Tag: ಉದ್ಯಮಿ

  • ವಿದ್ವತ್ ಮೇಲೆ ಹಲ್ಲೆ ಪ್ರಕರಣ- ಇಂದು ನಲಪಾಡ್ ಜಾಮೀನು ಅರ್ಜಿಯ ಭವಿಷ್ಯ ನಿರ್ಧಾರ

    ವಿದ್ವತ್ ಮೇಲೆ ಹಲ್ಲೆ ಪ್ರಕರಣ- ಇಂದು ನಲಪಾಡ್ ಜಾಮೀನು ಅರ್ಜಿಯ ಭವಿಷ್ಯ ನಿರ್ಧಾರ

    ಬೆಂಗಳೂರು: ಉದ್ಯಮಿ ಪುತ್ರ ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹ್ಯಾರೀಸ್ ಪುತ್ರ ನಲಪಾಡ್‍ಗೆ ಜೈಲಾ..? ಬೇಲಾ..? ಎಂಬುದು ಇಂದು ಗೊತ್ತಾಗಲಿದೆ.

    ಹೌದು. ಶಾಸಕ ಹ್ಯಾರಿಸ್ ಮಗ ನಲಪಾಡ್ ಜಾಮೀನು ಅರ್ಜಿಯ ಭವಿಷ್ಯ ಇಂದು ನಿರ್ಧಾರವಾಗಲಿದೆ. ಸೋಮವಾರ ನಲಪಾಡ್ ಪರ ವಕೀಲ ಉಸ್ಮಾನ್ ವಾದ ಮುಕ್ತಾಯ ಮಾಡಿದ್ದಾರೆ. ಹೀಗಾಗಿ ಇಂದು ಎಸ್ ಪಿಪಿ ಅವರಿಂದ ಪ್ರತಿವಾದ ನಡೆಯಲಿದೆ.

    ಪ್ರತಿವಾದ ಬೇಗ ಮುಗಿದ್ರೆ ಇಂದೇ ತೀರ್ಪು ಸಿಗುವ ಸಾಧ್ಯತೆಗಳಿವೆ. 63 ನೇ ಸಿಸಿಎಚ್ ಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ವಿದ್ವತ್ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಈಗಾಗಲೇ ಜಾರ್ಜ್ ಶೀಟ್ ಸಲ್ಲಿಸಲಾಗಿದೆ.

    ಈ ಹಂತದಲ್ಲಿ ಸಾಕ್ಷಿಗಳ ಮೇಲೆ ಯಾವುದೇ ಪ್ರಭಾವ ಬೀರಲು ಸಾಧ್ಯವಿಲ್ಲ. ಹಾಗಾಗಿ ಜಾಮೀನು ನೀಡುವಂತೆ ನಲಪಾಡ್ ಪರ ವಕೀಲರಿಂದ ವಾದ ಮಂಡಿಸಲಾಗಿತ್ತು. ಇಂದು ಕೂಡ ಸ್ಪೆಷಲ್ ಪ್ರಾಸಿಕ್ಯೂಟರ್ ಶ್ಯಾಮ್ ಸುಂದರ್ ಅವರಿಂದ ವಾದ ಮಂಡನೆ ನಡೆಯಲಿದೆ.

    ಏನಿದು ಪ್ರಕರಣ?: ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಯುಬಿ ಸಿಟಿ ರೆಸ್ಟೊರೆಂಟ್ ನಲ್ಲಿ ಕಿರಿಕ್ ತೆಗೆದು ವಿದ್ವತ್ ಮೇಲೆ ಹಲ್ಲೆ ನಡೆಸಿದ್ದನು. ಫೆಬ್ರವರಿ 17ರ ರಾತ್ರಿ ಸುಮಾರು 11 ಗಂಟೆಗೆ ವಿದ್ವತ್ ಊಟಕ್ಕೆಂದು ಯುಬಿ ಸಿಟಿ ರೆಸ್ಟೊರೆಂಟ್ ಗೆ ತೆರಳಿದ್ದರು. ಈ ವೇಳೆ ವಿದ್ವತ್ ಮತ್ತು ಮಹಮ್ಮದ್ ನಲಪಾಡ್ ನಡುವೆ ಜಗಳ ನಡೆದಿತ್ತು. ಈ ಜಗಳ ತಾರಕಕ್ಕೇರಿ ನಲಪಾಡ್ ಮತ್ತು ಆತನ ಸ್ನೇಹಿತರು ವಿದ್ವತ್ ಮುಖಕ್ಕೆ ಪಂಚ್ ಕೊಟ್ಟು, ಮನಸ್ಸೋ ಇಚ್ಛೆ ಥಳಿಸಿದ್ದರು. ನಂತರ ಚಿಕಿತ್ಸೆಗೆಂದು ವಿದ್ವತ್ ಮಲ್ಯಾ ಆಸ್ಪತ್ರೆಗೆ ತೆರಳಿದಾಗ ಅಲ್ಲಿಗೂ ಹೋಗಿ ನಲಪಾಡ್ ಮತ್ತು ತಂಡ ಹಲ್ಲೆ ಮಾಡಿತ್ತು.

                                                                                      ವಿದ್ವತ್- ಹಲ್ಲೆಗೊಳಗಾದ ಯುವಕ.
  • ರಾಜ್ಯಸಭೆ ಟಿಕೆಟ್ ಕೈತಪ್ಪಿದ್ದಕ್ಕೆ ಅಸಮಾಧಾನ – ಬಿಜೆಪಿ ಬಿಡ್ತಾರಾ ವಿಜಯ ಸಂಕೇಶ್ವರ್?

    ರಾಜ್ಯಸಭೆ ಟಿಕೆಟ್ ಕೈತಪ್ಪಿದ್ದಕ್ಕೆ ಅಸಮಾಧಾನ – ಬಿಜೆಪಿ ಬಿಡ್ತಾರಾ ವಿಜಯ ಸಂಕೇಶ್ವರ್?

    ಹುಬ್ಬಳ್ಳಿ: ಬಿಜೆಪಿಯಿಂದ ರಾಜ್ಯಸಭೆಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಉದ್ಯಮಿ, ಮಾಜಿ ರಾಜ್ಯಸಭಾ ಸದಸ್ಯ ವಿಜಯ ಸಂಕೇಶ್ವರ್ ಅಸಮಾಧಾನಗೊಂಡಿದ್ದಾರೆ ಅಂತಾ ಹೇಳಲಾಗುತ್ತಿದೆ

    ಹಾಲಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಗೆ  ಮತ್ತೊಮ್ಮೆ ಟಿಕೆಟ್ ನೀಡಿದ್ದು, ವಿಜಯ ಸಂಕೇಶ್ವರ್ ಆಪ್ತ ವಲಯವನ್ನು ಕೆರೆಳಿಸಿದೆ. ಹೀಗಾಗಿ ಬಿಜೆಪಿಗೆ ರಾಜೀನಾಮೆ ನೀಡ್ತಾರೆ ಅನ್ನೋ ಸುದ್ದಿ ಅವರ ಆಪ್ತ ವಲಯದಲ್ಲಿ ಹರಿದಾಡ್ತಿದೆ. ಇದಕ್ಕೆಲ್ಲಾ ತೆರೆ ಎಳೆಯುವ ಸಲುವಾಗಿ ಸ್ವತಃ ಸಂಕೇಶ್ವರ್, ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ಕರೆದಿದ್ದು ತೀವ್ರ ಕುತೂಹಲ ಮೂಡಿಸಿದೆ.

    ವಿಜಯ ಸಂಕೇಶ್ವರ್ ಲಿಂಗಾಯತ ಸಮಾಜದವರು. ಬಿಜೆಪಿಯು ವೋಟ್ ಬ್ಯಾಂಕ್ ಎಂದು ಹೆಚ್ಚು ಅವಲಂಬಿತ ಆಗಿರುವ ಜಾತಿ ಅದು. ಬಿಜೆಪಿಯಲ್ಲಿ ವಿಜಯ ಸಂಕೇಶ್ವರ್ ಹಳಬರು ಹಾಗೂ ಹಿರಿಯರು ಕೂಡ ಆಗಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಆಗಿದ್ದಾಗ ಸಂಕೇಶ್ವರ್ ಸಂಸದರಾಗಿದ್ದರು. ಜತೆಗೆ ಹುಬ್ಬಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ ಪ್ರಬಲವಾದ ಹಿಡಿತವನ್ನು ಹೊಂದಿದವರಾಗಿದ್ದಾರೆ.

  • ಪತಿ ಪ್ರವಾಸಕ್ಕೆ ಹೋಗಿದ್ದಾಗ ಬೇರೊಂದು ಮದ್ವೆಯಾದ ಪತ್ನಿ!

    ಪತಿ ಪ್ರವಾಸಕ್ಕೆ ಹೋಗಿದ್ದಾಗ ಬೇರೊಂದು ಮದ್ವೆಯಾದ ಪತ್ನಿ!

    ಭುವನೇಶ್ವರ: ಪತಿ ಪ್ರವಾಸಕ್ಕೆ ಹೋಗಿದ್ದಾಗ ಪತ್ನಿ ಬೇರೆ ವ್ಯಕ್ತಿಯ ಜೊತೆ ಮದುವೆಯಾಗಿದ್ದು, ಈ ಬಗ್ಗೆ ಪತ್ನಿಯ ವಿರುದ್ಧ ಪತಿ ದೂರು ನೀಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

    ಉಕ್ಕಿನ ನಗರವಾದ ರೂರ್ಕೆಲಾದ ಉದ್ಯಮಿಯೊಬ್ಬರು ಬಿಸಿನೆಸ್ ಪ್ರವಾಸ ಮುಗಿಸಿ ಬರುವಷ್ಟರಲ್ಲಿ ಅವರ ಪತ್ನಿ ಬೇರೊಬ್ಬರನ್ನು ಮದುವೆಯಾಗಿದ್ದಾರೆ. ಈ ಬಗ್ಗೆ ಗುರುವಾರ ನಗರದಲ್ಲಿರುವ ರಘುನಾಥ್ಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಉದ್ಯಮಿ ಒಂದು ವಾರ ಕೆಲಸದ ನಿಮಿತ್ತ ಉತ್ತರ ಪ್ರದೇಶಕ್ಕೆ ತೆರಳಿದ್ದರು. ಅವರು ವಾರಣಾಸಿಯಲ್ಲಿದ್ದಾಗ ತಮ್ಮ ಪತ್ನಿಯ ಮರು ಮದುವೆಯ ವಿಚಾರ ಗೊತ್ತಾಗಿದೆ. 2016ರ ಜುಲೈನಲ್ಲಿ ನಾನು ಮತ್ತು ಬ್ಯಾಂಕರ್ ಮಹಿಳೆಯ ಮದುವೆಯಾಗಿದ್ದಾನೆ ಎಂದು ಮದುವೆ ಪ್ರಮಾಣಪತ್ರವನ್ನು ಸಹ ಅವರು ಪೊಲೀಸರಿಗೆ ಸಲ್ಲಿಸಿದ್ದಾರೆ.

    ಮಾರ್ಚ್ 4ರಂದು ಉದ್ಯಮಿ ವಾರಣಾಸಿಯಲ್ಲಿದ್ದ ಪತ್ನಿಗೆ ಫೋನ್ ಮಾಡಿದ್ದಾರೆ. ಆದರೆ ಆಕೆ ಫೋನ್ ಸ್ವೀಕರಿಸಲಿಲ್ಲ. ನಂತರ ಅವರು ಆಕೆಯ ತಾಯಿಗೆ ಫೋನ್ ಮಾಡಿದ್ದಾರೆ. ಅವರು ರಿಸೀವ್ ಮಾಡಿ ಮಗಳು ಮದುವೆಯಾಗಿದ್ದಾಳೆ, ರಿಸೆಪ್ಷನ್ ಗೆ ಸಿದ್ಧವಾಗುತ್ತಿದ್ದಾಳೆ ಎಂದು ಹೇಳಿದ್ದಾರೆ.

    ಸುದ್ದಿ ತಿಳಿದ ಕೂಡಲೇ ಉದ್ಯಮಿ ವಾರಣಾಸಿಯಿಂದ ಹೊರಟು ರೂರ್ಕೆಲಾಗೆ ಬಂದಿದ್ದು, ಆದರೆ ಪತ್ನಿ ಪೋಷಕರ ಜೊತೆ ವಧುವಿನ ಅವತಾರದಲ್ಲಿ ಬೇರೊಬ್ಬರ ಜೊತೆ ಇದ್ದಿದ್ದನ್ನು ನೋಡಿದ್ದಾರೆ. ನನಗೆ ಮೋಸ ಆಗಿದೆ. ನ್ಯಾಯ ಕೊಡಿಸಿ ಎಂದು ಪೊಲೀಸರನ್ನು ಮನವಿ ಮಾಡಿಕೊಂಡಿದ್ದಾರೆ.

    ವಧುವಿನ ತಂದೆ ಮಾತ್ರ ಉದ್ಯಮಿ ಅವಳನ್ನು ವಿವಾಹವಾಗಿರಲಿಲ್ಲ ಎಂದು ನಿರಾಕರಿಸಿದ್ದು, ಆತನು ನಕಲಿ ಮದುವೆ ಪ್ರಮಾಣಪತ್ರವನ್ನು ತಯಾರಿಸಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದರು.

    ಉದ್ಯಮಿಯ ದೂರಿನ ಮೇಲೆ ಇನ್ನೂ ಎಫ್‍ಐಆರ್ ದಾಖಲಿಸಿಲ್ಲ. ನಾವು ದಾಖಲೆಗಳನ್ನು ಪರಿಶೀಲಿಸುತ್ತೇವೆ. ಪರಿಶೀಲನೆಯ ನಂತರ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ರಘುನಾಥ್ಪಲ್ಲಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆರ್. ಪ್ರಧಾನ್ ಹೇಳಿದ್ದಾರೆ.

     

  • 5 ವರ್ಷದ ಮಗು, ಪತ್ನಿ ಜೊತೆಗೆ 12 ಅಂತಸ್ತಿನ ಕಟ್ಟಡದಿಂದ ಜಿಗಿದು ಉದ್ಯಮಿ ಸಾವು

    5 ವರ್ಷದ ಮಗು, ಪತ್ನಿ ಜೊತೆಗೆ 12 ಅಂತಸ್ತಿನ ಕಟ್ಟಡದಿಂದ ಜಿಗಿದು ಉದ್ಯಮಿ ಸಾವು

    ಸೂರತ್: ಉದ್ಯಮಿಯೊಬ್ಬ ಸಾಲಬಾಧೆ ತಾಳಲಾರದೇ ತನ್ನ ಪತ್ನಿ ಹಾಗೂ ಮಗುವಿನೊಂದಿಗೆ 12 ಅಂತಸ್ತಿನ ಕಟ್ಟಡದಿಂದ ಜಿಗಿದು ಸಾವನ್ನಪ್ಪಿದ್ದ ಘಟನೆ ಗುಜರಾತ್‍ನ ಸೂರತ್ ನಗರದ ಸರ್ತಾನಾದಲ್ಲಿ ನಡೆದಿದೆ.

    ವಿಜಯ್ ವಘಸಿಯಾ (34), ಪತ್ನಿ ರೇಖಾ (30) ಹಾಘೂ ವಿನಯ್ (5) ಮೃತ ದುದೈವಿಗಳು. ಮೃತರು ಸರ್ತಾನಾದ ಬಿಆರ್ ಟಿಎಸ್‍ನ ಕೆನಲ್ ರಸ್ತೆಯಲ್ಲಿರುವ ಮೆಜಿಸ್ಟಿಕ ಟವರ್ ಬಳಿಯಿರುವ ಅಪಾರ್ಟ್‍ ಮೆಂಟ್‍ವೊಂದರಲ್ಲಿ ವಾಸವಾಗಿದ್ದರು. ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಆರಂಭದಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ತನಿಖೆ ವೇಳೆ ಟೆರೇಸ್ ಬಾಗಿಲು ಬೀಗ ಹಾಕಿದ್ದರಿಂದ ಈ ಮೂವರು 12ನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ವಿಚಾರ ತಿಳಿದು ಬಂದಿದೆ.

    ಎಂದಿನಂತೆ ವಿಜಯ್ ತನ್ನ ಅಪಾರ್ಟ್‍ಮೆಂಟ್ ಸ್ನೇಹಿತ ಗೌರವ್ ಜೊತೆ ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದಾರೆ. ಗೌರವ್ ಜೊತೆ ಮಾತನಾಡಿಕೊಂಡು ಹೋಗುವಾಗ ನೀರಿನ ಬಾಟಲಿ ತೆಗೆದುಕೊಂಡು ಹೋಗಲು ಮತ್ತೆ ಅಪಾರ್ಟ್‍ಮೆಂಟ್‍ಗೆ ಬಂದಿದ್ದಾರೆ. ಈ ಸಮಯದಲ್ಲೇ ಮೂವರು ಕಟ್ಟಡದ 12ನೇ ಅಂತಸ್ತಿನಿಂದ ಜಿಗಿದಿದ್ದಾರೆ.

     

    ಈ ಘಟನೆ ನಡೆಯುತ್ತಿದ್ದಂತೆ ಗೌರವ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾಗ ವಿಜಯ್ ಜೇಬಿನಲ್ಲಿ ಡೆತ್‍ನೋಟ್ ಸಿಕ್ಕಿದೆ. ಆ ಡೆತ್‍ನೋಟ್ ವಿಜಯ್ ತನ್ನ ತಮ್ಮನಿಗಾಗಿ ಬರೆದಿದ್ದರು.

    ಡೆತ್‍ನೋಟ್‍ನಲ್ಲಿ ಏನಿದೆ?: ವಿಜಯ್ ಆ ಡೆತ್‍ನೋಟ್‍ನನ್ನು ತನ್ನ ತಮ್ಮನಿಗಾಗಿ ಬರೆದಿದ್ದು, ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಸಾವಿಗೆ ನಾನೇ ಕಾರಣ, ನನ್ನ ಬಿಸಿನೆಸ್‍ನನ್ನು ನನ್ನ ತಮ್ಮನೇ ನೋಡಿಕೊಳ್ಳಬೇಕು. ಸಾಲಬಾಧೆ ತಾಳಲಾರದೇ ನಾನು ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ವಿಜಯ್ ಡೆತ್‍ನೋಟ್‍ನಲ್ಲಿ ಬರೆದಿದ್ದಾರೆ.

     

    ಈ ಘಟನೆ ನಡೆದ ನಂತರ ಸೂರತ್ ನಗರ ಪೊಲೀಸ್ ಆಯುಕ್ತ ಸುದ್ದಿಗೋಷ್ಠಿ ನಡೆಸಿ ಯಾರೂ ಈ ರೀತಿ ಮಾಡಿಕೊಳ್ಳದಂತೆ ತಿಳಿಸಿದ್ದಾರೆ. ನಿಮಗೆ ಯಾವುದೇ ಸಮಸ್ಯೆ ಇದ್ದರೆ ‘ಜೀವನ್ ಆಸ್ತಾ’ ಆತ್ಮಹತ್ಯೆ ಸಹಾಯವಾಣಿಗೆ ಸಂಪರ್ಕಿಸಿ ಎಂದು ತಿಳಿಸಿದ್ದಾರೆ.

    ಸದ್ಯ ಪೊಲೀಸರು ಈ ಕೇಸನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ವಿಜಯ್‍ಗೆ ಹಣ ನೀಡಿದವರು ತೊಂದರೆ ನೀಡಿದ್ದಾರಾ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಮನೆಯ ಮುಖ್ಯದ್ವಾರದಲ್ಲೇ ಸೇಫ್ಟಿ ಸೆನ್ಸರ್ ಲಾಕರ್ – ಒಳಗಡೆ ಸಿಕ್ತು ಬರೋಬ್ಬರಿ 20 ಲಕ್ಷ ರೂ.

    ಮನೆಯ ಮುಖ್ಯದ್ವಾರದಲ್ಲೇ ಸೇಫ್ಟಿ ಸೆನ್ಸರ್ ಲಾಕರ್ – ಒಳಗಡೆ ಸಿಕ್ತು ಬರೋಬ್ಬರಿ 20 ಲಕ್ಷ ರೂ.

    ಬೆಂಗಳೂರು: ಸಾಮಾನ್ಯವಾಗಿ ಮನೆಯ ಬೆಲೆ ಬಾಳುವ ವಸ್ತುಗಳನ್ನು ಕಾಪಾಡಿಕೊಳ್ಳಲು ಮನೆಯ ಮಲಗುವ ಕೊಠಡಿ, ಅಲ್ಮೆರಾಗಳಲ್ಲಿ ಸೇಫ್ಟಿ ಲಾಕರ್ ಮಾಡಿಸಲಾಗುತ್ತದೆ. ತೀರಾ ಇತ್ತೀಚೆಗೆ ಉದ್ಯಮಿಯೊಬ್ಬರು ತನ್ನ ಮನೆಯ ಬಾತ್‍ರೂಮ್‍ನಲ್ಲಿ ಸೇಫ್ಟಿ ಲಾಕರ್ ಮಾಡಿಸಿ ಸುದ್ದಿಯಾಗಿದ್ದರು. ಆದರೆ ಇಲ್ಲೊಬ್ಬ ಮನೆಯ ಬಾಗಿಲಿನ ವಾಸ್ಕಲ್‍ನಲ್ಲೇ ಸೀಕ್ರೆಟ್ ಲಾಕರ್ ಮಾಡಿಸಿದ್ದಾನೆ.

    ಹೌದು, ಐಟಿ ಅಧಿಕಾರಿಗಳು ಉದ್ಯಮಿ ಚಳ್ಳಕೆರೆಯ ವೀರೇಂದ್ರ ಮನೆ ಮೇಲೆ ದಾಳಿ ಮಾಡಿದಾಗ ಬಾತ್ ರೂಮ್‍ನಲ್ಲಿ ಸೀಕ್ರೆಟ್ ಲಾಕರ್ ಅಳವಡಿಸಿದ್ದ ವಿಚಾರ ದೊಡ್ಡ ಸುದ್ದಿಯಾಗಿತ್ತು. ಆದರೆ ಈಗ ನಗರದ ಯಲಹಂಕದ ರೇಣುಕಾ ಪ್ರಸಾದ್ ಎಂಬಾತ ತನ್ನ ಮನೆಯ ಬಾಗಿಲಿನಲ್ಲೇ ಸೀಕ್ರೆಟ್ ಲಾಕರ್ ಮಾಡಿಸಿಕೊಂಡಿದ್ದಾನೆ.

    ರೇಣುಕಾ ಪ್ರಸಾದ್ ಮನೆಯ ಬಾಗಿಲನ್ನು ದೊಡ್ಡ ಮರದ ದಿಮ್ಮಿಯಿಂದ ಮಾಡಿಸಲಾಗಿದ್ದು, ಇದರಲ್ಲಿ ಲಾಕರ್ ಇದೆ ಎನ್ನುವುದು ಯಾರಿಗೂ ಕೂಡ ಗೊತ್ತಾಗುವುದಿಲ್ಲ. ವಿಶೇಷ ಎಂದರೆ ಈ ಸೀಕ್ರೆಟ್ ಲಾಕರ್ ಗೆ ಸೆನ್ಸರ್ ಸಹ ಮಾಡಿಸಲಾಗಿದ್ದು, ಲಾಕರ್ ಓಪನ್ ಆಗ ಬೇಕು ಎಂದರೆ ರೇಣುಕಾ ಪ್ರಸಾದ್‍ನ ಕಿರುಬೆರಳು ಸ್ಕಾನ್ ಮಾಡಬೇಕಾಗುತ್ತದೆ. ಇಲ್ಲದೇ ಇದ್ದರೆ ಲಾಕರ್ ಓಪನ್ ಮಾಡಲು ಸಾಧ್ಯವೇ ಇಲ್ಲ.

    ಸೀಕ್ರೆಟ್ ಲಾಕರ್ ಬಹಿರಂಗವಾಗಿದ್ದು ಹೇಗೆ?: ಜನವರಿ 11 ರಂದು ಯಲಹಂಕದ ಕೋಟ್ಯಾಧಿಪತಿ ಮಲ್ಲಿಕಾರ್ಜುನ್ ಎಂಬವರನ್ನು ಅಪಹರಣ ಮಾಡಿ 80 ಲಕ್ಷ ಹಣ ಪಡೆದು ಅವರನ್ನು ಬಿಡುಗಡೆ ಮಾಡಿದ್ದರು. ಆದರೆ ಹಣವನ್ನು ಪಡೆದ ಆರೋಪಿಗಳು ತಲಾ 20 ಲಕ್ಷದಂತೆ ಹಣ ಹಂಚಿಕೊಂಡು ಸುಮ್ಮನಾಗಿದ್ದಾರೆ.

    ಘಟನೆ ಕುರಿತು ಮಾಹಿತಿ ತಿಳಿದ ಬಳಿಕ ಆರೋಪಿಗಳಿಗಾಗಿ ಬೆನ್ನತ್ತಿದ ಪೊಲೀಸರಿಗೆ ರೇಣುಕಾ ಪ್ರಸಾದ್, ಆರ್ಶಿಯಾ ಸೇರಿದಂತೆ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸುತ್ತಾರೆ. ಈ ವೇಳೆ ಪ್ರಕರಣದ ಪೂರ್ಣ ಮಾಹಿತಿ ಪಡೆದ ಪೊಲೀಸರು ಅಪಹರಣ ಮಾಡಿ ಮಲ್ಲಿಕಾರ್ಜುನ್ ಅವರಿಂದ ಪಡೆದ ಹಣವನ್ನು ವಶ ಪಡಿಸಲು ಮುಂದಾಗುತ್ತಾರೆ.

    ಈ ವೇಳೆ ಅಪಹರಣದಲ್ಲಿ ಪ್ರಮುಖ ಪಾತ್ರವಹಿಸಿದ್ದ ಆರೋಪಿ ರೇಣುಕಾ ಪ್ರಸಾದ್ ಮನೆಗೆ ಪೊಲೀಸರು ಹಣ ವಶಪಡಿಸಿಕೊಳ್ಳಲು ತೆರಳಿದ್ದಾರೆ. ಆದರೆ ಮನೆಯ ಎಲ್ಲಾ ಕಡೆ ಹುಡುಕಿದರೂ ಬಚ್ಚಿಟ್ಟಿದ ಹಣ ಪೊಲೀಸರಿಗೆ ಸಿಕ್ಕಿರಲಿಲ್ಲ. ತದನಂತರ ಆರೋಪಿಯನ್ನು ತೀವ್ರ ವಿಚಾರಣೆ ನಡೆಸಿದ ವೇಳೆ ಸೀಕ್ರೆಟ್ ಲಾಕರ್ ನ ಸತ್ಯಾಂಶ ಬೆಳಕಿಗೆ ಬಂದಿದೆ. ಆರೋಪಿ ತನ್ನ ಕಿರುಬೆರಳಿನಿಂದ ಸೀಕ್ರೆಟ್ ಲಾಕರ್ ಓಪನ್ ಮಾಡಿದ್ದು, ಅದರಲ್ಲಿ 20 ಲಕ್ಷ ಹಣ, ಚಿನ್ನಾಭರಣ ಮತ್ತು ಒಂದು ಪರವಾನಗಿ ಹೊಂದಿರುವ ಗನ್ ಪತ್ತೆಯಾಗಿದೆ.

  • ಈ ವಿಶಿಷ್ಟ ನಂಬರ್ ಪ್ಲೇಟ್ ಗೆ 5 ಕೋಟಿ ರೂ. ಖರ್ಚು ಮಾಡಿದ ಉದ್ಯಮಿ!

    ಈ ವಿಶಿಷ್ಟ ನಂಬರ್ ಪ್ಲೇಟ್ ಗೆ 5 ಕೋಟಿ ರೂ. ಖರ್ಚು ಮಾಡಿದ ಉದ್ಯಮಿ!

    ದುಬೈ: ಕಾರಿಗೆ ಫ್ಯಾನ್ಸಿ ನಂಬರ್ ಪ್ಲೇಟ್ ಪಡೆಯಲು ಸಾಕಷ್ಟು ಹಣ ಖರ್ಚು ಮಾಡೋ ಬಗ್ಗೆ ಕೇಳಿರ್ತೀರ. ಹಾಗೆ ಇಲ್ಲಿನ ಉದ್ಯಮಿಯೊಬ್ಬರು 3.12 ದಿರ್ಹಮ್(ಅಂದಾಜು 5.46 ಕೋಟಿ ರೂ.) ಖರ್ಚು ಮಾಡಿ ವಿಶಿಷ್ಟ ನಂಬರ್ ಪ್ಲೇಟ್ ತಮ್ಮದಾಗಿಸಿಕೊಂಡಿದ್ದಾರೆ.

    ಉದ್ಯಮಿ ಮಜೀದ್ ಮುಸ್ತಾಫಾ ಎಎ10 ನಂಬರ್ ಪ್ಲೇಟ್ ಮಾಲೀಕರಾಗಿದ್ದಾರೆ. ಶನಿವಾರದಂದು ನಡೆದ ರೋಡ್ಸ್ ಅಂಡ್ ಟ್ರಾನ್ಸ್ ಪೋರ್ಟ್ ಅಥಾರಿಟಿಯ 97ನೇ ಹರಾಜಿನಲ್ಲಿ ಎಎ ಕೋಡ್ ಇರೋ 12, 50, 100, 333, 786, 1000, 11111 ಹಾಗೂ 55555 ಎಂಬ ವಿಶೇಷ ನಂಬರ್ ಪ್ಲೇಟ್‍ ಗಳನ್ನು ಹರಾಜು ಹಾಕಲಾಯ್ತು.

    ಈ ಕುರಿತು ಮಾತನಾಡಿದ ಪುಸ್ತಾಫಾ, ತಾನು ಈ ನಂಬರ್ ಪ್ಲೇಟನ್ನ ನನ್ನ ಕಾರೊಂದಕ್ಕೆ ಹಾಕಿಸುತ್ತೇನೆ ಎಂದು ಹೇಳಿದ್ದಾರೆ. 2002ರಿಂದಲೂ ಆರ್ ಟಿಐ ಹರಾಜಿನಲ್ಲಿ ಭಾಗಿಯಾಗುತ್ತಿದ್ದ ಮುಸ್ತಾಫಾ ಈವರೆಗೆ ಇಂತಹ 5 ಸಾವಿರ ವಿಶಿಷ್ಟ ನಂಬರ್ ಪ್ಲೇಟ್ ಗಳನ್ನ ತಮ್ಮದಾಗಿಸಿಕೊಂಡಿದ್ದಾರೆ. ಇವುಗಳಲ್ಲಿ ಐ10 ನಂಬರ್ ಪ್ಲೇಟ್ ಅತ್ಯಂತ ದುಬಾರಿಯಾಗಿದೆ. ಇದಕ್ಕೆ ಅವರು ಹರಾಜು ಪ್ರಕ್ರಿಯೆಯಲ್ಲಿ 6 ದಿರ್ಹಮ್ ಅಂದ್ರೆ (ಅಂದಾಜು 10.5 ಕೋಟಿ ರೂ.) ನೀಡಿದ್ದಾರೆ.

    ಶನಿವಾರ ನಡೆದ ಹರಾಜಿನಲ್ಲಿ ಮುಸ್ತಾಫಾ ಅತ್ಯಂತ ದುಬಾರಿ ನಂಬರ್ ಪ್ಲೇಟ್ ತನ್ನದಾಗಿಸಿಕೊಂಡಿದ್ದು, ಎರಡನೇ ದುಬಾರಿ ನಂಬರ್ ಪ್ಲೇಟ್ ಆದ 2212 ಎಸ್ಸಾ ಅಲ್ ಹಬೈ ಎಂಬವರು 2.72 ಮಿಲಿಯನ್ ದಿರ್ಹಮ್ (ಅಂದಾಜು 4.7 ಕೋಟಿ ರೂ.) ಕೊಟ್ಟು ಪಡೆದಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಎಎ50 ನಂಬರ್ ಪ್ಲೇಟ್ ಪಡೆದ ಮತ್ತೊಬ್ಬರು ಸುಮಾರು ದಿರ್ಹಮ್ 1.84 ಮಿಲಿಯನ್ ದಿರ್ಹಮ್ (ಅಂದಾಜು 3.2 ಕೋಟಿ ರೂ.) ನೀಡಿದ್ದಾರೆ.

    32 ವರ್ಷದ ಜನರ್ ಖಮಿಸ್ ಎಂಬ ಮತ್ತೋರ್ವ ಉದ್ಯಮಿ ಈ ಹರಾಜು ಪ್ರಕ್ರಿಯೆಯಲ್ಲಿ ಎರಡನೇ ಬಾರಿ ಭಾಗವಹಿಸಿದ್ದು, ಅವರು 700,000 ದಿರ್ಹಮ್ (ಅಂದಾಜು 1.2 ಕೋಟಿ ರೂ.) ನೀಡಿ ಎಎ333 ಸಂಖ್ಯೆಯ ನಂಬರ್ ಪ್ಲೇಟ್ ತನ್ನದಾಗಿಸಿಕೊಂಡಿದ್ದಾರೆ. ಈ ಮೊದಲು ಭಾಗವಹಿಸಿದ್ದ ಹರಾಜು ಕಾರ್ಯಕ್ರಮದಲ್ಲಿ ಅವರು 5000,000(ಅಂದಾಜು 87 ಲಕ್ಷ ರೂ.) ದಿರ್ಹಮ್ ನೀಡಿ ವಿಶಿಷ್ಟ ನಂಬರ್ ಪ್ಲೇಟ್ ಪಡೆದುಕೊಂಡಿದ್ದು, ಅದರಲ್ಲಿ ಎರಡೇ ತಿಂಗಳಲ್ಲಿ ಅವರಿಗೆ 200,000 ದಿರ್ಹಮ್(ಅಂದಾಜು 35 ಲಕ್ಷ ರೂ.) ಲಾಭವಾಗಿದೆ ಎಂದು ವರದಿಯಾಗಿದೆ.

    ಎಎ333 ಸಂಖ್ಯೆಯ ನಂಬರ್ ಪ್ಲೇಟ್ ನಿಜಕ್ಕೂ ವಿಶೇಷವಾಗಿದ್ದು, ಈ ನಂಬರ್ ಪ್ಲೇಟನ್ನ ಲಂಬೋರ್ಗಿನಿ ಕಾರಿಗೆ ಹಾಕಿಸಲು ಇಚ್ಛಿಸುತ್ತೇನೆ. ಅಲ್ಲದೇ ಒಳ್ಳೆಯ ಬೆಲೆ ಸಿಕ್ಕರೆ ಅದನ್ನು ಮಾರಾಟ ಮಾಡುತ್ತೇನೆ ಅಂತ ಮುಸ್ತಾಫಾ ಹೇಳಿದ್ದಾರೆ.

    ವಿಶೇಷ ನಂಬರ್ ಪ್ಲೇಟ್ ಗಳ ಬೆಲೆಗಳು ಇಂತಿವೆ:

    ಎಎ10- 5.46 ಕೋಟಿ ರೂ.
    ಎಎ12- 4.76 ಕೋಟಿ ರೂ.
    ಎಎ50- 3.2 ಕೋಟಿ ರೂ.
    ಎಎ11111- 2.1 ಕೋಟಿ ರೂ.
    ಎಎ100- 1.5 ಕೋಟಿ ರೂ.
    ಎಎ333- 1.2 ಕೋಟಿ ರೂ.
    ಎಎ55555- 1.17 ಕೋಟಿ ರೂ.
    ಎಎ1000- 1.10 ಕೋಟಿ ರೂ.
    ಎಎ8888-87 ಲಕ್ಷ ರೂ.
    ಎಎ786- 78 ಲಕ್ಷ ರೂ.

  • ಜಿಎಸ್‍ ಟಿ ಹೆಸ್ರಲ್ಲಿ ಉದ್ಯಮಿ ಅಕೌಂಟ್‍ ನಲ್ಲಿದ್ದ 24 ಲಕ್ಷ ರೂ. ಮಂಗಮಾಯ!

    ಜಿಎಸ್‍ ಟಿ ಹೆಸ್ರಲ್ಲಿ ಉದ್ಯಮಿ ಅಕೌಂಟ್‍ ನಲ್ಲಿದ್ದ 24 ಲಕ್ಷ ರೂ. ಮಂಗಮಾಯ!

    ದಾವಣಗೆರೆ: ಜಿಎಸ್‍ ಟಿ ಹೆಸರಲ್ಲಿ ಉದ್ಯಮಿ ಅಕೌಂಟ್ ನಲ್ಲಿದ್ದ ಲಕ್ಷಾಂತರ ರೂಪಾಯಿ ಮಂಗಮಾಯವಾಗಿರೋ ಘಟನೆಯೊಂದು ನಡೆದಿರುವ ಬಗ್ಗೆ ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ.

    ದಾವಣಗೆರೆಯ ಪೂಜಾರ್ ಪ್ರೋಸೆಸ್ ಕಂಪನಿಗೆ ಸೇರಿದ ಅಕೌಂಟ್ ನಿಂದ 24 ಲಕ್ಷ ರೂಪಾಯಿ ಹಣ ಮಾಯವಾಗಿದೆ. ಕಂಪನಿ ಮಾಲೀಕ ನಾಗರಾಜ್ ಕೆಲ ಚೆಕ್ ಗಳನ್ನು ಗ್ರಾಹಕರಿಗೆ ನೀಡಿದ್ರು. ಆದ್ರೆ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲ ಅಂತಾ ಗ್ರಾಹಕರು ಆರೋಪಿಸಿದ್ರು.

    ಮೊನ್ನೆ ಲಕ್ಷಾಂತರ ರೂಪಾಯಿ ಖಾತೆಯಲ್ಲಿತ್ತು. ಇದೀಗ ಝಿರೋ ಬ್ಯಾಲೆನ್ಸ್ ನಿಂದ ಆಘಾತಗೊಂಡು ಬ್ಯಾಂಕ್ ಗೆ ಹೋಗಿ ವಿಚಾರಿಸಿದ್ರು. ನೀವು ಜಿಎಸ್ ಟಿ ಕಟ್ಟಿಲ್ಲ. ಅದಕ್ಕೆ ಬಹುಶಃ ಮುಟ್ಟುಗೋಲು ಹಾಕಿಕೊಂಡಿರಬಹುದು. ನಮ್ಮಿಂದ ಯಾವುದೇ ತೊಂದರೆಯಾಗಿಲ್ಲ ಅಂತಾ ಬ್ಯಾಂಕ್ ಆಫ್ ಇಂಡಿಯಾ ಸಮರ್ಥಿಸಿಕೊಂಡಿದೆ.

    ಈ ಕಡೆ ಜಿಎಸ್ ಟಿ ಆಫೀಸ್ ಗೆ ಹೋಗಿ ಕೇಳಿದ್ರೆ ನಾವು ಹಣ ಮುಟ್ಟುಗೋಲು ಹಾಕಿಕೊಳ್ಳುವಾಗ ಗ್ರಾಹಕರಿಗೆ ನೋಟಿಸ್ ಕೊಡ್ತಿವಿ. ಜಿಎಸ್ ಟಿ ಜಾರಿಗೆ ಬಂದಾಗಿನಿಂದ ಪ್ರತಿ ತಿಂಗಳು ತಪ್ಪದೆ ಜಿಎಸ್ ಟಿ ಕಟ್ಟಿಕೊಂಡು ಬಂದಿದ್ದಾರೆ. ಕಳೆದ ತಿಂಗಳು ಮಾತ್ರ ಸರ್ವರ್ ಬ್ಯುಸಿ ಇದ್ದುದರಿಂದ ಒಂದು ದಿನ ತಡವಾಯಿತು. ಅಲ್ಲದೆ 5 ಬಾರಿ ಪ್ರಯತ್ನ ಮಾಡಿದ್ರು ಟ್ರಾನ್ಷೇಷನ್ ಫೇಲ್ ಆಗುತ್ತಾ ಬಂದಿತು. ಕೊನೆಯ ಬಾರಿ ಕಳುಹಿಸಿದಾಗ ಸಕ್ಸಸ್ ಆಯ್ತು. ಆದ್ರೆ ಈಗ ನೋಡಿದ್ರೆ ನಮ್ಮ ಖಾತೆಯಲ್ಲಿ ಹಣವನ್ನು ಮುಟ್ಟುಗೋಲು ಆಗಿದೆ. ಇದು ಬ್ಯಾಂಕ್ ನವರ ಎಡವಟ್ಟೋ ಇಲ್ಲ ಜಿಎಸ್‍ಟಿ ಯವರ ಯಡವಟ್ಟೋ ಗೊತ್ತಿಲ್ಲ. ಬ್ಯಾಕ್ ನಲ್ಲಿ ಅಕೌಂಟ್ ಸ್ಟೇಟಸ್ ತೆಗೆಸಿದ್ರೆ ಜಿ ಎಸ್ ಟಿ ರಿಕವರಿ ಎಂದು ತೋರಿಸುತ್ತಿದೆ ಅಂತ ಹೇಳಿಕೆ ನೀಡಿದ್ದಾರೆ.

  • ಸೀಟ್ ಬೆಲ್ಟ್ ಹಾಕಿಲ್ಲ ಎಂದು ಕ್ಯಾಬ್ ನಿರಾಕರಿಸಿದಕ್ಕೆ ಉದ್ಯಮಿ ಮೇಲೆ ಡ್ರೈವರ್‍ ಗಳಿಂದ ಹಲ್ಲೆ

    ಸೀಟ್ ಬೆಲ್ಟ್ ಹಾಕಿಲ್ಲ ಎಂದು ಕ್ಯಾಬ್ ನಿರಾಕರಿಸಿದಕ್ಕೆ ಉದ್ಯಮಿ ಮೇಲೆ ಡ್ರೈವರ್‍ ಗಳಿಂದ ಹಲ್ಲೆ

    ಬೆಂಗಳೂರು: ಮುಂಬೈ ಮೂಲದ ಉದ್ಯಮಿ ದೇವ್ ಬ್ಯಾನರ್ಜಿ ಮೇಲೆ ಊಬರ್ ಕ್ಯಾಬ್ ನ ಚಾಲಕರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ಜಾಗದಲ್ಲಿ ನಡೆದಿದೆ.

    ಉದ್ಯಮಿ ದೇವ್ ಬ್ಯಾನರ್ಜಿ ತನ್ನ ಸ್ನೇಹಿತನ ಜೊತೆ ಕಳೆದ ರಾತ್ರಿ ಮುಂಬೈಯಿಂದ ಬೆಂಗಳೂರಿಗೆ ಬರಲು ಊಬರ್ ಕ್ಯಾಬ್ ಬುಕ್ ಮಾಡಿದರು. ಆದರೆ ಕ್ಯಾಬ್ ಚಾಲಕ ಸೀಟ್ ಬೆಲ್ಟ್ ಹಾಕಿರಲಿಲ್ಲ. ಇದನ್ನು ಪ್ರಶ್ನಿಸಿದ್ದಕ್ಕೆ ಕ್ಯಾಬ್ ಚಾಲಕ ಕೋಪಗೊಂಡಿದ್ದಾನೆ.

    ಚಾಲಕ ವರ್ತನೆಯಿಂದ ಬೇಸತ್ತ ದೇವ್ ಹಾಗೂ ಅವರ ಸ್ನೇಹಿತ ಆ ಕ್ಯಾಬ್ ನಿರಾಕರಿಸಿ ಮತ್ತೊಂದು ಕ್ಯಾಬ್ ಹತ್ತಿದ್ದರು. ದೇವ್ ಕ್ಯಾಬ್ ನಿರಾಕರಿಸಿದಕ್ಕೆ ಊಬರ್ ಕ್ಯಾಬ್ ನ ಚಾಲಕ ಸಿಟ್ಟಿಗೆದ್ದಿದ್ದಾನೆ. ನಂತರ ಚಾಲಕನ ಜೊತೆಗೆ ಇತರ ಚಾಲಕರು ಸೇರಿ ಊಬರ್ ಕ್ಯಾಬ್ ಪಾರ್ಕಿಂಗ್ ರಸ್ತೆಯಲ್ಲಿ ದೇವ್ ಇದ್ದ ಕ್ಯಾಬ್ ನನ್ನು ಅಡ್ಡಗಟ್ಟಿದ್ದಾರೆ. ನಂತರ ಸುಮಾರು 30 ನಿಮಿಷಕ್ಕೂ ಹೆಚ್ಚು ಸಮಯ ದೇವ್ ಮೇಲೆ ಹಲ್ಲೆ ನಡೆಸಿದ್ದಾರೆ.

    ಊಬರ್ ಚಾಲಕರ ಥಳಿತಕ್ಕೆ ಹೆದರಿದ ದೇವ್ ಪ್ರಜ್ಞೆ ತಪ್ಪಿದ ಹಾಗೆ ನಾಟಕ ಮಾಡಿದ್ದಾರೆ. ದೇವ್ ಪ್ರಜ್ಞೆ ತಪ್ಪಿದ್ದನ್ನು ನೋಡಿ ಊಬರ್ ಚಾಲಕರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಬಳಿಕ ಸ್ನೇಹಿತನ ಸಹಾಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ದೇವ್ ಇಂದಿರಾನಗರ ಠಾಣೆಯಲ್ಲಿ ದೂರು ಕೊಡಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಈ ಘಟನೆ ವಿಮಾನ ನಿಲ್ದಾಣದ ಆವರಣದಲ್ಲಿ ಆಗಿರುವ ಕಾರಣ ಏರ್‍ ಪೋರ್ಟ್ ಠಾಣೆಯಲ್ಲಿ ದೂರು ನೀಡುವಂತೆ ಸಲಹೆ ನೀಡಿದ್ದಾರೆ.

  • ಉದ್ಯಮಿಯ ಮೊಮ್ಮಗನ ಪುಂಡಾಟ: ಆರೋಪಿ ವಿಷ್ಣು ತಂದೆ ಹೇಳಿದ್ದು ಹೀಗೆ

    ಉದ್ಯಮಿಯ ಮೊಮ್ಮಗನ ಪುಂಡಾಟ: ಆರೋಪಿ ವಿಷ್ಣು ತಂದೆ ಹೇಳಿದ್ದು ಹೀಗೆ

    ಬೆಂಗಳೂರು: ಉದ್ಯಮಿಯ ಮೊಮ್ಮಗನ ಪುಂಡಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆದರೆ ವಿಷ್ಣು ಇನ್ನೂ ಕೂಡ ಪೊಲೀಸರಿಗೆ ಮರೀಚಿಕೆಯಾಗಿಯೇ ಉಳಿದಿದ್ದಾನೆ. ಇದರ ಬೆನ್ನಲ್ಲೆ ಇಂದು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುತ್ತಾ ಇದ್ದು ಪೊಲೀಸರ ಕಣ್ಣಿಗೆ ಮಣ್ಣೆರಚುವ ಪ್ರಯತ್ನ ಮಾಡುತ್ತಿದ್ದಾನೆ.

    ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಪರಾರಿಯಾಗಿರೋ ವಿಷ್ಣುವಿಗೆ ಇಂದು ನಿರೀಕ್ಷಣಾ ಜಾಮೀನು ಸಿಗುತ್ತದೆಯೇ ನೋಡಬೇಕಿದೆ. ಆದರೆ ವಿಷ್ಣುವಿಗಾಗಿ ಹೈದರಾಬಾದ್ ಮತ್ತು ಗೋವಾದಲ್ಲಿ ಹುಡುಕಾಟ ಮಾಡುತ್ತಿದ್ದು ವಿಷ್ಣುವಿನ ಅಪ್ಪ ಶ್ರೀನಿವಾಸ್ ಮೂರ್ತಿ ಅವರನ್ನು ಹೈದರಾಬಾದ್‍ನಲ್ಲೆಲ್ಲಾ ಅಲೆಸುತ್ತಿದ್ದಾರೆ.

     

    ಈ ನಡುವೆ ಸ್ಪಷ್ಟನೆ ನೀಡಿರುವ ವಿಷ್ಣು ತಂದೆ ಶ್ರೀನಿವಾಸ್ ಮೂರ್ತಿ, ವಿಷ್ಣು ಡ್ರಗ್ ವ್ಯಸನಿ ಅಲ್ಲ. ಆತನ ಕಾರಿನಲ್ಲಿ ಡ್ರಗ್ ಸಿಕ್ಕಿರುವ ಸಾಧ್ಯತೆ ಇಲ್ಲ. ಅಪಘಾತವಾದಾಗ ಯಾರೋ ತಂದು ಇಟ್ಟಿರಬಹುದು ಅನ್ನಿಸುತ್ತಿದೆ. ಇನ್ನು ಮಾಧ್ಯಮಗಳಲ್ಲಿ ಸುದ್ದಿ ನೋಡಿ ಆಸ್ಪತ್ರೆಯಿಂದ ಹೊರಟು ಹೋಗಿರಬಹುದು. ಆತ ಎಲ್ಲಿ ಹೋಗಿದ್ದಾನೆ ಎಂಬುದು ಗೊತ್ತಿಲ್ಲ ಅಂತಾ ತಿಳಿಸಿದ್ದಾರೆ. ಅಲ್ಲದೇ ಘಟನೆಯಿಂದ ನಮ್ಮ ಕುಟುಂಬದ ಗೌರವಕ್ಕೆ ಕುಂದು ಉಂಟಾಗದಂತೆ ಕಾಪಾಡಬೇಕೆಂದೂ ಮನವಿ ಮಾಡಿಕೊಂಡಿದ್ದಾರೆ.

    ಅಪಘಾತ ನಡೆದಿದ್ದು ಹೇಗೆ?
    ಗೀತಾವಿಷ್ಣು ಅವರು ಜಯನಗರದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ. ಘಟನೆ ನಡೆದ ದಿನ ಅವರು ವ್ಯಾಪಾರ ಮುಗಿಸಿ ಮನೆಗೆ ತೆರಳುತ್ತಿದ್ದರು. ಹಾಗೆ ತೆರಳುವ ಹೊತ್ತಲ್ಲಿ ಅವರು ಹೋಗುವ ದಾರಿಯಲ್ಲಿ ಗ್ರೀನ್ ಸಿಗ್ನಲ್ ಇದ್ದುದರಿಂದ ಚಾಲಕರು ವಾಹನವನ್ನು ಮುನ್ನಡೆಸುತ್ತಿದ್ದರು. ಅದೇ ಹೊತ್ತಿಗೆ ಪಕ್ಕದ ರಸ್ತೆಯಿಂದ ರೆಡ್ ಸಿಗ್ನಲ್ ಇದ್ದಾಗಲ್ಲೂ ಮಾರುತಿ ಓಮ್ನಿ ವಾಹನ ವೇಗವಾಗಿ ಬಂದಿದ್ದರಿಂದ, ಅಪಘಾತವನ್ನು ತಪ್ಪಿಸುವ ಸಲುವಾಗಿ ಚಾಲಕ ಕಾರನ್ನು ಪಕ್ಕಕ್ಕೆ ತಿರುಗಿಸಿದ್ದಾರೆ. ಹಾಗಿದ್ದರೂ ಅದು ಓಮ್ನಿಗೆ ಡಿಕ್ಕಿ ಹೊಡೆದಿದೆ. ನಂತರ ವಾಹನ ಫುಟ್ ಪಾತ್ ಮೇಲೆ ಏರಿ ಎರಡು ಕಂಬಗಳ ನಡುವೆ ನಿಂತಿದೆ.

    ಅಪಘಾತದ ತೀವ್ರತೆ ತಪ್ಪಿಸುವ ಸಲುವಾಗಿ ಎಚ್ಚರಿಕೆಯಿಂದಲೂ ಚಾಕಚಕ್ಯತೆಯಿಂದಲೂ ವಾಹನ ಓಡಿಸುವ ಮೂಲಕ ಚಾಲಕ ಆಗಬಹುದಾಗಿದ್ದ ಹಾನಿಯನ್ನು ತಪ್ಪಿಸಿದ್ದಾರೆ. ಅಪಘಾತದ ಸದ್ದು ಕೇಳುತ್ತಿದ್ದಂತೆ ಅಕ್ಕಪಕ್ಕದ ಅಂಗಡಿಗಳಲ್ಲಿದ್ದ ಮೊಹಮ್ಮಡನ್ ಬ್ಲಾಕ್ ಮಂದಿ ಬಂದು ಗೀತಾವಿಷ್ಣು ಅವರಿಗೆ ಮಾತಾಡಲಿಕ್ಕೂ ಅವಕಾಶ ಕೊಡದೇ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಹಾಗೆಯೇ ಮತ್ತೆ ಕೆಲವರು ಗೀತಾವಿಷ್ಣು ತಪ್ಪಿಲ್ಲವೆಂದು ಹೇಳಿ ಅವರ ಪರವಾಗಿ ನಿಂತಿದ್ದಾರೆ ಚಾಲಕನ ಸಮಯ ಪ್ರಜ್ಞೆಯಿಂದ ಅಪಘಾತದ ತೀವ್ರತೆಯನ್ನು ಕಡಿಮೆ ಮಾಡಿದ್ದಾರೆ ಎಂದು ಹೇಳಿ ಅವರನ್ನು ಒಳಗೆ ಕೂರಿಸಿ ಉಪಚರಿಸಿದ್ದಾರೆ. ಸರಿಯಾದ ಸಮಯಕ್ಕೆ ಆಗಮಿಸಿದ ಪೊಲೀಸರು ಹೆಚ್ಚಿನ ಘರ್ಷಣೆ ನಡೆಯುವ ಮೊದಲು ಬಂದೋಬಸ್ತ್ ಮಾಡಿ ಎರಡೂ ಕಡೆಯ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

    ಡ್ರಗ್ ವ್ಯಸನಿ ಅಲ್ಲ: ಗೀತಾವಿಷ್ಣು ಮೊದಲು ರಾಮಕೃಷ್ಣ ನರ್ಸಿಂಗ್ ಹೋಮ್‍ನಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು. ನಂತರ ಹೆಚ್ಚಿನ ಚಿಕಿತ್ಸೆಗೆ ಮಲ್ಯ ಆಸ್ಪತ್ರೆ ದಾಖಲಾಗಿದ್ದರು. ಗೀತಾ ವಿಷ್ಣುವಿಗೆ ನಾರ್ಕೋಟಿಕ್(ಗಾಂಜಾ) ಸೇವಿಸುವ ಅಭ್ಯಾಸ ಇಲ್ಲ. ಆತನ ಕಾರಿನಲ್ಲಿ ಗಾಂಜಾ ಪ್ಯಾಕೆಟ್ಟುಗಳು ಸಿಕ್ಕಿರುವ ಸಾಧ್ಯತೆಯೂ ಇಲ್ಲ. ಅದನ್ನು ಆಮೇಲೆ ಯಾರಾದರೂ ತಂದಿಟ್ಟಿರಬಹುದು. ಆ ಕುರಿತು ನನಗೆ ಗೊತ್ತಿಲ್ಲ. ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೇರಿದ ಗೀತಾವಿಷ್ಣು ತನಗೆ ತಲೆ ಸುತ್ತು ಬರುವುದಾಗಿ ಹೇಳಿರುವುದು ದಾಖಲಾಗಿದೆ. ವೈದ್ಯರೂ ಅದನ್ನೇ ದೃಢಪಡಿಸಿದ್ದಾರೆ. ರಕ್ತದ ಸ್ಯಾಂಪಲ್ಲನ್ನು ಪಡೆಯಲಾಗಿದೆ. ಇಷ್ಟಾದ ಮೇಲೆ ವಾಹಿನಿಗಳಲ್ಲಿ ಬರುತ್ತಿರುವ ಸುದ್ದಿಗಳನ್ನು ನೋಡಿ ಗಾಬರಿಯಾಗಿ ಗೀತಾವಿಷ್ಣು ಅಲ್ಲಿಂದ ಹೊರಟು ಹೋಗಿದ್ದಾನೆ ಎಂದು ನನಗೆ ಅನ್ನಿಸುತ್ತದೆ. ಆತ ಎಲ್ಲಿಗೆ ಹೋಗಿದ್ದಾನೆ ಎಂಬುದು ನನಗೂ ಗೊತ್ತಿಲ್ಲ. ಆತ ಡ್ರಗ್ ವ್ಯಸನಿ ಅಲ್ಲ ಎಂದು ಹೇಳಿದ್ದಾರೆ.

    ಪೊಲೀಸರಿಗೆ ಧನ್ಯವಾದ: ಭಯಗ್ರಸ್ತನಾಗಿ ಹೊರಟು ಹೋಗಿರುವ ಆತನ ಆರೋಗ್ಯ ಮತ್ತು ಭದ್ರತೆಯ ಬಗ್ಗೆ ನನಗೆ ಆತಂಕವಾಗುತ್ತಿದೆ. ಈ ಸುದ್ದಿಗಳಿಂದ ಆತನ ಮನಸ್ಸಿಗೂ ಆಘಾತ ಆಗಿರುತ್ತದೆ. ಗೀತಾವಿಷ್ಣು ವಾಹನ ಚಲಾಯಿಸುತ್ತಿದ್ದನೋ ಇಲ್ಲವೋ ಅನ್ನುವುದು ಕೂಡ ನಮಗಿನ್ನೂ ಖಚಿತವಾಗಿಲ್ಲ. ಆ ಕುರಿತು ಗೀತಾವಿಷ್ಣು ನೀಡಿದ ಹೇಳಿಕೆಯಲ್ಲಿ ತಾನು ವಾಹನ ಓಡಿಸುತ್ತಿರಲಿಲ್ಲ ಎಂದೇ ಹೇಳಿದ್ದಾರೆ. ಈ ಸಂದರ್ಭದಲ್ಲಿ ಗುಂಪನ್ನು ಹತೋಟಿಗೆ ತಂದು ಹೆಚ್ಚಿನ ಅನಾಹುತವಾಗದಂತೆ ನೋಡಿಕೊಂಡ ಪೊಲೀಸರಿಗೆ ಧನ್ಯವಾದ. ಅವರು ಮಾನವೀಯವಾಗಿ ವರ್ತಿಸಿ ಎರಡೂ ಕಡೆಯ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಕೆಲಸವನ್ನೂ ಮಾಡಿದ್ದಾರೆ. ಅವರಿಗೆ ಕೃತಜ್ಞತೆಗಳು. ಆದ್ದರಿಂದ ತಾವೆಲ್ಲರೂ ವದಂತಿಗಳು ಹಬ್ಬದಂತೆ ನೋಡಿಕೊಂಡು, ಗೀತಾವಿಷ್ಣು ಮನಸ್ಸಿಗೆ ಮುಂದೆಯೂ ಆಗಬಹುದಾದ ಆತಂಕ ಮತ್ತು ಒತ್ತಡಕ್ಕೆ ಅವಕಾಶ ಮಾಡಿಕೊಡಬಾರದೆಂದು ವಿನಂತಿ. ಹಾಗೆಯೇ ನಮ್ಮ ಕುಟುಂಬದ ಗೌರವಕ್ಕೆ ಕುಂದು ಉಂಟಾಗದಂತೆ ಕಾಪಾಡಬೇಕೆಂದೂ ಮನವಿ ಮಾಡಿಕೊಳ್ಳುತ್ತಿದ್ದೇನೆ. ಈ ಘಟನೆಯಲ್ಲಿ ಗಾಯಗೊಂಡ ಎಲ್ಲರೂ ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ಶ್ರೀನಿವಾಸ್ ಮೂರ್ತಿ ತಿಳಿಸಿದ್ದಾರೆ.

  • ಡ್ರಗ್ಸ್ ಸೇವಿಸಿ ಸ್ಯಾಂಡಲ್‍ವುಡ್ ಖ್ಯಾತ ನಟರ ರಾದ್ಧಾಂತ – ಸಿಕ್ಕಸಿಕ್ಕವರಿಗೆ ಗುದ್ದಿ ಆಕ್ಸಿಡೆಂಟ್

    ಡ್ರಗ್ಸ್ ಸೇವಿಸಿ ಸ್ಯಾಂಡಲ್‍ವುಡ್ ಖ್ಯಾತ ನಟರ ರಾದ್ಧಾಂತ – ಸಿಕ್ಕಸಿಕ್ಕವರಿಗೆ ಗುದ್ದಿ ಆಕ್ಸಿಡೆಂಟ್

    – ಬೆಂಜ್ ಕಾರಲ್ಲಿತ್ತು ಗಾಂಜಾ
    – ಸಾರ್ವಜನಿಕರಿಂದ ಉದ್ಯಮಿ ಮೊಮ್ಮಗನಿಗೆ ಹಿಗ್ಗಾಮಗ್ಗಾ ಥಳಿತ

    ಬೆಂಗಳೂರು: ಸ್ಯಾಂಡಲ್‍ವುಡ್ ಖ್ಯಾತ ನಟರು ಡ್ರಗ್ಸ್ ಸೇವಿಸಿ ಸಿಕ್ಕಸಿಕ್ಕವರಿಗೆ ಕಾರಿನಿಂದ ಗುದ್ದಿರೋ ಘಟನೆ ಬೆಂಗಳೂರಿನ ಸೌತ್ ಎಂಡ್ ಸರ್ಕಲ್‍ನಲ್ಲಿ ನಡೆದಿದೆ.

    ನಟರು ಉದ್ಯಮಿ ಮೊಮ್ಮಗನ ಜೊತೆ ಗಾಂಜಾ ಸೇವಿಸಿ ಆಕ್ಸಿಡೆಂಟ್ ಮಾಡಿದ್ದು, ಸಾರ್ವಜನಿಕರಿಂದ ಗೂಸಾ ಬೀಳ್ತಿದ್ದಂತೆ ಮುಖ ಮುಚ್ಕೊಂಡು ಎಸ್ಕೇಪ್ ಆಗಿದ್ದಾರೆ.

     

    ಲಾಲ್‍ಬಾಗ್ ರಸ್ತೆ ಮೂಲಕ ಬಂದ ಟಾಪ್ ಹೀರೋಗಳಿದ್ದ ಆ ಬೆಂಜ್ ಕಾರು ಮೊದಲು ರಸ್ತೆ ಡಿವೈಡರ್‍ಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬಿಬಿಎಂಪಿ ಬೋರ್ಡ್ ಅಷ್ಟೇ ಅಲ್ಲ, ಫುಟ್‍ಪಾತ್‍ಗೆ ಹಾಕಿದ್ದ ಕಬ್ಬಿಣದ ಗ್ರಿಲ್‍ಗಳೇ ಮುರಿದುಹೋಗಿವೆ.

     

    ವಿದ್ಯುತ್ ಕಂಬ, ಓಮ್ನಿ ಕಾರ್ ಹಾಗೂ ಇತರೆ ವಾಹನಗಳಿಗೂ ಡಿಕ್ಕಿ ಹೊಡೆದಿದ್ದು, ಸಿಕ್ಕಸಿಕ್ಕವರಿಗೆಲ್ಲಾ ಗುದ್ದಿ ಪರಾರಿಯಾಗಿದ್ದಾರೆ. ಇವರ ಆಟಾಟೋಪದಿಂದ ತಾಳ್ಮೆಗೆಟ್ಟ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಉದ್ಯಮಿಯ ಮೊಮ್ಮಗನಿಗೆ ಒದೆ ಬೀಳುತ್ತಲೇ ಆ `ಸ್ಟಾರ್’ಗಳು ಎಸ್ಕೇಪ್ ಆಗಿದ್ದಾರೆ.

    ಇಷ್ಟೆಲ್ಲಾ ಆದ್ಮೇಲೆ ಬೆಂಜ್ ಸೀಜ್ ಮಾಡಿದ ಪೋಲೀಸರಿಗೆ ಶಾಕ್ ಕಾದಿತ್ತು. ಕಾರ್‍ನಲ್ಲಿ ಕೋಟಿ ಮೌಲ್ಯದ ಮಾದಕ ದ್ರವ್ಯ ಪತ್ತೆಯಾಗಿದೆ. ಇಷ್ಟಾದರೂ ಪೊಲೀಸರು ಮಾತ್ರ ಎಫ್‍ಐಆರ್ ದಾಖಲಿಸಿಲ್ಲ.

    ಒದೆ ತಿಂದ ಉದ್ಯಮಿ ಮೊಮ್ಮಗ ಆಸ್ಪತ್ರೆಯಲ್ಲಿ ಟ್ರೀಟ್‍ಮೆಂಟ್ ಪಡೆದು ಎಸ್ಕೇಪ್ ಆಗಿದ್ದಾನೆ. ಹಿಟ್ ಅಂಡ್ ರನ್‍ನಿಂದ ಗಾಯಗೊಂಡವರಿಗೆ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.