Tag: ಎಸ್ ಎಂ ಜಾಮದಾರ್

  • ಬಿಜೆಪಿಯಿಂದಲೇ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹಿನ್ನಡೆ: ಡಾ.ಸಿದ್ದರಾಮ ಶ್ರೀ

    ಬಿಜೆಪಿಯಿಂದಲೇ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹಿನ್ನಡೆ: ಡಾ.ಸಿದ್ದರಾಮ ಶ್ರೀ

    – ಮೂರು ಪ್ರಶ್ನೆಗಳಿಗೆ ಪಂಚಪೀಠ ಶ್ರೀಗಳು ಉತ್ತರಿಸಿಲಿ: ಎಸ್.ಎಂ ಜಾಮದಾರ್ ಸವಾಲು

    ಗದಗ: ಹಿಂದುತ್ವವಾದಿ ಬಿಜೆಪಿಯಿಂದಲೇ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹಿನ್ನಡೆಯಾಗಿದೆ ಎಂದು ಗದಗ ತೋಂಟದಾರ್ಯ ಮಠದ ಡಾ.ಸಿದ್ದರಾಮ ಶ್ರೀಗಳು ಆರೋಪಿಸಿದ್ದಾರೆ.

    ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ನಡೆದ ಲಿಂಗಾಯತ ಧರ್ಮ ಮತ್ತು ಚಿಂತನಾ ಗೋಷ್ಠಿ ಬಳಿಕ ಮಾತನಾಡಿದ ಶ್ರೀಗಳು, ಬಿಜೆಪಿ ಹಿಂದುತ್ವ ರಕ್ಷಕ ಪಕ್ಷ. ಲಿಂಗಾಯತರು ಹಿಂದೂ ಧರ್ಮದಿಂದ ಹೊರಗೆ ಹೋಗಬಾರದು ಎನ್ನುವುದು ಉದ್ದೇಶವನ್ನು ಬಿಜೆಪಿ ಹೊಂದಿದೆ ಎಂದು ದೂರಿದರು.

    ಜೈನರು ಹಾಗೂ ಬೌದ್ಧರು ಮೊದಲು ಹಿಂದೂಗಳಾಗಿದ್ದರು. ಆದರ ಈಗ ಹಿಂದೂ ಧರ್ಮದಿಂದ ಹೊರಗೆ ಹೋಗಿದ್ದಾರೆ. ಇದರಿಂದ ಹಿಂದೂ ಧರ್ಮಕ್ಕೆ ಏನು ಹಾನಿಯಾಗಿದೆ? ಲಿಂಗಾಯತರು ದೇಶಪ್ರೇಮಿಗಳು ದೇಶದ್ರೋಹಿಗಳಲ್ಲ. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಯಾವತ್ತೂ ನಿಲ್ಲಲ್ಲ ಎಂದು ಸ್ಪಷ್ಟಪಡಿಸಿದರು.

    ಲಿಂಗಾಯತ ಮಹಾಸಭಾ ಮಹಾಪ್ರಧಾನ ಕಾರ್ಯದರ್ಶಿ ಎಸ್.ಎಂ ಜಾಮದಾರ್ ಅವರು ಮಾತನಾಡಿ, ಲಿಂಗಾಯತ ಧರ್ಮ ಹಾಳಾಗಿದ್ದೇ ಪಂಚಪೀಠದ ಶ್ರೀಗಳಿಂದ ಎಂದು ಗಂಭೀರ ಆರೋಪ ಮಾಡಿದರು. ಪಂಚಪೀಠ ಶ್ರೀಗಳಿಗೆ ಜಾಮದಾರ್ 3 ಪ್ರಶ್ನೆಗಳನ್ನು ಉತ್ತರಿಸುವಂತೆ ಕೇಳಿದ್ದಾರೆ.

    ಪಂಚಪೀಠ ಶ್ರೀಗಳು ತಮ್ಮ ಮಠಗಳಲ್ಲಿ ಬಸವಣ್ಣನವರ ಫೋಟೋ ಹಾಕಿಕೊಂಡಿದ್ದಾರೆ. ಕಳೆದ 200 ವರ್ಷಗಳಿಂದ ಸುಮಾರು 160ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆಸಿದ್ದಾರೆ. ಆ ಪುಸ್ತಕಗಳ ಮೂಲಕ ಬಸವಣ್ಣನವರ ಹಾಗೂ ಅವರ ಜೊತೆಗಿದ್ದ ಶರಣದ ಚಾರಿತ್ರ್ಯವದೆಯನ್ನು ಮಾಡಿದ್ದಾರೆ. ನೀವು ಹೀಗೆ ಮಾಡಿದ್ದು ಯಾಕೆ? ಇದಕ್ಕೆ ಪಂಚಪೀಠ ಶ್ರೀಗಳು ಉತ್ತರ ನೀಡಿಲಿ ಎಂದು ಆಗ್ರಹಿಸಿದರು.

    ನಿಮ್ಮ ಧರ್ಮ ಪ್ರಚಾರಕ್ಕಾಗಿ ಲಿಂಗಾಯತ ಧರ್ಮವನ್ನು ಭ್ರಷ್ಟಗೊಳಿಸಿದ್ದಿರಿ. ಆದರೆ ಈಗ ವೀರಶೈವ ಹಾಗೂ ಲಿಂಗಾಯತ ಧರ್ಮ ಒಂದೇ ಆಗಬೇಕೆಂದು ಯಾಕೆ ಹೇಳುತ್ತಿರಿ? ಎಂದ ಅವರು, ನನ್ನ ಮೂರನೇ ಪ್ರಶ್ನೆ ನೀವು ಬ್ರಾಹ್ಮಣರೋ, ವೀರಶೈವ ಬ್ರಾಹ್ಮಣರೋ? ಲಿಂಗಾಯತರೋ? ಎನ್ನುದನ್ನು ಸ್ಪಷ್ಟಪಡಿಸಿ ಎಂದು ಪಂಚಪೀಠ ಶ್ರೀಗಳಿಗೆ ಕೇಳಿದರು.

    ನೀವು ಲಿಂಗಾಯತರು ಬಸವಾದಿ ಶರಣರ ತತ್ವ ಒಪ್ಪುವುದಾದರೆ ನಾವು ಗೌರವಯುತವಾಗಿ ಸ್ವಾಗತಿಸುತ್ತೇವೆ. ಆದರೆ ಬಸವಣ್ಣನವರ ಚಾರಿತ್ರ್ಯವದೆ ಮಾಡಿ ಅಮಾಯಕ ಜನರ ದಾರಿತಪ್ಪಿಸುವ ಕೆಲವನ್ನು ಮಾಡಬಾರದು ಎಂದು ಗುಡುಗಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವೀರಶೈವ ಮಹಾಸಭಾದಲ್ಲಿ ಲಿಂಗಾಯತ ಸೇರಲ್ಲ, ಅವರೇ ಬಂದು ನಮ್ಮ ಜೊತೆ ಸೇರ್ಪಡೆಯಾಗಲಿ: ಎಸ್.ಎಂ.ಜಾಮದಾರ್

    ವೀರಶೈವ ಮಹಾಸಭಾದಲ್ಲಿ ಲಿಂಗಾಯತ ಸೇರಲ್ಲ, ಅವರೇ ಬಂದು ನಮ್ಮ ಜೊತೆ ಸೇರ್ಪಡೆಯಾಗಲಿ: ಎಸ್.ಎಂ.ಜಾಮದಾರ್

    ಬೆಂಗಳೂರು: ಲಿಂಗಾಯತರು ವೀರಶೈವ ಮಹಾಸಭಾದಲ್ಲಿ ಸೇರಲ್ಲ. ಅವರೇ ಬಂದು ನಮ್ಮ ಜೊತೆ ಸೇರಲಿ ಎಂದು ನಿವೃತ್ತ ಐಎಎಸ್ ಅಧಿಕಾರಿ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಎಸ್ ಎಂ ಜಮ್ದಾರ್ ಹೇಳಿದ್ದಾರೆ.

    ನಮ್ಮ ಪ್ರತ್ಯೇಕ ಧರ್ಮ ಹಾಗೂ ಅಲ್ಪಸಂಖ್ಯಾತ ನಿಲುವುಗಳನ್ನು ವೀರಶೈವ ಮಹಾಸಭಾದವರು ಒಪ್ಪಿದ್ದಾರೆ. ಲಿಂಗಾಯತ ಮಹಾಸಭೆ ಅಥವಾ ಲಿಂಗಾಯತ ವೀರಶೈವ ಮಹಾಸಭೆಯನ್ನು ಒಪ್ಪಿಕೊಂಡು ವೀರಶೈವ ಮಹಾಸಭಾದವರು ಬರುವುದಾದಲ್ಲಿ ಸಂತೋಷದಿಂದ ಸ್ವಾಗತ ಮಾಡುತ್ತೇವೆ. ತಾತ್ವಿಕವಾಗಿ ಸೈದ್ಧಾಂತಿಕವಾಗಿ ಒಂದಾಗುವುದಾದಲ್ಲಿ ಒಪ್ಪುತ್ತೇವೆ, ರಾಜಕೀಯ ಆಮೇಲಿನದು. ಇಲ್ಲಿಯವರೆಗೆ ಯಾವುದೇ ಸಭೆಗಳು ಆಗಿಲ್ಲ. ಅವರು ಮಾತಾಡುವುದಾದರೆ ಸ್ವಾಗತಿಸುತ್ತೇವೆ ಎಂದು ತಿಳಿಸಿದರು.

    ಧರ್ಮದ ಬಗ್ಗೆ ಅಪಪ್ರಚಾರ ಮಾಡಿದ್ದೇ ಶಾಮನೂರು ಶಿವಶಂಕರಪ್ಪ. ಪಂಚಪೀಠಗಳನ್ನ ಮುಂದೆ ಇಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡಿದ್ದು ಯಾರು ಎಂಬ ಪ್ರಶ್ನೆಗೆ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪನವರು ಉತ್ತರಿಸಬೇಕಿದೆ. ಕಾಂಗ್ರೆಸ್ ಶಾಮನೂರು ಶಿವಶಂಕರಪ್ಪರನ್ನು ಪಕ್ಷದಿಂದ ಹೊರ ಹಾಕಬೇಕಿದ್ದು, ಚುನಾವಣೆಯಲ್ಲಿ ಅವರ ಮಗನನ್ನು ಸೋಲಿಸುವ ಮೂಲಕ ಜನರು ತಕ್ಕ ಪಾಠವನ್ನು ಕಲಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು.

    ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಶಿಫಾರಸ್ಸನ್ನು ಒಪ್ಪಿಲ್ಲ ಎಂದು ಖಚಿತವಾದ ಅಧಿಕೃತ ಹೇಳಿಕೆ ಬಂದಿಲ್ಲ. ನಮ್ಮ ಹೋರಾಟ ರಾಜಕೀಯ ಉದ್ದೇಶವನ್ನ ಹೊಂದಿಲ್ಲ. ಈ ಹೋರಾಟಕ್ಕೆ ವೀರಶೈವ ಮಹಾಸಭಾ ಕಾರಣ. ವೀರಶೈವ ಮಹಾಸಭಾ ತಮ್ಮ ನಿಲುವನ್ನ ಬದಲಿಸಿದರೆ ನಾವು ಒಂದಾಗಲೂ ಸಿದ್ಧ ಇಲ್ಲ ಅಂದಲ್ಲಿ ಒಂದಾಗಲ್ಲ. ಪ್ರತ್ಯೇಕ ಧರ್ಮಕ್ಕಾಗಿ ನಮ್ಮ ಹೋರಾಟ ನಿಂತಿಲ್ಲ ಮುಂದುವರೆದಿದೆ. ಮೊದಲಿಗೆ ಸಾಮಾಜಿಕ ಧಾರ್ಮಿಕ ಹೋರಾಟ ಮಾಡುತ್ತೇವೆ ಆನಂತರ ರಾಜಕೀಯ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.