Tag: ಉಡುಪಿ

  • ಕೊಲ್ಲೂರು ಮೂಕಾಂಬಿಕೆಯ ಕ್ಷೇತ್ರಕ್ಕೆ ರಾಜಸ್ಥಾನ ಸಿಎಂ ವಸುಂಧರಾ ರಾಜೆ ಭೇಟಿ- ಮೂರೂವೆರೆ ಗಂಟೆ ಭಕ್ತರಿಗಿಲ್ಲ ಪ್ರವೇಶ

    ಕೊಲ್ಲೂರು ಮೂಕಾಂಬಿಕೆಯ ಕ್ಷೇತ್ರಕ್ಕೆ ರಾಜಸ್ಥಾನ ಸಿಎಂ ವಸುಂಧರಾ ರಾಜೆ ಭೇಟಿ- ಮೂರೂವೆರೆ ಗಂಟೆ ಭಕ್ತರಿಗಿಲ್ಲ ಪ್ರವೇಶ

    ಉಡುಪಿ: ಕೊಲ್ಲೂರು ಮೂಕಾಂಬಿಕೆಯ ಕ್ಷೇತ್ರಕ್ಕೆ ಇಂದು ಬೆಳಗ್ಗೆ ಭೇಟಿಕೊಡುವ ಆಲೋಚನೆ ನಿಮ್ಮದಾಗಿದ್ದರೆ ಪ್ಲ್ಯಾನ್ ನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳೋದು ಒಳ್ಳೆಯದು. ಯಾಕಂದ್ರೆ ಕೊಲ್ಲೂರಿಗೆ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಬರುತ್ತಿದ್ದಾರೆ. ರಾಜಸ್ಥಾನ ಸಿಎಂ ಆಗಮನ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮೂರೂವರೆ ಗಂಟೆ ದೇವಸ್ಥಾನ ಪ್ರವೇಶ ನಿರ್ಬಂಧಿಸಲಾಗಿದೆ.

    ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ ಭಕ್ತರಿಗೆ ದೇವಸ್ಥಾನದ ಪ್ರವೇಶ ನಿರ್ಬಂಧಿಸಿದೆ. ಕುಂದಾಪುರದ ಕೊಲ್ಲೂರು ಮೂಕಾಂಬಿಕ ದೇವಸ್ಥಾನಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ರಾಜಸ್ಥಾನ ಸಿಎಂ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಬಳಿಕ ಅರೆ ಶೀರೂರಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸ್ತಾರೆ. ಅಲ್ಲಿಂದ ರಸ್ತೆ ಮೂಲಕ ದೇವಸ್ಥಾನಕ್ಕೆ ತೆರಳಲಿದ್ದಾರೆ. ನಂತ್ರ ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಲಿರುವ ವಸುಂಧರಾ ರಾಜೆ, ದೇವಿಗೆ ವಿಶೇಷ ಸೇವೆ, ಹೋಮ ಮಾಡಿಸಲಿದ್ದಾರೆ ಎನ್ನಲಾಗಿದೆ.

    ರಾಜಸ್ಥಾನ ಸಿಎಂ ಭೇಟಿಯ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಸಾರ್ವಜನಿಕರಿಗೆ ದೇವಸ್ಥಾನದ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಪೊಲೀಸರು ಮತ್ತು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

  • ವಿರೋಧದ ನಡುವೆಯೂ ಸರ್ಕಾರಿ ಹೆರಿಗೆ ಆಸ್ಪತ್ರೆಯನ್ನು ಉಡುಪಿ ಉದ್ಯಮಿಗೆ ನೀಡಿದ್ರು ಸಿಎಂ

    ವಿರೋಧದ ನಡುವೆಯೂ ಸರ್ಕಾರಿ ಹೆರಿಗೆ ಆಸ್ಪತ್ರೆಯನ್ನು ಉಡುಪಿ ಉದ್ಯಮಿಗೆ ನೀಡಿದ್ರು ಸಿಎಂ

    ಉಡುಪಿ: ಹಲವು ಕಾನೂನು ಹೋರಾಟ ಮತ್ತು ಜನರ ಪ್ರತಿಭಟನೆಯ ನಡುವೆಯೇ ಸರ್ಕಾರ ಉಡುಪಿಯ ಸರ್ಕಾರಿ ಹೆರಿಗೆ ಆಸ್ಪತ್ರೆಯನ್ನು ಉದ್ಯಮಿ ಬಿ.ಆರ್ ಶೆಟ್ಟಿಗೆ ನೀಡಿತು. ಸ್ವತ: ಸಿಎಂ, ಆರೋಗ್ಯ ಸಚಿವರು ಬಂದು ಆಸ್ಪತ್ರೆ ಉದ್ಘಾಟಿಸಿ ಬಿ.ಆರ್.ಶೆಟ್ಟಿ ಅವರ ಕೆಲಸವನ್ನು ಹೊಗಳಿದರು.

    ಉದ್ಯಮಿ ಬಿ.ಆರ್. ಶೆಟ್ಟಿ ಹಣ ಹೂಡಿರುವ ಸರ್ಕಾರಿ ಆಸ್ಪತ್ರೆಗೆ ಆರಂಭದಿಂದಲೂ ವಿರೋಧ ಕೇಳಿಬರುತ್ತಿತ್ತು. ಇದು ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದ ಹೊಸ ಪ್ರಯೋಗ ಆಸ್ಪತ್ರೆ. ಬಿ.ಆರ್ ಶೆಟ್ಟಿಯವರು ತಮ್ಮ ತಾಯಿಯ ಸ್ಮರಣಾರ್ಥ ಒಂದು ಹೆರಿಗೆ ಆಸ್ಪತ್ರೆ ಕಟ್ಟಿಸಿಕೊಟ್ಟಿದ್ದಾರೆ. ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಯ ಮೇಲ್ವಿಚಾರಣೆಯಲ್ಲಿ ಈ ಆಸ್ಪತ್ರೆಯ ನಿರ್ವಹಣೆ ನಡೆಯುತ್ತದೆ. ಆದರೆ ಈ ಆಸ್ಪತ್ರೆಗೆ ಸಿಬ್ಬಂದಿ ನೇಮಕ ಮತ್ತು ಎಲ್ಲಾ ಉಸ್ತುವಾರಿ ಶೆಟ್ಟರ ಬಿ.ಆರ್. ವೆಂಚರ್ಸ್ ಕೈಯ್ಯಲ್ಲೇ ಇರುತ್ತದೆ. ಸರ್ಕಾರಿ ಆಸ್ಪತ್ರೆ ಮತ್ತು ಅದಕ್ಕೆ ಸೇರಿದ ಮೂರು ಮುಕ್ಕಾಲು ಎಕರೆ ಸ್ಥಳವನ್ನು ಸರ್ಕಾರ ಖಾಸಗಿಯವರಿಗೆ ದಾನ ಮಾಡಿದೆ.

    ದಶಕಗಳ ಹಿಂದೆ ದಾನಿ ಹಾಜೀ ಅಬ್ದುಲ್ ಸಾಹೇಬರು ಮಹಿಳಾ ಹೆರಿಗೆ ಹಾಗೂ ಮಕ್ಕಳ ಆಸ್ಪತ್ರೆಗಾಗಿ ಭೂಮಿ ಧಾನವಾಗಿ ಸರ್ಕಾರಕ್ಕೆ ನೀಡಿದ್ರು. ಆದ್ರೆ ಅದೇ ಭೂಮಿಯನ್ನು ಸರ್ಕಾರ ಈಗ ಖಾಸಗಿಯವರ ವಶಕ್ಕೆ ನೀಡಿ ಕೈತೊಳೆದು ಕೊಂಡಿದೆ. ಹಾಗಾಗಿ ಸಾಮಾಜಿಕ ವಲಯದಲ್ಲಿ ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ವಿರೋಧ, ಪ್ರತಿಭಟನೆ ನಡೆಯುತ್ತಿದೆ. ಆದ್ರೆ ಪ್ರತಿಭಟನೆ ನಡುವೆಯೇ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜೀ ಅಬ್ದುಲ್ ಸಾಹೇಬ್ ಆಸ್ಪತ್ರೆಯನ್ನು ದೀಪ ಬೆಳಗಿಸಿ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದ್ರು. ಆಸ್ಪತ್ರೆ ಸರ್ಕಾರ ವಶದಲ್ಲೇ ಇರುತ್ತದೆ, ಖಾಸಗಿಯವರು ನಡೆಸುತ್ತಾರೆ ಅದರಲ್ಲೇನೂ ತಪ್ಪಿದೆ ಎಂದು ಪ್ರಶ್ನಿಸಿದರು.

    ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ತಿದ್ದುಪಡಿ ಮಸೂದೆ ತರಲು ಹೊರಟು ವೈದ್ಯರ ಕೆಂಗಣ್ಣಿಗೆ ಗುರಿಯಾಗಿರುವ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರ ಮುತುವರ್ಜಿಯಲ್ಲೇ ಈ ಒಪ್ಪಂದ ಆಗಿದೆ. ಸ್ವತ: ಸಿಎಂ ಸಿದ್ದರಾಮಯ್ಯನವರೇ ಶಂಕುಸ್ಥಾಪನೆ ಮಾಡಿರುವ ಈ ಆಸ್ಪತ್ರೆ ಒಂದೇ ವರ್ಷದೊಳಗೆ ಉದ್ಘಾಟನೆಗೊಂಡಿದೆ.

    ಚುನಾವಣಾ ನೀತಿ ಸಂಹಿತೆ ಸೇರಿದಂತೆ ಯಾವುದೇ ಅಡ್ಡಿ ಬರಬಾರದು ಎಂಬ ಕಾರಣಕ್ಕೆ ತರಾತುರಿಯಲ್ಲಿ ಉದ್ಘಾಟನೆ ನಡೆದಿದೆ. ಆರೋಗ್ಯ ಕ್ಷೇತ್ರದ ಖಾಸಗೀಕರಣ ಬಗ್ಗೆ ಸರ್ಕಾರದ ಈ ದ್ವಿಮುಖ ನೀತಿಗೆ ಖಂಡನೆ ವ್ಯಕ್ತವಾಗುತ್ತಿದೆ. ಸರಕಾರಿ ಆಸ್ಪತ್ರೆಯನ್ನು ಉಳಿಸಬೇಕು ಎಂದು ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಮುಂದುವರಿಸಿದೆ. ಆಸ್ಪತ್ರೆಗೆ ಭೂಮಿ ದಾನ ಮಾಡಿದ್ದ ಹಾಜಿ ಅಬ್ದುಲ್ಲಾ ಸಾಹೇಬರ ಕುಟುಂಬಸ್ಥರು ಕೂಡಾ ಈ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಈಗ ಜಿಲ್ಲಾ ಕೋರ್ಟ್ ಮೆಟ್ಟಿಲು ಏರಿದ್ದು, ಮುಂದೆ ಹೈಕೋರ್ಟ್ ನಲ್ಲೂ ಹೋರಾಟ ಮುಂದುವರಿಸುತ್ತೇವೆ ಎಂದು ಹೋರಾಟಗಾರ ಪಿ.ವಿ ಭಂಡಾರಿ ಹೇಳಿದ್ದಾರೆ.

    ಉಡುಪಿ ಜಿಲ್ಲೆಯಲ್ಲಿ 4 ಇಂದಿರಾ ಕ್ಯಾಂಟೀನ್ ಗಳಿಗೆ ಸಿಎಂ ಶಿಲಾನ್ಯಾಸ ಮಾಡಿದರು. ಮಹಿಳಾ ಮೀನುಗಾರರ ಸಮಾವೇಶದಲ್ಲಿ ಭಾಗವಹಿಸಿದ ಸಿಎಂ ಉಡುಪಿ ಜಿಲ್ಲೆಯನ್ನು ಬಯಲು ಮುಕ್ತ ಜಿಲ್ಲೆಯೆಂದು ಘೊಷಿಸಿದ್ರು.

    ಇದೇ ವೇಳೆ, ಮದ್ಯ ನಿಷೇಧಿಸುವ ಪ್ರಸ್ತಾವ ನಮ್ಮ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು. ಇಂದಿರಾ ಕ್ಯಾಂಟೀನ್ ಮತ್ತು ಅನ್ನಭಾಗ್ಯದ ಅಕ್ಕಿ ಸೂಪರ್ ಕ್ವಾಲಿಟಿಯದ್ದು ಎಂದು ಸಿಎಂ ಸರ್ಟಿಫಿಕೇಟ್ ಕೊಟ್ಟರು.

     

  • ಉಡುಪಿಗೆ ಬಂದರೂ, ಕೃಷ್ಣ ಮಠಕ್ಕೆ ಹೋಗಲ್ಲ ಯಾಕೆ: ಪತ್ರಕರ್ತರ ಪ್ರಶ್ನೆಗೆ ಸಿಎಂ ಉತ್ತರಿಸಿದ್ದು ಹೀಗೆ

    ಉಡುಪಿಗೆ ಬಂದರೂ, ಕೃಷ್ಣ ಮಠಕ್ಕೆ ಹೋಗಲ್ಲ ಯಾಕೆ: ಪತ್ರಕರ್ತರ ಪ್ರಶ್ನೆಗೆ ಸಿಎಂ ಉತ್ತರಿಸಿದ್ದು ಹೀಗೆ

    ಉಡುಪಿ: ಸಿಎಂ ಸಿದ್ದರಾಮಯ್ಯ ತನ್ನ ಅಧಿಕಾರಾವಧಿಯ ರೆಕಾರ್ಡ್ ಅನ್ನು ಹಾಗೇಯೇ ಉಳಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಪಟ್ಟ ಅಲಂಕರಿಸಿಕೊಂಡ ನಂತರ ಉಡುಪಿಗೆ ಐದನೇ ಬಾರಿಗೆ ಆಗಮಿಸಿದ ಮುಖ್ಯಮಂತ್ರಿ ಶ್ರೀಕೃಷ್ಣ ಮಠಕ್ಕೆ ತೆರಳದೆ ತನ್ನ ಹಠ ಮುಂದುವರೆಸಿದ್ದಾರೆ.

    ಮಧ್ಯಾಹ್ನ ಎರಡು ಹದಿನೈದರ ವೇಳೆಗೆ ಉಡುಪಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ನೇರವಾಗಿ ಐಬಿಗೆ ಬಂದು ಮಧ್ಯಾಹ್ನದ ಊಟ ಸ್ವೀಕರಿಸಿದರು. ನಂತರ ಶ್ರೀಕೃಷ್ಣ ಮಠದ ವ್ಯಾಪ್ತಿಯಿಂದ ಇನ್ನೂರು ಮೀಟರ್ ದೂರದಲ್ಲಿರುವ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಆಸ್ಪತ್ರೆಯನ್ನು ಸಿಎಂ ಉದ್ಘಾಟನೆ ಮಾಡಿದರು. ಈ ವ್ಯಾಪ್ತಿ ಕೇವಲ 300 ಮೀಟರ್ ನಷ್ಟು ದೂರ. ಅಲ್ಲಿಂದ ನೇರವಾಗಿ ಸರ್ವಿಸ್ ಬಸ್ ಸ್ಟ್ಯಾಂಡ್ ಬಳಿಯ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ಉದ್ಘಾಟನಾ ಸಭೆ ನಡೆಯಿತು. ಇದು ಶ್ರೀಕೃಷ್ಣಮಠಕ್ಕೆ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿದೆ.

    ಕೃಷ್ಣಮಠಕ್ಕೆ ಇಷ್ಟು ಹತ್ತಿರದಲ್ಲಿದ್ದರೂ ದೇವಸ್ಥಾನಕ್ಕೆ ತೆರಳದೆ ಪೇಜಾವರ ಶ್ರೀಗಳನ್ನು ಭೇಟಿ ಮಾಡದೇ ಸಿಎಂ ದೂರ ಉಳಿದರು. ಈ ಸಭಾ ಕಾರ್ಯಕ್ರಮ ಮುಗಿಸಿ ಮೀನುಗಾರರ ಮಹಿಳಾ ಸಮಾವೇಶಕ್ಕೆ ಬನ್ನಂಜೆ ರಸ್ತೆಯ ಮೂಲಕ ಅಂಬಲ್ಪಾಡಿಗೆ ತೆರಳಿ ಅಲ್ಲಿಂದ ಮಂಗಳೂರಿಗೆ ತೆರಳಿದರು. ಸುಮಾರು 5 ಗಂಟೆಗಳ ಕಾಲ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೂ ಕೂಡ ಸಿಎಂ ಕೃಷ್ಣಮಠಕ್ಕೆ, ಕನಕದಾಸರ ಗುಡಿಯ ಪಕ್ಕ ತೆರಳದೆ ತನ್ನ ಹಳೆಯ ದಾಖಲೆಯನ್ನು ಹಾಗೆ ಕಾಯ್ದಿರಿಸಿಕೊಂಡರು.

    ಉಡುಪಿಗೆ ಆಗಮಿಸಿದ್ದರೂ ಶ್ರೀಕೃಷ್ಣಮಠಕ್ಕೆ ಹೋಗುವುದಿಲ್ಲವೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿಎಂ, ನಾನು ಈ ಹಿಂದೆ ಮಠಕ್ಕೆ ಹೋಗಿದ್ದೆ. ಆದರೆ ಈಗ ಹೋಗಲ್ಲ. ಮಠದಿಂದ ಈ ಬಾರಿ ನನಗೆ ಆಹ್ವಾನವೂ ಇಲ್ಲ ಎಂದರು. ಪೇಜಾವರ ಶ್ರೀಗಳ ಜೊತೆ ನನಗೆ ವೈಯಕ್ತಿಕವಾಗಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ನಾನು ಆರೂವರೆ ಕೋಟಿ ಜನರ ಜೊತೆ ಚೆನ್ನಾಗಿಯೇ ಇದ್ದೇನೆ. ಬಸವಣ್ಣನವರ ವಚನವನ್ನು ಸಿಎಂ ಪುನರುಚ್ಚರಿಸಿ ಉಡುಪಿಯಿಂದ ತೆರಳಿದರು.

  • ಕೃಷ್ಣಮಠಕ್ಕೆ 1 ಬಾರಿಯೂ ಹೋಗಿಲ್ಲ, ಪೇಜಾವರಶ್ರೀಯನ್ನು ಮಾತಾಡ್ಸಿಲ್ಲ- 6ನೇ ಬಾರಿಗೆ ನಾಳೆ ಸಿಎಂ ಉಡುಪಿಗೆ

    ಕೃಷ್ಣಮಠಕ್ಕೆ 1 ಬಾರಿಯೂ ಹೋಗಿಲ್ಲ, ಪೇಜಾವರಶ್ರೀಯನ್ನು ಮಾತಾಡ್ಸಿಲ್ಲ- 6ನೇ ಬಾರಿಗೆ ನಾಳೆ ಸಿಎಂ ಉಡುಪಿಗೆ

    ಉಡುಪಿ: ಮುಖ್ಯಮಂತ್ರಿ ಸ್ಥಾನ ಅಲಂಕರಿಸಿಕೊಂಡ ಬಳಿಕ ಸಿಎಂ ಸಿದ್ದರಾಮಯ್ಯ 6ನೇ ಬಾರಿ ಉಡುಪಿಗೆ ಬರ್ತಾ ಇದ್ದಾರೆ. ಸಿಎಂ ಸಿದ್ದರಾಮಯ್ಯ ಉಡುಪಿಗೆ ಬಂದ್ರೂ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲ್ಲ ಅನ್ನೋದು ಸದ್ಯ ಚರ್ಚೆಯಲ್ಲಿರುವ ವಿಚಾರವಾಗಿದೆ.

    ಭಾನುವಾರ ಸಿಎಂ ಮತ್ತೆ ಉಡುಪಿಗೆ ಆಗಮಿಸಲಿದ್ದು, ಸರ್ಕಾರ ಸಹಭಾಗಿತ್ವದ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಆಸ್ಪತ್ರೆಯನ್ನು ಉದ್ಘಾಟನೆ ಮಾಡಲಿದ್ದಾರೆ. ಕೃಷ್ಣ ಮಠದಿಂದ ಈ ಆಸ್ಪತ್ರೆ ಉದ್ಘಾಟನೆ ಆಗುವ ಸ್ಥಳ ಕೇವಲ 200 ಮೀಟರ್ ಅಂತರದಲ್ಲಿದೆ. ಹೀಗಾಗಿ ಊರಿಗೆ ಬಂದವರು ನೀರಿಗೆ ಬರುವುದಿಲ್ಲವೇ ಎಂಬ ಚರ್ಚೆ ವಾಟ್ಸಪ್ ಫೇಸ್‍ಬುಕ್ ಗಳಲ್ಲಿ ಆರಂಭವಾಗಿದೆ.

    ಉಡುಪಿ ಶ್ರೀಕೃಷ್ಣಮಠ, ಇಲ್ಲಿರುವ ಆಚಾರ ವಿಚಾರ ಪದ್ಧತಿಗಳ ಬಗ್ಗೆ ಬಹಳ ವಿರೋಧವಿದ್ದ ಕಾಗಿನೆಲೆ ಸ್ವಾಮೀಜಿ ಅವರು ವಾರದ ಹಿಂದೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ಕೊಟ್ಟಿದ್ದರು. ಪೇಜಾವರ ಶ್ರೀಗಳಿಂದ ಸನ್ಮಾನ ಮಾಡಿಸಿ, ಪರ್ಯಾಯ ಪೇಜಾವರಶ್ರೀ ಮತ್ತು ಕಿರಿಯ ಶ್ರೀಗಳಿಗೆ ಕರಿ ಕಂಬಳಿ ಹೊದಿಸಿ ಗೌರವಾರ್ಪಣೆ ಸಲ್ಲಿಸಿದ್ದರು.

    ಅದೇ ಕುರುಬ ಸಮುದಾಯದ ಸಿಎಂ ಸಿದ್ದರಾಮಯ್ಯ ಕನಕನಿಗೆ ಒಲಿದ ಕೃಷ್ಣನ ನೋಡಲು ಯಾಕೆ ಉಡುಪಿಗೆ ಬರುತ್ತಿಲ್ಲ ಎಂಬುದು ಚರ್ಚೆಯ ವಿಚಾರ. ಪ್ರತಿ ಬಾರಿ ಉಡುಪಿಗೆ ಬಂದಾಗ ಕೃಷ್ಣ ಮಠಕ್ಕೆ ಹೋಗಲು, ಪೇಜಾವರ ಶ್ರೀಗಳನ್ನು ಭೇಟಿ ಮಾಡಲು ಕಾಲ ಕೂಡಿ ಬಂದಿಲ್ಲ ಎಂದು ಹೇಳುತ್ತಲೇ ಸಿಎಂ ಸಿದ್ದರಾಮಯ್ಯ ನುಣುಚಿಕೊಳ್ಳುತ್ತಿದ್ದರು.

    ನಾಳೆ ಉಡುಪಿಗೆ ಬರುವ ಸಿಎಂ ಸಿದ್ದರಾಮಯ್ಯ ಶ್ರೀಕೃಷ್ಣ ಮಠಕ್ಕೆ ಬರ್ತಾರಾ? ಪೇಜಾವರ ಶ್ರೀಗಳನ್ನು ಭೇಟಿ ಮಾಡ್ತಾರಾ? ಎನ್ನುವ ಪ್ರಶ್ನೆ ಈಗ ಮತ್ತೆ ಹುಟ್ಟಿಕೊಂಡಿದೆ. ಆದ್ದರಿಂದ ಸಿಎಂ ಸಿದ್ದರಾಮಯ್ಯ ಅವರ ನಾಳಿನ ನಡೆಯ ಬಗ್ಗೆ ಕುತೂಹಲವಿದೆ.

    ಐದು ಬಾರಿ ಸಿಎಂ ಕಾರ್ಯಕ್ರಮ ಉಡುಪಿಯಲ್ಲಿ ನಿಗದಿಯಾದಾಗ ಮಠದಿಂದ ಆಮಂತ್ರಣ ನೀಡಿದ್ದೆವು. ಬರುತ್ತೇನೆ ಎಂದು ಹೇಳುತ್ತಾರೆ, ಆದ್ರೆ ಬಂದಿಲ್ಲ. ಪರ್ಯಾಯಕ್ಕೂ ಆಹ್ವಾನ ನೀಡಿದ್ದೆವು ಅದಕ್ಕೂ ಬರಲಿಲ್ಲ. ಐದು ಬಾರಿ ಬಾರದಿದ್ದಾಗ ಈ ಬಾರಿ ಆಹ್ವಾನ ನೀಡಿಲ್ಲ. ಬಂದರೆ ಸಂತೋಷ, ಬರದಿದ್ದರೆ ಬೇಸರ ಮಾಡಿಕೊಳ್ಳುವುದಿಲ್ಲ ಅಂತ ಪರ್ಯಾಯ ಮಠ ಹೇಳಿದೆ.

  • ಬಿಎಸ್‍ವೈ, ಶೋಭಾ ಕರಂದ್ಲಾಜೆ ಬಗ್ಗೆ ಬಿಜೆಪಿಯವರಿಂದ್ಲೇ ವಾಟ್ಸಪ್‍ನಲ್ಲಿ ಅವಹೇಳನ- ಕೇಸ್ ದಾಖಲು

    ಬಿಎಸ್‍ವೈ, ಶೋಭಾ ಕರಂದ್ಲಾಜೆ ಬಗ್ಗೆ ಬಿಜೆಪಿಯವರಿಂದ್ಲೇ ವಾಟ್ಸಪ್‍ನಲ್ಲಿ ಅವಹೇಳನ- ಕೇಸ್ ದಾಖಲು

    ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಬಿಜೆಪಿಯಿಂದಲೇ ಅವಮಾನ ಮಾಡಲಾಗಿದೆ.

    ಬಿಜೆಪಿ ನಾಯಕರ ವಿರುದ್ಧ ಅವಹೇಳನಕಾರಿ ಬರಹ ಹಾಗೂ ಇಬ್ಬರೂ ಜೊತೆಯಲ್ಲಿರುವ ಅಶ್ಲೀಲ ಫೋಟೋವೊಂದು ವಾಟ್ಸಪ್ ನಲ್ಲಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಕಾವೇರಿ-ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷ ರಾಜೇಶ್ ಕಾವೇರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ ಕಿಶೋರ್ ಕುಮಾರ್ ವಿರುದ್ಧ ಬಿಜೆಪಿಯ ಕುಂದಾಪುರ ಕ್ಷೇತ್ರ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ದೂರು ದಾಖಲಿಸಿದ್ದಾರೆ.

    ಪರಿವರ್ತನಾ ಸಮಾವೇಶದ ಸಂದರ್ಭದಲ್ಲಿ ಬಿಜೆಪಿಯೊಳಗೆ ಜಟಾಪಟಿ ನಡೆದಿತ್ತು. ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ್ ಅವರು ಬಿಜೆಪಿ ಸೇರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ ದೂರು ದಾಖಲಾಗಿರೋ ಕಿಶೋರ್, ರಾಜೇಶ್ ಹಾಲಾಡಿ ವಿರುದ್ಧ ಗುಂಪಿನ ನಾಯಕರಾಗಿದ್ದಾರೆ ಎನ್ನಲಾಗಿದೆ.

     

  • ಕರಾವಳಿಯಲ್ಲಿ ಹೊಸ ವಿವಾದಕ್ಕೆ ಕಾರಣವಾಯ್ತು ಅನಂತ್ ಕುಮಾರ್ ಹೆಗಡೆ ಭಾಷಣ!

    ಕರಾವಳಿಯಲ್ಲಿ ಹೊಸ ವಿವಾದಕ್ಕೆ ಕಾರಣವಾಯ್ತು ಅನಂತ್ ಕುಮಾರ್ ಹೆಗಡೆ ಭಾಷಣ!

    ಉಡುಪಿ: ರಾಜ್ಯ ಬಿಜೆಪಿಯ ಪರಿವರ್ತನಾ ಯಾತ್ರೆಯಲ್ಲಿ ನಾಯಕರೊಬ್ಬರ ಭಾಷಣ ಈಗ ವಿವಾದವಾಗಿದ್ದು, ಕರಾವಳಿಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

    ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರಿನಲ್ಲಿ ಬುಧವಾರ ಪರಿವರ್ತನಾ ಸಮಾವೇಶ ನಡೆದಿತ್ತು. ಈ ಸಂದರ್ಭದಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ್ ಕುಮಾರ್ ಹೆಗಡೆ ಭಾಷಣ ಮಾಡಿದ್ದರು. ಜನರ ಚಪ್ಪಾಳೆ ಮತ್ತು ಶಿಳ್ಳೆಯ ನಡುವೆ ಬಹಳ ಉದ್ವೇಗದಿಂದ ಮಾತನಾಡಿದ ಅನಂತಕುಮಾರ್ ಹೆಗಡೆ, ಬೈಂದೂರು ಶಾಸಕ ಗೋಪಾಲ ಪೂಜಾರಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

    ಭಾಷಣ ಮಾಡುವ ಸಂದರ್ಭದಲ್ಲಿ ಒಂದು ಕಡೆಯಲ್ಲಿ “ಪೂಜಾರಿಯ ಪುಂಗಿ ಬಂದ್ ಆಗಬೇಕು” ಎಂದು ಹೇಳಿದ್ದರು. ಈ ಸಂದರ್ಭದಲ್ಲಿ ಸಭಿಕರಿಂದ ಸಾಕಷ್ಟು ಶಿಳ್ಳೆ ಚಪ್ಪಾಳೆ ಹೆಗಡೆಯ ಮಾತಿಗೆ ಲಭ್ಯವಾಗಿತ್ತು. ಇದಾಗಿ ಎರಡು ದಿನಗಳ ನಂತರ ವಿವಾದ ಆರಂಭವಾಗಿದೆ.

    ಪೂಜಾರಿಯ ಪುಂಗಿ ಬಂದ್ ಆಗಬೇಕು ಅನ್ನೋದನ್ನು ಒತ್ತಿ ಹೇಳುವ ವಿಡಿಯೋ ತುಣುಕು ವಾಟ್ಸಪ್, ಫೇಸ್ ಬುಕ್ ಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದು ಕೇವಲ ಶಾಸಕ ಗೋಪಾಲ ಪೂಜಾರಿಗೆ ಮಾಡಿದ ಅವಮಾನ ಅಲ್ಲ ಕರಾವಳಿಯ ಬಿಲ್ಲವ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಬಿಲ್ಲವ ಮುಖಂಡರು ಪರಿಗಣಿಸಿದ್ದಾರೆ. ಕೆಲ ವಾಟ್ಸಪ್ ಗ್ರೂಪಲ್ಲಿ ಇದು ಜನಾರ್ದನ ಪೂಜಾರಿಗಾದ ಅವಮಾನ ಅಂತ ದೂರುತ್ತಿದ್ದಾರೆ. ಅನಂತ ಕುಮಾರ್ ಹೆಗಡೆ ಮತ್ತು ಬಿಜೆಪಿಯ ಪರಿವರ್ತನಾ ರ್ಯಾಲಿಯ ಬಗ್ಗೆ ಬಿಲ್ಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಕರಾವಳಿ ಜಿಲ್ಲೆಯಲ್ಲಿ ಬಿಜೆಪಿಗೆ ಬಿಲ್ಲವ ಮತಗಳು ನಿರ್ಣಾಯಕ. ಗೆಲ್ಲಲು ಪೂಜಾರಿಗಳ ಮತಗಳು ಅನಿವಾರ್ಯ. ಇದೇ ಈ ವಿಡಿಯೋ ತುಣುಕು ವೈರಲ್ ಗೆ ಕಾರಣ. ಸಚಿವ ಅನಂತ್ ಕುಮಾರ್ ಹೆಗಡೆ ಅವರ ಬಿಲ್ಲವರ ಕ್ಷಮೆಯನ್ನು ಕೋರಬೇಕು ಎಂಬ ವಾದಗಳು ಕೂಡ ಆರಂಭವಾಗಿದೆ.

     

  • ಕೊರಗರನ್ನು 7 ವರ್ಷ ಸತಾಯಿಸಿದ ರಾಜ್ಯ ಸರ್ಕಾರದ ವಿರುದ್ಧ ‘ಪಬ್ಲಿಕ್ ಹೀರೋ’ ಗಾಂಧಿಗಿರಿ!

    ಕೊರಗರನ್ನು 7 ವರ್ಷ ಸತಾಯಿಸಿದ ರಾಜ್ಯ ಸರ್ಕಾರದ ವಿರುದ್ಧ ‘ಪಬ್ಲಿಕ್ ಹೀರೋ’ ಗಾಂಧಿಗಿರಿ!

    ಉಡುಪಿ: ದಲಿತ- ದಮನಿತರಿಗಾಗಿ ನಮ್ಮಜೀವನ ಮುಡಿಪು. ಪ್ರತಿ ಚುನಾವಣೆ ಬಂದಾಗ ರಾಜಕಾರಣಿಗಳ ಬಾಯಲ್ಲಿ ಪ್ರಣಾಳಿಕೆಯಲ್ಲಿ ಕೇಳಿ ಬರುವ ವಾಕ್ಯ ಇದು. ಆಮೇಲೆ ಓಟು ಹಾಕಿದವರನ್ನು ಮರೆತು ಬಿಡೋದು ಜನಪ್ರತಿನಿಧಿಗಳ ರೋಗ. ಉಡುಪಿಯಲ್ಲಿ ಇಂತದ್ದೇ ಒಂದು ಘಟನೆಯಾಗಿದೆ. ಸ್ಮಶಾನಕ್ಕೂ ಲಾಯಕ್ಕಿಲ್ಲದ ಜಮೀನು ಮಂಜೂರು ಮಾಡಿ ಅದನ್ನು ನಿವೇಶನ ಕೂಡಾ ಮಾಡಿಕೊಡದೆ ಸರ್ಕಾರ ಸತಾಯಿಸುತ್ತಿರುವ ಸ್ಟೋರಿ. ಸರ್ಕಾರದ ವಿರುದ್ಧ ನಮ್ಮ ಪಬ್ಲಿಕ್ ಹೀರೋ ಗಾಂಧಿಗಿರಿ ಮಾಡಲು ಹೊರಟ ಕಥೆಯಿದು.

    ಉಡುಪಿ ಜಿಲ್ಲೆಯ ಹಿರಿಯಡ್ಕ ಸಮೀಪದ ಕೊಂಡಾಡಿ ಗ್ರಾಮ ಇದು. ಸ್ಮಶಾನಕ್ಕೂ ಲಾಯಕ್ಕಿಲ್ಲದ ಜಾಗವನ್ನು ಸರ್ಕಾರ ಕೊರಗ ಸಮುದಾಯದ 23 ಕುಟುಂಬಗಳಿಗೆ 2011ರಲ್ಲಿ ಮನೆ ಕಟ್ಟಲು ನೀಡಿತ್ತು. ಜಿಲ್ಲಾಧಿಕಾರಿ ಕಚೇರಿಯೊಳಗೆ ನಕ್ಷೆಯಲ್ಲಿ ನೋಡಿ ಜಮೀನನ್ನು ಸರ್ಕಾರ ನೀಡಿತ್ತು. ಆದರೆ ಆ ಪ್ರದೇಶ ಅಕ್ಷರಶಃ ನರಕ. ಹೊಂಡ, ಗುಂಡಿ, ಬಂಡೆಕಲ್ಲು ತುಂಬಿದ ನಿರ್ಜನ ಕಾಡು. ಜಮೀನು ಸಮತಟ್ಟು ಮಾಡಲು ಸರ್ಕಾರದಿಂದ 3 ಲಕ್ಷ ಮಂಜೂರಾದರೂ ಅದು ತಲುಪಿಲ್ಲ.

    ಸಂತ್ರಸ್ಥೆ ಹೇಳಿದ್ದು ಹೀಗೆ: ಸಂತ್ರಸ್ಥೆ ಮಹಾಲಕ್ಷ್ಮೀ ಮತ್ತು ಸುಬೇಧ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಾವು 7 ವರ್ಷ ನಾಯಿಗಳ ಹಾಗೆ ಸರ್ಕಾರಿ ಕಚೇರಿಗಳಿಗೆ ಸುತ್ತಾಡಿ ಸುತ್ತಾಡಿ ಸತ್ತು ಹೋಗಿದ್ದೇವೆ. ಕೊನೆಗೆ ನಮಗೆ ಆಸರೆಯಾಗಿ ಕಾಣಿಸಿದ್ದು ಡಾ. ರವೀಂದ್ರನಾಥ ಶಾನುಭಾಗ್. ಅವರ ಬಳಿ ಬಂದ ಮೇಲೂ ಕೂಡಾ ಒಂದು ಬಾರಿ ಎಲ್ಲರನ್ನು ಸಂಪರ್ಕಿಸಿ ಆಯ್ತು. ಆಗಲೂ ಕೆಲಸ ಆಗದಿದ್ದಾಗ ಶಾನುಭಾಗರೇ ಕೆಲಸ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಇನ್ನು ನಾವು ಹೆದರಲ್ಲ ಎಂದು ಹೇಳಿದ್ದಾರೆ.

    ಸರ್ಕಾರದ ಹಣಕ್ಕಾಗಿ ಕಾಯಬೇಡಿ ನೀವೇ ಹಣ ಹೊಂದಿಸಿ ಜಮೀನು ಹದ ಮಾಡಿ ಎಂದು ಆಗಿನ ಡಿಸಿ ಎಂಟಿ ರೇಜು ಸಲಹೆ ಕೊಟ್ಟಿದ್ದರು. ಅದರಂತೆ ಎರಡು ಹೊತ್ತು ಊಟಕ್ಕೆ ಕಷ್ಟಪಡುವವರು ಸಾಲ ಸೋಲ ಮಾಡಿ ಒಂದೊಂದು ಕುಟುಂಬ ಐದೈದು ಸಾವಿರ ಒಟ್ಟು ಮಾಡಿತ್ತು. ಒಂದು ಲಕ್ಷ ಮೂವತ್ತೈದು ಸಾವಿರ ಹೊಂದಿಸಿ ಜಮೀನನ್ನು ಸಮತಟ್ಟು ಮಾಡಲು ಶುರುಮಾಡಿತು.

    ಬಂಡೆಕಲ್ಲುಗಳು ತುಂಬಿದ ಬೋಳುಗುಡ್ಡದ ಒಂದು ಭಾಗವನ್ನು ಸಮತಟ್ಟು ಮಾಡಲು ಸಾಧ್ಯವಾಗಿರಲಿಲ್ಲ. ಅದಾಗಿ ನಾಲ್ಕು ವರ್ಷ ಮನವಿ ಮೇಲೆ ಮನವಿ ಕೊಡುತ್ತಾ ಬಂದರೂ ಕೆಲಸ ನಡೆಯಲಿಲ್ಲ. ಕಾದು ಕಾದು ಬೇಸತ್ತ 23 ಕುಟುಂಬದವರು ಉಡುಪಿಯ ಮಾನವಹಕ್ಕುಗಳ ಪ್ರತಿಷ್ಟಾನವನ್ನು ಸಂಪರ್ಕಿಸಿದೆ. ಈ ಸಂಸ್ಥೆ 1 ವರ್ಷ ಹೋರಾಟ ಮಾಡಿದ್ರೂ ಸರ್ಕಾರ ಕಣ್ಣು ಬಿಡಲೇ ಇಲ್ಲ. ಸರ್ಕಾರದಿಂದ ಕೆಲಸ ಆಗುವುದಿಲ್ಲ ಎಂದು ಗೊತ್ತಾದ ಮೇಲೆ ನಮ್ಮ ಪಬ್ಲಿಕ್ ಹೀರೋ ಡಾ. ರವೀಂದ್ರನಾಥ ಶಾನುಭಾಗ್ ಗಾಂಧಿಗಿರಿ ಮಾಡಲು ಹೊರಟಿದ್ದಾರೆ. ದಾನಿಗಳು ಮತ್ತು ಸಂಸ್ಥೆಯ ಸದಸ್ಯರು ಹಣ ಹಾಕಿ ಕೆಲಸ ಮಾಡಲು ನಿರ್ಧರಿಸಿದ್ದಾರೆ.

    ಶಾನುಭಾಗ್ ಹೇಳಿದ್ದು ಹೀಗೆ: ಸಣ್ಣ ನಿವೇಶನಕ್ಕಾಗಿ ಕೊರಗರು ಹೋರಾಡುವುದು ಇಷ್ಟು ಕಷ್ಟವಿದೆಯಾ? 2011ರಲ್ಲಿ ಹಕ್ಕು ಪತ್ರ ಕೊಟ್ಟರೂ 7 ವರ್ಷ ಜಮೀನು ಸಮತಟ್ಟು ಮಾಡಲು ಬೇಕಾ? ಸರ್ಕಾರ ಹೇಳುವ ಅಹಿಂದಾ ಬೆಂಬಲ ಎಷ್ಟರ ಮಟ್ಟಿಗೆ ನಂಬುವುದು? ಸರ್ಕಾರ ರಿಜೆಕ್ಟ್ ಮಾಡಲು ಯಾವುದೇ ಕಾರಣಗಳಿಲ್ಲ. ಮಾನವಹಕ್ಕುಗಳ ಪ್ರತಿಷ್ಟಾನ ಈ ಕೊರಗ ಕುಟುಂಬದ ಜೊತೆ ಕೊನೆಯವರೆಗೆ ನಿಲ್ಲುತ್ತದೆ. ಜಮೀನು ಸಮತಟ್ಟು ಮಾಡಿಸಿ, ಮನೆ ಕಟ್ಟಿ ಕುಟುಂಬಗಳು ಅಲ್ಲಿ ನೆಲೆಸುವವರೆಗೆ ಆ ನಂತರದ ಸಮಸ್ಯೆಗಳ ಬಗ್ಗೆ ಕೂಡಾ ಮಾನವ ಹಕ್ಕುಗಳ ಹೋರಾಟ ಪ್ರತಿಷ್ಟಾನ ಬೆಂಬಲವಾಗಿ ನಿಲ್ಲುತ್ತದೆ ಎಂದು ಡಾ. ರವೀಂದ್ರನಾಥ ಶಾನುಭಾಗ್ ಹೇಳಿದ್ದಾರೆ.

    23 ಕುಟುಂಬಗಳು, ಅವರ ಸಂಬಂಧಿಕರು, ಮಣಿಪಾಲ ವಿಶ್ವವಿದ್ಯಾನಿಲಯದ ಸುಮಾರು 600 ಸ್ವಯಂಸೇವಕ ಸಂಘದ ಸದಸ್ಯರು ಜಮೀನು ಸಮತಟ್ಟು ಮಾಡಲು ನಾವು ಸಿದ್ಧರೆಂದು ಘೋಷಿಸಿದ್ದಾರೆ. ಒಟ್ಟಿನಲ್ಲಿ ಈ ಭೂಮಿಯ ಮೂಲ ನಿವಾಸಿಗಳಿಗೆ ನೆಲೆಯಿಲ್ಲದಂತಾಗಿರೋದು ನಾಚಿಕೆಗೇಡಿನ ವಿಚಾರ.

    https://www.youtube.com/watch?v=mUP-1N8wHHE

     

  • ಗಾಂಧಿ ಅನ್ನೋ ಹೆಸರೇ ನನಗೆ ಹೊರೆ- ಸಮಾಜವಾದಿಯಂತೆ ಆತ್ಮ ವಿಮರ್ಷೆ ಮಾಡಿಕೊಂಡ ಬಿಜೆಪಿ ಸಂಸದ ವರುಣ್ ಗಾಂಧಿ

    ಗಾಂಧಿ ಅನ್ನೋ ಹೆಸರೇ ನನಗೆ ಹೊರೆ- ಸಮಾಜವಾದಿಯಂತೆ ಆತ್ಮ ವಿಮರ್ಷೆ ಮಾಡಿಕೊಂಡ ಬಿಜೆಪಿ ಸಂಸದ ವರುಣ್ ಗಾಂಧಿ

    ಉಡುಪಿ: ಗಾಂಧಿ ಎನ್ನುವ ಹೆಸರೇ ನನಗೆ ಹೊರೆ. ನನ್ನ ಹೆಸರಿನಲ್ಲಿ ಗಾಂಧಿ ಇಲ್ಲದಿದ್ದರೆ ನಾನು ಸಂಸದ ಆಗ್ತಾನೇ ಇರಲಿಲ್ಲ ಎಂದು ಉತ್ತರಪ್ರದೇಶ ಸಂಸದ ವರುಣ್ ಗಾಂಧಿ ಆತ್ಮ ವಿಮರ್ಷೆಯ ಮಾತುಗಳನ್ನಾಡಿದ್ದಾರೆ.

    ಉಡುಪಿಯ ಮಣಿಪಾಲದಲ್ಲಿ ಉತ್ತರಪ್ರದೇಶದ ಸುಲ್ತಾನ್ ಪುರ್ ಸಂಸದ ವರುಣ್ ಗಾಂಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಭಾರತದಲ್ಲಿ ಧರ್ಮ- ಜಾತಿ ಆಧಾರಿತ ರಾಜಕಾರಣ ಮಿತಿ ಮೀರಿದೆ. ಫೇಮಸ್ ತಂದೆ ಇಲ್ಲದಿದ್ದರೆ ಮಗ ರಾಜಕಾರಣಿಯಾಗಲು ಅಸಾಧ್ಯ. ಈ ಅಸಮಾನತೆಯ ಲಾಭ ಪಡೆದವರಲ್ಲಿ ನಾನು ಕೂಡ ಒಬ್ಬ ಎಂದು ವರುಣ್ ಗಾಂಧಿ ಆತ್ಮವಿಮರ್ಷೆ ಮಾಡಿಕೊಂಡರು.

    ಜಾತ್ಯಾತೀತ ನಿಲುವಿನ ಬಗ್ಗೆ ಒಲವು ತೋರಿದ ವರುಣ್ ಗಾಂಧಿ, ಬಿಜೆಪಿಯಲ್ಲಿದ್ದುಕೊಂಡು ಸಮಾಜವಾದಿ ಚಿಂತನೆಯತ್ತ ವಾಲಿದಂತೆ ಮಾತನಾಡಿದರು. ಸಂಸತ್ ಈಗ ಟೆಂಪಲ್ ಆಫ್ ಡಿಬೇಟ್ ಆಗಿ ಉಳಿದಿಲ್ಲ. 15 ವರ್ಷದ ಹಿಂದೆ 155 ದಿನ ಸಂಸತ್ತಿನಲ್ಲಿ ಚರ್ಚೆ ಆಗುತ್ತಿತ್ತು. ಪ್ರತಿಯೊಂದು ಬಿಲ್ ಬಗ್ಗೆಯೂ ಚರ್ಚೆಗಳಾಗುತ್ತಿತ್ತು. ಈಗ 50 ದಿನವೂ ಕಲಾಪ ನಡೆಯುವುದಿಲ್ಲ. ಹಿಂದಿನಷ್ಟು ಕೆಲಸ ಮಾಡದಿದ್ದರೂ 7 ವರ್ಷದಲ್ಲಿ 5 ಬಾರಿ ಸಂಸದರ ಸಂಬಳ ಏರಿಕೆಯಾಗಿದೆ ಎಂದರು.

    ಕಲಾಪ, ಮಸೂದೆ, ಹಾಜರಾತಿ ಬಗ್ಗೆ ಸಂಸದರಿಗೆ ಈಗೀಗ ಆಸಕ್ತಿಯೇ ಇಲ್ಲ. ಭಾರತದ ಸಂಸದೀಯ ವ್ಯವಸ್ಥೆ ಬಗ್ಗೆ ಬೇಸರ ಆಗುತ್ತಿದೆ ಎಂದು ವರುಣ್ ಗಾಂಧಿ ತನ್ನ ಸಹೋದ್ಯೋಗಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

    ಯುವಕರು ಕೈಕಟ್ಟಿ ಕೂರಬೇಡಿ. ಸಾಮಾಜಿಕ ಜಾಲತಾಣ ಇಲ್ಲದ ಸಂದರ್ಭದಲ್ಲಿ ಚಿಪ್ಕೋ ಚಳುವಳಿ ಯಶಸ್ವಿಯಾಗಿದೆ. ವಾಟ್ಸಪ್ ನಲ್ಲಿ ನಡೆದ ಚಳುವಳಿ ಬೆಂಗಳೂರು ಫ್ಲೈಓವರ್ ವಿರುದ್ಧ ಗೆದ್ದಿತು. ಯುವಕರ ಹೋರಾಟಕ್ಕೆ ಗೆಲುವಾಯ್ತು. ಯುವಕರು ಪ್ರಯತ್ನ ಪಟ್ಟರೆ ಸ್ಟೀಲ್ ಬ್ರಿಡ್ಜ್ ನಿಲ್ಲಿಸಿದಂತೆ ಬೇರೆಲ್ಲಾ ಕೆಲಸವೂ ಆಗುತ್ತೆ ಎಂದು ಹೇಳಿದರು.

    ದೇಶದಲ್ಲಿ ಡೈರೆಕ್ಟ್ ಡೆಮಾಕ್ರಸಿ ಬೇಕು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿರುವಾಗ ಸದನದಲ್ಲಿ ಸಂಸದರು, ಶಾಸಕರು ಏನು ಮಾತನಾಡಬೇಕೆಂದು ಜನ ನಿರ್ಧರಿಸಬೇಕು. ಚರ್ಚಾ ವಿಷಯ ಜನ ಆಯ್ಕೆ ಮಾಡುವಂತಿರಬೇಕು. ತಮಿಳುನಾಡು ರೈತರು ದೆಹಲಿಯಲ್ಲಿ ತಮ್ಮ ಹಿರಿಯರ ತಲೆ ಬುರುಡೆ ಹಿಡಿದು, ಮೂತ್ರ ಕುಡಿದು ಪ್ರತಿಭಟನೆ ಮಾಡುತ್ತಿದ್ದರೆ ತಮಿಳು ನಾಡು ವಿಧಾನಸಭೆಯಲ್ಲಿ ಶಾಸಕರ ಸಂಬಳ ಹೆಚ್ಚಿಸುವ ವಿಶೇಷ ಅಧಿವೇಶನ ನಡೆದಿರುವುದು ನಾಚಿಕೆಗೇಡಿನ ವಿಚಾರ ಎಂದು ವರುಣ್ ಗಾಂಧಿ ಬೇಸರ ವ್ಯಕ್ತಪಡಿಸಿದರು.

  • ಸಿದ್ದು ಸರ್ಕಾರ ಮುಂದುವರಿದ್ರೆ ಮುಂದೆ ಉಗ್ರ ಕಸಬ್ ಜಯಂತಿ ಆಚರಣೆ: ಅನಂತ್ ಕುಮಾರ್ ಹೆಗಡೆ

    ಸಿದ್ದು ಸರ್ಕಾರ ಮುಂದುವರಿದ್ರೆ ಮುಂದೆ ಉಗ್ರ ಕಸಬ್ ಜಯಂತಿ ಆಚರಣೆ: ಅನಂತ್ ಕುಮಾರ್ ಹೆಗಡೆ

    ಉಡುಪಿ: ಹಠಮಾಡಿ ಸಿಎಂ ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಣೆ ಮಾಡಿದರು. ಇದೇ ಸರ್ಕಾರ ರಾಜ್ಯದಲ್ಲಿ ಮುಂದುವರೆದರೆ ಉಗ್ರ ಕಸಬ್ ಜಯಂತಿಯನ್ನೂ ಆಚರಿಸುತ್ತಾರೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ವಾಗ್ದಾಳಿ ನಡೆಸಿದ್ದಾರೆ.

    ಬಿಜೆಪಿ ಪರಿವರ್ತನಾ ಯಾತ್ರೆಯ ಕುಂದಾಪುರ ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರಕ್ಕೆ ನಾಡು ನುಡಿಯ ಕಲ್ಪನೆಯಿಲ್ಲ. ಟಿಪ್ಪು ಜಯಂತಿಯನ್ನು ಹಠಮಾಡಿ ಆಚರಣೆ ಮಾಡಿದರು. ಇದೇ ರೀತಿ ಸಿದ್ದರಾಮಯ್ಯ ಸರ್ಕಾರ ಮುಂದುವರೆದರೆ ಕಸಬ್ ಜಯಂತಿಯನ್ನು ಆಚರಿಸುತ್ತಾರೆ. ಇವರು ದೇಶದ್ರೋಹಿಗಳ ಜಯಂತಿಯನ್ನೂ ಆಚರಿಸಲು ಸಿದ್ಧರಿದ್ದಾರೆ ಎಂದು ಹೇಳಿದರು.

    ನಾವು ಸ್ವಾಭಿಮಾನ ಬಿಟ್ಟು ಬದುಕಲು ಸಾಧ್ಯವಿಲ್ಲ. ಅಭಿವೃದ್ಧಿಯ ಜೊತೆ ರಕ್ತಕ್ಕೆ ಗೌರವ ಕೊಡುವ ಸರ್ಕಾರ ನಮಗೆ ಬೇಕು. ದೇಶದ್ರೋಹಿಗಳ ಓಟೇ ಕಾಂಗ್ರೆಸ್ಸಿಗೆ ಬೇಕು ಎಂದು ಹೆಗಡೆ ವಾಗ್ದಾಳಿ ನಡೆಸಿದ್ದಾರೆ.

    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಬೇಕು. ಭಗವಾಧ್ವಜದ ನೇತೃತ್ವದಲ್ಲಿ ಧರ್ಮರಾಜ್ಯ ನಿರ್ಮಾಣವಾಗಬೇಕು. ರಾವಣರಾಜ್ಯ ಹೋಗಬೇಕು ರಾಮರಾಜ್ಯ ನಿರ್ಮಾಣ ಆಗಬೇಕು. ಸಿದ್ದರಾಮಯ್ಯ ಅವರ ದುರಹಂಕಾರಿ ಆಡಳಿತ ಕೊನೆಗೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.

     

  • ಹಾಲಾಡಿ ಸೇರ್ಪಡೆಗೆ ಬಿಜೆಪಿಯಲ್ಲೇ ವಿರೋಧ -ಕಾರ್ಯಕರ್ತರ ಮೇಲೆ ಲಾಠಿಚಾರ್ಜ್

    ಹಾಲಾಡಿ ಸೇರ್ಪಡೆಗೆ ಬಿಜೆಪಿಯಲ್ಲೇ ವಿರೋಧ -ಕಾರ್ಯಕರ್ತರ ಮೇಲೆ ಲಾಠಿಚಾರ್ಜ್

    ಉಡುಪಿ: ಕುಂದಾಪುರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಬಿಜೆಪಿ ಸೇರುವುದಕ್ಕೆ ಬಿಜೆಪಿಯಲ್ಲೇ ವಿರೋಧ ವ್ಯಕ್ತವಾಗಿದೆ.

    ಕುಂದಾಪುರದಲ್ಲಿ ನಡೆದ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಕೆಲ ಬಿಜೆಪಿ ಕಾರ್ಯಕರ್ತರು ಬಹಿರಂಗ ಆಕ್ರೋಶ ವ್ಯಕ್ತಪಡಿಸಿ ಬ್ಯಾನರ್ ಪ್ರದರ್ಶಿಸಿದ್ರು. ಈ ವೇಳೆ ಮಧ್ಯಪ್ರವೇಶಿಸಿ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಲಾಡಿಯೇ ನಮ್ಮ ನಾಯಕ, ಅವರೇ ಮುಂದಿನ ಶಾಸಕ. ಒಪ್ಪದವರು ಈಗಲೇ ಪಕ್ಷ ಬಿಟ್ಟು ಹೋಗಿ ಅಂತಾ ಗುಡುಗಿದ್ರು. ಹಾಲಾಡಿ ಮತ್ತು ಬಿಜೆಪಿ ಬಣಗಳ ಗಲಾಟೆಯಿಂದಾಗಿ ಪೊಲೀಸರು ಅನಿವಾರ್ಯವಾಗಿ ಲಾಠಿಜಾರ್ಜ್ ಮಾಡ್ಬೇಕಾಯ್ತು.

    ಇದೇ ವೇಳೆ ಸಿಪಿಎಂ ಬೆಂಬಲದಿಂದ ಕೇರಳದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತನ ಕೊಲೆಯಾಗಿದೆ ಎಂಬುದು ಸ್ಪಷ್ಟವಾಗಿದೆ. ಕೇರಳದಲ್ಲಿ ಬಿಜೆಪಿ ನೇತೃತ್ವದಲ್ಲಿ ಹಲವು ಹೋರಾಟ ನಡೆದಿದೆ ಆದರೂ ಕೊಲೆಗಳ ಸರಣಿ ಮುಂದುವರೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವೈ ಆಕ್ರೋಶ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಕುಂದಾಪುರ ಶಾಸಕ ಶ್ರೀನಿವಾಸ ಶೆಟ್ಟಿ

    ಸರ್ಕಾರ ಕೊಲೆ ಆರೋಪಿಗಳನ್ನು ಬಂಧಿಸುವ ವಿಶ್ವಾಸ ನಮಗಿಲ್ಲ. ಈ ಹತ್ಯೆಯನ್ನು ಖಂಡಿಸುತ್ತೇನೆ. ಮಣಪ್ಪುರಂ ಕಣ್ಣೂರು ದಾಟಿ ಕ್ರೌರ್ಯ ಕರಾವಳಿಗೆ ಬರಲು ಬಿಡಲ್ಲ. ರಾಜ್ಯದಲ್ಲೂ ಹಿಂದೂ ಯುವಕರ ಕೊಲೆಯಾಗುತ್ತಿದೆ. ಸಿಎಂ ಉಗ್ರ ಸಂಘಟನೆಗಳ ಜೊತೆ ಸ್ನೇಹ ಬೆಳೆಸ್ತಿದ್ದಾರೆ ಎಂದು ಆರೋಪಿಸಿದರು.

    ಕರಾವಳಿಯ ಯುವಕರು ಐಸೀಸ್, ಸೇರ್ಪಡೆಯಾಗುತ್ತಿದ್ದಾರೆ. ಮಂಗಳೂರಲ್ಲಿ ಎನ್‍ಐಎ ಕಚೇರಿ ಕೂಡಲೇ ತೆರೆಯಬೇಕು. ಕೇಂದ್ರಕ್ಕೆ ಈ ಬಗ್ಗೆ ಮನವಿ ಮಾಡಿ ಒತ್ತಡ ಹೇರುತ್ತೇನೆ ಎಂದು ಹೇಳಿದರು.