Tag: ಎಸ್ ಧೋನಿ

  • ಧೋನಿ ಇದ್ದಾಗ ಭಾರತಕ್ಕೆ ಪಾಕಿಸ್ತಾನ ಲೆಕ್ಕಕ್ಕಿರಲಿಲ್ಲ – ಅಫ್ರಿದಿ

    ಧೋನಿ ಇದ್ದಾಗ ಭಾರತಕ್ಕೆ ಪಾಕಿಸ್ತಾನ ಲೆಕ್ಕಕ್ಕಿರಲಿಲ್ಲ – ಅಫ್ರಿದಿ

    ಇಸ್ಲಾಮಾಬಾದ್: ಟೀಂ ಇಂಡಿಯಾ (Team India) ಮಾಜಿ ನಾಯಕ ಎಂ.ಎಸ್.ಧೋನಿ (MS Dhoni) ಇದ್ದಾಗ ಟೀಂ ಇಂಡಿಯಾಕ್ಕೆ ಪಾಕಿಸ್ತಾನ (Pakistan) ಲೆಕ್ಕಕ್ಕೇ ಇರಲಿಲ್ಲ. ಟೀಂ ಇಂಡಿಯಾ ಪಾಕಿಸ್ತಾನವನ್ನು ಸಂಪೂರ್ಣವಾಗಿ ಕಡೆಗಣಿಸಿತ್ತು ಎಂದು ಪಾಕಿಸ್ತಾನ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ (Shahid Afridi) ನೆನಪಿಸಿಕೊಂಡಿದ್ದಾರೆ.

    ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಕಡೆಗಣಿಸಿ, ದಕ್ಷಿಣ ಆಫ್ರಿಕಾ (South Africa), ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಂತಹ ತಂಡಗಳೊಂದಿಗೆ ಸ್ಪರ್ಧಿಸಲು ಪ್ರಾರಂಭಿಸಿತು. ಪಾಕಿಸ್ತಾನದ ವಿರುದ್ಧದ ಪಂದ್ಯಗಳನ್ನು ಸತತವಾಗಿ ಗೆಲ್ಲುತ್ತಿದ್ದರು. ಪ್ರತಿ ಬಾರಿ ಪಂದ್ಯ ಆಡುವಾಗಲೂ ಪಾಕಿಸ್ತಾನಕ್ಕೆ ಸೋಲು ಖಚಿತವಾಗಿರುತ್ತಿತ್ತು. ಭಾರತವು ಈಗ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ನೊಂದಿಗೆ ಹೆಚ್ಚು ಸ್ಪರ್ಧಿಸಲು ಪ್ರಾರಂಭಿಸಿದ್ದು, ಹಿಂದಿನಂತೆ ಭಿನ್ನವಾಗಿ ತಮ್ಮ ಮನಸ್ಥಿತಿ ಬದಲಾಯಿಸಿದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಮಗಳ ಸಾವಿನ ನೋವಿನಲ್ಲೂ ಟೀಂ ಇಂಡಿಯಾ ವಿರುದ್ಧ ಹೋರಾಡಿದ ಮಿಲ್ಲರ್

    2021ರ T20 ವಿಶ್ವಕಪ್ (T20 WorldCup) ವರೆಗೆ, ಪಾಕಿಸ್ತಾನವು ವಿಶ್ವಕಪ್‌ಗಳಲ್ಲಿ ಭಾರತದ ವಿರುದ್ಧ ಒಂದೇ ಒಂದು ಪಂದ್ಯದಲ್ಲೂ ಗೆಲ್ಲಲು ಸಾಧ್ಯವಾಗಿರಲಿಲ್ಲ. ಸತತವಾಗಿ 7 ಏಕದಿನ ಪಂದ್ಯಗಳು ಮತ್ತು 5 T20 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿತ್ತು. ಇದನ್ನೂ ಓದಿ: ಶ್ರೇಯಸ್‌ ಅಯ್ಯರ್‌, ಇಶಾನ್‌ ಕಿಶನ್‌ ಭರ್ಜರಿ ಬ್ಯಾಟಿಂಗ್‌ – ಭಾರತಕ್ಕೆ 7 ವಿಕೆಟ್‌ಗಳ ಜಯ

    1992ರಿಂದ 2021ರ ವರೆಗೆ ಪಾಕಿಸ್ತಾನಕ್ಕೆ ಭಾರತವನ್ನು ಸೋಲಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಪಾಕಿಸ್ತಾನ ಏಷ್ಯಾಕಪ್‌ನಲ್ಲಿ (AisaCup 2022) ಒಂದು ಪಂದ್ಯದಲ್ಲಿ ಸೋತರೂ ಮತ್ತೊಂದು ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಗೆಲುವು ಸಾಧಿಸಿತು. ಕಳೆದ ವರ್ಷದ T20 ವಿಶ್ವಕಪ್‌ನಲ್ಲಿಯೂ ಭಾರತ ತಂಡದ ವಿರುದ್ಧ ಪಾಕಿಸ್ತಾನ 10 ವಿಕೆಟ್‌ಗಳ ಜಯ ಗಳಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • ಯುವ ಆಟಗಾರೊಂದಿಗೆ ತಂಡ ಕಟ್ಟಿದ ಧೋನಿ ಪಾಂಟಿಂಗ್‍ಗಿಂತ ಬೆಸ್ಟ್ ನಾಯಕ: ಅಫ್ರಿದಿ

    ಯುವ ಆಟಗಾರೊಂದಿಗೆ ತಂಡ ಕಟ್ಟಿದ ಧೋನಿ ಪಾಂಟಿಂಗ್‍ಗಿಂತ ಬೆಸ್ಟ್ ನಾಯಕ: ಅಫ್ರಿದಿ

    ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಸ್ ಧೋನಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್‍ಗಿಂತ ಬೆಸ್ಟ್ ಕ್ಯಾಪ್ಟನ್ ಎಂದು ಪಾಕಿಸ್ತಾನದ ಮಾಜಿ ಆಲ್‍ರೌಂಡರ್ ಶಾಹಿದ್ ಅಫ್ರಿದಿ ಹೇಳಿದ್ದಾರೆ.

    ವಿಶ್ವ ಮಟ್ಟದ ಕ್ರಿಕೆಟ್ ನಾಯಕರನ್ನು ತೆಗದುಕೊಂಡರೆ ಎಂಎಸ್ ಧೋನಿ ಮತ್ತು ರಿಕಿ ಪಾಂಟಿಂಗ್ ನಡುವೆ ಸ್ಪರ್ಧೆ ಉಂಟಾಗುತ್ತದೆ. ಏಕೆಂದರೆ ಇಬ್ಬರು ಭಾರತ ಮತ್ತು ಆಸ್ಟ್ರೇಲಿಯಾದ ಪ್ರಬಲ ನಾಯಕರು, ಜೊತೆಗೆ ಇಬ್ಬರು ಎರಡು ಐಸಿಸಿ ವಿಶ್ವಕಪ್ ಅನ್ನು ಗೆದ್ದ ನಾಯಕರು. ಹೀಗಾಗಿ ಈ ಇಬ್ಬರ ನಡುವೆ ಸ್ಪರ್ಧೆ ಏರ್ಪಡುವುದು ಸಾಮಾನ್ಯ. ಆದರೆ ಈ ಇಬ್ಬರ ನಡುವೆ ಅಫ್ರಿದಿ ಅವರು ಧೋನಿಯನ್ನೇ ಶ್ರೇಷ್ಠ ನಾಯಕ ಎಂದಿದ್ದಾರೆ.

    ಅಫ್ರಿದಿ ಅವರು ಬುಧವಾರ ಟ್ವಿಟ್ಟರ್ ನಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದರು. ಈ ವೇಳೆ ಓರ್ವ ಅಭಿಮಾನಿ ನಿಮ್ಮ ಪ್ರಕಾರ ಎಂಎಸ್ ಧೋನಿ ಮತ್ತು ರಿಕಿ ಪಾಂಟಿಂಗ್ ಈ ಇಬ್ಬರಲ್ಲಿ ಯಾರು ಉತ್ತಮ ನಾಯಕರು ಮತ್ತು ಯಾಕೆ ಎಂದು ಪ್ರಶ್ನೆ ಮಾಡಿದ್ದಾನೆ. ಈ ಪ್ರಶ್ನೆಗೆ ಉತ್ತರಿಸಿರುವ ಶಾಹಿದ್ ಅಫ್ರಿದಿ, ನಾನು ಇದರಲ್ಲಿ ಪಾಂಟಿಂಗ್‍ಗಿಂತ ಧೋನಿಗೆ ಹೆಚ್ಚಿನ ಅಂಕಗಳನ್ನು ಕೊಡುತ್ತೇನೆ. ಏಕೆಂದರೆ ಧೋನಿ ಯುವ ಆಟಗಾರರನ್ನು ಇಟ್ಟುಕೊಂಡು ಉತ್ತಮ ತಂಡವನ್ನು ಕಟ್ಟಿದ್ದಾರೆ ಎಂದಿದ್ದಾರೆ. ಇದನ್ನು ಓದಿ: ಧೋನಿ ಟ್ರೋಫಿಗಳನ್ನು ಗೆದ್ದಿರಬಹುದು, ಕಷ್ಟದ ಕಾಲದಲ್ಲಿ ತಂಡ ಕಟ್ಟಿದ್ದು ದಾದಾ: ಪಾರ್ಥಿವ್

    ಕೊರೊನಾ ವೈರಸ್ ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿ ಸಿಲುಕಿರುವ ಪಾಕಿಸ್ತಾನದ ಜನರಿಗೆ ಅಫ್ರಿದಿ ಸಹಾಯ ಮಾಡುತ್ತಿದ್ದಾರೆ. ಜೊತೆಗೆ ಇತ್ತೀಚೆಗೆ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿತ್ತು. ಈಗ ಗುಣಮುಖರಾಗಿರುವ ಅಫ್ರಿದಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿರುತ್ತಾರೆ. ಈಗ ಅಫ್ರಿದಿ ವಿವಿಯನ್ ರಿಚಡ್ರ್ಸ್ ಅವರನ್ನು ತಮ್ಮ ನೆಚ್ಚಿನ ಬ್ಯಾಟ್ಸ್‍ಮನ್ ಮತ್ತು ಅಬ್ದುಲ್ ಖಾದಿರ್ ಅವರ ಸಾರ್ವಕಾಲಿಕ ನೆಚ್ಚಿನ ಸ್ಪಿನ್ನರ್ ಎಂದು ಟ್ವಿಟ್ಟರ್ ನಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

    ಧೋನಿಯವರು ವೈಟ್-ಬಾಲ್ ಕ್ರಿಕೆಟ್‍ನಲ್ಲಿ ನಾಯಕನಾಗಿ ಮೂರು ಪ್ರಮುಖ ಐಸಿಸಿ ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕ. 2007ರ ಚೊಚ್ಚಲ ಟಿ-20 ವಿಶ್ವಕಪ್, 2011 ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಧೋನಿ ಅವರ ನಾಯಕ್ವದಲ್ಲಿ ಗೆದ್ದಿತ್ತು. ಈ ಕಾರಣದಿಂದ ಧೋನಿಯವರನ್ನು ಬೆಸ್ಟ್ ನಾಯಕ ಎನ್ನಲಾಗುತ್ತದೆ. ಜೊತೆಗೆ ರಿಕಿ ಪಾಂಟಿಂಗ್ ಅವರ ನಾಯಕ್ವದಲ್ಲಿ ಆಸ್ಟ್ರೇಲಿಯಾ ಕೂಡ 2003 ಮತ್ತು 2007ರ ವಿಶ್ವಕಪ್ ಅನ್ನು ಗೆದ್ದುಕೊಂಡಿದೆ.

  • ಊರುಗೋಲು ಹಿಡ್ಕೊಂಡು ಹೋಟೆಲಿಗೆ ಬಂದು ಟೀಂ ಇಂಡಿಯಾಗೆ ಶುಭಾಶಯ ಹೇಳಿದ ಶಾರ್ದೂಲ್

    ಊರುಗೋಲು ಹಿಡ್ಕೊಂಡು ಹೋಟೆಲಿಗೆ ಬಂದು ಟೀಂ ಇಂಡಿಯಾಗೆ ಶುಭಾಶಯ ಹೇಳಿದ ಶಾರ್ದೂಲ್

    ನವದೆಹಲಿ: ಕಾಲಿಗೆ ಗಾಯವಾಗಿ ಲಂಡನ್‍ನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿರುವ ಬೌಲರ್ ಶಾರ್ದೂಲ್ ಠಾಕೂರ್ ಕಾಲಿಗೆ ಬ್ಯಾಂಡೇಜ್ ಹಾಕಿಕೊಂಡು ಹೋಗಿ ಟೀಂ ಇಂಡಿಯಾಗೆ ಶುಭಾಶಯ ಹೇಳಿದ್ದಾರೆ.

    ಐಪಿಎಲ್ 12 ಅವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಅಡಿದ ಶಾರ್ದೂಲ್ ಠಾಕೂರ್ ಅವರು ಬೌಲಿಂಗ್ ಮಾಡುವ ಸಮಯದಲ್ಲಿ ಬಲಗಾಲಿಗೆ ಪೆಟ್ಟು ಬಿದ್ದಿತ್ತು. ಇದಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಲಂಡನ್‍ನ ಕಾರ್ಡಿಫ್ ಹೋಗಿದ್ದರು.

    ಈ ನಡುವೆ ಊರುಗೋಲು ಸಹಾಯದಿಂದಲೇ ಭಾರತ ತಂಡದ ಆಟಗಾರರು ಇರುವ ಹೋಟೆಲಿಗೆ ತೆರಳಿದ ಶಾರ್ದೂಲ್ ಠಾಕೂರ್ ಟೀಂ ಇಂಡಿಯಾದ ಎಲ್ಲಾ ಆಟಗಾರರನ್ನು ಭೇಟಿಯಾಗಿ ವಿಶ್ವಕಪ್ ಗೆದ್ದು ತರುವಂತೆ ಶುಭಾಶಯ ತಿಳಿಸಿ ಬಂದಿದ್ದಾರೆ. ಈ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್ ಧೋನಿ ಅವರನ್ನು ಭೇಟಿಯಾಗಿ ಕೆಲ ಸಮಯ ಸಮಲೋಚನೆ ನಡೆಸಿದರು. ಈ ಸಮಯದಲ್ಲಿ ಭಾರತದ ಉಪನಾಯಕ ರೋಹಿತ್ ಶರ್ಮಾ ಅವರು ಶಾರ್ದೂಲ್ ಠಾಕೂರ್ ಅವರ ಅರೋಗ್ಯದ ಬಗ್ಗೆ ವಿಚಾರಿಸಿ ಲಂಡನ್‍ನಿನಲ್ಲೇ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದ್ದಾರೆ.

    https://www.instagram.com/p/Bx7E1xoA6BL/?utm_source=ig_embed

    ಗಾಯದ ಸಮಸ್ಯೆ ನಡುವೆಯೂ ನಮ್ಮನ್ನು ನೋಡಲು ಬಂದ ಶಾರ್ದುಲ್ ಠಾಕೂರ್ ಅವರು ಬೇಗ ಗುಣವಾಗಲಿ ಎಂದು ಟೀಂ ಇಂಡಿಯಾ ಆಟಗಾರರು ದೇವರಲ್ಲಿ ಕೇಳಿಕೊಂಡಿದ್ದಾರೆ.

    2019ರ ವಿಶ್ವಕಪ್ ಟೂರ್ನಿ ಮೇ 30ಕ್ಕೆ ಅರಂಭವಾಗಲಿದ್ದು, ಆಡಿದ ಮೊದಲ ಅಭ್ಯಾಸ ಪಂದ್ಯದಲ್ಲೇ ನ್ಯೂಜಿಲ್ಯಾಂಡ್ ವಿರುದ್ಧ ಸೋಲು ಕಂಡ ಭಾರತ ಮುಂದಿನ ಅಭ್ಯಾಸ ಪಂದ್ಯವನ್ನು ಮೇ 28ಕ್ಕೆ ಬಾಂಗ್ಲಾದೇಶದ ವಿರುದ್ಧ ಆಡಲಿದೆ. ಜೂನ್ 6 ರಂದು ಲೀಗ್ ಹಂತದ ಮೊದಲ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ.