ನವದೆಹಲಿ: ಬಾಲಿವುಡ್ ನಟಿ, ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ (49) ಅವರಿಗೆ ಕೋವಿಡ್-19 ಇರುವುದು ದೃಢಪಟ್ಟಿದೆ.
ತನಗೆ ಕೊರೊನಾ ಸೋಂಕು ತಗುಲಿರುವ ವಿಚಾರವನ್ನು ಇನ್ಸ್ಟಾ ಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. “ನನಗೆ ಕೋವಿಡ್ ತಗುಲಿರುವುದು ದೃಢಪಟ್ಟಿದೆ. ನಾನು ಆರೋಗ್ಯವಾಗಿದ್ದೇನೆ. ಮನೆಯಲ್ಲೇ ಪ್ರತ್ಯೇಕ ವಾಸದಲ್ಲಿದ್ದೇನೆ” ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಗೆ ಸಮೀಪವಿರುವ 14 ಜಿಲ್ಲೆಗಳಲ್ಲಿ ಪಟಾಕಿ ನಿಷೇಧಿಸಿದ ಹರಿಯಾಣ
ಈಚೆಗೆ ನನ್ನ ಸಂಪರ್ಕಕದಲ್ಲಿದ್ದವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಜನತೆಯಲ್ಲಿ ನಟಿ ಮನವಿ ಮಾಡಿದ್ದಾರೆ.
ರಂಗೀಲ, ಜುದಾಯ್, ದಾವುದ್, ಕುನ್ವಾರ, ಖುಬ್ಸುರತ್, ದಿಲ್ಲಗಿ ಮೊದಲಾದ ಸಿನಿಮಾಗಳಲ್ಲಿ ನಟಿ ಊರ್ಮಿಳಾ ಜನಪ್ರಿಯ ಗಳಿಸಿದ್ದಾರೆ. 2014ರಲ್ಲಿ ತೆರೆ ಕಂಡ ಮರಾಠಿ ಚಿತ್ರ “ಅಜೋಬ” ಇವರ ನಟನೆಯ ಕೊನೆಯ ಸಿನಿಮಾ. ಇವರು ಹಲವು ರಿಯಾಲಿಟಿ ಶೋಗಳಲ್ಲೂ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ.
ಮುಂಬೈ: ನಟಿ, ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಕಾಂಗ್ರೆಸ್ ತೊರೆದು ಶಿವ ಸೇನೆ ಸೇರಿದ್ದಾರೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಕೊರೊನಾ ಸಂಕಷ್ಟವನ್ನು ನಿಭಾಯಿಸಿದ ರೀತಿಯನ್ನು ಕಂಡು, ಪ್ರಭಾವಿತಳಾಗಿ ಶಿವ ಸೇನೆ ಸೇರುತ್ತಿದ್ದೇನೆ ಎಂದು ಈ ವೇಳೆ ಊರ್ಮಿಳಾ ತಿಳಿಸಿದ್ದಾರೆ.
ಶಿವ ಸೇನೆ ಸೇರಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ವರ್ಷ ಮಹಾರಾಷ್ಟ್ರಕ್ಕೆ ತೀವ್ರ ಸಂಕಷ್ಟವನ್ನು ತಂದೊಡ್ಡಿದೆ. ಈ ಸಂದರ್ಭದಲ್ಲಿ ಮಹಾರಾಷ್ಟ್ರ ಸರ್ಕಾರ ಹಾಗೂ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅತ್ಯದ್ಭುತ ಕೆಲಸ ಮಾಡಿದ್ದಾರೆ. ಅವರ ಕೆಲಸದಿಂದ ನಾನು ಪ್ರಭಾವಿತಳಾಗಿದ್ದೇನೆ. ಅಲ್ಲದೆ ಅವರೊಂದಿಗೆ ಕೆಲಸ ಮಾಡಬೇಕು ಎಂಬ ಹಂಬಲ ಹೊಂದಿದ್ದೇನೆ ಎಂದರು.
अभिनेत्री @UrmilaMatondkar जी यांनी आज मातोश्री निवासस्थानी शिवसेना पक्षप्रमुख, मुख्यमंत्री उद्धव बाळासाहेब ठाकरे यांच्या उपस्थितीत आणि सौ. रश्मीताई ठाकरे यांच्या हस्ते शिवबंधन बांधून शिवसेनेत जाहीर प्रवेश केला. pic.twitter.com/lAv21HjbaH
ವಿಧಾನ ಪರಿಷತ್ ನಾಮನಿರ್ದೇಶನದ ಕುರಿತು ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯತ್ವ ಸ್ಥಾನದ ಕುರಿತು ಮಾತನಾಡುವಾಗ ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರ ಶಾಸಕಾಂಗಕ್ಕೆ ಸಂಸ್ಕøತಿ ಹಾಗೂ ಕಲೆಗಳಿಗೆ ಪ್ರಾತಿನಿಧ್ಯ ಸಿಗಬೇಕು ಎಂದರು. ಇದನ್ನು ನಾನು ಸಂಪೂರ್ಣವಾಗಿ ಗೌರವಿಸುತ್ತೇನೆ. ನಾನು ಮರಾಠಿ ಕುಟುಂಬದಿಂದ ಬಂದವಳು. ಅಲ್ಲದೆ ನಾನು ಮೀಡಿಯಾ ಮೇಡ್ ಸ್ಟಾರ್ ಅಲ್ಲ, ಪೀಪಲ್ ಮೇಡ್ ಸ್ಟಾರ್ ಎಂದು ತಿಳಿಸಿದರು.
46 ವರ್ಷದ ನಟಿ ಊರ್ಮಿಳಾ ಕಳೆದ ವರ್ಷ ಕಾಂಗ್ರೆಸ್ ಪಕ್ಷ ಸೇರುವ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅಲ್ಲದೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಸೋಲನುಭವಿಸಿದ್ದಾರೆ. ಕಾಂಗ್ರೆಸ್ಗೆ ರಾಜೀನಾಮೆ ನೀಡಿದ ಕುರಿತು ಪ್ರತಿಕ್ರಿಯಿಸುವುದಿಲ್ಲ ಎಂದು ಇದೇ ವೇಲೆ ಸ್ಪಷ್ಟಪಡಿಸಿದ್ದಾರೆ.
ಇಂದು ಬೆಳಗ್ಗೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಅವರ ಮಾತೋಶ್ರೀ ನಿವಾಸದಲ್ಲಿ ಶಿವ ಸೇನೆಗೆ ಸೇರ್ಪಡೆಯಾಗಿದ್ದಾರೆ. ಉದ್ಧವ್ ಠಾಕ್ರೆ ಪತ್ನಿ ರಶ್ಮಿ ಠಾಕ್ರೆ ಅವರು ‘ಶಿವ ಬಂಧನ’ ಕಟ್ಟುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.
ಮುಂಬೈ: ಕಾಂಗ್ರೆಸ್ಗೆ ಗುಡ್ಬೈ ಹೇಳಿದ್ದ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಅವರು ಇನ್ನು ಮುಂದೆ ಶಿವಸೇನೆಯ ಶಾಸಕಿಯಾಗಲಿದ್ದಾರೆ.
ಹೌದು. ಮಹಾರಾಷ್ಟ್ರದಲ್ಲಿ ʼಮಹಾವಿಕಾಸ್ ಆಘಾಡಿʼ ಸರ್ಕಾರವಿದ್ದರೂ ಊರ್ಮಿಳಾ ಮಾತೋಂಡ್ಕರ್ ಶಿವಸೇನೆಗೆ ಸೇರ್ಪಡೆಯಾಗಲಿದ್ದಾರೆ. ಭಾನುವಾರ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಆಪ್ತ ಹರ್ಷಲ್ ಪ್ರಧಾನ್ ಈ ವಿಚಾರ ತಿಳಿಸಿದ್ದು, ಮಂಗಳವಾರ ಮುಖ್ಯಮಂತ್ರಿ ಸಮ್ಮುಖದಲ್ಲಿ ಶಿವಸೇನೆಗೆ ಸೇರಲಿದ್ದಾರೆ ಎಂದು ಹೇಳಿದ್ದಾರೆ.
ಪಕ್ಷಕ್ಕೆ ಆಗಮಿಸುತ್ತಿರುವ ಊರ್ಮಿಳಾ ಅವರಿಗೆ ಈಗಾಗಲೇ ಶಾಸಕ ಸ್ಥಾನ ನೀಡಲು ಶಿವಸೇನೆ ಮುಂದಾಗಿದೆ.
ರಾಜ್ಯಪಾಲರ ಕೋಟಾದಿಂದ ವಿಧಾನ ಪರಿಷತ್ ಗೆ ನಾಮನಿರ್ದೇಶನ ಮಾಡಲು 12 ಮಂದಿ ಹೆಸರನ್ನು ರಾಜ್ಯಪಾಲ ಬಿ ಎಸ್ ಕೊಶ್ಯರಿಗೆ ಮಹಾವಿಕಾಸ್ ಆಘಾಡಿ ಸರ್ಕಾರ ಕಳುಹಿಸಿದ್ದು, ಈ ಪಟ್ಟಿಯಲ್ಲಿ ಊರ್ಮಿಳಾ ಮಾತೋಂಡ್ಕರ್ ಹೆಸರಿದೆ ಎಂದು ವರದಿಯಾಗಿದೆ. ರಾಜ್ಯಪಾಲರು ಈ ಪಟ್ಟಿಯನ್ನು ಅಂಗೀಕರಿಸಬೇಕಿದೆ.
ಕಳೆದ ವರ್ಷದ ಮಾರ್ಚ್ 27 ರಂದು ಮಾತೋಂಡ್ಕರ್ ಕಾಂಗ್ರೆಸ್ ಸೇರಿದ್ದರು. ಲೋಕಸಭಾ ಚುನಾವಣೆಯಲ್ಲಿ ಮುಂಬೈ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಪಕ್ಷದ ಆಂತರಿಕ ಭಿನ್ನಾಭಿಪ್ರಾಯಿಂದ 2019ರ ಸೆ.10 ರಂದು ಊರ್ಮಿಳಾ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದರು.
ರಾಜೀನಾಮೆ ನೀಡಿದ ಸಂದರ್ಭದಲ್ಲೇ ಅವರು ಶಿವಸೇನೆಗೆ ಸೇರಲಿದ್ದಾರೆ ಎಂದು ಸುದ್ದಿಗಳು ಪ್ರಕಟವಾಗಿತ್ತು.ಈ ಕುರಿತು ಸ್ಪಷ್ಟನೆ ನೀಡಿದ್ದ ಅವರು, ಸದ್ಯ ಯಾವುದೇ ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗುವ ಚಿಂತನೆ ಇಲ್ಲ. ಮಾಧ್ಯಮಗಳು ಈ ರೀತಿಯ ವರದಿಗಳನ್ನು ಪ್ರಸಾರ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದರು.
ಮುಂಬೈ: ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಅವರು ಶಿವಸೇನೆ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಅವರು ಸದ್ಯ ಯಾವುದೇ ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗುವ ಚಿಂತನೆ ಇಲ್ಲ ಎಂದು ಹೇಳಿದ್ದಾರೆ.
ನಾನು ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗುತ್ತಿಲ್ಲ. ಮಾಧ್ಯಮಗಳು ಈ ರೀತಿಯ ವರದಿಗಳನ್ನು ಪ್ರಸಾರ ಮಾಡುವುದನ್ನು ನಿಲ್ಲಿಸಬೇಕು ಎಂದು ಊರ್ಮಿಳಾ ಮನವಿ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಮುಂದಿನ ಚುನಾವಣೆಗೆ ಸಿದ್ಧತೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ರಾಜಕೀಯ ಬೆಳವಣಿಗೆಗಳು ಜೋರಾಗಿದೆ. ಇದರ ನಡುವೆಯೇ ಊರ್ಮಿಳಾ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ ಅವರು ಶಿವಸೇನೆಯ ನಾಯಕ ಮಿಲಿಂದ್ ನರ್ವೆಕರ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿತ್ತು.
ಊರ್ಮಿಳಾ ಕಳೆದ ಲೋಕಸಭಾ ಚುನಾವಣೆಯ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸೇರ್ಪಡೆಯಾಗಿದ್ದರು. ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋಲುಂಡಿದ್ದರು. ಆ ಬಳಿಕ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಪಕ್ಷದ ಆಂತರಿಕ ರಾಜಕೀಯದಿಂದ ಬೇಸತ್ತು ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದರು. ವಿಧಾನಸಭೆಯ ಚುನಾವಣೆಗೆ 2 ತಿಂಗಳು ಸಮಯವಷ್ಟೇ ಇರುವ ಸಂದರ್ಭದಲ್ಲಿ ಪಕ್ಷದಲ್ಲಿ ಕಾಂಗ್ರೆಸ್ ನಾಯಕರ ರಾಜೀನಾಮೆ ಭಾರೀ ಸುದ್ದಿಯಾಗಿದೆ. ಇದರ ನಡುವೆಯೇ ಕಾಂಗ್ರೆಸ್ ಮುಂಬರುವ ಚುನಾವಣೆಯಲ್ಲಿ ಇತರೇ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ಮಾತುಕತೆಯನ್ನು ನಡೆಸಿದೆ.
ನವದೆಹಲಿ: ಕಾಂಗ್ರೆಸ್ ಪಕ್ಷದ ನಾಯಕಿಯಾಗಿದ್ದ ನಟಿ ಊರ್ಮಿಳಾ ಮಾತೋಂಡ್ಕರ್ ರಾಜೀನಾಮೆ ನೀಡಿದ ಬೆನ್ನಲ್ಲೇ ಇಂದು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರು ಮುಂಬೈ ಕಾಂಗ್ರೆಸ್ ಪಕ್ಷದ ಮುಖ್ಯಸ್ಥರನ್ನು ತಮ್ಮ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸೇರ್ಪಡೆಯಾಗಿದ್ದ ಊರ್ಮಿಳಾ ಅವರು ಕಡಿಮೆ ಅವಧಿಯಲ್ಲೇ ರಾಜೀನಾಮೆ ನೀಡಿ ಹೊರ ಬಂದಿದ್ದರು. ಈ ವೇಳೆ ಮಾತನಾಡಿದ್ದ ಅವರು, ಕಾಂಗ್ರೆಸ್ ಪಕ್ಷದ ಆಂತರಿಕ ರಾಜಕೀಯದಿಂದ ಬೇಸತ್ತು ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದರು. ಅಂದಹಾಗೇ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದ ಅವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿಯ ವಿರುದ್ಧ ಸೋಲುಂಡಿದ್ದರು.
ಇದರ ನಡುವೆಯೇ ಮತ್ತೊಬ್ಬ ಕಾಂಗ್ರೆಸ್ ನಾಯಕರಾದ ಕೃಪಾ ಶಂಕರ್ ಸಿಂಗ್ ಅವರು ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದಾರೆ. ಆರ್ಟಿಕಲ್ 370 ನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರ ನೀತಿಯನು ಪಕ್ಷ ವಿರೋಧ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸೋನಿಯಾ ಅವರು ಪಕ್ಷದ ನಾಯಕರನ್ನು ಭೇಟಿ ಮಾಡಿದ್ದಾರೆ. ವಿಧಾನಸಭೆಯ ಚುನಾವಣೆಗೆ 2 ತಿಂಗಳು ಸಮಯವಷ್ಟೇ ಇರುವ ಸಂದರ್ಭದಲ್ಲಿ ಪಕ್ಷದಲ್ಲಿ ನಾಯಕರು ರಾಜೀನಾಮೆ ನೀಡುತ್ತಿರುವುದು ಹೈಕಮಾಂಡ್ ಮೇಲೆ ಒತ್ತಡವನ್ನು ಹೆಚ್ಚಿಸಿದೆ. ನಾಯಕರ ಭೇಟಿ ಸಂದರ್ಭದಲ್ಲಿ ಮುಂಬರುವ ಚುನಾವಣೆಯಲ್ಲಿ ಇತರೇ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆಯೂ ಇದೇ ವೇಳೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಇತ್ತ ಊರ್ಮಿಳಾ ರಾಜೀನಾಮೆ ನೀಡಿದ್ದ ಬೆನ್ನಲ್ಲೇ ಮುಂಬೈ ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಕಿಡಿಕಾರಿದ್ದ ಮುಂಬೈ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ಮಿಲಿಂದ್ ದೇವ್ರಾ, ಊರ್ಮಿಳಾ ರಾಜೀನಾಮೆ ಪಕ್ಷದ ನಾಯಕರೇ ಕಾರಣ ಎಂದು ಆರೋಪಿಸಿದ್ದರು.
ಬೆಂಗಳೂರು: ಯಾಯಿರೇ..ಯಾಯಿರೇ ಅಂತಾ ತನ್ನ ಬಳ್ಳಿಯಂತ ಕಾಯವನ್ನು ಬಳುಕಿಸಿ ಕಣ್ಣು ಮಿಟುಕಿಸಿದ್ದ ರಂಗೀಲಾ ಹುಡುಗಿ ಎಲ್ಲಿ ಮರೆಯಾಗಿದ್ಲು? 90ರ ದಶಕದಲ್ಲಿ ಸಿನಿ ಜಗತ್ತನ್ನ ಅನಭಿಷಿಕ್ತ ರಾಣಿಯಂತೆ ಆಳಿದ್ದ ಅದೊಬ್ಬ ತಾರೆ ಎಲ್ಲಿದ್ದಾಳೆ ಅನ್ನೋ ಪ್ರಶ್ನೆ ಪದೇ ಪದೇ ಬರ್ತಾನೇ ಇತ್ತು. ಅಂದ ಹಾಗೆ, ಆಕೆ ಮತ್ಯಾರೂ ಅಲ್ಲ, ಮುಂಬೈ ಬೆಡಗಿ ಊರ್ಮಿಳಾ ಮಾತೋಂಡ್ಕರ್.
2016ರಲ್ಲಿ ತನಗಿಂತ ಹತ್ತು ವರ್ಷ ಚಿಕ್ಕ ವಯಸ್ಸಿನ ರೂಪದರ್ಶಿ, ಉದ್ಯಮಿ ಮೊಹ್ಸಿನ್ ಅಖ್ತರ್ ನನ್ನ ಮದ್ವೆಯಾಗಿ ಸುದ್ದಿಯಾಗಿದ್ದ ಊರ್ಮಿಳಾ ಅನ್ನೋ ಬಾಲಿವುಡ್ ನ ಲೇಡಿ ಸೂಪರ್ ಸ್ಟಾರ್ ಪತ್ತೇನೇ ಇರಲಿಲ್ಲ. ಆದ್ರೆ, ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದ ಅಭಿಮಾನಿಗಳಿಗೆ ಈಗ ಸಿಕ್ಕಿದೆ ಸೀರುಂಡೆ ಥರದ ಮ್ಯಾಟ್ರು.
ರಾಮ್ ಗೋಪಾಲ್ ವರ್ಮಾರ ಗರಡಿಗೆ ಸಿಕ್ಕಿದ್ದ ಊರ್ಮಿಳಾ ಮಾತೋಂಡ್ಕರ್ ರಂಗೀಲಾ, ಜುದಾಯಿ, ಜಂಗಲ್, ಮಸ್ತ್, ಸತ್ಯದಂತಹಾ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಫ್ಯಾನ್ಸ್ ಗೆ ರಸದೌತಣ ಉಣಿಸಿದ್ಲು. ಬಟ್ಟಲು ಕಂಗಳ ಚೆಲುವೆಯ ಬೋಲ್ಡ್ ನೆಸ್ ಗೆ ಜನ ಕನಸಲ್ಲೂ ಕನವರಿಸೋ ಹಾಗಾಗಿತ್ತು. 90ರ ದಶಕದಲ್ಲಿ ಊರ್ಮಿಳಾ ತೆರೆ ಮೇಲೆ ಅಕ್ಷರಶಃ ಕಮಾಲ್ ಮಾಡಿಬಿಟ್ಟಿದ್ಲು. ರಾಮ್ ಗೋಪಾಲ್ ವರ್ಮಾ ಜೊತೆಗಿನ ಸಂಬಂಧದ ಜೊತೆಗೆ ಅನೇಕ ಸಹ ನಟರೊಂದಿಗಿನ ಲಿಂಕ್ ಅಪ್ ಕಥೆಗಳು ಬಹಳ ಕಲರ್ ಫುಲ್ಲಾಗಿ ಕೇಳಿ ಬಂದಿದ್ವು.
2008ರಲ್ಲಿ ರಿಯಾಲಿಟಿ ಶೋ ಒಂದರ ಜಡ್ಜ್ ಆಗಿ ಕಾಣಿಸಿಕೊಂಡಿದ್ದ ಊರ್ಮಿಳಾ ಆಮೇಲೆ ತೆರೆ ಮೇಲೆ ಬಂದಿದ್ದು 2014ರಲ್ಲಿ. ಆಗ ಮರಾಠಿ ಸಿನಿಮಾವೊಂದರಲ್ಲಿ ನಟಿಸಿದ್ದು ಬಿಟ್ರೆ ಅದಾದ್ ಮೇಲೆ ಊರ್ಮಿಳಾ ದುರ್ಬೀನು ಹಾಕಿ ಹುಡುಕಿದ್ರೂ ಕಾಣಿಸ್ತಾನೇ ಇರಲಿಲ್ಲ. ಆದ್ರೀಗ, ಸರಿ ಸುಮಾರು 10 ವರ್ಷಗಳ ನಂತ್ರ ಊರ್ಮಿಳಾ ಬ್ಲ್ಯಾಕ್ ಮೇಲ್ ಮಾಡೋದಕ್ಕೆ ಬರ್ತಿದ್ದಾಳೆ. ಮೊದಲಿನಷ್ಟೇ ಬೋಲ್ಡ್ ಮತ್ತು ಬ್ಯೂಟಿಫುಲ್ಲಾಗಿ ಕಾಣಿಸ್ತಿರೋ ಊರ್ಮಿಳಾಳ ಲುಕ್ ಈಗ ರಿವೀಲ್ ಆಗಿದೆ.
ಅಭಿನಯ್ ಡಿಯೋ ಆಕ್ಷನ್ ಕಟ್ ಹೇಳ್ತಿರೋ ಈ ಸಿನಿಮಾದಲ್ಲಿ ಊರ್ಮಿಳಾ ಐಟಂ ಸಾಂಗ್ ಒಂದರಲ್ಲಿ ಧೂಳೆಬ್ಬಿಸಲಿದ್ದಾಳೆ. ನಟ ಇರ್ಫಾನ್ ಮುಖ್ಯ ಭೂಮಿಕೆಯಲ್ಲಿರೋ ಈ ಚಿತ್ರದಲ್ಲಿ ಚಮ್ಮ ಚಮ್ಮ ಬೆಡಗಿ ಮೈ ಚಳಿ ಬಿಟ್ಟು ಮೈ ಕುಣಿಸಿದ್ದಾಳೆ. ಮೊಣಕಾಲಿಗೂ ಮುಟ್ಟದ ಡ್ರೆಸ್ ತೊಟ್ಟು, ನೀಳ ತೊಡೆಗಳನ್ನ ತೋರಿಸಿ ಚಮಕ್ ಕೊಡ್ತಿದ್ದ ಊರ್ಮಿಳಾ ಈ ಐಟಂ ಸಾಂಗಲ್ಲಿ ಸೀರೆ ಉಟ್ಟಿರೋದ್ರಿಂದ ಫ್ಯಾನ್ಸ್ ಗೆ ಸ್ವಲ್ಪ ಮಟ್ಟಿಗೆ ನಿರಾಸೆಯಾಗಿದೆಯಂತೆ.
1998ರಲ್ಲಿ ರಿಲೀಸ್ ಆದ ಚೀನಾ ಗೇಟ್ ಸಿನಿಮಾದ ಚಮ್ಮಾ ಚಮ್ಮಾ, ಲಜ್ಜಾ ಸಿನಿಮಾದ ಆಯಿಯೇ..ಆಜಾಯಿಯೇಯಂತಹಾ ಐಟಂ ನಂಬರ್ ಗಳಲ್ಲಿ ಹುಚ್ಚೆಬ್ಬಿಸಿದ್ದ ಊರ್ಮಿಳಾಳ ಕಮ್ ಬ್ಯಾಕ್ ಹೇಗಿರುತ್ತೆ..? 44ರ ಹರೆಯದಲ್ಲೂ ಊರ್ಮಿಳಾ ತನ್ನ ದೇಹಸಿರಿಯನ್ನ ಯಾವ ರೀತಿ ಕಾಪಾಡಿಕೊಂಡಿದ್ದಾಳೆ..? ಈ ಬಿರು ಬೇಸಿಗೆಯಲ್ಲಿ ಬೊಗಸೆ ಕಣ್ಣಿನ ಊರ್ಮಿ ಪಡ್ಡೆಗಳೆದೆಯಲ್ಲಿ ಕಿಚ್ಚು ಹತ್ತಿಸೋದಕ್ಕೆ ಸಕ್ಸಸ್ ಆಗ್ತಾಳಾ..? ಗೊತ್ತಿಲ್ಲ. ಆದ್ರೆ, ಸಿನಿಮಾ ಬರೋ ಮೊದಲೇ ಊರ್ಮಿಳಾ ಡಾನ್ಸ್ ಸ್ಟೆಪ್ಸನ್ನ ನೋಡ್ತಾ ನೀವೂ ಕಣ್ ತಂಪು ಮಾಡ್ಕೊಳ್ಳಿ.