Tag: ಉದಯ್ ಮೆಹ್ತಾ

  • ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌

    ಸ್ಯಾಂಡಲ್‌ವುಡ್ (Sandalwood) ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಅಭಿಮಾನಿಗಳಿಗೆ ಗುಡ್ ನ್ಯೂಸ್‌ವೊಂದು ಸಿಕ್ಕಿದೆ. `ಮಾರ್ಟಿನ್’ (Martin) ಚಿತ್ರದ ಅಪ್‌ಡೇಟ್‌ಗಾಗಿ ಕಾಯ್ತಿದ್ದ ಫ್ಯಾನ್ಸ್‌ಗೆ ಚಿತ್ರದ ಬಗ್ಗೆ ಈಗ ಬಿಗ್ ಅಪ್‌ಡೇಟ್‌ವೊಂದನ್ನ ಚಿತ್ರತಂಡ ನೀಡಿದ್ದಾರೆ.

    `ಪೊಗರು’ (Pogaru) ಚಿತ್ರದ ನಂತರ ಈಗ ಧ್ರುವಾ ಸರ್ಜಾ ರಗಡ್- ಮಾಸ್ ಲುಕ್‌ನಲ್ಲಿ ಮಾರ್ಟಿನ್ ಆಗಿ ಅಬ್ಬರಿಸಲು ರೆಡಿಯಾಗಿದ್ದಾರೆ. ನಿರ್ದೇಶಕ ಎಪಿ ಅರ್ಜುನ್ (Ap Arjun) ನಿರ್ದೇಶನದ `ಅದ್ದೂರಿ’ (Adduri Film) ಚಿತ್ರದಲ್ಲಿ ಅದ್ದೂರಿಯಾಗಿ ಎಂಟ್ರಿ ಕೊಟ್ಟಿದ್ದ ಧ್ರುವ ಈಗ ಮತ್ತೆ ಮಾರ್ಟಿನ್‌ಗಾಗಿ ಸಾಥ್ ನೀಡಿದ್ದಾರೆ. ಈ ಚಿತ್ರದ ಬಗ್ಗೆ ಮಾಹಿತಿ ಸಿಗದೇ ಬೇಸರದಲ್ಲಿದ್ದ ಅಭಿಮಾನಿಗಳಿಗೆ ಚಿತ್ರತಂಡ ಸಿಹಿ ಸುದ್ದಿ ನೀಡಿದ್ದಾರೆ. ಇದನ್ನೂ ಓದಿ: ಮದುವೆಯ ಬಳಿಕ ಸಿಹಿ ಸುದ್ದಿ ನೀಡಿದ ಸಿದ್-ಕಿಯಾರಾ ಜೋಡಿ

     

    View this post on Instagram

     

    A post shared by AP ARJUN (@aparjun_official)

    ʻಮಾರ್ಟಿನ್ʼ ಚಿತ್ರದ ಟೀಸರ್ ಝಲಕ್ ಇದೇ ತಿಂಗಳು ಫೆ.23ಕ್ಕೆ ರಿಲೀಸ್ ಆಗಲಿದೆ. ಈ ಬಗ್ಗೆ ಸ್ವತಃ ಚಿತ್ರದ ನಿರ್ದೇಶಕ ಎಪಿ ಅರ್ಜುನ್ ಅಪ್‌ಡೇಟ್ ನೀಡಿದ್ದಾರೆ. ಸದ್ಯದಲ್ಲೇ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಲಿದ್ದಾರೆ.

    ಉದಯ್ ಮೆಹ್ತಾ ನಿರ್ಮಾಣದ ಪ್ಯಾನ್ ಇಂಡಿಯಾ ಸಿನಿಮಾ ಮಾರ್ಟಿನ್ ಧ್ರುವಾಗೆ ವೈಭವಿ ಶಾಂಡಲ್ಯ ನಾಯಕಿಯಾಗಿ ನಟಿಸಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ

    ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ

    ದಯ್ ಕೆ.ಮೆಹ್ತಾ ನಿರ್ಮಿಸುತ್ತಿರುವ, ಎ.ಪಿ.ಅರ್ಜುನ್ ಹಾಗೂ ಧ್ರುವಸರ್ಜಾ ಕಾಂಬಿನೇಶನ್‌ನಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ದ್ವಿತೀಯ ಚಿತ್ರ ಮಾರ್ಟಿನ್ ಬಿಡುಗಡೆಯ ದಿನಾಂಕ ಈಗ ಮುಂದಕ್ಕೆ ಹೋಗಿದೆ. ಈ ಹಿಂದೆ ಚಿತ್ರವನ್ನು ಸೆ.30ಕ್ಕೆ ರಿಲೀಸ್ ಮಾಡುವುದೆಂದು ನಿರ್ಧಾರವಾಗಿತ್ತು. ಅದಕ್ಕೆ ಎಲ್ಲಾ ರೀತಿಯ ಸಿದ್ದತೆಯೂ ನಡೆದಿತ್ತು, ಆದರೆ ಚಿತ್ರ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ.

    ಅರ್ಜುನ್ ಸರ್ಜಾ ಅವರ ತಾಯಿ ಹಾಗೂ ಧ್ರುವಸರ್ಜಾ ಅವರ ಅಜ್ಜಿಯೂ ಆದ ಲಕ್ಷ್ಮಿದೇವಮ್ಮ ಅವರು ನಿಧನಕ್ಕೂ ಮುನ್ನ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆ ಸಮಯದಲ್ಲಿ ಆತಂಕದಲ್ಲಿದ್ದ ಧ್ರುವಸರ್ಜಾ ಬಾಕಿಯಿದ್ದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ, 10-12 ದಿನಗಳ ಕಾಲ ಶೂಟ್ ಮಾಡಬೇಕಿದ್ದ ಆ ಭಾಗವನ್ನು ಸದ್ಯದಲ್ಲೇ ಚಿತ್ರೀಕರಿಸಲು ತಂಡ ಸಿದ್ದತೆ ಮಾಡಿಕೊಂಡಿದೆ. ಅಲ್ಲದೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಸ್ವಲ್ಪ ಬಾಕಿ ಇರುವುದರಿಂದ ಅಂದುಕೊಂಡ ದಿನಾಂಕದಲ್ಲಿ ಚಿತ್ರ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ, ಸದ್ಯದಲ್ಲೇ ಮುಂದಿನ ದಿನಾಂಕವನ್ನು ತಿಳಿಸುವುದಾಗಿ ನಿರ್ದೇಶಕ ಎಪಿ ಅರ್ಜುನ್ ಅವರು ತಿಳಿಸಿದ್ದಾರೆ. ಇದನ್ನೂ ಓದಿ:ಬೈಕಾಟ್ ಲಾಲ್ ಸಿಂಗ್ ಚಡ್ಡಾ: ಕ್ಯಾರೆ ಅನಬಾರದು ಎಂದು ಟಾಂಗ್ ಕೊಟ್ಟ ನಟಿ ಕರಿಷ್ಮಾ

    ಅದ್ಧೂರಿ ಚಿತ್ರದ ನಂತರ ಧ್ರುವ ಸರ್ಜಾ ಮತ್ತೊಮ್ಮೆ ಅದೇ ನಿರ್ದೇಶಕರ ಜೊತೆ ಕೆಲಸ ಮಾಡಿರುವ ಚಿತ್ರ ಇದಾಗಿದ್ದು, ಪೊಗರು ಯಶಸ್ಸಿನ ಬಳಿಕ  ತೆರೆಗೆ ಬರುತ್ತಿರುವ ಈ ಚಿತ್ರದ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡಮಟ್ಟದ ನಿರೀಕ್ಷೆಯಿದೆ. ಸ್ಯಾಂಡಲ್ವುಡ್‌ನ ಮತ್ತೊಂದು ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು ಎನಿಸಿಕೊಂಡಿರುವ ಮಾರ್ಟಿನ್ ಚಿತ್ರದಲ್ಲಿ ಧ್ರುವಸರ್ಜಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು ಸೇರಿದಂತೆ ಐದು ಭಾಷೆಗಳಲ್ಲಿ ತೆರೆಗೆ ಬರಲಿರುವ ಈ ಚಿತ್ರದ ಚಿತ್ರೀಕರಣವನ್ನು ಉತ್ತರ ಭಾರತದ ಕಾಶ್ಮೀರದ ಸುಂದರ ತಾಣಗಳಲ್ಲಿ ನಡೆಸಲಾಗಿದೆ.

    ಉದಯ್ ಕೆ. ಮೆಹ್ತಾ ಅವರ ಬ್ಯಾನರ್ ನಲ್ಲೇ ದೊಡ್ಡ ಬಜೆಟ್  ಚಿತ್ರವಾಗಿ  ಮಾರ್ಟಿನ್ ಹೊರಬರುತ್ತಿದ್ದು, ಈ ಚಿತ್ರದಲ್ಲಿ ಬಹುಭಾಷಾ ನಟಿ ವೈಭವಿ ಶಾಂಡಿಲ್ಯ ಧ್ರುವಸರ್ಜಾಗೆ ಜೋಡಿಯಾಗಿ ಕಾಣಿಸಿ ಕೊಂಡಿದ್ದಾರೆ. ವಿಭಿನ್ನ ಪೋಸ್ಟರ್‌ನಿಂದಲೇ ಗಮನ ಸೆಳೆದಿರುವ ಮಾರ್ಟಿನ್ ಚಿತ್ರದ ಮೇಲೆಅಭಿಮಾನಿಗಳಿಗೆ ಸಿಕ್ಕಾಪಟ್ಟೆ ನಿರೀಕ್ಷೆಯಿದೆ. ಚಿತ್ರ ಯಾವಾಗ ಬರುತ್ತೋ ಅಂತ ಕಾಯ್ತಿದ್ದ ಅವರಿಗೆ ಕೊಂಚ ನಿರಾಸೆಯಾದರೂ ಪರಿಸ್ಥಿತಿಯನ್ನುಅರ್ಥಮಾಡಿಕೊಂಡು ಹೊಸ ರಿಲೀಸ್ ಡೇಟ್‌ಗಾಗಿ ಎದುರು ನೋಡುತ್ತಿದ್ದಾರೆ.

    ಕಾಶ್ಮೀರದ ಐಸ್‌ವಾರ್ ಸಾಹಸ ದೃಶ್ಯಗಳ ಜೊತೆಗೆ ರೋಮಾಂಚನಕಾರಿ ಸ್ಕೇಟಿಂಗ್ ಆ್ಯಕ್ಷನ್ ಸೀನ್‌ಗಳು, ಇದರಜೊತೆಗೆ ಮಾತಿನಭಾಗ ಸೇರಿ ೧೬ ದಿನಗಳವರೆಗೆ ಕಾಶ್ಮೀರದಲ್ಲೇ ಚಿತ್ರದ ಶೂಟಿಂಗ್ ನಡೆಸಲಾಗಿದೆ. ಆ್ಯಕ್ಷನ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಿರ್ದೇಶಕ ಎ.ಪಿ.ಅರ್ಜುನ್ ಅವರು ಹೊಸ ಮಾದರಿಯ ಮೇಕಿಂಗ್ ಟ್ರೈ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ  ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ತೆಲುಗಿನ ಹೆಸರಾಂತ ಮ್ಯೂಸಿಕ್ ಡೈರೆಕ್ಟರ್ ಮಣಿಶರ್ಮಾ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಸತ್ಯಹೆಗಡೆ ಅವರ ಛಾಯಾಗ್ರಹಣ, ಮಹೇಶ್‌ರೆಡ್ಡಿ ಅವರ ಸಂಕಲನ ಈ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

  • ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾಗೆ ಈವರೆಗೂ ಖರ್ಚಾಗಿದ್ದು ಬರೋಬ್ಬರಿ 60 ಕೋಟಿ?

    ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾಗೆ ಈವರೆಗೂ ಖರ್ಚಾಗಿದ್ದು ಬರೋಬ್ಬರಿ 60 ಕೋಟಿ?

    ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ನಾನಾ ವಿಚಾರಗಳಿಂದಾಗಿ ಸಖತ್ ಸದ್ದು ಮಾಡುತ್ತಿದೆ. ಅಲ್ಲದೇ ಈ ಸಿನಿಮಾದ ಕುರಿತು ಸಾಕಷ್ಟು ಇಂಟ್ರಸ್ಟಿಂಗ್ ಸಂಗತಿಗಳು ಈ ಚಿತ್ರದಲ್ಲಿದೆ. ಪೊಗರು ನಂತರ ಧ್ರುವ ಮಾಗಿದ್ದ ಕಾರಣದಿಂದಾಗಿ ಅಳೆದು-ತೂಗಿ ಮಾರ್ಟಿನ್‌ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ ಆಕ್ಷನ್ ಪ್ರಿನ್ಸ್. ಅಲ್ಲದೇ, ಅನೇಕ ಸಂಗತಿಗಳ ಕುರಿತು ಬೆಳಕು ಚೆಲ್ಲಿ ಮಾರ್ಟಿನ್‌ಗೆ ಬಣ್ಣಹಚ್ಚಿದ್ದಾರೆ. ಈಗ ಮಾರ್ಟಿನ್ ಸಿನಿಮಾದ ಶೂಟಿಂಗ್ ಫೈನಲ್ ಹಂತಕ್ಕೆ ತಲುಪಿದ್ದು, ಮುಂದಿನ ವಾರದಿಂದ ಹೈದರಾಬಾದ್‌ನಲ್ಲಿ ಫೈನಲ್ ಶೆಡ್ಯೂಲ್ ಪ್ಲಾನ್ ಆಗಿದೆಯಂತೆ.

    ಮಾರ್ಟಿನ್ ಧ್ರುವ ವೃತ್ತಿ ಜೀವನದ ದುಬಾರಿ ಬಜೆಟ್ ಸಿನಿಮಾ. ಮಾರ್ಟಿನ್‌ಗಾಗಿ ಇಲ್ಲಿವರೆಗೆ ಸುಮಾರು ೬೦ ಕೋಟಿ ಖರ್ಚು ಮಾಡಿದ್ದಾರಂತೆ ನಿರ್ಮಾಪಕ ಉದಯ್ ಮೆಹ್ತಾ. ನಿರ್ದೇಶಕ ಎ.ಪಿ ಅರ್ಜುನ್ ಪ್ರತಿ ಫ್ರೇಮ್‌ ಅನ್ನೂ ಸಖತ್ ರಿಚ್ಚಾಗಿ ಶೂಟ್ ಮಾಡಿದ್ದಾರಂತೆ. ಒಂದೂವರೆ ನಿಮಿಷದ ಒಂದು ಕಾರ್ ಛೇಸಿಂಗ್ ದೃಶ್ಯವನ್ನು 9 ದಿನ ಶೂಟ್ ಮಾಡಿದ್ದಾರೆ ಅಂದ್ರೆ ಮಾರ್ಟಿನ್ ವಿಶ್ಯುವಲ್ಸ್‌ಗೆ ಎಷ್ಟು ಮಹತ್ವವಿದೆ ಎನ್ನುವುದು ಈ ಮೂಲಕ ಗೊತ್ತಾಗಲಿದೆ.

    ಸಿನಿಮಾದಲ್ಲಿ ಹತ್ತು ಹಲವು ವಿಶೇಷತೆಗಳಿದ್ದು ತೆಲುಗು, ತಮಿಳಿನ ಸಿನಿರಂಗದ ಖ್ಯಾತನಾಮರು ಮಾರ್ಟಿನ್‌ಗಾಗಿ  ಬಣ್ಣ ಹಚ್ಚಲಿದ್ದಾರೆ ಅನ್ನುವುದು ಸದ್ಯದ ಅಪ್‌ಡೇಟ್. ಎಲ್ಲಾ ಭಾಷೆಯ ಎಲ್ಲಾ ವರ್ಗದ ಜನರು ಮಾರ್ಟಿನ್ ಮೆಚ್ಚಲಿದ್ದಾರೆ ಅನ್ನೊದು ಚಿತ್ರತಂಡ ನಂಬಿಕೆ. ಮಾರ್ಟಿನ್ ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಕನ್ನಡದ ಮತ್ತೊಂದು ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ದಾಖಲೆ ಬರೆಯಲಿದೆ ಎನ್ನುವ ನಂಬಿಕೆ ಚಿತ್ರತಂಡದ್ದು. ಇದನ್ನೂ ಓದಿ : ‘ಮದುವೆನೂ ಇಲ್ಲ, ರಿಂಗೂ ಇಲ್ಲ’ ಲಲಿತ್ ಮೋದಿಗೆ ತಿವಿದ ಸುಶ್ಮಿತಾ ಸೇನ್

    ಈವರೆಗೂ ಮಾರ್ಟಿನ್ ಮೋಷನ್ ಪೋಸ್ಟರ್ ಬಿಟ್ಟು ಬೇರೆನೂ ರಿವಿಲ್ ಮಾಡಿಲ್ಲ ಚಿತ್ರತಂಡ. ಫೈನಲ್ ಕಾಪಿ ಕೈಗೆ ಬರೋವರೆಗೆ ಏನೂ ರಿವಿಲ್ ಮಾಡೋದು ಬೇಡ ಅಂತ ಫಿಲಂ ಟೀಮ್ ತಿರ್ಮಾನ ಮಾಡಿದೆಯಂತೆ. ಈ ಸಿನಿಮಾದಲ್ಲಿ ಧ್ರುವ ಡಬಲ್ ರೋಲ್‌ನಲ್ಲಿ ಕಾಣಿಸಿದ್ದಾರೆ ಎನ್ನುವ ಸುದ್ದಿಯೂ ಆದೆ. ಆದ್ರೆ ಈ ಪ್ರಶ್ನೆಗೆ ಚಿತ್ರತಂಡದ ಸದಸ್ಯರು ಇನ್ನೂ ಸ್ವಲ್ಪ ದಿನ ಕಾದು ನೋಡಿ ಅಂತಿದ್ದಾರೆ. ಒಟ್ಟಾರೆ ಇದುವರೆಗೆ ಈ ಸಿನಿಮಾಗೆ ೬೦ ಕೋಟಿ ಖರ್ಚಾಗಿದ್ದು, ೧೦ ಫೈಟ್‌ಗಳಿಂದ ಈ ಚಿತ್ರ ಕೂಡಿದೆ ಎನ್ನುವುದು ಬಲ್ಲ ಮೂಲಗಳ ಮಾಹಿತಿ.

    Live Tv
    [brid partner=56869869 player=32851 video=960834 autoplay=true]

  • ಬ್ರಹ್ಮಚಾರಿಯ ಸಖಿ ಅದಿತಿ ಪ್ರಭುದೇವ ಏನಂತಾರೆ?

    ಬ್ರಹ್ಮಚಾರಿಯ ಸಖಿ ಅದಿತಿ ಪ್ರಭುದೇವ ಏನಂತಾರೆ?

    ನೀನಾಸಂ ಸತೀಶ್ ಮತ್ತು ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿರುವ ಬ್ರಹ್ಮಚಾರಿ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಂದ್ರ ಮೋಹನ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರ ಔಟ್ ಆಂಡ್ ಔಟ್ ಮನೋರಂಜನಾತ್ಮಕ ಸಿನಿಮಾ ಅನ್ನೋದು ಈಗಾಗಲೇ ಪ್ರೇಕ್ಷಕರ ಪಾಲಿಗೆ ಪಕ್ಕಾ ಆಗಿದೆ. ಭರಪೂರ ಹಾಸ್ಯವಿದ್ದರೂ ವಲ್ಗಾರಿಟಿಯ ಸೋಂಕಿಲ್ಲದ ಈ ಚಿತ್ರ ಹಾಸ್ಯ ಧಾಟಿಯಾಚೆಗೂ ಗಹನವಾದ ಕಥೆಯೊಂದಿಗೆ ನಿರ್ದೇಶಕ ಚಂದ್ರಮೋಹನ್ ಈ ಚಿತ್ರವನ್ನು ರೂಪಿಸಿದ್ದಾರೆ. ಇದುವರೆಗೂ ಹಲವಾರು ಪಾತ್ರಗಳನ್ನು ನಿರ್ವಹಿಸಿರುವ ಅದಿತಿ ಪ್ರಭುದೇವ ಈ ಮೂಲಕ ಮೊದಲ ಬಾರಿ ಹಾಸ್ಯಾತ್ಮಕ ಸಿನಿಮಾದ ಭಾಗವಾಗಿದ್ದಾರೆ.

    ಅದಿತಿ ಪ್ರಭುದೇವ ಪಾಲಿಗೆ ಇದೊಂದು ಹೊಸ ಜಾನರಿನ ಸಿನಿಮಾ. ಆರಂಭದಲ್ಲಿ ಇದರ ಕಾಮಿಡಿ ಝಲಕ್ ಮತ್ತು ತಮ್ಮ ಪಾತ್ರದ ವಿಶೇಷತೆಗೆ ಮನಸೋತೇ ಅದಿತಿ ನಟಿಸಲು ಒಪ್ಪಿಕೊಂಡಿದ್ದರಂತೆ. ಪ್ರತಿ ಸಿನಿಮಾಗಳೂ ತನ್ನ ಪಾಲಿಗೆ ಹೊಸ ಕಲಿಕೆಗೆ ಕಾರಣವಾಗಬೇಕೆಂಬ ಹಂಬಲವಿಟ್ಟುಕೊಂಡಿರೋ ಅವರ ಪಾಲಿಗೆ ಬ್ರಹ್ಮಚಾರಿ ಚಿತ್ರದ ಮೂಲಕ ಹೊಸತನದ ಅನುಭವ ದಕ್ಕಿದೆಯಂತೆ. ಯಾವ ಪ್ರೇಕ್ಷಕರೇ ಆಗಿದ್ದರೂ ತಮ್ಮ ಖಾಸಗಿ ಬದುಕಿನ ಜಂಜಾಟಗಳಿಂದ ಮುಕ್ತವಾಗಿ ಎಲ್ಲವನ್ನೂ ಮರೆತು ಮೈ ಮರೆಯಲೋಸ್ಕರವೇ ಸಿನಿಮಾ ಮಂದಿರಗಳತ್ತ ಬರುತ್ತಾರೆ. ಹಾಗೆ ಬಂದ ಪ್ರತಿಯೊಬ್ಬರಿಗೂ ಭರ್ಜರಿ ಮನರಂಜನೆ ನೀಡುವಲ್ಲಿ ಬ್ರಹ್ಮಚಾರಿ ಗೆಲುವು ಕಾಣುತ್ತಾನೆಂಬ ನಂಬಿಕೆ ಅದಿತಿಯದ್ದು.

    ಇದೇ ಸಂದರ್ಭದಲ್ಲಿ ಅವರು ಇಡೀ ಚಿತ್ರದಲ್ಲಿ ಎಲ್ಲಿಯೂ ಮುಜುಗರ ಪಟ್ಟುಕೊಳ್ಳುವಂಥಾ ಸನ್ನಿವೇಶಗಳಿಲ್ಲ ಎಂಬುದನ್ನೂ ಒತ್ತಿ ಹೇಳುತ್ತಾರೆ. ಒಟ್ಟಾರೆಯಾಗಿ ಈ ಸಿನಿಮಾ ದೊಡ್ಡ ಗೆಲುವು ದಾಖಲಿಸೋದರೊಂದಿಗೆ ತನ್ನ ಕೆರಿಯರ್‍ನಲ್ಲಿಯೂ ಭಿನ್ನ ಸಿನಿಮಾವಾಗಿ ನೆಲೆಗೊಳ್ಳುತ್ತದೆಂಬ ನಂಬಿಕೆಯೂ ಅವರಲ್ಲಿದೆ. ಯಾವ ವೆರೈಟಿಯ ಪಾತ್ರಗಳನ್ನಾದರೂ ತುಸು ಕಷ್ಟವಾದರೂ ಮಾಡಿ ಬಿಡಬಹುದು. ಆದರೆ ಏಕಾಏಕಿ ಕಾಮಿಡಿ ಟೈಮಿಂಗಿಗೆ ಒಗ್ಗಿಕೊಳ್ಳೋದು ಮಾತ್ರ ಅಕ್ಷರಶಃ ಹರಸಾಹಸ. ಕೊಂಚ ಕಷ್ಟವಾದರೂ ಅದಿತಿ ಅದನ್ನು ಸಮರ್ಥವಾಗಿ ನಿಭಾಯಿಸಿದ್ದರಂತೆ. ಇಲ್ಲಿ ಅವರ ಪಾತ್ರ ಕೂಡಾ ಸೊಗಸಾಗಿದೆಯಂತೆ. ಅಂದಹಾಗೆ, ಉದಯ್ ಮೆಹ್ತಾ ನಿರ್ಮಾಣ ಮಾಡಿರೋ ಈ ಸಿನಿಮಾ ಇದೇ ವಾರ ತೆರೆ ಕಾಣುತ್ತಿದೆ.

  • ಭರ್ಜರಿಯಾಗಿ ನಗಿಸಲಿದ್ದಾರೆ ಬ್ರಹ್ಮಚಾರಿ ಸತೀಶ್!

    ಭರ್ಜರಿಯಾಗಿ ನಗಿಸಲಿದ್ದಾರೆ ಬ್ರಹ್ಮಚಾರಿ ಸತೀಶ್!

    ನೀನಾಸಂ ಸತೀಶ್ ಆರಂಭದಿಂದಲೂ ಮಂಡ್ಯ ಶೈಲಿಯ ಭಾಷಾ ಸೊಗಡಿನಿಂದ ನಗಿಸುತ್ತಾ ಬಂದವರು. ಇದರೊಂದಿಗೆ ವಿಶಿಷ್ಟ ನಟನಾಗಿ ನೆಲೆ ಕಂಡುಕೊಂಡಿದ್ದ ಅವರು ಆ ನಂತರದಲ್ಲಿ ನಾಯಕನಾಗಿಯೂ ಥರ ಥರದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆದರೆ ಬ್ರಹ್ಮಚಾರಿಯಲ್ಲಿ ಅವರದ್ದು ಅದೆಲ್ಲಕ್ಕಿಂತಲೂ ಮಜವಾದ ಪಾತ್ರವೆಂಬುದು ಈ ಹಿಂದೆ ಟ್ರೇಲರ್‍ನೊಂದಿಗೇ ಸಾಬೀತಾಗಿದೆ. ಅದಿತಿ ಪ್ರಭುದೇವ ಪಾತ್ರವೂ ಕೂಡಾ ಪ್ರೇಕ್ಷಕರೆಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಪ್ರತಿ ಪ್ರೇಕ್ಷಕರೂ ಕೂಡಾ ಇಂಥಾ ಹಾಸ್ಯ ಪ್ರಧಾನ ಚಿತ್ರಗಳನ್ನು ಕಣ್ತುಂಬಿಕೊಂಡು ಮನಸಾರೆ ನಕ್ಕು ಹಗುರಾಗಲು ಕಾದು ಕೂತಿರುತ್ತಾರೆ. ಅವರೆಲ್ಲರ ಪಾಲಿಗೆ ಫುಲ್ ಮೀಲ್ಸ್‍ನಂತಿರೋ ಬ್ರಹ್ಮಚಾರಿ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

    ನಿರ್ಮಾಪಕ ಉದಯ್ ಮೆಹ್ತಾ ಅವರು ಹೇಳಿದ್ದ ಒಂದೆಳೆ ಕಥೆಯನ್ನು ನಿರ್ದೇಶಕ ಚಂದ್ರಮೋಹನ್ ವಿಸ್ತರಿಸಿ, ಅದಕ್ಕೊಂದು ಸಿನಿಮಾ ಚೌಕಟ್ಟು ಕೊಡುವುದಕ್ಕೆ ವರ್ಷಗಳಷ್ಟು ಕಾಲ ಹಿಡಿದಿತ್ತು. ಈ ಹೊತ್ತಿನಲ್ಲಿ ಬ್ರಹ್ಮಚಾರಿ ಯಾರಾಗಬೇಕೆಂಬಂಥಾ ಪ್ರಶ್ನೆ ಉದ್ಭವವಾದಾಗ ಚಂದ್ರಮೋಹನ್ ಹಾಗೂ ನಿರ್ಮಾಪಕ ಉದಯ್ ಮೆಹ್ತಾರಿಗೆ ನೀನಾಸಂ ಸತೀಶ್ ಮಾತ್ರವೇ ಈ ಪಾತ್ರಕ್ಕೆ ಸೂಟ್ ಆಗುತ್ತಾರೆ ಅನ್ನಿಸಿತ್ತಂತೆ. ಈ ಒಂದೆಳೆಯನ್ನು ಸತೀಶ್‍ಗೆ ಹೇಳಿದಾಗ ಅವರು ಖುಷಿಗೊಂಡಿದ್ದರಾದರೂ ಅದನ್ನು ಹೇಗೆ ಕಟ್ಟಿಕೊಡುತ್ತಾರೆ, ವಲ್ಗರ್ ಆಗಿಯೇನಾದರೂ ರೂಪಿಸುತ್ತಾರಾ ಎಂಬ ಆತಂಕ ಇತ್ತಂತೆ. ಆದರೆ ಅಂತಿಮವಾಗಿ ಸಿದ್ಧಗೊಂಡ ಕಥೆ ಹೇಳಿದಾಗ ಸತೀಶ್ ಥ್ರಿಲ್ ಆಗಿದ್ದರಂತೆ.

    ಒಂದು ಗಂಭೀರ ದೈಹಿಕ ಸಮಸ್ಯೆಯನ್ನು ಹಾಸ್ಯದ ಧಾಟಿಯಲ್ಲಿ ಹೇಳಿದ್ದರೂ ಸಹ ಎಲ್ಲಿಯೂ ಮುಜುಗರವಾಗದಂತೆ ಕಟ್ಟಿ ಕೊಟ್ಟಿರುವ ರೀತಿಯೇ ಸತೀಶ್ ಅವರಿಗೆ ಹಿಡಿಸಿತ್ತಂತೆ. ನಿರ್ದೇಶಕ ಚಂದ್ರ ಮೋಹನ್ ಅವರಿಗೆ ಈ ಪಾತ್ರ ಹೀಗೆಯೇ ಮೂಡಿ ಬರಬೇಕೆಂಬ ಕನಸಿನಂಥಾ ಕಲ್ಪನೆ ಇತ್ತು. ಅದಕ್ಕೂ ಒಂದು ಕೈ ಮಿಗಿಲಾಗಿಯೇ ಬ್ರಹ್ಮಚಾರಿಯ ಪಾತ್ರಕ್ಕೆ ಸತೀಶ್ ಜೀವ ತುಂಬಿದ್ದಾರಂತೆ. ಅಯೋಗ್ಯ ಭರ್ಜರಿ ಯಶ ಕಂಡ ನಂತರ ಚಂಬಲ್ ಚಿತ್ರದ ಮೂಲಕ ಸತೀಶ್ ಪ್ರತಿಭೆಯ ಮತ್ತೊಂದು ಮಗ್ಗುಲಿನ ಪರಿಚಯವಾಗಿತ್ತು. ಅವರೀಗ ಬ್ರಹ್ಮಚಾರಿ ಮೂಲಕ ಮತ್ತೆ ನಗುವಿನ ಸೆಲೆ ಚಿಮ್ಮಿಸಲು ಅಣಿಗೊಂಡಿದ್ದಾರೆ. ಬ್ರಹ್ಮಚಾರಿ ಅಯೋಗ್ಯ ನಂತರದಲ್ಲಿ ಸತೀಶ್ ಅವರ ಕೈ ಹಿಡಿದಿರೋ ಗೆಲುವಿನ ಸರಣಿಯನ್ನು ಮುಂದುವರೆಸೋ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.

  • ಇವನು ಫ್ಯಾಮಿಲಿ ಎಂಟರ್‌ಟೈನರ್ ಬ್ರಹ್ಮಚಾರಿ!

    ಇವನು ಫ್ಯಾಮಿಲಿ ಎಂಟರ್‌ಟೈನರ್ ಬ್ರಹ್ಮಚಾರಿ!

    ದಯ್ ಮೆಹ್ತಾ ನಿರ್ಮಾಣ ಮಾಡಿರುವ ಬ್ರಹ್ಮಚಾರಿ ಚಿತ್ರ ಈ ವಾರವೇ ರಾಜ್ಯಾದ್ಯಂತ ತೆರೆಗಾಣುತ್ತಿದೆ. ನೀನಾಸಂ ಸತೀಶ್ ನಟಿಸಿರೋ ಈ ಚಿತ್ರ ಈಗಾಗಲೇ ಟ್ರೇಲರ್, ಹಾಡುಗಳ ಮೂಲಕ ಬಹು ನಿರೀಕ್ಷಿತ ಚಿತ್ರವಾಗಿ ಹೊರ ಹೊಮ್ಮಿದೆ. ಫಸ್ಟ್ ನೈಟ್ ಟೀಸರ್ ನಿಂದ ಶುರುವಾಗಿ ಟ್ರೇಲರ್ ತನಕ ಬ್ರಹ್ಮಚಾರಿ ಪ್ರೇಕ್ಷಕರನ್ನು ಮರುಳು ಮಾಡಿಕೊಂಡು ಬಂದು ಇದೀಗ ಬಿಡುಗಡೆಯ ಹಂತ ತಲುಪಿಕೊಂಡಿದ್ದಾನೆ. ವಿಶೇಷವೆಂದರೆ, ಸಂಪೂರ್ಣ ಮನೋರಂಜನೆಯನ್ನೇ ಉದ್ದೇಶವಾಗಿಸಿಕೊಂಡಿರೋ ಈ ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್ ಟೈನ್ಮೆಂಟ್ ಪ್ಯಾಕೇಜಿನಂತೆ ಮೂಡಿ ಬಂದಿದೆಯಂತೆ. ಈ ಕಾರಣದಿಂದಲೇ ಚಿತ್ರತಂಡ ಕುಟುಂಬ ಸಮೇತರಾಗಿ ಬಂದು ನೋಡುವಂತೆ ಪ್ರೇಕ್ಷಕರಿಗೆ ಆಹ್ವಾನ ನೀಡುತ್ತಾ ಬಂದಿದೆ.

    ಈ ಹಿಂದೆ ಬಾಂಬೆ ಮಿಠಾಯಿ ಮತ್ತು ಡಬಲ್ ಇಂಜಿನ್ ಎಂಬ ಹಾಸ್ಯ ಪ್ರಧಾನ ಚಿತ್ರಗಳನ್ನು ನಿರ್ದೇಶನ ಮಾಡಿ ಗೆದ್ದಿದ್ದವರು ಚಂದ್ರ ಮೋಹನ್. ಈ ಥರದ ಸಿನಿಮಾಗಳನ್ನು ರೂಪಿಸೋದು, ಇಡೀ ಸಿನಿಮಾದಲ್ಲಿ ಪ್ರತೀ ಹಂತದಲ್ಲಿಯೂ ಪ್ರೇಕ್ಷಕರನ್ನು ನಗಿಸೋದೆಲ್ಲ ಅಷ್ಟು ಸಲೀಸಿನ ಸಂಗತಿಯಲ್ಲ. ಆದರೆ ಚಂದ್ರಮೋಹನ್ ಅದನ್ನು ಕರಗತ ಮಾಡಿಕೊಂಡಿದ್ದಾರೆ. ಈ ಕಾರಣದಿಂದಲೇ ಎರಡು ಸರಣಿ ಗೆಲುವುಗಳನ್ನು ತನ್ನದಾಗಿಸಿಕೊಂಡು, ಇದೀಗ ಬ್ರಹ್ಮಚಾರಿ ಮೂಲಕ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಿಂದಿದ್ದಾರೆ. ಈಗಾಗಲೇ ಈ ಸಿನಿಮಾ ಸೃಷ್ಟಿಸಿರುವ ಕ್ರೇಜ್ ಮತ್ತು ಅದರ ವಿಶಿಷ್ಟ ಕಂಟೆಂಟಿನ ವಿಚಾರಗಳೆಲ್ಲವೂ ಬ್ರಹ್ಮಚಾರಿಗೆ ಪ್ರೇಕ್ಷಕರೆಲ್ಲ ಬೇಷರತ್ತಾಗಿ ಫಿದಾ ಆಗುವಂಥಾ ಲಕ್ಷಣಗಳನ್ನೇ ಧ್ವನಿಸುವಂತಿವೆ.

    ಗುಪ್ತ ಸಮಸ್ಯೆಗಳನ್ನು ಒಳಗೇ ಇಟ್ಟುಕೊಂಡು, ಕನಿಷ್ಟ ಅದಕ್ಕೊಂದು ಚಿಕಿತ್ಸೆ ಪಡೆಯಲೂ ಮುಜುಗರ ಪಡುವ, ಹೇಗೋ ಅದು ಬಟಾಬಯಲಾದ ನಂತರ ಮಾನಸಿಕ ಹಿಂಸೆ ಅನುಭವಿಸುವಂಥಾ ಅದೆಷ್ಟೋ ಜನರಿದ್ದಾರೆ. ಅಂಥಾದ್ದೊಂದು ಗುಪ್ತ ಸಮಸ್ಯೆಯಿಂದ ಬಳಲೋ ನಾಯಕನ ಪಡಿಪಾಟಲುಗಳನ್ನು ಎಲ್ಲಿಯೂ ವಲ್ಗರ್ ಅನ್ನಿಸದಂತೆ, ಸಭ್ಯತೆಯ ಗೆರೆ ದಾಟದಂತೆ, ಪ್ರತೀ ಫ್ರೇಮಿನಲ್ಲಿಯೂ ನಗಿಸುವಂತೆ ಕಟ್ಟಿ ಕೊಡುವಲ್ಲಿ ಚಂದ್ರ ಮೋಹನ್ ಗೆದ್ದಿದ್ದಾರಂತೆ. ಚಿತ್ರತಂಡದಲ್ಲಿಯೂ ಆ ಬಗೆಗಿನ ಗಾಢವಾದ ವಿಶ್ವಾಸವಿದೆ. ಈಗಾಗಲೇ ಹೊರ ಬಂದಿರುವ ಟೀಸರ್ ಮತ್ತು ಟ್ರೇಲರ್ ಗಳಲ್ಲಿ ಅದರ ಕುರುಹುಗಳಿವೆ.

    ಉದಯ್ ಮೆಹ್ತಾ ನಿರ್ಮಾಣದ ಚಿತ್ರಗಳೆಂದ ಮೇಲೆ ಅಲ್ಲಿ ಅದ್ಧೂರಿತನದ ಹಾಜರಿ ಇದ್ದೇ ಇರುತ್ತದೆಂಬ ನಂಬಿಕೆ ಪ್ರೇಕ್ಷಕರಲ್ಲಿದೆ. ಬ್ರಹ್ಮಚಾರಿಯನ್ನೂ ಕೂಡಾ ಅವರು ಅಷ್ಟೇ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಹಾಡುಗಳಲ್ಲಿಯೇ ಅದಕ್ಕೆ ಸಾಕ್ಷಿಗಳು ಸಿಗುವಂತಿವೆ. ಟ್ರೇಲರ್ ಮತ್ತು ಟೀಸರ್ ಗಳಲ್ಲಿ ಕಚಗುಳಿ ಇಡುವಂತಾ ಸನ್ನಿವೇಶ, ಡೈಲಾಗುಗಳಿಂದಲೇ ಬ್ರಹ್ಮಚಾರಿ ಲಕಲಕಿಸಿದ್ದಾನೆ. ಹಾಗಂತ ಇದನ್ನೇನು ಡಬಲ್ ಮೀನಿಂಗ್‍ಗಳಿಂದ ತುಂಬಿರೋ ಸಿನಿಮಾ ಅಂದುಕೊಳ್ಳಬೇಕಿಲ್ಲ. ಇದು ಕುಟುಂಬ ಸಮೇತರಾಗಿ ನೋಡಿ ಎಂಜಾಯ್ ಮಾಡುವಂಥಾ ಚಿತ್ರ. ಒಂದೇ ಒಂದು ಮುಜುಗರದ ಸನ್ನಿವೇಶಗಳೂ ಈ ಸಿನಿಮಾದಲ್ಲಿಲ್ಲವಂತೆ. ಅಂತೂ ನೀನಾಸಂ ಸತೀಶ್ ಬ್ರಹ್ಮಚಾರಿಯಾಗಿ ತಮ್ಮ ಗೆಲುವಿನ ಸರಣಿಯನ್ನು ಮುಂದುವರೆಸೋದರಲ್ಲಿ ಯಾವ ಸಂದೇಹವೂ ಇಲ್ಲ.

  • ಸಿಂಗ: ನಿರ್ಮಾಪಕ ಉದಯ್ ಮೆಹ್ತಾರ ಡೈಮಂಡ್‍ನಂಥಾ ಕನಸು!

    ಸಿಂಗ: ನಿರ್ಮಾಪಕ ಉದಯ್ ಮೆಹ್ತಾರ ಡೈಮಂಡ್‍ನಂಥಾ ಕನಸು!

    ಬೆಂಗಳೂರು: ಸಿನಿಮಾ ನಿರ್ಮಾಣವೆಂಬುದು ವ್ಯವಹಾರ. ಆದರೆ ನಿರ್ಮಾಪಕ ಅದನ್ನು ಬರೀ ಬ್ಯುಸಿನೆಸ್ ಅಂತಷ್ಟೇ ಪರಿಗಣಿಸಿದರೆ ಬಹುಶಃ ಅದ್ಭುತ ದೃಶ್ಯ ಕಾವ್ಯಗಳು ಹುಟ್ಟಲು ಸಾಧ್ಯವಿರುತ್ತಿರಲಿಲ್ಲ. ಯಾಕೆಂದರೆ, ಯಶಸ್ವಿ ಸಿನಿಮಾಗಳ ಹಿಂದೆ ಇಂಥಾ ವ್ಯಾವಹಾರಿಕ ಉದ್ದೇಶದಾಚೆಯ ಉತ್ಕಟ ಕಲಾ ಪ್ರೇಮವಿರುತ್ತದೆ. ನಿರ್ದೇಶಕರ ಕನಸಿಗೆ ಪ್ರತೀ ಹೆಜ್ಜೆಯಲ್ಲೂ ಸಾಥ್ ಕೊಡುತ್ತಾ, ಎಂಥಾ ಸವಾಲುಗಳು ಬಂದರೂ ಎದೆಕೊಡುತ್ತಾ ನಿರ್ಮಾಪಕ ಸಾಗಿ ಬಂದರೇನೇ ಸಿನಿಮಾವೊಂದು ಅಚ್ಚುಕಟ್ಟಾಗಿ ರೂಪುಗೊಳ್ಳುತ್ತೆ. ಹೀಗೆ ಸ್ವತಃ ದೊಡ್ಡ ಮಟ್ಟದ ವ್ಯಾಪಾರ ಉದ್ಯಮದ ವಾರಸುದಾರರಾಗಿದ್ದರೂ ಸಿನಿಮಾವನ್ನು ಆರಾಧಿಸುವ ಸ್ವಭಾವದ ಉದಯ್ ಮೆಹ್ತಾರ ಏಳನೇ ಕನಸು ‘ಸಿಂಗ’!

    ಚಿರಂಜೀವಿ ಸರ್ಜಾ ಅಭಿನಯದ ಸಿಂಗ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಈಗಾಗಲೇ ಟ್ರೈಲರ್ ಮೂಲಕ ದೊಡ್ಡ ಮಟ್ಟದಲ್ಲಿಯೇ ಸಂಚಲನ ಸೃಷ್ಟಿಸಿರೋ ಈ ಚಿತ್ರವನ್ನು ಈ ಹಿಂದೆ ರಾಮ್ ಲೀಲಾ ಎಂಬ ಸಿನಿಮಾ ನಿರ್ದೇಶನ ಮಾಡಿದ್ದ ವಿಜಯ್ ಕಿರಣ್ ರೂಪಿಸಿದ್ದಾರೆ. ಯಾವುದೇ ಚಿತ್ರ ಬಿಡುಗಡೆ ಪೂರ್ವದಲ್ಲಿ ಈ ಥರದ ಟಾಕ್ ಕ್ರಿಯೇಟ್ ಮಾಡಿದರೆ ಗೆಲುವು ಗ್ಯಾರಂಟಿ. ಅಂಥಾದ್ದೊಂದು ಸಕಾರಾತ್ಮಕ ವಾತಾವರಣದೊಂದಿಗೆ ಥೇಟರಿನ ಹಾದಿಯಲ್ಲಿರೋ ಸಿಂಗನನ್ನು ಉದಯ್ ಮೆಹ್ತಾ ಅವರು ನಿರ್ಮಾಣ ಮಾಡಲು ಒಪ್ಪಿಕೊಂಡಿರೋದೇ ಕಥೆಯ ಕಾರಣದಿಂದ.

    ಅಷ್ಟಕ್ಕೂ ಎಲ್ಲ ದಿಕ್ಕಿನಿಂದಲೂ ಕಥೆ ಒಪ್ಪಿಗೆಯಾಗದೇ ಇದ್ದರೆ ಉದಯ್ ಮೆಹ್ತಾ ನಿರ್ಮಾಣಕ್ಕಿಳಿಯುವವರೇ ಅಲ್ಲ. ಅವರು ಎಂಥಾ ಟೇಸ್ಟು ಹೊಂದಿದ್ದಾರೆ, ಗುಣಮಟ್ಟವನ್ನು ಹೇಗೆಲ್ಲ ಬಯಸುತ್ತಾರೆಂಬುದಕ್ಕೆ ಅವರೇ ನಿರ್ಮಾಣ ಮಾಡಿರೋ ಆರು ಚಿತ್ರಗಳೇ ಸಾಕ್ಷಿಗಿವೆ. ವಿಜಯ್ ಕಿರಣ್ ಆರಂಭದಲ್ಲಿ ಈ ಕಥೆ ಹೇಳಿದಾಗ ಒಂದೇ ಗುಕ್ಕಿಗದು ಮೆಹ್ತಾರಿಗೆ ಹಿಡಿಸಿತ್ತಂತೆ.

     

    ಪಕ್ಕಾ ಕಮರ್ಶಿಯಲ್ ಶೈಲಿಯ ಈ ಕಥೆ ಎಲ್ಲ ಅಂಶಗಳನ್ನೂ ಒಳಗೊಂಡು, ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತಿರೋದರಿಂದಲೇ ಮೆಹ್ತಾ ನಿರ್ಮಾಣ ಮಾಡಲು ಒಪ್ಪಿಕೊಂಡಿದ್ದರಂತೆ. ಇದೀಗ ಒಟ್ಟಾರೆಯಾಗಿ ಸಿಂಗ ಮೂಡಿ ಬಂದಿರೋ ರೀತಿಯ ಬಗ್ಗೆಯೂ ಅವರಲ್ಲೊಂದು ತೃಪ್ತಿಯಿದೆ.

    ಉದಯ್ ಮೆಹ್ತಾ ಮೂಲತಃ ಬೆಂಗಳೂರಿನವರೇ. ಆರಂಭ ಕಾಲದಿಂದಲೂ ಅವರಿಗೆ ಸಿನಿಮಾಗಳ ಮೇಲೆ ವಿಪರೀತ ಸೆಳೆತ. ಇಂಥಾ ಸಿನಿಮಾ ಒಲವನ್ನು ಕಾಪಾಡಿಕೊಂಡೇ ಮುಂದುವರೆದರೂ ಬದುಕಿನ ಅನಿವಾರ್ಯತೆ ಅವರನ್ನು ಡೈಮಂಡ್ ಮರ್ಚೆಂಟ್ ಆಗಿ ರೂಪಿಸಿತ್ತು. ಈ ಉದ್ಯಮದಲ್ಲಿ ಬಲು ಆಸ್ಥೆಯಿಂದ ತೊಡಗಿಸಿಕೊಂಡು ಯಶಸ್ವಿಯಾದ ಮೆಹ್ತಾ ಈಗ್ಗೆ ದಶಕಗಳ ಹಿಂದೆಯೇ ನಿರ್ಮಾಪಕರಾಗುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದರು. ಹೀಗೆ ಒಂದೊಳ್ಳೆ ಪ್ರಾಜೆಕ್ಟಿಗೆ ಹುಡುಕುತ್ತಿದ್ದಾಗ 2009ರಲ್ಲಿ ಲೂಸ್ ಮಾದ ಯೋಗಿ ಅಭಿನಯದ ರಾವಣ ಎಂಬ ಚಿತ್ರದ ಮೂಲಕ ಅದಕ್ಕೆ ಅವಕಾಶ ಒದಗಿ ಬಂದಿತ್ತು.

    ಆ ಚಿತ್ರ ಯಶ ಕಾಣುತ್ತಲೇ ನಿರ್ಮಾಪಕರಾಗಿ ಕಾಲೂರಿ ನಿಂತ ಉದಯ್ ಮೆಹ್ತಾ, ಕೃಷ್ಣನ್ ಲವ್ ಸ್ಟೋರಿ, ಕಿಚ್ಚ ಸುದೀಪ್ ಅಭಿನಯದ ಬಚ್ಚನ್, ನೀನಾಸಂ ಸತೀಶ್ ಅಭಿನಯದ ಲವ್ ಇನ್ ಮಂಡ್ಯ, ಶರಣ್ ಅಭಿನಯದ ರಾಜ ರಾಜೇಂದ್ರ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಸಿಂಗ ಅವರ ಏಳನೇ ಚಿತ್ರ. ಈ ಚಿತ್ರ ಬಿಡುಗಡೆಯ ಹಾದಿಯಲ್ಲಿರುವಾಗಲೇ ನೀನಾಸಂ ಸತೀಶ್ ಅಭಿನಯದ ಬ್ರಹ್ಮಚಾರಿ ಚಿತ್ರವನ್ನೂ ಮೆಹ್ತಾ ಆರಂಭಿಸಿದ್ದಾರೆ. ಅದಾಗಲೇ ಧೃವ ಸರ್ಜಾರ ಚಿತ್ರವೊಂದನ್ನು ನಿರ್ಮಾಣ ಮಾಡಲು ತಯಾರಿಯನ್ನೂ ಆರಂಭಿಸಿದ್ದಾರೆ.

    ಹೀಗೆ ಸಾಗಿ ಬಂದಿರುವ ಉದಯ್ ಮೆಹ್ತಾ ಈಗ ಕನ್ನಡದ ಸ್ಟಾರ್ ನಿರ್ಮಾಪಕರಾಗಿ ಹೊರ ಹೊಮ್ಮಿದ್ದಾರೆ. ಅವರೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆಂದರೆ ಗಾಂಧಿನಗರ ಅದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಅದಕ್ಕೆ ಕಾರಣ ಕಥೆಯನ್ನು ಆರಿಸಿಕೊಳ್ಳೋದರಲ್ಲಿ ಅವರಿಗಿರುವ ಜಾಣ್ಮೆ. ಸಿಂಗ ಕಥೆಯನ್ನೂ ಕೂಡಾ ಅವರು ಅದೇ ಮಾನದಂಡಗಳನ್ನು ಪ್ರಯೋಗಿಸಿ ಆರಿಸಿಕೊಂಡಿದ್ದಾರೆ. ಈ ಸಿನಿಮಾ ದೊಡ್ಡ ಗೆಲುವು ಕಾಣೋದರೊಂದಿಗೆ ತಮ್ಮ ಸಿನಿಮಾ ಬದುಕಿನ ಮಹತ್ವದ ಚಿತ್ರವಾಗಿ ದಾಖಲಾಗುತ್ತದೆ ಎಂಬ ಭರವಸೆ ಉದಯ್ ಮೆಹ್ತಾ ಅವರಲ್ಲಿದೆ. ಈಗ ಪ್ರೇಕ್ಷಕರ ವಲಯದಲ್ಲಿ ಸಿಂಗ ಪಸರಿಸಿರೋ ಕ್ರೇಜ್ ಮೆಹ್ತಾರ ನಂಬಿಕೆಗೆ ಮತ್ತಷ್ಟು ಇಂಬು ಕೊಡುವಂತಿದೆ.

  • ನಟಭಯಂಕರ ಸೆಟ್‍ಗೆ ಸರ್‌ಪ್ರೈಸ್‌ ವಿಸಿಟ್ ಕೊಟ್ಟ ಯಂಗ್ ರೆಬೆಲ್ ಸ್ಟಾರ್!

    ನಟಭಯಂಕರ ಸೆಟ್‍ಗೆ ಸರ್‌ಪ್ರೈಸ್‌ ವಿಸಿಟ್ ಕೊಟ್ಟ ಯಂಗ್ ರೆಬೆಲ್ ಸ್ಟಾರ್!

    ಬೆಂಗಳೂರು: ಸದಾ ಚಿತ್ರರಂಗದ ಇತರರ ಕೆಲಸ ಕಾರ್ಯಗಳತ್ತಲೂ ಒಂದು ಕಣ್ಣಿಟ್ಟು ಬೆನ್ತಟ್ಟಿ ಪ್ರೋತ್ಸಾಹಿಸುತ್ತಿದ್ದ ಸ್ನೇಹಶೀಲ ವ್ಯಕ್ತಿತ್ವ ರೆಬೆಲ್ ಸ್ಟಾರ್ ಅಂಬರೀಶ್ ಅವರದ್ದು. ಅವರ ಪುತ್ರ ಅಭಿಷೇಕ್ ಕೂಡಾ ಅಂಥಾದ್ದೇ ಗುಣಗಳಿಂದಲೇ ಎಲ್ಲರ ಪ್ರೀತಿ ಪಾತ್ರರಾಗಿದ್ದಾರೆ. ಸ್ನೇಹಕ್ಕೆ ಸೋಲುವ ಸ್ವಭಾವದ ಅಭಿಷೇಕ್ ಇದ್ದಕ್ಕಿದ್ದಂತೆ ನಟಭಯಂಕರ ಶೂಟಿಂಗ್ ಸ್ಪಾಟಿಗೆ ಭೇಟಿ ನೀಡಿ ನಿರ್ದೇಶಕ ಕಂ ನಾಯಕ ಪ್ರಥಮ್‍ಗೆ ಸರ್‌ಪ್ರೈಸ್‌ ಕೊಟ್ಟಿದ್ದಾರೆ.

    ಅಭಿಷೇಕ್ ಈಗ ತಮ್ಮ ಬಣ್ಣದ ಬದುಕಿನ ಜೊತೆ ಜೊತೆಗೇ ಸಂಸದೆಯಾಗಿರೋ ಅಮ್ಮ ಸುಮಲತಾರ ಒಂದಷ್ಟು ಜವಾಬ್ದಾರಿಗಳನ್ನೂ ವಹಿಸಿಕೊಂಡಿದ್ದಾರೆ. ಅಮ್ಮನನ್ನು ಗೆಲ್ಲಿಸಿದ ಮಂಡ್ಯದ ಜನರಿಗಾಗಿಯೇ ಹೆಚ್ಚಿನ ಸಮಯವನ್ನು ಮೀಸಲಿಟ್ಟಿದ್ದಾರೆ. ಹೀಗೆ ಮಂಡ್ಯದತ್ತ ಹೊರಟಿದ್ದ ಅಭಿಷೇಕ್ ಆ ಅರ್ಜೆಂಟಿನ ನಡುವೆಯೂ ನಟಭಯಂಕರ ಸೆಟ್ಟಿಗೆ ಭೇಟಿ ಕೊಟ್ಟಿದ್ದಾರೆ. ಕೇವಲ ಭೇಟಿ ಕೊಟ್ಟು ಔಪಚಾರಿಕ ಮಾತುಕಥೆ ನಡೆಸಿ ಹೊರಟಿಲ್ಲ. ಬದಲಾಗಿ ಇಡೀ ಚಿತ್ರದ ಆಗು ಹೋಗುಗಳನ್ನು ತಿಳಿದುಕೊಂಡಿದ್ದಾರೆ. 4 ಗಂಟೆಗೂ ಹೆಚ್ಚು ಕಾಲ ಪ್ರಥಮ್ ಅವರ ಜೊತೆಗೇ ಇದ್ದು ಎಲ್ಲವನ್ನೂ ಗಮನಿಸಿದ್ದಾರೆ.

    ಇಷ್ಟು ಕಾಲ ಪ್ರಥಮ್ ಕಾರ್ಯವೈಖರಿಗಳನ್ನು ಗಮನಿಸಿದ ಅಭಿಷೇಕ್ ಪ್ರಥಮ್ ನಿರ್ದೇಶನದ ಶೈಲಿಯನ್ನು ಡೈಲಾಗ್ ಮತ್ತು ಆಕ್ಷನ್ ಗಳನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರಂತೆ. ಇಷ್ಟೇ ಅಲ್ಲದೇ ಒಂದಷ್ಟು ಸೀನ್‍ಗಳನ್ನು ತಾವೇ ಖುದ್ದಾಗಿ ಅಭಿ ನಿರ್ದೇಶನವನ್ನೂ ಮಾಡಿದ್ದಾರಂತೆ. ಇಷ್ಟೆಲ್ಲ ಮಾಡಿ, ಚಿತ್ರತಂಡದೊಂದಿಗೆ ಕಲೆತು ಖುಷಿ ಪಟ್ಟ ಅಭಿ ಆದಷ್ಟು ಬೇಗ ಸಿನಿಮಾ ತಮಗೆ ಸಿನಿಮಾ ತೋರಿಸುವಂತೆಯೂ ಪ್ರಥಮ್ ಅವರಿಗೆ ತಾಕೀತು ಮಾಡಿದ್ದಾರಂತೆ.

    ಹೀಗೆ ಜ್ಯೂನಿಯರ್ ರೆಬೆಲ್ ಸ್ಟಾರ್ ಅನಿರೀಕ್ಷಿತವಾಗಿ ಭೇಟಿ ನೀಡಿ ತುಂಬಾ ಸಮಯ ತಮಗಾಗಿ ಮೀಸಲಿಟ್ಟಿದ್ದರಿಂದ ಪ್ರಥಮ್ ಕೂಡಾ ಥ್ರಿಲ್ ಆಗಿದ್ದಾರೆ. ಅಭಿಷೇಕ್ ಭೇಟಿ ನೀಡಿದ ಸಂದರ್ಭದಲ್ಲಿ ನಟಭಯಂಕರ ಚಿತ್ರದ ನಾಯಕಿ ನಿಹಾರಿಕಾ ಶೆಣೈ, ಓಂಪ್ರಕಾಶ್ ರಾವ್, ಮಜಾ ಟಾಕೀಸ್ ಪವನ್ ಮತ್ತು ಉದಯ್ ಮೆಹ್ತಾ ಮುಂತಾದವರು ಉಪಸ್ಥಿತರಿದ್ದರು.

    ಈ ಹಿಂದೆ ನಟಭಯಂಕರ ಸಿನಿಮಾ ಸೆಟ್‍ಗೆ ಗೋಲ್ಡನ್ ಸ್ಟಾರ್ ಗಣೇಶ್ ಕೂಡಾ ಭೇಟಿ ನೀಡಿದ್ದರು. ಈಗ ಅಭಿಷೇಕ್ ಅಂಬರೀಷ್ ಭೇಟಿ ನೀಡಿದ್ದಾರೆ. ಅಂತೂ ಈ ಚಿತ್ರದ ಮೂಲಕ ಪ್ರಥಮ್ ನಿರ್ದೇಶಕನಾಗಿಯೂ ತಮ್ಮದೇ ಛಾಪು ಮೂಡಿಸುವತ್ತ ನಿರ್ಣಾಯಕ ಹೆಜ್ಜೆಯಿಟ್ಟಿದ್ದಾರೆ. ಇದಕ್ಕಾಗಿ ವಿಶಿಷ್ಟವಾದ ಕಥೆಯನ್ನು ಉದಯ್ ಮೆಹ್ತಾ ರಚಿಸಿದ್ದಾರೆ. ಈ ಚಿತ್ರದ ಚಿತ್ರೀಕರಣವೀಗ ಬಿಡುವಿಲ್ಲದಂತೆ ನಡೆಯುತ್ತಿದೆ.

  • ಬ್ರಹ್ಮಚಾರಿಯ ಬರ್ತ್ ಡೇಗೆ ಫಸ್ಟ್ ನೈಟ್ ಟೀಸರ್ ಗಿಫ್ಟ್!

    ಬ್ರಹ್ಮಚಾರಿಯ ಬರ್ತ್ ಡೇಗೆ ಫಸ್ಟ್ ನೈಟ್ ಟೀಸರ್ ಗಿಫ್ಟ್!

    ದಯ್ ಕೆ ಮೆಹ್ತಾ ನಿರ್ಮಾಣದ ಬ್ರಹ್ಮಚಾರಿ ಚಿತ್ರದ ಟೀಸರ್ ಲಾಂಚ್ ಆಗಿದೆ. ಈ ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ನೀನಾಸಂ ಸತೀಶ್ ಹುಟ್ಟುಹಬ್ಬದ ಕೊಡುಗೆಯಾಗಿ ಈ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಮೂಲಕ ಭರ್ಜರಿ ನಗುವಿಗೆ ಮೋಸವಿಲ್ಲದ, ಮನೋರಂಜನಾತ್ಮಕ ಚಿತ್ರವೊಂದರ ಮೂಲಕ ಸತೀಶ್ ಮತ್ತೆ ಪ್ರೇಕ್ಷಕರನ್ನು ಎದುರುಗೊಳ್ಳೋದು ಪಕ್ಕಾ ಆಗಿದೆ.

    ಈ ಟೀಸರ್ ಬಿಡುಗಡೆಯಾಗಿ ದಿನ ಕಳೆಯೋದರೊಳಗಾಗಿ ಜನಪ್ರಿಯತೆ ಪಡೆದುಕೊಂಡಿರೋ ರೀತಿಯೇ ಇಡೀ ಚಿತ್ರದ ಕಂಟೆಂಟ್ ಸ್ಪೆಷಲ್ ಆಗಿದೆ ಎಂಬುದರ ಸೂಚನೆ. ಯಾವುದೇ ವಲ್ಗಾರಿಟಿ ಇಲ್ಲದಂತೆ ಕಲಾತ್ಮಕವಾಗಿಯೇ ಬ್ರಹ್ಮಚಾರಿಯ ಫಸ್ಟ್ ನೈಟ್ ರಹಸ್ಯದ ಸೂಚನೆಯೊಂದಿಗೆ ಕಚಗುಳಿಯಿಟ್ಟಿರೋ ಈ ಟೀಸರ್ ದಿನದೊಪ್ಪತ್ತಿನಲ್ಲಿಯೇ ಯಶಸ್ವಿಯಾಗಿ ಬಿಟ್ಟಿದೆ. ಈ ಹಿಂದೆ ಚಂಬಲ್ ಮೂಲಕ ಮಾಸ್ ಲುಕ್ಕಿನಲ್ಲಿ ಮಿಂಚಿದ್ದ ಸತೀಶ್ ಈ ಬಾರಿ ಬೇರೊಂದು ಸಾದಾ ಸೀದಾ ಲುಕ್ಕಿನಲ್ಲಿ ಮೋಡಿ ಮಾಡಲು ಮುಂದಾಗಿದ್ದಾರೆ.

    ಈ ಚಿತ್ರವನ್ನು ನಿರ್ದೇಶನ ಮಾಡಿರುವವರು ಚಂದ್ರಮೋಹನ್. ಈ ಹಿಂದೆ ಬಾಂಬೆ ಮಿಠಾಯಿ, ಡಬ್ಬಲ್ ಇಂಜಿನ್‍ನಂಥಾ ಹಾಸ್ಯಪ್ರಧಾನ ಯಶಸ್ವಿ ಚಿತ್ರಗಳನ್ನು ನಿರ್ದೇಶನ ಮಾಡಿರುವ ಚಂದ್ರಮೋಹನ್ ಈ ಬಾರಿ ಅದೇ ಜಾಡಿನಲ್ಲಿ ವಿಶಿಷ್ಟವಾದೊಂದು ಕಥೆಯೊಂದಿಗೆ ಬಂದಿದ್ದಾರೆ. ಬ್ರಹ್ಮಚಾರಿಯನ್ನು ಉದಯ್ ಮೆಹ್ತಾ ಅವರು ಅದ್ಧೂರಿಯಾಗಿಯೇ ನಿರ್ಮಾಣ ಮಾಡಿದ್ದಾರೆ. ಧರ್ಮವಿಶ್ ಸಂಗೀತ ನಿರ್ದೇಶಶನ ಈ ಚಿತ್ರಕ್ಕಿದೆ.

    ಅಯೋಗ್ಯ ಚಿತ್ರದ ಅಗಾಧ ಪ್ರಮಾಣದ ಯಶಸ್ಸಿನಿಂದ ಈಗ ನೀನಾಸಂ ಸತೀಶ್ ಅವರ ವೃತ್ತಿ ಜೀವನಕ್ಕೊಂದು ಹೊಸ ಓಘ ಬಂದಂತಾಗಿದೆ. ಅದು ಚಂಬಲ್ ಮೂಲಕ ಮುಂದುವರೆದು ಇದೀಗ ಬ್ರಹ್ಮಚಾರಿಯ ರೂಪದಲ್ಲಿಯೂ ಮತ್ತಷ್ಟು ಲಕ ಲಕಿಸೋ ಸೂಚನೆಗಳೇ ದಟ್ಟವಾಗಿವೆ. ಈ ಚಿತ್ರದಲ್ಲಿ ಅದಿತಿ ಪ್ರಭುದೇವ ಸತೀಶ್ ಅವರಿಗೆ ಜೋಡಿಯಾಗಿ ನಟಿಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]