Tag: ಎಂ.ಡಿ.ಕೌಶಿಕ್

  • ಅಮ್ಮನ ಲಾಲಿ: ಕನ್ನಡದಲ್ಲಿ ಮತ್ತೊಂದು ಕಾದಂಬರಿ ಆಧಾರಿತ ಚಿತ್ರ

    ಅಮ್ಮನ ಲಾಲಿ: ಕನ್ನಡದಲ್ಲಿ ಮತ್ತೊಂದು ಕಾದಂಬರಿ ಆಧಾರಿತ ಚಿತ್ರ

    ನಿಗದಿತ ಸಮಯದೊಳಗೆ, ಕಡಿಮೆ ಬಜೆಟ್‌ನಲ್ಲಿ ಉತ್ತಮ ಚಿತ್ರಗಳನ್ನು ನೀಡುತ್ತಾರೆ ಎಂಬ ಖ್ಯಾತಿಗೆ ಒಳಗಾಗಿರುವ ಹಿರಿಯ ನಟ, ನಿರ್ದೇಶಕ ಎಂ.ಡಿ.ಕೌಶಿಕ್ (M.D. Kaushik) ಈ ಬಾರಿ ಕಾದಂಬರಿ ಆಧಾರಿತ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

    ಈ ಸಿನಿಮಾಗೆ ಅವರು ’ಅಮ್ಮನ ಲಾಲಿ’ (Ammana Laali) ಎಂದು ಹೆಸರಿಟ್ಟಿದ್ದಾರೆ. ಸ್ವತಃ ತಾವು ನಟರಾಗಿದ್ದರೂ ಸಿನಿಮಾಕ್ಕೆ  ಬಣ್ಣ ಹಚ್ಚದೆ ತೆರೆ ಹಿಂದೆ ಅಂದರೆ ನಿರ್ದೇಶನ ಜತೆಗೆ ಎಮರಾಲ್ಡ್ ಕ್ರಿಯೇಶನ್ಸ್ ಅಡಿಯಲ್ಲಿ ಸ್ವತಃ ನಿರ್ಮಾಣ ಮಾಡುತ್ತಿದ್ದಾರೆ.

    ಗೀತಾ.ಡಿ.ಎನ್. ಬರೆದಿರುವ ಕಥೆಯು, ಇವತ್ತಿನ ಕಾಲಘಟ್ಟದಲ್ಲಿ ಕೆಲವೊಂದು ಮನೆಯಲ್ಲಿ ನಡೆಯುವ ಘಟನಾವಳಿಗಳು, ತಾಯಿ ಮಗಳ ನಡುವಿನ ಆರೋಗ್ಯಕರ ವಾಗ್ವಾದಗಳು, ಸಮಸ್ಯೆಗಳು, ತನ್ನದೆ ಆದ ರೀತಿಯಲ್ಲಿ ಅಂತ್ಯ ಕಾಣುತ್ತದೆ. ಅವುಗಳು ಏನು ಎಂಬುದನ್ನು ನಿರ್ದೇಶಕರು ಕುತೂಹಲ ಕಾಯ್ದಿರಿಸಿದ್ದಾರೆ.

    ಅಮ್ಮನಾಗಿ ಹಿರಿಯ ನಟಿ ಭವ್ಯ (Bhavya), ಪತಿಯಾಗಿ ಯತಿರಾಜ್. ಇವರೊಂದಿಗೆ ಪದ್ಮ, ರೂಪಾ, ಶರತ್, ನಂದಿನಿ, ಗೀತಾ, ಸೌಮ್ಯ ಮುಂತಾದವರು ನಟಿಸುತ್ತಿದ್ದಾರೆ. ಒಂದು ಭಾಗದ ಸನ್ನಿವೇಶವು ಅಮೇರಿಕಾದಲ್ಲಿ ಬರುವುದರಿಂದ, ಅಲ್ಲಿನ ಕಲಾವಿದರುಗಳಾದ ರಮ್ಯಾ-ಗೌರವ್‌ಗೆ ಅವಕಾಶ ಮಾಡಿ ಕೊಡಲಾಗುತ್ತಿದೆ.

    ಸದ್ಯ ಅಮೇರಿಕಾ ನಿವಾಸಿ, ಆರ್ಥಿಕ  ತಜ್ಞರಾಗಿರುವ ಕನ್ನಡಿಗ ರವಿ.ಇ.ದತ್ತಾತ್ರೇಯ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿರುವುದು ವಿಶೇಷ. ಇವರು ಈಗಾಗಲೇ ಸಾಹಿತಿಗಳ ಕವನಗಳು ಹಾಗೂ ಆಲ್ಬಂಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ ಅನುಭವವಿದೆ.

     

    ಡಿವಿಜಿರವರ ಮಂಕುತಿಮ್ಮನ ಕಗ್ಗ, ಲಕ್ಷಿನಾರಾಯಣ ಭಟ್ಟ ಹಾಗೂ ಡಾ.ದೊಡ್ಡರಂಗೇಗೌಡರ ಸಾಹಿತ್ಯವನ್ನು ಸಿನಿಮಾಕ್ಕೆ ಬಳಸಲಾಗಿದೆ. ಎಂ.ಡಿ.ಪಲ್ಲವಿ ಮತ್ತು ಯುಎಸ್‌ಎ ಪ್ರತಿಭೆ ರಾಂಪ್ರಸಾದ್ ಹಾಡುಗಳಿಗೆ ಧ್ವನಿಯಾಗಿದ್ದಾರೆ.

  • ಪ್ರಥಮ ಬಾರಿಗೆ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಕೊಡವ ನಿರ್ದೇಶಕಿ : ವಿಶೇಷ ತಾರಾಗಣ ಹೊಂದಿರುವ ಚಿತ್ರವಿದು

    ಪ್ರಥಮ ಬಾರಿಗೆ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಕೊಡವ ನಿರ್ದೇಶಕಿ : ವಿಶೇಷ ತಾರಾಗಣ ಹೊಂದಿರುವ ಚಿತ್ರವಿದು

    ಸ್ಯಾಂಡಲ್ ವುಡ್ ನಲ್ಲಿ ಈವರೆಗೂ ಏನೆಲ್ಲ ಪ್ರಯೋಗಗಳು ನಡೆದಿವೆ. ಅನೇಕ ಭಾಗಗಳಿಂದ ಕಲಾವಿದರು ಮತ್ತು ತಂತ್ರಜ್ಞರು ಸಿನಿಮಾ ರಂಗಕ್ಕೆ ಬಂದಿದ್ದಾರೆ. ಇದೇ ಪ್ರಪ್ರಥಮ ಬಾರಿಗೆ ಕೊಡವ ಹೆಣ್ಣುಮಗಳು ಸಿನಿಮಾ ನಿರ್ದೇಶಕಿಯಾಗಿ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದಾರೆ. ಕೊಟ್ಟುಕತ್ತಿರ ಯಶೋದಾ ಪ್ರಕಾಶ್ ‘ರಂಗ ಪ್ರವೇಶ’ ಸಿನಿಮಾದ ಮೂಲಕ ನಿರ್ದೇಶಕಿಯಾಗಿದ್ದಾರೆ. ಈವರೆಗೂ ಕೊಡಗಿನಿಂದ ಅನೇಕ ಕಲಾವಿದರು ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ. ಇದೇ ಮೊದಲ ಬಾರಿಗೆ ನಿರ್ದೇಶಕಿ ಬಂದಿದ್ದು ವಿಶೇಷ. ಇದನ್ನೂ ಓದಿ : ಅಶರೀರವಾಣಿ ಆಲ್ಬಂಗೆ ನೀನಾಸಂ ಸತೀಶ್ ಸಿಂಗರ್ : ಮಗಳೊಂದಿಗೆ ಹಾಡಿದ ಸ್ಟಾರ್ ನಟ

    ಯಶೋದಾ ಪ್ರಕಾಶ್ ‘ಪೃಥೆ’ ಹೆಸರಿನ ಪ್ರಕಟಿತ ಕಥೆಯನ್ನು ತಮ್ಮ ಚೊಚ್ಚಲು ನಿರ್ದೇಶನದ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಮಗಳು ಮತ್ತು ತಾಯಿ ಬಾಂಧವ್ಯದ ಕಥೆಯನ್ನು ಈ ಚಿತ್ರ ಹೊಂದಿದ್ದು, ಭರತನಾಟ್ಯ ಕಲಿಯಲು ಹಂಬಲಿಸುವ ಮಗಳು ಮತ್ತು ಮಗಳ ಕನಸುಗಳನ್ನು ನಿಭಾಯಿಸುವ ತಾಯಿಯು, ಮಗಳ ಭವಿಷ್ಯವನ್ನು ಹೇಗೆ ಕಟ್ಟುತ್ತಾಳೆ ಎನ್ನುವ ಚಿತ್ರಕಥೆ ಇಲ್ಲಿದೆ. ಇದನ್ನೂ ಓದಿ : ಜೈಲಿನಲ್ಲಿ ಚೇತನ್ ಕೂಲ್ ಆಗಿದ್ದಾರೆ : ಪತ್ನಿ ಮೇಘಾ

    ಇತ್ತೀಚೆಗಷ್ಟೇ ಸಿನಿಮಾದ ಮುಹೂರ್ತ ನಡೆದಿದೆ. ಬೆಂಗಳೂರಿನ ಸುತ್ತ ಮುತ್ತ ಚಿತ್ರೀಕರಣ ನಡೆದಿದೆ. ಒಂದೇ ಹಂತದ ಚಿತ್ರೀಕರಣಕ್ಕೆ ತಂಡವು ಪ್ಲ್ಯಾನ್ ಮಾಡಿದೆ. ಸಿನಿಮಾದ ಪ್ರಮುಖ ಪಾತ್ರದಲ್ಲಿ ‘ಬೆಳದಿಂಗಳ ಬಾಲೆ’ ಖ್ಯಾತಿಯ ಸುಮನ್ ನಗರ್ ಕರ್ ಇದ್ದರೆ, ತಾರಾಗಣದಲ್ಲಿ ನಿರ್ಮಾಪಕ ಕುಮಾರ್ ಎಸ್, ವಿಶೇಷ ಪಾತ್ರದಲ್ಲಿ ಮಾಜಿ ಐಎಎಸ್ ಅಧಿಕಾರಿ ಡಾ.ಸಿ. ಸೋಮಶೇಖರ್, ಎಂ.ಡಿ.ಕೌಶಿಕ್ ಸೇರಿದಂತೆ ಹಲವು ಕಲಾವಿದರಿದ್ದಾರೆ.