Tag: ಉಡುಪಿ

  • ಗ್ಲೋಬಲ್ ವಾರ್ಮಿಂಗ್ ವಿರುದ್ಧ ಸಮರ-ಉಡುಪಿಯಲ್ಲಿ 1 ಲಕ್ಷ ಸೀಡ್ ಬಾಲ್ ತಯಾರಿ

    ಗ್ಲೋಬಲ್ ವಾರ್ಮಿಂಗ್ ವಿರುದ್ಧ ಸಮರ-ಉಡುಪಿಯಲ್ಲಿ 1 ಲಕ್ಷ ಸೀಡ್ ಬಾಲ್ ತಯಾರಿ

    ಉಡುಪಿ: ಗ್ಲೋಬಲ್ ವಾರ್ಮಿಂಗ್ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ವಿಶ್ವದಾದ್ಯಂತ ಹಲವು ರಾಷ್ಟ್ರಗಳು ಉಷ್ಣತೆ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಂಡಿದೆ. ಅಭಿವೃದ್ಧಿ ಹೆಸರಲ್ಲಿ ಕಾಡಿನ ನಾಶವೇ ಇಷ್ಟೆಲ್ಲಾ ಅನಾಹುತಗಳಿಗೆ ಕಾರಣ. ಉಸಿರು ನೀಡುವ ಹಸಿರಿಗಾಗಿ ಉಡುಪಿಯಲ್ಲಿ ಸೀಡ್ ಬಾಲ್ ಅಭಿಯಾನ ಶುರುವಾಗಿದೆ. ಪೇಜಾವರ ಕಿರಿಯ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಯಾನಕ್ಕೆ ಚಾಲನೆ ನೀಡಿದರು.

    ಕಾಲಕಾಲಕ್ಕೆ ಮಳೆ ಬರಲ್ಲ. ಬೇಸಿಗೆ ಶುರುವಾಗೋ ಮೊದಲೇ ನೀರು ಬತ್ತಿ ಹೋಗುತ್ತಿದೆ. ಸೂರ್ಯನ ಶಾಖ ವಿಪರೀತವಾಗಿದ್ದು ಉಷ್ಣಾಂಶದಲ್ಲಿ ಏರುಪೇರಾಗಿದೆ. ಕಾಡು ನಾಶವೇ ಇದಕ್ಕೆಲ್ಲಾ ಮೂಲಕಾರಣ ಅನ್ನೋದ್ರಲ್ಲಿ ಸಂಶಯವೇ ಇಲ್ಲ. ಈ ಹಿನ್ನೆಲೆಯಲ್ಲಿ ಉಡುಪಿ ಶ್ರೀಕೃಷ್ಣಮಠದಲ್ಲಿ ಉತ್ತಿಷ್ಟ ಭಾರತ ತಂಡ ಸೀಡ್ ಬಾಲ್ ಅಭಿಯಾನ ಶುರುಮಾಡಿದೆ. ಮಠದ ರಾಜಾಂಗಣದಲ್ಲಿ ನೂರಾರು ಮಂದಿ ಯುವಕರು ಹಾಗು ಮಹಿಳೆಯರು ಬೀಜದುಂಡೆಗಳನ್ನು ತಯಾರು ಮಾಡಿದರು.

    ಹಿಂದೆಲ್ಲಾ ಬೀಜೋತ್ಪತ್ತಿ ತನ್ನಿಂದ ತಾನೆ ನಡೆಯುತ್ತಿತ್ತು. ಆದ್ರೆ ಈಗ ಪರಿಸ್ಥಿತಿ ಹಾಗೆ ಇಲ್ಲ. ನೆರವಾಗಿ ಬೀಜ ಒಗೆದರೆ, ಅದು ಮೊಳೆಕೆಯೊಡೆಯಲ್ಲ. ಭೂಮಿಯಲ್ಲಿ ಪೋಷಕಾಂಶ ಇರಲಿಕ್ಕಿಲ್ಲ. ಆ ನಿಟ್ಟಿನಲ್ಲಿ ಬೀಜದುಂಡೆ ಮಾಡಲಾಗುತ್ತಿದೆ. ಸಣ್ಣಪುಟ್ಟ ಸಂಘಟನೆ ತೊಡಗಿಸಿಕೊಳ್ಳಬೇಕು. ಪರಿಸರ ರಕ್ಷಣೆ ಮಾಡಿದ್ರೆ ನಮ್ಮ ರಕ್ಷಣೆ ಮಾಡಿದಂತೆ. ಹೀಗಾಗಿ ಇಂದಿನ ಪೀಳಿಗೆಗೆ ನಮ್ಮ ಹಿರಿಯರು ಪರಿಸರ ಉಳಿಸಿದ್ದಾರೆ. ನಾವು ಮುಂದಿನ ಪೀಳಿಗೆಗೆ ಎನು ಮಾಡಿದ್ದೆವೆ ಎಂಬ ಪ್ರಶ್ನೆ ಹಾಕಿಕೊಂಡು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ತಿಳಿಸಿದರು.

    ಏನಿದು ಬೀಜದುಂಡೆ ಕಾನ್ಸೆಪ್ಟ್?:
    ಮಣ್ಣು- ಸಗಣಿ- ಗೋಮೂತ್ರವನ್ನು ಮಿಶ್ರಣ ಮಾಡಿ ಮಣ್ಣಿನ ಉಂಡೆಯನ್ನು ತಯಾರು ಮಾಡಿ, ಅದರೊಳಗೆ ಬೀಜವಿಟ್ಟು ಮುಚ್ಚಲಾಗುತ್ತದೆ. ಬೀಜದುಂಡೆಯನ್ನು ಹದ ಬಿಸಿಲಿನಲ್ಲಿ ಒಂದೆರಡು ದಿನ ಒಣಗಿಸಿ, ಮಳೆಗಾಲ ಆರಂಭದಲ್ಲಿ ಅಲ್ಲಲ್ಲಿ ಈ ಬೀಜದುಂಡೆಗಳನ್ನು ಎಸೆಯಲಾಗುತ್ತದೆ. ಮಳೆ ಬಿದ್ದೊಡನೆ ಮಣ್ಣು ತೇವಗೊಂಡು ಬೀಜ ಮೊಳಕೆಯೊಡೆಯುತ್ತದೆ. ಸಸಿಗೆ ಬೇಕಾದಷ್ಟು ಪೋಷಕಾಂಶ ಸುತ್ತಲೂ ಮೊದಲೇ ರೆಡಿಯಾಗಿರುತ್ತದೆ. ಗಿಡ ಮರವಾಗಿ ಬೆಳೆಯುತ್ತದೆ ಎಂಬೂದು ಈ ಸೀಡ್ ಬಾಲ್ ನ ಕಾನ್ಸೆಪ್ಟ್.

    ಉತ್ತಿಷ್ಟ ಭಾರತ ತಂಡ ರಾಜ್ಯಾದ್ಯಂತ ಈವರೆಗೆ 18 ಲಕ್ಷದಷ್ಟು ಸೀಡ್ ಬಾಲ್ ತಯಾರಿ ಮಾಡಿ ಎಸೆದಿದೆ. ಉಡುಪಿಯಲ್ಲಿ ಒಂದು ಲಕ್ಷದಷ್ಟು ಬೀಜದುಂಡೆ ತಯಾರು ಮಾಡುವ ಗುರಿಯನ್ನು ಹೊಂದಿದೆ.

    ರಾಜ್ಯಾದ್ಯಂತ ಹಲವು ಕಡೆಗಳಲ್ಲಿ ಈ ಅಭಿಯಾನ ಮಾಡಿದ್ದೆವು. ಇದೀಗ ಉಡುಪಿಗೆ ಬಂದಿದ್ದೇವೆ. ಐದಾರು ವರ್ಷಗಳಲ್ಲಿ ಬೃಹತ್ ಮರವಾಗಿ ಬೆಳೆಯುವ ಬೀಜಗಳನ್ನು ಈಗ ಬಿತ್ತುತ್ತಿದ್ದೇವೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಉತ್ತಿಷ್ಟ ಭಾರತ ಸಂಘಟನೆಯ ಕಾರ್ಯಕರ್ತ ಪ್ರಕಾಶ್ ಹೇಳಿದ್ದಾರೆ.

     

  • ಎಸಿ ಕಾರು ಸೈಡಿಗಿಟ್ಟು ಸರ್ಕಾರಿ ಬಸ್ ಹತ್ತಿದ ಸಚಿವ ಪ್ರಮೋದ್ ಮಧ್ವರಾಜ್

    ಎಸಿ ಕಾರು ಸೈಡಿಗಿಟ್ಟು ಸರ್ಕಾರಿ ಬಸ್ ಹತ್ತಿದ ಸಚಿವ ಪ್ರಮೋದ್ ಮಧ್ವರಾಜ್

    ಉಡುಪಿ: ಶಾಸಕರು-ಮಂತ್ರಿಗಳಂದ್ರೆ ವಿಮಾನ, ಹೆಲಿಕಾಫ್ಟರಲ್ಲೇ ಓಡಾಡೋದು. ಜಿಲ್ಲೆಯೊಳಗೆ ಎಸಿ ಕಾರಲ್ಲಿ ಕಾರ್ಯಕ್ರಮಗಳಿಗೆ ಹೋಗುವುದು ಸಾಮನ್ಯ. ಆದ್ರೆ ಉಡುಪಿ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಇವತ್ತು ಸರ್ಕಾರಿ ಕಾರು ಸೈಡಿಗಿಟ್ಟು ಸರ್ಕಾರಿ ಬಸ್ ಹತ್ತಿ ತಮ್ಮ ಪ್ರಯಾಣ ಬೆಳೆಸಿದರು.

    ಸದಾ ಎಸಿ ಕಾರಿನಲ್ಲೇ ಓಡಾಡುವ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಇಂದು ತಮ್ಮ ಕಾರನ್ನು ಬಿಟ್ಟು ಕೆಎಸ್‍ಆರ್‍ಟಿಸಿ ಬಸ್ಸಿನಲ್ಲಿ ಪ್ರಯಾಣಿಸಿ ಕ್ಷೇತ್ರದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ತಮ್ಮ ಕ್ಷೇತ್ರ ವ್ಯಾಪ್ತಿಯ ಬ್ರಹ್ಮಾವರ ವಿಭಾಗದಲ್ಲಿ ಹಲವಾರು ಅಭಿವೃದ್ಧಿಪರ ಕಾರ್ಯಕ್ರಮಗಳ ಶಂಕುಸ್ಥಾಪನೆ, ಉದ್ಘಾಟನೆ ಇನ್ನಿತರ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾದ್ರು.

    ಬೆಳಗ್ಗೆ ಯುವಜನ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಅಜ್ಜರಕಾಡಿನಲ್ಲಿ ಆಯೋಜಿಸಿದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಬಳಿಕ ಬಸ್ಸಿನಲ್ಲಿ ತಮ್ಮ ಕಾರ್ಯಕರ್ತರೊಡನೆ ಬ್ರಹ್ಮಾವರದತ್ತ ಪ್ರಯಾಣ ಬೆಳೆಸಿದರು. ಉಡುಪಿಯಿಂದ ಬ್ರಹ್ಮಾವರ 15 ಕಿಮೀ ದೂರವಿದ್ದು, ಅಲ್ಲಿನ ಎಲ್ಲಾ ಕಾರ್ಯಕ್ರಮಕ್ಕೂ ಬಸ್ಸನ್ನೇ ಅವಲಂಬಿಸಿದರು.

    ಇದನ್ನೂ ಓದಿ: ಬಸ್ ಡ್ರೈವರ್ ಆದ ಸಚಿವ ವಿನಯ ಕುಲಕರ್ಣಿ

    ಜನ ಸಾಮಾನ್ಯರ ಪರಿಸ್ಥಿತಿ ಅರ್ಥ ಮಾಡಿಕೊಳ್ಳುವ ಉದ್ದೇಶದ ಜೊತೆ ನರ್ಮ್ ಬಸ್ ಯಾವ ರೀತಿಯ ಸೇವೆಯನ್ನು ಕೊಡುತ್ತಿದೆ ಎಂಬೂದನ್ನೂ ತಿಳ್ಕೋಬೇಕು ಎಂಬ ಉದ್ದೇಶದಿಂದ ಬಸ್ಸಲ್ಲಿ ಪ್ರಯಾಣಿಸಿದೆ. ಗ್ರಾಮೀಣ ಭಾಗಕ್ಕೆ ಹೆಚ್ಚಿನ ಸರ್ಕಾರಿ ಬಸ್ ಓಡಿಸುವ ಯೋಜನೆಯಿದೆ ಎಂದು ಸಚಿವ ಮಧ್ವರಾಜ್ ಈ ಸಂದರ್ಭದಲ್ಲಿ ಹೇಳಿದರು.

  • 250 ವರ್ಷಗಳ ಸುದೀರ್ಘ ಮುನಿಸಿಗೆ ತೆರೆ: ಉಡುಪಿಯಲ್ಲಿ ಸೋದೆಶ್ರೀ- ಕುಕ್ಕೆಶ್ರೀಗಳ ಮಹಾ ಸಮಾಗಮ

    250 ವರ್ಷಗಳ ಸುದೀರ್ಘ ಮುನಿಸಿಗೆ ತೆರೆ: ಉಡುಪಿಯಲ್ಲಿ ಸೋದೆಶ್ರೀ- ಕುಕ್ಕೆಶ್ರೀಗಳ ಮಹಾ ಸಮಾಗಮ

    ಉಡುಪಿ: ನಮ್ಮ ನಿಮ್ಮಂತ ಸಾಮಾನ್ಯ ಜನರಿಗೆ ಕೋಪ ಬರುತ್ತೆ. ಮನಸ್ತಾಪ ಆಗುತ್ತೆ. ಆದ್ರೆ ಜೀವನದಲ್ಲಿ ಅರಿಷಡ್ವರ್ಗಗಳನ್ನು ದಾಟಿದ ಸ್ವಾಮೀಜಿಗಳಿಗೂ ಶತ- ಶತಮಾನಗಳಿಗೂ ದ್ವೇಷ ಇರುತ್ತದೆ. ಕುಕ್ಕೆ ಸುಬ್ರಹ್ಮಣ್ಯ ಮಠ ಮತ್ತು ಉಡುಪಿಯ ಸೋದೆ ವಾದಿರಾಜ ಮಠದ ಯತಿಗಳು ಮುಖಾಮುಖಿಯಾಗಿ 250 ವರ್ಷ ದಾಟಿದೆ. ಆದ್ರೆ ಇದೀಗ ಕೋಪ ಮರೆದು ಬಾಂಧವ್ಯ ಬೆಳೆಸಲು ಎರಡು ಮಠಗಳು ಮುಂದಾಗಿದೆ.

    ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ. ದಕ್ಷಿಣ ಭಾರತದಲ್ಲೇ ಅತೀ ಪ್ರಸಿದ್ಧ ಧಾರ್ಮಿಕ ಕೇಂದ್ರ. ಕುಕ್ಕೆ ಸುಬ್ರಹ್ಮಣ್ಯ ಮಠದಲ್ಲಿ ವಿದ್ಯಾಪ್ರಸನ್ನ ಶ್ರೀಗಳು ಸದ್ಯದ ಪೀಠಾಧಿಕಾರಿಗಳು. ಇನ್ನು ಉಡುಪಿ ಶ್ರೀಕೃಷ್ಣಮಠಕ್ಕೆ ಒಳಪಡುವ 8 ಮಠಗಳಿವೆ. 800 ವರ್ಷಗಳ ಹಿಂದೆ 8 ಮಠಗಳ ಸ್ವಾಮೀಜಿಗಳ ಪೈಕಿ ಸೋದೆ ಮಠದ ವಾದಿರಾಜ ಸ್ವಾಮಿಗಳು ಹಿರಿಯರು. ಸದ್ಯ ಸೋದೆ ಪೀಠಕ್ಕೆ ವಿಶ್ವವಲ್ಲಭತೀರ್ಥರು ಪೀಠಾಧಿಕಾರಿಗಳು. ಎರಡೂ ಮಠಗಳು ಧಾರ್ಮಿಕವಾಗಿ ಮತ್ತು ಆರ್ಥಿಕವಾಗಿ ಬಲಿಷ್ಠ ಮಠಗಳು.

    ಯಾವ ಕಾರಣಕ್ಕೆ ಮುನಿಸು?: ಈ ಎರಡು ಮಠಗಳ ಸ್ವಾಮೀಜಿಗಳು ಮಾತು ಬಿಟ್ಟು- ಮುಖಾಮುಖಿಯಾಗದೆ ಸರಿಸುಮಾರು 250 ವರ್ಷಗಳೇ ಕಳೆದಿವೆ. 18ನೇ ಶತಮಾನದ ಕಥೆಯಿದು. ಉಡುಪಿಯ ಉಂಡಾರು ಗ್ರಾಮದ ಸೋದರರು ಸುಬ್ರಹ್ಮಣ್ಯ ಮತ್ತು ಸೋದೆ ಮಠದ ಪೀಠಾಧಿಪತಿಗಳಾದರು. ಸೋದೆ ಮಠದಲ್ಲಿ ವಿಶ್ವನಿಧಿತೀರ್ಥರು ದೀಕ್ಷೆ ಪಡೆದರು. ಅವರ ತಮ್ಮ ವಿಶ್ವಾಧೀಶ್ವರ ತೀರ್ಥರು ಕುಕ್ಕೆಗೆ ಶ್ರೀಗಳಾದರು. ಒಂದು ಬಾರಿ ಕುಕ್ಕೆ ಮಠದ ಪೂಜೆಗೆ ಸೋದೆ ಶ್ರೀಗಳನ್ನು ಆಹ್ವಾನಿಸಲಾಯ್ತು. ಆದ್ರೆ ವಾಹನದ ವ್ಯವಸ್ಥೆಗಳು ಇಲ್ಲದಿರುವುದರಿಂದ ಪೂಜೆಯ ಘಳಿಗೆಗೆ ಸೋದೆ ಶ್ರೀಗಳು ತಲುಪಲಾಗಿಲ್ಲ.

    ಕೋಪಗೊಂಡ ಕುಕ್ಕೆಶ್ರೀಗಳು ಕಾಯದೆ ಪೂಜೆ ಆರಂಭಿಸಿ ಮುಗಿಸಿಯೇ ಬಿಟ್ಟರು. ಸೋದೆಶ್ರೀಗಳು ಇದನ್ನು ಅವಮಾನವೆಂದು ಪರಿಗಣಿಸಿ ಮತ್ತೆಂದೂ ಬರುವುದಿಲ್ಲ. ಇಂದಿನಿಂದ ಮಾತುಕತೆಯಿಲ್ಲ ಎಂದು ಹೇಳಿ ವಾಪಾಸ್ಸಾದರು. ಅಂದಿನಿಂದ ಇಂದಿನ ತನಕವೂ ಎರಡು ಮಠಗಳ ಪರಂಪರೆಯಲ್ಲಿ ಬಂದ ಯತಿಗಳು ಒಬ್ಬರೊಬ್ಬರ ಮುಖ ನೋಡಿಕೊಂಡಿಲ್ಲ. ಎಲ್ಲೂ ಭೇಟಿಯಾಗಿಲ್ಲ. ಸೋದೆ ಶ್ರೀಗಳು ಕುಮಾರಧಾರಾ ನದಿಯನ್ನು ದಾಟಿ ಸುಬ್ರಹ್ಮಣ್ಯ ಊರಿಗೂ ಹೋಗಿಲ್ಲ.

    ಡೇಟ್ ಫಿಕ್ಸ್: ಇದೀಗ ಎರಡೂ ಮಠಗಳ ಸ್ವಾಮೀಜಿಗಳು ಕೋಪ ಮರೆತು- ಒಂದಾಗೋದಕ್ಕೆ ಡೇಟ್ ಫಿಕ್ಸಾಗಿದೆ. ಉಡುಪಿಯ ಅನಂತೇಶ್ವರ ದೇವಸ್ಥಾನದಲ್ಲಿ ಮೇ 29ರಂದು ಉಡುಪಿಯ ಎಲ್ಲಾ ಮಠಾಧೀಶರ ಸಮ್ಮುಖದಲ್ಲಿ ಸುಬ್ರಹ್ಮಣ್ಯಶ್ರೀ ಮತ್ತು ಸೋದೆ ಶ್ರೀಗಳ ಸಮಾಗಮವಾಗಲಿದೆ.

    ಹಿಂದಿನಿಂದ ಆದ ವಿಘಟನೆಯಿಂದ ಅವರನ್ನು ದೂರ ಮಾಡಿರಬಹುದು. ಚಿಂತನೆಯಲ್ಲಿ- ವೈಯಕ್ತಿಕವಾಗಿ ಭಿನ್ನಾಭಿಪ್ರಾಯವಿಲ್ಲ. ಇದೀಗ ಎರಡು ಸ್ವಾಮೀಜಿಗಳ ಸಮಾಗಮವಾಗುತ್ತದೆ. ಇದು ಭಕ್ತರಿಗೆ ಬಹಳ ಸಂತೋಷ ಕೊಡುವ ವಿಚಾರ. ಉಡುಪಿ- ಸುಬ್ರಹ್ಮಣ್ಯ- ಸೋದೆಯಲ್ಲಿ ಪೂಜೆ ನಡೆಯಲಿದೆ. ಕೌಟುಂಬಿಕವಾದ ಜಗಳದಲ್ಲಿ ಅನ್ನ ನೀರು ಬಿಡುವಂತಹ ಹಲವು ಪ್ರಕರಣಗಳು ಕರಾವಳಿಯಲ್ಲಿದೆ. ಇಂತಹ ಮುನಿಸು ಮಾಡಿಕೊಂಡವರು ಕೋಪ ಬಿಡಬಹುದು. ಅದಕ್ಕೊಂದು ಆರಂಭವನ್ನು ಶ್ರೀಧ್ವಯರು ನೀಡುತ್ತಿದ್ದಾರೆ ಎಂದು ಕೃಷ್ಣಮಠದ ಭಕ್ತ ಪ್ರದೀಪ್ ಕುಮಾರ್ ಕಲ್ಕೂರ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದರು.

    ದೇವರಲ್ಲಿ ಕ್ಷಮೆ: ನಾಲ್ಕು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ. ಮೊದಲು ಅನಂತೇಶ್ವರ- ನಂತರ ಚಂದ್ರಮೌಳೇಶ್ವರ ಅಲ್ಲಿಂದ ಶ್ರೀಕೃಷ ಮಠಕ್ಕೆ ತೆರಳಿ ಇಬ್ಬರೂ ಜೊತೆಯಾಗಿ ನಿಂತು ದೇವರಲ್ಲಿ ಕ್ಷಮೆ ಕೋರಲಿದ್ದಾರೆ. ಉಡುಪಿಯ ಕಾರ್ಯಕ್ರಮ ಮುಗಿಸಿ ಕುಕ್ಕೆ ಸುಬ್ರಹ್ಮಣ್ಯ, ಶಿರಸಿಯ ಸೋಂದಾ ಮಠದಲ್ಲಿ ಅಲ್ಲಿನ ದೇವರ ಸಮ್ಮುಖದಲ್ಲಿ ಪ್ರಾರ್ಥನೆ ಮಾಡಿ ಮತ್ತೆ ತಮ್ಮ ಸೋದರತೆಯ ಸಂಬಂಧ ಆರಂಭಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಎರಡೂ ಜಿಲ್ಲೆಯ ಸಾವಿರಾರು ಮಂದಿ ಭಕ್ತರು, ರಾಜ್ಯವ್ಯಾಪಿ ಜನರು ಬಂದು ಪಾಲ್ಗೊಳ್ಳುವ ನಿರೀಕ್ಷೆಯಿದೆ.

  • ಉಡುಪಿ ಆಸ್ಪತ್ರೆ ಆವರಣದಲ್ಲಿ ಆಟವಾಡುತ್ತಿದ್ದ ಬಾಲಕಿಯನ್ನು ಕದ್ದು ಸಿಕ್ಕಿ ಬಿದ್ದ ಕಳ್ಳಿ!

    ಉಡುಪಿ ಆಸ್ಪತ್ರೆ ಆವರಣದಲ್ಲಿ ಆಟವಾಡುತ್ತಿದ್ದ ಬಾಲಕಿಯನ್ನು ಕದ್ದು ಸಿಕ್ಕಿ ಬಿದ್ದ ಕಳ್ಳಿ!

    ಉಡುಪಿ: ಜಿಲ್ಲಾ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆಟವಾಡುತ್ತಿದ್ದ 6 ವರ್ಷದ ಬಾಲಕಿಯೊಬ್ಬಳನ್ನು ಮಹಿಳೆಯೋರ್ವಳು ಅಪಹರಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.

    ಮೂಲತಃ ಕುಂದಾಪುರದ ಉಪ್ಪುಂದ ನಿವಾಸಿ ಗೀತಾ(42) ಬಾಲಕಿಯನ್ನು ಕದ್ದು ಸಿಕ್ಕಿಬಿದ್ದ ಕಳ್ಳಿ. ಪೊಲೀಸರು ಈಗ ಈಕೆಯನ್ನು ಬಂಧಿಸಿದ್ದಾರೆ.

    ಉಡುಪಿ ನಗರದ ಕಿನ್ನಿಮೂಲ್ಕಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಾಳೆ. ಈಕೆಯ ಗಂಡನ ಚಿಕಿತ್ಸೆಗೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕಳೆದ 20 ನಗಳಿಂದ ಇದ್ದು ಗಂಡ ಡಿಸ್ಜಾರ್ಜ್ ಆದರೂ ವಾರ್ಡ್ ನಲ್ಲಿ ಅಡ್ಡಾಡುತ್ತಿದ್ದಳು ಎನ್ನಲಾಗಿದೆ.

    ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?
    ಕಳ್ಳಿ ಗೀತಾ ಆಸ್ಪತ್ರೆ ವಾರ್ಡ್ ನಲ್ಲಿ ದಾಖಲಾಗಿದ್ದ ಹುನಗುಂದ ತಾಲೂಕಿನ ಕೂಲಿಕಾರ್ಮಿಕ ಮುತ್ತಪ್ಪ ಮತ್ತವರ ಪತ್ನಿ ಆಸ್ಮಾ ಜೊತೆಗಿದ್ದ ಸಂದರ್ಭ 6 ವರ್ಷದ ಬಾಲಕಿ ಹೊರಗಡೆ ಆಟವಾಡುತ್ತಿದ್ದಳು. ಇದನ್ನು ಗಮನಿಸಿದ ಆರೋಪಿ ಗೀತಾ ಆಕೆಗೆ ಚಾಕ್ಲೇಟ್ ತೋರಿಸಿ ಕರೆದು ಬಾಲಕಿಯನ್ನು ಕಿನ್ನಿಮೂಲ್ಕಿಯ ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಮನೆಯಲ್ಲಿ ಬಾಲಕಿ ಅತ್ತಾಗ ಕೆನ್ನೆಗೆ ಹೊಡೆದಿದ್ದಾಳೆ. ಆಕೆಯ ಅಳು ಹೆಚ್ಚಾದಾಗ ಸ್ಥಳೀಯರಿಗೆ ಅನುಮಾನ ಬರುತ್ತದೆ ಎಂಬ ಭಯದಲ್ಲಿ ಸಂಜೆ ಮತ್ತೆ ಬಾಲಕಿಯನ್ನು ಆಸ್ಪತ್ರೆಯ ಬಳಿ ಬಿಡಲು ಬಂದಿದ್ದಾಳೆ.

    ಈ ವೇಳೆ ಇತ್ತ ಬಾಲಕಿ ನಾಪತ್ತೆಯಾಗಿದೆಯೆಂದು ಆಕೆಯ ಹೆತ್ತವರು ಆಸ್ಪತ್ರೆ ಸಿಬ್ಬಂದಿಗಳು ಸಿಸಿ ಕ್ಯಾಮರಾ ಚೆಕ್ ಮಾಡುತ್ತಿದ್ದರು. ಇದೇ ಸಂದರ್ಭ ಆರೋಪಿ ಗೀತಾ ಬಾಲಕಿಯನ್ನು ಬಿಡಲು ಆಸ್ಪತ್ರೆಗೆ ಬಂದಿದ್ದು, ಬಂದ ಕಳ್ಳಿಯನ್ನು ಹಿಡಿದು ಮಹಿಳಾ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 50ಕ್ಕೂ ಹೆಚ್ಚು ಅನಾಥ ಶವಗಳ ಸಂಸ್ಕಾರ ಮಾಡಿರೋ ಉಡುಪಿಯ ವಿಶು ಶೆಟ್ರು

    50ಕ್ಕೂ ಹೆಚ್ಚು ಅನಾಥ ಶವಗಳ ಸಂಸ್ಕಾರ ಮಾಡಿರೋ ಉಡುಪಿಯ ವಿಶು ಶೆಟ್ರು

    ಉಡುಪಿ: ಭೂಮಿಯ ಮೇಲೆ ಹುಟ್ಟಿದ ಮೇಲೆ ಯಾರೂ ಅನಾಥರಿಲ್ಲ. ರಕ್ತ ಸಂಬಂಧಗಳು ಕಡಿದುಹೋದರೂ ಮಾನವ ಸಂಬಂಧಗಳು ಇರಲೇಬೇಕು. ಏನಿದು ಫಿಲಾಸಫಿ ಹೇಳುತ್ತಿದ್ದೀರಿ ಅಂತ ಅಂದ್ಕೊಳ್ತಿದ್ದೀರಾ? ಇದು ಇವತ್ತಿನ ಪಬ್ಲಿಕ್ ಹೀರೋ ವಿಶು ಶೆಟ್ಟಿಯವರ ಫಿಲಾಸಫಿ. ಸಂಬಂಧಿಕರೇ ಸಿಗದ 50ಕ್ಕೂ ಹೆಚ್ಚು ಮಂದಿಯ ಅಂತ್ಯಸಂಸ್ಕಾರ ಮಾಡಿದ ಪಬ್ಲಿಕ್ ಹೀರೋ ಕಥೆ ಇದು.

    ಗಟ್ಟಿ ಲೋಹ ಕಬ್ಬಿಣದ ಕೆಲಸ ಮಾಡುತ್ತಿರುವ ಈ ಮೃದು ಹೃದಯಿ ವಿಶು ಕುಮಾರ್ ಶೆಟ್ಟಿ. ತಮ್ಮ ವಿಭಿನ್ನ ಸೇವೆಗಳಿಂದಲೇ ವಿಶು ಶೆಟ್ರು ಅಂತಾನೇ ಉಡುಪಿಯಲ್ಲಿ ಫೇಮಸ್. ಎಲ್ಲೇ ಅಪಘಾತಗಳು ಸಂಭವಿಸಲಿ ಮೊದಲಿಗೆ ವಿಶು ಶೆಟ್ಟಿ ಅವರಿಗೆ ಕಾಲ್ ಬರುತ್ತೆ. ಎಷ್ಟೇ ಬ್ಯುಸಿಯಿದ್ರೂ ಧಾವಿಸಿ ಬರ್ತಾರೆ. ಅಪಘಾತಕ್ಕೆ ತುತ್ತಾದವರನ್ನ ತಾವೇ ಆಸ್ಪತ್ರೆಗೆ ದಾಖಲಿಸಿ, ಮನೆಯವರು ಬರೋತನಕ ನೋಡಿಕೊಳ್ತಾರೆ. ಜಿಲ್ಲಾಸ್ಪತ್ರೆಯಲ್ಲಿ ಅಥವಾ ಅನಾಥರಾಗಿ ಸಾವನ್ನಪ್ಪಿದ್ರೆ ವಾರುಸುದಾರರಿಗಾಗಿ ಕಾದು, ಬರದೆ ಹೋದಲ್ಲಿ ತಾವೇ ಅಂತ್ಯ ಸಂಸ್ಕಾರ ಮಾಡ್ತಾರೆ. ಈವರೆಗೆ 50ಕ್ಕೂ ಹೆಚ್ಚು ಅಪರಿಚಿತ ಶವಗಳ ಅಂತ್ಯಕ್ರಿಯೆ ಮಾಡಿದ್ದಾರೆ.

    ಮನೆಯಲ್ಲಿ ನೋಡಿಕೊಳ್ಳಲಾಗದೆ ಬಿಟ್ಟು ಹೋದ ಹಿರಿಯ ವಯಸ್ಸಿನವರಿಗೆ ಇವರೇ ಆತ್ಮೀಯರು. ಆರೋಗ್ಯ ವಿಚಾರಿಸಿ ನೊಂದ ಮನಸ್ಸುಗಳನ್ನ ಸಂತೈಸ್ತಾರೆ. ಇಷ್ಟೇ ಅಲ್ಲ, ಮೂಕಪ್ರಾಣಿಗಳಿಗೂ ಸಹಾಯ ಮಾಡ್ತಾರೆ. ಚಿಕಿತ್ಸೆಯ ವೆಚ್ಚ ಕೊಡಲಾಗದವರ ಪರವಾಗಿ ಹಣ ಸಂಗ್ರಹಿಸಿ ಆ ಕುಟುಂಬಕ್ಕೆ ಕೊಡುವುದು, ಬಡತನದಿಂದ ಶಿಕ್ಷಣ ಸ್ಥಗಿತಗೊಳಿಸಿದ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸೋ ಕೆಲಸ ಮಾಡ್ತಿದ್ದಾರೆ.

    https://www.youtube.com/watch?v=xSrdgF2Y9Zc

  • ಶೀಘ್ರವೇ ಮಳೆಯಾಗಿ, ಬತ್ತಿದ ಸ್ವರ್ಣೆ ತುಂಬಿ ಹರಿಯಲಿ: ಉಡುಪಿಯಲ್ಲಿ ಮುಸ್ಲಿಂ ಸಮುದಾಯದಿಂದ ಸಾಮೂಹಿಕ ನಮಾಜ್

    ಶೀಘ್ರವೇ ಮಳೆಯಾಗಿ, ಬತ್ತಿದ ಸ್ವರ್ಣೆ ತುಂಬಿ ಹರಿಯಲಿ: ಉಡುಪಿಯಲ್ಲಿ ಮುಸ್ಲಿಂ ಸಮುದಾಯದಿಂದ ಸಾಮೂಹಿಕ ನಮಾಜ್

    ಉಡುಪಿ: ಈ ಬಾರಿ ರಾಜ್ಯ ಬರದಿಂದ ತತ್ತರಿಸಿ ಹೋಗಿದೆ. ಅತೀ ಹೆಚ್ಚು ಮಳೆ ಬೀಳುವ ಉಡುಪಿ ಜಿಲ್ಲೆಯೂ ಬರ ಪೀಡಿತ ಅಂತ ಘೋಷಣೆಯಾಗಿದೆ. ಕಳೆದೊಂದು ತಿಂಗಳಿಂದ ಸ್ವರ್ಣಾ ನದಿ ಬತ್ತಿ ಹೋಗಿದ್ದು, ಉಡುಪಿ ನಗರವಾಸಿಗಳಿಗೆ ಕುಡಿಯಲು ನೀರಿಲ್ಲ. ಪರಮಾತ್ಮ ಕರುಣೆ ತೋರು ಅಂತ ಉಡುಪಿಯ ಬ್ರಹ್ಮಗಿರಿ ಮಸೀದಿಯಲ್ಲಿ ಸಾಮೂಹಿಕ ನಮಾಜ್ ಸಲ್ಲಿಸಲಾಯ್ತು.

    ಇವತ್ತು ಬರುತ್ತೆ, ನಾಳೆ ಬರುತ್ತೆ ಅಂತ ಮಳೆಗಾಗಿ ಕಾದು ಕಾದು ಸುಸ್ತಾದ ಜನ ದೇವರ ಮೊರೆ ಹೋಗಿದ್ದಾರೆ. ಉಡುಪಿಯ ಬ್ರಹ್ಮಗಿರಿಯಲ್ಲಿರುವ ಹಾಶೀಮಾ ಮಸೀದಿಯಲ್ಲಿ ಭಕ್ತರು ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಕಳೆದ ಒಂದು ತಿಂಗಳಿಂದ ಉಡುಪಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. 15 ದಿನಗಳಿಂದ ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣವಿರುತ್ತದೆ. ಆದ್ರೆ ಗಾಳಿ ಮೋಡವನ್ನೆಲ್ಲಾ ಹೊತ್ತುಕೊಂಡು ಸಾಗುತ್ತಿದೆ.

    ಈ ಸಂದರ್ಭದಲ್ಲಿ ಮಸೀದಿಯ ಮೌಲ್ವಿ ಹಶೀಂ ಉಮ್ರಿ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ, ದೇವರು ಮಳೆಯನ್ನು ಹಿಡಿದಿಟ್ಟುಕೊಂಡಿದ್ದಾನೆ. ಭೂಮಿ ಮೇಲಿರುವ ಜನಗಳು ಮಾಡಿರುವ ಪಾಪದಿಂದ ಈ ಸಮಸ್ಯೆಯಾಗಿದೆ. ಪಾಪ ಪರಿಹರಿಸಿ ಮಳೆ ಅನುಗ್ರಹಿಸಿ ಎಂದು ಪ್ರಾರ್ಥನೆ ಮಾಡಿದ್ದೇವೆ. ಅಲ್ಲಾಹ್ ಕರುಣೆ ತೋರುತ್ತಾನೆ ಎಂಬ ನಂಬಿಕೆಯಿದೆ ಎಂದು ಹೇಳಿದರು.

    ನಮಾಜ್ ಹಾಲ್‍ನಲ್ಲಿ ಜಮಾಯಿಸಿ ಅಲ್ಲಾಹ್‍ನಲ್ಲಿ ಕಷ್ಟ ಪರಿಹರಿಸು ಅಂತ ಬೇಡಿಕೊಂಡರು. ಬರದ ಪರಿಸ್ಥಿತಿಯಲ್ಲಿ ಮಹಮ್ಮದ್ ಪೈಗಂಬರ್ ಅಂದು ಮಾಡಿದ ಪ್ರಾರ್ಥನಾ ಸಾಲುಗಳು ಖುರಾನ್‍ನಲ್ಲಿ ಉಲ್ಲೇಖವಾಗಿತ್ತು. ಅದೇ ಸಾಲುಗಳನ್ನು ಮಸೀದಿಯಲ್ಲಿ ಪಠಿಸಲಾಯ್ತು. ಉಡುಪಿಯ ಜೀವನದಿ ಸ್ವರ್ಣಾ ಹರಿವು ನಿಲ್ಲಿಸಿ ತಿಂಗಳು ಕಳೆದಿದೆ. ಹಳ್ಳಕೊಳ್ಳಗಳ ನೀರನ್ನು ಪಂಪ್ ಮಾಡಿ ಕುಡಿಯುವ ನೀರಾಗಿ ಪರಿವರ್ತಿಸಲಾಗುತ್ತಿದೆ. ಭಗವಂತ ಕರುಣೆ ತೋರಿದ್ರೆ ಸಮಸ್ಯೆಯೆಲ್ಲಾ ಪರಿಹಾರವಾಗುತ್ತದೆ. ಪರಿಸರದ ಬಗ್ಗೆ ಜನರು ಕಾಳಜಿಯನ್ನು ಕಳೆದುಕೊಂಡಿದ್ದಾರೆ. ಮರ ಕಡಿಯಲಾಗುತ್ತಿದ್ದು, ಕಾಡು ನಾಶವಾಗಿದೆ. ಈಗಿನಿಂದಲೇ ಎಚ್ಚೆತ್ತುಕೊಳ್ಳದಿದ್ದರೆ ಈ ಸಮಸ್ಯೆ ದ್ವಿಗುಣವಾಗಲಿದೆ ಎಂದು ನಮಾಜ್ ಸಲ್ಲಿಸಿದ ಇಕ್ಬಾಲ್ ನಾಯರ್‍ಕೆರೆ ಆತಂಕ ವ್ಯಕ್ತಪಡಿಸಿದರು.

     

  • ಉಡುಪಿಯ ಕೃಷ್ಣ ಮಠ ನವೀಕರಣ: ಪೌಳಿ ನಿರ್ಮಿಸಿ ಗಾಳಿ-ಬೆಳಕಿಗೆ ವಿಶೇಷ ವ್ಯವಸ್ಥೆ

    ಉಡುಪಿಯ ಕೃಷ್ಣ ಮಠ ನವೀಕರಣ: ಪೌಳಿ ನಿರ್ಮಿಸಿ ಗಾಳಿ-ಬೆಳಕಿಗೆ ವಿಶೇಷ ವ್ಯವಸ್ಥೆ

    ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಸೊಬಗನ್ನ ನೋಡದವರುಂಟೆ. ಆದ್ರೆ ನೀವಂದುಕೊಂಡ ಹಾಗೆ ಹಳೆ ಕೃಷ್ಣಮಠ ಉಡುಪಿಯಲ್ಲಿ ಕಾಣಸಿಗೋದಿಲ್ಲ. ಯಾಕೆಂದರೆ ಕಡೆಗೋಲು ಕೃಷ್ಣನ ಸನ್ನಿಧಾನ ಸಂಪೂರ್ಣ ಬದಲಾಗಿದೆ.

    ಕೃಷ್ಣಮಠಕ್ಕೆ ದಿನನಿತ್ಯ ಸಾವಿರಾರು ಮಂದಿ ಭಕ್ತರು ಬಂದು ಹೋಗುತ್ತಾರೆ. ಮಠದೊಳಗೆ ನೂರಿನ್ನೂರು ಜನ ಸೇರಿದ್ರೂ ಉಸಿರುಗಟ್ಟುವ ವಾತಾವರಣವಿರುತ್ತಿತ್ತು. ಮಹಾಪೂಜೆ ವೇಳೆ ಗಾಳಿಯ ಸಂಚಾರವೂ ಇರುತ್ತಿರಲಿಲ್ಲ. ಆದರೆ ಈಗ ಕೃಷ್ಣಮಠದ ಮೇಲೊಂದು ಪೌಳಿ ನಿರ್ಮಿಸಿ ಗಾಳಿ-ಬೆಳಕಿಗೆ ವ್ಯವಸ್ಥೆ ಮಾಡಲಾಗಿದೆ.

    800 ವರ್ಷಗಳ ಇತಿಹಾಸವುಳ್ಳ ಕೃಷ್ಣ ಮಠ 16 ವರ್ಷದ ಹಿಂದೊಮ್ಮೆ ನವೀಕರಣಗೊಂಡಿತ್ತು. ಪೇಜಾವರ ಶ್ರೀಗಳ ಪರ್ಯಾಯ ಹಿನ್ನೆಲೆಯಲ್ಲಿ 3 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ನವೀಕರಣ ಮಾಡಲಾಗ್ತಿದೆ. ಮೇಲ್ಛಾವಣಿಗೆ ಹಿತ್ತಾಳೆಯ ತಟ್ಟೆಗಳನ್ನು ಅಳವಡಿಸಲಾಗಿದೆ. ಪೌಳಿಗೆ ಮರದ ಕೆತ್ತನೆಗಳು, ಬೃಹತ್ ಕಂಬಗಳನ್ನು ಅಳವಡಿಸಲಾಗಿದೆ.

    ಇದೇ ತಿಂಗಳ 18ರಂದು ಅದ್ಧೂರಿ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಪೊಡವಿಗೊಡೆಯನ ಮಠ ಹೊಸ ರೂಪಿನೊಂದಿಗೆ ಭಕ್ತಾದಿಗಳನ್ನು ಆಕರ್ಷಿಸ್ತಿದೆ.

     

  • ಬೆಂಗಳೂರು, ಮಂಗಳೂರು, ಬಾಗಲಕೋಟೆಯ ವಿದ್ಯಾರ್ಥಿಗಳಿಗೆ ಔಟ್ ಆಫ್ ಔಟ್

    ಬೆಂಗಳೂರು, ಮಂಗಳೂರು, ಬಾಗಲಕೋಟೆಯ ವಿದ್ಯಾರ್ಥಿಗಳಿಗೆ ಔಟ್ ಆಫ್ ಔಟ್

    ಬೆಂಗಳೂರು: ಈ ಬಾರಿಯ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಮೂವರು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ತೆಗೆಯುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ.

    ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಎಂಇಎಸ್ ಕಿಶೋರ ಕೇಂದ್ರ ಹೈಸ್ಕೂಲಿನ ಸುಮಂತ್ ಹೆಗ್ಡೆ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಡಬದ ಸೈಂಟ್ ಜೋಕಿಮ್ಸ್ ಹೈ ಸ್ಕೂಲಿನ  ಪೂರ್ಣಾನಂದ, ಬಾಗಲಕೋಟೆಯ ಜಮಖಂಡಿಯ ಎಸ್‍ಆರ್‍ಎ ಶಾಲೆಯ ಪಲ್ಲವಿ 625 ಅಂಕಗಳಿಸಿದ್ದಾರೆ.

    ಈ ಬಾರಿ ಒಟ್ಟು 5,81,134 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ.67.87 ಫಲಿತಾಂಶ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.7.24 ರಷ್ಟು ಫಲಿತಾಂಶ ಇಳಿಕೆಯಾಗಿದ್ದು ಕಳೆದ 6 ವರ್ಷದಲ್ಲೇ ಕಳಪೆ ಫಲಿತಾಂಶ ದಾಖಲಾಗಿದೆ.

    ಪಿಯುಸಿ ಫಲಿತಾಂಶದಂತೆ ಎಸ್‍ಎಸ್‍ಎಲ್‍ಸಿಯಯಲ್ಲೂ ಉಡುಪಿ ಮತ್ತು ದಕ್ಷಿಣ ಕನ್ನಡ ಅನುಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಪಡೆದಿದೆ. ಚಿಕ್ಕೋಡಿ ಮೂರನೇ ಸ್ಥಾನವನ್ನು ಪಡೆದರೆ ಬೀದರ್ ಕೊನೆಯ ಸ್ಥಾನವನ್ನು ಪಡೆದಿದೆ.

    ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದು 2,96,426 ಮಂದಿ ವಿದ್ಯಾರ್ಥಿನಿಯರು ತೇರ್ಗಡೆಯಗಿದ್ದರೆ, 2,84,708 ವಿದ್ಯಾರ್ಥಿಗಳು ತೇಗಡೆಯಾಗಿದ್ದಾರೆ. 924 ಶಾಲೆಗಳಲ್ಲಿ ಶೇ.100 ಫಲಿತಾಂಶ ದಾಖಲಾಗಿದ್ದು, 60 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ. ಶೂನ್ಯ ಫಲಿತಾಂಶ ದಾಖಲಾದ ಶಾಲೆಗಳಲ್ಲಿ 51 ಖಾಸಗಿ ಶಾಲೆಗಳು ಸೇರಿವೆ.

    ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಭಾಗದ 3,17,570( ಶೇ.74.12) ವಿದ್ಯಾರ್ಥಿಗಳು ಪಾಸಾಗಿದ್ದರೆ, ನಗರ ಪ್ರದೇಶದ 2,42,869( ಶೇ.72.18) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

    36,138 ವಿದ್ಯಾರ್ಥಿಗಳು ಎ+ ಶ್ರೇಣಿ ಪಡೆದರೆ, 93,332 ವಿದ್ಯಾರ್ಥಿಗಳು ಎ ಶ್ರೇಣಿ ಪಡೆದಿದ್ದಾರೆ. ಮೂವರು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳಿಸಿದ್ದಾರೆ.

    ಪೂರಕ ಪರೀಕ್ಷೆ-ಜೂನ್ 15 ರಿಂದ 22ರವರೆಗೆ ನಡೆಯಲಿದ್ದು, ಮರು ಏಣಿಕೆ ಮತ್ತು ಉತ್ತರ ಪತ್ರಿಕೆ ಪ್ರತಿಗೆ ಅರ್ಜಿ ಸಲ್ಲಿಸಲು ಮೇ 22 ಕೊನೆ ದಿನಾಂಕವಾಗಿದೆ.

    ಎಸ್‍ಎಸ್‍ಎಲ್‍ಸಿ ಟಾಪರ್ ಬೆಂಗಳೂರಿನ ಸುಮಂತ್ ಹೆಗ್ಡೆಗೆ ತಾಯಿ ಚೇತನಾ ಅವರು ಸಿಹಿ ತಿನ್ನಿಸುತ್ತಿರುವುದು

     

  • ಕೋಚಿಂಗ್ ಇಲ್ದೇ, ಟ್ಯೂಷನ್‍ಗೆ ಹೋಗದೆ ಉಡುಪಿಯ ರಾಧಿಕಾ ಪೈ ರಾಜ್ಯಕ್ಕೆ ಫಸ್ಟ್

    ಕೋಚಿಂಗ್ ಇಲ್ದೇ, ಟ್ಯೂಷನ್‍ಗೆ ಹೋಗದೆ ಉಡುಪಿಯ ರಾಧಿಕಾ ಪೈ ರಾಜ್ಯಕ್ಕೆ ಫಸ್ಟ್

    ಉಡುಪಿ: ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದೆ. ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದ ರಾಧಿಕಾ ಪೈ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಫಸ್ಟ್ ಪ್ಲೇಸ್ ಬಂದಿದ್ದಾಳೆ. ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿನಿಯಾಗಿರುವ ಈಕೆ, ಕೋಚಿಂಗ್ ಇಲ್ಲದೆ- ಟ್ಯೂಷನ್‍ಗೆ ಹೋಗದೆ ರಾಜ್ಯಕ್ಕೆ ಫಸ್ಟ್ ಬಂದಿದ್ದಾಳೆ. ರಾಧಿಕಾ ಮನಬಿಚ್ಚಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾಳೆ.

    ರಿಸಲ್ಟ್ ಬಂತು ಫಸ್ಟ್ ರಿಯಾಕ್ಷನ್ ಏನು?
    ನನಗೆ ಈ ಸುದ್ದಿ ತಿಳಿದು ತುಂಬಾ ಖುಷಿಯಾಯ್ತು. ಎಲ್ಲರೂ ನನಗೆ ಸಪೋರ್ಟ್ ಮಾಡಿದ್ದಾರೆ. ಮನೆಯಲ್ಲಿ ಮತ್ತು ಕಾಲೇಜಿನಲ್ಲಿ ಯಾವುದೇ ಸಮಸ್ಯೆಗಳು ಬಂದಾಗ ಅದನ್ನು ಪರಿಹಾರ ಮಾಡಿಕೊಟ್ಟಿದ್ದಾರೆ. ದೇವರ ಆಶೀರ್ವಾದ ನನ್ನ ಮೇಲೆ ಇತ್ತು. ನನ್ನ ಹೆತ್ತವರು ಯಾವುದೇ ಒತ್ತಡ ಹಾಕಿಲ್ಲ. ಫ್ರೆಂಡ್ಸ್ ಸಪೋರ್ಟ್- ಟೀಚರ್ಸ್ ಸಂಪೂರ್ಣ ಬೆಂಬಲ ನನ್ನ ಈ ಸಾಧನೆಗೆ ಕಾರಣ.

    ಕೋಚಿಂಗ್ ಇಲ್ಲದೆ ಈ ಸಾಧನೆ ಸಾಧ್ಯನಾ?
    ಶಾಲೆಯಲ್ಲಿ ಉತ್ತಮ ಗುಣಮಟ್ಟದ ಟೀಚಿಂಗ್ ಇದೆ. ಕೋಚಿಂಗ್ ಹೋಗುವ ಅವಶ್ಯಕತೆಯೇ ಬೇಕಾಗಿಲ್ಲ ಅಂತ ಅನ್ನಿಸಿತು. ಲೆಕ್ಚರರ್ಸ್ ಎಲ್ಲಾ ಕಾನ್ಸೆಪ್ಟ್ ನೀಟಾಗಿ ಟೀಚ್ ಮಾಡ್ತಾರೆ. ಟೀಚಿಂಗಲ್ಲಿ ಸಮಸ್ಯೆಯಿದ್ದರೆ- ಅರ್ಥಾಗದೆ ಇದ್ದರೆ ಕೋಚಿಂಗ್ ಟ್ಯೂಷನ್ ಬೇಕು. ಆದ್ರೆ ನಮ್ಮ ಸರಸ್ವತಿ ವಿದ್ಯಾಲಯದಲ್ಲಿ ಎಲ್ಲಾ ರೀತಿಯಲ್ಲಿ ಅರ್ಥಮಾಡಿಸಿ ಬೋಧನೆ ಮಾಡುತ್ತಾರೆ. ಹೀಗಾಗಿ ಟ್ಯೂಷನ್ ಗೋಜಿಗೆ ನಾನು ಹೋಗಿಲ್ಲ.

    ರಾಧಿಕಾ ಓದಿ ಓದಿ ಸಣ್ಣಾಗಿದ್ದಾ?
    ನಾನು ಓದಿ ಓದಿ ಸಣ್ಣ ಆಗಿದ್ದಲ್ಲ. ನಮ್ಮ ಮನೆಯಲ್ಲಿ ಎಲ್ಲರೂ ಸಣ್ಣವೇ. ನಮ್ಮ ಹೆರಿಡೇಟರಿ ಪ್ರಕಾರ ನಾನು ಸಣ್ಣ. ಬಯಾಲಜಿ ಸ್ಟೂಡೆಂಟಲ್ಲ ನಾನು. ಕರೆಕ್ಟ್ ಗೊತ್ತು ಇದ್ರ ಬಗ್ಗೆ.

    ಮುಂದೇನು?
    ಮುಂದೆ ನಾನು ಇಂಜಿನಿಯರಿಂಗ್ ಮಾಡ್ಬೇಕು. ಇನ್ಪಾರ್ಮೇಶನ್ ಸಾಯನ್ಸ್ ಬ್ರಾಂಚ್‍ನಲ್ಲಿ ನಾನು ಇಂಜಿನಿಯರಿಂಗ್ ಮಾಡುತ್ತೇನೆ.

    ಈ ಪ್ಲೇಸನ್ನು ನೀವು ನಿರೀಕ್ಷೆ ಮಾಡಿದ್ರಾ?
    10ನೇ ತರಗತಿಯಲ್ಲಿ ನಾನು ದೊಡ್ಡ ಮಾರ್ಕ್ ನಿರೀಕ್ಷೆ ಮಾಡಿದ್ದೆ. ಆದ್ರೆ ಅಷ್ಟು ಮಾರ್ಕು ಸಿಕ್ಕಿಲ್ಲ. ಹಾಗಾಗಿ ಈ ಬಾರಿ ನಿರೀಕ್ಷೆ ಇಡದೆ ಓದಿದೆ. ಒಳ್ಳೆ ಮಾರ್ಕ್ ಬರುತ್ತೆ ಅನ್ನೋ ಭರವಸೆ ಇತ್ತು. ನಿರೀಕ್ಷೆಗೆ ಮೀರಿ ಪರ್ಸಂಟೇಜ್ ಬಂದಿದೆ.

    ಇದನ್ನೂ ಓದಿ: ಪಿಯು ಫಲಿತಾಂಶ: ಮೂರು ವಿಭಾಗದ ಟಾಪ್ 10 ಟಾಪರ್ ಲಿಸ್ಟ್ ಇಲ್ಲಿದೆ

    ಹಳ್ಳಿ ಪ್ರದೇಶ ಕಡೆಗಣಿಸಬೇಡಿ!
    ಮಹಾ ನಗರಗಳಿಗೆ ರ್ಯಾಂಕ್ ಬರ್ತಾ ಇತ್ತು. ಆದ್ರೆ ಈ ಬಾರಿ ಹಳ್ಳಿಗೆ- ಗ್ರಾಮೀಣ ಪ್ರದೇಶಕ್ಕೆ ಮೊದಲ ಸ್ಥಾನ ಬಂದಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೆಂದು ಯಾರೂ ನಿರ್ಲಕ್ಷ್ಯ ಮಾಡಬೇಡಿ. ಸಿಟಿಗೆ ಕೊಡುವ ಸಪೋರ್ಟ್ ಹಳ್ಳಿಗೂ ಕೊಡಿ ಎಂದು ರಾಧಿಕಾ ಪೈ ಹೇಳಿದ್ದಾರೆ.

    ರಾಧಿಕಾ ಮನೆಯಲ್ಲಿ ಹಬ್ಬದ ವಾತಾವರಣವಿದೆ. ಸ್ಥಳೀಯರು- ಸಂಬಂಧಿಕರು- ಶಿಕ್ಷಕರು- ಕ್ಲಾಸ್ ಮೇಟ್ಸ್- ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು ಬಂದು ಬಂದು ಶುಭ ಹಾರೈಸುತ್ತಿದ್ದಾರೆ. ಬರ್ತಾ ಸಿಹಿತಿಂಡಿಗಳನ್ನು ತರುತ್ತಿದ್ದಾರೆ. ಒಟ್ಟಿನಲ್ಲಿ ಗಂಗೊಳ್ಳಿಗೆ ಗಂಗೊಳ್ಳಿಯೇ ರಾಧಿಕಾ ಪೈ ಸಾಧನೆಯನ್ನು ಕೊಂಡಾಡುತ್ತಿದೆ.

  • SSLC ಫಲಿತಾಂಶ: ಉಡುಪಿ ಫಸ್ಟ್, ದಕ್ಷಿಣ ಕನ್ನಡ ಸೆಕೆಂಡ್, ಬೀದರ್ ಲಾಸ್ಟ್

    SSLC ಫಲಿತಾಂಶ: ಉಡುಪಿ ಫಸ್ಟ್, ದಕ್ಷಿಣ ಕನ್ನಡ ಸೆಕೆಂಡ್, ಬೀದರ್ ಲಾಸ್ಟ್

    ಬೆಂಗಳೂರು: 2016-17ನೇ ಸಾಲಿನ ಎಸ್‍ಎಸ್‍ಎಲ್ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಒಟ್ಟು 5,81,134 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ.67.87 ಫಲಿತಾಂಶ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.7.24 ರಷ್ಟು ಫಲಿತಾಂಶ ಇಳಿಕೆಯಾಗಿದ್ದು ಕಳೆದ 6 ವರ್ಷದಲ್ಲೇ ಕಳಪೆ ಫಲಿತಾಂಶ ದಾಖಲಾಗಿದೆ.

    ಪಿಯುಸಿ ಫಲಿತಾಂಶದಂತೆ ಎಸ್‍ಎಸ್‍ಎಲ್‍ಸಿಯಯಲ್ಲೂ ಉಡುಪಿ ಮತ್ತು ದಕ್ಷಿಣ ಕನ್ನಡ ಅನುಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಪಡೆದಿದೆ. ಚಿಕ್ಕೋಡಿ ಮೂರನೇ ಸ್ಥಾನವನ್ನು ಪಡೆದರೆ ಬೀದರ್ ಕೊನೆಯ ಸ್ಥಾನವನ್ನು ಪಡೆದಿದೆ.

    ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದು 2,96,426 ಮಂದಿ ವಿದ್ಯಾರ್ಥಿನಿಯರು ತೇರ್ಗಡೆಯಗಿದ್ದರೆ, 2,84,708 ವಿದ್ಯಾರ್ಥಿಗಳು ತೇಗಡೆಯಾಗಿದ್ದಾರೆ. 924 ಶಾಲೆಗಳಲ್ಲಿ ಶೇ.100 ಫಲಿತಾಂಶ ದಾಖಲಾಗಿದ್ದು, 60 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ. ಶೂನ್ಯ ಫಲಿತಾಂಶ ದಾಖಲಾದ ಶಾಲೆಗಳಲ್ಲಿ 51 ಖಾಸಗಿ ಶಾಲೆಗಳು ಸೇರಿವೆ.

    ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಭಾಗದ 3,17,570( ಶೇ.74.12) ವಿದ್ಯಾರ್ಥಿಗಳು ಪಾಸಾಗಿದ್ದರೆ, ನಗರ ಪ್ರದೇಶದ 2,42,869( ಶೇ.72.18) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

    36,138 ವಿದ್ಯಾರ್ಥಿಗಳು ಎ+ ಶ್ರೇಣಿ ಪಡೆದರೆ, 93,332 ವಿದ್ಯಾರ್ಥಿಗಳು ಎ ಶ್ರೇಣಿ ಪಡೆದಿದ್ದಾರೆ. ಮೂವರು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳಿಸಿದ್ದಾರೆ.

    ಪೂರಕ ಪರೀಕ್ಷೆ-ಜೂನ್ 15 ರಿಂದ 22ರವರೆಗೆ ನಡೆಯಲಿದ್ದು,  ಮರು ಏಣಿಕೆ ಮತ್ತು ಉತ್ತರ ಪತ್ರಿಕೆ ಪ್ರತಿಗೆ ಅರ್ಜಿ ಸಲ್ಲಿಸಲು ಮೇ 22 ಕೊನೆ ದಿನಾಂಕವಾಗಿದೆ.