Tag: ಉತ್ತರ ಪ್ರದೇಶ

  • ಉತ್ತರಪ್ರದೇಶ, ಉತ್ತರಾಖಂಡ್‍ನಲ್ಲಿ ಮೋದಿ ಸುನಾಮಿ – ಪಂಜಾಬ್‍ನಲ್ಲಿ ಮಾನ ಉಳಿಸಿಕೊಂಡ ಕಾಂಗ್ರೆಸ್

    ಉತ್ತರಪ್ರದೇಶ, ಉತ್ತರಾಖಂಡ್‍ನಲ್ಲಿ ಮೋದಿ ಸುನಾಮಿ – ಪಂಜಾಬ್‍ನಲ್ಲಿ ಮಾನ ಉಳಿಸಿಕೊಂಡ ಕಾಂಗ್ರೆಸ್

    – ಇಂದೇ ಹೋಳಿಯಲ್ಲಿ ಮುಳುಗೆದ್ದ ಕೇಸರಿ ಕಾರ್ಯಕರ್ತರು
    – ಅಮೇಥಿ, ರಾಯಬರೇಲಿಯಲ್ಲಿ ಕಾಂಗ್ರೆಸ್ ಅಲ್ಲೋಲ ಕಲ್ಲೋಲ
    – ಪ್ರಾದೇಶಿಕ ಪಕ್ಷಗಳಿಗೆ ಎದುರಾಯ್ತು ಕಷ್ಟಕಾಲ
    – ಮಣಿಪುರ, ಗೋವಾ ಅಸೆಂಬ್ಲಿ ಅತಂತ್ರ

    ನವದೆಹಲಿ: ದೇಶದ ರಾಜಕೀಯ ದಿಕ್ಸೂಚಿ ಅಂತ ಕುತೂಹಲ ಕೆರಳಿಸಿದ್ದ ಪಂಚರಾಜ್ಯ ಫಲಿತಾಂಶ ಪ್ರಕಟವಾಗಿದೆ. ಉತ್ತರ ಪ್ರದೇಶ, ಉತ್ತರಾಖಂಡ್‍ನಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ. ಉತ್ತರ ಪ್ರದೇಶದಲ್ಲಿ ಮೋದಿ ಸುನಾಮಿಗೆ ಪ್ರತಿಪಕ್ಷಗಳು ತರಗೆಲೆಗಳಂತೆ ತೂರಿ ಹೋಗಿವೆ.

    403 ಕ್ಷೇತ್ರಗಳಲ್ಲಿ 300ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಕಮಲ ಅರಳಿದೆ. ಉತ್ತರ ಪ್ರದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳ ಚುನಾವಣೆಯಲ್ಲಿ ಸಂಪೂರ್ಣ ಕೇಸರೀಮಯವಾಗಿದ್ದು ಒಂದು ರೀತಿ `ಕಮಲೇ ಕಮಲೋತ್ಪತ್ತಿಃ’ ಎನ್ನುವಂತಾಗಿದೆ. ಅಲ್ಲದೆ, ಕಾಂಗ್ರೆಸ್‍ಗೆ ಅಕ್ಷರಶಃ ಭೂಕಂಪನದ ಅನುಭವವಾದ್ರೆ, ಪ್ರಾದೇಶಿಕ ಪಕ್ಷಗಳಾದ ಎಸ್‍ಪಿ, ಬಿಎಸ್‍ಪಿಗಳ ಭವಿಷ್ಯಕ್ಕೆ ಮಂಕುಬಡಿದಂತಾಗಿದೆ.

    ಪಂಜಾಬ್‍ನಲ್ಲಿ ಕಾಂಗ್ರೆಸ್‍ನ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕಮಾಲ್ ಮಾಡಿದ್ದಾರೆ. ಬಾದಲ್ ಕುಟುಂಬ ರಾಜಕಾರಣ ಹೀನಾಯ ಸೋಲು ಕಂಡಿದೆ. ಇದ್ರಿಂದ ಮೈತ್ರಿ ಬೆಳೆಸಿಕೊಂಡಿದ್ದ ಬಿಜೆಪಿಗೂ ಮುಖಭಂಗವಾಗಿದೆ. ಇದರ ಮಧ್ಯೆ, ಮಣಿಪುರ ಹಾಗೂ ಗೋವಾದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೆಕ್ ಟು ನೆಕ್ ಫೈಟ್ ನಡೀತು.

    ಪಕ್ಷದ ವಿಜಯಯಾತ್ರೆ ಬಿಜೆಪಿ ನಾಯಕರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡ್ರೆ, ಕಾರ್ಯಕರ್ತರು ನಾಳಿನ ಹೋಳಿಯನ್ನ ಇಂದೇ ಆಚರಿಸುವ ಮೂಲಕ ಸಂಭ್ರಮವನ್ನ ಇಮ್ಮಡಿಗೊಳಿಸಿಕೊಂಡ್ರು. ಈ ಮಧ್ಯೆ, ಜನಾದೇಶವನ್ನ ಎಸ್‍ಪಿ, ಕಾಂಗ್ರೆಸ್, ಆಪ್ ಸ್ವಾಗತಿಸಿದ್ರೆ ಬಿಎಸ್‍ಪಿ ಮಾತ್ರ ಮತಯಂತ್ರದಲ್ಲಿ ಏನೋ ಮಸಲತ್ತು ನಡೆದಿದೆ ಗುಮಾನಿ ವ್ಯಕ್ತಪಡಿಸಿದೆ. ಆದ್ರೆ, ಆರೋಪದಲ್ಲಿ ಹುರುಳಿಲ್ಲ ಅಂತ ಚುನಾವಣಾ ಆಯೋಗ ಹೇಳಿದೆ.

    ಚುನಾವಣೆಯಲ್ಲಿದ್ದ ಪ್ರಮುಖ ನಾಯಕರ ಭವಿಷ್ಯ ಏನಾಯ್ತು..?

    1. ಪಂಕಜ್ ಸಿಂಗ್ – ಬಿಜೆಪಿ – ನೋಯ್ಡಾ – ಗೆಲುವು
    2. ರೀಟಾ ಬಹುಗುಣ ಜೋಶಿ – ಬಿಜೆಪಿ – ಲಖನೌ ಕಂಟೋನ್ಮೆಂಟ್ – ಗೆಲುವು
    3. ಗರೀಮಾ ಸಿಂಗ್ – ಬಿಜೆಪಿ – ಅಮೇಥಿ – ಗೆಲುವು
    4. ಸಿದ್ಧಾರ್ಥ್ ನಾಥ್ ಸಿಂಗ್ – ಬಿಜೆಪಿ – ಅಲಹಾಬಾದ್ ಪಶ್ಚಿಮ – ಗೆಲುವು (ಲಾಲ್‍ಬಹದ್ದೂರ್‍ಶಾಸ್ತ್ರಿ ಮೊಮ್ಮಗ )
    5. ಅಪರ್ಣಾ ಯಾದವ್ – ಎಸ್‍ಪಿ – ಲಖನೌ ಕಂಟೋನ್ಮೆಂಟ್ – ಸೋಲು
    6. ಶಿವಪಾಲ್ ಸಿಂಗ್ – ಎಸ್‍ಪಿ – ಜಸ್ವಂತ್‍ನಗರ್ – ಗೆಲುವು
    7. ಅಜಂ ಖಾನ್ – ಎಸ್‍ಪಿ – ರಾಮ್‍ಪುರ್ – ಗೆಲುವು
    8. ಅಂಬಿಕಾ ಚೌಧರಿ – ಬಿಎಸ್‍ಪಿ – ಫೆಫಾನ – ಸೋಲು
    9. ಜಿತಿನ್ ಪ್ರಸಾದ್ – ಕಾಂಗ್ರೆಸ್- ತಿಹಾರ್ – ಸೋಲು

    ಮುಖ್ಯಮಂತ್ರಿ ಯಾರು ಅನ್ನೋದನ್ನು ಘೊಷಿಸದೇ ಕಣಕ್ಕಿಳಿಯೋದು ಬಿಜೆಪಿ ಜಾಯಮಾನ.. ಅದೇ ರೀತಿ ಉತ್ತರ ಪ್ರದೇಶದಲ್ಲಿ ಕಣಕ್ಕಿಳಿದ ಬಿಜೆಪಿ, ಮೋದಿ ಅಲೆಯಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಇದೀಗ ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋದು ಪ್ರಶ್ನೆ. ರೇಸ್‍ನಲ್ಲಿ ಯಾರ್ಯಾರಿದ್ದಾರೆ..? ಅವರ ಹಿನ್ನೆಲೆ ಏನು ಅನ್ನೋದನ್ನ ನೋಡೋದಾದ್ರೆ..

    ಯಾರಾಗ್ತಾರೆ ಮುಖ್ಯಮಂತ್ರಿ..?
    1. ರಾಜನಾಥ್ ಸಿಂಗ್
    * ಸಿಎಂ ರೇಸ್‍ನಲ್ಲಿ ಕೇಳಿಬರುವ ಮೊದಲ ಹೆಸರು
    * ಕೇಂದ್ರ ಗೃಹ ಸಚಿವ. ಆದ್ರೆ, ಮೋದಿ ತಮ್ಮ ಕ್ಯಾಬಿನೆಟ್‍ನಿಂದ ಬಿಡುವ ಬಗ್ಗೆ ಸ್ಪಷ್ಟತೆ ಇಲ್ಲ

    2. ಕೇಶವ್ ಪ್ರಸಾದ್ ಮೌರ್ಯ
    * ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ
    * ಓಬಿಸಿಯ ಎಂಬಿಸಿ ಮುಖಂಡ, ವಿಹೆಚ್‍ಪಿ, ಆರ್‍ಎಸ್‍ಎಸ್ ನಾಯಕ
    * ಪೂರ್ವಾಂಚಲದಿಂದ ಸಿಎಂ ಆದ ಮೊದಲಿಗರು ಎಂಬ ಹೆಗ್ಗಳಿಕೆ

    3. ಸಂತೋಷ್ ಗಂಗ್ವಾರ್
    * ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ
    * 1989ರಿಂದಲೂ ಕಮಲದ ಕಟ್ಟಾಳು
    * ಕುರ್ಮಿ ಸಮುದಾಯದ ಪ್ರಭಾವಿ, ಮೃದು ಸ್ವಭಾವ
    * ರೋಹಿಲ್‍ಖಂಡ್ ಪ್ರಾಂತ್ಯದಲ್ಲಿ ಬಿಜೆಪಿ ಗೆಲುವಿಗೆ ಪ್ರಮುಖ ಕಾರಣ

    4. ಮಹೇಶ್ ಶರ್ಮಾ
    * ಕೇಂದ್ರ ಸಾಂಸ್ಕೃತಿಕ ಖಾತೆ ಸಚಿವ
    * ಸಂಘ ಪರಿವಾರದ ಜೊತೆ ಉತ್ತಮ ಸಂಬಂಧ
    * ಆದರೆ, ಹಲವು ಆರೋಪಗಳಿವೆ

    5. ಮನೋಜ್ ಸಿನ್ಹಾ
    * ಕೇಂದ್ರ ಟೆಲಿಕಾಂ ಸಚಿವ
    * ಭೂಮಿಹಾರ್ ಸಮುದಾಯದ ನಾಯಕ
    * ಬನಾರಸ್ ಹಿಂದೂ ವಿವಿಯ ಪದವೀಧರ
    ಇವರ ಜೊತೆ ಯೋಗಿ ಆದಿತ್ಯನಾಥ್, ಉಮಾಭಾರತಿ, ಕಲ್‍ರಾಜ್ ಮಿಶ್ರಾ ಹೆಸರು ಕೂಡ ಕೇಳಿಬರುತ್ತಿದೆ.
    ============
    ಉತ್ತರ ಪ್ರದೇಶದಲ್ಲಿ ಬಿಜೆಪಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಗೆಲ್ಲೋದಿಕ್ಕೆ ಕಾರಣಗಳೇನು..?
    * ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅಲೆ
    * ನೋಟ್ ಬ್ಯಾನ್ ಮೂಲಕ ತಾವು ಬಡವರ ಪರ ಎಂದು ನಿರೂಪಿಸಿಕೊಂಡಿದ್ದು
    * ಬಿಜೆಪಿಗೆ ವರವಾದ ಎಸ್‍ಪಿ, ಬಿಎಸ್‍ಪಿಯ ತಪ್ಪು ಲೆಕ್ಕಾಚಾರಗಳು
    * ಮುಸ್ಲಿಂ, ದಲಿತ, ಜಾಟ್ ಮತಗಳ ಮತಗಳ ವಿಭಜನೆ
    (ಎಂಐಎಂ ಸ್ಪರ್ಧೆ, ವರ್ಕ್ ಆಗದ ಮಾಯಾವತಿ ದಲಿತ್ ಕಾರ್ಡ್, ಫಲಿಸದ ಎನ್‍ಆರ್‍ಎಲ್‍ಡಿಯ ಅಜಿತ್ ಸಿಂಗ್ ಲೆಕ್ಕ)
    * ಯಾದವೇತರ ಓಬಿಸಿ, ಜಾಟ್‍ವೇತರ ದಲಿತ ವರ್ಗ, ಮೇಲ್ವರ್ಗದ ಸಮುದಾಯಗಳ ಮೇಲೆ ಕಣ್ಣು
    (ಈ ಸಮುದಾಯಗಳ ಒಟ್ಟು ಮತ ಪ್ರಮಾಣ ಶೇ. 55-60)
    * ಒಬ್ಬ ಮುಸ್ಲಿಂರಿಗೂ ಟಿಕೆಟ್ ಕೊಡದೇ ಬಿಜೆಪಿ `ಧರ್ಮ ರಾಜಕೀಯ’
    (ಮುಸ್ಲಿಂ ಪ್ರಾಬಲ್ಯದ ಪ್ರದೇಶದಲ್ಲಿ ದುರ್ಬಲ ಅಭ್ಯರ್ಥಿ ಹಾಕಿ ಬಿಎಸ್‍ಪಿ ಗೆಲ್ಲುವಂತೆ ಮಾಡಿದ್ದು)
    * ತಲಾಕ್ ವಿಚಾರದಲ್ಲಿ ಮುಸ್ಲಿಮ್ ಮಹಿಳೆಯರಿಂದ ಬಿಜೆಪಿಗೆ ಮತ
    * ಬೂತ್ ಮಟ್ಟದಲ್ಲಿ ಬಿಜೆಪಿ ಪಕ್ಷ ಸಂಘಟನೆ
    * ಗೆಲ್ಲುವ ಕುದುರೆಗಳಿಗೆ ಮಾತ್ರ ಟಿಕೆಟ್
    * ಬಿಜೆಪಿ ಅಧ್ಯಕ್ಷ ಅಮಿತ್ ಷಾ, ಚುನಾವಣಾ ಚಾಣಾಕ್ಯ ಸುನಿಲ್ ಬನ್ಸಾಲ್ ತಂತ್ರ ವರ್ಕೌಟ್
    * ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ
    ============

    ಯಾವ ರಾಜ್ಯದಲ್ಲಿ ಈಗ ಯಾರ ಆಳ್ವಿಕೆ?

    ಬಿಜೆಪಿ: ಉತ್ತರ ಪ್ರದೇಶ, ಮಧ್ಯ ಪ್ರದೇಶ, ಅರುಣಾಚಲ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ, ಅಸ್ಸಾಂ, ಛತ್ತೀಸ್‍ಘಡ, ಹರಿಯಾಣ, ಜಾರ್ಖಂಡ್, ಉತ್ತರಾಖಂಡ್

    ಬಿಜೆಪಿ ಮೈತ್ರಿ : ಜಮ್ಮು ಕಾಶ್ಮೀರ, ಆಂಧ್ರಪ್ರದೇಶ

    ಕಾಂಗ್ರೆಸ್: ಪಂಜಾಬ್, ಕರ್ನಾಟಕ, ಹಿಮಾಚಲ ಪ್ರದೇಶ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಾಂಡಿಚೆರಿ,

    ಇತರೆ: ದೆಹಲಿ, ಬಿಹಾರ್, ಒಡಿಶಾ, ಸಿಕ್ಕಿಂ, ತ್ರಿಪುರಾ, ಪಶ್ಚಿಮ ಬಂಗಾಳ, ತಮಿಳುನಾಡು, ತೆಲಂಗಾಣ, ಕೇರಳ, ತೆಲಂಗಾಣ.

    ಅತಂತ್ರ – ಮಣಿಪುರ, ಗೋವಾ
    ============

    ಕರ್ನಾಟಕದ ಮೇಲೆ ಏನ್ ಪರಿಣಾಮ ಬೀರುತ್ತೆ?
    * ರಾಜ್ಯ ಬಿಜೆಪಿಗೆ ಚೈತನ್ಯ ತಂದಿರುವ ಗೆಲುವು
    * ಮೋದಿ, ಅಮಿತ್ ಶಾ ನೆಕ್ಸ್ಟ್ ಟಾರ್ಗೆಟ್ ಕರ್ನಾಟಕ
    * ರಾಜ್ಯದಲ್ಲೂ ಚಾಣಕ್ಯರ ತಂತ್ರಗಳ ಶುರುವಾಗಲಿದೆ
    * ಮೇನಿಂದ ರಾಜ್ಯದಲ್ಲಿ ಶಾ ಮಾಸ್ಟರ್ ಪ್ಲಾನ್
    * ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಯ ಮೇಲೂ ಪರಿಣಾಮ
    * ಆಡಳಿತರೂಢ ಕಾಂಗ್ರೆಸ್‍ನ ಉತ್ಸಾಹಕ್ಕೆ ಬ್ರೇಕ್
    * ರಾಜ್ಯದಲ್ಲಿ ರಾಹುಲ್‍ಗಾಂಧಿ ಸಾಹಸಕ್ಕೆ ಹಿನ್ನಡೆ
    * ಚುನಾವಣಾ ಪೂರ್ವದಲ್ಲೇ ಜೆಡಿಎಸ್ ಜತೆ ಮೈತ್ರಿ ಜಪ ಮಾಡಬಹುದು
    * ನೋಟ್‍ಬ್ಯಾನ್ ವಿಚಾರವನ್ನೇ ಬಿಜೆಪಿ ಅಸ್ತ್ರವನ್ನಾಗಿ ಬಳಸಬಹುದು
    * ಐಟಿದಾಳಿ, ಡೈರಿ ವಿಚಾರಗಳನ್ನೇ ಅಸ್ತ್ರವನ್ನಾಗಿ ಬಳಸುವ ಸಾಧ್ಯತೆ
    * ಮಹಾದಾಯಿ ವಿವಾದಕ್ಕೆ ಮುಲಾಮು ಹಚ್ಚುವ ಸಾಧ್ಯತೆ
    ============

    ಶಿರೋಮಣಿ ಅಖಾಲಿದಳ, ಬಿಜೆಪಿ ಮೈತ್ರಿಗೆ ಮುಖಭಂಗ:
    ಆಡಳಿತರೂಢ ಶಿರೋಮಣಿ ಅಖಾಲಿದಳ ಮತ್ತು ಬಿಜೆಪಿ ಮೈತ್ರಿಗೆ ಭಾರೀ ಮುಖಭಂಗವಾಗಿದೆ. ಬಾದಲ್ ಕುಟುಂಬ ರಾಜಕಾರಣಕ್ಕೆ ರೋಸಿಹೋದ ಜನ ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್ ನಾಯಕತ್ವಕ್ಕೆ ಮಣೆ ಹಾಕಿದೆ. ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್-ಆಪ್ ಮಧ್ಯೆ ನೆಕ್ ಟು ನೆಕ್ ಫೈಟ್ ಇರುತ್ತೆ ಅಂತ ಹೇಳಿದ್ವು. ಆದ್ರೆ, ಈಗ ಅದು ಬುಡಮೇಲಾಗಿದೆ. 117 ಕ್ಷೇತ್ರಗಳ ವಿಧಾನಸಭೆಯಲ್ಲಿ ಸರಳ ಬಹುಮತ 59 ಸ್ಥಾನಗಳು ಬೇಕಿದ್ದು ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ.

    ============

    ಪಂಜಾಬ್ ಸಿಎಂ: ಪಂಜಾಬ್‍ನಲ್ಲಿ ಕಾಂಗ್ರೆಸ್ ಗೆದ್ದಿರೋ ಕಾರಣ ಮಾಜಿ ಸಿಎಂ, ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರೇ ಮುಂದಿನ ಸಿಎಂ ಆಗಲಿದ್ದಾರೆ.

    1. ಅಮರಿಂದರ್ ಸಿಂಗ್ – ಕಾಂಗ್ರೆಸ್ – ಪಟಿಯಾಲ – ಗೆಲುವು (ಲಂಬಿ -ಸೋಲು)
    2. ನವಜೋತ್ ಸಿಂಗ್ ಸಿದು – ಕಾಂಗ್ರೆಸ್ – ಪೂರ್ವ ಅಮೃತಸರ – ಗೆಲುವು
    3. ಪ್ರಕಾಶ್ ಸಿಂಗ್ ಬಾದಲ್ – ಎಸ್‍ಎಡಿ – ಲಂಬಿ – ಗೆಲುವು
    4. ಸುಖ್‍ಬೀರ್ ಸಿಂಗ್ ಬಾದಲ್ – ಎಸ್‍ಡಿಎ – ಜಲಲಾಬಾದ್ – ಗೆಲುವು
    5. ಪರಗತ್ ಸಿಂಗ್ – ಕಾಂಗ್ರೆಸ್ – ಜಲಂಧರ್ – ಗೆಲುವು (ಹಾಕಿ ತಂಡದ ಮಾಜಿ ನಾಯಕ)
    6. ಭಗವಂತ್ ಮನ್ – ಎಎಪಿ – ಜಲಲಾಬಾದ್ – ಸೋಲು
    ============
    ಅಮರೀಂದರ್ ಸಿಂಗ್ ಗೆಲುವಿಗೆ ಕಾರಣಗಳು ಏನು?
    * ಬಾದಲ್ ಕುಟುಂಬ, ಸ್ವಜನಪಕ್ಷಪಾತ ವಿರೋಧಿ ಅಲೆ
    * ಕೃಷಿ ಆಧರಿತ ರೈತರಿಗೆ ನೋಟ್‍ಬ್ಯಾನ್ ನೋವು
    * ಕ್ಯಾ.ಅಮರೀಂದರ್ ಸಿಂಗ್ ಸಿಎಂ ಅಭ್ಯರ್ಥಿ ಅಂತ ಘೋಷಣೆ
    * ಡ್ರಗ್ಸ್ ಮಾಫಿಯಾ ವಿರೋಧಿ, ರೈತರ ಪರ ಪ್ರಣಾಳಿಕೆ ಹೊರಡಿಸಿದ್ದ ಅಮರೀಂದರ್
    * ಬಿಜೆಪಿಯಿಂದ ಕಾಂಗ್ರೆಸ್‍ಗೆ ಜಂಪ್ ಆದ ನವಜೋತ್ ಸಿಂಗ್ ಸಿದು
    * ಆಪ್ ಎಂಟ್ರಿಯಿಂದ ಮತಗಳ ವಿಭಜನೆ
    ============

    ಉತ್ತರಾಖಂಡ್‍ನಲ್ಲಿ ಅರಳಿದ ಕಮಲ:
    ಉತ್ತರ ಪ್ರದೇಶ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಉತ್ತರಾಖಂಡ್‍ನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್‍ನ ಹರೀಶ್ ರಾವತ್  ಸರ್ಕಾರ ಬಿದ್ದಿದೆ.

    ಉತ್ತರಾಖಂಡ್‍ನಲ್ಲಿ ಮುಂದಿನ ಸಿಎಂ ಯಾರಾಗಬಹುದು?
    1. ರಮೇಶ್ ಪೊಖ್ರಿಯಾಲ್, ಮಾಜಿ ಸಿಎಂ
    2. ಬಿ.ಸಿ. ಖಂಡೂರಿ, ಮಾಜಿ ಸಿಎಂ
    3. ಅಜಯ್ ಭಟ್, ಬಿಜೆಪಿ ರಾಜ್ಯಾಧ್ಯಕ್ಷ
    4. ಭಗತ್ ಸಿಂಗ್ ಕೊಸ್ಯಾರಿ, ಪ್ರಮುಖ ನಾಯಕ
    5. ವಿಜಯ್ ಬಹುಗುಣ, ಮಾಜಿ ಸಿಎಂ (ಕಾಂಗ್ರೆಸ್‍ನಲ್ಲಿದ್ದಾಗ ಸಿಎಂ ಆಗಿದ್ದರು)
    ============

    ಗೆದ್ದ ಸೋತ ಪ್ರಮುಖ ಅಭ್ಯರ್ಥಿಗಳು
    ಹರೀಶ್ ರಾವತ್ – ಕಾಂಗ್ರೆಸ್ – ಹರಿದ್ವಾರ ಗ್ರಾಮೀಣ, ಕಿಚ್ಛ – ಸೋಲು
    ಅಜಯ್ ಭಟ್ – ಬಿಜೆಪಿ – ರಾಣಿಕೇಟ್ – ಸೋಲು
    ರೀತು ಖಂಡೂರಿ ಭೂಷಣ್ – ಬಿಜೆಪಿ – ಯಮಕೇಶ್ವರ – ಗೆಲುವು
    ಸತ್ಪಾಲ್ ಮಹಾರಾಜ್ – ಬಿಜೆಪಿ – ಚೌಬಟ್ಟಖಾಲ್ – ಗೆಲುವು
    ಕಿಶೋರ್ ಉಪಾಧ್ಯಾಯ – ಕಾಂಗ್ರೆಸ್ – ಶಹಾಪುರ – ಸೋಲು
    ============

    ಮಣಿಪುರದಲ್ಲಿ ಅತಂತ್ರ ವಿಧಾನಸಭೆ:
    ಮಣಿಪುರದಲ್ಲಿ ನೆಕ್ ಟು ನೆಕ್ ಫೈಟ್ ನಡೆದಿದ್ದು, ಕಾಂಗ್ರೆಸ್ ದೊಡ್ಡ ಪಕ್ಷವಾದರೂ ಅತಂತ್ರ ಅಸೆಂಬ್ಲಿ ನಿರ್ಮಾಣವಾಗಿದೆ. ಪಕ್ಷೇತರರು ನಿರ್ಣಾಯಕವಾಗಿದೆ

    ಪ್ರಮುಖ ಅಭ್ಯರ್ಥಿಗಳು:
    1. ಓಕ್ರಮ್ ಇಬೋಬಿ ಸಿಂಗ್ – ಕಾಂಗ್ರೆಸ್ – ಥೌಬಾಲ್ – ಗೆಲುವು
    2. ಇರೋಮ್ ಶರ್ಮಿಳಾ – ಪಿಆರ್‍ಜೆಎ – ಥೌಬಾಲ್ – ಸೋಲು (90 ಮತ ಅಷ್ಟೇ)
    3. ಎನ್. ಬಿರೇನ್ – ಬಿಜೆಪಿ – ಹೇನ್‍ಗಂಗ್ – ಗೆಲುವು

    ಗೋವಾದಲ್ಲಿ ಅತಂತ್ರ:
    ಗೋವಾದಲ್ಲಿ ಜನರು ಯಾರಿಗೂ ಸ್ಪಷ್ಟ ಬಹುಮತ ನೀಡದ ಕಾರಣ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

    ಪ್ರಮುಖ ನಾಯಕರ ಭವಿಷ್ಯ ಏನಾಯ್ತು ?

    1. ಲಕ್ಷ್ಮಿಕಾಂತ್ ಪರ್ಸೇಕರ್ – ಬಿಜೆಪಿ – ಮಂಡ್ರೇಮ್ – ಸೋಲು
    2. ದಿಗಂಬರ್ ಕಾಮತ್ – ಕಾಂಗ್ರೆಸ್ – ಮರ್ಗೋವಾ – ಗೆಲುವು
    3. ಎಲ್ವಿಸ್ ಗೋಮ್ಸ್ – ಎಎಪಿ – ಕನ್ಸೊಲಿಮ್ – ಸೋಲು

  • ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ: ಅಮಿತ್ ಶಾ

    ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ: ಅಮಿತ್ ಶಾ

    ನವದೆಹಲಿ: ಪಂಚರಾಜ್ಯಗಳ ಚುನಾವಣಾ ಫಲಿತಾಂಶ ನಮಗೆ ತೃಪ್ತಿ ತಂದಿದ್ದು, ನಾಲ್ಕು ರಾಜ್ಯಗಳಲ್ಲಿ ನಾವು ಸರ್ಕಾರ ನಡೆಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ, ಗೋವಾದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಪಂಜಾಬ್‍ನಲ್ಲಿ ಬಿಜೆಪಿ ಶೇಖಡಾವಾರು ಹೆಚ್ಚು ಮತಗಳನ್ನು ಗಳಿಸಿದೆ ಎಂದು ತಿಳಿಸಿದರು.

    ಉತ್ತರ ಪ್ರದೇಶ ಜನತೆ ನೀಡಿದ ಭರವಸೆಯನ್ನು ನಾವು ಈಡೇರಿಸುತ್ತೇವೆ.ಪಂಜಾಬ್‍ನಲ್ಲಿ ನಾವು ಸೋಲನ್ನು ಸ್ವೀಕರಿಸಿದ್ದೇವೆ. ಸೋತಿದ್ದು ಯಾಕೆ ಎನ್ನುವುದನ್ನು ಅಧ್ಯಯನ ನಡೆಸುತ್ತೇವೆ ಎಂದು ಹೇಳಿದರು.

    ಬಡವನಿಂದ ಹಿಡಿದು ಇಡೀ ದೇಶದ ಜನತೆ ಬಿಜೆಪಿಯ ಜೊತೆಗಿದ್ದಾರೆ. ನರೇಂದ್ರ ಮೋದಿ ವಿರುದ್ಧ ಪ್ರಚಾರ ನಡೆಸುತ್ತಿರುವ ವಿರೋಧ ಪಕ್ಷಗಳಿಗೆ ಜನರು ತಕ್ಕ ಪಾಠವನ್ನು ಕಲಿಸಿದ್ದಾರೆ ಎಂದು ತಿಳಿಸಿದರು.

    ಈ ಜಯಕ್ಕೆ ಕಾರಣರಾದ ದೇಶದ ಎಲ್ಲ ಕಾರ್ಯಕರ್ತರಿಗೆ ಧನ್ಯವಾದಗಳು. ಬಿಜೆಪಿಯ ಈ ಜಯ ಜನರ ಜಯ ಮತ್ತು ಮೋದಿಯವರ ಆಡಳಿತಕ್ಕೆ ಸಿಕ್ಕಿದ ಜಯ ಎಂದು ಅಮಿತ್ ಶಾ ಬಣ್ಣಿಸಿದರು.

  • ಉತ್ತರ ಪ್ರದೇಶದಲ್ಲಿ ಲೋಕಸಭಾ ಎಲೆಕ್ಷನ್ ಫಲಿತಾಂಶ ಮತ್ತೊಮ್ಮೆ ಪ್ರಕಟವಾಯ್ತು!

    ಉತ್ತರ ಪ್ರದೇಶದಲ್ಲಿ ಲೋಕಸಭಾ ಎಲೆಕ್ಷನ್ ಫಲಿತಾಂಶ ಮತ್ತೊಮ್ಮೆ ಪ್ರಕಟವಾಯ್ತು!

    ನವದೆಹಲಿ: ಉತ್ತರ ಪ್ರದೇಶದಲ್ಲಿ 2014ರ ಲೋಕಸಭಾ ಚುನಾವಣೆಯ ಫಲಿತಾಂಶ ಮತ್ತೊಮ್ಮೆ ಮರುಕಳಿಸಿದ್ದು ಬಿಜೆಪಿ ಜಯಭೇರಿ ಬಾರಿಸಿದೆ.

    2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ ಜಯಭೇರಿ ಬಾರಿಸಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಮತ್ತು ಎಸ್‍ಪಿ ಮೈತ್ರಿಕೂಟದಿಂದಾಗಿ ಬಿಜೆಪಿಗೆ ಸ್ವಲ್ಪ ಮತ ಹಂಚಿಕೆ ಕಡಿಮೆಯಾಗಬಹುದು. ಆದರೆ ಅಷ್ಟೇ ಪ್ರಮಾಣದ ವೋಟ್ ಬಿಜೆಪಿಗೆ ಬಿದ್ದರೆ 300 ಕ್ಕಿಂತ ಹೆಚ್ಚಿನ ಸೀಟ್ ಬರಬಹುದು ಎನ್ನುವ ವಿಶ್ಲೇಷಣೆಯ ಸುದ್ದಿಯನ್ನು ಪಬ್ಲಿಕ್ ಟಿವಿ ಗುರುವಾರ ಪ್ರಕಟಿಸಿತ್ತು. ಈ ವಿಶ್ಲೇಷಣಾತ್ಮಕ ಸುದ್ದಿ ನಿಜವಾಗುತ್ತಿದ್ದು, 300ಕ್ಕಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ಸಮೀಪ ಬಂದಿದೆ.

    ಎಷ್ಟು ಸ್ಥಾನಗಳಿಸಬೇಕು? 2012ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 47 ಸ್ಥಾನಗಳನ್ನು ಗೆದ್ದಿದ್ದರೆ, 2014 ಲೋಕಸಭಾ ಚುನಾವಣೆಯ 80 ಕ್ಷೇತ್ರಗಳಲ್ಲಿ 71ರಲ್ಲಿ ಜಯವನ್ನು ಸಾಧಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಶೇ.42.6 ಮತಗಳನ್ನು ಬಿಜೆಪಿ ಪಡೆಯುವ ಮೂಲಕ ಮೋದಿ, ಅಮಿತ್ ಶಾ ರಣತಂತ್ರ ಯಶಸ್ವಿಯಾಗಿತ್ತು. ಇಷ್ಟೇ ಶೇಕಡವಾರು ಮತಗಳು ಈ ಚುನಾವಣೆಯಲ್ಲಿ ಬಿದ್ದರೆ ಬಿಜೆಪಿ 318 ಕ್ಷೇತ್ರಗಳನ್ನು ಗಳಿಸಬೇಕು.

    ಉತ್ತರ ಪ್ರದೇಶದಲ್ಲಿ 403 ವಿಧಾನಸಭಾ ಕ್ಷೇತ್ರಗಳಿದ್ದು, ಬಹುಮತಕ್ಕೆ 202 ಸ್ಥಾನಗಳು ಬೇಕು. 2012ರ ಚುನಾವಣೆಯಲ್ಲಿ ಮುಲಾಯಂ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷ 224 ಸ್ಥಾನವನ್ನು ಗೆದ್ದುಕೊಂಡಿತ್ತು. ಈ ಮೂಲಕ ಅಖಿಲೇಶ್ ಯಾದವ್ ಮೊದಲ ಬಾರಿಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಪಟ್ಟವನ್ನು ಆಲಂಕರಿಸಿದ್ದರು.

    ಇದನ್ನೂ ಓದಿ: ಲೋಕಸಭಾ ವೋಟ್ ನೋಡಿದ್ರೆ ಉತ್ತರ ಪ್ರದೇಶದಲ್ಲಿ ಯಾರಿಗೆ ಎಷ್ಟು ಸ್ಥಾನ ಸಿಗಬಹುದು?

  • ಇವಿಎಂ ದೋಷದಿಂದ ಬಿಜೆಪಿಗೆ ಗೆಲುವು, ಬ್ಯಾಲೆಟ್ ಪೇಪರ್‍ನಲ್ಲಿ ಮತ್ತೊಮ್ಮೆ ಚುನಾವಣೆ ನಡೆಸಿ: ಮಾಯಾವತಿ

    ಇವಿಎಂ ದೋಷದಿಂದ ಬಿಜೆಪಿಗೆ ಗೆಲುವು, ಬ್ಯಾಲೆಟ್ ಪೇಪರ್‍ನಲ್ಲಿ ಮತ್ತೊಮ್ಮೆ ಚುನಾವಣೆ ನಡೆಸಿ: ಮಾಯಾವತಿ

    ಲಕ್ನೋ: ಎಲೆಕ್ಟ್ರಾನಿಕ್ ಮತ ಯಂತ್ರದಲ್ಲಿನ ದೋಷದಿಂದ ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆದ್ದಿದೆ ಎಂದು ಬಿಎಸ್‍ಪಿ ನಾಯಕಿ ಮಾಯಾವತಿ ಗಂಭೀರ ಆರೋಪ ಮಾಡಿದ್ದಾರೆ.

    ಮಧ್ಯಾಹ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಹುತೇಕ ಮುಸ್ಲಿಮ್ ಪ್ರಾಬಲ್ಯ ಇರುವ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದೆ. ಈ ರೀತಿಯ ಫಲಿತಾಂಶ ಬರಲು ಸಾಧ್ಯವೇ ಇಲ್ಲ. ಬಿಜೆಪಿ ಹೊರತು ಬೇರೆ ಪಕ್ಷಗಳಿಗೆ ಹಾಕಿದ ಮತವನ್ನು ಇವಿಎಂ ಸ್ವೀಕರಿಸಿಲ್ಲ ಅಥವಾ ಎಲ್ಲ ಮತಗಳು ಬಿಜೆಪಿಗೆ ಬರುವಂತೆ ಇವಿಎಂ ಸಿದ್ಧಪಡಿಸಿರಬೇಕು ಎಂದು ಅವರು ಪ್ರಶ್ನೆ ಮಾಡಿದ್ದಾರೆ.

    ಬಿಎಸ್‍ಪಿ ಶೇ. 22ರಷ್ಟು ಮತಗಳನ್ನು ಗಳಿಸಿದೆ ಆದರೆ ಕೇವಲ 18 ಸ್ಥಾನಗಳನ್ನು ಮಾತ್ರ ಗಳಿಸಲು ಹೇಗೆ ಸಾಧ್ಯ ಎಂದು ಅವರು ಮತ್ತೊಂದು ಪ್ರಶ್ನೆ ಕೇಳಿದ್ದಾರೆ.

    ಇದನ್ನೂ ಓದಿ:ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಕಾರಣವಾದ 10 ಅಂಶಗಳು

    ಚುನಾವಣಾ ಆಯೋಗ ಉತ್ತರ ಪ್ರದೇಶದ ಫಲಿತಾಂಶವನ್ನು ತಡೆಹಿಡಿಯಬೇಕು. ಇವಿಎಂ ಯಂತ್ರಗಳನ್ನು ತನಿಖೆಗೆ ಒಳಪಡಿಸಿ ಫಲಿತಾಂಶ ಬರುವವರೆಗೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು.

    ಈ ಫಲಿತಾಂಶವನ್ನು ರದ್ದು ಪಡಿಸಿ ಬ್ಯಾಲೆಟ್ ಪೇಪರ್‍ನಲ್ಲಿ ಮತ್ತೊಮ್ಮೆ ಚುನಾವಣೆ ನಡೆಸಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಮಾಯಾವತಿ ಪತ್ರ ಬರೆದಿದ್ದಾರೆ.

    ಇದನ್ನೂ ಓದಿ: ಬಿಹಾರ ಚುನಾವಣೆಯ ಸೋಲಿನ ಪಾಠದಿಂದಾಗಿ ಉತ್ತರಪ್ರದೇಶದಲ್ಲಿ ಜಯಭೇರಿ ಬಾರಿಸಿತು ಬಿಜೆಪಿ. ಪಕ್ಷ ಸಂಘಟನೆಯಾಗಿದ್ದು ಹೇಗೆ?

     

  • ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರೀ ಮುನ್ನಡೆ

    ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರೀ ಮುನ್ನಡೆ

    ನವದೆಹಲಿ: ಪಂಚರಾಜ್ಯಗಳ ಚುನಾವಣೆ ಮತ ಎಣಿಕೆ ಆರಂಭವಾಗಿದ್ದು, ಉತ್ತರ ಪ್ರದೇಶದಲ್ಲಿ ಚುನಾವಣೋತ್ತರ ಸಮೀಕ್ಷೆಯಂತೆ ಬಿಜೆಪಿ 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

    ಬೆಳಗ್ಗೆ 9 ಗಂಟೆಯ ವೇಳೆ ಟ್ರೆಂಡ್ಸ್ ಪ್ರಕಾರ ಬಿಜೆಪಿ 205, ಎಸ್‍ಪಿ ಕಾಂಗ್ರೆಸ್ ಮೈತ್ರಿಕೂಟ 51, ಬಿಎಎಸ್‍ಪಿ 24, ಇತರರು 7 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಒಟ್ಟು 403 ಕ್ಷೇತ್ರಗಳಿರುವ ಉತ್ತರ ಪ್ರದೇಶದಲ್ಲಿ 202 ಸ್ಥಾನಗಳನ್ನು ಗೆದ್ದವರು ಅಧಿಕಾರ ಹಿಡಿಯಲಿದ್ದಾರೆ.

    ಪಂಜಾಬ್‍ನಲ್ಲಿ ಕಾಂಗ್ರೆಸ್ 25, ಆಪ್ 8, ಅಕಾಲಿದಳ 5 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

    ಉತ್ತರಾಖಂಡ್‍ನಲ್ಲಿ 20 ಕ್ಷೇತ್ರಗಳಲ್ಲಿ ಬಿಜೆಪಿ, 5ರಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದರೆ ಗೋವಾದ 3 ಕ್ಷೇತ್ರಗಳಲ್ಲಿ ಬಿಜೆಪಿ, 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಮಣಿಪುರದ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್, 1ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

  • ನಾಲ್ಕು ರಾಜ್ಯಗಳಲ್ಲಿ ಮೋದಿ ಭರ್ಜರಿ ಕಮಾಲ್

    ನಾಲ್ಕು ರಾಜ್ಯಗಳಲ್ಲಿ ಮೋದಿ ಭರ್ಜರಿ ಕಮಾಲ್

    ಚುನಾವಣೋತ್ತರ ಸಮೀಕ್ಷೆಯಲ್ಲಿ ಕಮಲ ಕಿಲಕಿಲ
    – ಆನೆ ಜೊತೆ ಸೈಕಲ್ ತುಳಿಯಲು ಅಖಿಲೇಶ್ ಸಿದ್ದ

    ನವದೆಹಲಿ: ದೇಶವೇ ಕುತೂಹಲದಿಂದ ಕಾಯುತ್ತಿದ್ದ ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆಯ ಅಂಕಿ-ಅಂಶಗಳು ಬಹಿರಂಗವಾಗಿವೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

    ಪಂಜಾಬ್‍ನಲ್ಲಿ ಆಪ್, ಗೋವಾ ಅತಂತ್ರ, ಉತ್ತರಾಖಂಡ್ ಮತ್ತು ಮಣಿಪುರದಲ್ಲಿ ಬಿಜೆಪಿ ಅಧಿಕಾರಕ್ಕೇರಲಿದೆ ಅಂತ ಸಮೀಕ್ಷೆ ನಡೆಸಿರುವ ರಾಷ್ಟ್ರೀಯ ವಾಹಿನಿಗಳು, ಸುದ್ದಿ ಸಂಸ್ಥೆಗಳು ಹೇಳಿವೆ.

    ಇಂದು ಚುನಾವಣೋತ್ತರ ಸಮೀಕ್ಷೆಯಾದರೂ ಇದೇ 11ಕ್ಕೆ ಫಲಿತಾಂಶ ಅಧಿಕೃತವಾಗಿ ಹೊರಬರಲಿದೆ. ಸಮೀಕ್ಷೆಗಳ ಫಲಿತಾಂಶದಿಂದ ಬಿಜೆಪಿ ನಾಯಕರು ಹಿಗ್ಗಿದ್ದಾರೆ.

    ಕಾಂಗ್ರೆಸ್, ಸಮಾಜವಾದಿ ಪಕ್ಷ ಸೇರಿದಂತೆ ಇತರೆ ರಾಜ್ಯಗಳ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳೋದು ಗ್ಯಾರಂಟಿ. ಇನ್ನು, ಈ ಫಲಿತಾಂಶ ದೇಶದ ರಾಜಕೀಯ, ಆರ್ಥಿಕ, ಆಡಳಿತಾತ್ಮಕ ವಿಷ್ಯಗಳಲ್ಲಿ ಭಾರೀ ಮಹತ್ವ ಪಡೆದಿದೆ. ಈ ಮಧ್ಯೆ, ಬಿಜೆಪಿಯನ್ನ ಹೊರಗಿಡಲು ಬಿಎಸ್‍ಪಿ ಜೊತೆಗಾದರೂ ಮೈತ್ರಿಗೆ ಸಿದ್ಧ ಅಂತ ಸಿಎಂ ಅಖಿಲೇಶ್ ಯಾದವ್ ಘೋಷಿಸಿದ್ದಾರೆ.

    ಹೀಗಾಗಿ ಇಲ್ಲಿ ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆ, ಚುನಾವಣಾ ಪೂರ್ವ ಸಮೀಕ್ಷೆ, 2012ರ ವಿಧಾನಸಭಾ ಚುನಾವಣೆ, 2014ರ ಲೋಕಸಭಾ ಚುನಾವಣಾ ಫಲಿತಾಂಶ ಮಾಹಿತಿಯನ್ನು ನೀಡಲಾಗಿದೆ. ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಪಡೆದ ಮತಗಳನ್ನು ಲೆಕ್ಕ ಹಾಕಿದ್ರೆ ಈಗ ಎಷ್ಟು ಸ್ಥಾನಗಳನ್ನು ಗೆಲ್ಲಬಹುದು ಎನ್ನುವ ಮಾಹಿತಿಯೂ ಇದೆ.

    ಉತ್ತರ ಪ್ರದೇಶ
    ಒಟ್ಟು ಕ್ಷೇತ್ರ – 403
    ಸರಳ ಬಹುಮತ – 202
    ಒಟ್ಟು 7 ಹಂತಗಳಲ್ಲಿ ಮತದಾನ
    ಒಟ್ಟು ಅಭ್ಯರ್ಥಿಗಳು – 4,843
    ಒಟ್ಟು ಮತದಾರರು – 10.18 ಕೋಟಿ

    ಪಂಜಾಬ್ 
    ಒಟ್ಟು ಕ್ಷೇತ್ರಗಳು – 117 ಕ್ಷೇತ್ರ
    ಸರಳ ಬಹುಮತ – 59
    ಒಂದೇ ಹಂತದಲ್ಲಿ ಮತದಾನ
    ಒಟ್ಟು ಅಭ್ಯರ್ಥಿಗಳು – 1,145
    ಒಟ್ಟು ಮತದಾರರು – 1,98,76,069

    ಗೋವಾ
    ಒಟ್ಟು ಕ್ಷೇತ್ರಗಳು – 40 ಕ್ಷೇತ್ರ
    ಸರಳ ಬಹುಮತ – 21
    ಒಂದೇ ಹಂತದಲ್ಲಿ ಮತದಾನ
    ಒಟ್ಟು ಅಭ್ಯರ್ಥಿಗಳು – 251
    ಒಟ್ಟು ಮತದಾರರು – 11,10,884

    ಉತ್ತರಾಖಂಡ್
    ಒಟ್ಟು ಕ್ಷೇತ್ರಗಳು – 70
    ಒಂದೇ ಹಂತದಲ್ಲಿ ಮತದಾನ
    ಒಟ್ಟು ಅಭ್ಯರ್ಥಿಗಳು – 628
    ಒಟ್ಟು ಮತದಾರರು – 75,12,559

    ಮಣಿಪುರ
    ಒಟ್ಟು ಕ್ಷೇತ್ರಗಳು – 60
    ಎರಡು ಹಂತಗಳಲ್ಲಿ ಮತದಾನ
    ಒಟ್ಟು ಅಭ್ಯರ್ಥಿಗಳು – 266
    ಒಟ್ಟು ಮತದಾರರು – 19.02 ಲಕ್ಷ

     

  • ಉತ್ತರಪ್ರದೇಶದ ಗದ್ದುಗೆ ಯಾರಿಗೆ: ಸಮೀಕ್ಷೆಗಳ ಫಲಿತಾಂಶ ಇಲ್ಲಿದೆ

    ಉತ್ತರಪ್ರದೇಶದ ಗದ್ದುಗೆ ಯಾರಿಗೆ: ಸಮೀಕ್ಷೆಗಳ ಫಲಿತಾಂಶ ಇಲ್ಲಿದೆ

    ನವದೆಹಲಿ: ಉತ್ತರಪ್ರದೇಶದಲ್ಲಿ ಈ ಬಾರಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ. ಟೈಮ್ಸ್ ನೌ ಹೊರತು ಪಡಿಸಿ ಉಳಿದ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ 190 ಅಸುಪಾಸಿನಲ್ಲಿ ಸ್ಥಾನಗಳನ್ನು ಗೆಲ್ಲಲ್ಲಿದೆ ಎಂದು ಭವಿಷ್ಯ ನುಡಿದಿದೆ. ಹೀಗಾಗಿ ಇಲ್ಲಿ ಎಲ್ಲ ಸಮೀಕ್ಷೆಗಳ ವಿವರವನ್ನು ನೀಡಲಾಗಿದೆ.

    ಈ ವಿವರದ ಜೊತೆ ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಕ್ಕಿತ್ತು? ಲೋಕಸಭಾ ಚುನಾವಣೆಯಲ್ಲಿ ಎಷ್ಟು ಸ್ಥಾನ ಸಿಕ್ಕಿತ್ತು? ಲೋಕಸಭಾ ಚುನಾವಣೆಯಲ್ಲಿ ಬಿದ್ದಿರುವ ಶೇಕಡಾವಾರು ಮತಗಳನ್ನು ಲೆಕ್ಕ ಹಾಕಿದ್ರೆ ಈಗ ಎಷ್ಟು ಸ್ಥಾನವನ್ನು ಗೆಲ್ಲಬಹುದು ಎನ್ನುವ ಮಾಹಿತಿಯನ್ನು ನೀಡಲಾಗಿದೆ.

    ಉತ್ತರಪ್ರದೇಶದಲ್ಲಿ ಒಟ್ಟು 403 ವಿಧಾನಸಭಾ ಕ್ಷೇತ್ರಗಳಿದ್ದು, ಬಹುಮತಕ್ಕೆ 202 ಸ್ಥಾನಗಳು ಬೇಕು. 2012ರ ಚುನಾವಣೆಯಲ್ಲಿ ಮುಲಾಯಂ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷ 224 ಸ್ಥಾನವನ್ನು ಗೆದ್ದುಕೊಂಡಿತ್ತು. ಈ ಮೂಲಕ ಅಖಿಲೇಶ್ ಯಾದವ್ ಮೊದಲ ಬಾರಿಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಪಟ್ಟವನ್ನು ಆಲಂಕರಿಸಿದ್ದರು.

  • ಲೋಕಸಭಾ ವೋಟ್ ನೋಡಿದ್ರೆ ಉತ್ತರ ಪ್ರದೇಶದಲ್ಲಿ ಯಾರಿಗೆ ಎಷ್ಟು ಸ್ಥಾನ ಸಿಗಬಹುದು?

    ಲೋಕಸಭಾ ವೋಟ್ ನೋಡಿದ್ರೆ ಉತ್ತರ ಪ್ರದೇಶದಲ್ಲಿ ಯಾರಿಗೆ ಎಷ್ಟು ಸ್ಥಾನ ಸಿಗಬಹುದು?

    ಬೆಂಗಳೂರು: ಪಂಚರಾಜ್ಯಗಳ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳಿರುವ ಉತ್ತರ ಪ್ರದೇಶದಲ್ಲಿ ಈ ಬಾರಿ ಗದ್ದುಗೆಯನ್ನು ಯಾರು ಏರಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.

    2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ ಜಯಭೇರಿ ಬಾರಿಸಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಮತ್ತು ಎಸ್‍ಪಿ ಮೈತ್ರಿಕೂಟದಿಂದಾಗಿ ಬಿಜೆಪಿಗೆ ಸ್ವಲ್ಪ ಮತ ಹಂಚಿಕೆ ಕಡಿಮೆಯಾಗಬಹುದು. ಅಷ್ಟೇ ಅಲ್ಲದೇ ದಲಿತರ ಸಂಖ್ಯೆ ಹೆಚ್ಚು ಇರುವುದರಿಂದ ಲೋಕಸಭೆಯಲ್ಲಿ ಬಿಎಸ್‍ಪಿಗೆ ಯಾವುದೇ ಸ್ಥಾನ ಸಿಗದೇ ಇದ್ದರೂ ವಿಧಾನಸಭಾ ಚುನಾವಣೆಯಲ್ಲಿ ಕೆಲವೆಡೆ ಜಯಭೇರಿ ಭಾರಿಸಲಿದೆ ಎನ್ನುವ ವಿಶ್ಲೇಷಣೆ ಆರಂಭವಾಗಿದೆ.

    ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶ ಹೆಚ್ಚು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಹೀಗಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಬಿದ್ದ ಮತಗಳನ್ನು ಲೆಕ್ಕಾಚಾರದಲ್ಲಿ ಈ ಬಾರಿ ಯಾರು ಎಷ್ಟು ಸ್ಥಾನವನ್ನು ಗೆಲ್ಲಬಹುದು ಎನ್ನುವ ವಿಶ್ಲೇಷಣಾ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಉತ್ತರಪ್ರದೇಶದಲ್ಲಿ ಒಟ್ಟು 403 ವಿಧಾನಸಭಾ ಕ್ಷೇತ್ರಗಳಿದ್ದು, ಬಹುಮತಕ್ಕೆ 202 ಸ್ಥಾನಗಳು ಬೇಕು. 2012ರ ಚುನಾವಣೆಯಲ್ಲಿ ಮುಲಾಯಂ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷ 224 ಸ್ಥಾನವನ್ನು ಗೆದ್ದುಕೊಂಡಿತ್ತು. ಈ ಮೂಲಕ ಅಖಿಲೇಶ್ ಯಾದವ್ ಮೊದಲ ಬಾರಿಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಪಟ್ಟವನ್ನು ಆಲಂಕರಿಸಿದ್ದರು.

    ಲೋಕಸಭಾ ಚುನಾವಣೆಗೆ ಹೋಲಿಸಿದ್ರೆ ಯಾರಿಗೆ ಎಷ್ಟು ಸ್ಥಾನ ಬರುತ್ತೆ?
    2012ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 47 ಸ್ಥಾನಗಳನ್ನು ಗೆದ್ದಿದ್ದರೆ, 2014 ಲೋಕಸಭಾ ಚುನಾವಣೆಯ 80 ಕ್ಷೇತ್ರಗಳಲ್ಲಿ 71ರಲ್ಲಿ ಜಯವನ್ನು ಸಾಧಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಶೇ.42.6 ಮತಗಳನ್ನು ಬಿಜೆಪಿ ಪಡೆಯುವ ಮೂಲಕ ಮೋದಿ, ಅಮಿತ್ ಶಾ ರಣತಂತ್ರ ಯಶಸ್ವಿಯಾಗಿತ್ತು. ಇಷ್ಟೇ ಶೇಕಡವಾರು ಮತಗಳು ಈ ಚುನಾವಣೆಯಲ್ಲಿ ಬಿದ್ದರೆ ಬಿಜೆಪಿ 318 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಜಯಭೇರಿ ಬಾರಿಸುವ ಸಾಧ್ಯತೆಯಿದೆ.

    ಎಸ್‍ಪಿ ಶೇ.22.3 ರಷ್ಟು ಮತಗಳನ್ನು ಪಡೆಯುವ ಮೂಲಕ 5 ಸ್ಥಾನವನ್ನು ಗಳಿಸಿತ್ತು. ಈ ಲೆಕ್ಕವನ್ನು ಪರಿಗಣಿಸಿದರೆ ಈ ಬಾರಿ 42 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಕಾಂಗ್ರೆಸ್ ಶೇ.7.5 ರಷ್ಟು ಮತಗಳನ್ನು ಪಡೆಯುವ ಮೂಲಕ 15 ಸ್ಥಾನವನ್ನು ಗೆಲ್ಲಬಹುದು.

     

  • ವೈದ್ಯರ ಮಾತು ಕೇಳಿ ಮಹಿಳೆಯನ್ನು ಚಿತೆಯ ಮೇಲೆಯೇ ಸಜೀವವಾಗಿ ದಹಿಸಿದ್ರು!

    ವೈದ್ಯರ ಮಾತು ಕೇಳಿ ಮಹಿಳೆಯನ್ನು ಚಿತೆಯ ಮೇಲೆಯೇ ಸಜೀವವಾಗಿ ದಹಿಸಿದ್ರು!

    ನೊಯ್ಡಾ: ವೈದ್ಯರ ಎಡವಟ್ಟಿನಿಂದ ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬರು ಸಜೀವವಾಗಿ ದಹನವಾಗಿದ್ದು, ಚಿತೆಯ ಮೇಲೆ ಮಲಗಿಸಿದಾಗ ಮಹಿಳೆ ಉಸಿರಾಡುತ್ತಿದ್ದರು ಅಂತಾ ಸಂಬಂಧಿಕರು ಆರೋಪಿಸಿದ್ದಾರೆ. ಈ ಬಗ್ಗೆ ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 21 ವರ್ಷದ ಮಹಿಳೆಯನ್ನು ಉತ್ತರಪ್ರದೇಶದ ನೊಯ್ಡಾದಲ್ಲಿರುವ ಶಾರದಾ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಭಾನುವಾರ ರಾತ್ರಿ 11.45ರ ಸುಮಾರಿಗೆ ಮೃತಪಟ್ಟಿರುವುದಾಗಿ ವೈದ್ಯರು ಪ್ರಕಟಿಸಿದ್ದರು. ಅಂತೆಯೇ ಮಹಿಳೆ ಶವವನ್ನು ಸೋಮವಾರ ಬೆಳಗ್ಗೆ ಪತಿಗೆ ಹಸ್ತಾಂತರಿಸಿದ್ದು, ಕುಟುಂಬದವರು ಶವಸಂಸ್ಕಾರ ಮಾಡಿದ್ದರು.

    ಆದ್ರೆ ಇತ್ತ ಮಹಿಳೆಯ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ ಸಹೋದರ ಆಲಿಗಢ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿ ಅಂತ್ಯಸಂಸ್ಕಾರವನ್ನು ನಿಲ್ಲಿಸುವಂತೆ ಹೇಳಿದ್ದಾರೆ. ಆದ್ರೆ ಅದಾಗಲೇ ಮಹಿಳೆಯ ದೇಹ ಶೇ.70ರಷ್ಟು ಸುಟ್ಟು ಹೋಗಿತ್ತು. ಈ ಅರ್ಧ ಸುಟ್ಟ ದೇಹವನ್ನೇ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದರು. ಇಬ್ಬರು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದು, ಈ ವೇಳೆ ಮಹಿಳೆ ಉಸಿರಾಟದ ತೊಂದರೆಯಿಂದ ಸತ್ತಿಲ್ಲ. ಸಜೀವ ದಹನದಿಂದಾದ ಆಘಾತದಿಂದ ಮೃತಪಟ್ಟಿರುವುದಾಗಿ ದೃಢಪಟ್ಟಿದೆ.

    ಇದೀಗ ಘಟನೆ ಸಂಬಂಧ ಮೃತ ಮಹಿಳೆಯ ಪತಿ ಮತ್ತು ಆತನ ಕುಟುಂಬದ 10 ಮಂದಿಯ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದು, ಆದ್ರೆ ಪೊಲೀಸರು ಇದುವರೆಗೂ ಯಾರನ್ನೂ ಬಂಧಿಸಿಲ್ಲ.

    ಇತ್ತ ಮಹಿಳೆ ಮೃತಪಟ್ಟಿದ್ದಾರೆ ಅಂತಾ ಘೋಷಣೆ ಮಾಡಿದ್ದ ಶಾರದಾ ಆಸ್ಪತ್ರೆ ಮಾತ್ರ ಮಹಿಳೆಗೆ ಉಸಿರಾಟದ ತೊಂದರೆ ಹೆಚ್ಚಾಗಿ ಕಂಡುಬಂದಿರುವುದರಿಂದ ಆಕೆಯನ್ನು ಉಳಿಸಿಕೊಳ್ಳಲು ಇಲ್ಲಿಯ ವೈದ್ಯರು ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಆದ್ರೆ ಕಡೆಗೂ ಆಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಆಕೆ ಅದೇ ತೊಂದರೆಯಿಂದ ಸಾವನ್ನಪ್ಪಿದ್ದಾಳೆ ಅಂತಾ ಆಸ್ಪತ್ರೆಯ ವಕ್ತಾರರು ಹೇಳಿದ್ದಾರೆ.

  • ಉತ್ತರಪ್ರದೇಶದಲ್ಲಿ ನಾಳೆ ಮೊದಲ ಹಂತದ ಚುನಾವಣೆ: ಅಖಾಡ ಹೇಗಿದೆ?

    ನವದೆಹಲಿ: ಉತ್ತರ ಪ್ರದೇಶ ಎಂದ ಕೂಡಲೇ ತಕ್ಷಣ ನೆನಪಾಗೋದು ಭಾರತದ ಅತಿದೊಡ್ಡ ರಾಜ್ಯ, ಅಷ್ಟೇ ಅಲ್ಲ ರಾಷ್ಟ್ರ ರಾಜಕಾರಣ ವನ್ನ ನಿರ್ಧರಿಸುವ ಸಮರ ಭೂಮಿ. ಇಲ್ಲಿ ಗೆದ್ದವರು ದೇಶವನ್ನೇ ಆಳ್ತಾರೆ ಅನ್ನೂ ಅಲಿಖಿತ ನಿಯಮ. ಜೊತೆಗೆ ದೇಶದ ಅತಿ ಹೆಚ್ಚು ಮತದಾರರು ಇರುವ ರಾಜ್ಯ ಅನ್ನೂ ಹೆಗ್ಗಳಿಕೆ ಉತ್ತರ ಪ್ರದೇಶದು. ಈ ಕಾರಣಕ್ಕೆ ಉತ್ತರ ಪ್ರದೇಶ ರಾಜಕೀಯ ವಿಚಾರದಲ್ಲಿ ರಾಷ್ಟ್ರದಲ್ಲಿ ಹೆಚ್ಚು ಸುದ್ದಿಯಾಗುತ್ತೆ.

    ಇಂತಹ ರಾಜಕೀಯ ರಾಜ್ಯದಲ್ಲಿ ಕಳೆದ ಒಂದು ತಿಂಗಳಿನಿಂದ ಚುನಾವಣಾ ಕಾವು ಜೋರಾಗಿದೆ. ಏಳು ಹಂತದಲ್ಲಿ ನಡೆಯುವ ಚುನಾವಣೆಗೆ ಮುನ್ನುಡಿ  ಎನ್ನುವುಂತೆ ಶನಿವಾರ ಮೊದಲ ಹಂತದ ಚುನಾವಣೆಗೆ ಮತದಾನ ನಡೆಯಲಿದೆ.

    ಮೊದಲ ಹಂತದಲ್ಲಿ 15 ಜಿಲ್ಲೆಗಳ ಪೈಕಿ 73 ವಿಧಾನ ಸಭೆ ಕ್ಷೇತ್ರಗಳಿಗೆ ಚುನಾವಣೆ ಕಸರತ್ತು ನಡೆಯಲಿದೆ. ಶಾಮಲಿ, ಮಥುರಾ, ಮುಝಪ್ಫರ್ ನಗರ ಬಾಗ್ಫತ್, ಅಲಿಗಡ್ ಸೇರಿದಂತೆ ಹಲವು ಮತ ಕ್ಷೇತ್ರಗಳು ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸುನ ಕ್ಷೇತ್ರಗಳಳಾಗಿದ್ದು ಇದೇ 15 ರಂದು 11 ಜಿಲ್ಲೆಗಳ ಪೈಕಿ 67 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು ಎರಡು ಹಂತದಲ್ಲಿ ಉತ್ತರ ಪ್ರದೇಶದ ಪಶ್ಚಿಮ ಭಾಗದ ಚುನಾವಣೆ ಮಾಡಿ ಮುಗಿಸಲು  ಆಯೋಗ ನಿರ್ಧರಿಸಿದೆ.

    ಜಾತಿ ಲೆಕ್ಕಾಚಾರ: ಉತ್ತರ ಪ್ರದೇಶದ ರಾಜಕಾರಣ ನಿಂತಿರುವುದು ಜಾತಿ ಲೆಕ್ಕಾಚಾರದಲ್ಲಿ ಹಾಗಾಗೀ ಯಾದವ, ಜಾಟ್, ಮುಸ್ಲಿಂ, ದಲಿತರು ನಿರ್ಣಾಯಕ ಪಾತ್ರ ವನ್ನು ವಹಿಸ್ತಾರೆ. ಹಾಗಾಗೀ ಈ ಬಾರಿಯ ಮತದಾರರು ಎಷ್ಟಿದ್ದಾರೆ? ಜೊತೆಗೆ ಜಾತಿ ಲೆಕ್ಕಾಚಾರ ಹೇಗಿದೆ ಎಂದು ನೋಡುವುದಾದರೆ,

    ಉತ್ತರ ಪ್ರದೇಶ ದ ಒಟ್ಟು ಮತದಾರರ ಸಂಖ್ಯೆ -14.05 ಕೋಟಿ
    ಪುರುಷರು ಮತದಾರರು – 7.7 ಕೋಟಿ
    ಮಹಿಳಾ ಮತದಾರರು – 6.3 ಕೋಟಿ
    ತೃತೀಯ ಲಿಂಗ ಮತದಾರರು – 6,983
    ಒಟ್ಟು ಮತದಾರರ ಪೈಕಿ – 4.4 ಕೋಟಿಯಷ್ಟು ಯುವ ಮತದಾರರು ಉತ್ತರ ಪ್ರದೇಶದಲ್ಲಿದ್ದಾರೆ

    ಇನ್ನೂ ಜಾತಿ ಲೆಕ್ಕಚಾರ ನೋಡುವುದಾದ್ರೆ
    ದಲಿತರು – 21.5% (ಜಾಟ್ ದಲಿತರು 11% )
    ಮುಸ್ಲಿಂಮರು – 19. 3%
    ಮೆಲ್ವವರ್ಗದ ಜಾತಿಗಳು – 22%
    ಕ್ರಿಶ್ಚಿಯನ್ನರು -0.18%
    ಹಿಂದುಳಿದ ವರ್ಗ – 40% ರಷ್ಟಿದ್ದು ಅದರಲ್ಲಿ (ಯಾದವ – 8% , ಲೋಧಿ -7%, ಜಾಟ್ – 1.7% , ಗುಜ್ಜರ್ – 1.3%, ಹೀಗೆ ಹಲವು ಉಪ ಪಂಗಡಗಳಿವೆ)

    ಉತ್ತರ ಪ್ರದೇಶದ ಪಶ್ಚಿಮ ವಲಯ ಅತಿ ಹೆಚ್ಚು ಮುಸ್ಲಿಂ, ದಲಿತ ಹಾಗೂ ಹಿಂದೂಳಿದ ವರ್ಗದ ಮತದಾರರಿದ್ದಾರೆ. ಹಾಗಾಗೀ ಈಬಾರಿ 99 ಸೀಟುಗಳನ್ನು ಮುಸ್ಲಿಂರಿಗೆ ನೀಡುವ ಮೂಲಕ ದಲಿತ ಮತ್ತು ಮುಸ್ಲಿಮರಿಗೆ ಬಿಎಸ್ಪಿಯ ನಾಯಕಿ ಮಾಯಾವತಿ ಮಣೆ ಹಾಕಿದ್ರೆ, ಎಸ್ಪಿ ಕೂಡಾ 59 ಸೀಟುಗಳನ್ನು ಮುಸ್ಲಿಂ ರಿಗೆ ನೀಡಿ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಮುಸ್ಲಿಂ ಓಟ್ ಇಬ್ಭಾಗವಾಗದಂತೆ ಯಾದವ- ಮುಸ್ಲಿಂ ಧೃವೀಕರಣ ಮಾಡಿಕೊಂಡಿದ್ದಾರೆ.

    ಕಳೆದ ಲೋಕಸಭೆಯಲ್ಲಿ ಅತಿ ಹೆಚ್ಚು ಸೀಟುಗಳು ಗೆಲ್ಲುವ ಮೂಲಕ ಸದ್ದು ಮಾಡಿದ ಬಿಜೆಪಿ ಈ ಬಾರಿ ವಿಧಾನ ಸಭೆಯಲ್ಲಿ ನಿರ್ಲಕ್ಷ್ಯ ಮಾಡುವಂತಿಲ್ಲ. ನೋಟ್ ಬ್ಯಾನ್ ಎಫೆಕ್ಟ್, ಮೋದಿ ಅಲೆ ಮುಖ್ಯವಾಗಿದ್ದು ಸ್ವತಃ ಪ್ರಧಾನ ಮಂತ್ರಿ ಅಖಾಡಕ್ಕೆ ಇಳಿದು ಪ್ರಚಾರದಲ್ಲಿ ಭಾಗವಹಿಸುತ್ತಿದ್ದು,  ಜೊತೆಗೆ ರಾಮ ಮಂದಿರ ನಿರ್ಮಾಣದ ಆಸೆ ತೋರಿಸುವ ಬಿಜೆಪಿ ಗೆಲ್ಲುವ ತಂತ್ರ ಹೆಣೆದಿದೆ. ಇದರ ಜೊತೆಗೆ ಪಶ್ಚಿಮ ಭಾಗದಲ್ಲಿ ಅತಿ ಹೆಚ್ಚು ಪ್ರಭಾವಶಾಲಿಯಾದ ಪಕ್ಷ ಪಕ್ಷ ಆರ್‍ಎಲ್‍ಡಿ. ಆರ್‍ಎಲ್‍ಡಿ ಪ್ರತಿನಿಧಿಸುವ ಜಾಟ್ ಸಮುದಾಯದ ಸಂಖ್ಯೆ ಕಡಿಮೆ ಇದ್ದರೂ ಇತರರ ಮೇಲೆ ಪರಿಣಾಮ ಬೀರುವ ಪ್ರಭಾವ ಜಾಸ್ತಿ. ಮಾಜಿ ಪ್ರಧಾನಿ ಚೌದರಿ ಚರಣ್ ಸಿಂಗ್ ನೇತೃತ್ವದಲ್ಲಿ ಸಾಕಷ್ಟು ರಣ ತಂತ್ರಗಳನ್ನು ಹೂಡಿ ಒಂದಿಷ್ಟು ಸೀಟುಗಳು ಬಾಚ್ಚಿಕೊಳ್ಳುವ ಸಾಧ್ಯತೆಯಿದೆ.

    ಒಟ್ಟಿನಲ್ಲಿ ಮೊದಲ ಹಂತದಲ್ಲಿ ಹೆಚ್ಚು ಖಾತೆಗಳನ್ನು ತೆಗೆಯಲು ಹರ ಸಾಹಸಪಟ್ಟು ಪಕ್ಷಗಳು ಈಗಾಗಲೇ ಸಾಕಷ್ಟು ಪ್ರಚಾರ ಮಾಡಿದೆ. ಅಖಿಲೇಶ್ ಮತ್ತು ರಾಹುಲ್ ಗಾಂಧಿ ಯುವ ನಾಯಕರು, ಯುವಕರ ಮತ ತೆಕ್ಕೆಗೆ ತೆಗೆದುಕೊಳ್ಳುವುವರ ಅಥವಾ ಮೋದಿ ಅಲೆಯಲ್ಲಿ ಆನೆಯೂ ಕೂಡಾ ತೂರಿ ಹೋಗುತ್ತಾ ಎನ್ನುವುದನ್ನು ಮತದಾರ ಪ್ರಭುಗಳು ನಿರ್ಧರಿಸಲಿದ್ದಾರೆ.