Tag: ಉದ್ಯಮಿ

  • ಲಿಫ್ಟ್ ಕುಸಿದು 6 ಮಂದಿ ಸಾವು – ಹಲವರಿಗೆ ಗಾಯ

    ಲಿಫ್ಟ್ ಕುಸಿದು 6 ಮಂದಿ ಸಾವು – ಹಲವರಿಗೆ ಗಾಯ

    ಭೋಪಾಲ್: ಲಿಫ್ಟ್ ಕುಸಿದು 6 ಮಂದಿ ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡ ಘಟನೆ ಮಧ್ಯಪ್ರದೇಶದ ಪಾಟಲ್‍ಪಾನಿಯಲ್ಲಿ ನಡೆದಿದೆ.

    ಉದ್ಯಮಿ ಪುನೀತ್ ಅಗರ್‌ವಾಲ್‌ ಅವರು ಹೊಸ ವರ್ಷ ಆಚರಿಸಲು ತಮ್ಮ ಕುಟುಂಬಸ್ಥರ ಜೊತೆಗೆ ತೋಟದ ಮನೆಗೆ ಹೋಗಿದ್ದರು. ಅವರ ತೋಟದ ಮನೆಯಲ್ಲಿ ಲಿಫ್ಟ್ ಅಳವಡಿಸಲಾಗಿದೆ. ಪುನೀತ್ ಮಂಗಳವಾರ ಸಂಜೆ 6 ಗಂಟೆಗೆ ಲಿಫ್ಟ್ ನಿಂದ ಕೆಳಗೆ ಬರುತ್ತಿರುವಾಗ ಮಿಷನ್‍ನ ಬೆಲ್ಟ್ ತುಂಡಾಗಿ ಕೆಳಗೆ ಬಿತ್ತು.

    ಲಿಫ್ಟ್ ನ ಬೆಲ್ಟ್ ತುಂಡಾಗಿ ಕೆಳಗೆ ಬಿದ್ದ ಪರಿಣಾಮ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೆ ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪೊಲೀಸ್ ಕಮಿಷನರ್ ಧರ್ಮರಾಜ್ ಮೀನಾ ಅವರು, ಈ ಘಟನೆಯಲ್ಲಿ 6 ಮಂದಿ ಮೃತಪಟ್ಟಿದ್ದು, ಪುನೀತ್ ಹಾಗೂ ಅವರ ಸಂಬಂಧಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    ಪುನೀತ್ ಅಗರ್‌ವಾಲ್‌ ದೇಶದ ಅತಿದೊಡ್ಡ ಗುತ್ತಿಗೆದಾರರಲ್ಲಿ ಒಬ್ಬರು. ಅವರ ಕಂಪನಿ ಪಾರ್ಥ ಇಂಡಿಯಾ ಮುಖ್ಯವಾಗಿ ಸೇತುವೆ ನಿರ್ಮಾಣ, ಹೆದ್ದಾರಿ ನಿರ್ಮಾಣ ಹಾಗೂ ಟೋಲ್ ರಸ್ತೆಯ ನಿರ್ಮಾಣ ಮತ್ತು ನಿರ್ವಹಣೆಗೆ ಸಂಬಂಧಿಸಿದೆ.

  • ಹಾಡಹಗಲೇ ಶೂಟೌಟ್ – ಪತಿ ಜೀವ ಉಳಿಸಿ ಎಂದು ಪತ್ನಿ ಕಣ್ಣಿರಿಟ್ಟರೂ ಕರಗದ ಜನ

    ಹಾಡಹಗಲೇ ಶೂಟೌಟ್ – ಪತಿ ಜೀವ ಉಳಿಸಿ ಎಂದು ಪತ್ನಿ ಕಣ್ಣಿರಿಟ್ಟರೂ ಕರಗದ ಜನ

    ಪಾಟ್ನಾ: ಹಾಡಹಗಲೇ ರೈಲ್ವೆ ನಿಲ್ದಾಣದಲ್ಲಿ ದುಷ್ಕರ್ಮಿಗಳು ಉದ್ಯಮಿಯೊಬ್ಬರನ್ನು ಗುಂಡಿಕ್ಕಿ ಕೊಲೆಗೈದಿದ್ದು, ಪತ್ನಿ ಸಹಾಯಕ್ಕಾಗಿ ಗೋಗರಿದರೂ ಜನರು ಕರುಣೆ ತೋರದ ಅಮಾನವೀಯ ಘಟನೆ ಬಿಹಾರದ ಸೀವಾನ್ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.

    ಭಾನುವಾರ ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಕೋಲ್ಕತ್ತಾ ಮೂಲದ ಉದ್ಯಮಿ ಮೊಹ್ಮದ್ ಫೈಸಲ್(30) ತನ್ನ ಪತ್ನಿ ಅಂಜೂಮ್ ಖಾಟೂನ್ ಜೊತೆಗೆ ಸೀವಾನ್ ರೈಲ್ವೇ ನಿಲ್ದಾಣಕ್ಕೆ ಬಂದಿದ್ದರು. ಬಾಘ್ ಎಕ್ಸಪ್ರೆಸ್‍ನಲ್ಲಿ ಕೋಲ್ಕತ್ತಾಗೆ ತೆರೆಳಲು ಇಬ್ಬರು ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಏಕಾಏಕಿ ದುಷ್ಕರ್ಮಿಗಳು ಮೊಹ್ಮದ್ ಮೇಲೆ ದಾಳಿ ಮಾಡಿ, ಗುಂಡು ಹೊಡೆದು ಎಸ್ಕೇಪ್ ಆಗಿದ್ದಾರೆ. ಇತ್ತ ಕಣ್ಣೆದುರೆ ಪತಿ ನರಳುತ್ತಿದ್ದದ್ದನ್ನು ನೋಡಿ ಪತ್ನಿ ಸಹಾಯಕ್ಕಾಗಿ ಸ್ಥಳದಲ್ಲಿದ್ದವರ ಬಳಿ ಗೋಗರಿದು, ಕಣ್ಣಿರಿಟ್ಟರೂ ಯಾರೂ ಸಹಾಯಕ್ಕೆ ಮುಂದೆ ಬಾರದ ಹಿನ್ನೆಲೆ ಪತ್ನಿ ಮಡಿಲಿನಲ್ಲೇ ಪತಿ ಕೊನೆಯುಸಿರೆಳೆದಿದ್ದಾರೆ.

    ಗುಂಡೇಟು ತಿಂದ ಪತಿ ತಲೆಯನ್ನು ಮಡಿಲಲ್ಲಿಟ್ಟು ಮಹಿಳೆ ಸಹಾಯ ಮಾಡಿ ಎಂದು ಕಣ್ಣೀರಿಡುತ್ತಿದ್ದರೆ, ಇತ್ತ ಸುತ್ತಲು ನೆರೆದಿದ್ದ ಜನರು ತಮಾಷೆ ನೋಡುತ್ತಾ, ಮೊಬೈಲ್‍ಗಳಲ್ಲಿ ವಿಡಿಯೋ ಮಾಡುತ್ತಾ ಮಾನವೀಯತೆ ಮರೆತ್ತಿದ್ದರು. ಈ ವೇಳೆ ಘಟನಾ ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮಹ್ಮದ್ ಪತ್ನಿಯ ಮಡಿಲಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಮಾನವೀಯತೆ ಮೆರೆದ ಜನರಿಗೆ ನೆಟ್ಟಿಗರು ಚೀಮಾರಿ ಹಾಕಿದ್ದಾರೆ.

    ಪೊಲೀಸರ ವಿಚಾರಣೆ ವೇಳೆ ಪತ್ನಿ, ಕಳೆದ 6 ತಿಂಗಳ ಹಿಂದಷ್ಟೇ ನಮ್ಮಿಬ್ಬರ ಮದುವೆಯಾಗಿತ್ತು. ನಾನು ನನ್ನ ಪತಿ ಸುಲ್ತಾನ್‍ಪುರ್‍ನಲ್ಲಿರುವ ನನ್ನ ತವರು ಮನೆಯಿಂದ ಕೋಲ್ಕತ್ತಾಗೆ ತೆರಳಲು ರೈಲಿಗೆ ಕಾಯುತ್ತಿದ್ದೆವು. ಈ ವೇಳೆ ದುಷ್ಕರ್ಮಿಗಳು ಗುಂಡು ಹೊಡೆದರು. ಯಾಕೆ ಗುಂಡು ಹಾರಿಸಿದರು? ನನ್ನ ಪತಿ ಅವರಿಗೆ ಏನು ಮಾಡಿದ್ದರು ಎಂಬ ಬಗ್ಗೆ ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

    ರೈಲ್ವೆ ನಿಲ್ದಾಣದಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳು ಇಲ್ಲದ ಕಾರಣ ಆರೋಪಿಗಳ ಸುಳಿವು ಸಿಕ್ಕಿಲ್ಲ. ಆದರೆ ಆರೋಪಿಯನ್ನು ಪತ್ತೆ ಹಚ್ಚಲು ಹತ್ತಿರದ ಅಂಗಡಿಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಜೊತೆಗೆ ರೈಲ್ವೆ ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಪ್ರಕರಣ ಸಂಬಂಧ ಈಗಾಗಲೇ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

  • ಆಸ್ಟ್ರೇಲಿಯಾ ಉದ್ಯಮಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಚಿತಾ ಸಹೋದರಿ

    ಆಸ್ಟ್ರೇಲಿಯಾ ಉದ್ಯಮಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಚಿತಾ ಸಹೋದರಿ

    ಬೆಂಗಳೂರು: ಸ್ಯಾಂಡಲ್‍ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ನಿತ್ಯ ರಾಮ್ ಅವರು ಆಸ್ಟ್ರೇಲಿಯಾ ಉದ್ಯಮಿ ಗೌತಮ್ ಅವರ ಜೊತೆ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದಾರೆ. ವಿವಾಹ ಮುಹೂರ್ತಕ್ಕಾಗಿ ವಧು ನಿತ್ಯಾ ರಾಮ್ ಗೋಲ್ಡನ್ ಬಣ್ಣದ ರೇಷ್ಮೆ ಸೀರೆ ಧರಿಸಿ ಮಿಂಚುತ್ತಿದ್ದರು. ವರ ಗೌತಮ್ ಬಿಳಿ ಬಣ್ಣದ ರೇಷ್ಮೆ ಪಂಚೆ-ಶಲ್ಯ ಧರಿಸಿದ್ದರು.

    ಗೌತಮ್ ಹಾಗೂ ನಿತ್ಯಾ ಮದುವೆಗಾಗಿಯೇ ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಸ್ಪೆಷಲ್ ಸೆಟ್ ಹಾಕಲಾಗಿತ್ತು. ಇಲ್ಲಿ ಈ ಜೋಡಿ ಗುರು-ಹಿರಿಯರು ನಿಶ್ಚಯಿಸಿದ್ದ ಶುಭ ಮುಹೂರ್ತದಲ್ಲಿ ಸಪ್ತಪದಿ ತುಳಿದಿದ್ದಾರೆ. ಮದುವೆಗೆ ಕುಟುಂಬದ ಸದಸ್ಯರು, ಆಪ್ತ ಸ್ನೇಹಿತರು ಮತ್ತು ಕಿರುತೆರೆ ಕಲಾವಿದರು ಬಂದು ನವಜೋಡಿಗೆ ಶುಭಾಶಯ ತಿಳಿಸಿದ್ದಾರೆ. ಸದ್ಯ ಇವರಿಬ್ಬರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ನಿತ್ಯ ರಾಮ್ ಹಾಗೂ ಗೌತಮ್ ಅವರದ್ದು ಅರೇಂಜ್ಡ್ ಮ್ಯಾರೇಜ್ ಆಗಿದೆ. ನಿತ್ಯಾ ರಾಮ್ ತಾಯಿಯ ಸ್ನೇಹಿತರ ಮಗನೇ ಗೌತಮ್. ಹೀಗಾಗಿ ಕುಟುಂಬದವರ ಮೂಲಕ ಪರಿಚಯರಾದ ಗೌತಮ್ ಅವರನ್ನೇ ನಿತ್ಯಾ ವರಿಸಿದ್ದಾರೆ. ಗೌತಮ್ ಉದ್ಯಮಿಯಾಗಿದ್ದು, ಆಸ್ಟ್ರೇಲಿಯಾದಲ್ಲಿಯೇ ವಾಸಿಸುತ್ತಿದ್ದಾರೆ. ಹೀಗಾಗಿ ಮದುವೆ ನಂತರ ನಟಿ ನಿತ್ಯಾ ಕೂಡ ಆಸ್ಟ್ರೇಲಿಯಾದಲ್ಲಿ ಸೆಟಲ್ ಆಗಲಿದ್ದಾರೆ.

    ನಿತ್ಯಾ ರಾಮ್ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ `ನಂದಿನಿ’ ಧಾರಾವಾಹಿ ಮೂಲಕ ಖ್ಯಾತಿ ಪಡೆದುಕೊಂಡಿದ್ದರು. ಆದರೆ ಈಗ ಸೀರಿಯಲ್‍ನಿಂದ ನಿತ್ಯಾರಾಮ್ ಹೊರಬಂದಿದ್ದಾರೆ. ಪತಿಯ ಜೊತೆಗೆ ಸಮಯ ಕಳೆಯಲು ನಿರ್ಧರಿಸಿರುವ ನಿತ್ಯಾ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.

  • ಸ್ಟೈಲಿಶ್ ಹುಡುಗರನ್ನು ಕಂಡರೆ ಆಂಟಿ ಆಗ್ತಾಳೆ ಬಲು ತುಂಟಿ

    ಸ್ಟೈಲಿಶ್ ಹುಡುಗರನ್ನು ಕಂಡರೆ ಆಂಟಿ ಆಗ್ತಾಳೆ ಬಲು ತುಂಟಿ

    -ಪತಿಯಿಲ್ಲದ ಸಮಯದಲ್ಲಿ ಪ್ರಿಯಕರನ ಜೊತೆ ಲವ್ವಿಡವ್ವಿ
    -ಬೆಡ್‍ರೂಮಿನಲ್ಲಿ ರೆಡ್‍ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಕ್ಕೆ ಪತಿಯ ಕೊಲೆ

    ತುಮಕೂರು: ಪ್ರಿಯತಮನ ಜೊತೆ ಲವ್ವಿಡವ್ವಿ ಮಾಡುವಾಗ ಮಹಿಳೆಯೊಬ್ಬಳು ತನ್ನ ಪತಿಯ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಬೆಡ್‍ರೂಮಿನಲ್ಲಿ ಸಿಕ್ಕಿಬಿದ್ದ ಘಟನೆ ತುಮಕೂರಿನ ನಗರದ ಶಿರಾಗೇಟ್‍ನ ಹೊಂಬಯ್ಯನ ಪಾಳ್ಯದಲ್ಲಿ ನಡೆದಿದೆ.

    ವಿದ್ಯಾ ಪತಿಯನ್ನೇ ಕೊಲೆ ಮಾಡಿದ ಪತ್ನಿ. ಮದುವೆಯಾಗಿ ಮಕ್ಕಳಿದ್ದರೂ ವಿದ್ಯಾಗೆ ಪಡ್ಡೆ ಹುಡುಗರ ಹುಚ್ಚು ಜೋರಾಗಿತ್ತು ಎನ್ನಲಾಗಿದೆ. ಪತಿ ಇಲ್ಲದ ಸಮಯ ನೋಡಿ ವಿದ್ಯಾ ಯುವಕ ಸತೀಶ್ ಅಲಿಯಾಸ್ ಜಾಕಿ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಪತಿ ಕೆಲಸಕ್ಕೆಂದು ಮುಂಬೈಗೆ ಹೋದಾಗ ಇವರಿಬ್ಬರು ಜೊತೆಯಲ್ಲಿ ಇರುತ್ತಿದ್ದರು. ಭಾನುವಾರ ಮಧ್ಯರಾತ್ರಿ ಪತಿ ಏಕಾಏಕಿಯಾಗಿ ಮನೆಗೆ ಹಿಂದಿರುಗಿದ್ದು, ಈ ವೇಳೆ ಇಬ್ಬರು ಪ್ರಣಯಪಕ್ಷಿಗಳು ಬೆಡ್ ರೂಮಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

    ವಿದ್ಯಾ ತುಮಕೂರು ನಗರದ ಶಿರಾಗೇಟ್‍ನ ಹೊಂಬಯ್ಯನ ಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಇತ್ತ ಸತೀಶ್ ಇದೇ ಶಿರಾ ಗೇಟ್‍ನ ಪಂಚನಾಥ ರಾಯರ ಪಾಳ್ಯದವನು. ಆಟೋ ಓಡಿಸಿಕೊಂಡಿದ್ದ ಸತೀಶ್‍ನಿಗೆ ಬ್ಯೂಟಿಪಾರ್ಲರ್ ನಡೆಸುವ ಆಂಟಿ ವಿದ್ಯಾ ಪರಿಚಯವಾಗುತ್ತಾಳೆ. ಅಲ್ಲಿಂದ ಇಬ್ಬರ ಕಳ್ಳಾಟ ಶುರುವಾಗುತ್ತದೆ.

    ವಿದ್ಯಾಳ ಪತಿ ಹನುಮೇಗೌಡ ಹೋಟೆಲ್ ಉದ್ಯಮ ನಡೆಸುತ್ತಾರೆ. ಮುಂಬೈನಲ್ಲೂ ಉದ್ಯಮ ಇರುವುದರಿಂದ ಅಲ್ಲಿಗೆ ಹೋಗಿ ಭಾನುವಾರ ಹಿಂದಿರುಗಿದ್ದರು. ಈ ವೇಳೆ ವಿದ್ಯಾ ಹಾಗೂ ಸತೀಶ್ ಜೊತೆಯಲ್ಲಿ ಇರೋದನ್ನು ಕಂಡ ಹನುಮೇಗೌಡ ಕೆಂಡಾಮಂಡಲವಾಗಿದ್ದಾನೆ. ತಮಗೆ ಉಳಿಗಾಲ ಇಲ್ಲ ಎಂದು ಭಾವಿಸಿದ ಪ್ರಿಯತಮ ಸತೀಶ್ ಹಾಗೂ ವಿದ್ಯಾ ಸೇರಿ ಚಾಕುವಿನಿಂದ ಚುಚ್ಚಿ ಹನುಮೇಗೌಡನ ಕೊಲೆ ಮಾಡಿ ಪರಾರಿಯಾಗಿದ್ದರು.

    ತುಮಕೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೊಲೆ ಮಾಡಿದ ಈ ಪ್ರಣಯಪಕ್ಷಿಗಳ ಹೆಡೆಮುರಿಕಟ್ಟಿದ್ದಾರೆ.

  • ‘ಬ್ರಾಂಡೆಡ್ ಶೂಗಳು ಕಳೆದು ಹೋಗಿದೆ, ಹುಡುಕಿ ಕೊಡಿ’ – ಠಾಣೆ ಮೆಟ್ಟಿಲೇರಿದ ಉದ್ಯಮಿ

    ‘ಬ್ರಾಂಡೆಡ್ ಶೂಗಳು ಕಳೆದು ಹೋಗಿದೆ, ಹುಡುಕಿ ಕೊಡಿ’ – ಠಾಣೆ ಮೆಟ್ಟಿಲೇರಿದ ಉದ್ಯಮಿ

    ಚೆನ್ನೈ: ಸಾಮಾನ್ಯವಾಗಿ ಚಿನ್ನ, ಬೆಳ್ಳಿ, ವಾಹನ ಅಥವಾ ವಸ್ತು ಕಳೆದು ಹೋಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡುತ್ತಾರೆ. ಆದರೆ ತಮಿಳುನಾಡಿನಲ್ಲಿ ಉದ್ಯಮಿಯೊಬ್ಬರು ಶೂಗಳು ಕಳೆದು ಹೋಗಿವೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

    ಹೌದು ವಿಚಿತ್ರ ಎನಿಸಿದರು ಇದು ನಿಜ. ಈ ದೂರಿನ ಬಗ್ಗೆ ಕೇಳಿ ಸ್ವತಃ ಪೊಲೀಸರೇ ದಂಗಾಗಿದ್ದಾರೆ. ಮನೆಯಲ್ಲಿ ಇಟ್ಟಿದ್ದ 10 ಜೊತೆ ಶೂಗಳು, ಚಪ್ಪಲಿಗಳು ಕಾಣೆಯಾಗಿದೆ ಎಂದು ಉದ್ಯಮಿ ದೂರು ನೀಡಿದ್ದಾರೆ. ಚೆನ್ನೈನ ದಿವಾನ್ ಬಹದ್ದೂರ್ ಷಣ್ಮುಗಮ್ ಬೀದಿಯ ನಿವಾಸಿ ಅಬ್ದುಲ್ ಹಫೀಜ್ ಪೊಲೀಸರಿಗೆ ದೂರು ನೀಡಿದ್ದಾರೆ.

    ತಮ್ಮ ಮನೆಯಲ್ಲಿ ಇಟ್ಟಿದ್ದ 10 ಜೊತೆ ಶೂಗಳು, ಚಪ್ಪಲಿಗಳು ಕಾಣೆಯಾಗಿವೆ. ದಯವಿಟ್ಟು ಹುಡುಕಿಕೊಡಿ. ಅವೆಲ್ಲಾ ಬಹಳ ಬೆಲೆಬಾಳುವ ಶೂಗಳು. ಎಲ್ಲಾ ಸೇರಿ ಬರೋಬ್ಬರಿ 76 ಸಾವಿರ ಮೌಲ್ಯದ ಶೂಗಳು ಕಳೆದು ಹೋಗಿದೆ ಎಂದು ಅಬ್ದುಲ್ ದೂರು ನೀಡಿದ್ದಾರೆ.

    ಶನಿವಾರ ಈ ಘಟನೆ ನಡೆದಿದೆ. ಮನೆಯಿಂದ ಹೊರಹೋಗುತ್ತಿದ್ದ ವೇಳೆ ಶೂಗಳು, ಚಪ್ಪಲಿಗಳು ಮನೆಯಲ್ಲಿ ಕಾಣಲಿಲ್ಲ. ಯಾರೋ ಮನೆಗೆ ಬಂದು ಶೂಗಳನ್ನು ಕದ್ದಿದ್ದಾರೆ ಎಂದು ಅಬ್ದುಲ್ ಪೊಲೀಸರ ಬಳಿ ಹೇಳಿದ್ದಾರೆ. ಅಲ್ಲದೆ ಅವರ ಅಕ್ಕಪಕ್ಕದ ಮನೆಯವರು ಕದ್ದಿರಬಹುದು ಎಂದು ಅಬ್ದುಲ್ ಶಂಕಿಸಿದ್ದಾರೆ. ಹಾಗೆಯೇ ಅವರ ಮನೆಯ ಪಕ್ಕದಲ್ಲಿ ಕೆಲ ಯುವಕರು ವಾಸವಾಗಿದ್ದಾರೆ, ಅವರೇ ಶೂಗಳನ್ನು ಕದ್ದಿರಬಹುದು ಎಂದು ಅಬ್ದುಲ್ ಅನುಮಾನ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಸದ್ಯ ಉದ್ಯಮಿ ಅನುಮಾನ ವ್ಯಕ್ತಪಡಿಸಿದ ಯುವಕರು ಊರಿಗೆ ತೆರೆಳಿದ್ದು, ಅವರು ಮರುಳಿದ ಬಳಿಕ ವಿಚಾರಣೆ ನಡೆಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಜೊತೆಗೆ ಮನೆಯ ಅಕ್ಕಪಕ್ಕದ ಸಿಸಿಟಿವಿಗಳನ್ನು ಕೂಡ ಪರಿಶೀಲಿಸುವುದಾಗಿ ಪೊಲೀಸರು ಹೇಳಿದ್ದಾರೆ.

  • ಶೀಘ್ರದಲ್ಲೇ ಉದ್ಯಮಿ ಜೊತೆ ನಟಿ ಕಾಜಲ್ ಅಗರ್‌ವಾಲ್‌ ಮದುವೆ?

    ಶೀಘ್ರದಲ್ಲೇ ಉದ್ಯಮಿ ಜೊತೆ ನಟಿ ಕಾಜಲ್ ಅಗರ್‌ವಾಲ್‌ ಮದುವೆ?

    ಹೈದರಾಬಾದ್: ಬಹುಭಾಷಾ ನಟಿ ಕಾಜಲ್ ಅಗರ್‌ವಾಲ್‌ ಶೀಘ್ರದಲ್ಲೇ ಉದ್ಯಮಿ ಜೊತೆ ಮದುವೆ ಆಗಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ.

    ಇತ್ತೀಚೆಗೆ ಕಾಜಲ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ನಿರೂಪಕಿ ಲಕ್ಷ್ಮಿ ಮಂಚು, ಕಾಜಲ್ ಅವರಿಗೆ ಮದುವೆಯಾವಾಗ ಎಂದು ಪ್ರಶ್ನಿಸಿದ್ದಾರೆ. ಆಗ ಕಾಜಲ್, ನಾನು ಶೀಘ್ರದಲ್ಲೇ ಮದುವೆಯಾಗಲು ನಿರ್ಧರಿಸಿದ್ದೇನೆ ಎಂದಿದ್ದಾರೆ. ಆದರೆ ಮದುವೆಯಾಗುವ ವ್ಯಕ್ತಿ ಯಾರೆಂಬುದನ್ನು ಕಾಜಲ್ ರಿವೀಲ್ ಮಾಡಲಿಲ್ಲ.

    ಇದಾದ ಬಳಿಕ ಲಕ್ಷ್ಮಿ, ನಟಿ ಕಾಜಲ್ ಅವರಿಗೆ ತಮ್ಮ ಪತಿ ಹೇಗಿರಬೇಕೆಂದು ಪ್ರಶ್ನಿಸಿದ್ದಾರೆ. ಆಗ ಅವರು ಸಾಕಷ್ಟು ವಿಷಯಗಳಿದೆ. ಆದರೆ ಮುಖ್ಯವಾಗಿ ಅವರು ತುಂಬಾ ಕಾಳಜಿ ತೋರಿಸಬೇಕು ಹಾಗೂ ಆಧ್ಯಾತ್ಮಿಕನಾಗಿರಬೇಕು ಎಂದು ಕಾಜಲ್ ತಿಳಿಸಿದ್ದಾರೆ.

    ಈ ಮೊದಲು ಬೇರೆ ಸಂದರ್ಶನದಲ್ಲಿ ಕಾಜಲ್, “ನಾನು ಚಿತ್ರರಂಗದವರನ್ನು ಮದುವೆಯಾಗುವುದಿಲ್ಲ. ಚಿತ್ರರಂಗದಲ್ಲಿ ಇರದ ವ್ಯಕ್ತಿ ಜೊತೆ ಡೇಟ್ ಮಾಡುತ್ತೇನೆ” ಎಂದು ಹೇಳಿದ್ದರು. ಸದ್ಯ ಈಗ ಕಾಜಲ್ ಉದ್ಯಮಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ವೆಬ್‌ಸೈಟ್‌ವೊಂದರ ಪ್ರಕಾರ, ಇದು ಅರೆಂಜ್ ಮ್ಯಾರೇಜ್ ಆಗಿದ್ದು, ಕಾಜಲ್ ಪೋಷಕರೇ ಹುಡುಗನನ್ನು ಹುಡುಕಿದ್ದಾರೆ ಎನ್ನಲಾಗಿದೆ. ಆದರೆ ಮದುವೆಗೆ ಸಂಬಂಧಿಸಿದಂತೆ ಕಾಜಲ್ ಅವರು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಎಂದು ಹೇಳಲಾಗುತ್ತಿದೆ.

    ಸದ್ಯ ನಟ ಕಮಲ್ ಹಾಸನ್ ನಟಿಸುತ್ತಿರುವ ‘ಇಂಡಿಯನ್-2’ ಚಿತ್ರದಲ್ಲಿ ಕಾಜಲ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಶಂಕರ್ ನಿರ್ದೇಶಿಸುತ್ತಿದ್ದಾರೆ.

  • ಉದ್ಯಮಿ ಹತ್ಯೆಗೆ ಮಾಜಿ ಪ್ರೇಯಸಿ ಸ್ಕೆಚ್- ಸೀಟ್ ಬೆಲ್ಟ್‌ನಿಂದ ಕತ್ತು ಬಿಗಿದು ಹತ್ಯೆಗೆ ಯತ್ನ

    ಉದ್ಯಮಿ ಹತ್ಯೆಗೆ ಮಾಜಿ ಪ್ರೇಯಸಿ ಸ್ಕೆಚ್- ಸೀಟ್ ಬೆಲ್ಟ್‌ನಿಂದ ಕತ್ತು ಬಿಗಿದು ಹತ್ಯೆಗೆ ಯತ್ನ

    ಬೆಂಗಳೂರು: ಆಸ್ತಿಗಾಗಿ ಪ್ರೀತಿ ಮಾಡಿದ ವ್ಯಕ್ತಿಯನ್ನೇ ಯುವತಿ ಕೊಲ್ಲಲು ಪ್ರಯತ್ನ ಮಾಡಿರುವ ಘಟನೆ ಬೆಂಗಳೂರಿನ ನೈಸ್ ರಸ್ತೆಯಲ್ಲಿ ನಡೆದಿದೆ.

    ಪವಿತ್ರ ಕೊಲೆ ಮಾಡಲು ಯತ್ನಿಸಿದ ಯುವತಿ. ಪವಿತ್ರ ಆರ್ಕೆಸ್ಟ್ರಾ ಸಿಂಗರ್ ಆಗಿದ್ದು, ಕಳೆದ ಕೆಲ ವರ್ಷಗಳಿಂದ 2015 ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಸ್ಫರ್ಧಿಸಿದ್ದ ಉದ್ಯಮಿ ಪ್ರಭಾಕರ್ ರೆಡ್ಡಿ ಜೊತೆ ಲಿವಿಂಗ್ ಟುಗೆದರ್ ನಲ್ಲಿದ್ದರು. ಸೆಪ್ಟಂಬರ್ 20ರಂದು ಪವಿತ್ರ ಇದ್ದಕ್ಕಿದ್ದಂತೆ ಪ್ರಭಾಕರ್ ರೆಡ್ಡಿಯನ್ನು ಆರ್ ಆರ್ ನಗರದಲ್ಲಿ ಭೇಟಿ ಮಾಡಿ ಕಾರಲ್ಲಿ ನೈಸ್ ರಸ್ತೆಗೆ ಕರೆದುಕೊಂಡು ಹೋಗಿದ್ದಳು.

    ಕಾರಲ್ಲಿ ಹೋಗುತ್ತಿದ್ದ ವೇಳೆ ಪವಿತ್ರ ಆಸ್ತಿ ಬರೆದುಕೊಡುವಂತೆ ಒತ್ತಾಯಿಸಿ ಗಲಾಟೆ ಮಾಡಿದ್ದಾಳೆ. ಅಲ್ಲದೆ ಕಾರಿನ ಸೀಟ್‍ ಬೆಲ್ಟ್‌ನಿಂದ ಕತ್ತು ಬಿಗಿದು ಪ್ರಭಾಕರ್ ರನ್ನು ಕೊಲೆ ಮಾಡಲು ಯತ್ನಿಸಿದ್ದಾಳೆ. ಪ್ರಭಾಕರ್ ರೆಡ್ಡಿ ಈಗಾಗಲೇ ಪವಿತ್ರಗೆ 2 ಕೆಜಿ ಚಿನ್ನ, 5 ಕೋಟಿ ಮೌಲ್ಯದ ಕಟ್ಟಡವನ್ನು ನೀಡಿದ್ದಾರೆ. ಆದರೂ ಎಲ್ಲಾ ಆಸ್ತಿ ಬರೆದುಕೊಡುವಂತೆ ಪವಿತ್ರ, ಪ್ರಭಾಕರ್ ಗೆ ಧಮ್ಕಿ ಹಾಕಿ ಕೊಲೆಗೆ ಯತ್ನಿಸಿದ್ದಾಳೆ ಎಂದು ತಿಳಿದುಬಂದಿದೆ.

    ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಪ್ರಭಾಕರ್ ರೆಡ್ಡಿ ಅವರು, ಕುಟುಂಬದಲ್ಲಿ ಗಲಾಟೆ ಅಷ್ಟೇ. ನೈಸ್ ರೋಡಿನಲ್ಲಿ ಬರುತ್ತಿರುವಾಗ ನಮ್ಮಿಬ್ಬರ ನಡುವೆ ಜಗಳವಾಯಿತು. ಈ ವೇಳೆ ಪವಿತ್ರ ಸೀಟ್ ಬೆಲ್ಟಿನಿಂದ ಕೊಲೆ ಮಾಡಲು ಯತ್ನಿಸಿದ್ದಳು. ಅಲ್ಲದೆ ನೀರಿನ ಬಾಟಲಿಯಿಂದ ನನ್ನನ್ನು ಹಲ್ಲೆ ಮಾಡಿದ್ದಳು. ಹಲ್ಲೆಯಿಂದ ನನ್ನ ಕಿವಿಯಲ್ಲಿ ರಕ್ತ ಬರುತ್ತಿದ್ದ ಕಾರಣ ನಾನು ಆಸ್ಪತ್ರೆಗೆ ಹೋಗಿ ಪೊಲೀಸ್ ಠಾಣೆಗೆ ಹೋದೆ. ಪವಿತ್ರ ನನಗೆ ಒಂದೂವರೆ ವರ್ಷದಿಂದ ಪರಿಚಯ. ನಾವಿಬ್ಬರು ಜೊತೆಯಲ್ಲಿಯೇ ಇದ್ದೆವು. ಈ ನಡುವೆ ಕುಟುಂಬದಲ್ಲಿ ಜಗಳವಾಗಿದೆ. ಪವಿತ್ರ ನನ್ನನ್ನು ಇಷ್ಟಪಡುತ್ತಿದ್ದಳು ಎಂದು ತಿಳಿಯಿತು. ಆಗ ಇಬ್ಬರು ಲಿವಿಂಗ್ ರಿಲೇಶನ್‍ಶಿಪ್‍ನಲ್ಲಿ ಇದ್ದೆವು. ಆಕೆಗೆ ನಾನು ಮನೆ ಕೊಡಿಸಿದೆ. ನನಗೆ ಕಮಿಟ್ಸ್ ಮೆಂಟ್ ಇದೆ, ನನಗೆ ಏನಾದರೂ ಮಾಡಿಸು ಎಂದು ಬೇಡಿಕೆಯಿಟ್ಟಿದ್ದಳು ಎಂದು ಹೇಳಿದ್ದಾರೆ.

    ಪವಿತ್ರಗೆ ಈಗಾಗಲೇ ಮದುವೆಯಾಗಿ ಡಿವೋರ್ಸ್ ಆಗಿದ್ದು, ಆಕೆಗೆ 5 ವರ್ಷದ ಮಗು ಕೂಡ ಇದೆ. ಮೂಲತಃ ಚನ್ನಪಟಣ್ಣದವಳಾಗಿರುವ ಪವಿತ್ರ ಈಗ ಬೆಂಗಳೂರಿನ ಆರ್‍ಆರ್ ನಗರದಲ್ಲಿ ಇದ್ದಾರೆ. ನಾನು ಪೊಲೀಸರಿಗೆ ಅರೆಸ್ಟ್ ಮಾಡಿ ಎಂದು ಒತ್ತಡ ಹಾಕಲಿಲ್ಲ. ಇದಾದ ಬಳಿಕ ನಾನು ಮಾತನಾಡಲು ಆಕೆಯನ್ನು ಕರೆದೆ. ಆದರೆ ಅವರು ಒಪ್ಪಲಿಲ್ಲ. ಫೈನಾನ್ಸ್ ನಲ್ಲಿ ತೊಂದರೆ ಆದಾಗ ಪವಿತ್ರ ನನಗೆ ಸಹಾಯ ಮಾಡಿದ್ದಳು. ಕಷ್ಟದ ಸಂದರ್ಭದಲ್ಲಿ ನನ್ನ ಪರವಾಗಿ ಯಾರು ಬರದಿದ್ದಾಗ ಆಕೆ ನನ್ನ ಸಹಾಯಕ್ಕೆ ಬಂದಿದ್ದಳು. ಸಹಾಯ ಮಾಡಿದ್ದಾಳೆ ಎಂದು ಮಾನವೀಯತೆ ದೃಷ್ಟಿಯಿಂದ ನಾನು ಅವರಿಗೆ ತುಂಬಾ ಗೌರವ ನೀಡುತ್ತಿದ್ದೆ. ದೌರ್ಜನ್ಯ ಮಾಡಿದ್ದಕ್ಕೆ ನಾನು ದೂರು ನೀಡಿದೆ ಹೊರತು ಬೇರೆ ವಿಷಯಕ್ಕೆ ಅಲ್ಲ ಎಂದು ಪ್ರಭಾಕರ್ ತಿಳಿಸಿದ್ದಾರೆ.

    ಈ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸದ್ಯ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

  • ವಿಧಾನಸೌಧ ಮುಂದೆ ಕೈಚಳಕ ತೋರಿದ ಕಳ್ಳರು

    ವಿಧಾನಸೌಧ ಮುಂದೆ ಕೈಚಳಕ ತೋರಿದ ಕಳ್ಳರು

    ಬೆಂಗಳೂರು: ಬೈಕ್ ಸ್ಕಿಡ್ ಆಗಿ ಬಿದ್ದ ಉದ್ಯಮಿ ಒಬ್ಬರಿಗೆ ಸಹಾಯ ಮಾಡುವ ನೆಪದಲ್ಲಿ ಕಳ್ಳರು ಹಣ ಎಗರಿಸಿರುವ ಘಟನೆ ಸಿಲಿಕಾನ್ ಸಿಟಿಯ ವಿಧಾನಸೌಧದ ಬಳಿ ನಡೆದಿದೆ.

    ತಮ್ಮ ಬೈಕಿನಲ್ಲಿ ಶಿವಾಜಿನಗರದಿಂದ ಚಾಮರಾಜಪೇಟೆ ಹೋಗುತ್ತಿದ್ದ ಉದ್ಯಮಿ ಪಿಯುಶ್ ಕುಮಾರ್ ವಿಧಾನಸೌಧದ ಬಳಿ ಅಯತಪ್ಪಿ ಬೈಕಿನಲ್ಲಿ ಬಿದ್ದಿದ್ದಾರೆ. ಈ ವೇಳೆ ಸಹಾಯ ಮಾಡುವ ನೆಪದಲ್ಲಿ ಬಂದವರು ಬೈಕ್ ಡಿಕ್ಕಿಯಲ್ಲಿದ್ದ 2.30 ಲಕ್ಷ ಹಣವನ್ನು ಕಳ್ಳತನ ಮಾಡಿದ್ದಾರೆ.

    ಉದ್ಯಮಿ ಪಿಯುಶ್ ಕುಮಾರ್ ಶಿವಾಜಿನಗರದ ಗ್ರಾಹಕರ ಅಂಗಡಿಯಿಂದ ಹಣ ಪಡೆದು ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 12 ಲಕ್ಷ ರೂ. ಬಿಲ್ ಕಟ್ಟದೇ ಸ್ಟಾರ್ ಹೊಟೇಲಿಂದ ಉದ್ಯಮಿ ಎಸ್ಕೇಪ್

    12 ಲಕ್ಷ ರೂ. ಬಿಲ್ ಕಟ್ಟದೇ ಸ್ಟಾರ್ ಹೊಟೇಲಿಂದ ಉದ್ಯಮಿ ಎಸ್ಕೇಪ್

    ಹೈದರಾಬಾದ್: ಉದ್ಯಮಿಯೊಬ್ಬರು 12 ಲಕ್ಷ ರೂ. ಬಾಕಿ ಹಣ ಪಾವತಿಸದೆ ಸ್ಟಾರ್ ಹೊಟೇಲಿನಿಂದ ಪರಾರಿಯಾದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

    ವಿಶಾಖಪಟ್ಟಣ ಮೂಲದ ಉದ್ಯಮಿ ಎ. ಶಂಕರ್ ನಾರಾಯಣ ಅವರು ಹೊಟೇಲಿನಲ್ಲಿ 100ಕ್ಕೂ ಹೆಚ್ಚು ದಿನ ಇದ್ದರು. ಆದರೆ ಹೊಟೇಲಿನ ಪೂರ್ತಿ ಬಿಲ್ ಪಾವತಿಸಿದೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

    ಐಷಾರಾಮಿ ಕೊಠಡಿಯಲ್ಲಿ ಉದ್ಯಮಿ 102 ದಿನ ತಂಗಿದ್ದಾರೆ. ಈ 102 ದಿನದ ಹೊಟೇಲ್ ಬಿಲ್ 25.96 ಲಕ್ಷ ರೂ. ಆಗಿದ್ದು, ಅದರಲ್ಲಿ ಶಂಕರ್ ನಾರಾಯಣ ಅವರು 13.62 ಲಕ್ಷ ರೂ. ಪಾವತಿಸಿದ್ದಾರೆ. ಇದರಲ್ಲಿ 12.34 ಲಕ್ಷ ರೂ. ಬಿಲ್ ಬಾಕಿ ಇತ್ತು. ಆದರೆ ಈ ಮಧ್ಯೆ ಉದ್ಯಮಿ ಹೊಟೇಲ್ ಸಿಬ್ಬಂದಿಗೆ ಮಾಹಿತಿ ನೀಡದೇ ನಿರ್ಗಮಿಸಿದ್ದಾರೆ.

    ಉದ್ಯಮಿ ಎಸ್ಕೇಪ್ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಹೊಟೇಲ್ ಸಿಬ್ಬಂದಿ ಅವರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಉದ್ಯಮಿ ಬಾಕಿ ಉಳಿದ ಮೊತ್ತವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಆ ನಂತರ ತಮ್ಮ ಮೊಬೈಲ್ ಸ್ವಿಚ್ಛ್ ಆಫ್ ಮಾಡಿಕೊಂಡಿದ್ದಾರೆ. ಇದರಿಂದ ಕಂಗಾಲಾದ ಹೊಟೇಲ್ ಆಡಳಿತ ಮಂಡಳಿ ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಉದ್ಯಮಿ ವಿರುದ್ಧ ದೂರು ದಾಖಲಿಸಿದೆ.

    ಈ ಮಧ್ಯೆ ಉದ್ಯಮಿ ತನ್ನ ಮೇಲೆ ಹೊಟೇಲ್ ಆಡಳಿತ ಮಂಡಳಿ ಮಾಡುವ ಆರೋಪವನ್ನು ತಳ್ಳಿ ಹಾಕಿದ್ದಾರೆ. ನಾನು ಸಂಪೂರ್ಣ ಬಿಲ್ ಪಾವತಿಸಿಯೇ ಅಲ್ಲಿಂದ ಬಂದಿದ್ದೇನೆ. ಆದರೆ ಇದೀಗ ಆರೋಪದಿಂದ ನನ್ನ ಗೌರವಕ್ಕೆ ಧಕ್ಕೆಯಾಗುತ್ತಿದೆ. ಹೀಗಾಗಿ ನಾನು ಹೊಟೇಲ್ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.

    ಘಟನೆ ಸಂಬಂಧ ಹೊಟೇಲ್ ಆಡಳಿತ ಮಂಡಳಿ ನೀಡಿದ ದೂರಿನಂತೆ ಉದ್ಯಮಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಸಬ್ ಇನ್ಸ್ ಪೆಕ್ಟರ್ ಪಿ. ರವಿ ತಿಳಿಸಿದ್ದಾರೆ.

  • ಸಿದ್ಧಾರ್ಥ್ ‘ಕಾಫಿರಾಜ’ನಾದ ಕಥೆಯನ್ನು ಓದಿ

    ಸಿದ್ಧಾರ್ಥ್ ‘ಕಾಫಿರಾಜ’ನಾದ ಕಥೆಯನ್ನು ಓದಿ

    ಚಿಕ್ಕಮಗಳೂರು: ಉದ್ಯಮಿ, ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ಹುಟ್ಟಿದ್ದರು. ಆ ಬಳಿಕ ಪ್ರಾಥಮಿಕ ಶಿಕ್ಷಣ, ಉದ್ಯಮ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟು ಕಾಫಿರಾಜನಾದ ಕಥೆಯನ್ನೊಮ್ಮೆ ನೀವು ಓದಲೇ ಬೇಕು.

    ಸಿದ್ಧಾರ್ಥ್ ಹೆಗ್ಡೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಚೇತನಹಳ್ಳಿಯ ಗಂಗಯ್ಯ ಹೆಗ್ಡೆ ಹಾಗೂ ವಾಸಂತಿ ದಂಪತಿಯ ಏಕೈಕ ಪುತ್ರ. ಚಿಕ್ಕಗಳೂರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದು, 1993-84ರಲ್ಲಿ ಮುಂಬೈನ ಜೆ.ಎಂ ಫೈನಾನ್ಸಿಯಲ್ ಲಿಮಿಟೆಡ್‍ನಲ್ಲಿ ಕೆಲಸಕ್ಕೆ ಸೇರಿಕೊಂಡರು.

    ಬಳಿಕ ಮಹೇಂದ್ರ ಕಂಪನಿಯ ಮ್ಯಾನೆಜ್ಮೆಂಟ್‍ನ ಸೆಕ್ಯೂರಿಟಿ ವಹಿವಾಟಿನಲ್ಲಿ ತರಬೇತಿದಾರನಾಗಿ ಕೆಲಸ ಮಾಡಿದ್ದರು. 2 ವರ್ಷಗಳ ಬಳಿಕ ಅಲ್ಲಿಂದ ವಾಪಸ್ ಬಂದು ತಂದೆ ಬಳಿ 2 ಲಕ್ಷ ಹಣ ಪಡೆದು ಮುಂಬೈಗೆ ಹೋಗಿದ್ದರು. ಅಲ್ಲಿ ನಷ್ಟವಾದ ಬಳಿಕ ಮತ್ತೆ ಅಪ್ಪನ ಬಳಿ ಬ್ಯುಸಿನೆಸ್‍ಗಾಗಿ 5 ಲಕ್ಷ ಹಣ ಕೇಳಿದ್ದರು. ಆಗ ಅವರ ತಂದೆ 2 ಲಕ್ಷ ಹಾಳು ಮಾಡಿದ್ದೀಯಾ ಎಂದು ಜರಿದಿದ್ದರು. ಬ್ಯಾಂಕಿನಲ್ಲಿ ಸಾಲ ಹಾಗೂ ಕಾಫಿ ತೋಟ ಮಾರಿ 5 ಲಕ್ಷ ಹಣ ಕೊಟ್ಟಿದ್ದರು.

    ಅಪ್ಪ ಕಷ್ಟದ ಮಧ್ಯೆಯೂ ತಂದು ಕೊಟ್ಟ ಆ ಹಣ ಸಿದ್ದಾರ್ಥ್ ಅವರ ಬದುಕಿನ ದಿಕ್ಕನ್ನೇ ಬದಲಿಸಿತ್ತು. 1993ರಲ್ಲಿ ಕಾಫಿ ಉದ್ದಿಮೆಗೆ ಕಾಲಿಟ್ಟ ಸಿದ್ದಾರ್ಥ್, ತಮ್ಮ ಜೀವಮಾನದಲ್ಲಿ ಮತ್ತೆಂದು ತಿರುಗಿಯೂ ನೋಡಲಿಲ್ಲ. 24ನೇ ವಯಸ್ಸಿಗೆ ಸ್ಟಾಕ್ ಮಾರ್ಕೆಟ್‍ನಲ್ಲಿ ಷೇರು ಖರೀದಿಸಿದ್ದರು. ಚಿಕ್ಕಮಗಳೂರು-ಹಾಸನ-ಮಡಿಕೇರಿಯಲ್ಲಿ ನಷ್ಟದಲ್ಲಿದ್ದ ಕಾಫಿ ತೋಟಗಳನ್ನು ಖರೀದಿಸಿ, ಹಂತಹಂತವಾಗಿ ಬೆಳೆಯುತ್ತಾ 13 ಸಾವಿರಕ್ಕೂ ಅಧಿಕ ಹೆಕ್ಟೇರ್ ಕಾಫಿ ತೋಟದ ಮಾಲೀಕರಾದರು.

    1996ರಲ್ಲಿ ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿ ಮೊದಲ ಕಾಫಿ ಡೇ ಆರಂಭಿಸಿದ್ದರು. ಒಂದು ನೂರಾಗಿ, ನೂರು ಐನೂರಾಗಿ ವಿಶ್ವಾದ್ಯಂತ 10ಕ್ಕೂ ಹೆಚ್ಚು ದೇಶ ಸೇರಿದಂತೆ 1772 ಕಾಫಿ ಡೇ ಔಟ್‍ಲೇಟ್‍ನ ಒಡೆಯರಾದರು. ವಾರ್ಷಿಕ 28 ಸಾವಿರ ಟನ್ ಕಾಫಿ ರಫ್ತು ಮಾಡುವ ಮೂಲಕ ಜಗತ್ತೇ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದ್ದರು. ಕಾಫಿ ಡೇಗಳಿಗೆ ಬೇಕಾದ ಬೀಜವನ್ನು ಸ್ವಂತ ತೋಟದಿಂದಲೇ ಬೆಳೆಯುತ್ತಿದ್ದರು. ಕಾಫಿಯ ಜೊತೆ 10ಕ್ಕೂ ಹೆಚ್ಚು ವಿವಿಧ ಕಂಪನಿಗಳನ್ನು ಆರಂಭಿಸಿ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿ ನಡೆದಾಡುವ ದೈವ ಆಗಿದ್ದರು.

    ಸಿದ್ಧಾರ್ಥ್ ಅವರು ಸಭೆ ಆರಂಭಕ್ಕೂ ಮೊದಲೇ ನಮ್ಮನ್ನು ಉಳಿಸೋದೆ ಹಸಿರು, ಹಸಿರನ್ನು ಬೆಳೆಸಿ ಎಂದು ಸಾರಿ-ಸಾರಿ ಹೇಳುತ್ತಿದ್ದರು. ಕಾರ್ಮಿಕರ ಮಕ್ಕಳ ಮದುವೆ, ಮನೆಗಾಗಿ ಬಂದವರಿಗೆಲ್ಲ ಸಹಾಯ ಮಾಡುತ್ತಿದ್ದ ಇವರನ್ನು ಜನ ಪೂಜ್ಯ ಭಾವನೆಯಿಂದಲೇ ನೋಡುತ್ತಿದ್ದರು.