Tag: ಎನ್ ಕೌಂಟರ್

  • ಖ್ಯಾತ ಗಾಯಕ ಸಿಧು ಮೂಸೆವಾಲಾ ಹಂತಕರಿಗೆ ಎನ್ ಕೌಂಟರ್ ಮೂಲಕ ಉತ್ತರ : ಗುಂಡಿನ ದಾಳಿಗೆ ನಾಲ್ವರು ಹಂತಕರ ಬಲಿ

    ಖ್ಯಾತ ಗಾಯಕ ಸಿಧು ಮೂಸೆವಾಲಾ ಹಂತಕರಿಗೆ ಎನ್ ಕೌಂಟರ್ ಮೂಲಕ ಉತ್ತರ : ಗುಂಡಿನ ದಾಳಿಗೆ ನಾಲ್ವರು ಹಂತಕರ ಬಲಿ

    ಪಂಜಾಬಿ ಖ್ಯಾತ ಗಾಯಕ ಸಿಧು ಮೂಸೆವಾಲಾ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು ಎಂದು ಶಂಕಿಸಲಾಗಿದ್ದ ಕ್ರಿಮಿನಲ್ ಗಳಿಗೆ ಇಂದು ಗನ್ ಮೂಲಕವೇ ಉತ್ತರ ಕೊಟ್ಟಿದ್ದಾರೆ ಪಂಜಾಬ್ ಪೊಲೀಸರು. ಪಂಜಾಬ್ ನ ಅಮೃತಸರದ ಸಮೀಪದ ಒಂಟಿ ಮನೆಯೊಂದರಲ್ಲಿ ಅವಿತು ಕುಳಿತಿದ್ದ ಅವರ ಮೇಲೆ ಪೊಲೀಸರು ಗುಂಡಿನ ಮಳೆಯನ್ನೇ ಸುರಿದಿದ್ದಾರೆ. ಪಾಕಿಸ್ತಾನ ಗಡಿಯಿಂದ ಕೇವಲ 10 ಕಿಮೀ ದೂರದ ಹಳ್ಳಿಯಲ್ಲಿ ಈ ಎನ್ ಕೌಂಟರ್ ನಡೆದಿದೆ.

    ಪೊಲೀಸ್ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಅದೊಂದು ರಣಭೀಕರ ಎನ್ ಕೌಂಟರ್ ಆಗಿತ್ತು ಎಂದು ಹೇಳಲಾಗುತ್ತಿದೆ. ಅಟ್ಟಾರಿ ಅಂತಾರಾಷ್ಟ್ರೀಯ ಗಡಿ ಸಮೀಪದ ಹೋಶಿಯಾರ್ ನಗರದ ಭಾಕ್ನಾ ಗ್ರಾಮದಲ್ಲಿ ಗ್ಯಾಂಗ್ ಸ್ಟರ್ ಗಳಾದ ಮನ್ ಪ್ರೀತ್ ಮನ್ನು, ಜಗರೂಪ್ ರೂಪ್ ಸೇರಿದಂತೆ ಒಟ್ಟು ನಾಲ್ಕು ಜನರು ಇದ್ದರು ಎಂದು ಹೇಳಲಾಗುತ್ತಿದೆ. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ನಾಲ್ಕೂ ಜನರನ್ನು ಎನ್ ಕೌಂಟರ್ ನಲ್ಲಿ ಹತ್ಯ ಮಾಡಲಾಗಿದೆಯಂತೆ. ಇದನ್ನೂ ಓದಿ:ಪಡ್ಡೆಹುಡುಗರ ಟೆಂಪ್ರೇಚರ್ ಹೆಚ್ಚಿಸಿದ ದಿಶಾ ಪಟಾನಿ ನಯಾ ಫೋಟೋಶೂಟ್

    ಸಿಂಧು ಮೂಸೆವಾಲಾ ಹತ್ಯೆಯ ಹಿಂದೆ ಗ್ಯಾಂಗ್ ಸ್ಟರ್ ಲಾರೆನಸ್ ಬಿಶ್ನೋಯಿ ಅವರ ತಂಡದ ಕೈವಾಡವಿದೆ ಎಂದು ಹೇಳಲಾಗಿತ್ತು. ಹತ್ಯೆಯಾದ ಕೆಲವೇ ದಿನಗಳಲ್ಲಿ ಈ ಗ್ಯಾಂಗ್ ನ ಸದಸ್ಯರಾದ ಶಾರ್ಪ್ ಶೂಟರ್ ಅಂಕಿತ್, ಸಚಿನ್ ಭಿವಾನಿ ಎನ್ನುವ ಪ್ರಮುಖ ಆರೋಪಿಗಳನ್ನು ಮೊದಲು ಬಂಧಿಸಿದ್ದರು. ಆನಂತರ ನಾಲ್ವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಮತ್ತಷ್ಟು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿತ್ತು. ಅಲ್ಲದೇ, ನಟ ಸಲ್ಮಾನ್ ಖಾನ್ ಸೇರಿದಂತೆ ಹಲವರಿಗೆ ಇದೇ ಗ್ಯಾಂಗ್ ಜೀವ ಬೆದರಿಕೆ ಕೂಡ ನೀಡಿತ್ತು.

    ಇಂದು ನಡೆದ ಎನ್ ಕೌಂಟರ್ ನಲ್ಲಿ ಲಾರೆನ್ಸ್ ಬಿಶ್ನೋಯಿ ತಂಡದ ನಾಲ್ವರ ಸದಸ್ಯರು ಮೃತರಾಗಿದ್ದಾರೆ ಎಂದು ತಿಳಿದು ಬಂದಿದ್ದು, ಒಬ್ಬ ಮಾಧ್ಯಮ ಪ್ರತಿನಿಧಿಗೆ ಕಾಲಿಗೆ ಗುಂಡೇಟು ಬಿದ್ದಿದೆ. ಎನ್ ಕೌಂಟರ್ ನಲ್ಲಿ ಭಾಗಿಯಾದ ಮೂವರು ಪೊಲೀಸರಿಗೂ ಗಾಯಗಳಾಗಿವೆ.

    Live Tv
    [brid partner=56869869 player=32851 video=960834 autoplay=true]

  • ಅತ್ಯಾಚಾರ ಆರೋಪಿಗಳನ್ನು ಎನ್‍ಕೌಂಟರ್ ಮಾಡಬೇಕು: ಸಾ.ರಾ ಮಹೇಶ್

    ಅತ್ಯಾಚಾರ ಆರೋಪಿಗಳನ್ನು ಎನ್‍ಕೌಂಟರ್ ಮಾಡಬೇಕು: ಸಾ.ರಾ ಮಹೇಶ್

    ಮೈಸೂರು: ಸಾಮೂಹಿಕ ಅತ್ಯಾಚಾರದ ಆರೋಪಿಗಳನ್ನು ಬಂಧಿಸಿದ್ದು, ಇಂತವರನ್ನು ಎನ್ ಕೌಂಟರ್ ಮಾಡಬೇಕು ಎಂದು ಶಾಸಕ ಸಾ.ರಾ ಮಹೇಶ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾಂಗ್ ರೇಪ್ ವಿಚಾರ ಇಡೀ ಮೈಸೂರು ತಲೆತಗ್ಗಿಸುವ ವಿಚಾರವಾಗಿದೆ. ಬೆಳಗ್ಗೆ ಐದು ಜನರನ್ನು ಬಂಧಿಸಿದ್ದಾರೆ ಎಂದು ಮಾಹಿತಿ ಬಂದಿದೆ. ಇವರ ವಿರುದ್ಧ ಪೊಲೀಸರು ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

    ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಬೇಕು. ಸರ್ಕಾರ ಎನ್‍ಕೌಂಟರ್ ಮಾಡಲು ಪೊಲೀಸರಿಗೆ ಸೂಚನೆ ನೀಡಬೇಕು ಎಂದು ಇದೇ ವೇಳೆ ಸಾ.ರಾ ಮಹೇಶ್ ಸಲಹೆಯಿತ್ತರು. ಇತ್ತ ಆರೋಪಿಗಳ ಬಂಧನವಾದ ವಿಚಾರ ತಯಿಳಿಯುತ್ತಿದ್ದಂತೆಯೇ ಸಾರ್ವಜನಿಕರು ಕೂಡ ಆರೋಪಿಗಳನ್ನು ಗಲ್ಲಿಗೇರಿಸಬೇಕು, ಎನ್ ಕೌಂಟರ್ ಮಾಡಬೇಕು ಎಂಬುದಾಗಿ ಆಕ್ರೋಶ ಹೊರಹಾಕುತ್ತಿದ್ದಾರೆ. ಇದನ್ನೂ ಓದಿ: ದರೋಡೆ ಮಾಡಲು ಹೋಗಿ ಏನೂ ಸಿಗದಿದ್ದಾಗ ಯುವತಿಯ ಅತ್ಯಾಚಾರವೆಸಗಿದ ಕಾಮುಕರು!

    ಆಗಸ್ಟ್ 24ರಂದು ನಡೆದಿದ್ದ ಗ್ಯಾಂಗ್ ರೇಪ್ ಸಂಬಂಧ 80 ಮಂದಿಯಿದ್ದ ಪೊಲೀಸರ 5 ತಂಡ ವಿವಿಧೆಡೆಗಳಲ್ಲಿ ಆರೋಪಿಗಳಿಗಾಗಿ ಹುಡುಕಾಟ ನಡೆಸಿತ್ತು. ಇಂದು ಬೆಳಗ್ಗೆ ಆರೋಪಿಗಳು ತಮಿಳುನಾಡಿನ ಸತ್ಯಮಂಗಲದಲ್ಲಿ ಲಾಕ್ ಆದರು. ಸದ್ಯ ಐವರು ಆರೋಪಿಗಳನ್ನ ಮೈಸೂರಿಗೆ ಕರೆತಂದಿರುವ ಪೊಲೀಸರು, ಗೌಪ್ಯ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ನಂತರ ನ್ಯಾಯಾಧೀಶರ ಎದುರು ಹಾಜರು ಪಡಿಸಲಿದ್ದಾರೆ. ಆರೋಪಿಗಳಲ್ಲಿ ನಾಲ್ವರು ತಮಿಳುನಾಡು ಮೂಲದವರಾದವರಾಗಿದ್ದು, ಓರ್ವನನ್ನು ಚಾಮರಾಜನಗರದವನು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಕ್ಯಾನ್ಸರ್ ರೋಗ 4ನೇ ಹಂತ ತಲುಪಿದಾಗ ಏನಾಗುತ್ತೋ ಹಾಗೆ ಅತ್ಯಾಚಾರಿಗಳಿಗೆ ಶಿಕ್ಷೆಯಾಗ್ಬೇಕು: ವಿನಯ್ ಗುರೂಜಿ

    ಪ್ರಕರಣ ನಡೆದ ಸಂದರ್ಭದಲ್ಲಿ ಈ ಸ್ಥಳಕ್ಕೆ ಅಪರಿಚಿತರು ಬರಲು ಸಾಧ್ಯವಿಲ್ಲ ಯಾರು ಪರಿಚಿತರು ಮಾತ್ರ ಬರಲು ಸಾಧ್ಯ ಎಂಬ ಮಾಹಿತಿ ಮೇರೆಗೆ ತನಿಖೆಗೆ ಪೊಲೀಸರು ಮುಂದಾಗಿದ್ದರು. ಇತ್ತ ಯುವಕ ಹಾಗೂ ಯುವತಿ ಮೂರು ದಿನ ಅದೇ ಸ್ಥಳದಲ್ಲಿ ಕುಳಿತುಕೊಂಡು ಮಾತನಾಡುತ್ತಿರುವುದನ್ನು ಗಮನಿಸಿ, ನಾಲ್ಕನೇ ದಿನ ಕಾಮುಕರು ಕೃತ್ಯ ಎಸಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಬಿಯರ್ ಬಾಟ್ಲಿ, ಬಸ್ ಟಿಕೆಟ್ ಆಧರಿಸಿ ಅತ್ಯಾಚಾರಿಗಳ ಬಂಧನ

  • ಮಗನ ಹತೈಗೈದ ಉಗ್ರರನ್ನು 72 ಗಂಟೆಯೊಳಗೆ ಕೊಲ್ಲಿ: ಮೃತ ಸೈನಿಕನ ತಂದೆ ಆಗ್ರಹ

    ಮಗನ ಹತೈಗೈದ ಉಗ್ರರನ್ನು 72 ಗಂಟೆಯೊಳಗೆ ಕೊಲ್ಲಿ: ಮೃತ ಸೈನಿಕನ ತಂದೆ ಆಗ್ರಹ

    ಶ್ರೀನಗರ: ಮಗನನ್ನು ಅಪಹರಿಸಿ ಕೊಂದ ಉಗ್ರರನ್ನು 72ಗಂಟೆಯೊಳಗೆ ಹತ್ಯೆ ಮಾಡಿ ಎಂದು ಮೃತ ಯೋಧ ಔರಂಗಜೇಬ್‍ನ ತಂದೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ಯೋಧನ ಸಾವಿಗೆ ಕಾರಣರಾದವರನ್ನು ಹಿಡಿದು ಶಿಕ್ಷೆಗೆ ಗುರಿಪಡಿಸಲು ಸರ್ಕಾರ ತಡಮಾಡುತ್ತಿದೆ ಯಾಕೆ? 72 ಗಂಟೆಯೊಳಗೆ ಸರ್ಕಾರ ಯಾವ ನಿರ್ಧಾರವನ್ನು ಪ್ರಕಟಿಸದಿದ್ದಲ್ಲಿ ನನ್ನ ಮಗನ ಸಾವಿಗೆ ಕಾರಣರಾದವರ ವಿರುದ್ಧ ನಾನೇ ಸೇಡು ತೀರಿಸಿಕೊಳ್ಳುತ್ತೇನೆ ಎಂದು ನಿವೃತ್ತ ಯೋಧ ಮೃತ ಯೋಧನ ತಂದೆ ಹೇಳಿದ್ದಾರೆ.

    ಜಮ್ಮು ಕಾಶ್ಮೀರದಲ್ಲಿ ಯೋಧರ ಸಾವಲ್ಲಿ ರಾಜಕೀಯ ಮಾಡುವವರ ವಿರುದ್ಧ ಹರಿಹಾಯ್ದಿರುವ ಮೃತ ಯೋಧನ ತಂದೆ ಪಾಕಿಸ್ತಾನದ ಬಗ್ಗೆ ಸಹಾನುಭೂತಿ ತೋರಿಸುವ ಪ್ರತ್ಯೇಕತಾವಾದಿಗಳ ವಿರುದ್ಧ ಕಿಡಿಕಾರಿದ್ದಾರೆ.

    ಔರಂಗಜೇಬ್‍ನ ಹತ್ಯೆ ಕೇವಲ ನಮ್ಮ ಕುಟುಂಬಕ್ಕೆ ಅಷ್ಟೆ ಆಘಾತಕಾರಿಯಲ್ಲ ಸೇನೆಗೂ ಕೂಡ ಹಿನ್ನಡೆಯಾಗಿದೆ. ಜಮ್ಮು ಕಾಶ್ಮೀರಕ್ಕೆ ಸೇರಿದವನಾಗಿ ಇಲ್ಲಿಯೇ ಸೇವೆ ಸಲ್ಲಿಸುತ್ತಿದ್ದ ಎಂದು ಬೇಸರ ವ್ಯಕ್ತಪಡಿಸಿದರು.

    ಜಮ್ಮು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳನ್ನು 2003 ರಿಂದ ತಡೆಯಲು ಏಕೆ ಸಾಧ್ಯವಾಗುತ್ತಿಲ್ಲ. ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ಪರಿಸ್ಥಿತಿ ಬದಲಾಗಬಹುದು ಎಂದು ಎಣಿಸಿದ್ದೆವು ಆದರೆ ಎಣಿಸಿದಷ್ಟು ಆಗಿಲ್ಲ. ಈ ವಿಚಾರದಲ್ಲಿ ರಾಜಕಾರಣ ಮಾಡುವವರನ್ನ ಹಾಗೂ ಪ್ರತ್ಯೇಕತಾವಾದಿಗಳನ್ನು ಕಾಶ್ಮೀರದಿಂದ ಓಡಿಸಬೇಕು. ಸೇನೆ ಹಾಗೂ ಇತರ ಭದ್ರತಾ ಸಂಸ್ಥೆಗಳು ಉಗ್ರರ ವಿರುದ್ಧ ಕಾಶ್ಮೀರದಲ್ಲಿ ಕಾರ್ಯಾಚರಣೆ ನಡೆಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಂಜಾನ್ ಹಬ್ಬವನ್ನು ಔರಂಗಜೇಬ್‍ನ ಜೊತೆ ಆಚರಿಸುವ ಆಸೆ ಆದರೆ ಅವನಿಲ್ಲ ಎಂದು ನೋವನ್ನು ಹಂಚಿಕೊಂಡರು.

    ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಉಗ್ರ ಸಮೀರ್ ಟೈಗರ್ ನನ್ನು ಎನ್ ಕೌಂಟರ್ ಮಾಡಿ ಔರಂಗಜೇಬ್ ಹತ್ಯೆ ಮಾಡಿದ್ದರು. ಇದರ ಸೇಡಿನಲ್ಲೇ ಉಗ್ರರು ಔರಂಗಜೇಬ್‍ನನ್ನು ಅಪಹರಿಸಿ ಹತ್ಯೆಗೈದಿದ್ದಾರೆ.ಇದನ್ನೂ ಓದಿ:ಉಗ್ರ ಸಮೀರ್ ನನ್ನು ಎನ್ ಕೌಂಟರ್ ಮಾಡಿದ್ದ ಯೋಧನ ಅಪಹರಣ

  • ಉಗ್ರ ಸಮೀರ್ ನನ್ನು ಎನ್ ಕೌಂಟರ್ ಮಾಡಿದ್ದ ಯೋಧನ ಅಪಹರಣ

    ಉಗ್ರ ಸಮೀರ್ ನನ್ನು ಎನ್ ಕೌಂಟರ್ ಮಾಡಿದ್ದ ಯೋಧನ ಅಪಹರಣ

    ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಉಗ್ರ ಸಮೀರ್ ಟೈಗರ್ ನನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈದಿದ್ದ ಭಾರತೀಯ ಸೇನಾ ಪಡೆಯ ಯೋಧರೊಬ್ಬರನ್ನು ಜಮ್ಮು ಕಾಶ್ಮೀರದ ಪುಲ್ವಾಮಾ ದಿಂದ ಅಪಹರಿಸಲಾಗಿದೆ.

    ಅಪಹರಣಗೊಂಡ ಯೋಧನನ್ನು ಔರಂಗಜೇಬ್ ಎಂದು ಗುರುತಿಸಲಾಗಿದ್ದು ಪೂಂಚ್ ನ ನಿವಾಸಿಯಾಗಿದ್ದರು. ಕೆಲಸ ಮುಗಿಸಿ ಮನೆಗೆ ತೆರಳುವ ವೇಳೆ ಪುಲ್ವಾಮಾದಲ್ಲಿ ಶಸ್ತ್ರ ಸಜ್ಜಿತ ಉಗ್ರರು ಸುತ್ತುವರಿದು ಅಪಹರಣ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

    23 ರಾಷ್ಟ್ರೀಯ ರೈಫಲ್ಸ್ ಗೆ ಸೇರಿದವರಾಗಿರುವ ಔರಂಗಜೇಬ್ ಅಪಹರಣದ ತನಿಖೆಯನ್ನು ಜಮ್ಮು ಕಾಶ್ಮೀರದ ಪೊಲೀಸರು ಶುರುಮಾಡಿದ್ದಾರೆ. ಕಳೆದ ಕೆಲವು ವಾರಗಳ ಹಿಂದೆಯಷ್ಟೇ ಮೋಸ್ಟ್ ವಾಂಟೆಡ್ ಉಗ್ರ ಸಮೀರ್ ಟೈಗರ್ ಹಾಗೂ ಮತ್ತೋರ್ವ ಉಗ್ರನನ್ನು ಪುಲ್ವಾಮಾದಲ್ಲಿ ನಡೆಸಿದ ಎನ್ ಕೌಂಟರ್ ನಲ್ಲಿ ಹತ್ಯೆಗೈಯಲಾಗಿತ್ತು.

    ಉಗ್ರ ಚಟುವಟಿಕೆಗಳನ್ನು ಮಟ್ಟ ಹಾಕಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೇನೆ ಮತ್ತು ಇತರ ಭದ್ರತಾ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಅನುಮತಿಯನ್ನು ನೀಡಿತ್ತು. ಸಮೀರ್ ನ ಎನ್ ಕೌಂಟರ್ ಹಿಜ್ಬುಲ್ ಮುಜಾಯಿದ್ದೀನ್ ಸಂಘಟನೆಗೆ ಭಾರಿ ಹಿನ್ನೆಡೆಯಾಗಿತ್ತು.

  • ಕಿಡ್ನಾಪ್ ಮಾಡಿ 15 ಲಕ್ಷಕ್ಕೆ ಬೇಡಿಕೆಯಿಟ್ರು- ಸಿನಿಮೀಯ ರೀತಿಯಲ್ಲಿ ಟೆಕ್ಕಿಯನ್ನು ರಕ್ಷಿಸಿದ ಪೊಲೀಸರು!

    ಕಿಡ್ನಾಪ್ ಮಾಡಿ 15 ಲಕ್ಷಕ್ಕೆ ಬೇಡಿಕೆಯಿಟ್ರು- ಸಿನಿಮೀಯ ರೀತಿಯಲ್ಲಿ ಟೆಕ್ಕಿಯನ್ನು ರಕ್ಷಿಸಿದ ಪೊಲೀಸರು!

    ಗಾಜಿಯಾಬಾದ್: ವಾರಗಳ ಹಿಂದೆ ಅಪಹರಣವಾಗಿ ಬಂಧಿಯಾಗಿದ್ದ ಟೆಕ್ಕಿಯನ್ನು ಕೊನೆಗೂ ರಕ್ಷಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ರಾಜೀವ್ ಕುಮಾರ್ ಅಪಹರಣವಾಗಿರುವ ಟೆಕ್ಕಿಯಾಗಿದ್ದು, ಇವರು ನೊಯ್ಡಾದ ಎಚ್‍ಸಿಇಎಲ್ ಟೆಕ್ನಾಲಜಿಸ್ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿದ್ದರು.

    ಘಟನೆ ವಿವರ:
    ಕಳೆದ ಶುಕ್ರವಾರ ರಾಜೀವ್ ಅವರ ಹುಟ್ಟುಹಬ್ಬವಿದ್ದು, ಈ ಹಿನ್ನೆಲೆಯಲ್ಲಿ ಅವರು ತನ್ನ ಹುಟ್ಟುಹಬ್ಬ ಆಚರಿಸಲೆಂದು ಗುರುವಾರ ಹರಿದ್ವಾರಕ್ಕೆ ತೆರಳುತ್ತಿದ್ದರು. ಆದ್ರೆ ಅವರು ದೆಹಲಿ ಸಮೀಪದ ಗಾಜಿಯಾಬಾದ್ ನ ರಾಜ್ ನಗರದಿಂದ ಕಾಣೆಯಾಗಿದ್ದರು.

    ಜನಸಂದಣಿ ಇರುವ ಪ್ರದೇಶದಲ್ಲಿ ಹರಿದ್ವಾರದ ಕಡೆ ತೆರಳುವ ಬಸ್ ಹತ್ತಲೆಂದು ರಾಜೀವ್ ಅವರು ಕ್ಯಾಬ್ ನಿಂದ ಇಳಿದ ವೇಳೆ ಅವರನ್ನು ದುಷ್ಕರ್ಮಿಗಳು ಕಿಡ್ನಾಪ್ ಮಾಡಿದ್ದಾರೆ. ಬಳಿಕ ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಟೆಕ್ಕಿ ಪತ್ನಿಗೆ ಪತಿ ಮೊಬೈಲ್ ನಿಂದಲೇ ಮೆಸೇಜೊಂದು ಬಂದಿದೆ. ಅದರಲ್ಲಿ ರಾಜೀವ್ ನನ್ನು ಕಿಡ್ನಾಪ್ ಮಾಡಲಾಗಿದೆ. 15 ಲಕ್ಷ ರೂ. ಹಣ ನೀಡಿದ್ರೆ ಬಿಡುಗಡೆಗೊಳಿಸುವುದಾಗಿ ತಿಳಿಸಲಾಗಿತ್ತು ಅಂತ ಪೊಲೀಸರು ತಿಳಿಸಿದ್ದಾರೆ.

    ನಂತರ ಸುಮಾರು ಒಂದು ವಾರಗಳ ಕಾಲ ಪೊಲೀಸರು ರಾಜೀವ್ ಗಾಗಿ ಹುಡುಕಾಟ ನಡೆಸಿದ್ದರು. ಒಂದು ವಾರದ ಬಳಿಕ ರಾಜೀವ್ ಅವರು ಗಾಜಿಯಾಬಾದ್ ನ ಇಂದಿರಾಪುರಂ ಎಂಬ ಗ್ರಾಮದಲ್ಲಿ ಇರುವ ಬಗ್ಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಗಾಜಿಯಾಬಾದ್ ಹಾಗೂ ನೊಯ್ಡಾ ಪೊಲೀಸರ ವಿಶೇಷ ತನಿಖಾ ತಂಡವೊಂದು ಧಾವಿಸಿ ರಾಜೀವ್ ಅವರನ್ನು ಅಪಹರಣಕಾರರಿಂದ ರಕ್ಷಿಸಲಾಗಿದ್ದು, ಮೂವರನ್ನು ಬಂಧಿಸಿದ್ದಾರೆ.

    ರಾಜೀವ್ ಅವರನ್ನು ರಕ್ಷಿಸುವ ಮೊದಲು ಅಪಹರಣಕಾರರು ಮತ್ತು ಪೊಲೀಸರ ಮಧ್ಯೆ ಎನ್ ಕೌಂಟರ್ ನಡೆದಿದೆ. ಘಟನೆಯಿಂದ ಇಬ್ಬರು ಕಿಡ್ನಾಪರ್ಸ್ ಹಾಗೂ ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ. ಈ ಅಪಹರಣಕಾರರ ಗುಂಪು ವ್ಯಕ್ತಿಯನ್ನು ಕಿಡ್ನಾಪ್ ಮಾಡುವುದು ಇದು ಮೊದಲೇನಲ್ಲ. ಈ ಹಿಂದೆಯೂ ಈ ಗುಂಪು ಹಲವರನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ವಿಚಾರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

  • ಕಣಿವೆ ರಾಜ್ಯದಲ್ಲಿ 8 ಭಯೋತ್ಪಾದಕರ ಹತ್ಯೆ- 4 ಮಂದಿ ಭದ್ರತಾ ಸಿಬ್ಬಂದಿಗಳಿಗೆ ಗಾಯ

    ಕಣಿವೆ ರಾಜ್ಯದಲ್ಲಿ 8 ಭಯೋತ್ಪಾದಕರ ಹತ್ಯೆ- 4 ಮಂದಿ ಭದ್ರತಾ ಸಿಬ್ಬಂದಿಗಳಿಗೆ ಗಾಯ

    ಶ್ರೀನಗರ: ಜಮ್ಮು ಕಾಶ್ಮೀರದ ಅನಂತ್ ನಾಗ್ ಹಾಗೂ ಸೋಫಿಯಾನಾ ಜಿಲ್ಲೆಯಲ್ಲಿ ಭಾರತೀಯ ಯೋಧರು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ 8 ಮಂದಿ ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ.

    ಸೋಫಿಯಾನ ಜಿಲ್ಲೆಯ ದ್ರಗ್ಗಾದ್ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದ ಯೋಧರು 7 ಮಂದಿಯನ್ನು ಹತ್ಯೆ ಮಾಡಿದ್ದಾರೆ. ಸದ್ಯ ಈ 7 ಮಂದಿಯ ಶವವನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಅನಂತ್ ನಾಗ್ ಜಿಲ್ಲೆಯಲ್ಲಿ ಶರಣಾಗಲು ಒಪ್ಪದ ಭಯೋತ್ಪಾದಕನ ಮೇಲೆ ಗುಂಡಿಕ್ಕಿದ್ದು, ಆತ ಮೃತಪಟ್ಟಿದ್ದಾನೆ. ಇನ್ನೋರ್ವ ಜೀವಂತವಾಗಿ ಯೋಧರ ಕೈಗೆ ಸಿಕ್ಕಿದ್ದಾನೆ ಅಂತ ಪೊಲೀಸ್ ಅಧಿಕಾರಿ ಎಸ್ ಪಿ ವೈದ್ ಟ್ವೀಟ್ ಮಾಡಿದ್ದಾರೆ.

    ಅನಂತ್ ನಾಗ್, ಸೋಫಿಯಾನಾ ಜಿಲ್ಲೆಯಲ್ಲಿ ಭಯೋತ್ಪಾದಕರು ಮತ್ತು ಯೋಧರ ಗುಂಡಿನ ಚಕಮಕಿಯಿಂದಾಗಿ 4 ಮಂದಿ ಭದ್ರತಾ ಸಿಬ್ಬಂದಿಗಳು ಕೂಡ ಗಾಯಗೊಂಡಿದ್ದಾರೆ ಎಂಬುದಾಗಿ ವರದಿಯಾಗಿದೆ.

    ಸೋಫಿಯಾನದಲ್ಲಿ ಇನ್ನೂ 3,4 ಭಯೋತ್ಪಾದಕರು ಅವಿತುಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಅಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

    ಕಳೆದ ಮಧ್ಯರಾತ್ರಿ ಯೋಧರು ಈ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಓರ್ವ ಜೀವಂತವಾಗಿ ಸಿಕ್ಕಿದ್ದು, ಉಳಿದವರನ್ನು ಹತ್ಯೆ ಮಾಡಿದ್ದಾರೆ. ಈ ಮೊದಲು ಪೊಲೀಸರು ಭಯೋತ್ಪಾದಕರ ಕುಟುಂಬವನ್ನು ಸಂಪರ್ಕಿಸಿ, ಅವರು ಶರಣಾಗುವಂತೆ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಓರ್ವ ಶರಣಾಗಿದ್ದು, ಮತ್ತೋರ್ವ ನಿರಾಕರಿಸಿದ್ದನು. ಇದೀಗ ಈತ ಯೋಧರ ಎನ್ ಕೌಂಟರ್ ಗೆ ಬಲಿಯಾಗಿದ್ದಾನೆ ಅಂತ ಪೊಲೀಸರು ತಿಳಿಸಿದ್ದಾರೆ.

    ಘಟನೆಯಿಂದಾಗಿ ಸದ್ಯ ಶ್ರೀನಗರ-ಬನಿಹಾಲ್ ನಡುವಿನ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೇ ದಕ್ಷಿಣ ಕಾಶ್ಮೀರದಲ್ಲಿ ಅಂತರ್ಜಾಲ ಸೇವೆಯನ್ನು ಕೂಡ ರದ್ದುಗೊಳಿಸಲಾಗಿದೆ.

    ಕಳೆದ 3 ದಿನಗಳಿದ ಹಲವು ಬಾರಿ ಭದ್ರತಾ ಪಡೆಗಳ ಮೇಲೆ ಭಯೋತ್ಪಾದರು ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು ಮೃತರಾಗಿ ಒಬ್ಬರು ಗಾಯಗೊಂಡಿದ್ದರು.

  • ಜಾಮೀನು ಸಿಕ್ಕರೂ 5,500 ಕ್ರಿಮಿನಲ್‍ಗಳು ಯುಪಿ ಜೈಲಿನಿಂದ ಹೊರಬರುತ್ತಿಲ್ಲ!

    ಜಾಮೀನು ಸಿಕ್ಕರೂ 5,500 ಕ್ರಿಮಿನಲ್‍ಗಳು ಯುಪಿ ಜೈಲಿನಿಂದ ಹೊರಬರುತ್ತಿಲ್ಲ!

    ಆಗ್ರಾ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅಂದ್ರೆ 10 ತಿಂಗಳಲ್ಲಿ ಜೈಲುಪಾಲಾದ ಸುಮಾರು 5,500 ಕ್ರಿಮಿನಲ್ ಗಳಿಗೆ ಜಾಮೀನು ಸಿಕ್ಕರೂ ಹೊರಬರಲು ಹಿಂಜರಿಯುತ್ತಾರೆ ಎಂಬ ಅಚ್ಚರಿಯ ಅಂಶವೊಂದನ್ನು ಅಲ್ಲಿನ ಡಿಜಿಪಿ ಓಂಪ್ರಕಾಶ್ ಸಿಂಗ್ ಬಹಿರಂಗಪಡಿಸಿದ್ದಾರೆ.

    ಅಪರಾಧ ಕೃತ್ಯಗಳ ಪರಾಮರ್ಶನಾ ಸಭೆಯಲ್ಲಿ ಭಾಗವಹಿಸಿದ್ದ ಅವರು ಈ ಮಾಹಿತಿಯನ್ನು ನೀಡಿದ್ದಾರೆ. ಪೊಲೀಸರ ವಿಶೇಷ ಕಾರ್ಯಾಚಣೆ ಪಡೆ(ಎಸ್‍ಟಿಎಫ್)ಯ ಕಠಿಣ ಪರಿಶ್ರಮದಿಂದಾಗಿ ರಾಜ್ಯದಲ್ಲಿ ಅಪರಾಧ ಸಂಖ್ಯೆಗಳ ಪ್ರಮಾಣ ಕುಗ್ಗಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.

    2017ರ ಮಾರ್ಚ್‍ನಿಂದ 2018ರ ಜನವರಿ ವರೆಗಿನ 10 ತಿಂಗಳ ಅವಧಿಯಲ್ಲಿ, ರಾಜ್ಯದ ಪೊಲೀಸರು 1,331 ಎನ್ ಕೌಂಟರ್‍ಗಳನ್ನು ನಡೆಸಿದ್ದಾರೆ. ಈ ಎನ್‍ಕೌಂಟರ್ ಮೂಲಕ 3,091 ಕ್ರಿಮಿನಲ್ ಗಳನ್ನು ಬಂಧಿಸಿದ್ದರೆ, ಗುಂಡೇಟಿಗೆ 43 ಮಂದಿ ಬಲಿಯಾಗಿದ್ದಾರೆ. ಇದನ್ನೂ ಓದಿ: ನನ್ನ ಅರೆಸ್ಟ್ ಮಾಡಿ, ಎನ್‍ಕೌಂಟರ್ ನಲ್ಲಿ ಸಾಯಲು ಇಷ್ಟವಿಲ್ಲ- ಯುಪಿ ಪೊಲೀಸರಿಗೆ ಕೊಲೆ ಆರೋಪಿ ಶರಣು

    ಎನ್‍ಕೌಂಟರ್ ಬಲಿಯಾದವರು ಮತ್ತು ಬಂಧನಕ್ಕೆ ಒಳಗಾದ 50% ರಷ್ಟು ಕ್ರಿಮಿನಲ್ ಗಳ ತಲೆಗೆ ಬಹುಮಾನ ಘೋಷಿಸಲಾಗಿತ್ತು. ಇದರಲ್ಲಿ ಹಲವರು ಹೆಚ್ಚು ಸಮಯ ತಲೆಮರೆಸಿಕೊಂಡಿದ್ದರು. ಬಳಿಕ ಎನ್‍ಕೌಂಟರ್ ಭೀತಿಯಿಂದ ಕಳೆದ 10 ತಿಂಗಳಲ್ಲಿ 5,409 ಕ್ರಿಮಿನಲ್‍ಗಳು ತಮಗೆ ದೊರೆತ ಜಾಮೀನು ರದ್ದುಪಡಿಸಿ ಕೋರ್ಟಿಗೆ ಶರಣಾಗಿದ್ದಾರೆ ಅಂತ ಅವರು ವಿವರಿಸಿದರು.

    2013ರಿಂದ ಪ್ರತೀವರ್ಷ ಹೋಳಿ ವೇಳೆ ಸುಮಾರು 60 ಗಲಭೆಗಳು ನಡೆಯುತ್ತಿದ್ದವು. ಆದರೆ ಈ ಬಾರಿ ಹೋಳಿಯಂದು ಸುಮಾರು 14 ಗುಂಪು ಘರ್ಷಣೆ ಪ್ರಕರಣಗಳು ನಡೆದಿದ್ದು, ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ ಎಂದು ಅವರು ವಿವರಿಸಿದ್ರು.

    ಇದೇ ವೇಳೆ ಮಹಿಳೆಯರ ಮೇಲಿನ ಅಪರಾಧ ಪ್ರಕರಣದ ಕುರಿತು ಮಾಹಿತಿ ನೀಡಿದ ಅವರು, ರಾಜ್ಯದಲ್ಲಿ ಒಟ್ಟು 3,400 ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಮಹಿಳೆಯರಿಗೆ ಚುಡಾಯಿಸುವಿಕೆ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆಯದಂತೆ ಆ್ಯಂಟಿ ರೋಮಿಯೋ ಪಡೆಯನ್ನು ನಿಯೋಜಿಸಲಾಗಿದ್ದು, ಇದರ ಸಕ್ರೀಯ ಕಾರ್ಯಚರಣೆಯಿಂದ 10 ತಿಂಗಳಲ್ಲಿ ಸುಮಾರು 26 ಲಕ್ಷಕ್ಕೂ ಅಧಿಕ ಜನರಿಗೆ ಎಚ್ಚರಿಕೆ ನೀಡಿದೆ. ಇಷ್ಟು ಮಾತ್ರವಲ್ಲದೇ ಮಹಿಳೆಯರ ಸುರಕ್ಷತೆಗಾಗಿ ರಾಜ್ಯ ಪೊಲೀಸ್ ಇಲಾಖೆಯ ತುರ್ತು ಸೇವಾ ಘಟಕ (ಯುಪಿ 100) ಆರಂಭಿಸಿದ್ದು, ಮಹತ್ವದ ಪಾತ್ರವಹಿಸಿದೆ ಎಂದು ಡಿಜಿಪಿ ವಿವರಿಸಿದ್ದಾರೆ.

    ಗ್ಯಾಂಗ್‍ಸ್ಟರ್ ಮತ್ತು ಸಮಾಜ ವಿರೋಧಿ ಚಟುವಟಿಕೆಗಳ ನಿಗ್ರಹ ಕಾಯ್ದೆಯಡಿ ಈವರೆಗೆ ಸುಮಾರು 13,624 ಕೇಸುಗಳನ್ನು ದಾಖಲಿಸಿಕೊಳ್ಳಲಾಗಿದೆ. ಇದರಲ್ಲಿ 12,600 ಕೇಸ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಸುಮಾರು 94 ಕೋಟಿ ರೂ. ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವಾಹನ ಕಳವು ಪ್ರಕರಣದಲ್ಲೂ ಗಣನೀಯವಾಗಿ ಇಳಿಕೆಯಾಗಿದ್ದು, ಸುಮಾರು 7,000 ದ್ವಿಚಕ್ರ ಹಾಗೂ 900 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದಾಗಿ ಅವರು ಮಾಹಿತಿ ನೀಡಿದ್ದಾರೆ.

    ರೌಡಿಗಳ ಕಾಟ ಜಾಸ್ತಿಯಾಗಿದ್ದ ಹಿನ್ನೆಲೆಯಲ್ಲಿ ಯೋಗಿ ಅದಿತ್ಯನಾಥ್ ಅವರು ಪೊಲೀಸರಿಗೆ, ಪಿಸ್ತೂಲ್ ಪಾಕೆಟ್ ನಲ್ಲಿ ಇಡಲು ಕೊಟ್ಟಿರುವುದಲ್ಲ. ಗೂಂಡಾಗಳನ್ನು ಎನ್‍ಕೌಂಟರ್ ಮಾಡಲು ಕೊಡಲಾಗಿದೆ. ಹೀಗಾಗಿ ನಿಮಗೆ ಕೊಟ್ಟಿರುವ ಅಧಿಕಾರವನ್ನು ಚಲಾಯಿಸಿ ರೌಡಿಗಳನ್ನು ಮಟ್ಟ ಹಾಕಿ ಎಂದು ಸೂಚಿಸಿದ್ದರು.

  • ವಿಡಿಯೋದಲ್ಲಿ ಅಪ್ಪ ಬದುಕಿರೋದನ್ನು  ನೋಡೋದಕ್ಕೆ ನನಗೆ ಖುಷಿ: ವೀರಯೋಧನ ಪುತ್ರಿ

    ವಿಡಿಯೋದಲ್ಲಿ ಅಪ್ಪ ಬದುಕಿರೋದನ್ನು ನೋಡೋದಕ್ಕೆ ನನಗೆ ಖುಷಿ: ವೀರಯೋಧನ ಪುತ್ರಿ

    ಮುಂಬೈ: ಇಂದಿಗೆ ಮುಂಬೈ ಮೇಲೆ ದಾಳಿಯಾಗಿ 9 ವರ್ಷ. ಆ ದಾಳಿಯಲ್ಲಿ ಯೋಧರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಹುತಾತ್ಮರಾಗಿದ್ದರು. ದಾಳಿಯಲ್ಲಿ ಹುತಾತ್ಮರಾಗಿರುವ ವಿಜಯ್ ಸಲಾಸ್ಕರ್ ಅವರ ಮಗಳು ತಂದೆಯನ್ನು ನೆನಪಿಸಿಕೊಂಡು ಮಾತನಾಡಿದ್ದಾರೆ.

    26-11-2008ರ ರಾತ್ರಿ ನಾನು ಹಾಗೂ ನನ್ನ ತಂದೆ ಲಾಂಗ್ ಡ್ರೈವ್ ಹೋಗಲು ತಯಾರಿ ನಡೆಸಿಕೊಂಡಿದ್ದೇವು. ನನ್ನ ತಂದೆಗೆ ಮೊಟ್ಟೆ ಎಂದರೆ ತುಂಬಾ ಇಷ್ಟ. ಆದರೆ ನನಗೆ ಅದರ ವಾಸನೆ ಕೂಡ ಆಗುವುದಿಲ್ಲ. ಮೊಟ್ಟೆಯ ವಾಸನೆ ತಾಳಲಾರದೇ ನಾನು ರೂಮಿನ ಒಳಗೆ ಹೋದೆನು. 1 ಗಂಟೆ ಆದರೂ ಅಪ್ಪ ನನ್ನನ್ನು ಕರಿಯಲಿಲ್ಲ. ಅಪ್ಪ ಯಾಕೆ ನನ್ನ ಕರೆದಿಲ್ಲ ಅಂತ ಹೊರ ಬಂದು ನೋಡಿದಾಗ ಫೈರಿಂಗ್ ಆಗುತ್ತಿರೋ ವಿಚಾರಕ್ಕೆ ಹೊರಹೋಗಿದ್ದರೆಂದು ತಿಳಿಯಿತು ಎಂದು ವಿಜಯ್ ಅವರ ಮಗಳು ದಿವ್ಯ ಆ ದಿನವನ್ನು ನೆನಪಿಸಿಕೊಂಡರು.

    ಬಳಿಕ ನನ್ನ ತಂದೆಯ ಮರಣದ ಸುದ್ದಿಯನ್ನು ಟಿವಿಯಲ್ಲಿ ನೋಡಿದಾಗ ನಮಗೆ ದೊಡ್ಡ ಆಘಾತವೇ ಉಂಟಾಯಿತು. ಅಪ್ಪ ಯಾವಾಗ್ಲೂ ಯಾವುದೇ ವಿಷಯವಿದ್ದರೂ ಘಟನಾ ಸ್ಥಳಕ್ಕೆ ಭೇಟಿ ನೀಡುತ್ತಿದ್ದರು. ನಾವು ಅವರನ್ನು ನೋಡಲು ಆಸ್ಪತ್ರೆಗೆ ಹೋಗುತ್ತಿದ್ದೇವು. ಆದರೆ ಈ ಬಾರಿ ಆ ರೀತಿ ಆಗಲಿಲ್ಲ ಎಂದು ಮಾಧ್ಯಮವೊಂದಕ್ಕೆ ದಿವ್ಯ ತಮ್ಮ ಅಳಲುತೋಡಿಕೊಂಡ್ರು.

    ಹೆಣ್ಣು ಮಕ್ಕಳು ಯಾವತ್ತು ತಮ್ಮ ತಂದೆಯೊಂದಿಗೆ ಸಲುಗೆಯಿಂದ ಇರುತ್ತಾರೆ. ಅಂತೆಯೇ ನನಗೂ ಕೂಡ ತಂದೆ ಅಂದ್ರೆ ಪಂಚಪ್ರಾಣ. ನನ್ನ ತಂದೆ ನನಗೆ ಒಳ್ಳೆಯ ಸ್ನೇಹಿತರಾಗಿದ್ದರು. ಆದ್ರೆ ಇಂದು ಅವರು ನನ್ನೊಂದಿಗಿಲ್ಲ. ಇಂದು ಅವರ ನೆನಪಾದಾಗ ಯೂಟ್ಯೂಬ್ ನಲ್ಲಿ ವಿಡಿಯೋವನ್ನು ನೋಡುತ್ತೇನೆ. ಅವರು ಮಾತನಾಡುವುದು ಹಾಗೂ ಅವರು ನಡೆದಾಡುವುದನ್ನು ನೋಡುತ್ತೇನೆ. ಆ ವಿಡಿಯೋಗಳನ್ನು ನೋಡುತ್ತಿದ್ದಂತೆಯೇ ಅಪ್ಪ ನನ್ನ ಕಣ್ಣೆದುರೇ ಬಂದು ನಿಂತಂತೆ ಆಗುತ್ತದೆ. ಆದರೆ ಆ ವಿಡಿಯೋದಲ್ಲಿ ಅಪ್ಪ ಬದುಕಿರುವುದನ್ನು ನೋಡುವುದಕ್ಕೆ ಖುಷಿಯಾಗುತ್ತದೆ ಎಂದು ಅವರು ಹೇಳಿದರು.

    ದಿವ್ಯ ತನ್ನ ಮಾಸ್ಟರ್ಸ್ ಡಿಗ್ರಿಯನ್ನು ಮುಗಿಸಿ ತನ್ನದೇ ಆದ ಕಂಪೆನಿ ತೆರೆದಿದ್ದಾರೆ. ವಿಶ್ವವಿದ್ಯಾಲಯ ಘಟಿಕೋತ್ಸವದ ವೇಳೆ ತಂದೆ ಜೊತೆಯಲ್ಲಿ ಇರುತ್ತಿದ್ದರೆ ಸಂತೋಷವಾಗುತಿತ್ತು. ನನ್ನ ತಂದೆ ಎನ್ ಕೌಂಟರ್ ಸ್ಪೆಷಲಿಸ್ಟ್ ಆಗಿದ್ದರು. ಆದರೆ ಅವರನ್ನು ಎನ್ ಕೌಂಟರ್ ಸ್ಪೆಷಲಿಷ್ಟ್ ಎಂದು ಕರೆಯುವುದು ಅವರಿಗೆ ಇಷ್ಟವಾಗುತ್ತಿರಲಿಲ್ಲ. ಅದನ್ನು ಕೇಳಿ ಅವರಿಗೆ ಸಂತೋಷವಾಗುತ್ತಿರಲಿಲ್ಲ. ಒಬ್ಬರ ಜೀವವನ್ನು ತೆಗೆಯುವುದು ಒಂದು ಸಾಧನೆ ಅಲ್ಲ ಎಂದು ಅವರು ಹೇಳುತ್ತಿದ್ದರು ಎಂದು ದಿವ್ಯ ತಮ್ಮ ತಂದೆಯ ಮಾತುಗಳನ್ನು ನೆನಪಿಸಿಕೊಂಡರು,

    ತಮ್ಮ ತಂದೆಯ ಮೇಲೆ ಗೌರವ ಇದ್ದ ಕಾರಣ ಅವರ ಸಹೋದ್ಯೋಗಿಗಳು ಆಗಾಗ ಮನೆಗೆ ಭೇಟಿ ನೀಡುತ್ತಿರುತ್ತಾರೆ. ತನ್ನ ತಂದೆಯ ಹುಟ್ಟುಹಬ್ಬದ ದಿನದಂದು ಮನೆಗೆ ಬರುತ್ತಾರೆ. ಅಷ್ಟೇ ಅಲ್ಲದೇ ನಮಗೆ ಏನಾದ್ರೂ ಸಹಾಯ ಬೇಕಿದ್ದರೆ ಅವರು ನಮಗೆ ಸಹಾಯ ಮಾಡುತ್ತಾರೆ ಎಂದು ದಿವ್ಯ ತಿಳಿಸಿದ್ದಾರೆ.

    ಅಂದು ಏನಾಯ್ತು?: 26 ನವೆಂಬರ್ 2008 ರಂದು ಮುಂಬೈನ ತಾಜ್ ಹೋಟೆಲ್, ನಾರಿಮನ್ ಹೌಸ್ ಸೇರಿದಂತೆ ನಗರದ ಹಲವು ಕಡೆ ಭಯೋತ್ಪಾದಕರು ದಾಳಿ ನಡೆಸಿದ್ದರು. 10 ಮಂದಿ ಉಗ್ರರು ಸಮುದ್ರ ಮಾರ್ಗವಾಗಿ ಬಂದು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಸ್ಥಳೀಯರು, ವಿದೇಶಿ ಪ್ರವಾಸಿಗರು ಹಾಗೂ ಭದ್ರತಾ ಪಡೆಯ ಯೋಧರು ಸೇರಿದಂತೆ ಹಲವು ಮಂದಿ ಸಾವನ್ನಪ್ಪಿದ್ದರು. ಆ ಉಗ್ರರಲ್ಲಿ ಅಜ್ಮಲ್ ಕಸಬ್ ನನ್ನು ಜೀವಂತವಾಗಿ ಸೆರೆ ಹಿಡಿದಿದ್ದರು.

  • ಹಂತಕ ಧರ್ಮರಾಜ್ ಚಡಚಣ ಹತ್ಯೆಗೆ ಟ್ವಿಸ್ಟ್- ನಕಲಿ ಎನ್‍ ಕೌಂಟರ್ ಎಂದು ತಾಯಿ ಆರೋಪ

    ಹಂತಕ ಧರ್ಮರಾಜ್ ಚಡಚಣ ಹತ್ಯೆಗೆ ಟ್ವಿಸ್ಟ್- ನಕಲಿ ಎನ್‍ ಕೌಂಟರ್ ಎಂದು ತಾಯಿ ಆರೋಪ

    ವಿಜಯಪುರ: ಎನ್ ಕೌಂಟರ್ ನಲ್ಲಿ ಪಿಎಸ್‍ಐ ಗುಂಡಿಗೆ ಬಲಿಯಾದ ಭೀಮಾತೀರದ ನಟೊರಿಯಸ್ ಹಂತಕ ಧರ್ಮರಾಜ್ ಚಡಚಣ ಪ್ರಕರಣ ಮತ್ತೆ ವಿವಾದದ ಕೇಂದ್ರ ಬಿಂದುವಾಗಿದೆ. ಧರ್ಮರಾಜ್ ಸಾವಿನ ಬಗ್ಗೆ ಆತನ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಈ ಸಂಬಂಧ ತನಿಖೆಗೆ ಆಗ್ರಹಿಸಿದ್ದಾರೆ.

    ಅಕ್ರಮ ಶಸ್ತ್ರಾಸ್ತ್ರ ಪತ್ತೆಗೆ ಬಂದ ಪೊಲೀಸರ ಮೇಲೆ ಗುಂಡು ಹಾರಿಸಿ, ಪಿಎಸ್‍ಐ ಗೋಪಾಲ ಹಳ್ಳೂರ್ ಗುಂಡಿಗೆ ಬಲಿಯಾದ ಭೀಮಾತೀರದ ನಟೋರಿಯಸ್ ಹಂತಕ ಧರ್ಮರಾಜ್ ಚಡಚಣ ಅಧ್ಯಾಯ ಅಂತ್ಯವಾಗಿದೆ. ಆದರೆ ಆತನ ಸಾವಿನ ಬಗ್ಗೆ ಭೀಮಾ ತೀರದಲ್ಲಿ ದಿನಕ್ಕೊಂದು ಮಾತುಗಳು ಕೇಳಿ ಬರುತ್ತಿವೆ.

    ಇದನ್ನೂ ಓದಿ: ಭೀಮಾತೀರದಲ್ಲಿ ಮತ್ತೆ ಗುಂಡಿನ ಮೊರೆತ – ಪಿಎಸ್‍ಐ ಮೇಲೆ ಫೈರಿಂಗ್ ಮಾಡಿದ ಹಂತಕ ಸಾವು

    ಧರ್ಮರಾಜ್ ತಾಯಿ ವಿಮಲಾಬಾಯಿ ಮತ್ತೆ ಪ್ರಕರಣದ ಬಗ್ಗೆ ಧ್ವನಿಯತ್ತಿದ್ದು, ನನ್ನ ಮಗನನ್ನು ನಕಲಿ ಎನ್ ಕೌಂಟರ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಧರ್ಮರಾಜ್ ಸಹೋದರ ಗಂಗಾಧರನನ್ನು ಪೊಲೀಸರು ಬಂಧಿಸಿದ್ದರು. ಆತನನ್ನು ಈವರೆಗೂ ಕೋರ್ಟ್ ಗೆ ಹಾಜರುಪಡಿಸಿಲ್ಲ, ಎಲ್ಲಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡುತ್ತಿಲ್ಲ ಎಂದು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಮಹಾದೇವ ಸಾಹುಕಾರ್ ಹಾಗೂ ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆಗೆ ಆಗ್ರಹಿಸಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿರುವ ವಿಜಯಪುರ ಎಸ್ಪಿ ಧರ್ಮರಾಜ್ ತಾಯಿ ವಿಮಲಾಬಾಯಿ ನನಗೆ ಖುದ್ದಾಗಿ ಬಂದು ಯಾವುದೇ ದೂರು ನೀಡಿಲ್ಲ. ಎನ್ ಕೌಂಟರ್ ನಡೆದ ವೇಳೆ ಅನೇಕರು ಅಲ್ಲಿಂದ ಪರಾರಿಯಾಗಿದ್ದಾರೆ. ಅದರಲ್ಲೇ ಧರ್ಮರಾಜ್ ತಮ್ಮ ಗಂಗಾಧರ ಹೋಗಿರಬಹುದು. ಅದರ ಬಗ್ಗೆ ಮಾಹಿತಿ ಇಲ್ಲ.

  • ಉಗ್ರರ ಎನ್ ಕೌಂಟರ್ ಗೆ ಇಬ್ಬರು ಯೋಧರು ಹುತಾತ್ಮ, ಮೂವರಿಗೆ ಗಾಯ

    ಉಗ್ರರ ಎನ್ ಕೌಂಟರ್ ಗೆ ಇಬ್ಬರು ಯೋಧರು ಹುತಾತ್ಮ, ಮೂವರಿಗೆ ಗಾಯ

    ಶ್ರೀನಗರ: ಜಮ್ಮು-ಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಭಾರತೀಯ ಸೇನಾ ಯೋಧರು ಮತ್ತು ಉಗ್ರರ ನಡುವೆ ನಡೆದ ಎನ್ ಕೌಂಟರ್ ನಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು, ಕ್ಯಾಪ್ಟನ್ ಸೇರಿ ಮೂವರು ಗಾಯಗೊಂಡಿದ್ದಾರೆ.

    ಜಿಲ್ಲೆಯ ಝೈನಪೋರಾ ಪ್ರದೇಶದ ಅವನೀರಾ ಪ್ರದೇಶದಲ್ಲಿ ಉಗ್ರರ ಇರುವಿಕೆಯ ಮಾಹಿತಿಯಿಂದ ಯೋಧರು ಶನಿವಾರದಿಂದಲೇ ಕಾರ್ಯಾಚರಣೆ ನಡೆಸಿದ್ದರು ಅಂತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಈ ವೇಳೆ ಸೈನಿಕರು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಗುಂಡಿನ ಚಕಮಕಿಯಲ್ಲಿ ಐವರು ಯೋಧರು ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇದರಲ್ಲಿ ಇಬ್ಬರು ಯೋಧರು ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದಾರೆ ಅಂತ ಅವರು ಮಾಹಿತಿ ನೀಡಿದ್ದಾರೆ.

    ಇನ್ನೊಂದೆಡೆ ಬಂಡೀಪುರ ಜಿಲ್ಲೆಯ ಸೊಪೊರ್ ಗಡಿ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವ ಶಂಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸೇನಾ ಪಡೆಗಳು ಕಾರ್ಯಾಚರಣೆಗಿಳಿದಿದ್ದರು. ಈ ವೇಳೆ ಯೋಧರು ಹಾಗೂ ಉಗ್ರರ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ ಗಾಯಗೊಂಡ ಯೋಧರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ ಎಂದು ಸೇನಾ ಹಿರಿಯ ಅಧಿಕಾರಿಗಳು ತಿಳಿಸಿದರು.