Tag: ಎಂಪಿ ಕುಮಾರಸ್ವಾಮಿ

  • ನಮ್ಮ ಜನಾಂಗಕ್ಕೆ ಉತ್ತರಿಸಲಾಗ್ತಿಲ್ಲ, ನಮಗೂ ಸಚಿವ ಸ್ಥಾನ ನೀಡಿ: ಎಂ.ಪಿ ಕುಮಾರಸ್ವಾಮಿ

    ನಮ್ಮ ಜನಾಂಗಕ್ಕೆ ಉತ್ತರಿಸಲಾಗ್ತಿಲ್ಲ, ನಮಗೂ ಸಚಿವ ಸ್ಥಾನ ನೀಡಿ: ಎಂ.ಪಿ ಕುಮಾರಸ್ವಾಮಿ

    ಚಿಕ್ಕಮಗಳೂರು: ಹೈಕಮಾಂಡ್ ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಿಲ್ ನೀಡುತ್ತಿದ್ದಂತೆ ಸಚಿವ ಸ್ಥಾನದ ಆಕಾಂಕ್ಷಿಗಳು ಮತ್ತೊಮ್ಮೆ ತಮ್ಮ ಇಂಗಿತವನ್ನ ಹೊರಹಾಕಿದ್ದಾರೆ. ನಮ್ಮ ಜನಾಂಗಕ್ಕೆ ಉತ್ತರ ಕೊಡಲು ಆಗುತ್ತಿಲ್ಲ. ನಮಗೂ ಸಚಿವ ಸ್ಥಾನ ನೀಡಿ ಎಂದು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದ್ದಾರೆ.

    ಇಂದು ಮೂಡಿಗೆರೆಯಲ್ಲಿ ನಾನೂ ಸಚಿವ ಸ್ಥಾನದ ಆಕಾಂಕ್ಷಿ ಎಂದು ಮಾತನಾಡಿದ ಶಾಸಕ, ನನಗೂ ಸಚಿವ ಸ್ಥಾನ ನೀಡಿ ಪಕ್ಷಕ್ಕೆ ಶಕ್ತಿಯಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅವರು ಸಚಿವ ಸ್ಥಾನದ ಇಂಗಿತ ಹೊರಹಾಕ್ತಿರೋದು ಇದು ಮೂರನೇ ಬಾರಿ. ನಾನು ಸಚಿವ ಸ್ಥಾನದ ಆಕಾಂಕ್ಷಿ. ಜಿಲ್ಲೆಯಲ್ಲಿ ಓರ್ವ ಸಚಿವರಿದ್ದರು. ಈಗ ಅವರು ರಾಜೀನಾಮೆ ನೀಡಿದ್ದಾರೆ. ಜಿಲ್ಲೆಗೆ ಸಚಿವ ಸ್ಥಾನದ ಅಗತ್ಯವಿದೆ. ಕಾಫಿ ಸೇರಿದಂತ ವಿವಿಧ ಸಮಸ್ಯೆಗಳಿವೆ. ಹಾಗಾಗಿ ನನಗೂ ಸಚಿವ ಸ್ಥಾನ ನೀಡಿ ಎಂದು ಪ್ರಬಲವಾಗಿ ಕೇಳುತ್ತಿದ್ದೇನೆ ಎಂದರು.

    ಸಚಿವ ಸ್ಥಾನ ಕೊಡೋದು ಬಿಡೋದು ವರಷ್ಠರಿಗೆ ಬಿಟ್ಟ ವಿಚಾರ. ನಾನಂತೂ ಸಚಿವ ಸ್ಥಾನದ ಆಕಾಂಕ್ಷಿ ಎಂದಿದ್ದಾರೆ. ಕಳೆದ ಹಲವು ಬಾರಿ ಕೂಡ ನನಗೆ ಮಿಸ್ ಆಗಿತ್ತು. ಅಷ್ಟೆ ಅಲ್ಲದೆ ಜಿಲ್ಲೆಯಲ್ಲಿ ಸೋತವರು-ಗೆದ್ದವರೂ ಎಲ್ಲರಿಗೂ ಒಂದೊಂದು ಸ್ಥಾನ ಕೊಟ್ಟಿದ್ದಾರೆ. ಮೂರು ಬಾರಿ ಸರ್ಕಾರ ರಚನೆಯಾದರೂ ನಮ್ಮ ಜನಾಂಗಕ್ಕೆ ಯಾವುದೇ ಪ್ರಾತಿನಿದ್ಯ ಕೊಟ್ಟಿಲ್ಲ. ನಮ್ಮ ಜನಾಂಗದ ದೃಷ್ಟಿಯಿಂದಲೂ ಒಳ್ಳೆಯದು. ನಮ್ಮ ಜನಾಂಗಕ್ಕೆ ನಾವು ಉತ್ತರ ಕೊಡಲು ಆಗ್ತಿಲ್ಲ. ಹಾಗಾಗಿ ದಯಮಾಡಿ ನಮಗೂ ಸಚಿವ ಸ್ಥಾನ ಕೊಡಿ ಎಂದು ಆಗ್ರಹಿಸಿದ್ದಾರೆ.

    ಸಚಿವ ಸ್ಥಾನ ಕೊಟ್ಟರೆ ಪಕ್ಷಕ್ಕೆ ನಾವೂ ಶಕ್ತಿಯಾಗಿ ಕೆಲಸ ಮಾಡುತ್ತೇವೆ. ನಮ್ಮ ಸಿ.ಟಿ ರವಿ ಅವರು ಇದ್ದರು. ಅವರು ರಾಜೀನಾಮೆ ನೀಡಿದ್ದಾರೆ. ಆದ್ದರಿಂದ ಈಗ ನಮಗೆ ಕೊಡಿ ಎಂದು ಸಚಿವ ಸ್ಥಾನದ ಆಸೆಯನ್ನ ಮತ್ತೊಮ್ಮೆ ಹೊರಹಾಕಿದ್ದಾರೆ. ಮೊದಲ ಬಾರಿ ಸರ್ಕಾರ ರಚನೆಯಾದಾಗ ಸಚಿವರ ಪ್ರಮಾಣ ವಚನ ಕಾರ್ಯಕ್ರಮಕ್ಕೂ ಅವರು ಹೋಗಿರಲಿಲ್ಲ. ಎರಡನೇ ಬಾರಿಯೂ ನಾನೂ ಸಚಿವ ಸ್ಥಾನದ ಆಕಾಂಕ್ಷಿ ಯಡಿಯೂರಪ್ಪ ನಮ್ಮ ನಾಯಕ. ನಮಗೂ ಕೊಡುತ್ತಾರೆಂದು ನಂಬಿಕೆ ಇದೆ ಎಂದಿದ್ದರು. ಈಗ ಮೂರನೇ ಬಾರಿ ಈಗಲೂ ಸಚಿವ ಸ್ಥಾನದ ಬಯಕೆಯನ್ನ ಪ್ರಬಲವಾಗಿ ಹೊರಹಾಕಿದ್ದಾರೆ.

  • ಬೆಂಗ್ಳೂರಿನಲ್ಲಿರೋ ಜನರನ್ನು ಅವರವರ ಮನೆಗೆ ಕಳಿಸಿಕೊಡಿ: ಎಂ.ಪಿ ಕುಮಾರಸ್ವಾಮಿ

    ಬೆಂಗ್ಳೂರಿನಲ್ಲಿರೋ ಜನರನ್ನು ಅವರವರ ಮನೆಗೆ ಕಳಿಸಿಕೊಡಿ: ಎಂ.ಪಿ ಕುಮಾರಸ್ವಾಮಿ

    ಚಿಕ್ಕಮಗಳೂರು: ಸಿಲಿಕಾನ್ ಸಿಟಿಯಲ್ಲಿರುವ ಜನರನ್ನು ಅವರವರ ಮನೆಗೆ ಕಳುಹಿಸಿಕೊಡಿ ಎಂದು ಶಾಸಕ ಎಂ.ಪಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬಳಿ ಮನವಿ ಮಾಡಿಕೊಂಡಿದ್ದಾರೆ.

    ದಯವಿಟ್ಟು ಯುವಕ-ಯುವತಿಯರನ್ನು ಊರಿಗೆ ಕಳುಹಿಸಿಕೊಡಿ. ಅಮಾಯಕರ ಮೇಲೆ ಪೊಲೀಸರ ದೌರ್ಜನ್ಯ ಹೆಚ್ಚಾಗಿದೆ. ಇದೀಗ ಅವರೆಲ್ಲರೂ ಕೆಲಸವಿಲ್ಲದೇ ಸಂಕಷ್ಟದಲ್ಲಿದ್ದಾರೆ. ನಾವು ತೆಗೆದುಕೊಂಡ ತೀರ್ಮಾನದಲ್ಲಿ ಅನೇಕ ಜನರ ಬದುಕು ಬೀದಿಗೆ ಬಿದ್ದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಅಲ್ಲದೆ ಉತ್ತರ ಪ್ರದೇಶ ಹಾಗೂ ದೆಹಲಿ ಸರ್ಕಾರಗಳು ನಡೆದುಕೊಂಡ ರೀತಿಯನ್ನ ನೀವು ಪಾಲಿಸಿ. ಬೆಂಗಳೂರಿನಿಂದ ನನಗೆ ವೋಟ್ ಹಾಕಲು ಯುವಕ-ಯುವತಿಯರು ಬಂದಿದ್ದರು. ದಯವಿಟ್ಟು ಅವರ ವೈದ್ಯಕೀಯ ಪರೀಕ್ಷೆ ಮಾಡಿಸಿ ಜನರನ್ನ ಹಳ್ಳಿಗಳಿಗೆ ಕಳುಹಿಸಿ ಎಂದು ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಸಿಎಂ ಬಳಿ ಕೇಳಿಕೊಂಡಿದ್ದಾರೆ.

  • ರಾತ್ರೋರಾತ್ರಿ ಹಾಸ್ಟೆಲ್‍ಗೆ ತೆರಳಿ ಸಾಂಬಾರ್ ಪರೀಕ್ಷಿಸಿದ ಶಾಸಕರು

    ರಾತ್ರೋರಾತ್ರಿ ಹಾಸ್ಟೆಲ್‍ಗೆ ತೆರಳಿ ಸಾಂಬಾರ್ ಪರೀಕ್ಷಿಸಿದ ಶಾಸಕರು

    ಚಿಕ್ಕಮಗಳೂರು: ಶಾಸಕರೊಬ್ಬರು ರಾತ್ರೋರಾತ್ರಿ ಹಾಸ್ಟೆಲ್‍ಗೆ ತೆರಳಿ ಸಾಂಬಾರ್ ಪರೀಕ್ಷೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ನಡೆದಿದೆ.

    ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ರಾತ್ರೋರಾತ್ರಿ ತಾಲೂಕಿನ ಹೆಸ್ಕಲ್ ಗ್ರಾಮದಲ್ಲಿರುವ ಗಿರಿದರ್ಶಿನಿ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ತೆರಳಿ ಮಕ್ಕಳಿಗೆ ನೀಡುತ್ತಿರುವ ಆಹಾರವನ್ನು ಪರೀಕ್ಷೆ ಮಾಡಿದ್ದಾರೆ. ಶಾಸಕರು ದಿಢೀರ್ ಭೇಟಿ ನೀಡಿ ಅಡುಗೆ ಮನೆಗೆ ಧಾವಿಸಿ ಸಾಂಬಾರ್ ಕುಡಿದು ಆಹಾರ ಪರೀಕ್ಷೆ ಮಾಡಿದಾಗ ಅಡುಗೆಯವರು ಕಕ್ಕಾಬಿಕ್ಕಿಯಾಗಿದ್ದಾರೆ.

    ಆ ಬಳಿಕ ಆಹಾರ ಸಾಮಾಗ್ರಿಗಳು ಸೇರಿದಂತೆ ಊಟ ಇನ್ನಿತರ ಮೂಲಭೂತ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳ ಜೊತೆ ಮಾಹಿತಿ ಪಡೆದರು. ಈ ವೇಳೆ ಊಟ, ವಸತಿ ಮತ್ತು ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳು ಶಾಸಕರಿಗೆ ದೂರು ನೀಡಿದರು. ಮೊನ್ನೆ ಜಿಲ್ಲಾ ಪಂಚಾಯತ್ ಕೆಡಿಪಿ ಸಭೆಯಲ್ಲಿ ಹಾಸ್ಟೆಲ್ ಗಳ ಅವ್ಯವಸ್ಥೆ ಬಗ್ಗೆ ಚರ್ಚೆ ಆಗಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ನೀಡಿದ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಪರಿಶೀಲನೆ ಮಾಡಿದ್ದಾರೆ.