Tag: ಉಸಿರು ತಂಡ

  • ‘ಉಸಿರು’ ತಂಡದಿಂದ ಪೂರ್ಣಗೊಂಡ ನಟ ಸಂಚಾರಿ ವಿಜಯ್ ಕೊನೆಯ ಆಸೆ

    ‘ಉಸಿರು’ ತಂಡದಿಂದ ಪೂರ್ಣಗೊಂಡ ನಟ ಸಂಚಾರಿ ವಿಜಯ್ ಕೊನೆಯ ಆಸೆ

    ಮಡಿಕೇರಿ: ‘ನಾನು ಅವನಲ್ಲ, ಅವಳು’ ಚಿತ್ರದಲ್ಲಿನ ಅಮೋಘ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ನಟ ಸಂಚಾರಿ ವಿಜಯ್ ಅವರ ಕೊನೆಯ ಆಸೆಯೊಂದನ್ನು ‘ಉಸಿರು’ ತಂಡ ಪೂರ್ಣಗೊಳಿಸಿದೆ.

    ಬುಡಕಟ್ಟು ಜನಾಂಗದ ಹಾಡಿಯ ಮನೆಗಳ ಮೇಲ್ಛಾವಣಿಗಳಿಗೆ ‘ಉಸಿರು’ ತಂಡ ಉತ್ತಮ ಗುಣಮಟ್ಟದ ಟಾರ್ಪಲ್ ಹೊದಿಕೆ ಹೊದಿಸಿದೆ. ಕೋವಿಡ್ ಎರಡನೇ ಅಲೆ ಹಾಗೂ ಲಾಕ್‍ಡೌನ್ ಸಂದರ್ಭದಲ್ಲಿ ಜನರಿಗೆ ಆಕ್ಸಿಜನ್ ನೀಡುವ ಸಲುವಾಗಿ ರೂಪುಗೊಂಡ ‘ಉಸಿರು’ ತಂಡದಲ್ಲಿ ಸಂಚಾರಿ ವಿಜಯ್ ಕೂಡ ಇದ್ದರು. ‘ಉಸಿರು’ ತಂಡದ ಮೂಲಕ ಅನೇಕ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಸಂಚಾರಿ ವಿಜಯ್ ಮುಂದಾಗಿದ್ದರು.

    ಅದೆಲ್ಲ ಕಾರ್ಯರೂಪಕ್ಕೆ ಬರುವ ಮುನ್ನವೇ ಅಪಘಾತದಿಂದಾಗಿ ಸಂಚಾರಿ ವಿಜಯ್ ಇಹಲೋಕ ತ್ಯಜಿಸಿಬಿಟ್ಟರು. ಉಸಿರು ತಂಡದಲ್ಲಿದ್ದಾಗ, ಸಂಚಾರಿ ವಿಜಯ್ ಅವರು ತಂಡದಲ್ಲಿದ್ದ ನಿರ್ದೇಶಕ ಕವಿರಾಜ್ ಹಾಗೂ ನೀತು ಶೆಟ್ಟಿ, ಸೇರಿದಂತೆ ತಂಡದ ಸದಸ್ಯರೊಂದಿಗೆ ಬುಡಕಟ್ಟು ಜನಾಂಗದ ಹಾಡಿಯ ಮನೆಗಳ ಮೇಲ್ಛಾವಣಿಗಳಿಗೆ ಟಾರ್ಪಲ್ ಹೊದಿಕೆ ಹೊದಿಸುವ ಬಗ್ಗೆ ಹಾಗೂ ಕೊಡಗು ಹಾಗೂ ಮೈಸೂರು ಗಡಿಭಾಗದ ನಾಗರಹೊಳೆ ಪ್ರದೇಶದ ಸುತ್ತಮುತ್ತಲೂ ವಾಸ ಇರುವ ಹಾಡಿ ನಿವಾಸಿಗಳ ಮನೆಗಳಿಗೆ ಟಾರ್ಪಲ್ ಹಾಕಿಸುಕೊಂಡುವಂತೆ ‘ಉಸಿರು’ ತಂಡದ ಸದಸ್ಯರ ಜೊತೆ ಸಂಚಾರಿ ವಿಜಯ್ ಚರ್ಚೆ ಮಾಡಿದ್ದರು. ಇದನ್ನೂ ಓದಿ: ಸಂಚಾರಿ ವಿಜಯ್ ಇದ್ದಿದ್ರೆ ಯಾವ ಸಿನಿಮಾಗಳಲ್ಲಿ, ಯಾವ್ಯಾವ ಅವತಾರದಲ್ಲಿ ಕಾಣಿಸಿಕೊಳ್ತಿದ್ರು?

    ಸಂಚಾರಿ ವಿಜಯ್ ನಿಧನದ ಬಳಿಕ ಅವರ ಗೌರವಾರ್ಥವಾಗಿ, ಸಂಚಾರಿ ವಿಜಯ್ ಅವರ ಆಸೆಯನ್ನು ನೆರವೇರಿಸಲು ‘ಉಸಿರು’ ತಂಡ ನಗರಹೊಳೆಯ ಸುತ್ತಮುತ್ತಲಿನ ವಾಸ ಇರುವ ಹಾಡಿ ನಿವಾಸಿಗಳ ಮನೆಗಳಿಗೆ ತಂಡ ಭೇಟಿದೆ. ಇತ್ತೀಚೆಗಷ್ಟೇ ಟಾರ್ಪಲ್ ಹೊದಿಕೆ ಹೊದಿಸಲು ಅಳತೆ ತೆಗೆದುಕೊಂಡಿದ್ದ ‘ಉಸಿರು’ ತಂಡ ಇದೀಗ ಬುಡಕಟ್ಟು ಜನಾಂಗದ ಹಾಡಿಯ ಮನೆಗಳ ಶಿಥಿಲಗೊಂಡ ಮೇಲ್ಚಾವಣಿಗಳಿಗೆ ಉತ್ತಮ ಗುಣಮಟ್ಟದ ಟಾರ್ಪಲ್ ಹೊದಿಕೆಯನ್ನು ಹೊದಿಸಿದೆ. ಆ ಮೂಲಕ ಸಂಚಾರಿ ವಿಜಯ್ ಅವರ ಆಸೆ ನೆರವೇರಿಸಿ, ‘ಉಸಿರು’ ತಂಡ ಗೌರವ ನಮನ ಸಲ್ಲಿಸಿದೆ. ಇದನ್ನೂ ಓದಿ:  ಬಿಗ್‍ಬಾಸ್ ಮನೆಯಲ್ಲಿ ಸಂಚಾರಿ ವಿಜಯ್ ಸ್ಮರಣೆ ಮಾಡಿದ ಸ್ಪರ್ಧಿಗಳು

  • ಸೋಂಕಿತರ ಸಹಾಯಕ್ಕೆ ಬಂದ ದರ್ಶನ್- ಉಸಿರು ತಂಡದ ಕಾರ್ಯಕ್ಕೆ ಸಾಥ್

    ಸೋಂಕಿತರ ಸಹಾಯಕ್ಕೆ ಬಂದ ದರ್ಶನ್- ಉಸಿರು ತಂಡದ ಕಾರ್ಯಕ್ಕೆ ಸಾಥ್

    ಬೆಂಗಳೂರು: ಕೊರೊನಾ ಸಮಯದಲ್ಲಿ ಆಮ್ಲಜನಕದ ಕೊರತೆ ತೀವ್ರವಾಗಿ ಕಾಡುತ್ತಿದೆ. ಸಾಕಷ್ಟು ಸೆಲೆಬ್ರಿಟಿಗಳು ಈ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ. ಈಗ ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ಕೂಡ ವೈದ್ಯಕೀಯ ಆಮ್ಲಜನಕ ಪೂರೈಕೆ ಮಾಡಲು ಕೈ ಜೋಡಿಸಿದ್ದಾರೆ.

    ಕೊರೊನಾ ವೈರಸ್ ಸೋಂಕಿತರಿಗೆ ಆಮ್ಲಜನಕದ ಸಪೋರ್ಟ್ ನೀಡಿ ಸಾಮಾಜಿಕ ಕಳಕಳಿ ಮೆರೆಯುತ್ತಿರುವ ಉಸಿರು ತಂಡದ ಕಾರ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಮೆಚ್ಚುಗೆಯಾಗಿದೆ. ಉಸಿರು ತಂಡಕ್ಕೆ ನಟ ದರ್ಶನ್ ಬೆಂಬಲ ನೀಡಿದ್ದಾರೆ.

    ಉಸಿರು ಹೆಸರಿನ ಕೊವಿಡ್ ಆಕ್ಸಿಜನ್ ಕೇರ್‍ಗೆ ದರ್ಶನ್ ಬೆಂಬಲವಾಗಿ ನಿಂತಿದ್ದಾರೆ. ಈ ಬಗ್ಗೆ ಪೋಸ್ಟ್ ಹಾಕಿರುವ ಉಸಿರು ತಂಡ, ಉಸಿರು ತಂಡಕ್ಕೆ ಗಜ ಬಲ ಸಿಕ್ಕಂತಾಗಿದೆ. ಉಸಿರು ತಂಡಕ್ಕೆ ಬೆಂಬಲ ನೀಡಿರುವ ನಟ ದರ್ಶನ್‍ಗೆ ಕವಿರಾಜ್ ಹಾಗೂ ಸಂಚಾರಿ ವಿಜಯ್ ಧನ್ಯವಾದಗಳನ್ನು ತಿಳಿಸಿದ್ದಾರೆ. ನಮ್ಮ ಉಸಿರು ತಂಡಕ್ಕೀಗ ಗಜಬಲ. ಎಲ್ಲಾ ಜಿಲ್ಲೆಗಳಿಗೂ ಸೇವೆ ಒದಗಿಸುವ ಸಲುವಾಗಿ ನಿಮ್ಮ ಸಹಕಾರ ತಂಡಕ್ಕೆ ಮತ್ತಷ್ಟು ಸಮಾಜಮುಖಿ ಕೆಲಸ ಮಾಡಲು ಪ್ರೇರೇಪಿಸಿದೆ. ಧನ್ಯವಾದಗಳು ಸರ್ ಎಂದು ಫೇಸ್‍ಬುಕ್‍ನಲ್ಲಿ ಸಂಚಾರಿ ವಿಜಯ್ ಬರೆದುಕೊಂಡಿದ್ದಾರೆ.

    ಉಸಿರು ತಂಡದಲ್ಲಿ ನಿರ್ದೇಶಕ-ಸಂಗೀತ ನಿರ್ದೇಶಕ ಸಾಧು ಕೋಕಿಲ, ನಟಿ ನೀತೂ ಶೆಟ್ಟಿ, ನಿರ್ದೇಶಕಿ ಕವಿತಾ ಲಂಕೇಶ್, ನಿರ್ದೇಶಕ ದಿನಕರ್ ತೂಗುದೀಪ, ನಟ ಸಂಚಾರಿ ವಿಜಯ್, ಗೀತ ಸಾಹಿತಿ-ನಿರ್ದೇಶಕ ಕವಿರಾಜ್, ನಿರ್ದೇಶಕ ಚೈತನ್ಯ, ನಟಿ ಅಕ್ಷತಾ ಪಾಂಡವಪುರ, ಡಾ.ಕಿರಣ್, ಸುಂದರ್, ವಿನಯ್ ಪಾಂಡವಪುರ, ಮಾದೇಶ್ ಗೌಡ ಮುಂತಾದವರಿದ್ದಾರೆ. ಇದೀಗ ಇದೇ ತಂಡದ ಜೊತೆ ನಟ ದರ್ಶನ್ ಕೈ ಜೋಡಿಸಿದ್ದಾರೆ.

    ಕೋವಿಡ್-19 ಪಾಸಿಟಿವ್ ಕಂಡುಬಂದವರಲ್ಲಿ ಕೆಲವರಲ್ಲಿ ಉಸಿರಾಟದ ಸಮಸ್ಯೆ ಉಂಟಾಗುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ಕೊರತೆ ಇರುವುದರಿಂದ, ಆಮ್ಲಜನಕದ ಅವಶ್ಯಕತೆ ಇರುವ ಸೋಂಕಿತರಿಗೆ ಉಚಿತವಾಗಿ ಪ್ರಾಣವಾಯು ಪೂರೈಸಲಾಗುತ್ತದೆ. ಆಸ್ಪತ್ರೆಗಳಲ್ಲಿ ಬೆಡ್ ಸಿಗುವವರೆಗೂ, ಉಸಿರಾಟದ ತೊಂದರೆ ಅನುಭವಿಸುತ್ತಿರುವ ಸೋಂಕಿತರ ಮನೆಗೆ ತೆರಳಿ ಉಸಿರು ತಂಡ ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳ ಮುಖಾಂತರ ಉಚಿತವಾಗಿ ಆಮ್ಲಜನಕದ ಸಪೋರ್ಟ್ ಮನೆಯಲ್ಲೇ ನೀಡುವ ಕೆಲಸವನ್ನು ಉಸಿರು ತಂಡ ಮಾಡುತ್ತಿದೆ.

    ಕೊರೊನಾ ರೋಗಿಗಳಿಗೆ ಉಸಿರಾಟದ ಸಮಸ್ಯೆ ಇದ್ದರೆ ಅಂಥವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಬಳಗದ ಸಹಯೋಗದೊಂದಿಗೆ ಮೈಸೂರಿನಲ್ಲಿ ಉಸಿರು ತಂಡದ ಮೊದಲ ಸೇವೆ ಒದಗಿಸಿದೆ. ಈ ಬಗ್ಗೆ ಉಸಿರು ತಂಡ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತ ಘೋಷಣೆ ಮಾಡಿದೆ.