Tag: ಎಚ್ ವಿಶ್ವನಾಥ್

  • ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಸೈಲೈಂಟಾಗಿ ಮೈತ್ರಿ ಆಗಿದ್ದವು: ಎಚ್. ವಿಶ್ವನಾಥ್

    ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಸೈಲೈಂಟಾಗಿ ಮೈತ್ರಿ ಆಗಿದ್ದವು: ಎಚ್. ವಿಶ್ವನಾಥ್

    ಮೈಸೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಳಗೊಳಗೆ ಮೈತ್ರಿ ಮಾಡಿಕೊಂಡಿದ್ದವು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಆರೋಪಿಸಿದ್ದಾರೆ.

    ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿರುವುದು ಕೇವಲ ಮಾತಿನ ಸರ್ಕಾರವಷ್ಟೇ. ಇಲ್ಲಿಯವರೆಗೂ ಕಾಮ್ ಕಿ ಬಾತ್ (ಕೆಲಸಗಳು) ಆಗುತ್ತಲೆ ಇಲ್ಲ. ಬರೀ ಮಾತಿನ ಆಡಳಿತ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಸರ್ವಾಧಿಕಾರಿಯ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ. ಅಲ್ಲದೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯು ಒಳಗೊಳಗೆ ಮೈತ್ರಿ ಮಾಡಿಕೊಂಡಿದ್ದವು. ಎಂ.ಬಿ.ಪಾಟೀಲ್ ಅವರನ್ನು ಗೆಲ್ಲಿಸೋಕೆ ಉತ್ತರ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಮೈತ್ರಿ ಮಾಡಿಕೊಂಡಿದ್ದವು ಎಂದು ಗಂಭೀರವಾಗಿ ಆರೋಪಿಸಿದರು.

    ಕಾಂಗ್ರೆಸ್ಸಿನವರೇ ನೀವು ಸೆಕ್ಯೂಲರ್ ಆಗಿಯೇ ಇರಿ, ಅದನ್ನು ನೀವೂ ಯಾವತ್ತು ಮಿಕ್ಸ್ ಮಾಡಬೇಡಿ. ಕಾಂಗ್ರೆಸ್ ಸೆಕ್ಯೂಲರ್ ಪಾರ್ಟಿ ಎಂದು ಕಾಂಗ್ರೆಸ್ಸಿಗೆ ಬುದ್ಧಿಮಾತು ಹೇಳಿದರು. ಅಲ್ಲದೇ ಈ ಮೊದಲು ನೀವು ನಮ್ಮನ್ನು ಬಿಜೆಪಿಯ ಬಿ ಟೀಮ್ ಎಂದು ಕರೆದಿದ್ದಿರಿ, ನಾವು ಬಿಜೆಪಿ ಜೊತೆ ಹೋಗಿ ಸರ್ಕಾರ ರಚನೆ ಮಾಡಿಲ್ಲವೆಂದು ಪರೋಕ್ಷವಾಗಿ ಕಾಂಗ್ರೆಸ್ಸನ್ನು ಟೀಕಿಸಿದರು.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತೇನೆ. ಅವರು ನೂರು ವರ್ಷ ಚೆನ್ನಾಗಿರಲಿ, ಅಲ್ಲದೇ ಇನ್ನು ಮುಂದೆ ಅವರು ರಾಷ್ಟ್ರೀಯ ನಾಯಕರಾಗಿ ಬೆಳೆಯಲಿ ಎಂದು ಹಾರೈಸಿ, ನಿಮಗೆ ಇದಕ್ಕಿಂತ ಬೇರೆನಾದರೂ ಬೇಕಾ, ಸದ್ಯ ನಮ್ಮ ನಡುವಿನ ಸಂಬಂಧ ಈಗ ಹೇಗಿದೆ ಎಂದು ವ್ಯಂಗ್ಯವಾಗಿ ಉತ್ತರಿಸಿದರು.

    ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ದುಂದು ವೆಚ್ಚ ವಿಚಾರ ಕುರಿತು ಬಿಜೆಪಿಗೆ ತಿರುಗೇಟು ನೀಡಿದ ಅವರು, ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗ ದೇಶ-ವಿದೇಶಗಳ ಅತಿಥಿಗಳನ್ನು ಆಹ್ವಾನಿಸಲಾಗಿತ್ತು, ಆಗಲೂ ಸಾರ್ವಜನಿಕರ ಹಣವನ್ನು ಬಳಕೆ ಮಾಡಿಕೊಂಡಿಲ್ಲವೇ ಹಾಗೂ ಅಂದಿನ ಖರ್ಚನ್ನ ಖುದ್ದು ಮೋದಿ ಜೇಬಿನಿಂದ ಮಾಡಿದ್ದಾರ ಎಂದು ಬಿಜೆಪಿ ನಾಯಕರಿಗೆ ಪ್ರಶ್ನಿಸಿದರು.

    ಶಾದಿ ಭಾಗ್ಯಕ್ಕೆ ಅನುದಾನವನ್ನು ನಮ್ಮ ಸರ್ಕಾರ ಕಡಿಮೆ ಮಾಡಿಲ್ಲ. ಹಿಂದಿನ ಸರ್ಕಾರ ತನ್ನ ಕೊನೆ ಬಜೆಟ್ ನಲ್ಲಿ ಅನುದಾನ ಕಡಿಮೆ ಮಾಡಿತ್ತು. ಆದರೆ ಅದನ್ನು ಈಗ ನಮ್ಮ ತಲೆಗೆ ಯಾಕೆ ಕಟ್ಟುತ್ತಿದ್ದೀರಿ ಎಂದು ಪ್ರಶ್ನಿಸಿ, ನಾವೇನೂ ಅನುದಾನ ಕಡಿತ ಮಾಡಿಲ್ಲ. ಒಮ್ಮೆ ಬಜೆಟ್ ಪುಸ್ತಕ ನೋಡಿ ಆರೋಪ ಮಾಡಿ. ಅನ್ನಭಾಗ್ಯದ ಅಕ್ಕಿ ಕಡಿಮೆ ಮಾಡಿದ್ದಕ್ಕೆ ಸಮರ್ಥನೆ ನೀಡಿದ ಅವರು, ಹಿಂದಿನ ಸರ್ಕಾರ ಚುನಾವಣಾ ದೃಷ್ಟಿಯಿಂದ 25 ಲಕ್ಷ ಹೆಚ್ಚುವರಿ ಕಾರ್ಡ್ ಅನ್ನು ಬೇಕಾಬಿಟ್ಟಿಯಾಗಿ ಹಂಚಿತ್ತು. ಹೀಗಾಗಿ ಅಕ್ಕಿ ಕಡಿಮೆ ಮಾಡಬೇಕಾದ ಅನಿರ್ವಾಯತೆಯಿಂದ ಅಕ್ಕಿ ಮಾಡಿದ್ದೇವೆ ಎಂದರು.

    ಇದೇ ವೇಳೆ ಪ್ರಜ್ವಲ್ ರೇವಣ್ಣ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತು ಮಾತನಾಡಿ, ಪ್ರಜ್ವಲ್ ರೇವಣ್ಣ ಒಬ್ಬ ನಿಷ್ಠಾವಂತ ನಾಯಕರಾಗಿದ್ದಾರೆ. ಅವರಿಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಮೇಲೆ ಒಳ್ಳೆಯ ಹಿಡಿತ ಇದೆ. ಆದುದರಿಂದ ಅಂತಹ ನಾಯಕರು ನಮ್ಮ ಪಕ್ಷಕ್ಕೆ ಬೇಕು. ಕೇವಲ ಅವರನ್ನು ದೇವೇಗೌಡರ ಮೊಮ್ಮಗ ಅನ್ನೋದನ್ನ ಪಕ್ಕಕ್ಕೆ ಸರಿಸಿ ಮಾತನಾಡಿ. ಅಲ್ಲದೇ ನನ್ನ ಅವಧಿಯಲ್ಲಿ ಪಕ್ಷದಲ್ಲಿ ಅವರ ಪಾತ್ರ ಇನ್ನೂ ಚೆನ್ನಾಗಿ ಇರಲಿದೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಮೋದಿ ಅಪ್ಪಿದ ರಾಹುಲ್ ನಡೆ ಮಕ್ಕಳಾಟ – ಎಚ್.ವಿಶ್ವನಾಥ್

    ಮೋದಿ ಅಪ್ಪಿದ ರಾಹುಲ್ ನಡೆ ಮಕ್ಕಳಾಟ – ಎಚ್.ವಿಶ್ವನಾಥ್

    ಬೆಂಗಳೂರು: ಲೋಕಸಭೆ ಸದನದ ವೇಳೆ ಪ್ರಧಾನಿ ನರೇಂದ್ರ ಮೋದಿಯನ್ನು ಅಪ್ಪಿಕೊಂಡ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವರ್ತನೆಯನ್ನು ಮಿತ್ರ ಪಕ್ಷ ಜೆಡಿಎಸ್‍ನ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಶ್ವನಾಥ್ ಅವರು, ರಾಹುಲ್ ಅವರ ವರ್ತನೆ ಹುಡುಗಾಟ, ಮಕ್ಕಳಾಟ ರೀತಿ ಇದೆ ಎಂದು ಹೇಳಿದ್ದಾರೆ. ಇತ್ತ ವಿಶ್ವನಾಥ್ ಹೇಳಿಕೆಯನ್ನೇ ಉಲ್ಲೇಖಿಸಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಹಾಮೈತ್ರಿ ಕೂಟದ ಬಗ್ಗೆ ವ್ಯಂಗ್ಯವಾಡಿದ್ದಾರೆ. ತಮ್ಮ ಪ್ರಧಾನಿ ಅಭ್ಯರ್ಥಿ ಬಗ್ಗೆ ಮಹಾಮೈತ್ರಿಕೂಟ ಯೋಚನೆ ಮಾಡುತ್ತಿರುವುದು ಇದನ್ನೇ. `ರಾಹುಲ್ ಗಾಂಧಿ ಬಗ್ಗೆ ಮಹಾಮೈತ್ರಿ ಕೂಟದ ಪಕ್ಷವೊಂದು ಅರ್ಥ ಮಾಡ್ಕೊಂಡಿದ್ದು, ಅವರು ಸರ್ಕಾರ ರಚನೆ ಮಾಡೋದು ಬರೀ ಕನಸಷ್ಟೇ ಎಂದು ಬಿಎಸ್‍ವೈ ಕಾಲೆಳೆದಿದ್ದಾರೆ.

    ಇದಕ್ಕೂ ಮುನ್ನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಅಧಿಕೃತವಾಗಿ ಪಕ್ಷದ ಕಚೇರಿಯಲ್ಲಿ ಕೆಲಸ ಪ್ರಾರಂಭ ಮಾಡಿದ ಬಳಿಕ ಮಾತನಾಡಿದ ವಿಶ್ವನಾಥ್ ಅವರು, ಹಿಂದೆ ಜನತ ಪರಿವಾರದಲ್ಲಿದ್ದ ಎಲ್ಲಾ ನಾಯಕರನ್ನು ಮತ್ತೆ ಪಕ್ಷಕ್ಕೆ ಕರೆತಲು ಯತ್ನಿಸುತ್ತೇನೆ. ಯಾವುದೇ ಕಾರಣದಿಂದ ಅವರು ಪಕ್ಷ ಬಿಟ್ಟು ಹೊರ ನಡೆದಿದ್ದರು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಅದ್ದರಿಂದ ಮತ್ತೆ ಪಕ್ಷಕ್ಕೆ ಬಂದು ಜನತಾ ಪರಿವಾರವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಹೊಂದಾಣಿಕೆಯಿಲ್ಲ. ಜಿಲ್ಲೆಯ ಸಮಿತಿಗಳು ಪಕ್ಷದ ಪರವಾಗಿ ಕೆಲಸ ಮಾಡಿ ಹೆಚ್ಚು ಸ್ಥಾನ ಗೆಲ್ಲಿಸಬೇಕು. ಸದ್ಯ ಇರುವ ರಾಜ್ಯ ಸಮಿತಿಯನ್ನ ವಿಸರ್ಜನೆ ಮಾಡಲಿದ್ದು, ಹೊಸ ಸಮಿತಿಯನ್ನ ಆದಷ್ಟು ಬೇಗ ರಚನೆ ಮಾಡುತ್ತೇವೆ. ಹಿರಿಯರು, ಯುವಕರು, ಮಹಿಳೆಯರು ಈ ಸಮಿತಿಯಲ್ಲಿ ಇರುತ್ತಾರೆ. ಜಿಲ್ಲಾ ಸಮಿತಿಗಳು ಸ್ಥಳೀಯ ಚುನಾವಣೆಯವರೆಗೂ ಹಾಗೇ ಮುಂದುವರೆಯುತ್ತದೆ. ನನ್ನ ಮೊದಲ ಪ್ರವಾಸ ಉತ್ತರ ಕರ್ನಾಟಕದಿಂದಲೇ ಪ್ರಾರಂಭ ಮಾಡಲಿದ್ದು, ಉತ್ತರ ಕರ್ನಾಟಕಕ್ಕೆ ಜೆಡಿಎಸ್ ಕೊಡುಗೆ ಏನು ಎಂಬುವುದನ್ನು ಜನತೆಗೆ ತಿಳಿಸುತ್ತೇವೆ ಎಂದು ಹೇಳಿದರು.

    ಬಳಿಕ ಜೆಪಿ ಭವನದಲ್ಲಿ ಮಾತನಾಡಿದ ಅವರಯ ಸಿಎಂ ದುರ್ಬಲರಾಗಿದ್ದು, ರೇವಣ್ಣ ಸೂಪರ್ ಸಿಂಗ್ ಎಂಬ ಬಿಜೆಪಿ ಮುಖಂಡರ ಆರೋಪಕ್ಕೆ ತಿರುಗೇಟು ಕೊಟ್ಟರು. ಜವಾಬ್ದಾರಿಯುತ ರಾಷ್ಟ್ರೀಯ ಪಕ್ಷದ ನಾಯಕರು ಈ ರೀತಿ ಮಾತನಾಡುವುದು ಸರಿಯಲ್ಲ. ನಮ್ಮ ದೇಶದಲ್ಲಿ ವಾಕ್ ಸ್ವಾತಂತ್ರ್ಯ ಇರುವುದರಿಂದ ಯಾರು ಬೇಕಾದರು ಮಾತನಾಡಬಹುದು. ದೇವೇಗೌಡರು ದೇಶಕ್ಕೆ ಪ್ರಧಾನಿ ಆದವರು. ಅವರ ರಾಜಕೀಯ ಅನುಭವದಲ್ಲಿ ಸಲಹೆ ಪಡೆಯೋದು ತಪ್ಪಲ್ಲ. ಸಿಎಂ ಇದನ್ನೆ ಮಾಡುತ್ತಿದ್ದಾರೆ ಅಷ್ಟೇ. ದೇವೇಡಗೌಡರು ಸರ್ಕಾರದ ಫೈಲ್ ನೋಡುತ್ತಿಲ್ಲ. ಬಿಜೆಪಿ ಅವರು ಬಾಲಿಶವಾಗಿ ನಡೆದುಕೊಳ್ಳಬಾರದು ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಪರಿವಾರದಿಂದ ಹೊರ ಹೋದವರೆಲ್ಲರೂ ಪಕ್ಷಕ್ಕೆ ವಾಪಸ್ಸಾಗಬೇಕು- ಎಚ್ ವಿಶ್ವನಾಥ್

    ಪರಿವಾರದಿಂದ ಹೊರ ಹೋದವರೆಲ್ಲರೂ ಪಕ್ಷಕ್ಕೆ ವಾಪಸ್ಸಾಗಬೇಕು- ಎಚ್ ವಿಶ್ವನಾಥ್

    ಬೆಂಗಳೂರು: ಜನತಾ ಪಕ್ಷ ಬಿಟ್ಟಿರುವ ಎಲ್ಲರೂ ಪಕ್ಷಕ್ಕೆ ವಾಪಸ್ ಆಗಬೇಕು. ಜನತಾ ಪರಿವಾರದಿಂದ ಹೊರ ಹೋದವರನ್ನ ವಾಪಸ್ ಬರುವಂತೆ ಮನವಿ ಮಾಡ್ತೀನಿ. ಜೆಡಿಎಸ್ ಪಕ್ಷ ಬೆಳವಣಿಗೆಗೆ ಎಲ್ಲರೂ ಒಗ್ಗೂಡಿಸೋದು ನನ್ನ ಕೆಲಸ ಅಂತ ಹುಣೂಸುರು ಶಾಸಕ ಎಚ್ ವಿಶ್ವನಾಥ್ ತಿಳಿಸಿದ್ದಾರೆ.

    ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ ಅವರು, ದೊಡ್ಡ ಜವಾಬ್ದಾರಿ ವರಿಷ್ಠರು ಕೊಟ್ಟಿದ್ದಾರೆ. ಅದನ್ನ ನಿಭಾಯಿಸಲು ಶಕ್ತಿ ನೀಡುವಂತೆ ದೇವರಲ್ಲಿ ಬೇಡಿಕೊಂಡಿದ್ದೇನೆ. ಸಿಎಂ ಆಗಿ ಕುಮಾರಸ್ವಾಮಿ ಆದಾಗಿನಿಂದ ರಾಜ್ಯಾದ್ಯಂತ ಹೆಚ್ಚು ಮಳೆ ಆಗಿದೆ ಅಂದ್ರು.

    ರಾಜಕೀಯವಾಗಿ ಜರ್ಜರಿತವಾದಾಗ ದೇವೇಗೌಡರು, ಕುಮಾರಸ್ವಾಮಿ ನನಗೆ ಅವಕಾಶ ನೀಡಿದ್ರು. ಹುಣಸೂರಿನಿಂದ ಟಿಕೆಟ್ ನೀಡಿ ಗೆಲ್ಲಿಸಿದ್ರು. ಈಗ ನನ್ನ ಮೇಲೆ ಅಭಿಮಾನವಿಟ್ಟು ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದಾರೆ. ರಾಜ್ಯದ ಜವಾಬ್ದಾರಿ ನನಗೆ ನೀಡಿದ್ದಾರೆ. ಮುಂದೆ ಸ್ಥಳೀಯ ಸಂಸ್ಥೆ, ಲೋಕಸಭೆ ಚುನಾವಣೆ ಇದೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹೊಸ ರೂಪ ನೀಡುತ್ತೇನೆ. ಪಕ್ಷ ಬಿಟ್ಟಿರುವ ಎಲ್ಲಾ ನಾಯಕರು ಪಕ್ಷಕ್ಕೆ ವಾಪಸ್ ಕರೆದುಕೊಂಡು ಬರುತ್ತೇವೆ. ರಾಜ್ಯದ ಅಭಿವೃದ್ಧಿಗೆ ಹೋದವರು ವಾಪಸ್ ಪಕ್ಷಕ್ಕೆ ಬರಬೇಕು ಅಂತ ಹೇಳಿದ್ರು.

    ಬಿಜೆಪಿಗೆ ತಿರುಗೇಟು:
    ಮಾತೋಡೋರಿಗೆ ಬೇಡ ಅನ್ನೋಕೆ ಆಗೊಲ್ಲ. ಪ್ರಜಾಪ್ರಭುತ್ವದಲ್ಲಿ ಮಾತನಾಡೋದಕ್ಕೆ ಅವಶ್ಯಕತೆ. ಆದ್ರೆ ರಾಷ್ಟ್ರೀಯ ಪಕ್ಷದ ನಾಯಕರು ಹೇಗೆ ಮಾತನಾಡಬೇಕು ಅನ್ನೋದು ತಿಳಿದುಕೊಳ್ಳಬೇಕು ಅಂತ ಸೂಪರ್ ಸಿಎಂ, ಸುಪ್ರೀಂ ಸಿಎಂ ಎಂಬ ಬಿಜೆಪಿ ಟ್ವಿಟ್ ಗೆ ತಿರುಗೇಟು ನೀಡಿದ್ರು.

    ದೇವೇಗೌಡರು ಸರ್ಕಾರದ ಫೈಲ್ ನೋಡ್ತಿಲ್ಲ ಅನ್ನೋ ವಿಚಾರದ ಕುರಿತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದೇವೇಗೌಡರು ದೇಶದ ಪ್ರಧಾನಿ ಆದವರು. ರಾಜಕೀಯ ಅನುಭವ ಅವರಿಗೆ ಹೆಚ್ಚಿದೆ. ಅವರ ರಾಜಕೀಯ ಅನುಭವದಲ್ಲಿ ಸಲಹೆ ಪಡೆದ್ರೆ ಏನು ತಪ್ಪು ಅಂತ ಪ್ರಶ್ನಿಸಿದ್ರು.

    ಬಾಲಿಶವಾಗಿ ಬಿಜೆಪಿ ಅವರು ನಡೆದುಕೊಳ್ಳಬಾರದು. ಯಡಿಯೂರಪ್ಪ ಅವರು ಸುಮ್ಮನೆ ಮಾತನಾಡಬಾರದು. ಜನರು ಒಪ್ಪಿ ಸಮ್ಮಿಶ್ರ ಸರ್ಕಾರ ಆಗಿದೆ. ಸೇವೆಗಾಗಿ ನಾವು ಇಬ್ಬರೂ ವೋಟ್ ಕೇಳಿದ್ದೇವೆ. ಜಗಳ ಮಾಡ್ತೀವಿ ಅಂತ ವೋಟ್ ಕೇಳಿಲ್ಲ. ಜನತಾಂತ್ರಿಕವಾಗಿ ಎಲ್ಲರು ಕೆಲಸ ಮಾಡೋಣ. ಯಡಿಯೂರಪ್ಪ, ಅವರ ಪಕ್ಷದ ನಾಯಕರು ನಮ್ಮ ಜೊತೆ ಕೈ ಜೋಡಿಸಬೇಕು. ಸಾಲಮನ್ನಾ ವಿಚಾರದಲ್ಲಿ ವಿಪಕ್ಷಗಳು ಗೊಂದಲ ಮೂಡಿಸುತ್ತಿವೆ. ಸಹಕಾರಿ ಬ್ಯಾಂಕ್ ನ ಸಾಲಮನ್ನಾ ಕುರಿತು ಆದೇಶ ಆಗುತ್ತಿದೆ. ರಾಷ್ಟ್ರೀಯ ಬ್ಯಾಂಕ್ ಗಳ ಸಾಲಮನ್ನಾ ಕೂಡಾ ಆದಷ್ಟು ಬೇಗ ಆದೇಶ ಆಗುತ್ತೆ. ಯಾರು ಸುಮ್ಮನೆ ಗೊಂದಲ ಸೃಷ್ಟಿ ಮಾಡಬಾರದು ಅಂತ ಸ್ಪಷ್ಟಪಡಿಸಿದ್ರು.

    ಕಾರ್ಯಕರ್ತರಿಗೆ ಶರವಣ ಕರೆ:
    ಸಿಎಂ ಕುಮಾರಸ್ವಾಮಿ 18 ಗಂಟೆ ಕೆಲಸ ಮಾಡ್ತಿದ್ದಾರೆ. ಇಡೀ ರಾಜ್ಯ ನಮ್ಮನ್ನ ನೋಡುತ್ತಿದೆ. ಪಕ್ಷದ ಕಾರ್ಯಕರ್ತರು ಮುಂದಿನ ಚುನಾವಣೆಗೆ ರೆಡಿಯಾಗಬೇಕು. ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಎಲ್ಲಾ ಶ್ರಮ ವಹಿಸಬೇಕು ಅಂತ ಪರಿಷತ್ ಸದಸ್ಯ ಶರವಣ ಕರೆ ನೀಡಿದ್ರು.

    ದೇವಾಲಯ, ಜೆಡಿಎಸ್ ವರಿಷ್ಠರ ಭೇಟಿ:
    ಅಧಿಕಾರ ಸ್ವೀಕಾರಕ್ಕೂ ವಿಶ್ವನಾಥ್ ಅವರು, ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನ ನಂತರ ಗವಿ ಗಂಗಾಧರೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು. ದೇವಸ್ಥಾನಕ್ಕೆ ಆಗಮಿಸುತ್ತಿದ್ದಂತೆಯೇ ಕಾರ್ಯಕರ್ತರು ಪಟಾಕಿ ಸಿಡಿಸಿ ಸ್ವಾಗತಿಸಿದ್ದರು. ಈ ವೇಳೆ ವಿಶ್ವನಾಥ್ ಗೆ ಪರಿಷತ್ ಸದಸ್ಯ ಶರವಣ ಸಾಥ್ ನೀಡಿದ್ರು. ಬಳಿಕ ಅವರು ಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ರು. ಆ ನಂತರ ಜೆಡಿಎಸ್ ಕಚೇರಿಯಲ್ಲಿ ಎಚ್.ವಿಶ್ವನಾಥ್ ಅವರು ನೂತನ ರಾಜ್ಯಾಧ್ಯಕ್ಷರಾಗಿ ಅಧಿಕೃತವಾಗಿ ಕೆಲಸ ಆರಂಭಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಎಚ್.ವಿಶ್ವನಾಥ್ ನೇಮಕ: ಲೋಕಲ್ ಚುನಾವಣೆ ಮೈತ್ರಿಗೆ ಎಚ್‍ಡಿಡಿ ಟ್ವಿಸ್ಟ್

    ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಎಚ್.ವಿಶ್ವನಾಥ್ ನೇಮಕ: ಲೋಕಲ್ ಚುನಾವಣೆ ಮೈತ್ರಿಗೆ ಎಚ್‍ಡಿಡಿ ಟ್ವಿಸ್ಟ್

    ಬೆಂಗಳೂರು: ಮಾಜಿ ಸಚಿವ ಎಚ್.ವಿಶ್ವನಾಥ್ ಅವರನ್ನು ಸರ್ವಾನುಮತದಿಂದ ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದೇವೆ ಎಂದು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

    ಪಕ್ಷದ ಕಚೇರಿಯಾದ ಜೆಪಿ ಭವನದಲ್ಲಿ ಜೆಡಿಎಸ್ ಬಾವುಟವನ್ನು ಎಚ್.ಡಿ.ಕುಮಾರಸ್ವಾಮಿ ಅವರು ಎಚ್.ವಿಶ್ವನಾಥ್ ಅವರಿಗೆ ಹಸ್ತಾಂತರಿಸಿ, ಅಧಿಕಾರ ಒಪ್ಪಿಸಿದರು.

    ಸುದ್ದಿಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಒಬ್ಬರೇ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡುವುದು ಕಷ್ಟ. ಒಂದೂವರೆ ತಿಂಗಳ ಹಿಂದೆಯೇ ಕುಮಾರಸ್ವಾಮಿಯೂ ರಾಜ್ಯಾಧ್ಯಕ್ಷ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸುವಂತೆ ಕೇಳಿದ್ದರು ಎಂದು ಹೇಳಿದರು.

    ಹಿಂದೆ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಎಂ.ಪಿ.ಪ್ರಕಾಶ್ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಒಬ್ಬ ವ್ಯಕ್ತಿಗೆ ಒಂದೇ ಸ್ಥಾನ ಎನ್ನುವ ಉದ್ದೇಶದಿಂದ ರಾಜ್ಯಾಧ್ಯಕ್ಷ ಜವಾಬ್ದಾರಿಯನ್ನು ಎಚ್.ವಿಶ್ವನಾಥ್ ಅವರಿಗೆ ವಹಿಸಲಾಗಿದೆ ಎಂದರು.

    ಚುನಾವಣೆ ಮೈತ್ರಿಗೆ ಟ್ವಿಸ್ಟ್:
    ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಕಷ್ಟ. ಕಾಂಗ್ರೆಸ್ ಜೊತೆಗೆ ನಮಗೆ ಒಡಂಬಡಿಕೆ ಇದೆ. ಆದರೆ ಸ್ಥಾನಗಳ ಸಂಚಿಕೆಯಲ್ಲಿ ಅವರಿಗೂ ಕಷ್ಟವಾಗುತ್ತದೆ. ಕಾಂಗ್ರೆಸ್ ನಾಯಕರು ಚರ್ಚೆ ಮಾಡಿದ್ದಾರೆ. ಅದರಲ್ಲಿ ಯಾವುದೇ ದೋಷವಿಲ್ಲ. ನಮ್ಮ ಪಕ್ಷವು ಪ್ರತ್ಯೇಕವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಿಸಲಿದೆ. ಚುನಾವಣೆಯಲ್ಲಿ ದೋಸ್ತಿ ಪಕ್ಷಗಳ ಮಧ್ಯೆ ತಿಕ್ಕಾಟ ಇರುವುದಿಲ್ಲ ಎಂದು ಟ್ವಿಸ್ಟ್ ನೀಡಿದ್ದಾರೆ.

    ಯುವಕರಿಗೆ ಪಕ್ಷದಲ್ಲಿ ಮಣೆ:
    ಪಕ್ಷದ ಸಂಘಟನೆ ಉದ್ದೇಶದಿಂದ ಹೊಸದಾಗಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಸಂಪೂರ್ಣವಾಗಿ ಯುವಕರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಜೊತೆಗೆ ಹಿಂದುಳಿದವರು, ಮುಸ್ಲಿಂ ಸೇರಿದಂತೆ ಇತರರಿಗೂ ಸ್ಥಾನ, ಜವಾಬ್ದಾರಿ ನೀಡಲಾಗುತ್ತದೆ. ಪಕ್ಷದ ಹಿರಿಯರನ್ನು ನಾವು ಕಡೆಗಣಿಸುತ್ತಿಲ್ಲ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೆ ಮುಂದುವರಿಯುತ್ತೇವೆ. ಮುಂದಿನ 10 ದಿನಗಳಲ್ಲಿ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.

    ರಾಷ್ಟ್ರೀಯ ಪಕ್ಷವೊಂದು ಸಾಲಮನ್ನಾ ವಿಚಾರದಲ್ಲಿ ಬೇರೆ ಅರ್ಥ ಕಲ್ಪಿಸಿ, ಗೊಂದಲ ಸೃಷ್ಟಿಸುತ್ತಿದೆ ಎಂದು ಬಿಜೆಪಿ ವಿರುದ್ಧ ದೂರಿದ ಅವರು, ಕುಮಾರಸ್ವಾಮಿ ಬಜೆಟ್ ಮೂರು ಜಿಲ್ಲೆಗೆ ಸೀಮಿತವಾಗಿಲ್ಲ. ಇಂತಹ ಆರೋಪ ತೊಡೆಯಲು ಕಿರುಹೊತ್ತಿಗೆ ಬಿಡುಗಡೆ ಮಾಡಲಾಗುತ್ತದೆ. ಅದನ್ನು ರಾಜ್ಯದ ಮನೆ ಮನೆಗಳಿಗೆ ಹಂಚಿ ಸತ್ಯವನ್ನು ಸಾಬೀತು ಮಾಡುತ್ತೇವೆ ಎಂದು ತಿರುಗೇಟು ನೀಡಿದರು.

    ವಿಧಾನಸಭೆ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ 5 ವರ್ಷ, ನಾನು ಒಂದು ವರ್ಷ ಹಾಗೂ ಕುಮಾರಸ್ವಾಮಿ 20 ತಿಂಗಳು ಮುಖ್ಯಮಂತ್ರಿ ಆಗಿದ್ದೇವೆ. ಯಾರು ಉತ್ತರ ಕರ್ನಾಟಕಕ್ಕೆ ಹೆಚ್ಚು ಕೊಡುಗೆ ನೀಡಿದ್ದಾರೆಂದು ವಿಧಾನಸಭೆಯಲ್ಲಿ ಚರ್ಚೆಯಾಗಲಿ ಎಂದು ಸವಾಲು ಹಾಕಿದರು.

  • ನಿಮ್ಮ ರಾಜಕೀಯ ದ್ವೇಷಕ್ಕೆ ಕಾಗಿನೆಲೆ ಶ್ರೀಗಳನ್ನು ಬೀದಿಗೆ ತರಬೇಡಿ: ಭಕ್ತರ ಮನವಿ

    ನಿಮ್ಮ ರಾಜಕೀಯ ದ್ವೇಷಕ್ಕೆ ಕಾಗಿನೆಲೆ ಶ್ರೀಗಳನ್ನು ಬೀದಿಗೆ ತರಬೇಡಿ: ಭಕ್ತರ ಮನವಿ

    ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪರ-ವಿರೋಧ ಹೇಳಿಕೆ ನೀಡುವಲ್ಲಿ, ಕಾಗಿನೆಲೆ ಸ್ವಾಮೀಜಿ ಹಾಗೂ ಶಾಸಕ ಎಚ್.ವಿಶ್ವನಾಥ್ ಅವರ ನಡುವೆ ಭಾರೀ ವಾಗ್ದಾಳಿ ನಡೆದಿದ್ದು, ಸದ್ಯ ಇದನ್ನು ಶಮನಮಾಡಲು ಭಕ್ತರೇ ಮುಂದಾಗಿದ್ದಾರೆ.

    ಕಾಗಿನೆಲೆ ನಿರಂಜನಾನಂದಪುರಿ ಶ್ರೀಗಳ ವಿರುದ್ಧ ಶಾಸಕ ಎಚ್.ವಿಶ್ವನಾಥ್ ನೀಡಿರುವ ಹೇಳಿಕೆಯಿಂದ ಎಚ್ಚೆತ್ತ ಕಾಗಿನೆಲೆ ಮಠದ ಭಕ್ತರು, ಇನ್ನೊಂದು ವಾರದಲ್ಲಿ ವಿಶ್ವನಾಥ್ ಹಾಗೂ ಕಾಗಿನೆಲೆ ಶ್ರೀಗಳನ್ನು ಭೇಟಿ ಮಾಡಿಸಲು ಮುಂದಾಗಿದ್ದಾರೆ.

    ಪಬ್ಲಿಕ್ ಟಿವಿಗೆ ಮಾಹಿತಿ ನೀಡಿರುವ ಭಕ್ತರು, ನಿಮ್ಮ ರಾಜಕೀಯ ಭಿನ್ನಾಭಿಪ್ರಾಯದಿಂದ ಶ್ರೀಗಳನ್ನು ಬೀದಿಗೆ ತರುವ ಕೆಲಸ ಮಾಡಬೇಡಿ. ವಿಶ್ವನಾಥ್ ಅವರನ್ನು ಶ್ರೀಗಳಿಗೆ ನೇರವಾಗಿ ಭೇಟಿ ಮಾಡಿಸಿ, ತಮ್ಮ ಅಸಮಾಧಾನಕ್ಕೆ ಕಾರಣ ಏನು ಎನ್ನುವುದನ್ನು ಚರ್ಚೆ ಮಾಡಿಸುತ್ತೇವೆ. ಅಷ್ಟೇ ಅಲ್ಲದೇ ಸಭೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕರೆಸುವ ಪ್ರಯತ್ನ ಮಾಡುತ್ತೇವೆ ಎಂದರು.

    ಕಾಗಿನೆಲೆ ಮಠ ಯಾವತ್ತು ವಿಶ್ವನಾಥ್ ಅವರಿಗೆ ಮೋಸ ಅಥವಾ ಅನ್ಯಾಯ ಮಾಡಿಲ್ಲ. ಸಿದ್ದರಾಮಯ್ಯ, ವಿಶ್ವನಾಥ್, ಈಶ್ವರಪ್ಪ, ಬಂಡೆಪ್ಪ ಕಾಶೇಂಪುರ್ ಅವರ ಬೆಂಬಲಕ್ಕೆ ಮಠ ಇದ್ದೆ ಇರುತ್ತದೆ. ಆದರೆ ವಿಶ್ವನಾಥ್ ಅವರು ಈ ರೀತಿ ಹೇಳಿಕೆ ನೀಡುತ್ತಿರುವುದು ಸೂಕ್ತವಲ್ಲ. ತಮಗಾಗಿರುವ ಅನ್ಯಾಯದ ಬಗ್ಗೆ ಮಠದಲ್ಲಿಯೇ ಚರ್ಚೆ ಮಾಡಬೇಕೇ ಹೊರತು ಶ್ರೀಗಳ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಬಾರದು ಎಂದು ಸೂಚಿಸಿದರು.

  • ಸಚಿವ ಸ್ಥಾನ ವಂಚಿತ ಕೈ, ತೆನೆ ಘಟಾನುಘಟಿ ನಾಯಕರ ಪಟ್ಟಿ ಇಲ್ಲಿದೆ

    ಸಚಿವ ಸ್ಥಾನ ವಂಚಿತ ಕೈ, ತೆನೆ ಘಟಾನುಘಟಿ ನಾಯಕರ ಪಟ್ಟಿ ಇಲ್ಲಿದೆ

    ಬೆಂಗಳೂರು: ಕಾಂಗ್ರೆಸ್ ಜೆಡಿಎಸ್ ಸಚಿವ ಸಂಪುಟ ವಿಸ್ತರಣೆಯಾಗಿದ್ದರೂ, ಘಟಾನುಘಟಿ ನಾಯಕರು ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ.

    ಕಳೆದ ಸಂಪುಟದಲ್ಲಿದ್ದ ಬಹುತೇಕ ಶಾಸಕರು ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಸಚಿವ ಸ್ಥಾನ ಕೈತಪ್ಪಿರೋದಕ್ಕೆ ಎಂ.ಬಿ. ಪಾಟೀಲ್ ಅವರನ್ನ ವೇಣುಗೋಪಾಲ್, ಡಿ.ಕೆ ಶಿವಕುಮಾರ್, ದಿನೇಶ್ ಗುಂಡೂರಾವ್, ಜಾರ್ಜ್, ಪ್ರಿಯಾಂಕ್ ಖರ್ಗೆ, ಕೃಷ್ಣ ಭೈರೇಗೌಡ ಸೇರಿದಂತೆ ಹಲವರು ಸಮಾಧಾನ ಪಡಿಸಿದರು. ಆದರೆ ಎಂಬಿ ಪಾಟೀಲ್ ಅಭಿಮಾನಿಗಳು ಕೈ ನಾಯಕರಿಗೆ ಘೇರಾವ್ ಹಾಕಿದರು.  ಇದನ್ನು ಓದಿ: ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಯಾರಿಗೆ ಯಾವ ಖಾತೆ?

    ಸಚಿವ ಸ್ಥಾನ ವಂಚಿತ ಕಾಂಗ್ರೆಸಿಗರು :
    ರಾಮಲಿಂಗಾರೆಡ್ಡಿ, ಬಿಟಿಎಂ ಲೇಔಟ್
    ರೋಷನ್ ಬೇಗ್, ಶಿವಾಜಿನಗರ
    ಎಂ.ಬಿ. ಪಾಟೀಲ್, ಬಬಲೇಶ್ವರ
    ಎಚ್.ಕೆ. ಪಾಟೀಲ್, ಗದಗ

    ದಿನೇಶ್ ಗುಂಡೂರಾವ್, ಗಾಂಧಿನಗರ
    ಶಾಮನೂರು ಶಿವಶಂಕರಪ್ಪ, ದಾವಣಗೆರೆ ದಕ್ಷಿಣ
    ಸತೀಶ್ ಜಾರಕಿಹೊಳಿ, ಯಮಕನಮರಡಿ

    ಡಾ. ಸುಧಾಕರ್, ಚಿಕ್ಕಬಳ್ಳಾಪುರ
    ಬಿ.ಸಿ. ಪಾಟೀಲ್, ಹಿರೇಕೆರೂರು
    ಈಶ್ವರ ಖಂಡ್ರೆ, ಭಾಲ್ಕಿ

    ತನ್ವೀರ್ ಸೇಠ್, ನರಸಿಂಹರಾಜ
    ಎಂಟಿಬಿ ನಾಗರಾಜ್, ಹೊಸಕೋಟೆ
    ಎಸ್.ಆರ್. ಪಾಟೀಲ್, ಮೇಲ್ಮನೆ ಸದಸ್ಯ
    ಎಚ್.ಎಂ. ರೇವಣ್ಣ, ಮೇಲ್ಮನೆ ಸದಸ್ಯ

    ಜೆಡಿಎಸ್‍ನಲ್ಲಿ ಸಚಿವ ಸ್ಥಾನ ವಂಚಿತರು :
    ಎಚ್. ವಿಶ್ವನಾಥ್, ಹುಣಸೂರು
    ಬಸವರಾಜ ಹೊರಟ್ಟಿ, ಮೇಲ್ಮನೆ ಸದಸ್ಯ
    ಸತ್ಯನಾರಾಯಣ, ಶಿರಾ
    ಎಚ್.ಕೆ. ಕುಮಾರಸ್ವಾಮಿ, ಸಕಲೇಶಪುರ

      

    https://www.youtube.com/watch?v=YCVYC56FfQE

  • ಸಿದ್ದರಾಮಯ್ಯ 36 ಸಾವಿರ ಮತಗಳ ಅಂತರದಿಂದ ಸೋತಿದ್ದು ಯಾಕೆ: ಜೆಡಿಎಸ್ ಬಗ್ಗೆ ಕೇಳಿದ್ದಕ್ಕೆ ಮಾಧ್ಯಮಗಳಿಗೆ ವಿಶ್ವನಾಥ್ ಪ್ರಶ್ನೆ

    ಸಿದ್ದರಾಮಯ್ಯ 36 ಸಾವಿರ ಮತಗಳ ಅಂತರದಿಂದ ಸೋತಿದ್ದು ಯಾಕೆ: ಜೆಡಿಎಸ್ ಬಗ್ಗೆ ಕೇಳಿದ್ದಕ್ಕೆ ಮಾಧ್ಯಮಗಳಿಗೆ ವಿಶ್ವನಾಥ್ ಪ್ರಶ್ನೆ

    ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾಕೆ 36 ಸಾವಿರ ಮತಗಳ ಅಂತರದಿಂದ ಸೋತರು ಅಂತಾ ಅವರನ್ನೇ ಪ್ರಶ್ನಿಸಿ ಎಂದು ಜೆಡಿಎಸ್ ಶಾಸಕ ಎಚ್. ವಿಶ್ವನಾಥ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಗೆಲುವಿನ ಅಂತರ ಯಾಕೆ ಕಡಿಮೆ ಆಯ್ತು ಅಂತಾ ಪ್ರಶ್ನಿಸುವ ಮಾಧ್ಯಮಗಳು ಸಿದ್ದರಾಮಯ್ಯ 36 ಸಾವಿರ ಮತಗಳ ಅಂತರದಿಂದ ಸೋತಿದ್ದು ಯಾಕೆ? ಅವರನ್ನು ಈ ವಿಚಾರದಲ್ಲಿ ಪ್ರಶ್ನೆ ಮಾಡುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು.

    ನೀವು ಈ ಪ್ರಶ್ನೆಯನ್ನು ಅವರಿಗೆ ಕೇಳಿ. ನಾನೇ ಕೇಳಿದೆ ಅಂತಾನೆ ಹೇಳಿ ಸಿದ್ದರಾಮಯ್ಯಗೆ ಪ್ರಶ್ನಿಸಿ. ಅವರ 5 ವರ್ಷದ ಆಡಳಿತದ ಫಲವೇ ಈ ದೊಡ್ಡ ಅಂತರ ಅಥವಾ ಅವರ ನಡವಳಿಕೆ ಫಲವಾಗಿ ಈ ಅಂತರ ಬಂದಿದೆಯಾ ಅನ್ನುವುದು ಚರ್ಚೆ ಆಗಲಿ. ಅವರ ಸೋಲಿನ ಅಂತರದ ಬಗ್ಗೆ ಒಂದು ವಿಮರ್ಶೆ ನಡೆಯಲಿ ಎಂದು ವಿಶ್ವನಾಥ್ ಹೇಳುವ ಮೂಲಕ ಸಿದ್ದರಾಮಯ್ಯ ಅವರನ್ನು ಕೆಣಕಿದ್ದಾರೆ. ಈ ಮೂಲಕ ದೋಸ್ತಿ ಸರ್ಕಾರ ಅಧಿಕಾರದಲ್ಲಿದ್ದರೂ ಸಿದ್ದರಾಮಯ್ಯರ ವಿರುದ್ಧ ಶಾಸಕ ವಿಶ್ವನಾಥ್ ಅವರ ಹೇಳಿಕೆ ಅಚ್ಚರಿ ಮೂಡಿಸಿದೆ.

    ರೈತರ ಸಂಪೂರ್ಣ ಸಾಲ ಮನ್ನಾ ವಿಚಾರದ ಕುರಿತು ಮಾತನಾಡಿದ ಅವರು. ಇದೀಗ ನಮಗೆ ಪೂರ್ಣ ಬಹುಮತ ಇಲ್ಲ. ಹಾಗಾಗಿ ಒಂದು ವಾರ ಅವಕಾಶ ಕೊಡಿ ಎಂದಿದ್ದರು ಕುಮಾರಸ್ವಾಮಿ. ಆದರೂ ಬಿಜೆಪಿ ಬಂದ್ ಮಾಡಿದೆ. ಎಚ್‍ಡಿಕೆ ಕೇಳಿರುವುದು ಒಂದು ವಾರ ಮಾತ್ರ ಕಾಲವಕಾಶ ಹೊರತು ಒಂದು ತಿಂಗಳ ಕಾಲಾವಕಾಶ ಕೇಳಿಲ್ಲ. ಯಾವುದೇ ಕಾರಣಕ್ಕೂ ಸಾಲಮನ್ನಾದಿಂದ ಕುಮಾರಸ್ವಾಮಿ ಹಿಂದೆ ಸರಿಯಲ್ಲ ಎಂದರು.

    ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‍ನ ಜಿಟಿ ದೇವೇಗೌಡ ಅವರು 36,042 ಮತಗಳ ಅಂತರದಿಂದ ಸಿದ್ದರಾಮಯ್ಯನವರನ್ನು ಸೋಲಿಸಿದ್ದರೆ, ಕೃಷ್ಣರಾಜನಗರದಲ್ಲಿ ಸಾ.ರಾ.ಮಹೇಶ್ 1,779 ಮತಗಳ ಅಂತರದಿಂದ ಕಾಂಗ್ರೆಸ್‍ನ ಡಾ. ರವಿಶಂಕರ್ ಅವರನ್ನು ಮಣಿಸಿದ್ದರು. 2013ರಲ್ಲಿ 15,052 ಮತಗಳ ಅಂತರದಿಂದ ಸಾ.ರಾ. ಮಹೇಶ್ ಜಯಗಳಿಸಿದ್ದರು.

  • ಸಿದ್ದರಾಮಯ್ಯ ಆಡಳಿತದಲ್ಲಿ ಹಿಂದುಳಿದ ವರ್ಗಗಳಿಗೆ ಭಾರೀ ಅನ್ಯಾಯ, ಕುರುಬರಿಗೆ ಸಹಾಯ ಆಗಿಲ್ಲ: ಎಚ್.ವಿಶ್ವನಾಥ್

    ಸಿದ್ದರಾಮಯ್ಯ ಆಡಳಿತದಲ್ಲಿ ಹಿಂದುಳಿದ ವರ್ಗಗಳಿಗೆ ಭಾರೀ ಅನ್ಯಾಯ, ಕುರುಬರಿಗೆ ಸಹಾಯ ಆಗಿಲ್ಲ: ಎಚ್.ವಿಶ್ವನಾಥ್

    ಬೆಂಗಳೂರು: ಕುರುಬ ಸಮುದಾಯಕ್ಕೆ ಸಿಎಂ ಸಿದ್ದರಾಮಯ್ಯನವರಿಂದ ಯಾವುದೇ ಕೊಡುಗೆ ಸಿಕ್ಕಿಲ್ಲ ಎಂದು ಮಾಜಿ ಸಚಿವ, ಜೆಡಿಎಸ್ ಹಿಂದುಳಿದ ವರ್ಗದ ಮುಖಂಡ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

    ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಹಿಂದ ವರ್ಗಕ್ಕೆ ಸಿದ್ದರಾಮಯ್ಯನವರಿಂದ ಯಾವುದೇ ಆರ್ಥಿಕ ಬೆಂಬಲ ನೀಡಿಲ್ಲ. ಕುರುಬರಿಗೂ ಯಾವುದೇ ಸಹಾಯ ಮಾಡಿಲ್ಲ. ಅಹಿಂದ ವರ್ಗ ನಿಮ್ಮಿಂದ ದೂರವಾಗುತ್ತಿದೆ ಎಂಬುದನ್ನು ಮರೆಯಬೇಡಿ ಎಂದು ಹೇಳಿದರು.

    ರಾಷ್ಟ್ರೀಯ ಪಕ್ಷಗಳು ಅಹಿಂದ ನಾಯಕರ ಧ್ವನಿ ಅಡಗಿಸಿವೆ. ಬಿಜೆಪಿ ಸಂಗೊಳ್ಳಿ ರಾಯಣ್ಣ ರಾಯಣ್ಣ ಸಂಘಟನೆಯ ಧ್ವನಿ ಅಡಗಿಸಿದೆ. ಅಹಿಂದ, ಅಹಿಂದ ಎನ್ನುವ ಸೊಲ್ಲು ತಾವು ಕಾಂಗ್ರೆಸ್ ಬಂದ ಮೇಲೆ ಅಡಗಿ ಹೋಗಿದೆ. ಮುಖ್ಯಮಂತ್ರಿ ಆಗಿದ್ದೀರಿ. ನಿಮ್ಮಿಂದ ಯಾವ ಉಪಕಾರ ಆಯ್ತು? ಕುರುಬ ಸಮುದಾಯ ಈಗ ನಿಮ್ಮಿಂದ ವಿಮುಖವಾಗುತ್ತಿದೆ ಎಂದು ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ಕಿಡಿಕಾರಿದರು.

    ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ದೇವೇಗೌಡರು ಸಿಎಂ ಆಗಿದ್ದಾಗ ಬಹುತೇಕ ಖಾತೆಗಳನ್ನು ಹಿಂದುಳಿದ ವರ್ಗಗಳ ಮುಖಂಡರಿಗೆ ನೀಡಿದ್ದರು. ಫೆ.23ರಿಂದ ಹಿಂದುಳಿದ ವರ್ಗಗಳ ನಾಯಕರು ಪ್ರವಾಸ ಮಾಡಲಿದ್ದೇವೆ. ಫೆ.23ರಂದು ಶಿವಮೊಗ್ಗ, ಫೆ.24 ಮೈಸೂರು, 25 ಬೆಂಗಳೂರು, 26 ಬೀದರ್, 28 ರಂದು ಹಿಂದುಳಿದ ವರ್ಗಗಳ ಸಮಾವೇಶಗಳು ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

  • ಜಾರ್ಜ್ ಮೇಲಿನ ಕ್ರಿಮಿನಲ್ ಆರೋಪವನ್ನು ಸಿಎಂ ಸಮರ್ಥಿಸಿಕೊಳ್ಳೋದು ಸರಿಯಲ್ಲ- ಎಚ್ ವಿಶ್ವನಾಥ್

    ಜಾರ್ಜ್ ಮೇಲಿನ ಕ್ರಿಮಿನಲ್ ಆರೋಪವನ್ನು ಸಿಎಂ ಸಮರ್ಥಿಸಿಕೊಳ್ಳೋದು ಸರಿಯಲ್ಲ- ಎಚ್ ವಿಶ್ವನಾಥ್

    ಮೈಸೂರು: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಜಾರ್ಜ್ ಮೇಲೆ ಇರುವುದು ಕ್ರಿಮಿನಲ್ ಆರೋಪ. ಇದನ್ನು ಬೇರೆ ಪ್ರಕರಣಕ್ಕೆ ತಳಕು ಹಾಕಿ ಹೋಲಿಕೆ ಮಾಡುವುದು ಸರಿಯಲ್ಲ ಅಂತ ಮಾಜಿ ಸಂಸದ ಎಚ್ ವಿಶ್ವನಾಥ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರ್ಜ್ ಮೇಲಿನ ಆರೋಪವನ್ನು ಈ ರೀತಿ ಸಮರ್ಥಿಸಿಕೊಳ್ಳುವುದು ಸರಿಯಲ್ಲ. ರಾಜ್ಯದಲ್ಲಿ ಕಾನೂನು ಸರಿ ಇಲ್ಲ. ಅರಾಜಕತೆ ಸೃಷ್ಟಿಯಾಗಿದೆ ಎಂದರು.

    ಇದೇ ವೇಳೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ವಿಚಾರ ಪ್ರಸ್ತಾಪಿಸಿದ ಅವರು, ಈ ಬಾರಿ ಅಲ್ಪಸಂಖ್ಯಾತರು ಮತ್ತು ಹಿಂದುಳಿದವರಿಗೆ ಎಷ್ಟು ಟಿಕೆಟ್ ಕೊಡ್ತೀರಾ ಅಂತಾ ಸಿಎಂ ಹೇಳಬೇಕು. ಇಲ್ಲದೆ ಇದ್ದರೆ ಅಹಿಂದ ಉದ್ಧಾರಕ ಅಂತ ಕರೆದುಕೊಳ್ಳಬೇಡಿ. ಮುಸ್ಲಿಮರು ಕುರುಡಾಗಿ ಕಾಂಗ್ರೆಸ್ ಗೆ ಬೆಂಬಲ ನೀಡುತ್ತಿದ್ದಾರೆ. ಅವರಿಗೆ ಏನು ಮಾಡಿದ್ದೀರಿ ಅಂತ ಪ್ರಶ್ನಿಸಿದ್ರು.

    ಸಂಘ ಪರಿವಾರ ಮತ್ತು ಬಿಜೆಪಿ ಮುಖಂಡರ ಜೊತೆ ಸಿಎಂಗೆ ಒಳ ಒಪ್ಪಂದ ಇದೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಭಾಷಣ ಮಾಡುವ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಅರೆಸ್ಟ್ ಮಾಡೋಕೆ ಸಾಧ್ಯವಾಗಿದೆಯಾ? ಕರ್ತವ್ಯನಿರತ ಪೊಲೀಸರ ಬಗ್ಗೆ ಹೀನಾಯವಾಗಿ ಮಾತನಾಡಿದ ಆರ್‍ಎಸ್‍ಎಸ್ ನ ಜಗದೀಶ್ ಕಾರಂತ್ ಅವರನ್ನು ಬಂಧಿಸಿದ್ದೀರಾ? ಶ್ರೀರಾಮ ಸೇನೆ ಪ್ರಮೋದ್ ಮುತಾಲಿಕ್ ಗೆ ಇಲ್ಲಿ ರಕ್ಷಣೆ ಕೊಟ್ಟಿಲ್ವಾ? ಇವುಗಳನ್ನೆಲ್ಲಾ ಗಮನಿಸಿದಾಗ ಸಿಎಂ ಗೆ ಆರ್‍ಎಸ್‍ಎಸ್ ಜೊತೆ ಒಳಒಪ್ಪಂದ ಇರೋದು ಸ್ಪಷ್ಟ. ಇದು ನಿಮ್ಮ ಹಿಡನ್ ಅಜೆಂಡಾ. ಈ ಹಿಡನ್ ಅಜೆಂಡಾ ವಿಚಾರದಲ್ಲಿ ನೀವು ಬಿಜೆಪಿ ಅವರ ಅಪ್ಪ ಅಂತ ಕಿಡಿ ಕಾರಿದ್ರು.

    ಸಿದ್ದರಾಮಯ್ಯ ನನಗೆ ಮಾತನಾಡದಂತೆ ಬೆದರಿಕೆ ಹಾಕಿಸಿದ್ದಾರೆ. ನನ್ನ ಹುಡುಗರನ್ನೇ ನನ್ನ ವಿರುದ್ಧ ಎತ್ತಿಕಟ್ಟುತಿದ್ದಾರೆ ಅಂತ ಆರೋಪಿಸಿದ ಅವರು, ಕುರುಬ ಸಮಾಜ ಅವರನ್ನ ಬೆಳೆಸಿದೆ. ಕುರುಬ ಸಮಾಜ ಸಿದ್ದರಾಮಯ್ಯಗಿಂತ ನನ್ನನ್ನು ಇಷ್ಟ ಪಟ್ಟಿದೆ. ಆದ್ರೆ ಸಿದ್ದರಾಮಯ್ಯ ಇದನ್ನ ಸಹಿಸೋಕೆ ಆಗದೆ ನನ್ನ ವಿರುದ್ಧ ಜನರನ್ನ ಎತ್ತಿಕಟ್ಟಿದ್ದಾರೆ. ಇವೆಲ್ಲವು ನಡೆಯೋಲ್ಲ, ಮುಂದಿನ ಚುನಾವಣೆಯಲ್ಲಿ ಎಲ್ಲಾ ಗೊತ್ತಾಗಲಿದೆ ಅಂತ ಹೇಳಿದ್ರು.

    ಇನ್ನು ವಿಜಯಶಂಕರ್ ಪಕ್ಷ ತೊರೆಯುವ ವಿಚಾರದ ಕುರಿತು ಮಾತನಾಡಿದ ಅವರು, ಯಡಿಯೂರಪ್ಪ ವೈಯುಕ್ತಿಕವಾಗಿ ಒಳ್ಳೆಯ ವ್ಯಕ್ತಿ. ಮುಕ್ತ ಮನಸ್ಸಿನ ವ್ಯಕ್ತಿ. ಅವರ ಪಕ್ಷದಲ್ಲಿ ಸೋತ ಎಲ್ಲರಿಗೂ ಸ್ಥಾನಮಾನ ನೀಡಿದ್ದಾರೆ. ಬೆಂಕಿ ಮಹದೇವು, ಸೋಮಣ್ಣ ಸೇರಿ ವಿಜಯಶಂಕರ್ ಅವ್ರಿಗೂ ಸ್ಥಾನ ನೀಡಿದ್ರು. ಅವರು ಸೋತ್ರೂ ಸಹ ಅವ್ರಿಗೆ ಉನ್ನತ ಸ್ಥಾನ ನೀಡಿ ಗೌರವಿಸಿದ್ರು. ಇಷ್ಟೆಲ್ಲ ಇರುವಾಗ ಬಿಜೆಪಿ ಬಗ್ಗೆ ಟೀಕೆ ಸರಿಯಲ್ಲ ಅಂತ ವಿಜಯಶಂಕರ್‍ಗೆ ಸಲಹೆ ನೀಡಿದ್ರು.

  • ಈ ಬಾರಿ ನನ್ನ ನೇತೃತ್ವದಲ್ಲೇ ನಡೆಯಲಿದೆ ಚುನಾವಣೆ: ಸಿದ್ದರಾಮಯ್ಯ

    ಈ ಬಾರಿ ನನ್ನ ನೇತೃತ್ವದಲ್ಲೇ ನಡೆಯಲಿದೆ ಚುನಾವಣೆ: ಸಿದ್ದರಾಮಯ್ಯ

    ಮೈಸೂರು: ಈ ಬಾರಿ ನನ್ನ ನೇತೃತ್ವದಲ್ಲೇ 2018ರ ವಿಧಾನಸಭಾ ಚುನಾವಣೆ ನಡೆಯುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಇಂದು ಮೈಸೂರಿನ ಹುಣಸೂರು ಕ್ಷೇತ್ರದಲ್ಲಿ ಚುನಾವಣೆಯ ಕಾರ್ಯಕರ್ತರ ಸಭೆಯಲ್ಲಿ ಮಾತಾನಡಿದ ಅವರು, ಸಾಮಾನ್ಯವಾಗಿ ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ. ಆದರೆ ಈ ಬಾರಿ ನನ್ನ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ. ಇದನ್ನು ಹೈಕಮಾಂಡ್ ಲಿಖಿತ ರೂಪದಲ್ಲಿ ಹೇಳಿದೆ. ಈ ರೀತಿ ಹೇಳಿದೆ ಅಂದರೆ ನನ್ನ ಮೇಲೆ ಅವರಿಗೆ ಒಲವು ಹೆಚ್ಚಿದೆ ಅನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಕಾರ್ಯಾಕ್ರಮದಲ್ಲಿ ಎಲ್ಲರ ಮುಂದೆ ಹೇಳಿದರು.

    ಸಿಎಂ ಇಷ್ಟರ ಮಟ್ಟಿಗೆ ಹೇಳಿದ್ದಾರೆ ಅಂದರೆ ತಮ್ಮ ಪಕ್ಷದ ಅಧ್ಯಕ್ಷರು ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಎನ್ನುವ ಅರ್ಥದಲ್ಲಿ ಕಾರ್ಯಕರ್ತರಿಗೆ ಸಂದೇಶ ರವಾನಿಸಿದ್ದಾರೆ. ಸಿಎಂ ಅವರ ಈ ಮಾತನ್ನು ಕೇಳುತ್ತಿದ್ದಂತೆ ಕಾರ್ಯಕರ್ತರ ಸಭೆ ಕರತಡನವಾಯಿತು. ಎಲ್ಲರು ಅದರಲ್ಲೂ ನಮ್ಮ ಸಮುದಾಯದವರಾದ ಶಾಸಕ ಎಚ್.ಪಿ. ಮಂಜುನಾಥ್‍ಗೆ ಬೆಂಬಲ ಕೊಡಬೇಕು ಎಂದರು.

    ಇದೇ ವೇಳೆ ಯಾರೇ ಬಂದು ನನ್ನ ವಿರುದ್ಧ ಏನೇ ಹೇಳಿದರೂ ಅದನ್ನು ಕೇಳಬೇಡಿ ಎಂದು ಹುಣಸೂರು ಕ್ಷೇತ್ರದ ಘೋಷಿತ ಜೆಡಿಎಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಗೆ ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕರ್ತರ ಮುಂದೆ ಟಾಂಗ್ ನೀಡಿದರು,

    ವಿಶ್ವನಾಥ್ ವಾಗ್ದಾಳಿ: ತುಮಕೂರಿನಲ್ಲಿ ಸಿದ್ದಗಂಗಾ ಮಠದಲ್ಲಿ ನಡೆದ ಜೆಡಿಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಸಂಸದ ಎಚ್. ವಿಶ್ವನಾಥ್ ಸಿಎಂ ಮಾತಿಗೆ ಗುಡುಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರದು ದರ್ಪ ಹಾಗೂ ದುರಹಂಕಾರದ ಪರಮಾವಧಿ. ಕುರುಬರಿಗೆ ಮತಹಾಕದಂತೆ ಹೇಳಲು ಸಿದ್ದರಾಮಯ್ಯ ಏನು ಕುರುಬರ ಮಾಲೀಕನಲ್ಲ ಅಥವಾ ಕುರುಬರು ಅವರು ಸ್ವತ್ತಲ್ಲ ಎಂದು ಖಾರವಾಗಿ ನುಡಿದಿದ್ದಾರೆ. ಸಿಎಂ ಅವರಿಗೆ ಜನತಂತ್ರ ವ್ಯವಸ್ಥೆಯಲ್ಲಿ ದುಡ್ಡಿಗೆ, ದರ್ಪಕ್ಕೆ ಮತ್ತು ಅಹಂಕಾರಕ್ಕೆ ಅವಕಾಶವಿಲ್ಲ. ಕೇವಲ ನಿಷ್ಠೆ ಹಾಗೂ ಸೇವೆಗೆ ಮಾತ್ರ ಅವಕಾಶ ಎಂದು ಸಿಎಂಗೆ ತಿರಗೇಟು ನೀಡಿದ್ದಾರೆ.