Tag: ಎಚ್ ಡಿ ರೇವಣ್ಣ

  • ಮಂಜು ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡಲ್ಲ: ರೇವಣ್ಣ

    ಮಂಜು ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡಲ್ಲ: ರೇವಣ್ಣ

    ಬಾಗಲಕೋಟೆ: ಮಾಜಿ ಸಚಿವ ಎ.ಮಂಜು ವಿರುದ್ಧ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.

    ದೇವೇಗೌಡರಿಂದ ಮಾತ್ರ ಹಾಸನದಲ್ಲಿ ಗೆಲ್ಲೋಕೆ ಸಾಧ್ಯ, ಪ್ರಜ್ವಲ್‍ಗೆ ಸಾಧ್ಯವಿಲ್ಲ ಎಂಬ ಎ.ಮಂಜು ಹೇಳಿಕೆ ವಿಚಾರವಾಗಿ ಬಾಗಲಕೋಟೆಯಲ್ಲಿ ತಡರಾತ್ರಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರೇವಣ್ಣ, ಎ.ಮಂಜು ಅಂತವನ ಮಾತಿಗೆಲ್ಲ ನಾನು ಪ್ರತಿಕ್ರಿಯೆ ಕೊಡಲು ಆಗುತ್ತಾ? ನಾನು ಅಂತವ್ರಿಗೆಲ್ಲ ರಿಯಾಕ್ಟ್ ಮಾಡಲು ಆಗುತ್ತಾ? ಅವನಿಗೆ ನಾನು ರಿಯಾಕ್ಟ್ ಮಾಡಲ್ಲ, ಇಗ್ನೋರ್ ಮಾಡ್ತೀನಿ. ಅವನನ್ನು ಇಷ್ಟು ಹೊತ್ತಿನಲ್ಲಿ ನೆನಪು ಯಾಕೆ ಮಾಡ್ತೀರಿ ಎಂದು ರೇವಣ್ಣ ಗರಂ ಆಗಿಯೇ ಉತ್ತರಿಸಿದ್ದಾರೆ.

    ಹಾಸನಕ್ಕೆ ದೇವೇಗೌಡರು ಅಥವಾ ಪ್ರಜ್ವಲ್ ಇಬ್ಬರಲ್ಲಿ ಯಾರು ಸ್ಪರ್ಧಿಸಬೇಕೆಂದು ನೀವೇ ಹೇಳಿ. ಅವರನ್ನೇ ನಿಲ್ಲಿಸೋಣ ಎಂದು ರೇವಣ್ಣ ಹಾಸ್ಯ ಚಟಾಕಿ ಹಾರಿಸಿದರು.

    ಸಿಎಂ ಕುಮಾರಸ್ವಾಮಿ ಈ ಸಲ ಬಜೆಟ್ ಮಂಡಿಸಲ್ಲ ಎಂಬ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆಗೆ ತೀಕ್ಷ್ಣವಾಗಿ ಉತ್ತರಿಸಿದ ರೇವಣ್ಣ, ನೂರಕ್ಕೆ ನೂರು ಸಮ್ಮಿಶ್ರ ಸರ್ಕಾರದಿಂದ ಬಜೆಟ್ ಮಂಡನೆ ಮಾಡ್ತೇವೆ. ಕುಮಾರಸ್ವಾಮಿ ಬಜೆಟ್ ಮಂಡನೆ ಕುರಿತು ಯಾವುದೇ ಅನುಮಾನ ಬೇಡ ಎಂದು ಹೇಳಿದರು.

    ಬಜೆಟ್‍ನಲ್ಲಿ ಉತ್ತರ ಕರ್ನಾಟಕಕ್ಕೆ ವಿಶೇಷ ಆದ್ಯತೆ ಕೊಡ್ತಾರೆ, ನೀವು ಏನು ಯೋಚನೆ ಮಾಡಬೇಡಿ ಎಂದು ಹೇಳಿದಲ್ಲದೇ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಅಂತೇನಿಲ್ಲ. ರೈತರ ಸಾಲಮನ್ನಾ ಆಗಿದ್ದು ಉತ್ತರ ಕರ್ನಾಟಕಕ್ಕೆ ಅಧಿಕ. ಅದರಲ್ಲೂ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಅತ್ಯಧಿಕವಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ಯಾಕೆ ರೈತರ ಸಾಲಮನ್ನಾ ಮಾಡಿಲ್ಲ. ಯಾಕೆ ಬಿಜೆಪಿ ಅವರು ಒತ್ತಾಯಿಸಿಲ್ಲ ಎಂದು ಗರಂ ಆದರು.

    ಸರ್ಕಾರಿ ಆಂಗ್ಲ ಮಾಧ್ಯಮ ಪ್ರಾರಂಭಿಸುವ ವಿಚಾರವಾಗಿ ಮಾತನಾಡಿದ ರೇವಣ್ಣ, ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಓಪನ್ ಮಾಡಲೇಬೇಕು. ಯಾರೋ ರೇವಣ್ಣ, ಕುಮಾರಸ್ವಾಮಿ ಮಕ್ಕಳಷ್ಟೇ ಓದಬೇಕೇನ್ರೀ? ಎಲ್‍ಕೆಜಿಯಿಂದ ಇಂಗ್ಲಿಷ್ ಮಿಡಿಯಂ ಮಾಡಲೇಬೇಕು, ಹೊಟ್ಟೆಗೆ ಹಿಟ್ಟಿಲ್ಲದವರ ಮಕ್ಕಳು ಏನ್ ಮಾಡಬೇಕು. ಕೂಲಿ ಮಾಡುವವರ ಮಕ್ಕಳು ಇಂಗ್ಲಿಷ್ ಓದಬಾರದೇನ್ರೀ? ವಿವಿಧ ಇಲಾಖೆ ಅನುದಾನ ಕಟ್ ಮಾಡಿ ಇಂಗ್ಲಿಷ್ ಶಾಲೆಗೆ ನೀಡಬೇಕು. ಇದರಿಂದ ಹಿಂದೆ ಸರಿಯುವ ಮಾತೇ ಇಲ್ಲ. ಈ ಸಾಹಿತಿಗಳು ತಮ್ಮ ಮಕ್ಕಳನ್ನು ಎಲ್ಲಿ ಓದಿಸ್ತಾರೆ. ಹಾಗಿದ್ರೆ ಇಂಗ್ಲಿಷ್ ಶಾಲೆ ಬಂದ್ ಮಾಡಿಬಿಡಲಿ. ನಾನೇನು, ಕನ್ನಡ ಶಾಲೆ ಬೇಡ ಅಂತಿಲ್ಲ. ಒಂದು ಭಾಷೆ ಕನ್ನಡ ಇರಲಿ. ಸಮಾಜ ಕನ್ನಡದಲ್ಲಿ ಹೇಳಿ, ಗಣಿತ, ವಿಜ್ಞಾನ ಇಂಗ್ಲಿಷ್ ನಲ್ಲಿ ಹೇಳಲಿ. ಆದರೆ ಯಾರು ಏನು ಅಂದ್ರೂ ಈ ವಿಷಯದಲ್ಲಿ ನನ್ನದು ನೋ ಕ್ವಶ್ಚನ್. ಎಲ್‍ಕೆಜಿಯಿಂದ ಇಂಗ್ಲಿಷ್ ಶಾಲೆ ಆರಂಭ ಆಗಲೇಬೇಕು ಎಂದು ಹೇಳಿದರು.

    ಕಳೆದ 10 ವರ್ಷದಿಂದ ಹಾಸನದಲ್ಲಿ ಜನ ಕುಡಿಯುವ ನೀರಿಗೆ ಪರದಾಡುತ್ತಿದ್ದರು. ದೈವಾನುಗ್ರಹದಿಂದ ಈಗ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ನನ್ನ ಕಡೆ ಎಷ್ಟು ಸಾಧ್ಯವೋ ಅಷ್ಟು ಹಾಸನಕ್ಕೆ ಸಹಾಯ ಮಾಡ್ತೀನಿ ಎಂದು ರೇವಣ್ಣ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಳೆದ 10 ವರ್ಷದಿಂದ ಹಾಸನ ಅಭಿವೃದ್ಧಿ ಕಾಣಲಿಲ್ಲ-ಸಿದ್ದರಾಮಯ್ಯ ವಿರುದ್ಧ ರೇವಣ್ಣ ಆಕ್ರೋಶ

    ಕಳೆದ 10 ವರ್ಷದಿಂದ ಹಾಸನ ಅಭಿವೃದ್ಧಿ ಕಾಣಲಿಲ್ಲ-ಸಿದ್ದರಾಮಯ್ಯ ವಿರುದ್ಧ ರೇವಣ್ಣ ಆಕ್ರೋಶ

    ಹಾಸನ: ನಗರದಲ್ಲಿ ದೋಸ್ತಿ ಸರ್ಕಾರದ ನಾಯಕರ ನಡುವೆ ಮಾತಿನ ಸಮರ ಮುಂದುವರಿದಿದೆ. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಬರ ನಿರ್ವಹಣಾ ಸಂಪುಟ ಸಮಿತಿ ಸಭೆ ಇದಕ್ಕೆ ಸಾಕ್ಷಿಯಾಗಿದೆ.

    ಸಚಿವ ಎಚ್.ಡಿ. ರೇವಣ್ಣ ಹಾಗೂ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಮಧ್ಯೆ ವಾಕ್ಸಮರ ಏರ್ಪಟ್ಟಿತ್ತು. ಕಳೆದ ಹತ್ತು ವರ್ಷದಿಂದ ಹಾಸನ ಅಭಿವೃದ್ಧಿ ಕಾಣಲಿಲ್ಲ ಎನ್ನುವ ರೇವಣ್ಣ ಮಾತಿಗೆ ಕೆರಳಿದ ಗೋಪಾಲಸ್ವಾಮಿ, ನಮ್ಮ ಸಿದ್ದರಾಮಯ್ಯ ಸರ್ಕಾರದಲ್ಲಿ ಹಾಗಾದ್ರೆ ಏನೂ ಆಗಲಿಲ್ಲವೇ ಎಂದು ಗರಂ ಆದ್ರು. ರೀ ಗೋಪಾಲ್, ಸುಮ್ನೆ ಕೂತ್ಕಳ್ರಿ ಏನಾಗಿದೆ ಅಂತ ನನಗೆ ಗೊತ್ತಿದೆ ಎಂದು ಏರು ಧ್ವನಿಯಲ್ಲಿಯೇ ರೇವಣ್ಣ ಪ್ರತ್ಯುತ್ತರ ನೀಡಿದ್ರು. ಇವರಿಬ್ಬರ ಈ ಮಾತಿನ ಸಮರ ಸಭೆಯಲ್ಲಿ ಕೆಲಕಾಲ ಗೊಂದಲಕ್ಕೆ ಕಾರಣವಾಯಿತು.

    ಸಂಪುಟ ಉಪ ಸಮಿತಿ ಅಧ್ಯಕ್ಷ ಕೃಷ್ಣಬೈರೇಗೌಡ ನೇತೃತ್ವದ ಸಚಿವರ ತಂಡ ಹಾಸನ ಜಿಲ್ಲೆಯ ಬರಪೀಡಿತ ಪ್ರದೇಶಕ್ಕೆ ಶುಕ್ರವಾರ ಭೇಟಿ ಮಾಡಿತ್ತು, ನಂತರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಯಿತು. ಸಭೆಯಲ್ಲಿ ಉಸ್ತುವಾರಿ ಸಚಿವ ಎಚ್.ಡಿ. ರೇವಣ್ಣ ಸೇರಿದಂತೆ ಸಚಿವರುಗಳಾದ ಕೃಷ್ಣಬೈರೇಗೌಡ, ಸಿ.ಎಸ್. ಪುಟ್ಟರಾಜು, ಯು.ಟಿ ಖಾದರ್, ಜಯಮಾಲಾ ಭಾಗವಹಿಸಿದ್ದರು. ಇವರ ಜತೆಗೆ ಜಿಲ್ಲೆಯ ಎಲ್ಲಾ ಶಾಸಕರೂ ಕೂಡಾ ಭಾಗವಹಿಸಿದ್ದರು.

    ಸಭೆಯ ಮಧ್ಯೆ ಹಾಸನ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂಗೌಡ ಎದ್ದು, ಕ್ಷೇತ್ರಕ್ಕೆ ಸಂಬಂಧಿಸಿದ ಬೇಡಿಕೆಯನ್ನು ಇಡುತ್ತಿದ್ದರು. ಪ್ರೀತಂ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಎಚ್.ಡಿ ರೇವಣ್ಣ ನೋಡಿ ಅಣ್ಣಾ, ನನಗೆ ನಮ್ಮ ಜಿಲ್ಲೆಯ ಅಭಿವೃದ್ಧಿ ಮಾತ್ರ ಮುಖ್ಯ. ಕಳೆದ ಹತ್ತು ವರ್ಷಗಳಿಂದ ನಮ್ಮ ಜಿಲ್ಲೆ ಅಭಿವೃದ್ಧಿ ಕಂಡಿರಲಿಲ್ಲ. ಈಗ ಅಭಿವೃದ್ಧಿಯಾಗಬೇಕಷ್ಟೇ ಎಂದ್ರು.

    ರೇವಣ್ಣರ ಈ ಮಾತಿಗೆ ಕೆರಳಿದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ, ರೇವಣ್ಣ ಅವರೇ, ನಮ್ಮ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿಯೂ ಕೆಲಸ ಆಗಿದೆ. ನೀವು ಹಾಗೆ ಹೇಳಬೇಡಿ. ಇದು ಸಮ್ಮಿಶ್ರ ಸರ್ಕಾರ ಎಂದು ಗರಂ ಆದ್ರು. ಇದರಿಂದ ಸಿಟ್ಟಾದ ರೇವಣ್ಣ ಏನು ಕೆಲಸ ಆಗಿದೆ ಹೇಳ್ರಿ ಎಂದು ಏರು ಧ್ವನಿಯಲ್ಲಿಯೇ ಉತ್ತರ ಕೊಟ್ರು.

    ತಮ್ಮ ಮಾತನ್ನು ಮುಂದುವರಿಸಿದ ಗೋಪಾಲಸ್ವಾಮಿ, ಹಾಸನದಲ್ಲಿ ಬೇಕಾದಷ್ಟು ಆಗಿದೆ ಎಂದು ಪ್ರತ್ಯುತ್ತರ ನೀಡಿದ್ರು. ಬರೀ ಎಂಜಿನಿಯರಿಂಗ್ ಕಾಲೇಜ್ ನ ಡೋರ್ ರಿಪೇರಿ ಮಾಡಲೂ ನಿಮ್ಮಿಂದ ಸಾಧ್ಯವಾಗಲಿಲ್ಲ, ಈಗ ಕಾಲೇಜು ಮುಚ್ಚೋ ಹಂತಕ್ಕೆ ಬಂದಿದೆ. ನನಗೆ ಗೊತ್ತು ಸುಮ್ನೆ ಕೂತ್ಕೋಳ್ರೀ ಎಂದು ಗೋಪಾಲಸ್ವಾಮಿ ಅವರಿಗೆ ರೇವಣ್ಣ ಗದರಿದರು. ಹೀಗೆ ಇಬ್ಬರ ನಡುವೆಯೂ ವಾಗ್ವಾದ ನಡೆಯಿತು. ಈ ವೇಳೆ ಮಧ್ಯೆ ಪ್ರವೇಶಿದ ಸಚಿವ ಕೃಷ್ಣಬೈರೇಗೌಡ ಅವರು, ರೇವಣ್ಣ ಅವರಿಗೆ ಇನ್ನೂ ಹೆಚ್ಚಿನ ಕೆಲಸ ಆಗಬೇಕಿತ್ತು ಅನ್ನೋ ಆಸೆ ಇದೆ ಅನ್ನಿಸುತ್ತದೆ ಎನ್ನುವ ಮೂಲಕ ಇಬ್ಬರ ಜಗಳಕ್ಕೆ ತೇಪೆ ಹಚ್ಚಿದ್ರು. ಜಗಳ ತಣ್ಣಗಾದ ಮೇಲೆ ರೀ ಪ್ರೀತಂ ನೀನು ಬೆಂಕಿ ಹಚ್ಚಿ ತಮಾಷೆ ನೋಡ್ತಿಯಾ ಕಣಪ್ಪಾ ಅಂತಾ ಕೃಷ್ಣಬೈರೇಗೌಡ್ರು ಪ್ರೀತಂಗೆ ಟಾಂಗ್ ನೀಡಿದ್ರು.

    ಒಟ್ಟಿನಲ್ಲಿ ಇಬ್ಬರ ಜಗಳವನ್ನು ನೋಡ್ತಾ ಇದ್ದ ಕಾಂಗ್ರೆಸ್ ನ ಸಚಿವರುಗಳು ಅವರಿಗೂ ಹೇಳಲಾಗದೇ, ಇವರಿಗೂ ಹೇಳಲಾಗದೇ ಸುಮ್ನೆ ಜಗಳ ನೋಡ್ತಾ ಕೂತಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಇಬ್ಬರ ನಡುವೆ ಹೊಂದಾಣಿಕೆಯೇ ಇಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದ್ದು, ಈ ಇಬ್ಬರ ಮಧ್ಯೆ ಅಧಿಕಾರಿಗಳು ಮಾತ್ರ ಬೆಸತ್ತು ಹೋಗಿರೋದಂತೂ ಸುಳ್ಳಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಎಲೆಕ್ಷನ್ ಟೈಂನಲ್ಲಿ ದುಡ್ಡು ಕೊಡೋಕೆ ಆಗಲ್ಲ ಅಂತ ಅಕೌಂಟ್‍ಗೆ ಹಾಕ್ತಿದ್ದಾರೆ- ರೇವಣ್ಣ ವ್ಯಂಗ್ಯ

    ಎಲೆಕ್ಷನ್ ಟೈಂನಲ್ಲಿ ದುಡ್ಡು ಕೊಡೋಕೆ ಆಗಲ್ಲ ಅಂತ ಅಕೌಂಟ್‍ಗೆ ಹಾಕ್ತಿದ್ದಾರೆ- ರೇವಣ್ಣ ವ್ಯಂಗ್ಯ

    ಬೆಂಗಳೂರು: ಚುನಾವಣೆ ಸಮಯದಲ್ಲಿ ಹಣ ಹಂಚಲು ಆಗಲ್ಲ. ಹೀಗಾಗಿ ರೈತರ ನೆಪದಲ್ಲಿ ಅಕೌಂಟ್‍ಗೆ ದುಡ್ಡು ಜಮೆ ಮಾಡಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು, ಕೇಂದ್ರ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಕೇಂದ್ರ ಸರ್ಕಾರದ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ದೇಶದ ಜನರು 5 ವರ್ಷ ಕಾದಿರುವುದಕ್ಕೆ 6 ಸಾವಿರ ರೂ. ಬೋನಸ್ ನೀಡಿದ್ದಾರೆ. ಹೀಗಾಗಿ ಅವರ ಅಧಿಕಾರ ಅವಧಿಯ ಮುಕ್ತಾಯವಾಗಲು 4 ತಿಂಗಳು ಬಾಕಿ ಇದ್ದು, 2 ಸಾವಿರ ರೂ. ನಂತೆ ಪಾವತಿ ಮಾಡುತ್ತಾರೆ ಅಷ್ಟೇ ಎಂದು ಕುಟುಕಿದರು.

    ನಮ್ಮ ನಿರೀಕ್ಷೆಯಂತೆ ಬಜೆಟ್ ಮಂಡನೆಯಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಸಾಲಮನ್ನಾ ಮಾಡುತ್ತಾರೆ ಎನ್ನುವ ಭರವಸೆ ಇಟ್ಟುಕೊಂಡಿದ್ದೇವು. ದೇಶದ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೂ 10 ಸಾವಿರ ರೂ. ಹಾಕುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ ಹಾಗೆ ಮಾಡಲಿಲ್ಲ ಎಂದ ಅವರು, ಚುನಾವಣೆ ಸಮಯದಲ್ಲಿ ಹಣ ಹಂಚಲು ಹೋದರೆ ಚುನಾವಣಾ ಆಯೋಗ ಬಿಡಲ್ಲ. ಅದಕ್ಕೆ ಸಣ್ಣ ಹಿಡುವಳಿದಾರರ ರೈತರ ಬ್ಯಾಂಕ್‍ಗೆ ಹಣ ಹಾಕುವ ಪ್ಲಾನ್ ಮಾಡಿದ್ದಾರೆ ಎಂದು ಕಾಲೆಳೆದರು.

    ಹಾಸನ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧಿಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಅಭ್ಯರ್ಥಿ ಆಯ್ಕೆಯ ವಿಚಾರವನ್ನು ಪಕ್ಷದ ವರಿಷ್ಠ ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ತೆಗೆದುಕೊಳ್ಳುತ್ತಾರೆ. ಹಾಸನದಲ್ಲಿ ತ್ರೀಕೋನ ಸ್ಪರ್ಧೆಗೂ ನಾವು ಸಿದ್ಧರಿದ್ದೇವೆ ಹಾಗೂ ಕಾಂಗ್ರೆಸ್ ಜತೆ ಹೊಂದಾಣಿಕೆಗೂ ರೆಡಿ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ವೇದಿಕೆಯಲ್ಲೇ ಸಚಿವ ರೇವಣ್ಣ, ಪ್ರೀತಂಗೌಡ ವಾಕ್ಸಮರ..!

    ವೇದಿಕೆಯಲ್ಲೇ ಸಚಿವ ರೇವಣ್ಣ, ಪ್ರೀತಂಗೌಡ ವಾಕ್ಸಮರ..!

    ಹಾಸನ: 70ನೇ ಗಣರಾಜ್ಯೋತ್ಸವ ಸಮಾರಂಭದ ವೇದಿಕೆಯಲ್ಲೇ ಲೋಕೋಪಯೋಗಿ ಸಚಿವ ರೇವಣ್ಣ ಹಾಗೂ ಶಾಸಕ ಪ್ರೀತಂಗೌಡ ಮಧ್ಯೆ ವಾಗ್ವಾದ ನಡೆದಿದೆ.

    ಹಾಸನ ಬಿ.ಎಂ. ರಸ್ತೆಯ ಅಗಲೀಕರಣ ವಿಚಾರದಲ್ಲಿ ಕಿತ್ತಾಟ ನಡೆದಿದೆ. ನನ್ನ ಗಮನಕ್ಕೆ ಬಾರದೆ ರಸ್ತೆ ಕಾಮಗಾರಿ ಮಾಡಿದ್ದೀರಾ ಎಂದು ಶಾಸಕ ಪ್ರೀತಂಗೌಡ ಅವರು ವೇದಿಕೆಯಲ್ಲೇ ಸಚಿವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಸಚಿವರು ನಂಗೇನೂ ಗೊತ್ತಿಲ್ಲ ಎಲ್ಲ ಡಿಸಿ ಮೇಡಂ ಮಾಡಿರೋದು. ಹೋಗಿ ಅವರನ್ನೇ ಕೇಳು ಎಂದು ಹೇಳಿದ್ದಾರೆ.

    ಇದರಿಂದ ಸಿಡಿಮಿಡಿಗೊಂಡ ಶಾಸಕರು, ನಿಮ್ಮ ಮೇಲೆ ಹಕ್ಕು ಚ್ಯುತಿ ಮಂಡನೆ ಮಾಡುತ್ತೇನೆ ಅಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರೇವಣ್ಣ ಅವರು, ಹಕ್ಕುಚ್ಯುತಿ ಆದ್ರೆ ಏನು ಅಂತಾ ಮೊದಲು ತಿಳಿದುಕೊಂಡು ಬಾ ಎಂದು ಶಾಸಕರಿಗೆ ತಿರುಗೇಟು ನೀಡಿದ್ದಾರೆ.

    https://www.youtube.com/watch?v=O_eS2ctIFOE

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಮಿಳುನಾಡಿನ ಪಂಚಾಂಗ ಬಂದಿದೆ, ನಮ್ದು ಬಂದ್ಮೇಲೆ ನೋಡಿ ಹೇಳ್ತೀನಿ: ರೇವಣ್ಣ ವ್ಯಂಗ್ಯ

    ತಮಿಳುನಾಡಿನ ಪಂಚಾಂಗ ಬಂದಿದೆ, ನಮ್ದು ಬಂದ್ಮೇಲೆ ನೋಡಿ ಹೇಳ್ತೀನಿ: ರೇವಣ್ಣ ವ್ಯಂಗ್ಯ

    ಹಾಸನ: ಆಪರೇಷನ್ ಕಮಲದ ಬಗ್ಗೆ ಯಾವುದೇ ಟೆನ್ಷನ್ ಇಲ್ಲ. ನಿನ್ನೆ ತಮಿಳುನಾಡು ಪಂಚಾಂಗ ಬಂದಿದೆ. ನಮ್ಮ ಪಂಚಾಂಗ ಬರಬೇಕಲ್ಲ. ಅದನ್ನು ನೋಡಿ ಮುಂದೆ ಎನಾಗುತ್ತದೆ ಎನ್ನುವುದನ್ನು ಹೇಳ್ತೀನಿ ಅಂತ ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆಪರೇಷನ್ ಕಮಲ ಮಾಡಿದರೆ ನಮಗೇನು ಟೆನ್ಷನ್ ಇಲ್ಲ. ನಾವು ಆರಾಮವಾಗಿದ್ದೇವೆ. ಏನಾದ್ರು ಹೊಲ ಮನೆ ಕಳೆದುಕೊಳ್ಳೊದಾದ್ರೆ ಟೆನ್ಷನ್ ತಗೋಬೇಕು. ನಮ್ಮದು ಯಾವುದೂ ಹೋಗಿಲ್ಲ ಎಂದರು.

    ನಾವು ಯಾವಾಗಲೂ ಕೂಲ್, ಸಿಟ್ಟು ಇಟ್ಟುಕೊಂಡು ನಾವೇನು ಮಾಡ್ಬೇಕು. ನಿನ್ನೆ ಬಂದಿದ್ದು ತಮಿಳುನಾಡು ಪಂಚಾಂಗ. ನಮ್ಮ ಪಂಚಾಂಗ ಯುಗಾದಿಗೆ ಬರುತ್ತೆ. ಎರಡನ್ನು ನೋಡಿ ಮುಂದಿನ ಭವಿಷ್ಯ ಹೇಳ್ತೀನಿ. ಪಂಚಾಂಗ ಬಂದಮೇಲೆ ಮಾತನಾಡೋಣ. ಈಗ ಬೇಡ ಅಂತ ರೇವಣ್ಣ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತುರ್ತು ಕಾಮಗಾರಿ ನಿಯಮದಡಿ ಪರಂಗಾಗಿ ರೇವಣ್ಣ ಲಕ್ಷ ಲಕ್ಷ ಖರ್ಚು..!

    ತುರ್ತು ಕಾಮಗಾರಿ ನಿಯಮದಡಿ ಪರಂಗಾಗಿ ರೇವಣ್ಣ ಲಕ್ಷ ಲಕ್ಷ ಖರ್ಚು..!

    ಬೆಂಗಳೂರು: ರಾಜ್ಯದಲ್ಲಿ ಬರಗಾಲವಿದ್ರೂ ಸಮ್ಮಿಶ್ರ ಸರ್ಕಾರದಲ್ಲಿ ಖರ್ಚಿಗೆ ಕಮ್ಮಿಯೇನಿಲ್ಲ. ವಿಧಾನಸೌಧದಲ್ಲಿರುವ ಉಪ ಮುಖ್ಯಮಂತ್ರಿ ಪರಮೇಶ್ವರ್ ಕೊಠಡಿಯ ನವೀಕರಣಕ್ಕೆ 70 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ.

    ಪರಮೇಶ್ವರ್‍ಗೆ ಗೃಹ ಖಾತೆ ಹೋದಾಗ ದಲಿತರಿಗೆ ಅನ್ಯಾಯ ಎಂದು ರೇವಣ್ಣ ಹೇಳಿದ್ದರು. ಈಗ ಪರಮೇಶ್ವರ್ ಮೇಲಿನ ಪ್ರೀತಿಗೆ ರೇವಣ್ಣ ಅವರು ಇಲಾಖೆ ನಿಯಮವೇ ಬ್ರೇಕ್ ಮಾಡಿದ್ದಾರೆ. ಕಾಂಗ್ರೆಸ್‍ನಲ್ಲಿ ಯಾರ ಕೆಲಸ ಆಗಿಲ್ಲ ಅಂದರೂ ಪರಮೇಶ್ವರ್ ಅವರ ಕೆಲಸ ಮಾತ್ರ ಮಿಸ್ ಆಗಲ್ಲ. ಹೀಗಾಗಿ ಪರಮೇಶ್ವರ್ ಕೊಠಡಿ ನವೀಕರಣಕ್ಕೆ ಸೂಪರ್ ಸಿಎಂ ಕೇಳಿದ್ದಷ್ಟು ಹಣ ಕೊಟ್ಟಿದ್ದಾರೆ.

    ಹೌದು. ಬರಗಾಲದಲ್ಲೂ ಕೊಠಡಿ ನವೀಕರಣಕ್ಕೆ ಲಕ್ಷ ಲಕ್ಷ ಖರ್ಚು ಮಾಡಲಾಗಿದೆ. 70 ಜನ ರೈತರ ಸಾಲಮನ್ನಾ ಮಾಡಬಹುದಾದ ಹಣದಲ್ಲಿ ಒಂದೇ ರೂಂ ನವೀಕರಣ ಮಾಡಲಾಗಿದೆ. ಟೆಂಡರ್ ಕರೆಯದೇ ಬರೋಬ್ಬರಿ 70 ಲಕ್ಷದಲ್ಲಿ ಡಿಸಿಎಂ ಪರಮೇಶ್ವರ್ ಕೊಠಡಿಯನ್ನು ನವೀಕರಿಸಲಾಗಿದೆ. 4ಜಿ ಅಡಿಯಲ್ಲಿ ಲೋಕೋಪಯೋಗಿ ಇಲಾಖೆ ಈ ಕಾಮಗಾರಿ ನಡೆಸಿದೆ.

    4 ಜಿ ಕಾಯಿದೆಯ ಮೂಲಕ ಯಾವುದೇ ಟೆಂಡರ್ ಕರೆಯದೆ ಕೆಲಸ ಮಾಡಬಹುದು. 1, 2 ಲಕ್ಷ ಅಥವಾ 1 ಕೋಟಿಯದ್ದೇ ಆಗಿರಬಹುದು. ಒಟ್ಟಿನಲ್ಲಿ ತುರ್ತು ಸಮಯದಲ್ಲಿ ಮಾತ್ರ 4ಜಿ ಅನ್ವಯ ಕೆಲಸ ಮಾಡಬಹುದು. ಆದ್ರೆ ಇಲ್ಲಿ ಯಾವುದೇ ತುರ್ತು ಇಲ್ಲದೆ ಹೋದ್ರೂ 70 ಲಕ್ಷದಲ್ಲಿ ಡಿಸಿಎಂ ರೂಂ ನವೀಕರಣ ಮಾಡಲಾಗಿದೆ. ಇದೀಗ ನಿಯಮ ಬ್ರೇಕ್ ಮಾಡಿ ಕೆಲಸ ಮಾಡಿದ ದಾಖಲೆ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಒಟ್ಟಿನಲ್ಲಿ ಇಲ್ಲಿ ಕೇವಲ ಇವರ ರಾಜಕೀಯ ಹಿತಾಸಕ್ತಿಗಳನ್ನು ತುಂಬಿಸಿಕೊಳ್ಳಲು ಈ ಕೆಲಸ ಆಗಿದೆ. ಆದ್ರೆ ಇಲ್ಲಿ ಒಂದೊಂದು ಲಕ್ಷ ಅಂದ್ರೂ ಸುಮಾರು 70 ಮಂದಿ ರೈತರ ಸಾಲಮನ್ನಾ ಮಾಡಬಹುದಾಗಿತ್ತು. ಪರಮೇಶ್ವರ್ ಬಂದ ಬಳಿಕ ಅದಕ್ಕೆ 70 ಲಕ್ಷ ರೂ ಖರ್ಚಿ ಮಾಡಿ ನವೀಕರಣ ಮಾಡಲಾಗಿದೆ. ಸೂಪರ್ ಸಿಎಂ ಎಂದೇ ಬಿಂಬಿತರಾಗಿರೋ ಎಚ್ ಡಿ ರೇವಣ್ಣ ಅವರು ಇಂತಹ ಸಂದರ್ಭಗಳಲ್ಲಿ ತಮಗೆ ಬೇಕಾದಂತೆ ನಿಯಮಗಳನ್ನು ಅವರು ಪರಮೇಶ್ವರ್ ಅವರ ಪ್ರೀತಿಗೆ ಈ ದುಂದುವೆಚ್ಚ ಮಾಡಿದ್ದಾರೆ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗೃಹ ಕಚೇರಿ ಕೃಷ್ಣದಲ್ಲೂ ಸೂಪರ್ ಸಿಎಂ ರೇವಣ್ಣದ್ದೇ ಹವಾ!

    ಗೃಹ ಕಚೇರಿ ಕೃಷ್ಣದಲ್ಲೂ ಸೂಪರ್ ಸಿಎಂ ರೇವಣ್ಣದ್ದೇ ಹವಾ!

    ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರಿಗೆ ಸಿಗುವ ಎಲ್ಲಾ ಸೌಲಭ್ಯ ನನಗೂ ಸಿಗಬೇಕು ಎನ್ನುವ ರೀತಿ ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ನಡೆದುಕೊಳ್ಳುತ್ತಿದ್ದಾರೆ.

    ಹೌದು, ಸಭೆಗಳಲ್ಲಿ ಸಿಎಂ ಕುಮಾರಸ್ವಾಮಿಗಿಂತಲೂ ಹೆಚ್ಚಾಗಿ ರೇವಣ್ಣ ಅವರೇ ಮಾತನಾಡುತ್ತಾರೆ ಎನ್ನುವುದು ಹಳೇಯ ಸುದ್ದಿ. ಈಗ ಸಿಎಂ ಗೃಹ ಕಚೇರಿ ಕೃಷ್ಣದಲ್ಲೂ ರೇವಣ್ಣ ಅವರು ದರ್ಬಾರ್ ಮಾಡುತ್ತಿದ್ದಾರೆ ಎನ್ನುವುದು ಹೊಸ ಸುದ್ದಿ.

    ಸಿಎಂ ಕಾರ್ ನಿಲ್ಲಿಸುವ ಜಾಗದಲ್ಲೇ ರೇವಣ್ಣ ಅವರ ಕಾರಿಗೂ ಜಾಗ ಬೇಕು. ಸಿಎಂ ಕಾರು ಪಕ್ಕದಲ್ಲೇ ರೇವಣ್ಣ ಅವರ ಕಾರು ನಿಂತುಕೊಳ್ಳಬೇಕು. ಹೀಗೆ ತಮ್ಮ ಕಾರನ್ನು ಮನಬಂದಂತೆ ನಿಲ್ಲಿಸಿದಕ್ಕೆ ಬೇರೆ ಸಚಿವರ ಕಾರುಗಳಿಗೆ ಜಾಗ ಇಲ್ಲದಂತಾಗಿದೆ.

    ಸೂಪರ್ ಸಿಎಂ ರೇವಣ್ಣ ಪವರ್ ಹೇಗಿದೆ ಅಂದ್ರೆ ಕೃಷ್ಣದಲ್ಲಿ ಸಿಎಂ ಕಾರ್ ನಿಲ್ಲಿಸುವ ಜಾಗದಲ್ಲೇ ರೇವಣ್ಣ ಕಾರ್ ಪಾರ್ಕಿಂಗ್ ಮಾಡಿದ್ದಾರೆ. ಯಾವಾಗ ಕಚೇರಿಗೆ ಬಂದರೂ ರೇವಣ್ಣ ಕಾರನ್ನು ಯಾರು ತಡೆಯುವಂತಿಲ್ಲ. ಬೇಕಾದ ಹಾಗೇ ಬರುತ್ತಾರೆ, ಬೇಕಾದ ಹಾಗೇ ರೇವಣ್ಣ ಸಾಹೇಬ್ರು ಹೋಗ್ತಾರೆ. ನಾವು ಯಾರಿಗೆ ಹೇಳೋದು ಅಂತ ಅಲ್ಲಿನ ಸಿಬ್ಬಂದಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಚಿವರಾಗ್ತಾರಾ ಎಚ್. ವಿಶ್ವನಾಥ್? ಎಚ್.ಡಿ.ರೇವಣ್ಣ ಹೇಳಿದ್ದು ಹೀಗೆ

    ಸಚಿವರಾಗ್ತಾರಾ ಎಚ್. ವಿಶ್ವನಾಥ್? ಎಚ್.ಡಿ.ರೇವಣ್ಣ ಹೇಳಿದ್ದು ಹೀಗೆ

    ಮಡಿಕೇರಿ: ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ವಿಶ್ವನಾಥ್ ಮುಂದುವರೆಯುತ್ತಾರೆ. ಯಾವುದೇ ಗೊಂದಲ ಬೇಡ. ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿ, ಎಚ್‍ಡಿಡಿಗೆ ಬಿಟ್ಟ ವಿಚಾರ ಅದರ ಬಗ್ಗೆ ನಾನು ಮಾತಾನಾಡುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಹೇಳಿದ್ದಾರೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ ಮಾತಾನಾಡಿದ ಅವರು, ಬೇರೆ ಇಲಾಖೆಯ ಅಧಿಕಾರಿಗಳನ್ನು ನಾನು ವರ್ಗಾವಣೆ ಮಾಡುವ ಕೆಲಸಕ್ಕೆ ಕೈ ಹಾಕಿಲ್ಲ. ಬೇರೆ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಲ್ಲ. ರಾಜ್ಯ ಸರ್ಕಾರ ಸುಭದ್ರವಾಗಿದೆ, ಯಾವುದೇ ಆತಂಕ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಕೊಡಗು, ಹಾಸನ, ಚಿಕ್ಕಮಗಳೂರು ಕಾಫಿ ಬೆಳೆಗಾರರಿಗೆ ಆದ ನಷ್ಟದ ಶೇ. 50ರಷ್ಟು ಪರಿಹಾರವನ್ನು ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಕೇಂದ್ರ ಸರ್ಕಾರ ಸ್ಪಂದಿಸುವ ಭರವಸೆ ಇದೆ. ಕೊಡಗಿನ ರಸ್ತೆಗೆ 44 ಕೋಟಿ ಹಣ ಬಿಡುಗಡೆಯಾಗಿದೆ. ಅಧಿಕಾರಿಗಳು ಕಾನೂನು ಬಿಟ್ಟು ಕೆಲಸ ಮಾಡಬಾರದು. ಕಾನೂನು ಬಾಹಿರ ಕೆಲಸ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ರು.

    ರೈತರ ಸಾಲಮನ್ನಾ ಮಾಡುವ ಬಗ್ಗೆ ಮಾತಾನಾಡಿ ರೇವಣ್ಣ, ಬಿಜೆಪಿಯವರಿಗೆ ಮಾನಮರ್ಯಾದೆ ಇದ್ದರೆ ಸಾಲಮನ್ನಾದ ಬಗ್ಗೆ ಮಾತನಾಡಬಾರದು. ರೈತರು ಸಾಲದ ಬಗ್ಗೆ ಚಿಂತೆ ಮಾಡುವ ಅಗತ್ಯ ಇಲ್ಲ. ನಮ್ಮ ಸರ್ಕಾರದಲ್ಲಿಯೇ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂತ್ರಿಗಿರಿಯನ್ನೇ ಪುಟಗೋಸಿ ಅಂದ್ರು ಸಚಿವ ರೇವಣ್ಣ

    ಮಂತ್ರಿಗಿರಿಯನ್ನೇ ಪುಟಗೋಸಿ ಅಂದ್ರು ಸಚಿವ ರೇವಣ್ಣ

    – ಸೂಪರ್ ಸಿಎಂ ವಿರುದ್ಧ ಮಾಜಿ ಸಚಿವ ಸುರೇಶ್ ವಾಗ್ದಾಳಿ

    ಬೆಂಗಳೂರು: ಬಿಸ್ಕೆಟ್ ಆಯ್ತು, ಟೋಪಿ ಆಯ್ತು, ಈಗ ಪುಟಗೋಸಿ. ಮಂತ್ರಿಗಿರಿಯನ್ನೇ ಪುಟಗೋಸಿ ಎಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಕರೆದಿದ್ದಾರೆ.

    ಎಚ್.ಡಿ ರೇವಣ್ಣ ಅವರು ಮಂತ್ರಿಗಿರಿ ಹೇಳಿಕೆ ವಿರುದ್ಧ ಬಿಜೆಪಿಯಿಂದ ಕ್ಯಾಂಪೇನ್ ನಡೆಸಲಾಗುತ್ತಿದೆ. ರೇವಣ್ಣ ವಿರುದ್ಧ ಬಿಜೆಪಿ ಶಾಸಕ, ಮಾಜಿ ಸಚಿವ ಸುರೇಶ್ ಕುಮಾರ್ ತಿರುಗಿಬಿದಿದ್ದಾರೆ.

    ರೇವಣ್ಣ ಹೇಳಿಕೆಗೆ ಮಾಜಿ ಸಚಿವ ಸುರೇಶ್ ಕುಮಾರ್ ಖಾರವಾಗಿಯೇ ಟ್ವೀಟ್ ಮಾಡಿದ್ದಾರೆ. “ಇದು ರಾಜ್ಯದ ದುರಂತ. ಮಂತ್ರಿಗಿರಿಯನ್ನು ಪುಟಗೋಸಿ ಮಾಡಿಕೊಂಡಿರುವವರು ಲೋಕೋಪಯೋಗಿ ಸಚಿವ. ಒಂದೇ ಕುಟುಂಬದಿಂದ 3 ಜನ ಪುಟಗೋಸಿಗಳು ಯಾಕೆ?” ಎಂದು ಟ್ವೀಟ್ ಮಾಡಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸುರೇಶ್, ರಾಜಕೀಯ ವ್ಯಕ್ತಿಗಳ ಬಗ್ಗೆ ಸಮಾಜದಲ್ಲಿ ಬಹಳ ಕೆಟ್ಟ ಅಭಿಪ್ರಾಯವಿದೆ. ಹೀಗಾಗಿ ರಾಜಕೀಯ ಈ ಸ್ಥಿತಿಯಲ್ಲಿರುವಾಗ ಕೆಲವೊಂದು ಮಾತುಗಳನ್ನಾಡುವಾಗ ಗಂಭೀರತೆಯನ್ನು ಅರಿತುಕೊಳ್ಳಬೇಕು. ರೇವಣ್ಣ ಅವರು ಯಾವುದೇ ಕಾರ್ಯ ಮಾಡುವಾಗ ರಾಹುಕಾಲ, ಗುಳಿಕಕಾಲ ಹಾಗೂ ಯಮಗಂಡ ಕಾಲ ನೋಡುತ್ತಾರೆ. ಹಾಗಾದ್ರೆ ಈ ಪುಟಗೋಸಿ ಎನ್ನುವ ಮಂತ್ರಿಗಿರಿಯನ್ನು ಯಾವ ಕಾಲದಲ್ಲಿ ತೆಗೆದುಕೊಂಡ್ರು ಅಂತ ಪ್ರಶ್ನಿಸಿದ್ರು.

    ರೇವಣ್ಣ ಅವರು ಈ ಹೇಳಿಕೆ ನೀಡುವಾಗ ಕಾಲ ನೋಡಿಕೊಂಡು ಹೇಳಿದ್ರಾ? ಒಟ್ಟಾರೆ ಜನರಿಂದ ಇನ್ನಷ್ಟು ರಾಜಕೀಯವನ್ನು ತಿರಸ್ಕಾರಗೊಳ್ಳುವಷ್ಟು ನಾವೇ ತೆಗೆದುಕೊಂಡು ಹೋಗುತ್ತಿದ್ದೇವೆ. ಕೊಡಗಿನಲ್ಲಿ ಸಂತ್ರಸ್ತರಿಗೆ ಬಿಸ್ಕೆಟ್ ಎಸೆದಾಗ ಸಂಕಟ ಆಗಿತ್ತು. ಆದ್ರೆ ಅದನ್ನು ಅವರ ಹಿಂಬಾಲಕರು ಸಮರ್ಥನೆ ಮಾಡಿಕೊಂಡರು. ಈ ರೀತಿಯ ಹಗುರವಾದ ಹಾಗೂ ತಿರಸ್ಕಾರಕ್ಕೆ ಯೋಗ್ಯವಾದ ಮಾತುಗಳು ಹೆಚ್ಚೆಚ್ಚು ಮಾಡುತ್ತಿದ್ದಾರೆ ಅಂತ ವಾಗ್ದಾಳಿ ನಡೆಸಿದ್ರು.

    ರೇವಣ್ಣ ಹೇಳಿದ್ದೇನು?:
    ನನ್ನ ಅಧಿಕಾರದಲ್ಲಿ ಏನಾದರೂ ಸಮಸ್ಯೆ ಇದ್ದರೆ ಕಾಂಗ್ರೆಸ್‍ನವರು ಬಹಿರಂಗವಾಗಿ ಹೇಳಲಿ. ನಾನು ಇಂತಹ ವಿಷಯದ ಬಗ್ಗೆ ಹೆದರುವುದಿಲ್ಲ. ಈ ಪುಟಗೋಸಿ ಮಂತ್ರಿ ಸ್ಥಾನ ಯಾರಿಗೆ ಬೇಕು ಎಂದು ರೇವಣ್ಣ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದ ವೇಳೆ ಹೇಳಿಕೆ ನೀಡಿದ್ದರು. ರೇವಣ್ಣ ಅವರ ಈ ಹೇಳಿಕೆ ಇದೀಗ ತೀವ್ರ ಚರ್ಚೆಯಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಚಿವ ರೇವಣ್ಣ ದಾರಿಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

    ಸಚಿವ ರೇವಣ್ಣ ದಾರಿಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

    ಬೆಳಗಾವಿ: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ದಾರಿಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೋಗುತ್ತಿದ್ದಾರೆ. ನಾನು ವಾಸ್ತು ಹಾಗೂ ಭವಿಷ್ಯವನ್ನು ನಂಬುತ್ತೇನೆ ಎಂದು ಹೇಳಿದ್ದಾರೆ.

    ನಾನೂ ಕೂಡಾ ವಾಸ್ತು ಫಾಲೋ ಮಾಡುತ್ತೀನಿ. ಯಾವುದೇ ಕ್ಷೇತ್ರಕ್ಕೆ ಭೇಟಿ ನೀಡುವಾಗ ಸ್ವಲ್ಪ ಸಮಯ ನೋಡುತ್ತೇನೆ. ದಿನಾಲು ರಾಶಿ ಭವಿಷ್ಯ ನೋಡುತ್ತೇನೆ. ರಾಶಿ ಭವಿಷ್ಯದ ಮೇಲೆ ಅಪಾರ ನಂಬಿಕೆ ಹೊಂದಿದ್ದೇನೆ. ಉಡುಗೆ ತೊಡುಗೆಯಲ್ಲಿ ನಾನು ವಾಸ್ತು ನೋಡುತ್ತೀನಿ. ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಬೇಕು ಅಂತ ನೋಡುತ್ತೀನಿ. ಮನೆಯಲ್ಲಿ ಹಿರಿಯರಿಂದ ದೇವರ ಭಕ್ತಿ, ವಾಸ್ತು, ಸಂಪ್ರದಾಯದ ಚಾಲ್ತಿಯಲ್ಲಿದೆ. ಹೀಗಾಗಿ ನಾನೂ ಕೂಡಾ ವಾಸ್ತು ಫಾಲೋ ಮಾಡುವದರ ಜೊತೆಗೆ ರಾಹುಕಾಲ ನಂಬುತ್ತೇನೆ ಎಂದರು.

    ವಾಸ್ತು ಫಾಲೋ ಮಾಡುವುದ್ದಕ್ಕೆ ಸಚಿವ ರೇವಣ್ಣ ಅವರು ನಿಮಗೆ ಪ್ರೇರೆಣೆ ನಾ? ಎಂದು ಪ್ರಶ್ನಿಸಿದ್ದಕ್ಕೆ, ನಗುತ್ತ ನನಗೆ ರೇವಣ್ಣ ಅವರು ಪ್ರೇರಣೆ ಅಲ್ಲ. ನನಗೆ ನನ್ನ ತಂದೆ- ತಾಯಿ ಪ್ರೇರಣೆ ಎಂದು ತಿಳಿಸಿದರು.

    ಸಚಿವ ಸಂಪುಟ ವಿಸ್ತರಣೆಯಲ್ಲಿ ಲಿಂಗಾಯತರಿಗೆ ಅನ್ಯಾಯವಾಗಿಲ್ಲ. ಅಂಜಲಿ ನಿಂಬಾಳ್ಕರ್ ಅವರಿಗೆ ಸಂಸದೀಯ ಸ್ಥಾನ ನೀಡಿದ್ದಕ್ಕೆ ಸಂತೋಷವಿದೆ. ಬೆಳಗಾವಿಗೆ ಎರಡು ಸಂಸದೀಯ ಸ್ಥಾನ ಮತ್ತು ಒಂದು ಮಂತ್ರಿ ಸ್ಥಾನ ನೀಡಿದ್ದಾರೆ. ನಾನು ಎಲ್ಲೂ ಕೂಡ ಮಂತ್ರಿ ಪದವಿ ಬೇಕು ಅಂತ ಹೇಳಿಲ್ಲ. ಹೈಕಮಾಂಡ್ ಹೇಗೆ ಹೇಳುತ್ತೆ ಅದೇ ರೀತಿ ನಡೆದುಕೊಳ್ಳುತ್ತೇನೆ. ಅದರ ಚೌಕಟ್ಟಿನಲ್ಲಿ ನಾನಿದ್ದೀನಿ. ಅವರು ಏನು ಹೇಳುತ್ತಾರೋ ಅದು ನನಗೆ ಪ್ರಸಾದ. ನಾನು ನನ್ನ ಪಕ್ಷದ ಸಿಪಾಯಿಯಾಗಿ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv