Tag: ಎಂ.ಎಂ.ಕಲ್ಬುರ್ಗಿ

  • ಎಂಎಂ ಕಲ್ಬುರ್ಗಿ ಹತ್ಯೆ ಕೇಸ್- 1,600 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಎಸ್‍ಐಟಿ

    ಎಂಎಂ ಕಲ್ಬುರ್ಗಿ ಹತ್ಯೆ ಕೇಸ್- 1,600 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಎಸ್‍ಐಟಿ

    -ಹತ್ಯೆಗೆ ಕಾರಣ ತಿಳಿಸಿದ ಎಸ್‍ಐಟಿ

    ಬೆಂಗಳೂರು: ವಿಚಾರವಾದಿ ಡಾ. ಎಂ.ಎಂ.ಕಲಬುರ್ಗಿ ಹತ್ಯೆ ನಡೆದು ನಾಲ್ಕು ವರ್ಷಗಳ ಬಳಿಕ ಸುಧೀರ್ಘ ತನಿಖೆ ನಡೆಸಿದ ಎಸ್‍ಐಟಿ ನ್ಯಾಯಾಲಯಕ್ಕೆ 1,600 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ.

    2015ರ ಆಗಸ್ಟ್ 30 ರಂದು ಧಾರವಾಡದಲ್ಲಿ ನಡೆದ ಚಿಂತಕ ಎಂಎಂ ಕಲ್ಬುರ್ಗಿ ಹತ್ಯೆ ಪ್ರಕರಣ ಇಡೀ ದೇಶವನ್ನೆ ಬೆಚ್ಚಿ ಬೀಳಿಸಿತ್ತು. ಕಲ್ಬುರ್ಗಿ ಹತ್ಯೆ ಪ್ರಕರಣವನ್ನು ಕೈಗೆತ್ತಿಕೊಂಡ ಎಸ್‍ಐಟಿ ಪ್ರಕರಣವನ್ನು ಭೇದಿಸಿದೆ. ಈ ಸಂಬಂಧ ಅಮೋಲ್ ಕಾಳೆ, ಗಣೇಶ್ ಮಿಸ್ಕಿನ್, ಅಮಿತ್ ಬದ್ದಿ, ಪ್ರವೀಣ್ ಚತುರ್ ಸೇರಿದಂತೆ ಆರು ಆರೋಪಿಗಗಳನ್ನು ಬಂಧಿಸಿ ಜೈಲಿಗಟ್ಟಿದೆ. ಗಣೇಶ್ ಮಿಸ್ಕಿನ್, ಪ್ರವೀಣ್, ಅಮಿತ್ ಬದ್ದಿಗೆ ಮಹಾರಾಷ್ಟ್ರ ಮತ್ತು ಬೆಳಗಾವಿಯ ಅರಣ್ಯ ಪ್ರದೇಶದಲ್ಲಿ ಗನ್, ಪಿಸ್ತೂಲ್, ನಾಡ ಬಾಂಬ್ ತಯಾರಿಕೆ ಬಗ್ಗೆ ತರಬೇತಿಯನ್ನು ಅಮೋಲ್ ಕಾಳೆ ನೀಡಿರುವ ಅಂಶವನ್ನು ಆರೋಪಿಗಳು ಎಸ್‍ಐಟಿ ಅಧಿಕಾರಿಗಳ ಮುಂದೆ ಹೇಳಿಕೆಯಲ್ಲಿ ದಾಖಲಿಸಿದ್ದಾರೆ. ಇದನ್ನೂ ಓದಿ: ಗೌರಿ ಹತ್ಯೆಗೆ ಆಯುಧ ಒದಗಿಸಿದ್ದು ನಾನೇ – ಎಸ್‍ಐಟಿ ಮುಂದೆ ನವೀನ್ ಹೇಳಿಕೆ

    ಸೂತ್ರಧಾರಿ ಅಮೋಲ್ ಕಾಳೆ:
    ತರಬೇತಿ ಮುಗಿಸಿ ವಾಪಸ್ ಬಂದಿದ್ದ ಹಂತಕರು, ಆಗಸ್ಟ್ 3ರಂದು ಕಲ್ಬುರ್ಗಿ ಅವರ ಮನೆ ನೋಡಿಕೊಂಡು ಹೋಗಿದ್ದರು. ಹಂತಕರ ಗ್ಯಾಂಗ್ ಆಗಸ್ಟ್ 30ರಂದು ಎಂ.ಎಂ.ಕಲ್ಬುರ್ಗಿಯವರ ಹತ್ಯೆಗೆ ಡೇಟ್ ಫಿಕ್ಸ್ ಮಾಡಿಕೊಂಡಿತ್ತು. ತಮ ಪ್ಲಾನ್ ನಂತೆ ಆಗಸ್ಟ್ 30ರಂದು ಕದ್ದ ಬೈಕ್‍ನಲ್ಲಿ ಬಂದಿದ್ದ ಗಣೇಶ್, ಪ್ರವೀಣ್ ವಿದ್ಯಾರ್ಥಿಗಳಂತೆ ಬಂದು ಮನೆ ಬಾಗಿಲು ತಟ್ಟಿದ್ದರು. ಗಣೇಶ್ ಮನೆಯ ಬಾಗಿಲು ತಟ್ಟುತ್ತಿದ್ದಂತೆ ಕಲ್ಬುರ್ಗಿಯವರ ಪತ್ನಿ ಉಮಾದೇವಿ ಬಾಗಿಲು ತೆರೆದಿದ್ದರು. ಇದನ್ನೂ ಓದಿ: ಹಂತಕರ ಮುಂದಿನ ಟಾರ್ಗೆಟ್ ನಾನು, ನಂತ್ರ ಭಗವಾನ್: ನಿಡುಮಾಮಿಡಿ ಶ್ರೀ

    ನಾವು ವಿದ್ಯಾರ್ಥಿಗಳು ಕಲ್ಬುರ್ಗಿ ಅವರ ಜೊತೆ ಮಾತನಾಡಬೇಕು ಎಂದು ಪತ್ನಿ ಉಮಾದೇವಿ ಬಳಿ ಆರೋಪಿ ಗಣೇಶ್ ಮಿಸ್ಕಿನ್ ಹೇಳಿದ್ದನು. ಈ ವೇಳೆ ಯಾರು ಬಂದಿದ್ದಾರೆಂದು ಕಲ್ಬುರ್ಗಿಯವರಯ ಮಾತನಾಡಿಸಲು ಹೊರ ಬಂದಿದ್ದಾರೆ. ಕಲ್ಬುರ್ಗಿ ಅವರು ಹೊರಗೆ ಬರುತ್ತಿದ್ದಂತೆ ಹಣೆಗೆ ನೇರ ಗನ್ ಪಾಯಿಂಟ್‍ನಲ್ಲೇ ಶೂಟ್ ಮಾಡಿದ್ದ ಗಣೇಶ್ ಮಿಸ್ಕಿನ್ ಮತ್ತು ಪ್ರವೀಣ ನಂತರ ಎಸ್ಕೇಪ್ ಆಗಿದ್ದರುಂ. ಕಿತ್ತೂರು ಸರ್ಕಲ್ ಬಳಿ ಗನ್ ಜೊತೆ ಬೈಕ್ ಬಿಟ್ಟಿದ್ದ ಹಂತಕರು ಪರಾರಿಯಾಗಿದ್ದರು. ನಂತರ ಬೈಕ್‍ನ್ನು ಅಮೋಲ್ ಕಾಳೆ ತೆಗೆದುಕೊಂಡು ಹೋಗಿದ್ದಾಗಿ ಎಸ್‍ಐಟಿ ಅಧಿಕಾರಿಗಳಿಗಳ ತನಿಖೆ ವೇಳೆ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ಇದೂವರೆಗೂ ನಡೆದಿರುವ ವಿಚಾರವಾದಿಗಳ ಹತ್ಯೆಯಾಗಿದ್ದು ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ

    ಎಸ್‍ಐಟಿ ಅಧಿಕಾರಿಗಳ ತನಿಖೆ ವೇಳೆ, ಕಲ್ಬುರ್ಗಿ ಓರ್ವ ಧರ್ಮ ವಿರೋಧಿ ಹೀಗಾಗಿ ಕೊಲೆ ಮಾಡಿದ್ದಾಗಿ ಆರೋಪಿಗಳು ಹೇಳಿದ್ದಾರೆ. ಹಂತಕ ಗಣೇಶ್ ಮಿಸ್ಕಿನ್ ಎಂಎಂ ಕಲ್ಬುರ್ಗಿ ಹತ್ಯೆಗೆ ನಿರ್ಧರಿಸಲು ಪ್ರಮುಖ ಕಾರಣ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡುವಂತೆ ಹೇಳಿಕೆ ಎಂದಿದ್ದಾನೆ. 2012ರ ಡಿಸೆಂಬರ್ ನಲ್ಲಿ ಬೆಂಗಳೂರಿನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಯು.ಆರ್.ಅನಂತಮೂರ್ತಿ ರಚಿಸಿರುವ ಕೃತಿಯೊಂದರ ಕುರಿತು ಮಾತನಾಡುತ್ತ ಅದರಲ್ಲಿ ಉಲ್ಲೇಖಿಸಿರುವಂತೆ ದೇವರ ಕಲ್ಲಿನ ವಿಗ್ರಹದ ಮೇಲೆ ಮೂತ್ರ ವಿಸರ್ಜಿಸಿದರು ಏನು ಆಗಲ್ಲವೆಂದು ಎಂಎಂ ಕಲ್ಬುರ್ಗಿ ತಮ್ಮ ಭಾಷಣದಲ್ಲಿ ಹೇಳಿದ್ದರು. ಇದನ್ನೂ ಓದಿ: ಪತಿಗೆ ಗುಂಡಿಕ್ಕಿದ ಆರೋಪಿಯನ್ನು ಗುರುತಿಸಿದ ಎಂ.ಎಂ ಕಲಬುರ್ಗಿ ಪತ್ನಿ

    ಈ ಮಾತು ನಮ್ಮ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ್ದು ಇದೇ ವಿಚಾರದ ಹಿನ್ನೆಲೆ ಧರ್ಮ ಉಳಿಸುವ ಸಲುವಾಗಿ ಕಲ್ಬುರ್ಗಿ ಹತ್ಯೆ ಮಾಡಿದ್ದಾರೆ. ಬಳಿಕ ಕೃತ್ಯಕ್ಕೆ ಬಳಸಿದ್ದ ಬೈಕ್ ಮಹಾರಾಷ್ಟ್ರಕ್ಕೆ ರವಾನಿಸಲಾಗಿತ್ತು. ಮಹಾರಾಷ್ಟ್ರದಲ್ಲಿ ಶರತ್ ಕಳಾಸ್ಕರ್ ಗೆ ಅಡಗಿಸಿಡಲು ನೀಡಿದ್ದನು. ಘಟನೆಯನ್ನು ಕಣ್ಣಾರೆ ಕಂಡಿದ್ದ ಕಲ್ಬುರ್ಗಿಯವರ ಪತ್ನಿ ಉಮಾದೇವಿ ಮತ್ತು ಇಬ್ಬರು ವಿದ್ಯಾರ್ಥಿಗಳು ಹಂತಕರ ಗುರುತು ಪತ್ತೆ ಹಚ್ಚಿದ್ದರು. ಇವತ್ತು ಚೀಫ್ ಐಒ ಎಂ ಎನ್ ಅನುಚೇತ್ ನೇತೃತ್ವದ ತಂಡ ಹುಬ್ಬಳ್ಳಿಯ ಕೋರ್ಟ್ ನಲ್ಲಿ 1,600 ಪುಟಗಳ ಚಾರ್ಜ್ ಸುಟ್ಟು ಸಲ್ಲಿಸಿ, ಪ್ರಕರಣಕ್ಕೆ ಅಂತ್ಯ ಹಾಡಿದೆ. ಇದನ್ನೂ ಓದಿ:   ಒಂದೇ ಒಂದು ಪಿಸ್ತೂಲಿನಿಂದ ದಾಬೋಲ್ಕರ್, ಕಲ್ಬುರ್ಗಿ, ಗೌರಿ ಹತ್ಯೆ!

  • ಗಣೇಶ್ ಮಿಸ್ಕಿನ್ ಹಾಗೂ ಅಮಿತ್ ಬದ್ದಿಯನ್ನ ವಶಕ್ಕೆ ಪಡೆದ ಸಿಐಡಿ

    ಗಣೇಶ್ ಮಿಸ್ಕಿನ್ ಹಾಗೂ ಅಮಿತ್ ಬದ್ದಿಯನ್ನ ವಶಕ್ಕೆ ಪಡೆದ ಸಿಐಡಿ

    ಧಾರವಾಡ: ಹಿರಿಯ ಸಂಶೋಧಕ ಡಾ.ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತಂಡ ಶನಿವಾರ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

    ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್‍ಐಟಿ ತಂಡದಿಂದ ಬಂಧನಕ್ಕೆ ಒಳಗಾಗಿದ್ದ ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್ ಹಾಗೂ ಅಮಿತ್ ಬದ್ದಿಯನ್ನ ಧಾರವಾಡದ 3 ನೇ ಹೆಚ್ಚುವರಿ ದಿವಾನಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಸಿಐಡಿ ತಂಡ, ಕಲ್ಬುರ್ಗಿ ಹತ್ಯೆ ಹಿನ್ನೆಲೆ 14 ದಿನಗಳ ಕಾಲ ವಿಚಾರಣೆಗೆ ತಮ್ಮ ವಶಕ್ಕೆ ಪಡೆದಿದೆ. ಇಂದು ಇಬ್ಬರು ಆರೋಪಿಗಳನ್ನ ನ್ಯಾಯಾಲಯದಿಂದ ವಶಕ್ಕೆ ಪಡೆದು, ಜಿಲ್ಲಾ ಆಸ್ಪತ್ರೆಯಲ್ಲಿ ಎಮ್‍ಎಸ್‍ಸಿ ಮಾಡಿಸಲಾಯಿತು.

    ಆರೋಪಿಗಳನ್ನು ನಗರದ ವಿದ್ಯಾಗಿರಿ ಪೊಲೀಸ್ ಠಾಣೆಗೆ ಕರೆದೊಯ್ದ ಸಿಐಡಿ ತಂಡ, ಭಾನುವಾರದವರೆಗೆ ಇಲ್ಲಿಯೇ ಇರಿಸಲಾಗುವುದು. ನಂತರ ಹತ್ಯೆಯಾದ ಕಲ್ಬುರ್ಗಿಯವರ ಮನೆಗೆ ಕರೆದೊಯ್ದು ವಿಚಾರಣೆ ನಡೆಸಲಾಗುವುದು ಎಂದು ಹೇಳಲಾಗುತ್ತಿದೆ. ಇಬ್ಬರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ನ್ಯಾಯಾಧೀಶರ ಎದುರು ನಾವು ಏನು ತಪ್ಪು ಮಾಡದೇನೇ ನಮ್ಮನ್ನ ಇಲ್ಲಿಗೆ ತರಲಾಗಿದೆ ಎಂದು ಹೇಳಿದ್ದಾರೆ.

    ಆರೋಪಿಗಳ ಪರ ವಕೀಲರು, ಇಬ್ಬರನ್ನು ಸಿಐಡಿ ಕಸ್ಟಡಿಗೆ ನೀಡಬಾರದು ಎಂದು ವಾದ ಮಂಡಿಸಿದರು. ಸದ್ಯ ನ್ಯಾಯಾಲಯ ಸೆಪ್ಟೆಂಬರ್ 28 ರ ವರೆಗೆ ಆರೋಪಿಗಳನ್ನು ಸಿಐಡಿ ಕಸ್ಟಡಿಗೆ ನೀಡಿದೆ. ಇನ್ನು ಗೌರಿ ಹತ್ಯೆಯಲ್ಲಿ 6 ದಿನ ತನಿಖೆಗೆ ವಶಕ್ಕೆ ಪಡೆದಿದ್ದ ಸಿಐಡಿ ತಂಡ ಇಲ್ಲಿವರೆಗೆ ತನಿಖೆ ಮಾಡಿಲ್ಲ ಎಂದು ಆರೋಪಿಗಳ ಪರ ವಕೀಲರು ಹೇಳಿದ್ರು. ಸದ್ಯ ಆರೋಪಿಗಳಿಗೆ ವಕೀಲರಿಗೆ ಭೇಟಿ ಮಾಡಲು ಮತ್ತು ಮೆಡಿಕಲ್ ಟ್ರಿಟಮೆಂಟ್ ಕೊಡಿಸಬೇಕು. ಆರೋಪಿಗಳಿಗೆ ಪ್ರತಿ 48 ಗಂಟೆಗಳಿಗೊಮ್ಮೆ ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕೆಂದು ನ್ಯಾಯಾಲಯ ತಿಳಿಸಿದೆ. ಆರೋಪಿಗಳಿಬ್ಬರು ನ್ಯಾಯಾಲಯದಲ್ಲಿ ಸಿಐಡಿ ತಂಡ ಊಟಕ್ಕೆ ತೊಂದರೆ ಮಾಡಿದ್ದಾರೆ ಹಾಗೂ ಹಣ ಕೇಳಿದ್ದಾರೆ ಎಂದು ಆರೋಪಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಒಂದೇ ಒಂದು ಪಿಸ್ತೂಲಿನಿಂದ ದಾಬೋಲ್ಕರ್, ಕಲ್ಬುರ್ಗಿ, ಗೌರಿ ಹತ್ಯೆ!

    ಒಂದೇ ಒಂದು ಪಿಸ್ತೂಲಿನಿಂದ ದಾಬೋಲ್ಕರ್, ಕಲ್ಬುರ್ಗಿ, ಗೌರಿ ಹತ್ಯೆ!

    – ಎಸ್‍ಐಟಿ ಅಧಿಕಾರಿಗಳಿಗೆ ಸಿಕ್ಕಿದೆ ಸ್ಫೋಟಕ ಮಾಹಿತಿ
    – ಹತ್ಯೆಗೆ ಕಲ್ಬುರ್ಗಿ ಹೇಳಿಕೆ ಕಾರಣ

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ಪೊಲೀಸರಿಗೆ ಸ್ಫೋಟಕ ಮಾಹಿತಿಗಳು ಲಭ್ಯವಾಗುತ್ತಿವೆ. ಪ್ರಗತಿ ಪರರಾದ ನರೇಂದ್ರ ದಾಬೋಲ್ಕರ್, ಎಂ.ಎಂ. ಕಲ್ಬುರ್ಗಿ ಹಾಗು ಪತ್ರಕರ್ತೆ ಗೌರಿ ಲಂಕೇಶ್ ಮೂವರ ಹತ್ಯೆಯನ್ನು ಒಂದೇ ಪಿಸ್ತೂಲ್ ನಿಂದ ಮಾಡಲಾಗಿದೆ ಎಂಬ ರೋಚಕ ಮಾಹಿತಿ ಈಗ ಬೆಳಕಿಗೆ ಬಂದಿದೆ.

    ಮೂವರು ಪ್ರಗತಿಪರರನ್ನು ಒಂದೇ ಪಿಸ್ತೂಲ್ ನಿಂದ ಹತ್ಯೆ ಮಾಡಿದರೆ ಗೋವಿಂದ್ ಪನ್ಸಾರೆ ಹತ್ಯೆಗೆ ಬೇರೆ ಪಿಸ್ತೂಲ್ ಬಳಸಲಾಗಿದೆ ಎನ್ನುವ ಮಾಹಿತಿ ಎಸ್‍ಐಟಿ ಮೂಲಗಳಿಂದ ತಿಳಿದು ಬಂದಿದೆ. ಗೌರಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಬೈಕ್ ರೈಡರ್ ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್ ವಿಚಾರಣೆ ವೇಳೆ ತಿಳಿಸಿದ ಮಾಹಿತಿಯಿಂದ ಕಲ್ಬುರ್ಗಿ ಹತ್ಯೆಯ ಮಾಹಿತಿ ಈಗ ಬೆಳಕಿಗೆ ಬಂದಿದೆ.

    ಕಲ್ಬುರ್ಗಿ ಹಂತಕ ಯಾರು?: ಸಾಹಿತಿ ಹಾಗು ಪ್ರಗತಿಪರ ಚಿಂತಕರಾದ ಧಾರವಾಡದ ಎಂ.ಎಂ.ಕಲ್ಬುರ್ಗಿ ಅವರಿಗೆ ಗುಂಡಿಟ್ಟಿದ್ದು ಅಮೋಲ್ ಕಾಳೆ ಎನ್ನಲಾಗಿದೆ. ಅಮೋಲ್ ಕಾಳೆ ಮಹಾರಾಷ್ಟ್ರ ಮತ್ತು ಕರ್ನಾಟಕ ಆಪರೇಷನ್ ಗಳಿಗೆ ಮುಖ್ಯಸ್ಥನಾಗಿದ್ದು ಕಲ್ಬುರ್ಗಿ ಅವರ ವಿವಾದಾತ್ಮಕ ಹೇಳಿಕೆಯೇ ಕೊಲೆಗೆ ಕಾರಣ ಎಂಬ ಅಂಶ ಬೆಳಕಿಗೆ ಬಂದಿದೆ. ಕಲ್ಬುರ್ಗಿ ಅವರ ಮನೆ ಬಾಗಿಲು ತಟ್ಟಿದ ಅಮೋಲ್ ಕಾಳೆ, ಅವರು ಹೊರ ಬಂದ ಕೂಡಲೇ ಗುಂಡು ಹಾರಿಸಿದ್ದನು. ನಂತರ ಅಲ್ಲಿಂದ ಬೈಕ್ ಮುಖಾಂತರ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದ ಎಂದು ಮೂಲಗಳು ತಿಳಿಸಿವೆ.

    ಕಲ್ಬುರ್ಗಿ ಅವರನ್ನು ಕೊಲ್ಲಲು ಕಾಕಾ ಅಲಿಯಾಸ್ ಶಂಕರ್ ನಾರಾಯಣ್ ಎಂಬಾತನೇ ಹೇಳಿದ್ದನಂತೆ. ಕಾಕಾನ ಆಜ್ಞೆಯಂತೆಯೇ ಅಮೋಲ್ ಕಾಳೆ ಕೊಲೆ ಮಾಡಿದ್ದನು. ಕಾಕಾ ಆರು ತಿಂಗಳ ಹಿಂದೆಯೇ ಸಾವನ್ನಪ್ಪಿದ್ದು, ಆತನ ಬಲಗೈ ಬಂಟನೇ ಗೌರಿ ಹತ್ಯೆಗೆ ಸಂಚು ರೂಪಿಸಿದ್ದನಂತೆ. ಕಾಕಾನ ಬಲಗೈ ಬಂಟ ಮಹಾರಾಷ್ಟ್ರದ ಸಂಘಟನೆಯೊಂದು ಕಟ್ಟಾಳು ಎಂಬ ವಿಚಾರ ತಿಳಿದು ಬಂದಿದೆ. ಅರೋಪಿಗಳ ಬಳಿ ಒಟ್ಟು 12 ಪಿಸ್ತೂಲ್ ಗಳಿದ್ದು, ಒಂದನ್ನು ಕೊಲೆಗಾಗಿ ತೆಗೆದಿರಿಸಿದ್ದರು. ಗುರುವಾರ ವಶಕ್ಕೆ ಪಡೆದಿರುವ ಪಿಸ್ತೂಲ್ ನ್ನು ಗುಜರಾತ್ ನಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಈಗ ಕಳುಹಿಸಲಾಗಿದೆ.

    ಹತ್ಯೆಗೆ ಕಲ್ಬುರ್ಗಿ ಹೇಳಿಕೆ ಕಾರಣ:
    `ದೇವರ ವಿಗ್ರಹದ ಮೂತ್ರ ವಿಸರ್ಜನೆ ಮಾಡಿದರೂ ನನಗೇನೂ ಆಗಲಿಲ್ಲ’ ಎಂದು ಕಲ್ಬುರ್ಗಿಯವರು ಈ ಹಿಂದೆ ಹೇಳಿದ್ದರು. ಅಷ್ಟೇ ಅಲ್ಲದೇ ಕಾರ್ಯಕ್ರಮದಲ್ಲಿ ಬಲಪಂಥೀಯ ವಿಚಾರಗಳನ್ನು ಖಂಡಿಸಿ ಭಾಷಣ ಮಾಡುತ್ತಿದ್ದರು. ಹಿಂದೂ ಧರ್ಮದ ವಿರುದ್ಧ ಭಾಷಣ ಮಾಡುತ್ತಿದ್ದ ಹಿನ್ನೆಲೆಯಲ್ಲಿ ನಾವು ಅವರ ಕೊಲೆ ಮಾಡಿದ್ದೆವು ಎಂದು ಗಣೇಶ್ ಮಿಸ್ಕಿನ್ ತಪ್ಪೊಪ್ಪಿಗೆ ನೀಡಿದ್ದಾನೆ ಎಂದು ಎಸ್‍ಐಟಿ ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv