Tag: ಎಜುಕೇಶನ್ ಎಕ್ಸ್ ಪೋ

  • ಪಬ್ಲಿಕ್ ಟಿವಿಯ ವಿದ್ಯಾಪೀಠಕ್ಕೆ ಅಭೂತಪೂರ್ವ ಬೆಂಬಲ- ಭಾನುವಾರವೂ ಪ್ರವೇಶ ಉಚಿತ, ಮಿಸ್ ಮಾಡ್ದೇ ಬನ್ನಿ

    ಪಬ್ಲಿಕ್ ಟಿವಿಯ ವಿದ್ಯಾಪೀಠಕ್ಕೆ ಅಭೂತಪೂರ್ವ ಬೆಂಬಲ- ಭಾನುವಾರವೂ ಪ್ರವೇಶ ಉಚಿತ, ಮಿಸ್ ಮಾಡ್ದೇ ಬನ್ನಿ

    ಬೆಂಗಳೂರು: ಪಬ್ಲಿಕ್ ಟಿವಿ (PUBLiC TV) ಹೆಮ್ಮೆಯ ಪ್ರಸ್ತುತ ವಿದ್ಯಾಪೀಠ (Vidyapeeta) 6ನೇ ಆವೃತ್ತಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಮೊದಲ ದಿನವೇ ಎಕ್ಸ್ ಪೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, 7 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಪೀಠಕ್ಕೆ ಆಗಮಿಸಿದ ಜ್ಞಾನಾರ್ಜನೆ ಪಡೆದುಕೊಂಡರು.

    ಬೆಂಗಳೂರಿನ ಅರಮನೆ ಮೈದಾನ (Palace Ground) ದ ಗಾಯಿತ್ರಿ ವಿಹಾರ್ ನಲ್ಲಿ ಹಮ್ಮಿಕೊಂಡಿದ್ದ ಶೈಕ್ಷಣಿಕ ಮೇಳಕ್ಕೆ ಬೆಳಗ್ಗೆ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್.ಆರ್. ರಂಗನಾಥ್ (H.R Ranganath), ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಚಾಲನೆ ನೀಡಿದ್ರು. 105 ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ವಿದ್ಯಾಪೀಠ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಜ್ಞಾನಾರ್ಜನೆಗೆ ದಾರಿದೀಪ ಆದರು. ವೇದಿಕೆ ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥರಾದ ರಂಗನಾಥ್, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್, ಗಾರ್ಡನ್ ಸಿಟಿ ಯುನಿವರ್ಸಿಟಿಯ ಚಾನ್ಸಲರ್ ವಿ.ಜಿ. ಜೋಸೆಫ್, ರೇವಾ ಯುನಿವರ್ಸಿಟಿ ಚಾನ್ಸಲರ್ ಶಾಮರಾಜು, ಕೇಂಬ್ರಿಡ್ಜ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಅಧ್ಯಕ್ಷರಾದ ಡಿ.ಕೆ. ಮೋಹನ್ ಭಾಗವಹಿಸಿದ್ರು. ವಿದ್ಯಾಪೀಠ ಕಾರ್ಯಕ್ರಮದ ಬಗ್ಗೆ ಪಬ್ಲಿಕ್ ಟಿವಿ ಮುಖ್ಯಸ್ಥರಾದ ರಂಗನಾಥ್ ಅವರು ತಿಳಿಸಿದ್ರು. ಗಣ್ಯರು ವಿದ್ಯಾಪೀಠ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಮೊದಲ ದಿನದ ಎಕ್ಸ್ ಪೋನಲ್ಲಿ ಸಿಇಟಿ (CET), ನೀಟ್ (NEET) ಸಂಬಂಧ ಉಪನ್ಯಾಸ ನಡೆಯಿತು. ವಿದ್ಯಾರ್ಥಿಗಳು ಸಿಇಟಿ ಮತ್ತು ನೀಟ್ ಬಗ್ಗೆ ಮಾಹಿತಿ ಪಡೆದರು. ವಿದ್ಯಾರ್ಜನೆ ಜೊತೆಗೆ ವಿದ್ಯಾರ್ಥಿಗಳಿಗೆ ವಿವಿಧ ಗೇಮ್ಸ್ ನಡೆಯಿತು. ಸ್ಲೋ ಸೈಕಲ್ ರೈಸ್, ಮ್ಯೂಸಿಕಲ್ ಛೇರ್, ಲೋಗೋ ಗೇಮ್, ಪಿಕ್ ಅಂಡ್ ಸ್ಪೀಕ್ ಸ್ಪರ್ಧೆ ನಡೆಯಿತು. ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆದ್ದರು. ಪ್ರತಿ ಒಂದು ಗಂಟೆಗೆ ಲಕ್ಕಿ ಡಿಪ್ ಮೂಲಕ ವಿದ್ಯಾರ್ಥಿಗಳು ಆಕರ್ಷಕ ಗಿಫ್ಟ್ ಪಡೆದರು. ಪಿಯುಸಿ ಟಾಪರ್ಸ್ ಗಳಿಗೆ ಆಕರ್ಷಕ ಗಿಫ್ಟ್ ಕೂಡಾ ಸಿಕ್ಕಿತು. ಪೋಷಕರು ಕೂಡಾ ವಿದ್ಯಾಪೀಠ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಶನಿವಾರ ಕೂಡಾ ಎಕ್ಸ್ ಪೋ (Education Expo) ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆವರೆಗೂ ನಡೆಯಲಿದೆ. ಆಂಡ್ರೆಟಿಂಗ್ ಎಕ್ಸ್ ಪರ್ಟ್ ಆಗಿರೋ ರಫೀಉಲ್ಲಾ ಬೇಗ್ ನಿಂದ ಕಾರ್ಯಕ್ರಮ ಇರಲಿದೆ. ಇದಲ್ಲದೆ ಬೈಸಿಕಲ್, ಲ್ಯಾಪ್ ಟಾಪ್, ಸೇರಿದಂತೆ ಹಲವು ಬಂಪರ್ ಗಿಫ್ಟ್ ಗೆಲ್ಲೋ ಅವಕಾಶ ವಿದ್ಯಾರ್ಥಿಗಳಿಗೆ ಸಿಗಲಿದೆ. ಬನ್ನಿ ಭಾಗವಹಿಸಿ ಜ್ಞಾನಾರ್ಜನೆ ಜೊತೆಗೆ ಆಕರ್ಷಕ ಬಹುಮಾನ ಗೆಲ್ಲಿ. ಇದನ್ನೂ ಓದಿ: ಭಾರತದಲ್ಲಿ ಭೀಕರ ರೈಲು ದುರಂತ ಕಂಡು ತುಂಬಾ ದುಃಖವಾಗಿದೆ – ಪಾಕಿಸ್ತಾನ, ತಾಲಿಬಾನ್‌ ಸಂತಾಪ

  • 105ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು Expoದಲ್ಲಿ ಭಾಗಿ, ಪ್ರವೇಶ ಉಚಿತ: ಸಿ.ಕೆ ಹರೀಶ್ ಕುಮಾರ್

    105ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು Expoದಲ್ಲಿ ಭಾಗಿ, ಪ್ರವೇಶ ಉಚಿತ: ಸಿ.ಕೆ ಹರೀಶ್ ಕುಮಾರ್

    ಬೆಂಗಳೂರು: ಜೂನ್ 3 ಮತ್ತು 4 ರಂದು ಪಬ್ಲಿಕ್ ಟಿವಿ ಪ್ರಸ್ತುತಪಡಿಸುವ ವಿದ್ಯಾಪೀಠ (Vidyapeeta) 6ನೇ ಆವೃತ್ತಿ ನಡೆಯಲಿದ್ದು, 105ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಈ ಎಜುಕೇಶನ್ ಎಕ್ಸ್ ಪೋ (Education Expo) ದಲ್ಲಿ ಭಾಗಿಯಾಗಲಿವೆ ಎಂದು ಸಿಓಓ ಸಿ.ಕೆ ಹರೀಶ್ ಕುಮಾರ್ (C.K Harish Kumar) ಹೇಳಿದ್ದಾರೆ.

    ಇದು ರಾಜ್ಯದಲ್ಲೇ ಅತ್ಯಂತ ದೊಡ್ಡ ಶೈಕ್ಷಣಿಕ ಮೇಳವಾಗಿದ್ದು, ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ (Palace Ground) ನ ಗಾಯತ್ರಿ ವಿಹಾರದಲ್ಲಿ ವೇದಿಕೆ ಸಿದ್ಧವಾಗ್ತಿದೆ. 105 ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಈ ಎಜುಕೇಶನ್ ಎಕ್ಸ್ ಪೋನಲ್ಲಿ ಭಾಗಿಯಾಗುತ್ತಿವೆ. ಪೋಷಕರು ಮತ್ತು ಮಕ್ಕಳು ಒಂದೇ ಸೂರಿನಡಿಯಲ್ಲಿ ಇಷ್ಟು ವಿದ್ಯಾಸಂಸ್ಥೆಗಳ ಮಾಹಿತಿ ಪಡೆಯಬಹುದು ಎಂದು ಅವರು ತಿಳಿಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ‘ವಿದ್ಯಾಪೀಠ’ಕ್ಕೆ ಬನ್ನಿ, On Spot ಗಿಫ್ಟ್ ಪಡ್ಕೊಳ್ಳಿ..!

    ಜೊತೆಗೆ ವಿದ್ಯಾರ್ಥಿಗಳಿಗೆ ಸ್ಲೋ ಸೈಕಲ್ ರೇಸ್ ಕಾಂಪಿಟೇಷನ್ (Cycle Race Competition) ಇರಲಿದೆ. ಸೆಕೆಂಡ್ ಪಿಯುಸಿಯಲ್ಲಿ 60% ರಿಂದ 80%, 80% ರಿಂದ 95% ಮತ್ತು 95% ರಿಂದ 100% ಅಂಕ ತೆಗೆದ ವಿದ್ಯಾರ್ಥಿಗಳು ತಮ್ಮ ಮಾರ್ಕ್ಸ್ ಕಾರ್ಡ್ ಅನ್ನು ಡ್ರಾಫ್ ಬಾಕ್ಸ್ ಗೆ ಹಾಕಿದರೆ ಸ್ಪಾಟ್ ನಲ್ಲೇ ಬಹುಮಾನ ಸಿಗಲಿದೆ ಎಂದರು.

    ವಿದ್ಯಾರ್ಥಿಗಳಿಗೆ ಪಿಕ್ ಆ್ಯಂಡ್ ಸ್ಪೀಕ್ (Pick And Speak) ಕೂಡ ಇದ್ದು‌, ಇದಕ್ಕೂ ಬಹುಮಾನ ಸಿಗಲಿದೆ. ಇಷ್ಟು ಮಾತ್ರವಲ್ಲದೇ ವಿಶೇಷ ಉಪನ್ಯಾಸ ಕಾರ್ಯಕ್ರಮಗಳು ಕೂಡ ನಡೆಯಲಿದೆ. ಇವೆಲ್ಲದಕ್ಕೂ ಮುಖ್ಯವಾಗಿ ಎಕ್ಸ್ ಪೋಗೆ ಪ್ರವೇಶ ಉಚಿತವಾಗಿದ್ದು, ಬೆಳಗ್ಗೆ 10 ರಿಂದ ಸಂಜೆ 7 ರವರಗೆ ನಡೆಯಲಿದೆ ಎಂದು ಹರೀಶ್ ಕುಮಾರ್ ವಿವರಿಸಿದರು.

  • ಡಿಗ್ರಿ ಬಳಿಕ ಡಾಕ್ಟರೇಟ್ ಕೋರ್ಸ್‍ಗಳ ಕಡೆ ಯುವಕರು ಹೆಚ್ಚು ಗಮನ ಹರಿಸಬೇಕು: ಅಶ್ವಥ್ ನಾರಾಯಣ್

    ಡಿಗ್ರಿ ಬಳಿಕ ಡಾಕ್ಟರೇಟ್ ಕೋರ್ಸ್‍ಗಳ ಕಡೆ ಯುವಕರು ಹೆಚ್ಚು ಗಮನ ಹರಿಸಬೇಕು: ಅಶ್ವಥ್ ನಾರಾಯಣ್

    ಬೆಂಗಳೂರು: ನೈಜ ಸುದ್ದಿಗಾಗಿ ಸಾಕಷ್ಟು ಕಾಯುತ್ತೇವೆ. ಹಲವು ವಿಚಾರಗಳನ್ನ ಅದ್ಭುತವಾಗಿ ವಿವರ ನೀಡುವವರು ರಂಗನಾಥ್ (H.R Ranganath) ಸರ್ ಅವರು. ಶಿಕ್ಷಣದ ಬಗ್ಗೆ ಅವರಿಗೆ ಬಹಳ ಅರಿವು, ಕಾಳಜಿ ಇದೆ. ಕಾರ್ಯಕ್ರಮ ಆಯೋಜನೆ ಮಾಡಿರುವುದಕ್ಕೆ ಅಭಿನಂದನೆಗಳು ಎಂದು ಸಚಿವ ಅಶ್ವಥ್ ನಾರಾಯಣ್ (Ashwath Narayan) ಅವರು ಹೇಳಿದರು.

    ಪಬ್ಲಿಕ್ ಟಿವಿ (Public TV) ಪ್ರಸ್ತುತ ಪಡಿಸುತ್ತಿರುವ 2 ದಿನಗಳ ವಿದ್ಯಾಮಂದಿರ ಎಜುಕೇಶನ್ ಎಕ್ಸ್ ಪೋ (VidyaMandira Education Expo)ಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಡಿಗ್ರಿ ಬಳಿಕ ಡಾಕ್ಟರೇಟ್ (Doctorate) ಕೋರ್ಸ್ ಗಳ ಕಡೆ ಯುವಕರು ಹೆಚ್ಚು ಗಮನ ಹರಿಸಬೇಕು. ನನಗೂ ಬೆಂಗಳೂರಿನ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಐಟಿಬಿಟಿ ಸಚಿವನಾದ ಮೇಲೆ ಬೆಂಗಳೂರಿನ ಶಕ್ತಿ ತಿಳಿದಿದೆ ಎಂದರು. ಇದನ್ನೂ ಓದಿ: ಪಬ್ಲಿಕ್ ಟಿವಿ ವಿದ್ಯಾಮಂದಿರ ಪಿಜಿ ಎಜುಕೇಶನ್ ಎಕ್ಸ್‌ಪೋಗೆ ಚಾಲನೆ

    ನಮ್ಮಲ್ಲಿ ಐಐಟಿ (IIT) ಇಲ್ಲ, ಆದರೆ ಇಡೀ ದೇಶದ ಐಐಟಿ ಪಾಸ್ ಆದವರು ಬೆಂಗಳೂರಿನಲ್ಲಿದ್ದಾರೆ. ಕಾರಣ ಅವರಿಗೆ ಬೇಕಾದ ಎಲ್ಲಾ ಸಂಸ್ಥೆಗಳು ಇಲ್ಲಿವೆ. ಅಮೇರಿಕಾದಲ್ಲೂ ಸಿಗದ ಸ್ಯಾಲರಿ ಬೆಂಗಳೂರಿನಲ್ಲಿ ಸಿಗುತ್ತಿದೆ. ಡಾಕ್ಟರೇಟ್ ಪ್ರೋಗ್ರಾಂಗಳಲ್ಲಿ ಭಾಗವಹಿಸುವವರಿಗೆ ಸರ್ಕಾರ ಕೂಡ ಸಹಕಾರ ನೀಡುತ್ತಿದೆ ಎಂದರು.

    2000 ಮಕ್ಕಳಿಗೆ ಡಾಕ್ಟರೇಟ್ ಗೆ ಹಣ ನೀಡುತ್ತೀದ್ದೇವೆ. ಆಮೆರಿಕಾದ ಮಟ್ಟದ ವಿದ್ಯಾಸಂಸ್ಥೆಗಳಿಗೆ ಸರಿಸಮಾನಾಗಿ ನಮ್ಮಲ್ಲೂ ಸಂಸ್ಥೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]