Tag: ಉಡುಪಿ

  • ಮೋದಿಯೆದುರು ಸಿದ್ದರಾಮಯ್ಯ ಬಚ್ಚ- ಮಾಜಿ ಸಿಎಂ ಯಡಿಯೂರಪ್ಪ

    ಮೋದಿಯೆದುರು ಸಿದ್ದರಾಮಯ್ಯ ಬಚ್ಚ- ಮಾಜಿ ಸಿಎಂ ಯಡಿಯೂರಪ್ಪ

    ಉಡುಪಿ: ಮೋದಿಯೆದುರು ಸಿದ್ದರಾಮಯ್ಯ ಬಚ್ಚ. ನಿನಗೆ ಯಾರು ಭಯಪಡ್ತಾರೆ ಸಿದ್ದರಾಮಯ್ಯಾ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

    ಉಡುಪಿಯಲ್ಲಿ ನಡೆದ ಪರಿವರ್ತನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ಮೋದಿಯ ಮೇಲೆ ಒಂದೂ ಆರೋಪಗಳಿಲ್ಲ. ನಿನ್ನ ಮೈಮೇಲೆ ಆರೋಪಗಳ ಸುರಿಮಳೆಯೇ ಇದೆ. ಸಿಎಂ ಅಂತಹ ವ್ಯಕ್ತಿಗೆ ಪ್ರಧಾನಿ ಮೋದಿ ಹೆದರಬೇಕಾ ಅಂತ ಪ್ರಶ್ನೆಮಾಡಿದರು.

    ಶ್ರೀಕೃಷ್ಣ- ಮಂಜುನಾಥಸ್ವಾಮಿ ಸಿಎಂ ಅವರನ್ನು ಕ್ಷಮಿಸಲ್ಲ. ಉಡುಪಿ ಶ್ರೀಕೃಷ್ಣಮಠಕ್ಕೆ ಸಿಎಂ ಬರದಿರುವುದು ಒಳ್ಳೆದಾಯ್ತು. ಸಿಎಂ ಬಂದ್ರೆ ಕೃಷ್ಣ ಮಠ ಅಪವಿತ್ರ ಆಗುತ್ತಿತ್ತು. ಧರ್ಮಸ್ಥಳ ದೇವಸ್ಥಾನಕ್ಕೆ ಸಿಎಂ ಮೀನು ಮಾಂಸ ತಿಂದು ಹೋದರು. ಮಂಜುನಾಥ ಸ್ವಾಮಿ ಬಾಗಿಲಲ್ಲೇ ತಡೆದು ನಿಲ್ಲಿಸಿದ. ದೇವಸ್ಥಾನದ ಒಳಗೆ ಪ್ರವೇಶಕ್ಕೆ ಅವಕಾಶ ಕೊಡಲಿಲ್ಲ ಎಂದರು. ಶ್ರೀಕೃಷ್ಣ- ಮಂಜುನಾಥ ನಿನ್ನನ್ನು ಕ್ಷಮಿಸಲ್ಲ ಸಿದ್ದರಾಮಯ್ಯ ಎಂದು ಶಾಪ ಹಾಕಿದರು.

    ನಾನು ರಕ್ತದಲ್ಲಿ ಬರೆದುಕೊಡುತ್ತೇನೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನಾನು ಸಿಎಂ ಆಗಲು ಪರಿವರ್ತನಾ ಯಾತ್ರೆ ಮಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಲು ಯಾತ್ರೆ ಹೊರಟಿದ್ದೇನೆ ಎಂದರು.

    ಸಚಿವ ಜಾರ್ಜ್ ರಾಜೀನಾಮೆ ನೀಡಬೇಕು ಇಲ್ಲದಿದ್ದರೆ ಇಂದು ಚಳಿಗಾಲದ ಅಧಿವೇಶನ ನಡೆಯಲು ಬಿಡಲ್ಲ ಎಂದು ಸವಾಲು ಹಾಕಿದರು. ಕ್ಲೀನ್ ಚಿಟ್ ಸಿಕ್ಕ ಎಲ್ಲ ಕೇಸು ಮರು ತನಿಖೆ ಮಾಡುತ್ತೇನೆ. ಸತ್ಯಾಂಶವನ್ನು ಹೊರಗೆಳೆಯುತ್ತೇನೆ ಅಂತ ಬಿಸೆ ವೈ ಹೇಳಿದ್ರು.

     

     

  • ಕುದುರೆ ರೇಸಲ್ಲಿ ಹಿಂಸೆ ಇಲ್ವಾ? ಪೇಟಾದ್ದು ಅತಿಯಾಯ್ತು- ಸಚಿವ ಡಿವಿಎಸ್ ವಾಗ್ದಾಳಿ

    ಕುದುರೆ ರೇಸಲ್ಲಿ ಹಿಂಸೆ ಇಲ್ವಾ? ಪೇಟಾದ್ದು ಅತಿಯಾಯ್ತು- ಸಚಿವ ಡಿವಿಎಸ್ ವಾಗ್ದಾಳಿ

    ಉಡುಪಿ: ಕರಾವಳಿ ಭಾಗದ ಜನಪದ ಕಂಬಳ ಕ್ರೀಡೆಗೆ ಪೇಟಾ ಮತ್ತೆ ಅಡ್ಡಗಾಲು ಹಾಕಿರುವ ಹಿನ್ನೆಲೆಯಲ್ಲಿ ಪ್ರಾಣಿದಯಾ ಸಂಘದ ವಿರುದ್ಧ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಣಿದಯಾ ಸಂಘದ್ದು ಯಾಕೋ ಅತಿಯಾಯ್ತು ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೇಟಾದವರು ಸಮಗ್ರ ಅಧ್ಯಯನ ಮಾಡಲಿ. ಕೋಣಗಳ ಪಾಲನೆ ಪೋಷಣೆ ನಿಮಗೆ ಗೊತ್ತಾ? ಸಾವಿರಾರು ಕೋಣಗಳ ಬಲಿ ದಿನನಿತ್ಯ ನಡೆಯುತ್ತಿರುವಾಗ ಕಸಾಯಿಖಾನೆಯ ವಿರುದ್ಧ ಪೇಟಾ ಏನು ಮಾಡಿದೆ ಎಂದು ಪ್ರಶ್ನೆ ಮಾಡಿದ್ರು.

    ಕಂಬಳ ಕರಾವಳಿ ಭಾಗಕ್ಕಿರುವ ಏಕೈಕ ಮನರಂಜನಾ ಕ್ರೀಡೆ. ನಾವು ಕುದುರೆ ರೇಸಿಗೆ ಹೋಗಲ್ಲ. ಪೇಟಾದವರು ಕುದುರೆ ರೇಸಿಗೆ ಹೋಗಿಲ್ವಾ? ಕುದುರೆಗೆ ಹೊಡೆಯೋದನ್ನು ನೀವು ನೋಡಿಲ್ವಾ ಎಂದು ಸವಾಲೆಸೆದರು.

    ಪೇಟಾದವರು ಪ್ರಚಾರಕ್ಕೆ ಹೀಗೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ-ರಾಜ್ಯ ಸರಕಾರ ಹಿಂಸೆಯ ಪರವಾಗಿಲ್ಲ ಎಂದು ಮತ್ತೆ ಮತ್ತೆ ಸ್ಪಷ್ಟಪಡಿಸುತ್ತೇವೆ. ಪೇಟಾದವರದ್ದು ಇದು ಬೇಜವಾಬ್ದಾರಿಯುತ ನಡವಳಿಕೆಯಾಗಿದೆ. ಎಲ್ಲದಕ್ಕೂ ಕೊನೆಯೆಂಬುದು ಇದೆ. ಸುಪ್ರೀಂ ಕೋರ್ಟ್ ಎಲ್ಲದಕ್ಕೂ ಕೊನೆಯನ್ನು ಮಾಡುತ್ತದೆ ಎಂದು ಡಿವಿಎಸ್ ಗೌಡ ಕಿಡಿಕಾರಿದ್ರು.

    ಪೇಟಾ ಏನ್ ಹೇಳಿದೆ?: ಕಂಬಳದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಲೇರಲು ಪೇಟಾ ತೀರ್ಮಾನ ಮಾಡಿದೆ. ನಿನ್ನೆ ಮೂಡಬಿದ್ರೆಯಲ್ಲಿ ಕಂಬಳದ ಕೋಣಗಳಿಗೆ ಚಿತ್ರ ಹಿಂಸೆ ನೀಡಲಾಗಿದೆ. ಈಗಾಗಲೇ ಸುಪ್ರೀಂ ಕೋರ್ಟ್ ಹಿಂಸೆ ರಹಿತ ಕಂಬಳ ನಡೆಸಬೇಕೆಂದು ಹೇಳಿದ್ರೂ ಈ ಆದೇಶ ಪಾಲನೆಯಾಗಿಲ್ಲ. ಕೋಣದ ಮೂಗಿಗೆ ಹಗ್ಗ ಹಾಕಿ ಹಿಂಸೆ ಕೊಡಲಾಗಿದೆ. ಅಲ್ಲದೆ ಕಂಬಳದ ಗದ್ದೆಯಲ್ಲಿ ಓಡಿಸುವಾಗ ಕೋಣಗಳಿಗೆ ಕೋಲಿನಿಂದ ಹೊಡೆದಿದ್ದಾರೆ.

    ಕಂಬಳ ಮುಗಿಸಿ ಬಂದ ಮೇಲೆ ಕೋಣಗಳಿಗೆ ಉಸಿರಾಟಕ್ಕೂ ಕಷ್ಟವಾಗುತ್ತದೆ. ಇದ್ರಿಂದ ಈ ಕಂಬಳದಲ್ಲಿ ಪ್ರಾಣಿ ಹಿಂಸೆ ನಡೆಯುತ್ತದೆ. ಈ ವೇಳೆ ರಹಸ್ಯವಾಗಿ ಚಿತ್ರೀಕರಣ ಮಾಡಲಾಗಿದೆ. ಕೋಣಗಳನ್ನ ಹಿಂಸಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಫೋಟೋ ಮತ್ತು ವಿಡಿಯೋವನ್ನ ಕೋರ್ಟ್ ಗಮನಕ್ಕೆ ತರುತ್ತೇವೆ. ಇದನ್ನು ಬ್ಯಾನ್ ಮಾಡಲು ಸುಪ್ರೀಂ ಕೋರ್ಟ್‍ಗೆ ಅರ್ಜಿ ಹಾಕುತ್ತೇವೆ ಅಂತಾ ಪೇಟಾ ಸಂಸ್ಥೆ ಪ್ರಕಟಣೆ ಹೊರಡಿಸಿತ್ತು.

  • ರಾವಣನಿಗಿಂತ ಸಿದ್ದರಾಮಯ್ಯ ದುಷ್ಟ- ಸಂಸದ ನಳೀನ್ ಕುಮಾರ್ ಕಟೀಲ್

    ರಾವಣನಿಗಿಂತ ಸಿದ್ದರಾಮಯ್ಯ ದುಷ್ಟ- ಸಂಸದ ನಳೀನ್ ಕುಮಾರ್ ಕಟೀಲ್

    ಉಡುಪಿ: ಲಂಕಾಧಿಪತಿ ರಾವಣನಿಗಿಂತ ಸಿಎಂ ಸಿದ್ದರಾಮಯ್ಯ ದುಷ್ಟ. ರಾವಣ ಸೀತೆಯ ಅಪಹರಣ ಮಾತ್ರ ಮಾಡಿದ್ದ, ಸಿದ್ದರಾಮಯ್ಯ ಹಿಂದೂ ಸಮಾಜ ಒಡೆದು ರೈತರ ಆತ್ಮಹತ್ಯೆಗೆ ಕಾರಣವಾಗುತ್ತಿದ್ದಾನೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಂಸದ ನಳೀನ್ ಕುಮಾರ್ ಕಟೀಲ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

    ಉಡುಪಿಯ ಕಾಪು ತಾಲೂಕಿನಲ್ಲಿ ನಡೆದ ಪರಿವರ್ತನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು. ಸಿಎಂ ಗೋವು ಹತ್ಯೆಗೆ ಬೆಂಬಲವಾಗಿ ನಿಲ್ಲುತ್ತಿದ್ದಾನೆ. ಹಿಂದೂ ಸಂಸ್ಕೃತಿ ನಾಶ ಮಾಡಲು ಸಿದ್ದರಾಮಯ್ಯ ಹೊರಟಿದ್ದಾನೆ ಎಂದು ತನ್ನ ಬೈಗುಳವನ್ನು ಮುಂದುವರೆಸಿದರು.

    ಸಿದ್ದರಾಮಯ್ಯ ಅವರ ಅಧಿಕಾರಾವಧಿ ಮೂರು ತಿಂಗಳಿಗೆ ಮುಗಿಯುತ್ತದೆ. ಯಡಿಯೂರಪ್ಪ ರಾಮಭಕ್ತನಾಗಿ ಬರುತ್ತಾನೆ. ಬಿಎಸ್ ವೈ ರಾಜ್ಯದಲ್ಲಿ ಸವಾರಿ ಮಾಡುತ್ತಾನೆ ಎಂದು ನಳೀನ್ ಕುಮಾರ್ ಕಟೀಲ್ ಪುರಾಣದ ಕಥೆಯನ್ನು ಹೋಲಿಕೆ ಮಾಡಿದರು.

    ಅಧಿಕಾರದಲ್ಲಿರುವ ಸಿದ್ದರಾಮಯ್ಯನನ್ನು ಯಡಿಯೂರಪ್ಪ ನಾಶ ಮಾಡಿಬಿಡುತ್ತಾನೆ. ಸಿದ್ದರಾಮಯ್ಯನಿಗೆ ಯಡಿಯೂರಪ್ಪನಿಂದ ಮುಕ್ತಿ ಸಿಗುತ್ತದೆ ಎಂದು ಹೇಳಿದರು. ಇದೀಗ ಏಕವಚನದಲ್ಲಿ ಸಿಎಂ ಮೇಲೆ ವಾಗ್ದಾಳಿ ನಡೆಸಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸಂಸದ ನಳೀನ್ ಕುಮಾರ್ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

    ಉಡುಪಿಯ ಕಾಪುವಿನಲ್ಲಿ ಸಂಸದ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ ಮುಂದುವರೆಸಿ, ನಿದ್ರಾದೇವಿ ಕುಂಭಕರ್ಣನ ಮಡದಿ. ಕುಂಭಕರ್ಣ ಸತ್ತ ನಂತರ ನಿದ್ರಾದೇವಿ ಸಿಎಂ ಸಿದ್ದರಾಮಯ್ಯರನ್ನು ಅಪ್ಪಿಕೊಂಡಿದ್ದಾಳೆ ಎಂದು ವ್ಯಂಗ್ಯವಾಡಿದರು. ಕುಂಭಕರ್ಣನ ಹತ್ಯೆಯ ನಂತರ ಸಿದ್ದರಾಮಯ್ಯನನ್ನು ನಿದ್ರಾದೇವಿ ಆಶ್ರಯಿಸಿದ್ದಾಳೆ ಎಂದು ನಳೀನ್ ಕುಮಾರ್ ವ್ಯಂಗ್ಯವಾಡಿದ್ದಾರೆ.

  • ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಕುಂದಾಪುರ ಶಾಸಕ ಶ್ರೀನಿವಾಸ ಶೆಟ್ಟಿ

    ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಕುಂದಾಪುರ ಶಾಸಕ ಶ್ರೀನಿವಾಸ ಶೆಟ್ಟಿ

    ಉಡುಪಿ: ಕುಂದಾಪುರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿಗೆ ಸೇರಲು ನಿರ್ಧರಿಸಿದ್ದಾರೆ. ಬಿಜೆಪಿಯಿಂದ ನನಗೆ ಆಹ್ವಾನ ಬಂದಿದೆ ಪಕ್ಷೇತರ ಶಾಸಕತ್ವದ ತಾಂತ್ರಿಕ ಸಮಸ್ಯೆ ಕಳೆದ ಕೂಡಲೇ ಬಿಜೆಪಿಗೆ ಸೇರ್ಪಡೆಯಾಗುತ್ತೇನೆ ಎಂದು ಖಚಿತ ಪಡಿಸಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕ ಹಾಲಾಡಿ, ಬಿಜೆಪಿ ಸೇರಿಸಿಕೊಳ್ಳುವಂತೆ ನಾನು ಯಾರ ಮನೆ ಬಾಗಿಲು ತಟ್ಟಲು ಹೋಗಿಲ್ಲ ಅವಕಾಶ ಬಂದಿದೆ ಅದ್ದರಿಂದ ಸೇರುತ್ತಿದ್ದೇನೆ. ಸದ್ಯ ನಾನು ಪಕ್ಷೇತರ ಶಾಸಕನಾಗಿದ್ದು, ಯಾವುದೇ ಆಸೆ- ಆಮಿಷಗಳಿಗೆ ಒಳಗಾಗಿ ಪಕ್ಷ ಸೇರ್ಪಡೆಯಾದರೆ ಅನರ್ಹ ಆಗಬಹುದು. ಆದರೆ ನಾನು ಯಾವುದೇ ಬೇಡಿಕೆ ಇಟ್ಟು ಬಿಜೆಪಿ ಪಕ್ಷಕ್ಕೆ ಬರುತ್ತಿಲ್ಲ. ಚುನಾವಣೆ ನೀತಿ ಸಂಹಿತೆ ಘೋಷಣೆ ಮಾಡಿದ ಕೂಡಲೇ ನಾನು ಬಿಜೆಪಿ ಪಕ್ಷ ಸೇರುತ್ತೇನೆ ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಘೋಷಣೆ ಮಾಡಿದ್ದಾರೆ.

    ಜನರ ಅಭಿಪ್ರಾಯ ಪಡೆದು ಈ ನಿರ್ಧಾರಕ್ಕೆ ಬಂದಿದ್ದೇನೆ. ಅಗತ್ಯವಿರುವ ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ. ವಾಟ್ಸಪ್ ನಲ್ಲಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಬಣ ರಾಜಕೀಯ ಇಲ್ಲ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಕ್ಷೇತ್ರದಲ್ಲಿ ನನ್ನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದರಲ್ಲಿ ಕೆಲವು ತುಂಟ ಹುಡುಗರು ಇದ್ದಾರೆ ಗೊಂದಲ ಬಗ್ಗೆ ಅವರನ್ನೇ ಕೇಳಬೇಕು. ಬಣ ರಾಜಕೀಯ ಬಗ್ಗೆ ಅವರೇ ಉತ್ತರ ಕೊಡಲಿ. ಎಲ್ಲಾ ಪಕ್ಷದಲ್ಲೂ ಸಣ್ಣ ಪುಟ್ಟ ಗುಂಪುಗಾರಿಕೆ ಇದ್ದೇ ಇರುತ್ತದೆ ಎಂದು ಒಪ್ಪಿಕೊಂಡರು.

    ವಿಧಾನಸಭೆ ಯಲ್ಲಿ ಹಲವು ಬಾರಿ ವಾರಾಹಿ ಯೋಜನೆ, ಸಕ್ಕರೆ ಕಾರ್ಖಾನೆ, ಬಸವ ಯೋಜನೆ ಇತ್ಯಾದಿಗಳ ಬಗ್ಗೆ ಧ್ವನಿ ಎತ್ತಿದ್ದೇನೆ. ಈ ಕುರಿತು ದಾಖಲೆಗಳನ್ನು ನೀಡಲು ಸಿದ್ಧ. ಕ್ಷೇತ್ರದಲ್ಲಿ ನನ್ನ ಮೇಲೆ ಕಣ್ಣಿಗೆ ಕಾಣುವ ಕೆಲಸವಾಗಿಲ್ಲ ಅನ್ನುವ ಆರೋಪವಿದೆ. ಈ ಆರೋಪದ ಬಗ್ಗೆ ಜನರೇ ಉತ್ತರ ನೀಡಬೇಕು. ಕ್ಷೇತ್ರದಲ್ಲಿ ಒಳ್ಳೆಯ ಅಧಿಕಾರಿಗಳು ಇದ್ದಾಗ ಉತ್ತಮ ಕೆಲಸವಾಗುತ್ತದೆ. ಇದನ್ನು ಪಂಚಾಯತ್ ನವರು ಹೇಳಬೇಕು ಎಂದರು.

    ಕೇಂದ್ರದ ನೋಟ್ ಬ್ಯಾನ್ ಒಳ್ಳೆಯ ನಿರ್ಧಾರ. ಜಿಎಸ್ ಟಿ ಬಗ್ಗೆ ವಿಮರ್ಶೆಗಳು ನಡೆಯುತ್ತಲೇ ಇದೆ. ಶುಕ್ರವಾರವಷ್ಟೇ 172 ವಸ್ತುಗಳಿಗೆ ಜಿಎಸ್‍ಟಿ ಇಳಿಸಲಾಗಿದೆ. ಈ ನಿರ್ಧಾರಗಳಿಂದ ದೇಶಕ್ಕೆ ಮುಂದೆ ಒಳ್ಳೆಯದಾಗುತ್ತದೆ ಎಂದರು.

  • ಟಿಪ್ಪು ಜಯಂತಿಗೆ ಸಚಿವ ಮಧ್ವರಾಜ್ ಗೈರು- ನನ್ನ ಗೈರನ್ನು ನೀವು ಹೇಗೆ ಬೇಕಾದ್ರೂ ಅರ್ಥೈಸಿಕೊಳ್ಳಿ ಎಂದ್ರು

    ಟಿಪ್ಪು ಜಯಂತಿಗೆ ಸಚಿವ ಮಧ್ವರಾಜ್ ಗೈರು- ನನ್ನ ಗೈರನ್ನು ನೀವು ಹೇಗೆ ಬೇಕಾದ್ರೂ ಅರ್ಥೈಸಿಕೊಳ್ಳಿ ಎಂದ್ರು

    ಉಡುಪಿ: ವಿವಾದಿತ ಮತ್ತು ರಾಜ್ಯ ಸರ್ಕಾರದ ಪ್ರತಿಷ್ಟೆಯ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಿಂದ ಸಚಿವ ಪ್ರಮೋದ್ ಮಧ್ವರಾಜ್ ದೂರ ಉಳಿದು ಚರ್ಚೆಗೆ ಕಾರಣವಾಗಿದ್ದಾರೆ.

    ಉಡುಪಿಯಲ್ಲಿ ಇದ್ದುಕೊಂಡೇ ಕ್ರೀಡಾ ಮತ್ತು ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡಿಲ್ಲ. ಟಿಪ್ಪು ಜಯಂತಿ ಮುಗಿದು ಹತ್ತೇ ನಿಮಿಷಕ್ಕೆ ಪ್ರಮೋದ್ ಮಧ್ವರಾಜ್ ಜಿಲ್ಲಾಧಿಕಾರಿ ಕಚೇರಿಗೆ ಅಗಮಿಸಿ ಚುನಾವಣಾ ರಾಜಕೀಯದ ದೃಷ್ಟಿಕೋನವನ್ನು ತೆರೆದಿಟ್ಟರು.

    ಮೂರನೇ ವರ್ಷವೂ ಉಡುಪಿ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಟಿಪ್ಪು ಜಯಂತಿಯಲ್ಲಿ ಪಾಲ್ಗೊಳ್ಳದೇ ದೂರ ಉಳಿಯುವ ಮೂಲಕ ಸೈಲೆಂಟಾಗಿ ಸಂದೇಶವನ್ನು ರವಾನೆ ಮಾಡಿದ್ದಾರೆ. ಹಿಂದೂಗಳ ಮತಗಳನ್ನು, ಕ್ರೈಸ್ತ ಸಮುದಾಯದ ಮತಗಳನ್ನು ಕಳೆದುಕೊಳ್ಳಲು ಇಚ್ಛಿಸದ ಮಧ್ವರಾಜ್ ವಿವಾದಿತ ಟಿಪ್ಪು ಜಯಂತಿಯಿಂದ ದೂರ ನಿಂತಿದ್ದಾರೆ. ಗೈರಾಗುವುದರ ಮೂಲಕ ಕರಾವಳಿಯ ಪ್ರಭಲ ಮೀನುಗಾರ ಸಮುದಾಯದ ಕಣ್ಣಲ್ಲೂ ಹೀರೋ ಎನಿಸಿಕೊಂಡಿದ್ದಾರೆ.

    ಟಿಪ್ಪು ಜಯಂತಿ ಮುಗಿದು ಹತ್ತೇ ನಿಮಿಷಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುತ್ತಿದ್ದ ಅನಿಲಭಾಗ್ಯ ಯೋಜನೆಯ ಅನುಷ್ಟಾನದ ಪೂರ್ವಭಾವಿ ಸಭೆಯಲ್ಲಿ, ಸಿಎಂ ಉಡುಪಿ ಪ್ರವಾಸದ ಕಾರ್ಯಕ್ರಮದ ಮೀಟಿಂಗ್‍ನಲ್ಲಿ ಮಧ್ವರಾಜ್ ಪಾಲ್ಗೊಂಡರು. ಟಿಪ್ಪು ಜಯಂತಿಯಲ್ಲಿ ತನ್ನ ಗೈರನ್ನು ಸಮರ್ಥನೆ ಮಾಡಿಕೊಂಡ ಮಧ್ವರಾಜ್, ಟಿಪ್ಪು ಜಯಂತಿಯಲ್ಲಿ ಪಾಲ್ಗೊಳ್ಳಬೇಕೆಂಬ ಕಡ್ಡಾಯವೇನಿಲ್ಲ ಎಂದರು.

    ನಾನು ಕಿತ್ತೂರು ರಾಣಿ ಚೆನ್ನಮ್ಮ, ಕೆಂಪೇಗೌಡ, ಹೇಮರೆಡ್ಡಿ ಮಲ್ಲಪ್ಪ ಜಯಂತಿಯಲ್ಲೂ ಪಾಲ್ಗೊಂಡಿಲ್ಲ. ಆಗ ಯಾಕೆ ನೀವು ಪ್ರಶ್ನೆ ಮಾಡಿಲ್ಲ? ಅವರವರಿಗೆ ಅವರವರ ಅಭಿಪ್ರಾಯ ಸ್ವಾತಂತ್ರ್ಯವಿದೆ ಎಂದು ತನ್ನ ಗೈರನ್ನು ಸಮರ್ಥನೆ ಮಾಡಿಕೊಂಡರು. ನನ್ನ ಗೈರಿನ ಬಗ್ಗೆ ಮಾಧ್ಯಮದವರು ವಿಮರ್ಶೆ ಮಾಡುವುದಾದದರೆ ನನ್ನ ಅಭ್ಯಂತರವಿಲ್ಲ ಎಂದರು.

    ಜಿಲ್ಲಾಡಳಿತದ ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಇದಕ್ಕೂ ಮೊದಲು ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಯತ್ನಿಸಿದ ಸುಮಾರು 50 ಮಂದಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರನ್ನು ಬಂಧಿಸಲಾಯ್ತು. ಸುಮಾರು 2000 ಪೊಲೀಸರನ್ನು ಉಡುಪಿ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜನೆ ಮಾಡಲಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಿದರು.

    ಅಧಿಕಾರಿಗಳು, ಮಕ್ಕಳ ಜಮಾವಣೆ: ಡಿ.ಸಿ ಕೋರ್ಟ್ ಹಾಲ್ ನಲ್ಲಿ ಟಿಪ್ಪು ಜಯಂತಿ ಆಚರಿಸುವ ನಿರ್ಧಾರವಾಗಿತ್ತು. ಆದ್ರೆ ಪ್ರತಿಷ್ಟೆಯಾಗಿ ತೆಗೆದುಕೊಂಡ ಉಡುಪಿ ಜಿಲ್ಲಾಡಳಿತ ವಾಜಪೇಯಿ ಸಭಾಂಗಣಕ್ಕೆ ಶಿಫ್ಟ್ ಮಾಡಿತು. ಜಿಲ್ಲಾಧಿಕರಿ ಕಚೇರಿ, ಜಿಲ್ಲಾ ಪಂಚಾಯತ್‍ನ ಎಲ್ಲಾ ಅಧಿಕಾರಿ ವರ್ಗ, ಸಿಬ್ಬಂದಿಗಳನ್ನು ಸಭಾಂಗಣದಲ್ಲಿ ಕಡ್ಡಾಯವಾಗಿ ಇರುವಂತೆ ನೋಡಿಕೊಂಡಿತು. ಶಾಲೆಯ ಮಕ್ಕಳನ್ನು ಕರೆದುಕೊಂಡು ಬಂದು ಖಾಲಿ ಕುರ್ಚಿಗಳನ್ನು ತುಂಬಿಸಲಾಯ್ತು. ಜನ ಸೇರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಪೊಲೀಸ್ ಫೋರ್ಸನ್ನೂ ಉಪಯೋಗಿಸಿಕೊಳ್ಳಲಾಯ್ತು ಅನ್ನೋ ಮಾಹಿತಿಯಿದೆ.

  • ಉಡುಪಿಯಲ್ಲಿ ಜೀ ಕನ್ನಡದ ಕಾಮಿಡಿ ಕಿಲಾಡಿ-2, ಸರಿಗಮಪ ಆಡಿಷನ್

    ಉಡುಪಿಯಲ್ಲಿ ಜೀ ಕನ್ನಡದ ಕಾಮಿಡಿ ಕಿಲಾಡಿ-2, ಸರಿಗಮಪ ಆಡಿಷನ್

    ಉಡುಪಿ: ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಸೀಜನ್ ಟು ಮತ್ತು ಸರಿಗಮಪ ಲಿಟಲ್ ಚಾಂಪ್ಸ್ ಸೀಜನ್ 14ರ ಆಡಿಷನ್ ಉಡುಪಿಯಲ್ಲಿ ನಡೆಯಿತು. ನೂರಾರು ಮಕ್ಕಳು ಆಡಿಷನ್‍ನಲ್ಲಿ ಪಾಲ್ಗೊಂಡರು. ಬೆಳಗ್ಗೆ ಆರಂಭವಾದ ಆಡಿಷನ್ ಸಂಜೆಯವರೆಗೆ ಕೂಡಾ ಮುಂದುವರೆಯಿತು. 13 ಸೀಜನ್‍ಗಳನ್ನು ಯಶಸ್ವಿಯಾಗಿ ಪೂರೈಸಿರುವ ಸರಿಗಮಪ ರಾಜ್ಯಾದ್ಯಂತ ಬಹಳ ಪ್ರಸಿದ್ಧಿ ಪಡೆದಿದೆ.

    ಎಲ್ಲಾ ಮೂವತ್ತು ಜಿಲ್ಲೆಗಳಲ್ಲಿ ಮತ್ತು ಮಹಾ ನಗರಗಳಲ್ಲಿ ಆಡಿಷನ್ ನಡೆಯುತ್ತಿದ್ದು ಪ್ರತಿಭೆಗಳ ಹುಡುಕಾಟ ನಡೆಯುತ್ತಿದೆ. ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್ ಮುಂಭಾಗದ ಮೈದಾನದಲ್ಲಿ ಈ ಆಡೀಷನ್ ನಡೆಯಿತು. ಜೀ ವಾಹಿನಿಯ ಸುಮಾರು 50ಕ್ಕಿಂತಲೂ ಹೆಚ್ಚು ಸಿಬ್ಬಂದಿ ಆಡಿಷನ್‍ನಲ್ಲಿ ಪಾಲ್ಗೊಂಡರು. ಕಾಮಿಡಿ ಕಿಲಾಡಿಗಳು ಖ್ಯಾತಿಯ ಅನೀಶ್, ದೀಕ್ಷಾ ರಾಮಕೃಷ್ಣ, ಹರ್ಷ ಮೈಸೂರು, ಧನುಶ್ ನೇತೃತ್ವದ ಟೀಂ ಪ್ರತಿಭೆಗಳನ್ನು ಆಯ್ಕೆ ಮಾಡಿದರು. ಹಾಸ್ಯದ ಬಗ್ಗೆ ಆಸಕ್ತಿಯಿರುವವರು, ಸಂಗೀತ ಕಲಿತ ಮಕ್ಕಳು ಖುಷಿ ಖುಷಿಯಾಗಿ ಆಡಿಷನ್‍ನಲ್ಲಿ ಪಾಲ್ಗೊಂಡರು.

    ಅಸಿಸ್ಟೆಂಟ್ ಪ್ರೋಗ್ರಾಂ ಪ್ರೊಡ್ಯೂಸರ್ ಸತೀಶ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಒಳಗೆ ಅಡಗಿರುವ ಪ್ರತಿಭೆಗಳನ್ನು ಹೊರ ತರುವ ಕೆಲಸ ಜೀ ವಾಹಿನಿ ಮಾಡುತ್ತಿದೆ. ರಾಜ್ಯದ ಜನಕ್ಕೆ ಇದೊಂದು ಅವಕಾಶ. ಎಲ್ಲರೂ ಇದನ್ನು ಉಪಯೋಗ ಮಾಡಿಕೊಳ್ಳಬೇಕು. ಸಾವಿರಾರು ಮಂದಿ ಸಂಗೀತ ಕಲಿತಿರುತ್ತಾರೆ. ಆದರೆ ಅದಕ್ಕೆ ಸೂಕ್ತವಾದ ಒಂದು ವೇದಿಕೆ ಸಿಕ್ಕಿರುವುದಿಲ್ಲ. ಜೀ ಕನ್ನಡ ವಾಹಿನಿ ಅಂತದ್ದೊಂದು ವೇದಿಕೆ ಪಡಿಸಿರುವಾಗ ಜನ ಉಪಯೋಗಿಸಿಕೊಳ್ಳಿ ಎಂದು ಕರೆ ನೀಡಿದರು.

    ಕಳೆದ ಬಾರಿ ಸರಿಗಮಪದ ಆಡಿಷನ್‍ನಲ್ಲಿ ಪಾಲ್ಗೊಂಡಿದ್ದೆ. ಎರಡನೇ ಸುತ್ತಿಗೆ ಹೋಗಿದ್ದೆ. ಈ ಬಾರಿ ಕೂಡಾ ಆಡೀಷನ್ ಕೊಟ್ಟಿದ್ದೇನೆ. ಅದೃಷ್ಟ ಇದ್ದರೆ ಆಯ್ಕೆಯಾಗುತ್ತೇನೆ. ತುಂಬಾ ಜನ ವಿದ್ಯಾರ್ಥಿಗಳು ಬಂದಿದ್ದಾರೆ. ಕಾಂಪಿಟೇಷನ್ ಟಫ್ ಆಗಿದೆ. ಆದ್ರೆ ಇಲ್ಲಿ ಪಾಲ್ಗೊಂಡಿದ್ದು ಬಹಳ ಖುಷಿಯಾಗಿದೆ ಎಂದು ಉಡುಪಿಯ ಐಶ್ವರ್ಯ ಹೇಳಿದರು.

     

     

  • ಕತಾರ್ ಕನ್ನಡಿಗ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರಿಗೆ ಉಡುಪಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

    ಕತಾರ್ ಕನ್ನಡಿಗ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರಿಗೆ ಉಡುಪಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

    ಬೆಂಗಳೂರು: ಇತ್ತೀಚೆಗೆ ಆರ್ಯಭಟ ಪ್ರಶಸ್ತಿಯನ್ನು ಪಡೆದಿದ್ದ, ಕತಾರ್‍ನ ಕರ್ನಾಟಕ ಸಂಘದ ಉಪಾಧ್ಯಕ್ಷ ಹಾಗೂ ಖಜಾಂಜಿಯಾದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರಿಗೆ ಮತ್ತೊಂದು ಪ್ರಶಸ್ತಿಯ ಗರಿ ಮುಡಿಗೇರಿದೆ.

    ಹೌದು, ಈ ಬಾರಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಇವರಿಗೆ ಲಭಿಸಿದೆ. ಕಳೆದ ಹತ್ತು ವರ್ಷಗಳಿಂದ ಕತಾರ್‍ನಲ್ಲಿ ಕನ್ನಡ ನಾಡು, ನುಡಿ ಸೇವೆಯನ್ನು ಸಲ್ಲಿಸುತ್ತಿರುವ ಇವರಿಗೆ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ.

    ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಕತಾರ್ ನಲ್ಲಿ ಸುಮಾರು 50 ಜನ ಕನ್ನಡಿಗರಿಗೆ ಕೆಲಸವನ್ನು ದೊರಕಿಸಿಕೊಟ್ಟಿರುತ್ತಾರೆ. ಇತ್ತೀಚಿಗೆ ಬಿಡುಗಡೆಯಾಗಿದ್ದ ಹೊಸ ಚಲಚಿತ್ರಗಳಾದ ಒಂದು ಮೊಟ್ಟೆ ಕಥೆ ಹಾಗು ಕಾಫಿತೋಟ ಸೇರಿದಂತೆ, ಕೇವಲ ಒಂದು ವರ್ಷದಲ್ಲಿ 8 ಕನ್ನಡ ಸಿನಿಮಾಗಳ ಯಶಸ್ವಿ ಪ್ರದರ್ಶವನ್ನು ಕತಾರ್‍ನಲ್ಲಿ ಆಯೋಜಿಸಿದ ಹೆಗ್ಗಳಿಕೆ ಇವರದ್ದು.

  • ಸಿದ್ದರಾಮಯ್ಯ ಹೃದಯದಲ್ಲಿ ಬಡವರು ಮಾತ್ರ ಇದ್ದಾರೆ-ಕೆ.ಸಿ ವೇಣುಗೋಪಾಲ್

    ಸಿದ್ದರಾಮಯ್ಯ ಹೃದಯದಲ್ಲಿ ಬಡವರು ಮಾತ್ರ ಇದ್ದಾರೆ-ಕೆ.ಸಿ ವೇಣುಗೋಪಾಲ್

    ಉಡುಪಿ: ಸಿದ್ದರಾಮಯ್ಯ ಸರ್ಕಾರ ಬಡವರ ಪರವಾಗಿ ಕೆಲಸ ಮಾಡುತ್ತಿದೆ. ಸಿಎಂ ಹೃದಯದಲ್ಲಿ ಬಡವರು ಮಾತ್ರ ಇದ್ದಾರೆ. ಇದು ರಾಜ್ಯದ ಜನಕ್ಕೆ ಅರ್ಥವಾಗಬೇಕು. ಅರ್ಥ ಮಾಡಿಸುವ ಕೆಲಸವನ್ನು ಕಾರ್ಯಕರ್ತರು, ಕಾಂಗ್ರೆಸ್ ನಾಯಕರು ಮಾಡಬೇಕು ಅಂತ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಹೇಳಿದ್ದಾರೆ.

    ಮನೆ ಮನೆ ಕಾಂಗ್ರೆಸ್ ಅಭಿಯಾನದ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ಹಣಿಯಲು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಸಚಿವ ಎಂ.ಬಿ ಪಾಟೀಲ್ ಫೋನ್ ಕದ್ದಾಲಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಮೇಲೆ ಹರಿಹಾಯ್ದರು. ಗುಜರಾತ್‍ನಲ್ಲೂ ಇಂತಹ ಆರೋಪ ಕೇಳಿಬಂದಿದೆ. ಫೋನ್ ಟ್ಯಾಪಿಂಗ್ ಮಾಡಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಸಿಬಿಐ, ಇಡಿ, ಎನ್‍ಐಎ ಎಲ್ಲಾ ಇಲಾಖೆಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಗುಡುಗಿದರು.

    ಕೇಂದ್ರ ಸರ್ಕಾರ ಈ ರೀತಿಯ ನಡವಳಿಕೆಯನ್ನು ನಿಲ್ಲಿಸಬೇಕು. ಪರಿವರ್ತನಾ ಯಾತ್ರೆ ಬಗ್ಗೆ ಕಾಂಗ್ರೆಸ್ ತಲೆಕೆಡಿಕೊಳ್ಳುವುದಿಲ್ಲ. ಅವರು ಯಾತ್ರೆ ಮಾಡುತ್ತಿರಲಿ. ಏನೇ ಮಾಡಿದ್ರೂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ. ನೋಟ್ ಬ್ಯಾನ್ ಬಗ್ಗೆ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಂದೇ ತನ್ನ ದೃಷ್ಟಿಕೋನವನ್ನು ತಿಳಿಸಿದ್ದರು. ಅದು ಇಂದು ಸತ್ಯವಾಗುತ್ತಿದೆ ಎಂದು ಹೇಳಿದರು.

    ನೋಟ್ ಬ್ಯಾನ್ ಒಂದು ಅನ್ಯಾಯದ ಮತ್ತು ವ್ಯವಸ್ಥಿತವಾದ ಲೂಟಿ. ನಗದು ಅಪಮೌಲೀಕರಣದಿಂದ ಯುವಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಕಳಪೆ ನಡೆಯಿಟ್ಟಿದೆ ಎಂದು ವಾಗ್ದಾಳಿ ನಡೆಸಿದರು. ಚುನಾವಣೆಗೆ ಇನ್ನು ನಾಲ್ಕೇ ತಿಂಗಳು ಇದೆ. ಅಧಿಕಾರದ ಅಮಲಿನಲ್ಲಿ ಇರದೆ ಮುಂದಿನ ಚುನಾವಣೆಯ ಬಗ್ಗೆ ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕು. ಕಾಂಗ್ರೆಸ್ ಹತ್ತಾರು ಯೋಜನೆಗಳನ್ನು ಕೊಟ್ಟಿದೆ. ಅದನ್ನು ಮನೆ ಮನೆಗೆ ಮುಟ್ಟಿಸಬೇಕು ಎಂದರು.

  • ಆರತಿ ಹಿಡಿಯೋ ಕೈಲಿ ಕ್ರಿಕೆಟ್ ಬ್ಯಾಟ್- ಫೋರ್ ಗಳ ಸುರಿಮಳೆಗೈದ ಉಡುಪಿ ಶ್ರೀ

    ಆರತಿ ಹಿಡಿಯೋ ಕೈಲಿ ಕ್ರಿಕೆಟ್ ಬ್ಯಾಟ್- ಫೋರ್ ಗಳ ಸುರಿಮಳೆಗೈದ ಉಡುಪಿ ಶ್ರೀ

    ಉಡುಪಿ: ಆರತಿ ಹಿಡಿದು ಪೂಜೆ ಮಾಡುವ ಕೈಯಲ್ಲಿ ಕ್ರಿಕೆಟ್ ಬ್ಯಾಟ್. ಕಚ್ಚೆ ಎತ್ತಿಕಟ್ಟಿ ಶಾಲನ್ನು ಸೊಂಟಕ್ಕೆ ಬಿಗಿದ ಸ್ವಾಮೀಜಿ. ಪ್ರತೀ ಬಾಲ್ ಗೆ ಫೋರ್.. ಫೋರ್.. ಫೋರ್..

    ಹೌದು. ಉಡುಪಿಯಲ್ಲಿ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕ್ರಿಕೆಟ್ ಆಟವಾಡಿದ್ದಾರೆ. ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಫೋರ್ ಗಳ ಸುರಿಮಳೆ ಸುರಿಸಿದ್ದಾರೆ. ರಾಜ್ಯಮಟ್ಟದ ಕ್ರಿಕೆಟ್ ಪಂದ್ಯ ಉದ್ಘಾಟಿಸಿದ ಕಿರಿಯ ಸ್ವಾಮೀಜಿ, ಮಧ್ವ ಟ್ರೋಫಿ ಕ್ರಿಕೆಟ್ ಕೂಟಕ್ಕೆ ಚಾಲನೆ ನೀಡಿದರು.

    ಸುಮಾರು 10 ಬಾಲ್ ಗಳನ್ನು ಎದುರಿಸಿದ ಸ್ವಾಮೀಜಿ ಯಾವುದೇ ಎಸೆತವನ್ನೂ ಬಿಡಲಿಲ್ಲ. ಎಲ್ಲ ಬಾಲ್ ಗಳನ್ನು ಲೆಗ್ ಸೈಡ್ ಬೌಂಡರಿಗಟ್ಟಿದರು. ಸ್ವಾಮೀಜಿ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಮೈದಾನದಲ್ಲಿ ನೆರೆದಿದ್ದ ಕ್ರಿಕೆಟ್ ಪ್ರೇಮಿಗಳ ಹುಬ್ಬೇರುವಂತೆ ಮಾಡಿದರು.

    ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶ್ರೀಗಳು, ಪೂರ್ವಾಶ್ರಮದಲ್ಲಿ ಕಬಡ್ಡಿ, ಬ್ಯಾಡ್ಮಿಂಟನ್ ಆಡುತ್ತಿದ್ದೆ. ಕ್ರಿಕೆಟ್ ಬಗ್ಗೆ ಹೆಚ್ಚು ಒಲವಿಲ್ಲ. ಆದ್ರೆ ಕ್ರಿಕೆಟ್ ಆಟ ಗೊತ್ತಿಲ್ಲ ಎಂದೇನಲ್ಲ. ಟಿವಿಯನ್ನೇ ನೋಡಲ್ಲ. ಬಂದ ಬಾಲ್ ಗೆ ಬ್ಯಾಟಿನಿಂದ ಹೊಡೆದೆ ಎಂದು ಹೇಳಿದರು.

    ಕ್ರೀಡಾಕೂಟದ ಟಾಸನ್ನ ಸ್ವಾಮೀಜಿಯವರು ಚಿಮ್ಮಿಸಿ ಎರಡು ದಿನಗಳ ಪಂದ್ಯಾಟಕ್ಕೆ ಚಾಲನೆ ನೀಡಿದರು.

  • ಮಹಿಳೆಯೊಂದಿಗೆ ಕಾಮದಾಟ ನಡೆಸಿದ್ದ ಮೌಲ್ವಿಗೆ ಜಮಾತ್ ಸದಸ್ಯರಿಂದ ಧರ್ಮದೇಟು..!

    ಮಹಿಳೆಯೊಂದಿಗೆ ಕಾಮದಾಟ ನಡೆಸಿದ್ದ ಮೌಲ್ವಿಗೆ ಜಮಾತ್ ಸದಸ್ಯರಿಂದ ಧರ್ಮದೇಟು..!

    ಉಡುಪಿ: ಮೌಲ್ವಿಯೊಬ್ಬನ ಕಾಮಪ್ರಸಂಗ ಬೀದಿಗೆ ಬಂದಿದೆ. ಊರಿಗೆಲ್ಲಾ ಬುದ್ಧಿ ಹೇಳುತ್ತಿದ್ದ ಮೌಲ್ವಿಯೊಬ್ಬ ಪರಸ್ತ್ರೀ ಸಂಗ ನಡೆಸಲು ಹೋಗಿ ಊರ ಮಂದಿಯಿಂದ ಧರ್ಮದೇಟಿಗೆ ಒಳಗಾಗಿದ್ದಾನೆ.

    ಜಮಾತ್ ಸದಸ್ಯರೇ ಸೇರಿ ಮೌಲ್ವಿ ಖತೀಬ್ ನ ಚಳಿ ಬಿಡಿಸಿದ್ದಾರೆ. ಈ ವಿಡಿಯೋ ತುಣುಕು ಇದೀಗ ವಾಟ್ಸಪ್, ಫೇಸ್ ಬುಕ್ ನಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.

    ಉಡುಪಿಯ ಕಾಪು ತಾಲೂಕಿನ ಬೆಳಪು ಮಸೀದಿಯಲ್ಲಿ ಈ ಘಟನೆ ನಡೆದಿದೆ. ಕೆಲವು ತಿಂಗಳ ಹಿಂದಷ್ಟೇ ಬೆಳಪು ಮಸೀದಿಗೆ ಖತೀಬ್ ಮುಖ್ಯ ಧರ್ಮಗುರುವಾಗಿ ನೇಮಕಗೊಂಡಿದ್ದ. ನಂತರ ಈತ ವಿವಾಹಿತ ಮಹಿಳೆಯೊಬ್ಬರ ಜೊತೆ ಸಖ್ಯ ಬೆಳೆಸಿದ್ದ. ಧಾರ್ಮಿಕ ವಿಚಾರ ಹೇಳುತ್ತಲೇ ಆಕೆಯನ್ನು ಪುಸಲಾಯಿಸಿ ಮಂಗಳೂರಿನ ಲಾಡ್ಜ್ ವೊಂದಕ್ಕೆ ಕರೆದೊಯ್ದಿದ್ದ. ಅಲ್ಲಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ದುರಾದೃಷ್ಟಕ್ಕೆ ಆ ಮಹಿಳೆಯ ಸಂಬಂಧಿಕರೊಬ್ಬರು ಇವರನ್ನು ಕಂಡಿದ್ದು ತಕ್ಷಣ ಬೆಳಪು ಮಸೀದಿಯ ಆಡಳಿತ ಮಂಡಳಿಯವ್ರಿಗೆ ತಿಳಿಸಿದ್ದಾರೆ.

    ಹೆಣ್ಣು ಮಕ್ಕಳಿಗೆ ಮೊಬೈಲ್ ಕೊಡಬಾರದು, ಹೆಣ್ಣು ಮಕ್ಕಳು ಹೇರ್ ಸ್ಟ್ರೈಟ್ನಿಂಗ್ ಮಾಡಬಾರದು, ಮೇಕಪ್ ಮಾಡಬಾರದೆಂದು ಈತ ಉಪದೇಶ ಮಾಡುತ್ತಿದ್ದ. ಬಾಯಲ್ಲಿ ಉಪದೇಶ ಮಾಡುವ ನಿಮ್ಗೆ ಪರಸ್ತ್ರೀ ಜೊತೆ ಕಾಮದಾಟ ನಡೆಸಲು ನಾಚಿಕೆಯಾಗೋದಿಲ್ವೇ ಅಂತ ಪ್ರಶ್ನಿಸಿ ಜಮಾತ್ ಸದಸ್ಯರು ಧರ್ಮದೇಟು ನೀಡಿದ್ದಾರೆ.

    ಸದ್ಯ ಬೆಳಪು ಮಸೀದಿಯಿಂದ ಮೌಲ್ವಿಯನ್ನು ಹೊರದಬ್ಬಲಾಗಿದೆ. ಈ ಕುರಿತು ಇಲ್ಲಿಯವರೆಗೆ ಯಾವುದೇ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.