Tag: ಎಐಎಂಐಎಂ ಪಕ್ಷದ ಮುಖ್ಯಸ್ಥ

  • ಟಿಪ್ಪು ಬಗ್ಗೆ ಮಾತಾಡೋದು ಬಿಟ್ಟು, ಉಗ್ರರನ್ನ ಮಟ್ಟಹಾಕಿ: ಇಮ್ರಾನ್ ಖಾನ್‍ಗೆ ಓವೈಸಿ ಟಾಂಗ್

    ಟಿಪ್ಪು ಬಗ್ಗೆ ಮಾತಾಡೋದು ಬಿಟ್ಟು, ಉಗ್ರರನ್ನ ಮಟ್ಟಹಾಕಿ: ಇಮ್ರಾನ್ ಖಾನ್‍ಗೆ ಓವೈಸಿ ಟಾಂಗ್

    ಹೈದರಾಬಾದ್: ಮೈಸೂರು ದೊರೆ ಟಿಪ್ಪು ಸುಲ್ತಾನ್ ಬಗ್ಗೆ ಮಾತನಾಡಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತಿರುಗೇಟು ನೀಡಿದ್ದಾರೆ.

    ಹೈದರಾಬಾದ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಓವೈಸಿ, ಇಮ್ರಾನ್ ಖಾನ್ ಮೈಸೂರಿನ ಸುಲ್ತಾನ್ ಬಗ್ಗೆ ಮಾತನಾಡುವುದನ್ನು ಬಿಟ್ಟು, ತಮ್ಮ ದೇಶದಲ್ಲಿ ನೆಲೆ ಕಂಡುಕೊಂಡಿರುವ ಉಗ್ರ ಸಂಘಟನೆಗಳನ್ನು ನಿಯಂತ್ರಿಸಬೇಕು ಎಂದು ಸಲಹೆ ನೀಡಿದ್ದಾರೆ.

    ಇಮ್ರಾನ್ ಖಾನ್ ಅವರು ಪಾಕಿಸ್ತಾನದ ಸಂಸತ್‍ನಲ್ಲಿ ಮುಸ್ಲಿಂ ದೊರೆಗಳಾದ ಟಿಪ್ಪು ಸುಲ್ತಾನ್ ಹಾಗೂ ಬಹದ್ದೂರ್ ಷಾ ಜಾಫರ್ ಬಗ್ಗೆ ಮಾತನಾಡಿದ್ದಾರೆ. ಟಿಪ್ಪು ಸುಲ್ತಾನ್ ಬಗ್ಗೆ ಹಾಡಿ ಹೊಗಳಿದ್ದಾರೆ. ಆದರೆ ಟಿಪ್ಪು ಹಿಂದೂ ವಿರೋಧಿಯಲ್ಲ, ತನ್ನ ಎದುರಾಳಿಗಳಿಗೆ ದುಸ್ವಪ್ನವಾಗಿದ್ದ ಎಂಬುದನ್ನು ಖಾನ್ ತಿಳಿದುಕೊಳ್ಳಬೇಕು. ಪಾಕ್ ಪ್ರಧಾನಿ ಆಟಮ್ ಬಾಂಬ್‍ಗಳ ಬಗ್ಗೆ ಮಾತನಾಡುತ್ತಾರೆ. ಭಾರತೀಯರ ಬಳಿ ಬಾಂಬ್‍ಗಳು ಇಲ್ಲವೆಂದು ಇಮ್ರಾನ್ ಖಾನ್ ತಿಳಿದಿದ್ದಾರೆ ಎಂದು ಕಿಡಿಕಾರಿದರು.

    ಉಗ್ರ ಸಂಘಟನೆಗಳಾದ ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಇ-ಮೊಹಮದ್ ಸಂಘಟನೆಗಳು ರಾಕ್ಷಸ ಸಂಘಟನೆಗಳು. ತನ್ನ ನೆಲದಲ್ಲಿರುವ ಉಗ್ರ ಸಂಘಟನೆಯ ಸೈತಾನ್‍ಗಳನ್ನು ಪಾಕಿಸ್ತಾನ ಸರ್ಕಾರ ಮಟ್ಟಹಾಕಬೇಕು ಎಂದು ಟಾಂಗ್ ಕೊಟ್ಟರು.

    ಇಮ್ರಾನ್ ಖಾನ್ ಹೇಳಿದ್ದೇನು?:
    ಪಾಕಿಸ್ತಾನದ ಸಂಸತ್‍ನಲ್ಲಿ ಫೆಬ್ರವರಿ 28ರಂದು ಮಾತನಾಡಿದ್ದ ಇಮ್ರಾನ್ ಖಾನ್, ನಾನು ಒಂದಿಷ್ಟು ಹಿಂದೆ ಹೋಗಿ ಇತಿಹಾಸವನ್ನು ನೆನಪಿಸಿಕೊಳ್ಳುತ್ತಿರುವೆ. ಮುಸ್ಲಿಂ ದೊರೆಗಳಲ್ಲಿ ಬಹದ್ದೂರ್ ಷಾ ಜಾಫರ್ ಹಾಗೂ ಟಿಪ್ಪು ಸುಲ್ತಾನ್ ಹೆಸರುವಾಸಿಯಾದವರು. ಬಹದ್ದೂರ್ ಜಾಫರ್ ಬ್ರಿಟಿಷರ ಜೊತೆಗೆ ಹೋರಾಡಲು ಆಗದೆ ಅವರ ಗುಲಾಮನಾದ. ಆದರೆ ಟಿಪ್ಪು ಸುಲ್ತಾನ್ ಗುಲಾಮನಾಗಲು ಒಪ್ಪಲಿಲ್ಲ. ಬ್ರಿಟಿಷರೊಂದಿಗೆ ಹೋರಾಡಿ ಮಡಿದ. ಹೀಗಾಗಿ ಟಿಪ್ಪು ಸುಲ್ತಾನ್ ನಿಜವಾದ ಹೀರೋ ಎಂದು ಹೇಳಿದ್ದರು. ಈ ವೇಳೆ ಕಲಾಪದಲ್ಲಿದ್ದ ಎಲ್ಲ ಸಂಸದರು ಮೇಜು ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

    ಮತ್ತೆ ಮಾತು ಆರಂಭಿಸಿದ ಇಮ್ರಾನ್ ಖಾನ್ ಅವರು, ಟಿಪ್ಪು ಸುಲ್ತಾನ್‍ನನ್ನು ಒಂದು ಕೋಮು ವಿರೋಧಿಸುತ್ತಿದೆ ಎಂದು ಕಿಡಿಕಾರಿದರು. ಪಾಕಿಸ್ತಾನದ ನೆಲೆಗಳ ಮೇಲೆ ಭಾರತೀಯ ವಾಯು ಪಡೆ ದಾಳಿ ಮಾಡಿದೆ. ಇದನ್ನು ನಾವು ಹಿಮ್ಮೆಟ್ಟಿ ನಿಲ್ಲಬೇಕು. ಟಿಪ್ಪುವಿನಂತೆ ಹೋರಾಡಬೇಕಿದೆ ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಸೂದ್ ಅಜರ್ ಮೌಲಾನ ಅಲ್ಲ, ಅವನೊಬ್ಬ ಸೈತಾನ್: ಓವೈಸಿ

    ಮಸೂದ್ ಅಜರ್ ಮೌಲಾನ ಅಲ್ಲ, ಅವನೊಬ್ಬ ಸೈತಾನ್: ಓವೈಸಿ

    ಮುಂಬೈ: ಜೈಶ್-ಇ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಮೌಲಾನ ಅಲ್ಲ, ಅವನೊಬ್ಬ ಸೈತಾನ್. ಪಾಕಿಸ್ತಾನ ನೆನಪಿಟ್ಟುಕೊಳ್ಳಬೇಕಿದೆ. ಭಾರತದ ಪ್ರಜೆಗಳು ಒಂದೇ ಎಂದು ಆಲ್ ಇಂಡಿಯಾ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ (ಎಐಎಂಐಎಂ) ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

    ಮುಂಬೈನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಪುಲ್ವಾಮಾ ದಾಳಿಯ ಹೊಣೆಯನ್ನು ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಹೊತ್ತಿದೆ. ಈ ದಾಳಿಗೆ ರಾಜಕೀಯ, ಅಧಿಕಾರಿಗಳು ಹಾಗೂ ಗುಪ್ತಚರ ಇಲಾಖೆಯ ವಿಫಲತೆಯೇ ಕಾರಣ ಎಂದು ದೂರಿದರು.

    ಪುಲ್ವಾಮಾ ದಾಳಿಗೆ ಪಾಕಿಸ್ತಾನವೇ ಹೊಣೆಯಾಗಬೇಕು. ನೆರೆಯ ದೇಶಗಳು ಭಾರತೀಯ ಮುಸ್ಲಿಮರ ಬಗ್ಗೆ ಯೋಚನೆ ಮಾಡುವುದು ಬೇಡ. ಪಾಕಿಸ್ತಾನ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರನ್ನು ನಿರ್ಲಕ್ಷಿಸಿಯೇ ನಾವು ಇಲ್ಲಿ ಉಳಿದಿದ್ದು ಎಂದು ಹೇಳಿದರು.

    ಪುಲ್ವಾಮಾ ದಾಳಿಯಲ್ಲಿ 40 ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಬಹುದೊಡ್ಡ ವಿಫಲತೆ ಎಂದು ಕಿಡಿಕಾರಿದರು.

    ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‍ಪಿಎಫ್ ಯೋಧರ ಮೇಲೆ ನಡೆದ ಭಯೋತ್ಪಾದಕರ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಅಸಾದುದ್ದೀನ್ ಓವೈಸಿ, ಪಾಕಿಸ್ತಾನ ಹಾಗೂ ಜೈಷ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆ ವಿರುದ್ಧ ಹರಿಹಾಯ್ದರು.

    ಮಹಾರಾಷ್ಟ್ರದ ಆಡಳಿತ ಪಕ್ಷ (ಬಿಜೆಪಿ) ಹಾಗೂ ವಿರೋಧ ಪಕ್ಷ (ಕಾಂಗ್ರೆಸ್) ಎರಡು ದೂಷಿಗಳೇ. ಈ ಎರಡು ಪಕ್ಷಗಳು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಮುಸ್ಲಿಮರು ಕಾಂಗ್ರೆಸ್‍ಗೆ ಬೆಂಬಲ ನೀಡಬಾರದು. ಏಕೆಂದರೆ ಅವರಿಂದ ನಮ್ಮ ಸಮುದಾಯಕ್ಕೆ ತೊಂದರೆಗಳು ಉಂಟಾಗುತ್ತಿವೆ ಎಂದು ಆರೋಪಿಸಿದರು.

    ಮಹಾರಾಷ್ಟ್ರದಲ್ಲಿ ಭರೀಪ್ ಬಹುಜನ್ ಮಹಸಂಗ್ ಅಧ್ಯಕ್ಷ ಹಾಗೂ ದಲಿತ ನಾಯಕ ಪ್ರಕಾಶ್ ಅಂಬೇಡ್ಕರ್ ಹಾಗೂ (ಎಐಎಂಐಎಂ) ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮೈತ್ರಿ ಮಾಡಿಕೊಂಡಿದ್ದು, ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಗೆ ಭಾರೀ ಸಿದ್ಧತೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv