Tag: ಉನ್ನತ ಶಿಕ್ಷಣ ಸಚಿವ

  • ರಾಜಕಾರಣಿಗಳಿಂದ ಸಮಾಜ ಉದ್ಧಾರ ಆಗಲ್ಲ: ಜಿಟಿ ದೇವೇಗೌಡ

    ರಾಜಕಾರಣಿಗಳಿಂದ ಸಮಾಜ ಉದ್ಧಾರ ಆಗಲ್ಲ: ಜಿಟಿ ದೇವೇಗೌಡ

    ಬೆಂಗಳೂರು: ರಾಜಕಾರಣಿಗಳಿಂದ ಸಮಾಜ ಉದ್ಧಾರ ಆಗುವುದಿಲ್ಲ. ಆದರೆ ದೇಶದ ಅಭಿವೃದ್ಧಿ ವಿದ್ಯಾರ್ಥಿಗಳಿಂದ ಸಾಧ್ಯ ಎಂದು ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಹೇಳಿದ್ದಾರೆ.

    ರೇವಾ ವಿಶ್ವವಿದ್ಯಾಲಯದ ಮೂರನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ತಂದೆ ತಾಯಿಗಳಿಗೆ ಹಮ್ಮೆ ತರುವ ಕೆಲಸವನ್ನು ಮಾಡಿ. ಶಿಕ್ಷಣ ಎನ್ನುವುದು ನಿರಂತರವಾಗಿರಲಿ ಹಾಗೂ ದೇಶ ಅಭಿವೃದ್ಧಿಗೆ ಸಹಾಯವಾಗಲಿ ಎಂದು ವಿದ್ಯಾರ್ಥಿಗಳಿಗೆ ಹಾರೈಸಿ, ಸಚಿವನಾಗಿ ಇದೇ ಮೊದಲ ಬಾರಿ ಗೌನ್ ತೊಟ್ಟು ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದು, ತುಂಬಾ ಖುಷಿಕೊಟ್ಟಿರುದೆ ಎಂದು ಸಂತಸ ವ್ಯಕ್ತಪಡಿಸಿದರು.

     

    ನಮ್ಮ ಸರ್ಕಾರಿ ಕಾಲೇಜುಗಳಲ್ಲಿ ಏಕೆ ಈ ರೀತಿಯ ಶಿಕ್ಷಣವಿಲ್ಲ ಎನ್ನುವ ಕುರಿತಾಗಿ ಉಪಕುಲಪತಿಗಳ ಜೊತೆ ಚರ್ಚೆ ಮಾಡಿರುವೆ. ರೇವಾ ಯುನಿವರ್ಸಿಟಿ ಮಾದರಿ ವಿಶ್ವವಿದ್ಯಾಲಯವಾಗಿದ್ದು, ಕೆಲವೇ ವರ್ಷಗಳಲ್ಲಿ ಉನ್ನತ ಮಟ್ಟಕ್ಕೆ ಬೆಳೆದಿರುವುದು ತುಂಬಾ ಹೆಮ್ಮೆ ತಂದಿದೆ. ಎಲ್ಲಾ ಪದವಿದರರಿಗೆ ಒಳ್ಳೆಯದಾಗಲಿ ಎಂದು ಶುಭ ಕೋರಿದರು.

    ಚಾನ್ಸಲರ್ ಶಾಮರಾಜು ಮಾತನಾಡಿ, 1773 ವಿದ್ಯಾರ್ಥಿಗಳು ಪದವಿ ಪಡೆದು ಹೊರಪ್ರಪಂಚಕ್ಕೆ ಹೋಗುತ್ತಿದ್ದಾರೆ. ರಾಜ್ಯಪಾಲರು ನಮ್ಮ ವಿದ್ಯಾರ್ಥಿಗಳ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದ್ದು ಖುಷಿಯಾಯ್ತು. ಸಮಾಜ ಸೇವೆಯ ದೃಷ್ಟಿಯಿಂದ ನಾವು ಈ ವಿಶ್ವವಿದ್ಯಾಲಯವನ್ನ ನಡೆಸುತ್ತಿದ್ದೇವೆ. ನಮ್ಮ ವಿದ್ಯಾರ್ಥಿಗಳು ತುಂಬಾ ಶಿಸ್ತಿನಿಂದ ಕಾಲೇಜಿನಲ್ಲಿ ತೊಡಗಿಸಿಕೊಂಡು ಇಂದು ಕಾನ್ವಾಕೇಶನ್ ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ. ಇದು ಮೂರನೇ ಘಟಿಕೋತ್ಸವ. ಮುಂದಿನ ದಿನಗಳಲ್ಲಿ ಪೇಪರ್ ಲೇಸ್ ಮಾಡಿ, ಡಿಜಿಟಲ್ ಶಿಕ್ಷಣ ನೀಡವ ಉದ್ದೇಶವಿದೆ. ಪ್ರತಿಬಾರಿಯೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

    ಇಂದು ನಡೆದಿದ್ದು, 22 ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದುಕೊಂಡರೆ, 7 ವಿದ್ಯಾರ್ಥಿಗಳು ಪಿಎಚ್.ಡಿ ಪಡೆದುಕೊಂಡು ಸಂಭ್ರಮಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಹುಬ್ಬಳ್ಳಿ ಜವಳಿ ಮಾರ್ಕೆಟ್‍ನಲ್ಲಿ ಜಿಟಿಡಿ ಶಾಪಿಂಗ್

    ಹುಬ್ಬಳ್ಳಿ ಜವಳಿ ಮಾರ್ಕೆಟ್‍ನಲ್ಲಿ ಜಿಟಿಡಿ ಶಾಪಿಂಗ್

    ಹುಬ್ಬಳ್ಳಿ: ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ವಾಣಿಜ್ಯ ನಗರಿ ಹುಬ್ಬಳ್ಳಿಯ ಜವಳಿ ಮಾರ್ಕೆಟ್ ನಲ್ಲಿ ಶಾಪಿಂಗ್ ಮಾಡುವ ಮೂಲಕ ಜನರ ಅಚ್ಚರಿಗೆ ಕಾರಣರಾಗಿದ್ದಾರೆ.

    ಹೌದು. ಬೆಂಗಳೂರಿನಿಂದ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿದ ಸಚಿವರು, ನೇರವಾಗಿ ಜವಳಿ ಮಾರ್ಕೆಟ್ ಗೆ ಭೇಟಿ ನೀಡಿದ್ದಾರೆ. ಈ ವೇಳೆ ಜವಳಿ ಮಾರ್ಕೆಟ್ ಸಾಲಿನಲ್ಲಿ ಒಂದು ಬಟ್ಟೆ ಅಂಗಡಿಗೆ ತೆರಳಿ ಪಂಚೆಗಳನ್ನು ಖರೀದಿ ಮಾಡಿದ್ದಾರೆ.

    ನಾಳೆ ಬೆಳಗಾವಿ ನಗರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೋಗಲು ಹುಬ್ಬಳ್ಳಿಗೆ ಆಗಮಿಸಿದ್ದ ಸಚಿವರು ಹಾಗೆ ಏಕಾಏಕಿ ಮಾರ್ಕೆಟ್ ಹೋಗೆ ಪಂಚೆ ಖರೀದಿ ಮಾಡಿದ್ದಾರೆ. ಇನ್ನು ಜನರು ನೂತನ ಸಚಿವರನ್ನು ಮಾರ್ಕೆಟ್ ನಲ್ಲಿ ಕಂಡು ಖುಷಿ ಪಟ್ಟು ಮಾತನಾಡಿಸಿದ್ದಾರೆ.

    ಸಮ್ಮಿಶ್ರ ಸರ್ಕಾರದಲ್ಲಿ ಉನ್ನತ ಶಿಕ್ಷಣ ಖಾತೆ ಬೇಡ ದೇವೇಗೌಡರು ನಿರಾಕರಿಸಿದ್ದರು. ಆದರೆ ಸಿಎಂ ಕುಮಾರಸ್ವಾಮಿ ಅವರು ಜಿಟಿ ದೇವೇಗೌಡ ಅವರ ಮನವೊಲಿಸಲು ಯಶಸ್ವಿಯಾಗಿದ್ದರು. ಬಳಿಕ ಜೂನ್ 23 ರಂದು ಸಚಿವ ಸ್ಥಾನ ಒಪ್ಪಿಕೊಂಡ ಜಿಟಿಡಿ ವಿಧಾನಸೌದಲ್ಲಿ ತಮ್ಮ ಕಚೇರಿಯಲ್ಲಿ ಪೂಜೆ ಮಾಡಿ ಬಳಿಕ ಕಾರ್ಯಾರಂಭ ಮಾಡಿದ್ದರು.