Tag: ಎಸ್ಸಿಎಸ್ಟಿ ಮೀಸಲಾತಿ

  • ಸಿದ್ದರಾಮಯ್ಯಗೆ ಅಹಿಂದ ನಾಯಕ ಅನ್ನೋದು 5 ವರ್ಷಕ್ಕೊಮ್ಮೆ ನೆನಪಾಗುತ್ತೆ – ಶ್ರೀರಾಮುಲು

    ಸಿದ್ದರಾಮಯ್ಯಗೆ ಅಹಿಂದ ನಾಯಕ ಅನ್ನೋದು 5 ವರ್ಷಕ್ಕೊಮ್ಮೆ ನೆನಪಾಗುತ್ತೆ – ಶ್ರೀರಾಮುಲು

    ರಾಯಚೂರು: ಸಿದ್ದರಾಮಯ್ಯನವರಿಗೆ (Siddaramaiah) ತಾವು ಅಹಿಂದ ನಾಯಕ ಅನ್ನೋದು ಪಂಚವಾರ್ಷಿಕ ಯೋಜನೆ ತರ ಐದು ವರ್ಷಗಳಿಗೊಮ್ಮೆ ನೆನಪಿಗೆ ಬರುತ್ತೆ ಎಂದು ಸಚಿವ ಶ್ರೀರಾಮುಲು (SriRamulu) ಕುಟುಕಿದ್ದಾರೆ.

    ರಾಯಚೂರಿನಲ್ಲಿಂದು (Raichur) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ತಳ ಸಮುದಾಯದವರಿಗೆ ಮೀಸಲಾತಿ (Reservation) ಕೊಡುವ ವಿಚಾರದಲ್ಲಿ ಸಿದ್ದರಾಮಯ್ಯ ಸೋತಿದ್ದಾರೆ. ಪ್ರಿನ್ಸಿಪಲ್ ಸೆಕ್ರೆಟರಿ ಜಾದವ್ ಅವರು ವರದಿ ಕೊಟ್ಟಿದ್ದರು. ಸಿದ್ದರಾಮಯ್ಯ ಸಿಎಂ ಆಗಿದ್ದರೂ ಆಯೋಗ ರಚನೆ ಮಾಡಲಿಲ್ಲ. ಎಸ್ಸಿ-ಎಸ್ಟಿಗೆ ಮೀಸಲಾತಿ (SCST Reservation) ಹೆಚ್ಚಿಸುವ ಕೆಲಸ ನಮ್ಮ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಮಾಡಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡ್ತಿರೋರು ಗುತ್ತಿಗೆದಾರರು ಕಾಂಗ್ರೆಸ್ ಏಜೆಂಟರು: ಕಟೀಲ್ ಕಿಡಿ

    ಹಿಂದುಳಿದವರ, ಅಹಿಂದ ನಾಯಕರು ಅಂತ ಕರೆಯಿಸಿ ಕೊಳ್ಳುವ ಅರ್ಹತೆ ಸಿದ್ದರಾಮಯ್ಯ (Siddaramaiah) ಅವರಿಗೆ ಇಲ್ಲ. ಅದು ಏನಿದ್ದರೂ ಬಸವರಾಜ ಬೊಮ್ಮಾಯಿ ಅವರಿಗೆ ಮಾತ್ರ. ಹೀಗಾಗಿ ಸಿಎಂಗೆ ಅಭಿನಂದನೆ ಸಲ್ಲಿಸಲು ನವೆಂಬರ್ 20ಕ್ಕೆ ಬಳ್ಳಾರಿಯಲ್ಲಿ ಸಮಾವೇಶ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ ಫ್ಲೈಓವರ್ ಕುಸಿದಾಗ ಬ್ಯಾನರ್ಜಿಯನ್ನು ನಿಂದಿಸಿದ್ದ ನೀವು ಇದಕ್ಕೆ ಏನ್ ಹೇಳ್ತೀರಿ: ಮೋದಿ ವಿರುದ್ಧ ವಿಪಕ್ಷಗಳು ಕಿಡಿ

    ಸಿದ್ದರಾಮಯ್ಯ ಮಹಾ ಸುಳ್ಳ, ಅವರ ಮನೆ ದೇವರ ಹೆಸರೇ ಮಹಾ ಸುಳ್ಳ. ಆತ ಯಾವ ಮಾತು ಉಳಿಸಿಕೊಂಡಿಲ್ಲ. ಇಡೀ ರಾಜ್ಯದ ಹಿಂದುಳಿದ ಜಾತಿಯವರು ರೋಸಿ ಹೋಗಿದ್ದಾರೆ. ಎಸ್ಸಿ-ಎಸ್ಟಿ ಜನಾಂಗದವರೂ ಅವರನ್ನ ನಂಬಲ್ಲ. ಮುಂದಿನ ಚುನಾವಣೆಯಲ್ಲಿ ಜನರೇ ಸಿದ್ದರಾಮಯ್ಯರನ್ನ ತಿರಸ್ಕಾರ ಮಾಡ್ತಾರೆ ಎಂದು ಭವಿಷ್ಯ ನುಡಿದರು.

    Live Tv
    [brid partner=56869869 player=32851 video=960834 autoplay=true]

  • ಬಸವರಾಜ ಬೊಮ್ಮಾಯಿ ಅವರಿಗೆ ಗಂಡೆದೆ ಇದೆ – ಆರ್.ಅಶೋಕ್

    ಬಸವರಾಜ ಬೊಮ್ಮಾಯಿ ಅವರಿಗೆ ಗಂಡೆದೆ ಇದೆ – ಆರ್.ಅಶೋಕ್

    ಬೆಂಗಳೂರು: ಮೀಸಲಾತಿ (Reservation) ಕೊಡೋದಕ್ಕೆ ಗಂಡೆದೆ ಬೇಕು. ನಮ್ಮ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಆ ಗಂಡೆದೆ ಇದೆ ಎಂದು ಸಚಿವ ಆರ್.ಅಶೋಕ್ (R Ashok), ಬೊಮ್ಮಾಯಿ ಅವರ ಗುಣಗಾನ ಮಾಡಿದ್ದಾರೆ.

    ಇಲ್ಲಿ ಫ್ರೀಡಂ ಪಾರ್ಕ್‌ನಲ್ಲಿ (Freedom Park) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಂಡೆದೆ ಇರೋದಕ್ಕೆ ಮೀಸಲಾತಿ (Reservation) ಕೊಟ್ಟಿದ್ದಾರೆ. ಯಾರೂ ಮಾಡದ ಕೆಲಸವನ್ನು ಬೊಮ್ಮಾಯಿ ಮಾಡಿದ್ದಾರೆ. ಅವರು ಚಾಣಕ್ಯ ಇದ್ದ ಹಾಗೆ. ಮೀಸಲಾತಿ ಜೇನುಗೂಡು ಎಂದು ಬಹಳ ಜನ ಹಿಂಜರಿಯುತ್ತಿದ್ದರು. ಆದರೆ ಬೊಮ್ಮಾಯಿ ಅವರು ಜೇನುಗೂಡಿಗೆ ಕೈಹಾಕಿದರು. ಜೇನುಗೂಡಿಗೆ ಕಲ್ಲು ಹೊಡೆದು ಎಸ್ಸಿ-ಎಸ್ಟಿ ಸಮುದಾಯದವರಿಗೆ (SCST Reservation) ಮೀಸಲಾತಿಯ ಜೇನು ಕೊಟ್ಟಿದ್ದಾರೆ ಎಂದು ಹೊಗಳಿದ್ದಾರೆ.

    ನಮ್ಮ ಮುಖ್ಯಮಂತ್ರಿಗಳು ಚಾಣಕ್ಯ ವಿದ್ಯೆ ಕಲಿತವರು. ಚಾಣಕ್ಯ ತನದಿಂದ ಜೇನುಗೂಡಿಗೆ ಕಲ್ಲು ಹೊಡೆದಂತೆ ಮೀಸಲಾತಿ ಹೆಚ್ಚಿಸುವ ದಿಟ್ಟ ನಿರ್ಧಾರ ತಗೊಂಡಿದ್ದಾರೆ. ಹಿಂದೆ ಬಂದ ಸರ್ಕಾರಗಳು ಯಾರು ಕೂಡ ಮೀಸಲಾತಿಯ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಒಬ್ಬರು ಏನು ಬ್ರದರ್ ಅಂತಾರೆ, ಇನ್ನೊಬ್ಬರು ನೋಡಿ ಜೇನುಗೂಡಿಗೆ ಕಲ್ಲು ಹೊಡೆದಿದ್ದೀರಿ ನಿಮಗೆ ಮುಂದೆ ಸರಿಯಾಗಿ ಆಗುತ್ತೆ ಅಂದಿದ್ರು. ಆದರೆ ಇವತ್ತು ಏನು ಆಗೇ ಇಲ್ಲ ನೋಡಿ ಎಂದು ಟಾಂಗ್ ನೀಡಿದ್ದಾರೆ.

    ಗಂಡೆದೆ ಇರೋರು ಮೀಸಲಾತಿ ಕೊಡೋಕೆ ಸಾಧ್ಯ. ಆ ಗಂಡೆದೆ ತೋರಿಸಿದವರು ಬೊಮ್ಮಾಯಿ ಮಾತ್ರ. ಏನಾದರೂ ಮಾಡೇ ಮಾಡ್ತೀನಿ ಅನ್ನೋರು ಇತಿಹಾಸ ಸೃಷ್ಟಿಸೋರು. ಏನು ಮಾಡೋಕೆ ಆಗಲ್ಲ ಅನ್ನೋರು ಮಣ್ಣು ಸೇರೋರು. ಈಗ ಇತಿಹಾಸ ಸೃಷ್ಟಿಸಿದ್ದು ನಮ್ಮ ಮುಖ್ಯಮಂತ್ರಿ ಬೊಮ್ಮಾಯಿ. ಅವರು ಮಾನಸಿಕವಾಗಿ ಪ್ರಿಪೇರ್ ಆಗಿ ಇದನ್ನು ಮಾಡಿದ್ರು. ದೀಪಾವಳಿಗೆ (Diwali) ಗೆಜೆಟ್ ಕಾಪಿ ಕೊಡಬೇಕು ಅಂತಾ ಗೆಜೆಟ್ ತಂದಿದ್ದೇವೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]