Tag: ಎ ಮಂಜು

  • ದೇಶಕ್ಕೆ ಮತ ಹಾಕಬೇಕೇ? ಕುಟುಂಬಕ್ಕಾಗಿ ಮತಹಾಕಬೇಕೇ – ಸಿಎಂಗೆ ಎ.ಮಂಜು ಟಾಂಗ್

    ದೇಶಕ್ಕೆ ಮತ ಹಾಕಬೇಕೇ? ಕುಟುಂಬಕ್ಕಾಗಿ ಮತಹಾಕಬೇಕೇ – ಸಿಎಂಗೆ ಎ.ಮಂಜು ಟಾಂಗ್

    – ದಲಿತರು ಕೈ ಮುಟ್ಟಿದರೆ ಸ್ನಾನ ಮಾಡ್ತಾರೆ ರೇವಣ್ಣ

    ಹಾಸನ: ಲೋಕಸಭಾ ಚುನಾವಣೆ ದೇಶದ ಚುನಾವಣೆ. ಆದ್ದರಿಂದ ನಾವು ದೇಶಕ್ಕೆ ಮತ ಹಾಕಬೇಕೇ? ಕುಟುಂಬಕ್ಕಾಗಿ ಮತಹಾಕಬೇಕೇ? ಎಂದು ಪ್ರಸ್ನಿಸುವ ಮೂಲಕ ಸಿಎಂ ಕುಮಾರಸ್ವಾಮಿ ಅವರಿಗೆ ಎ.ಮಂಜು ಅವರು ಟಾಂಗ್ ಕೊಟ್ಟಿದ್ದಾರೆ.

    ಬೇಲೂರಿನ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಇದು ದೇಶಕ್ಕೆ ಮತ ಹಾಕುವಂತಹ ಚುನಾವಣೆ. ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು. ಬಿಜೆಪಿ ಪಕ್ಷವನ್ನು ಕೋಮುವಾದಿ ಪಕ್ಷ ಎಂದು ಕರೆಯುತ್ತಾರೆ. ಇದು ಕೋಮುವಾದಿ ಪಕ್ಷವಲ್ಲ, ಉಗ್ರಗಾಮಿಗಳ ವಿರುದ್ಧ ಹೋರಾಡುವ ಪಕ್ಷ. ಆದ್ದರಿಂದ ಈಗ ನಾವು ದೇಶ ನೋಡಿ ಮತಹಾಕಬೇಕೇ? ಅಥವಾ ಕುಟುಂಬ ನೋಡಿ ಮತಹಾಕಬೇಕೇ ಎಂದು ಪ್ರಶ್ನಿಸಿ ಸಿಎಂ ಅವರ ಕಾಲೆಳೆದಿದ್ದಾರೆ.

    ಕುಮಾರಸ್ವಾಮಿ ಅವರ ಪುಲ್ವಾಮ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ದಾಳಿ ಬಗ್ಗೆ ಎರಡು ವರ್ಷದ ಹಿಂದೆಯೇ ಗೊತ್ತಿತ್ತು ಅಂತಾರೆ. ಆ 40 ಯೋಧರ ಸಾವಿಗೆ ಕುಮಾರಸ್ವಾಮಿ ಅವರೂ ಸಹ ಕಾರಣ ಎಂದು ಆರೋಪಿಸಿದರು. ಅಲ್ಲದೆ ಕುಮಾರಸ್ವಾಮಿ ಅವರು ನನಗೆ ಆರೋಗ್ಯ ಸರಿಯಿಲ್ಲ. ಅದು ಇದು ಅಂತ ಹೇಳಿ ಗೆದ್ದಿದ್ದಾರೆ. ಅವರು ಸ್ವಂತ ಶಕ್ತಿಯಿಂದ ಸಿಎಂ ಅದವರಲ್ಲ. ಅವರು ಸಿಎಂ ಆಗಿದ್ದು ನಮ್ಮ ಯಡಿಯೂರಪ್ಪ ಅವರಿಂದ ಎಂದು ಹೇಳಿದರು.

    ನಾನು ಅಭ್ಯರ್ಥಿ ಅದ ಮೇಲೆ ಸಚಿವ ರೇವಣ್ಣ ಎಲ್ಲರ ಮನೆಗೆ ಹೋಗ್ತಿದ್ದಾರೆ. ಈ ಹಿಂದೆ ರೇವಣ್ಣ ಎಲ್ಲಿದ್ದರು? ನಾನು ಅಭ್ಯರ್ಥಿ ಅಂತ ಘೋಷಣೆಯಾದ ಮೇಲೆ ರೇವಣ್ಣ ಎಲ್ಲರ ಮನೆ ಬಾಗಿಲಿಗೆ ಹೋಗ್ತಿದ್ದಾರೆ. ದಲಿತರು ಕೈ ಮುಟ್ಟಿದರೆ ರೇವಣ್ಣ ಸ್ನಾನ ಮಾಡ್ತಾರೆ ಎಂದು ಟೀಕಿಸಿದರು.

  • ನೀರಿನಿಂದ ತೆಗೆದ ಮೀನಿನಂತಾಗಿರುವ ಮಂಜು ಹಣಕ್ಕಾಗಿ ಬಿಜೆಪಿ ಸೇರ್ಪಡೆ: ಪ್ರಜ್ವಲ್

    ನೀರಿನಿಂದ ತೆಗೆದ ಮೀನಿನಂತಾಗಿರುವ ಮಂಜು ಹಣಕ್ಕಾಗಿ ಬಿಜೆಪಿ ಸೇರ್ಪಡೆ: ಪ್ರಜ್ವಲ್

    ಚಿಕ್ಕಮಗಳೂರು: ಒಂಬತ್ತು ತಿಂಗಳ ಹಿಂದೆ ಸೋಲನ್ನು ಅನುಭವಿಸಿರುವ ಎ. ಮಂಜು ಅಧಿಕಾರವಿಲ್ಲದೇ ನೀರಿನಿಂದ ತೆಗೆದ ಮೀನಿನಂತಾಗಿ, ಈಗ ಅಧಿಕಾರ ಹಾಗೂ ಹಣಕ್ಕಾಗಿ ಬಿಜೆಪಿ ಸೇರಿದ್ದಾರೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಆರೋಪಿಸಿದ್ದಾರೆ.

    ಕಡೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿನಿಂದ ಬಿಜೆಪಿಗೆ ಸೇರಿದ ಎ. ಮಂಜು ನಾಳೆ ನಿಮ್ಮ ಮನೆಗೆ ಬಂದರೂ ಆಶ್ಚರ್ಯವಿಲ್ಲ. ಮಂಜು ಲಜ್ಜೆಗೆಟ್ಟ ರಾಜಕಾರಣ ಮಾಡ್ತಿದ್ದಾರೆ ಎಂದು ಅರಕಲಗೂಡು ಜನರೇ ಹೇಳುತ್ತಿದ್ದಾರೆ. ಮೇ 23ರಂದು ಅವರು ಮತ್ತೆ ಮನೆಗೆ ಹೋಗುತ್ತಾರೆ. ಆಗ ಅವರು ಮತ್ತೆ ಬಿಎಸ್‍ವೈ ಬಿಟ್ಟು ಬೇರೆ ಪಕ್ಷ ನೋಡುತ್ತಾರೆ ಎಂದು ಭವಿಷ್ಯ ನುಡಿದರು.

    ಸದಾ ಅಭಿವೃದ್ಧಿ ರಾಜಕಾರಣಕ್ಕೆ ಹೆಸರಾಗಿರುವ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಈಗ ಜಾತಿ ರಾಜಕಾರಣವೂ ಆರಂಭವಾಗಿದೆ. ಎ.ಮಂಜು ಅವರು ಎಷ್ಟು ವೀರಶೈವ ನಾಯಕರನ್ನು ಬೆಳೆಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ನಮಗೆ ವೀರಶೈವರ ಮೇಲೆ ಪ್ರೀತಿ ಇಲ್ಲವೇ ಪ್ರೀತಿ ಇಲ್ಲದೆ ಬೇಲೂರಿನಲ್ಲಿ ಕ್ಷೇತ್ರ ತ್ಯಾಗ ಮಾಡಿ ಲಿಂಗೇಶ್‍ರನ್ನು ಗೆಲ್ಲಿಸಿಲ್ಲವೇ ಎಂದು ಪ್ರಶ್ನೆ ಮಾಡಿದರು.

    ಜೀವನ ಪೂರ್ತಿ ವೀರಶೈವರನ್ನು ತುಳಿದವರು ಈಗ ಬಿಜೆಪಿ ಸೇರಿದ್ದೇನೆ ಎಂದು ಹೇಳಿ ಯಾವ ನೈತಿಕತೆ ಇಟ್ಟುಕೊಂಡು ವೀರಶೈವರ ಮತ ಕೇಳ್ತಿದ್ದಾರೋ ನನಗೆ ಗೊತ್ತಿಲ್ಲ ಎಂದು ಪ್ರಜ್ವಲ್ ರೇವಣ್ಣ ಎ. ಮಂಜು ವಿರುದ್ಧ ವಾಗ್ಧಾಳಿ ನಡೆಸಿದರು.

  • ಪ್ರೀತಂ ಗೌಡ ಮಾತಾಡಿದ್ದಾರೆ ಎನ್ನಲಾದ ಆಡಿಯೋ ಸತ್ಯಕ್ಕೆ ದೂರವಾದದ್ದು- ಎ. ಮಂಜು

    ಪ್ರೀತಂ ಗೌಡ ಮಾತಾಡಿದ್ದಾರೆ ಎನ್ನಲಾದ ಆಡಿಯೋ ಸತ್ಯಕ್ಕೆ ದೂರವಾದದ್ದು- ಎ. ಮಂಜು

    ಹಾಸನ: ಶಾಸಕ ಪ್ರೀತಂ ಗೌಡ ಅವರು ಹಾಸನ ಬಿಜೆಪಿ ಅಭ್ಯರ್ಥಿ ಎ ಮಂಜು ಅವರನ್ನು ಸೋಲಿಸಲು ಪ್ಲಾನ್ ಮಾಡಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿದ್ದು, ಇದಕ್ಕೆ ಎ ಮಂಜು ಅವರು ಪ್ರತಿಕ್ರಿಯಿಸಿ ಮನವಿ ಮಾಡಿಕೊಂಡಿದ್ದಾರೆ.

    ಕಡೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಿಯೋದಲ್ಲಿ ಇರುವುದು ಸತ್ಯಾಂಶವಲ್ಲ. ಶಾಸಕರಾದ ಬೆಳ್ಳಿಪ್ರಕಾಶ್, ಪ್ರೀತಂಗೌಡ ನೇತೃತ್ವದಲ್ಲಿ ಚುನಾವಣೆ ನಡೆಯುತ್ತಿದೆ. ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ. ಇದು ಜೆಡಿಎಸ್ ನವರ ಪಿತೂರಿಯಾಗಿದೆ ಎಂದು ಹೇಳಿದ್ದಾರೆ.

    ಬಿಜೆಪಿಯಿಂದ ಶಾಸಕನಾಗಿದ್ದಾಗ ಶಿವಪ್ಪನವರ ಜೊತೆ ಇದ್ದೆ. ಈಗ ಬಿಜೆಪಿಯಲ್ಲಿ ಇದ್ದೇನೆ. ಇಲ್ಲಿಯೇ ಇರುತ್ತೇನೆ. ಕಾರ್ಯಕರ್ತರು ಇದಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡಿಕೊಂಡರು.

    ಪ್ರೀತಂ ಸ್ಪಷ್ಟನೆ:
    ಆಗ ಎ. ಮಂಜು ಬಿಜೆಪಿಗೆ ಬಂದಿರಲಿಲ್ಲ ಇನ್ನೂ ಚರ್ಚೆಯ ಹಂತದಲ್ಲಿತ್ತು. ಆಗ ಮಾತನಾಡಿದ ಆಡಿಯೋವನ್ನು ಎಡಿಟ್ ಮಾಡಲಾಗಿದೆ. ಪ್ರೀತಂಗೌಡನನ್ನು ವಿಕ್ ಮಾಡಿದ್ರೆ, ಬಿಜೆಪಿ ವಿಕ್ ಆಗುತ್ತೆ ಅನ್ನೋ ಮನೋಭಾವನೆ ಕೆಲವರದ್ದು ಇರಬೇಕು ಎಂದು ಆಡಿಯೋದಲ್ಲಿನ ವಿವರಣೆಗೆ ಗೊಂದಲದ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಎ. ಮಂಜು ಸೋಲಿಸಲು ಪ್ರೀತಂ ಗೌಡ ಸ್ಕೆಚ್!- ಆಡಿಯೋ ವೈರಲ್

    ಇದು ಎಡಿಟೆಟ್ ಆಡಿಯೋ ಆಗಿದೆ. ನನ್ನ ಕಟ್ಟಿಹಾಕಲು ಇದು ವಿರೋಧಿಗಳ ಪಿತೂರಿ. ನನ್ನ ಮತ್ತು ಎ.ಮಂಜು ನಡುವೆ ವೈಮನಸ್ಸು ಹುಟ್ಟುಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ಎ. ಮಂಜುಗಿಂತ ಪ್ರೀತಂ ಗೌಡ ಜಾಸ್ತಿ ಓಡಾಡುತ್ತಿದ್ದಾರೆ. ಇವರ ಮಧ್ಯ ಏನಾದ್ರು ಕಂದಕ ಮೂಡಿಸಲು ಈ ಪ್ರಯತ್ನ ಮಾಡಿದ್ದಾರೆ. ನನ್ನ ವಿರೋಧಿಗಳು ಈ ವಿಡಿಯೋವನ್ನು ಸೃಷ್ಟಿಸಿದ್ದಾರೆ ಎಂದು ತಿಳಿಸಿದ್ದಾರೆ.

    ದಿನಕ್ಕೆ ಸಾವಿರ ಮಂದಿ ಜೊತೆ ಮಾತನಾಡುತ್ತೇನೆ. ಫೇಕ್ ಆಡಿಯೋದಿಂದಾಗಿ ಎರಡು ಲಕ್ಷ ಮತಗಳು ಹೆಚ್ಚಾಗಿ ಬಿಜೆಪಿಗೆ ಬೀಳುತ್ತವೆ. ಯಾರು ವಿಚಲಿತರಾಗಿದ್ದಾರೆ ಅವರು ಆಡಿಯೋ ಹಿಂದೆ ಹೋಗ್ತಾರೆ. ದೇಶ ಕಟ್ಟುವವರು ನಾವು ಮತದಾರರ ಬಳಿ ಹೋಗುತ್ತೇವೆ ಎಂದು ಹೇಳಿದ್ದಾರೆ.

    ನಾನು ಭಾರತೀಯ ಜನತಾ ಪಾರ್ಟಿಯ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ನಾನೇ ಅಭ್ಯರ್ಥಿ ಎಂಬಂತೆ ಕೆಲಸ ಮಾಡುತ್ತಿದ್ದೇನೆ. ನನ್ನ ವೈಯಕ್ತಿಕ ಭದ್ರತೆಯನ್ನೂ ಲೆಕ್ಕಿಸದೇ ಕೆಲಸ ಮಾಡುತ್ತಿದ್ದೇನೆ. ಫೇಕ್ ಆಡಿಯೋ, ಎಡಿಟ್ ಆಡಿಯೋ ಮಾಡಿ ಬಿಟ್ರೆ ನನ್ನನ್ನು ಕುಗ್ಗಿಸಲು ಸಾಧ್ಯವಿಲ್ಲ ಅಂದಿದ್ದಾರೆ.

  • ವೈರಲ್ ಆಡಿಯೋ ಬಗ್ಗೆ ಶಾಸಕ ಪ್ರೀತಂ ಗೌಡ ಸ್ಪಷ್ಟನೆ

    ವೈರಲ್ ಆಡಿಯೋ ಬಗ್ಗೆ ಶಾಸಕ ಪ್ರೀತಂ ಗೌಡ ಸ್ಪಷ್ಟನೆ

    ಹಾಸನ: ಬಿಜೆಪಿ ಅಭ್ಯರ್ಥಿ ಎ. ಮಂಜು ಸೋಲಿಸಲು ಪ್ರೀತಂ ಗೌಡ ಸ್ಕೆಚ್ ಹಾಕಿದ್ದಾರೆ ಎಂದು ಹೇಳಲಾದ ವೈರಲ್ ಆಡಿಯೋ ಬಗ್ಗೆ ಸ್ವತಃ ಶಾಸಕರೇ ಇದೀಗ ಪ್ರತಿಕ್ರಿಯಿಸಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಗ ಎ. ಮಂಜು ಬಿಜೆಪಿಗೆ ಬಂದಿರಲಿಲ್ಲ ಇನ್ನೂ ಚರ್ಚೆಯ ಹಂತದಲ್ಲಿತ್ತು. ಆಗ ಮಾತನಾಡಿದ ಆಡಿಯೋವನ್ನು ಎಡಿಟ್ ಮಾಡಲಾಗಿದೆ. ಪ್ರೀತಂಗೌಡನನ್ನು ವಿಕ್ ಮಾಡಿದ್ರೆ, ಬಿಜೆಪಿ ವಿಕ್ ಆಗುತ್ತೆ ಅನ್ನೋ ಮನೋಭಾವನೆ ಕೆಲವರದ್ದು ಇರಬೇಕು ಎಂದು ಆಡಿಯೋದಲ್ಲಿನ ವಿವರಣೆಗೆ ಗೊಂದಲದ ಹೇಳಿಕೆ ನೀಡಿದ್ದಾರೆ.

    ಒಟ್ಟಿನಲ್ಲಿ ಎ.ಮಂಜು ಪಕ್ಷ ಸೇರ್ಪಡೆಗೂ ಮುಂಚೆ ಮಾತನಾಡಿದ ಆಡಿಯೋ ಇರಬಹುದು. ಆಗ ಕಾಂಗ್ರೆಸ್ ನಲ್ಲಿ ಇದ್ದವರ ಕುರಿತು ನಾನು ಹೊಗಳಬೇಕಿತ್ತಾ ಎಂದು ಪ್ರಶ್ನಿಸಿದ್ದಾರೆ.

    ಇದು ಎಡಿಟೆಟ್ ಆಡಿಯೋ ಆಗಿದೆ. ನನ್ನ ಕಟ್ಟಿಹಾಕಲು ಇದು ವಿರೋಧಿಗಳ ಪಿತೂರಿ. ನನ್ನ ಮತ್ತು ಎ.ಮಂಜು ನಡುವೆ ವೈಮನಸ್ಸು ಹುಟ್ಟುಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ಎ. ಮಂಜುಗಿಂತ ಪ್ರೀತಂ ಗೌಡ ಜಾಸ್ತಿ ಓಡಾಡುತ್ತಿದ್ದಾರೆ. ಇವರ ಮಧ್ಯ ಏನಾದ್ರು ಕಂದಕ ಮೂಡಿಸಲು ಈ ಪ್ರಯತ್ನ ಮಾಡಿದ್ದಾರೆ. ಒಟ್ಟಿನಲ್ಲಿ ಇದು ವೈರಲ್ ಆಗೋರದಿಕ್ಕೆ ವಿರೋಧ ಪಕ್ಷದವರು ಮಾಡಿರುವ ಪಿತೂರಿ ಎಂದು ಆರೋಪಿಸಿದರು. ಇದನ್ನೂ ಓದಿ: ಹಾಸನದಲ್ಲಿ ಎ. ಮಂಜು ಸೋಲಿಸಲು ಪ್ರೀತಂ ಗೌಡ ಸ್ಕೆಚ್!- ಆಡಿಯೋ ವೈರಲ್

    ಹೊಳೇನರಸೀಪುರ ಮತ್ತು ಚನ್ನರಾಯಪಟ್ಟಣದಂತಹ ಕ್ಷೇತ್ರಗಳನ್ನು ನಾನು ಉಸ್ತುವಾರಿ ವಹಿಸಿಕೊಂಡಿದ್ದೇನೆ. ಚುನಾವಣಾ ಫಲಿತಾಂಶ ಬಂದ ದಿನ ನಾನೂ ಕೂಡ ಮಾತನಾಡುತ್ತೇನೆ. ಮಂಡ್ಯದಲ್ಲಿ ಕೂಡ ನಾಲ್ಕು ಮಂದಿ ಸುಮಲತಾರನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ಎ. ಮಂಜಣ್ಣ ನನ್ನ ಆತ್ಮೀಯ ಸ್ನೇಹಿತರು. ನನ್ನ ಮನೆಗೆ ಕಲ್ಲು ಹೊಡೆದಾಗಲೂ ಮಂಜಣ್ಣ ಬಂದಿದ್ದರು ಎಂದು ಹೇಳಿದರು.

    ದಿನಕ್ಕೆ ಸಾವಿರ ಮಂದಿ ಜೊತೆ ಮಾತನಾಡುತ್ತೇನೆ. ಫೇಕ್ ಆಡಿಯೋದಿಂದಾಗಿ ಎರಡು ಲಕ್ಷ ಮತಗಳು ಹೆಚ್ಚಾಗಿ ಬಿಜೆಪಿಗೆ ಬೀಳುತ್ತವೆ. ಯಾರು ವಿಚಲಿತರಾಗಿದ್ದಾರೆ ಅವರು ಆಡಿಯೋ ಹಿಂದೆ ಹೋಗ್ತಾರೆ. ದೇಶ ಕಟ್ಟುವವರು ನಾವು ಮತದಾರರ ಬಳಿ ಹೋಗುತ್ತೇವೆ ಎಂದು ಹೇಳಿದ್ದಾರೆ.

    ನಾನು ಭಾರತೀಯ ಜನತಾ ಪಾರ್ಟಿಯ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ನಾನೇ ಅಭ್ಯರ್ಥಿ ಎಂಬಂತೆ ಕೆಲಸ ಮಾಡುತ್ತಿದ್ದೇನೆ. ನನ್ನ ವೈಯಕ್ತಿಕ ಭದ್ರತೆಯನ್ನೂ ಲೆಕ್ಕಿಸದೇ ಕೆಲಸ ಮಾಡುತ್ತಿದ್ದೇನೆ. ಫೇಕ್ ಆಡಿಯೋ, ಎಡಿಟ್ ಆಡಿಯೋ ಮಾಡಿ ಬಿಟ್ರೆ ನನ್ನನ್ನು ಕುಗ್ಗಿಸಲು ಸಾಧ್ಯವಿಲ್ಲ ಅಂದಿದ್ದಾರೆ.

  • ಹಾಸನದಲ್ಲಿ ಎ. ಮಂಜು ಸೋಲಿಸಲು ಪ್ರೀತಂ ಗೌಡ ಸ್ಕೆಚ್!- ಆಡಿಯೋ ವೈರಲ್

    ಹಾಸನದಲ್ಲಿ ಎ. ಮಂಜು ಸೋಲಿಸಲು ಪ್ರೀತಂ ಗೌಡ ಸ್ಕೆಚ್!- ಆಡಿಯೋ ವೈರಲ್

    ಹಾಸನ: ಬಿಜೆಪಿ ಅಭ್ಯರ್ಥಿ ಸೋಲಿಗೆ ಕಮಲ ನಾಯಕರೇ ಸ್ಕೆಚ್ ಹಾಕುತ್ತಿದ್ದಾರಾ ಎಂಬ ಪ್ರಶ್ನೆಯೊಂದು ಮೂಡಿದೆ. ಯಾಕಂದ್ರೆ ಶಾಸಕ ಪ್ರೀತಂಗೌಡ ಹಾಗೂ ಬಿಜೆಪಿ ಕಾರ್ಯಕರ್ತ ಮಾತಾಡಿದ್ದಾರೆ ಎನ್ನಲಾದ ಆಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಆಡಿಯೋದಲ್ಲಿ ಮತನಾಡಿದ ಪ್ರಕಾರ ಹಾಸನ ಬಿಜೆಪಿ ಅಭ್ಯರ್ಥಿ ಎ ಮಂಜು ಪುಕ್ಸಟ್ಟೆ ಲೀಡ್ರಾ ಅನ್ನೋ ಪ್ರಶ್ನೆಯೂ ಮೂಡಿದೆ. ಏಳು ತಿಂಗಳ ಹಿಂದೆ ಎ.ಮಂಜು ಹಾಕಿಸಿದ ಪೊಲೀಸ್ ಕೇಸನ್ನು ಬಿಜೆಪಿ ಮರೆತಿಲ್ಲ ಎಂದು ಸಂಭಾಷಣೆ ನಡೆದಿದ್ದು, ಈ ಮೂಲಕ ಬಿಜೆಪಿ ಕಾರ್ಯಕರ್ತರೇ ಎ ಮಂಜು ವಿರುದ್ಧ ಮತ ಹಾಕ್ತಾರಾ ಅನ್ನೋ ಅನುಮಾನ ಬಿಜೆಪಿ ವಲಯದಲ್ಲಿ ಮೂಡಿದೆ.

    ಎ ಮಂಜು ಎರಡು ಲಕ್ಷ ಎಂಬತ್ತು ಸಾವಿರ ಲೀಡ್‍ನಲ್ಲಿ ಸೋತ ಬಳಿಕ ಮತ್ತೆ ಸಿದ್ದರಾಮಯ್ಯನ ಹತ್ತಿರ ಹೋಗ್ತಾರೆ ಎಂದು ಆಡಿಯೋದಲ್ಲಿ ಹೇಳಲಾಗಿದೆ. ಹೀಗಾಗಿ ಹಾಸನ ಬಿಜೆಪಿ ಅಭ್ಯರ್ಥಿ ಸೋಲಿಗೆ ಶಾಸಕ ಪ್ರೀತಂಗೌಡ ಸ್ಕೆಚ್ ಹಾಕಿದ್ದಾರಾ ಎಂಬ ಪ್ರಶ್ನೆ ಕಾಡುತ್ತಿದೆ. ಆದ್ರೆ ಪ್ರೀತಂಗೌಡ ಹಾಗೂ ಬಿಜೆಪಿ ಕಾರ್ಯಕರ್ತ ಮಾತಾಡಿದ್ದಾರೆ ಎನ್ನಲಾದ ಈ ಆಡಿಯೋ ಅಸಲಿಯೋ ನಕಲಿಯೋ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

    ಆಡಿಯೋದಲ್ಲೇನಿದೆ?
    ಬಿಜೆಪಿ ಕಾರ್ಯಕರ್ತ: ಅಲ್ಲ ಹೋಗ್ಲಿ ಅವನಿಗೇನು ದರ್ದು.. ನಮ್ ಪಾರ್ಟಿಗೆ ಬಂದು ಕ್ಯಾಂಡಿಡೇಟ್ ಆಗೋಕೆ?
    ಪ್ರೀತಂಗೌಡ: ಪುಕ್ಸಟ್ಟೆ ಲೀಡರ್ ಆಗ್ತಾನಲ್ಲ…
    ಬಿಜೆಪಿ ಕಾರ್ಯಕರ್ತ: ಹೌದಣ್ಣ ಹೌದು..
    ಪ್ರೀತಂಗೌಡ: ಇಲ್ಲೇನಾಗಿದೆ.. ಈಗ ಬಿಜೆಪಿ ಡೆವಲಪ್ ಆಗಿದೆ.. ಬೇಲೂರು ಸೆಕೆಂಡ್ ಪ್ಲೇಸು.. ಸಕಲೇಶಪುರ ಸೆಕೆಂಡ್ ಪ್ಲೇಸು.. ಇಲ್ಲಿ ಗೆದ್ದಿದ್ದಿವಿ.. ಅರಸೀಕೆರೆಲಿ ವೋಟ್ ಬ್ಯಾಂಕ್ ಇದೆ.. ಕಡೂರಲ್ಲೂ ಇದೆ..
    ಬಿಜೆಪಿ ಕಾರ್ಯಕರ್ತ: ಒಂದ್ ನಿಮಿಷ ಅಣ್ಣ.. ನೀವು ಹೇಳಿದಂಗೆ ಪುಕ್ಸಟ್ಟೆ ಲೀಡರ್ ಆಗ್ತಾನೆ ನಿಜ.. ಆದರೆ ಕಾಂಗ್ರೆಸ್ ನಲ್ಲಿದ್ದುಕೊಂಡು ಬಿಜೆಪಿ ಕಾರ್ಯಕರ್ತರ ಮೇಲೆ ಕೇಸು ಹಾಕ್ಸಿದ್ದಾನಲ್ಲ.. ಜನ ಮರೆತು ಬಿಡ್ತಾರಾ..?

    ಪ್ರೀತಂಗೌಡ: ಹಾ.. ನೆಗೆಟಿವಿಟಿ ಹತ್ತು ವರ್ಷದ ಹಿಂದೆ ಆಗಿದ್ದರೆ ಜನ ಮರೆತು ಬಿಡ್ತಾರೆ ಅನ್ಕೊಬಹುದು. ಅದರೆ ಏಳು ತಿಂಗಳ ಹಿಂದೆ ಮಂಜು ಮಾಡಿರುವ ಅವಾಂತರ ಮರಿಯೋಕೆ ಆಗಲ್ಲ.
    ಬಿಜೆಪಿ ಕಾರ್ಯಕರ್ತ: ಹೌದಣ್ಣ.. ನಿಜ ನಿಜ..
    ಪ್ರೀತಂಗೌಡ: ಹಂಗಾಗಿ ಜೆಡಿಎಸ್‍ಗೆ ವೋಟು ಹೋಗುತ್ತೆ.
    ಬಿಜೆಪಿ ಕಾರ್ಯಕರ್ತ: ಅಲ್ಲಾ ಅಣ್ಣ.. ಜೆಡಿಎಸ್ ಗೆಲ್ಲುತ್ತೆ ಅಂತ ನೀವೇ ಹೇಳ್ತೀರಿ… ಹಾಗಾದ್ರೆ ನೀವು ಮಾಡುತ್ತಿರುವ ಶ್ರಮ ಎಲ್ಲ ವೇಸ್ಟ್ ಅಲ್ವೇನಣ್ಣ..?

    ಪ್ರೀತಂ ಗೌಡ: ಹಾಂ… ನಾನು 20 ಗಂಟೆ ಕೆಲಸ ಮಾಡ್ತೀನಿ.. ಬಿಜೆಪಿಯವರು-ಸಂಘದವರು ಇವರಿಗೆ ಮಾಡಲ್ಲ. ಬಳ್ಳಾರಿ ಶ್ರೀರಾಮುಲು ಎಲೆಕ್ಷನ್ ರಿಪೀಟ್ ಆಗುತ್ತೆ. ಹೆಸರಿಗೆ ಮಾತ್ರ ಮಂಜು ಬಿಗ್ ಸ್ಟಾರ್.. ಬೂತ್ ತೆಗೆದು ನೋಡಿದರೆ ಎರಡು ಲಕ್ಷ ಎಂಬತ್ತು ಸಾವಿರ ವೋಟಿನಲ್ಲಿ ಜೆಡಿಎಸ್‍ನವರು ಗೆದ್ದರು ಅಂತಾರೆ… ಓಹ್… ದುಡ್ಡು ಹಂಚಿದ್ರು ಜೆಡಿಎಸ್‍ನವರು ಅಂತಾರೆ.
    ಬಿಜೆಪಿ ಕಾರ್ಯಕರ್ತ: ಆಯ್ತು ಅಣ್ಣ.. ನೀವು ಹೇಳಿದ್ದನ್ನು ಒಪ್ಪಿಕೊಳ್ತಿನಿ ನಾನು.. ಒಕೆ.. ನೀವು ಹೇಳಿದಂಗೆ ಸೋಲ್ತಾನೆ.. ಒಂದು ಪಕ್ಷ ಗೆದ್ದರೆ ಅವನು, ಬಂದಿರುವ ವೋಟುಗಳನ್ನೆಲ್ಲ ಪ್ರೀತಂಗೌಡರಿಂದ ಬಂತು ಅಂತ ಹೇಳ್ತಾನಾ?

    ಪ್ರೀತಂಗೌಡ: ವೋಟು ಬಂದ್ರೆ ಮಂಜಣ್ಣ ನಾನು ತಂದಿದ್ದೆ ಅಂತಾರೆ. ಸೋತು ಬಿಟ್ಟರೆ ಆಮೇಲೆ ಓಡೋಗಿ ಬಿಡ್ತಾರೆ… ಸೋತರೆ ಮತ್ತೆ ಸಿದ್ದರಾಮಯ್ಯ ಅಂತ ಹೊರಟು ಬಿಡ್ತಾರೆ. ಅವರೇನು ಪಾರ್ಟಿಯಲ್ಲಿ ಇರೋರಲ್ಲ.. ಎರಡು ಸಾರಿ ಬಿಜೆಪಿಗೆ ಕೈಕೊಟ್ಟು ಹೋಗಿದ್ದಾರೆ.. ಆಪರೇಷನ್ ಕಮಲ ಲಾಸ್ಟ್ ಟೈಮ್ 2008ರಲ್ಲಿ ಬಂದು ಹೋದ್ರು.. ಅದಕ್ಕೂ ಮುಂಚೆ 99ರಲ್ಲಿ ಗೆದ್ದು ವಾಪಸ್ ಹೋದ್ರು… ಅವರು ಬಂದಾಗ ಏನೋ ಮಾಡ್ತಾರೆ.. ಆಮೇಲೆ ಏನ್ ಗೊತ್ತಾ ಈಗ ನಾವು ಸೆಕಂಡ್ ಪ್ಲೇಸಲ್ಲಿ ಇದ್ದೀವಿ. ಥರ್ಡ್ ಪ್ಲೇಸ್ ಇದ್ದೀವಿ.. ಅವರು ಬಂದು ಪಾರ್ಟಿನಾ ಗುಡಿಸಿಕೊಂಡು ಹೋದರೆ… ಮತ್ತೆ ನಾವು ಥರ್ಡ್ ಪ್ಲೇಸಿಗೆ ಹೋಗ್ಬೇಕಾಗುತ್ತೆ..
    ಬಿಜೆಪಿ ಕಾರ್ಯಕರ್ತ: ಆಯ್ತು ಬಿಡಣ್ಣ.. ಅರ್ಥ ಆಯ್ತು.. ವಾಪಸ್ ಎಲ್ಲಿಗೆ ಕಳಿಸಬೇಕೋ ಅಲ್ಲಿಗೆ ಕಳಿಸ್ತೀವಿ..

  • ಮೈತ್ರಿ ಧರ್ಮ ಪಾಲನೆ – ಹಾಸನ  ಯೂತ್ ಕಾಂಗ್ರೆಸ್ ಕಾರ್ಯಾಧ್ಯಕ್ಷನ ವಜಾ

    ಮೈತ್ರಿ ಧರ್ಮ ಪಾಲನೆ – ಹಾಸನ ಯೂತ್ ಕಾಂಗ್ರೆಸ್ ಕಾರ್ಯಾಧ್ಯಕ್ಷನ ವಜಾ

    ಹಾಸನ: ಮಾಜಿ ಸಚಿವ ಎ.ಮಂಜು ಅವರು ಬಂಡಾಯವೆದ್ದು ಮೈತ್ರಿ ಅಭ್ಯರ್ಥಿ ವಿರುದ್ಧ ಬಿಜೆಪಿಯಿಂದ ಕಣಕ್ಕೆ ಇಳಿದಿರುವುದು ಎಲ್ಲರಿಗೂ ತಿಳಿದ ವಿಚಾರ. ಈ ನಡುವೆ ತಂದೆ ಬಿಜೆಪಿಗೆ ಪಕ್ಷಾಂತರ ಮಾಡಿದ್ದರೂ ಕೂಡ ಕಾಂಗ್ರೆಸ್ ಪಕ್ಷದಲ್ಲೇ ಉಳಿದಿದ್ದ ಎ.ಮಂಜು ಅವರ ಪುತ್ರ ಮಂಥರ್ ಗೌಡರನ್ನು ಯೂತ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದೆ.

    ಹಾಸನ ಜಿಲ್ಲಾ ಪಂಚಾಯತ್ ಸದಸ್ಯರಾಗಿರುವ ಮಂಥರ್ ಗೌಡ ಅವರು ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷರು ಆಗಿದ್ದರು. ಸದ್ಯ ಮಂಥರ್ ರನ್ನು ಕೆಪಿಸಿಸಿ ವಜಾಗೊಳಿಸಿದ ಪರಿಣಾಮ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನವನ್ನು ಎ.ಮಂಜು ಪುತ್ರನ ಬದಲಿಗೆ ಜಿಲ್ಲಾ ಕಾಂಗ್ರೆಸ್ ನಾಯಕ ಬಿ.ಶಿವರಾಂ ಪುತ್ರ ಕೆಂಪರಾಜು ಅವರನ್ನು ನೇಮಿಸಿದೆ.

    ಮಂಜು ಅವರ ಪುತ್ರರನ್ನು ವಜಾಗೊಳಿಸುವ ಮೂಲಕ ಕೆಪಿಸಿಸಿ ಮೈತ್ರಿ ಧರ್ಮವನ್ನು ಪಾಲನೆ ಮಾಡಿದೆ. ವಜಾ ಮಾಡುವ ಮುನ್ನ ಕೆಪಿಸಿಸಿ ಮಂಥರ್ ಅವರಿಂದ ಚುಣಾವಣೆಯಲ್ಲಿ ಯುವ ಕಾಂಗ್ರೆಸ್ ನಿಂದ ಯಾವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಲ್ಲದೇ ಸಕ್ರೀಯವಾಗಿ ಮೈತ್ರಿ ಅಭ್ಯರ್ಥಿ ಪರ ಚುನಾವಣೆಯಲ್ಲಿ ಪ್ರಚಾರ ಕೈಗೊಳ್ಳದ ಬಗ್ಗೆ ವಿವರಣೆ ನೀಡುವಂತೆ 24 ಗಂಟೆಗಳ ಅವಧಿಯಲ್ಲಿ ಉತ್ತರ ನೀಡಲು ನೋಟಿಸ್ ನೀಡಿತ್ತು. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

  • ಸಿದ್ದರಾಮಯ್ಯ ಅವರೇ ನನ್ನ ನಾಯಕ : ಎ.ಮಂಜು

    ಸಿದ್ದರಾಮಯ್ಯ ಅವರೇ ನನ್ನ ನಾಯಕ : ಎ.ಮಂಜು

    ಹಾಸನ: ನಾನು ಸಿದ್ದರಾಮಯ್ಯ ಅವರಿಗೆ ಟೋಪಿ ಹಾಕಿದೆ ಎಂದು ಆರೋಪ ಮಾಡುತ್ತಿದ್ದಾರೆ. ಆದರೆ ನಾನು ಇವತ್ತು ಹೇಳುತ್ತೇನೆ. ಸಿದ್ದರಾಮಯ್ಯ ಅವರೇ ನನ್ನ ನಾಯಕ ಎಂದು ಹಾಸನ ಬಿಜೆಪಿ ಲೋಕಸಭಾ ಅಭ್ಯರ್ಥಿ ಎ ಮಂಜು ಹೇಳಿದ್ದಾರೆ.

    ನಗರದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಬಿಜೆಪಿ ಸೇರುವ ಮುಂಚೆ ಕಾರ್ಯಕರ್ತರ ಸಭೆ ಮಾಡಿದ್ದೆ. ಅವರೆಲ್ಲರ ಸಲಹೆ ಪಡೆದ ಬಳಿಕವೇ ನಾನು ಈ ನಿರ್ಧಾರ ಕೈಗೊಂಡಿದ್ದೇನೆ. ಈ ದೇಶಕ್ಕೆ ಸಮರ್ಥವಾದ ನಾಯಕ ಬೇಕು. ಅದು ನರೇಂದ್ರ ಮೋದಿ ಮಾತ್ರ. ಅದಕ್ಕಾಗಿ ನಾನು ಈ ಪಕ್ಷಕ್ಕೆ ಬಂದಿದ್ದೇನೆ, ನಾನು ಮೊದಲ ಬಾರಿಗೆ ಬಿಜೆಪಿಯಿಂದ ಶಾಸಕನಾಗಿ ಆಯ್ಕೆಯ ವೇಳೆ ಮೋದಿ ಹವಾ ಇರಲಿಲ್ಲ. ಈಗ ಇಡೀ ದೇಶದಲ್ಲಿ ಮೋದಿ ಹವಾ ಇದೆ. ಮೋದಿ ಮತ್ತೊಮ್ಮೆ ಮೋದಿ ಎಂಬ ಮಾತು ಇಡೀ ದೇಶ ಹೇಳುತ್ತಿದೆ ಎಂದರು.

    ನಾನು ಈ ಚುನಾವಣಾ ನಿಂತಿರುವುದು ಹಾಸನದ ಎರಡನೇ ಹಂತದ ನಾಯಕರ ಧ್ವನಿಯಾಗಿ. ಎರಡನೇ ಹಂತದ ನಾಯಕರು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಲ್ಲಿದ್ದಾರೆ. ಅದಕ್ಕಾಗಿ ನಾನೂ ಅವರೆಲ್ಲರ ಧ್ವನಿಯಾಗಿ ನಿಂತಿದ್ದೇನೆ. ನಮ್ಮ ತಾಲೂಕಿನ ಜೆಡಿಎಸ್ ನಾಯಕರಿಗೆ ಸರಿಯಾದ ಗೌರವ ಇಲ್ಲ. ಅವರು ಕರೆಯುವ ಶೈಲಿಯೇ ಬೇರೆ. ಇದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದರು.

    ದೇವೇಗೌಡರು ಎಲ್ಲೇ ಹೋದರು ಮೊಮ್ಮಕ್ಕಳನ್ನ ಗೆಲ್ಲಿಸಿ ಎಂದು ಕಣ್ಣೀರು ಹಾಕುತ್ತಾರೆ. ದೇವೇಗೌಡರು ಇಲ್ಲಿಂದ ನಿಲ್ಲಲಿ. ಮಂಡ್ಯದಲ್ಲಿ ಸುಮಲತಾ ನಿಲ್ಲಲಿ ಎಂದು ನಾನು ಚುನಾವಣೆ ಮುಂಚೆಯೇ ಹೇಳಿದ್ದೆ. ದೇಶದ ಪ್ರಧಾನಿ ಮೋದಿ ಗಂಗೆಯನ್ನ ಶುದ್ಧಿ ಮಾಡಿದ್ದಾರೆ. ಈಗ ನಾವೆಲ್ಲ ಸೇರಿ ಹಾಸನವನ್ನ ಶುದ್ಧ ಮಾಡಬೇಕು ಎಂದರು.

    ಯಾರಾದರು ದಲಿತರು ಅವರಿಗೆ ಶೇಕ್ ಹ್ಯಾಂಡ್ ಮಾಡಿದರೆ ಸ್ನಾನ ಮಾಡುತ್ತಾರೆ. ಸ್ವಾತಿ ನಕ್ಷತ್ರದ ರೇವಣ್ಣ ಶಾರದಾ ಪೂಜೆ ಮಾಡಿದರೆ ಎಲ್ಲ ಸರಿಯಾಗುತ್ತಾ? ಅದಕ್ಕೆ ಐಟಿ ದಾಳಿ ಆಗಿದ್ದು. ಅವರು ಮಾಡಿದ್ದ ಭ್ರಷ್ಟಾಚಾರದಿಂದ ಐಟಿ ದಾಳಿ ಆಗಿದೆ. ಸ್ವಾತಿ ನಕ್ಷತ್ರ ಆದರೆ ಏನಾಗಿದೆ ಎಂದು ವಾಗ್ದಾಳಿ ನಡೆಸಿದರು.

  • ಹಾಸನದಲ್ಲಿ ಬ್ರಿಟೀಷರ ಆಡಳಿತ, ಸ್ವಾತಂತ್ರ್ಯಕ್ಕೆ ಬಿಜೆಪಿಗೆ ಮತ ನೀಡಿ: ಎ.ಮಂಜು

    ಹಾಸನದಲ್ಲಿ ಬ್ರಿಟೀಷರ ಆಡಳಿತ, ಸ್ವಾತಂತ್ರ್ಯಕ್ಕೆ ಬಿಜೆಪಿಗೆ ಮತ ನೀಡಿ: ಎ.ಮಂಜು

    ಹಾಸನ: ಹಾಸನ ಜಿಲ್ಲೆಯಲ್ಲಿ ಬ್ರಿಟೀಷರ ಆಡಳಿತದಂತೆ ಅಧಿಕಾರ ನಡೆಯುತ್ತಿದೆ. ಹೀಗಾಗಿ ಜನರಿಗೆ ಸ್ವಾತಂತ್ರ್ಯ ಸಿಗಬೇಕೆಂಬ ಉದ್ದೇಶದಿಂದ ಸ್ಪರ್ಧೆ ಮಾಡಿದ್ದೇನೆ ಎಂದು ಮಾಜಿ ಸಚಿವ, ಬಿಜೆಪಿ ಅಭ್ಯರ್ಥಿ ಎ.ಮಂಜು ಹೇಳಿದ್ದಾರೆ.

    ಹಾಸನದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಎಚ್.ಡಿ.ದೇವೇಗೌಡರ ವಿರುದ್ಧವೇ ನಾನು 4.9 ಲಕ್ಷಕ್ಕೂ ಹೆಚ್ಚು ಮತ ಪಡೆದಿದ್ದೆ. ಈಗ ಅಹಿಂದ ವರ್ಗದ ಜೊತೆಗೆ ಸೇರಿ ಕುಟುಂಬ ರಾಜಕಾರಣ ಕೊನೆಗಾಣಿಸಲು ತೀರ್ಮಾನ ಮಾಡಿದ್ದೇನೆ. ಅಧಿಕಾರ ಶಾಶ್ವತವಲ್ಲ. ಹೀಗಾಗಿ ಅಧಿಕಾರದಲ್ಲಿ ಇರುವಾಗ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ದೇವೇಗೌಡರು ಇಲ್ಲಿನ ಜನರಿಂದ ವೋಟ್ ಮಾತ್ರ ಹಾಕಿಸಿಕೊಳ್ಳುತ್ತಾರೆ. ಆದರೆ ಅಧಿಕಾರವನ್ನು ಮಕ್ಕಳು ಮೊಮ್ಮಕ್ಕಳು, ಸೊಸೆಯಂದಿರು, ಬೀಗರಿಗೆ ನೀಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

    ದೇವೇಗೌಡರು ಹಾಸನ ಲೋಕಸಭಾ ಕ್ಷೇತ್ರದ ಟಿಕೆಟ್ ಅನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಕೊಡುವ ಬದಲು ಪಕ್ಷದ ಕಾರ್ಯಕರ್ತರಿಗೆ ಕೊಡಬಹುದಿತ್ತು. ರಾಜಕೀಯವಾಗಿ ಇವರನ್ನು ತೆಗೆದು ಹಾಕಿದರು ಎಲ್ಲಾ ಪಕ್ಷಗಳ ಕೆಳಹಂತದ ನಾಯಕರು ಉಳಿಯುತ್ತಾರೆ ಎಂದ ಅವರು, ನಾನು ಸ್ಪರ್ಧಿಸದಂತೆ ದೊಡ್ಡ ದೊಡ್ಡವರಿಂದ ಒತ್ತಡ ಹಾಕಿಸಿದರು. ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುತ್ತೇವೆ. ಬೆಂಗಳೂರು ಉತ್ತರ ಲೋಕಸಭಾ ಟಿಕೆಟ್ ಕೊಡುತ್ತೇವೆ ಎಂದು ಆಮಿಷ ಒಡ್ಡಿದ್ದರು. ಆದರೆ ನಾನು ಒಪ್ಪಿಲ್ಲ. ಜಿಲ್ಲೆಯ ಜನರ ಪರವಾಗಿ ಹೋರಾಟ ಮಾಡಲು ಬಂದಿದ್ದೇನೆ ಎಂದು ತಿಳಿಸಿದರು.

    ಲೋಕಸಭಾ ಚುನಾವಣೆ ಫಲಿತಾಂಶದ ನಂತರ ರಾಜ್ಯದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಲಿದೆ. ಈ ಮೂಲಕ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬರಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂಪ್ಪ ಮುಖ್ಯಮಂತ್ರಿಯಾಗುತ್ತಾರೆ ಎಂದು ಭವಿಷ್ಯ ನುಡಿದರು.

  • ಮಂಜು ಜನ್ಮದಲ್ಲಿ ಪೌರಕಾರ್ಮಿಕರ ಸಮಸ್ಯೆ ಕೇಳಿದ್ದಾರೋ ಇಲ್ವೋ ಗೊತ್ತಿಲ್ಲ: ಸಿಎಂ ತಿರುಗೇಟು

    ಮಂಜು ಜನ್ಮದಲ್ಲಿ ಪೌರಕಾರ್ಮಿಕರ ಸಮಸ್ಯೆ ಕೇಳಿದ್ದಾರೋ ಇಲ್ವೋ ಗೊತ್ತಿಲ್ಲ: ಸಿಎಂ ತಿರುಗೇಟು

    – ಇಂಥ ಗಿಮಿಕ್‍ಗಳು ಹಾಸನದಲ್ಲಿ ಎಲ್ಲಿ ನಡೆಯುತ್ತೆ ಹೇಳಿ

    ಮೈಸೂರು: ಪೌರಕಾರ್ಮಿಕರಿಗೆ ಹಾಸನದಲ್ಲಿ ಮಾಜಿ ಸಚಿವ ಎ.ಮಂಜು ಪಾದ ಪೂಜೆ ಮಾಡಿದ ವಿಚಾರದ ಬಗ್ಗೆ ಮೈಸೂರಿನಲ್ಲಿ ಸಿಎಂ ಎಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

    ಪಾದ ಪೂಜೆ ಮಾಡಿದ ತಕ್ಷಣ ಅವರ ಪಾಪ ಎಲ್ಲಾ ತೊಳೆದು ಹೋಗುತ್ತಾ?. ಎ. ಮಂಜು ಅವರ ಜನ್ಮದಲ್ಲಿ ಪೌರಕಾರ್ಮಿಕರ ಸಮಸ್ಯೆ ಕೇಳಿದ್ದಾರೋ ಇಲ್ವೋ ಗೊತ್ತಿಲ್ಲ. ಇಂತಹ ಗಿಮಿಕ್‍ಗಳು ಹಾಸನದಲ್ಲಿ ಎಲ್ಲಿ ನಡೆಯುತ್ತೆ ಹೇಳಿ ಎಂದು ಸಿಎಂ ಪ್ರಶ್ನಿಸಿದ್ದಾರೆ.

    ಮೋದಿ ಯಾರಿಗೋ ಪೌರಕಾರ್ಮಿಕರ ಡ್ರೆಸ್ ಹಾಕಿ ಪಾದ ಪೂಜೆ ಮಾಡಿದ್ದರು. ಮಂಜು ಇನ್ಯಾರಿಗೆ ಪೌರಕಾರ್ಮಿಕರ ಡ್ರೆಸ್ ಹಾಕಿ ಪಾದ ಪೂಜೆ ಮಾಡಿದ್ದಾರೋ ಗೊತ್ತಿಲ್ಲ ಎಂದು ಕಿಡಿಕಾರಿದ್ದಾರೆ.

    ಎ. ಮಂಜು ಅವರು ಇಂದು ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನ, ಪೌರಕಾರ್ಮಿಕ ದಂಪತಿಯ ಪಾದ ತೊಳೆದು ಪೂಜೆ ಮಾಡಿ ಮೋದಿ ಅವರನ್ನು ಫಾಲೋ ಮಾಡಿದ್ದರು.

    ಹಾಸನದ ನಿರ್ಮಾಲ ನಗರದಲ್ಲಿ ಚಂದ್ರು ಹಾಗೂ ಅಶ್ವಿನಿ ದಂಪತಿಯ ಕಾಲು ತೊಳೆದು ಎ.ಮಂಜು ಪೂಜೆ ಮಾಡಿದ್ದಾರೆ. ಪಾದ ತೊಳೆದ ನಂತರ, ನಾವು ಪೌರಕಾರ್ಮಿಕರ ಪಾದ ತೊಳೆದಿದ್ದ ಮೋದಿಯನ್ನು ಟಿವಿಯಲ್ಲಿ ಮಾತ್ರ ನೊಡಿದ್ದೇವು. ಅದರೇ ಇಂದು ಎ.ಮಂಜು ನಮ್ಮ ಮನೆಗೆ ಬಂದು ನಮ್ಮ ಪಾದ ತೊಳೆದಿದ್ದಾರೆ. ಮೊದಲು ಸ್ವಲ್ಪ ಮುಜುಗರವಾದರೂ ನಂತರ ಸಂತೋಷವಾಯಿತು ಎಂದ ಚಂದ್ರು ದಂಪತಿ ಪ್ರತಿಕ್ರಿಯಿಸಿದ್ದಾರೆ.