಟೋ ಮುಂದೇ ಶಾಂಪೇನ್ ಚಿಮ್ಮಿಸಿ ಸಂಭ್ರಮಾಚರಣೆ ಮಾಡಿ ಎಡವಟ್ಟು ಮಾಡಿಕೊಂಡಿದೆ. ಶಾಂಪೇನ್ ಚಿಮ್ಮಿಸುವ ವೇಳೆ ಹಾಡು ಪ್ರಸಾರವಾಗಿದೆ. ಇದರಿಂದ ಅಪ್ಪು ಫೋಟೋಗೆ ಅವಮಾನ ಮಾಡಿದಂತಾಗಿದೆ. ಈ ಕುರಿತಾಗಿ ಎಲ್ಲೆಡೆ ಆಕ್ರೋಶವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಅಪ್ಪು ನೇತ್ರದಾನದಿಂದ ಇನ್ನೂ 10 ಮಂದಿಗೆ ದೃಷ್ಟಿ ನೀಡಲು ವೈದ್ಯರ ಪ್ರಯತ್ನ!
ಈ ಕುರಿತಾಗಿ ನಿರ್ದೇಶಕ ಪ್ರೇಮ್ ಪಬ್ಲಿಕ್ ಟಿವಿ ಮೂಲಕವಾಗಿ ಕ್ಷಮೆ ಕೇಳಿದ್ದಾರೆ. ನಮಗೆ ಗೊತ್ತಿಲ್ಲದೆ ತಪ್ಪು ಆಗಿದೆ. ಅಪ್ಪುಗೆ ಅವಮಾನ ಮಾಡುವ ಉದ್ದೇಶ ಇರಲಿಲ್ಲ. ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದಿದ್ದಾರೆ.
ಬೆಂಗಳೂರು: ಸ್ಟಾರ್ ಡೈರೆಕ್ಟರ್ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಸೆಟ್ಟೇರಿದ ದಿನದಿಂದಲೂ ಸಖತ್ ಸುದ್ದಿಯಲ್ಲಿರುವ ಸಿನಿಮಾ. ಬಹಳ ವರ್ಷಗಳ ನಂತರ ಶೋಮ್ಯಾನ್ ಪ್ರೇಮ್ ಲವ್ ಸಬ್ಜೆಕ್ಟ್ ಕೈಗೆತ್ತಿಕೊಂಡಿದ್ದು ಮತ್ತೊಂದು ಸೂಪರ್ ಡೂಪರ್ ಹಿಟ್ ನೀಡುವ ಎಲ್ಲಾ ಲಕ್ಷಣಗಳೂ ಕಂಡು ಬರುತ್ತಿದ್ದು, ಪ್ರೇಮಿಗಳ ದಿನದಂದು ಏಕ್ ಲವ್ ಯಾ ಲಿರಿಕಲ್ ಸಾಂಗ್ ಬಿಡುಗಡೆ ಮಾಡಿದ್ದಾರೆ.
ಈ ಬಾರಿ ತಮ್ಮ ಕುಟುಂಬದ ಸದಸ್ಯನಿಗೆ ಪ್ರೇಮ್ ಆಕ್ಷನ್ ಕಟ್ ಹೇಳುತ್ತಿದ್ದು, ರಕ್ಷಿತಾ ಪ್ರೇಮ್ ಸಹೋದರ ರಾಣಾ ಈ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ನಾಯಕ ನಟನಾಗಿ ಎಂಟ್ರಿ ಕೊಡುತ್ತಿದ್ದಾರೆ. ಮೇಕಿಂಗ್ ಟೀಸರ್ ಮೂಲಕ ಸಿನಿಮಾದ ಸಣ್ಣ ಝಲಕ್ ತೋರಿಸಿ ನಿರೀಕ್ಷೆ ಹುಟ್ಟಿಸಿದ್ದ ‘ಏಕ್ ಲವ್ ಯಾ’ ಚಿತ್ರತಂಡ. ಇದೀಗ ಪ್ರೇಮಿಗಳ ದಿನಕ್ಕೆ ಉಡುಗೊರೆಯಾಗಿ ಚಿತ್ರದ ಯಾರೇ ಯಾರೇ ಲಿರಿಕಲ್ ಹಾಡು ಬಿಡುಗಡೆ ಮಾಡಿ ಮ್ಯೂಜಿಕಲ್ ಟ್ರೀಟ್ ನೀಡಿದೆ.
ನಿರ್ದೇಶಕ ಪ್ರೇಮ್ ಸಾಹಿತ್ಯದಲ್ಲಿ ಅರಳಿರುವ ಈ ಹಾಡಿಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಮ್ಯೂಸಿಕ್ ಮ್ಯಾಜಿಕ್, ಅರ್ಮಾನ್ ಮಲ್ಲಿಕ್ ದನಿ ಬೆರೆತು ಹಾಡಿನ ಶ್ರೀಮಂತಿಕೆಯನ್ನು ದುಪ್ಪಟ್ಟು ಮಾಡಿದೆ. ಸದ್ಯ ಸಖತ್ ವೈರಲ್ ಆಗುತ್ತಿರುವ ಈ ಹಾಡು ಪ್ರೇಮಿಗಳ ಆಂಥಮ್ ಆಗುತ್ತಿದೆ.
ರಕ್ಷಿತಾಸ್ ಫಿಲ್ಮಂ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಸಿನಿಮಾಗೆ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಬಂಡವಾಳ ಹೂಡಿದ್ದಾರೆ. ಅದ್ಧೂರಿಯಾಗಿ ಮೂಡಿ ಬರ್ತಿರುವ ‘ಏಕ್ ಲವ್ ಯಾ’ ಸಿನಿಮಾದಲ್ಲಿ ನಾಯಕಿಯರಾಗಿ ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ, ರಚಿತಾ ರಾಮ್ ನಟಿಸಿದ್ದಾರೆ. ನಾಲ್ಕು ಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರಕ್ಕೆ ಮಹೆನ್ ಸಿಂಹ ಕ್ಯಾಮೆರಾ ನಿರ್ದೇಶನವಿದೆ.
ಬೆಂಗಳೂರು: ಇವರು ಯಾರೋ ಹೊಸ ಸ್ವಾಮೀಜಿ ಅಲ್ಲ, ನಮ್ಮ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯನೇ ಎಂದು ನಿರ್ದೇಶಕ ಪ್ರೇಮ್ ಅವರು ಜನ್ಯ ಅವರ ಹೊಸ ಅವತಾರವನ್ನು ಪರಿಚಯ ಮಾಡಿಕೊಟ್ಟಿದ್ದಾರೆ.
ಕೊರೊನಾ ಲಾಕ್ಡೌನ್ನಿಂದ ಇಡೀ ಚಿತ್ರರಂಗವೇ ಸ್ತಬ್ಧವಾಗಿತ್ತು. ಈಗ ಸ್ವಲ್ಪ ಮಟ್ಟಿಗೆ ಸಡಿಲಿಕೆ ಸಿಕ್ಕ ನಂತರ ಕೆಲ ಚಿತ್ರಗಳ ಚಟುವಟಿಕೆ ಆರಂಭವಾಗಿದೆ. ಅಂತಯೇ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಹಾಡುಗಳನ್ನು ತಯಾರಿ ಮಾಡಲು ಮುಂದಾಗಿದ್ದಾರೆ. ಜೊತೆಗೆ ಲಾಕ್ಡೌನ್ನಲ್ಲಿ ಗಡ್ಡಬಿಟ್ಟು ಜನ್ಯ ಹೊಸ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಇವ್ರ್ಯಾರೋ ಹೊಸಾ ಸ್ವಾಮೀಜಿ ಅಂತ confuse ಆಗ್ಬೇಡಿ, ನಮ್ಮ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯನೇ… Updated ಸಾಂಗ್'ಗಳನ್ನ ಕೊಡೋದರ ಜೊತೆಗೆ ಅವ್ರ ಗೆಟಪ್ ಕೂಡ update ಮಾಡ್ಕೊಂಡಿದಾರೆ. #EkLoveya rerecording on swing🎸#Audio Soooon ❤️ on @A2Music2 @RakshithaPrem @Raanna_6 @ArjunMusician #Premspic.twitter.com/VNVXNb3EBd
ಈ ಫೋಟೋಗಳನ್ನು ಹಂಚಿಕೊಂಡಿರುವ ನಿರ್ದೇಶಕ ಪ್ರೇಮ್ ಅವರು, ಇವರು ಯಾರೋ ಹೊಸ ಸ್ವಾಮೀಜಿ ಎಂದು ಗೊಂದಲವಾಗಬೇಡಿ. ಇವರು ನಮ್ಮ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯನೇ ಅಪ್ಡೇಟ್ ಸಾಂಗ್ಗಳನ್ನು ಕೊಡುವುದರ ಜೊತೆಗೆ ಅವರ ಗೆಟಪ್ ಅನ್ನು ಕೂಡ ಆಪ್ಡೇಟ್ ಮಾಡಿಕೊಂಡಿದ್ದಾರೆ. ‘ಏಕ್ ಲವ್ ಯಾ’ ಸಿನಿಮಾದ ಹಾಡುಗಳ ರೆಕಾರ್ಡ್ ನಡೆಯುತ್ತಿದೆ. ಆಡಿಯೋ ಬಹುಬೇಗ ಬರಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ಆರೋಗ್ಯ ಸಮಸ್ಯೆ ಬಳಲುತ್ತಿದ್ದ ಜನ್ಯ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿಯನ್ನು ತಗೆದುಕೊಳ್ಳುತ್ತಿದ್ದರು. ಈಗ ಸದ್ಯ ಲಾಕ್ಡೌನ್ ನಂತರ ಮತ್ತೆ ಕೆಲಸಕ್ಕೆ ವಾಪಸ್ ಆಗಿರುವ ಜನ್ಯ ‘ಏಕ್ ಲವ್ ಯಾ’ ಸಿನಿಮಾದ ಹಾಡುಗಳನ್ನು ಸಿದ್ಧಮಾಡುತ್ತಿದ್ದಾರೆ. ಈ ವೇಳೆ ಅವರು ತಮ್ಮ ಗೆಟಪ್ ಅನ್ನು ಚೆಂಚ್ ಮಾಡಿಕೊಂಡಿದ್ದು, ಕೆಂಪು ಪಂಚೆ, ಜೊತೆಗೆ ಕೆಂಪು ಪೇಟ ಹಾಕಿಕೊಂಡು ಬಿಳಿ ಬಣ್ಣದ ಶರ್ಟ್ ತೊಟ್ಟು ಸ್ವಾಮೀಜಿಯ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಫೆಬ್ರವರಿ 26ರಂದು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಅರ್ಜುನ್ ಜನ್ಯ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಪರೀಕ್ಷೆ ನಡೆಸಿದಾಗ ಹೃದಯದಲ್ಲಿ ಶೇ.99ರಷ್ಟು ಬ್ಲಾಕ್ ಆಗಿತ್ತು. ಹೀಗಾಗಿ ವೈದ್ಯರು ಅಂದೇ ರಾತ್ರಿ ಶಸ್ತ್ರ ಚಿಕಿತ್ಸೆ ನಡೆಸಿ ಸ್ಟಂಟ್ ಅಳವಡಿಸಿದ್ದರು. ಎರಡು ತಿಂಗಳು ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರ ಸೂಚನೆ ಹಿನ್ನೆಲೆಯಲ್ಲಿ ಸಿನಿಮಾ ಕೆಲಸ ಹಾಗೂ ರಿಯಾಲಿಟಿ ಶೋಗಳಿಂದ ಜನ್ಯ ದೂರ ಉಳಿದುಕೊಂಡಿದ್ದರು.
`ಏಕ್ ಲವ್ ಯಾ’ ಚಿತ್ರಕ್ಕೆ ನಿರ್ದೇಶಕ ಪ್ರೇಮ್ ಆ್ಯಕ್ಷನ್ ಕಟ್ ಹೇಳಿದ್ದು, ನಟಿ ರಕ್ಷಿತಾ ಪ್ರೇಮ್ ನಿರ್ಮಾಣ ಮಾಡುತ್ತಿದ್ದಾರೆ. ಜೊತೆಗೆ ಅವರ ಸಹೋದರ ರಾಣಾ ನಾಯಕನಾಗಿ ರಚಿತಾ ರಾಮ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಚಿತ್ರದ ಫಸ್ಟ್ ಲುಕ್ ಹಾಗೂ ಟೀಸರ್ ಬಿಡುಗಡೆಯಾಗಿ ಎಲ್ಲೆಡೆ ಸಾಕಷ್ಟು ಸದ್ದು ಮಾಡಿತ್ತು. ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರ ಸಂಗೀತ ಸಂಯೋಜನೆಯಲ್ಲಿ ಚಿತ್ರದ ಹಾಡುಗಳು ಮೂಡಿಬಂದಿವೆ.
ಬೆಂಗಳೂರು: ಸ್ಯಾಂಡಲ್ವುಡ್ ನಟಿ ರಚಿತಾ ರಾಮ್ ವಿರುದ್ಧ ಫೈರಿಂಗ್ ಸ್ಟಾರ್ ನಟ ಹುಚ್ಚ ವೆಂಕಟ್ ವಾಗ್ದಾಳಿ ನಡೆಸಿದ್ದಾರೆ.
ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಸಿನಿಮಾದ ಟ್ರೈಲರ್ ಪ್ರೇಮಿಗಳ ದಿನದಂದು ಬಿಡುಗಡೆಯಾಗಿದ್ದು, ಭಾರೀ ಸದ್ದು ಮಾಡುತ್ತಿದೆ. ಈ ಟ್ರೈಲರ್ ವಿಚಾರವಾಗಿ ಮಾತನಾಡಿರುವ ಹುಚ್ಚ ವೆಂಕಟ್ ರಚಿತಾ ರಾಮ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ರೈಲರ್ನಲ್ಲಿ ನಾಯಕ ರಾನಾ ಜೊತೆಗೆ ರಚಿತಾ ರಾಮ್ ಲಿಪ್ಲಾಕ್ ಹಾಗೂ ಸಿಗರೇಟ್ ಸೇದುವ ದೃಶ್ಯ ನೋಡಿದ ವೆಂಕಟ್ ವಿಡಿಯೋ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ. ಜೊತೆಗೆ ನಿರ್ದೇಶಕ ಪ್ರೇಮ್ ಅವರಿಗೆ ಒಂದಿಷ್ಟು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಧಮ್ ಎಳೆದು, ಲಿಪ್ ಕಿಸ್ ಕೊಟ್ಟು ಕಣ್ಣೀರಿಟ್ಟ ರಚಿತಾ ರಾಮ್
ವೆಂಕಟ್ ಹೇಳಿದ್ದೇನು?
ನನ್ ಮಗಂದ್ ಡೈಲಾಗ್… ಇದು ರಚಿತಾ ರಾಮ್ ಅವರಿಗೆ ಹೇಳುತ್ತಿರೋದು. ಯಾಕ್ರೀ.. ಯಾಕ್ರೀ.. ಈ ಥರಹದ ಪಾತ್ರಗಳನ್ನು ಮಾಡಿ ಜನರ ಮನಸ್ಸನ್ನು ಹಾಳು ಮಾಡ್ತೀರಾ? ನೀವು ಮಾಡಿರುವುದು ಏನು? ಸಿಗರೇಟ್ ಸೇದುವುದಂತೆ, ಲಿಪ್ಕಿಸ್ ಅಂತೆ… ಇದರಿಂದ ಏನಾಗುತ್ತೆ? ಮಕ್ಕಳಿಂದ ಹಿಡಿದು ಹೆಣ್ಣು ಮಕ್ಕಳು ಚಿತ್ರಮಂದಿರದಲ್ಲಿ ಕುಳಿತು ಸಿನಿಮಾ ನೋಡೋಕಾಗುತ್ತಾ? ಹೆಣ್ಣು ಮಕ್ಕಳಿಗೆ ಮುಜುಗರ ಆಗುವುದಿಲ್ಲವಾ? ಡೈರೆಕ್ಟರ್ ಕೊಟ್ರೂ ಅದಕ್ಕೆ ಮಾಡಿದ್ವಿ ಎಂದು ಎಲ್ಲವನ್ನೂ ಡೈರೆಕ್ಟರ್ ಮೇಲೆ ಹಾಕ್ತೀರಾ. ನಿಮಗೆ ಇಷ್ಟವಿಲ್ಲ ಅಂದರೆ ಡೈರೆಕ್ಟರ್ ಬಲವಂತ ಮಾಡಲು ಸಾಧ್ಯವಿಲ್ಲ. ಯಾಕ್ ಈ ಥರಾ ಮಾಡ್ತೀರಾ? ಇದನ್ನೂ ಓದಿ: “ಹೆಣ್ಣು ಮಕ್ಳು ಬಾರ್ಗೆ ಹೋಗ್ಬಾರ್ದಾ”: ರಚಿತಾ ರಾಮ್
ಕಳೆದ ಸಿನಿಮಾದಲ್ಲೂ (ಐ ಲವ್ ಯೂ) ಹೀಗೆ ಮಾಡಿದ್ರಿ. ಈ ಸಿನಿಮಾದಲ್ಲೂ ಮಾಡಿದ್ದೀರಾ. ನಿಮ್ಮ ಪ್ರತಿಭೆಯನ್ನು ತೋರಿಸೋಕೆ ಬೇರೆ ದಾರಿ ಇಲ್ವಾ? ನಿಮಗೆ ಪ್ರತಿಭೆ ಇದ್ದರೆ ಬೇರೆ ಕಡೆಗೆ ತೋರಿಸಿ. ಹೀಗೆ ಮಾಡೋದನ್ನು ಪ್ರತಿಭೆ ಅಂತರಾ? ನನ್ ಮಗಂದ್ ತೂ….
ಇಂತ ಸೀನ್ಗಳಿಂದ ಎಷ್ಟೋ ಜನ ಹಾಳಾಗುತ್ತಾರೆ ಅಂತ ನಿಮಗೆ ಗೊತ್ತಾ? ಒಂದು ಗಂಡಸು ಡ್ರಿಂಕ್ಸ್ ಮಾಡಿ ಸಿಗರೇಟ್ ಸೇದಿದ್ರೇನೆ ತಪ್ಪು. ಅಂತಹದ್ರಲ್ಲಿ ನೀವು ಸಿಗರೇಟ್ ಸೇದೋದು, ಲಿಪ್ ಕಿಸ್ ಮಾಡೋದು ಅಂದ್ರೆ ಏನ್ ಅರ್ಥ? ಇಲ್ಯಾರೂ ಕೇಳೋರು ಇಲ್ವಾ? ಇದರಿಂದ ನಿಮ್ಮ ಮನೆಯಲ್ಲಿನ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರು ನೋವು ಅನುಭವಿಸುತ್ತಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ.
ಈ ಹಿಂದೆ ಕನ್ನಡ ಇಂಡಸ್ಟ್ರಿ ಅಂದರೆ ಹೇಗಿತ್ತು? ಕನ್ನಡ ಇಂಸ್ಟ್ರಿ ಅಂದ್ರೆ ಒಂದೇ ಒಂದು ಅಶ್ಲೀಲ ಇಲ್ಲ ಎನ್ನುವಂತಿತ್ತು. ಇವತ್ತು ಏನೆಲ್ಲಾ ಆಗಿದೆ ನೋಡಿ. ಪ್ರೇಮ್ ನಿನಗೆ ಇದು ಬೇಕಿತ್ತಾ? ಈ ರೀತಿಯ ಶಾಟ್ ಇಡೋದು ಬೇಕಿತ್ತಾ? ಇದ್ರಿಂದ ನೀನು ಜನರಿಗೆ ತೋರಿಸೋದಾದ್ರೂ ಏನು? ಆ ದೃಶ್ಯವನ್ನು ತೆಗೆದು ಹಾಕು.
ರಚಿತಾ ರಾಮ್ ಅವ್ರೆ ನಾಳೆ ನೀವು ಮದ್ವೆ ಆಗ್ಬೇಕು. ನಿಮ್ಮ ಗಂಡ ಇದನ್ನ ನೋಡಬೇಕು. ನೋಡಿ ನಿಮಗೇನ್ ಅಂತಾನೆ. ಬೇಶ್ ಎನ್ನುತ್ತಾನಾ? ಚಿಕ್ಕ ಕಾರಣ ಸಿಕ್ರೆ ಸಾಕು ಡಿವೋರ್ಸ್ ಕೊಡ್ತಾರೆ. ಅಂಥ್ರದಲ್ಲಿ ನೋಡಿ ನೀವು ಏನ್ ಮಾಡ್ತಾ ಇದ್ದೀರಾ? ಸಿನಿಮಾ ರಂಗವೇ ನಿಮಗೆ ಕೊನೆಯಲ್ಲ. ನೀವು ಮದ್ವೆ ಆಗ್ಬೇಕು, ತಾಯಿ ಆಗಬೇಕು ನೆನಪಿರಲಿ.
ರಚಿತಾ ರಾಮ್ ಅವ್ರ ತಂದೆ-ತಾಯಿಗೂ ನನ್ನದೊಂದು ವಿನಂತಿ. ಇನ್ಮೇಲೆ ನಿಮ್ಮ ಮಗಳಿಗೆ ನೀವು ಬುದ್ಧಿ ಹೇಳಿ. ನಾನು ಎಲ್ಲ ರೀತಿ ಹೇಳಿ ಮುಗಿಸಿದ್ದೇನೆ. ಲಿಪ್ಕಿಸ್ ಸೀನ್ಗಳನ್ನು ನಿಮಗೆ ನೋಡೋಕೆ ಆಗುತ್ತಾ? ಈ ವಿಚಾರದಲ್ಲಿ ನಿಮ್ಮನ್ನ ಎಳೆದಿದ್ದಕ್ಕೆ ತಪ್ಪು ತಿಳಿಯಬೇಡಿ.
ಸಿನಿಮಾದಿಂದ ಲಿಪ್ಲಾಕ್, ಸಿಗರೇಟ್ ಸೇದುವ ಸೀನ್ ತೆಗೆದುಹಾಕಬೇಕು. ಕನ್ನಡ ಇಂಡಸ್ಟ್ರಿ ಇಷ್ಟು ಕೆಟ್ಟ ಮಟ್ಟಕ್ಕೆ ಇಳಿಯುವುದು ನನಗೆ ಇಷ್ಟವಿಲ್ಲ. ಇಲ್ಲಿ ಕಲೆಗೆ ಬೆಲೆ ಕೊಡಲಾಗುತ್ತದೆ. ಹೆಣ್ಣು ಮಕ್ಕಳು ಡ್ರಿಂಕ್ಸ್ ಮಾಡೋದು, ಪಾರ್ಟಿ ಮಾಡೋದು ಸಿರಿಯಲ್ಗಳಲ್ಲೂ ಬಂದಿದೆ. ಈ ಬಗ್ಗೆ ಯಾರೂ ಯಾಕೆ ಹೋರಾಟ ಮಾಡುತ್ತಿಲ್ಲ?
ಆ ಬಂದು ಸೀನ್ ತೆಗೆದು ಹಾಕಿದ್ರೆ ಸಿನಿಮಾ ಓಡಲ್ವಾ? ಸಿನಿಮಾದ ಹೀರೋಗೆ ಅಣ್ಣನಾಗಿ ಹೇಳುತ್ತಿದ್ದೇನೆ, ನೀನು ಫಸ್ಟ್ ಟೈಮ್ ನಾಯಕನಾಗಿ ಕನ್ನಡ ಇಂಡಸ್ಟ್ರಿ ಬರುತ್ತಿದ್ದಿಯಾ. ಉತ್ತಮ ಸಿನಿಮಾದೊಂದಿಗೆ ಕಾಲಿಡು. ನಾನು ಮಾಡುವ ಸಿನಿಮಾದಲ್ಲಿ ಐಟಂ ಸಾಂಗ್ ಹಾಕ್ತಾರೆ ಎನ್ನುವ ಭಯದಿಂದ ಅನೇಕರು ನನ್ನ ಕೈಬಿಟ್ಟಿದ್ದಾರೆ. ಯಾಕಂದ್ರೆ ನಾನು ಸಿನಿಮಾ ಕಥೆಯನ್ನು ಸಂಪೂರ್ಣವಾಗಿ ಓದಿ ಓಕೆ ಎನ್ನುತ್ತೇನೆ. ಕೆಟ್ಟ ಸೀನ್ ಇದ್ರೆ ಸಿನಿಮಾ ಬೇಡ ರಿಜೆಕ್ಟ್ ಮಾಡ್ತೀನಿ.
ರಚಿತಾ ರಾಮ್ ಅವ್ರೆ ಎಷ್ಟೋ ನಟಿಯರ ಜೀವನ ಹಾಳಾಗಿದೆ. ನೀವು ಅರ್ಥ ಮಾಡಿಕೊಂಡು ಪಾತ್ರ ನಿರ್ವಹಿಸಿ.