Tag: ಉಜ್ಜೈನಿ

  • Nag Panchami: ವರ್ಷಕೊಮ್ಮೆ ನಾಗಪಂಚಮಿಯಂದು ಮಾತ್ರ ತೆರೆಯುತ್ತೆ ನಾಗಚಂದ್ರೇಶ್ವರ ದೇವಾಲಯ

    Nag Panchami: ವರ್ಷಕೊಮ್ಮೆ ನಾಗಪಂಚಮಿಯಂದು ಮಾತ್ರ ತೆರೆಯುತ್ತೆ ನಾಗಚಂದ್ರೇಶ್ವರ ದೇವಾಲಯ

    ದೇಶಾದ್ಯಂತ ನಾಗಪಂಚಮಿ (Nagara Panchami) ಹಬ್ಬದ ಸಂಭ್ರಮ ಮನೆ ಮಾಡಿದೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ನಾಗಪಂಚಮಿ ಆಚರಿಸಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ಸರ್ಪಗಳನ್ನು ಶಿವನ ಆಭರಣ ಎಂದು ಪರಿಗಣಿಸಲಾಗಿದೆ. ನಾಗದೇವರಿಗೆ ಭಕ್ತರು ಹಾಲೆರೆದು, ಪೂಜೆ-ಪುನಸ್ಕಾರಗಳ ಮೂಲಕ ಹಬ್ಬ ಆಚರಿಸುತ್ತಾರೆ. ಶಿವಲಿಂಗ ಪೂಜೆ ಕೂಡ ನೆರವೇಸುತ್ತಾರೆ. ದೇವಾಲಯಗಳಿಗೆ ಭೇಟಿ ನೀಡಿ ಭಕ್ತಿ-ಭಾವ ಮೆರೆಯುತ್ತಾರೆ. ಭಾರತದಲ್ಲಿ ಅನೇಕ ಸರ್ಪ ದೇವಾಲಯಗಳಿವೆ. ಅವುಗಳಲ್ಲಿ ಒಂದು ಉಜ್ಜಯಿನಿಯ (Ujjain) ನಾಗಚಂದ್ರೇಶ್ವರ ದೇವಾಲಯ (Nagchandreshwar Temple). ಇದು ಪ್ರಸಿದ್ಧ ಮಹಾಕಾಳ ದೇವಾಲಯದ ಮೂರನೇ ಮಹಡಿಯಲ್ಲಿದೆ. ಈ ದೇವಾಲಯವು ವರ್ಷಕ್ಕೊಮ್ಮೆ ನಾಗಪಂಚಮಿಯಂದು ಮಾತ್ರ 24 ಗಂಟೆಗಳ ಕಾಲ ತೆರೆದಿರುತ್ತದೆ.

    ಈ ದೇವಾಲಯದಲ್ಲಿ ನಾಗರಾಜ ತಕ್ಷಕ ಸ್ವತಃ (ನಾಗರ ರಾಜ) ವಾಸಿಸುತ್ತಾನೆ ಎಂದು ನಂಬಲಾಗಿದೆ. ನಾಗಚಂದ್ರೇಶ್ವರ ದೇವಾಲಯದಲ್ಲಿ 11 ನೇ ಶತಮಾನದ ಅದ್ಭುತ ಪ್ರತಿಮೆಯಿದೆ. ಇದರಲ್ಲಿ ಶಿವ ಮತ್ತು ಪಾರ್ವತಿಯರು ಹೆಡೆ ಬಿಚ್ಚಿದ ಹಾವಿನ ಆಸನದ ಮೇಲೆ ಕುಳಿತಿರುವ ಭಂಗಿ ಇದೆ. ಈ ಪ್ರತಿಮೆಯನ್ನು ನೇಪಾಳದಿಂದ ಇಲ್ಲಿಗೆ ತರಲಾಗಿದೆ ಎಂದು ಹೇಳಲಾಗುತ್ತದೆ. ಉಜ್ಜಯಿನಿ ಹೊರತುಪಡಿಸಿ, ಜಗತ್ತಿನಲ್ಲಿ ಎಲ್ಲಿಯೂ ಅಂತಹ ಪ್ರತಿಮೆ ಇಲ್ಲ. ಅದರ ದರ್ಶನಕ್ಕಾಗಿ, ಸೋಮವಾರ ರಾತ್ರಿ 12 ಗಂಟೆಗೆ ದೇವಾಲಯದ ದ್ವಾರಗಳನ್ನು ತೆರೆಯಲಾಗುತ್ತದೆ. ಮಂಗಳವಾರ ಮಧ್ಯರಾತ್ರಿ 12 ಗಂಟೆಗೆ, ದೇವಾಲಯದ ಬಾಗಿಲುಗಳನ್ನು ಮತ್ತೆ ಒಂದು ವರ್ಷದವರೆಗೆ ಮುಚ್ಚಲಾಗುತ್ತದೆ. ಇದನ್ನೂ ಓದಿ: ನಾಗಮಂಡಲ ಎಂದರೇನು? ಇದರ ಆಚರಣೆ, ಮಹತ್ವವೇನು?

    ಸರ್ಪ ರಾಜ ತಕ್ಷಕನು ತೀವ್ರ ತಪಸ್ಸು ಮಾಡಿದನು. ಭೋಲೆನಾಥನು ಅವನ ತಪಸ್ಸಿನಿಂದ ಸಂತಸಗೊಂಡು ಹಾವುಗಳ ರಾಜ ತಕ್ಷಕ ನಾಗನಿಗೆ ಅಮರತ್ವದ ವರವನ್ನು ನೀಡಿದನು. ಅಂದಿನಿಂದ ತಕ್ಷಕ ರಾಜನು ಭಗವಂತನ ಸಹವಾಸದಲ್ಲಿ ವಾಸಿಸಲು ಪ್ರಾರಂಭಿಸಿದನು ಎಂದು ನಂಬಲಾಗಿದೆ. ಆದರೆ ಮಹಾಕಾಳ ಕಾಡಿನಲ್ಲಿ ವಾಸಿಸುವ ಮೊದಲು, ಅವನ ಏಕಾಂತತೆಯಲ್ಲಿ ಯಾವುದೇ ತೊಂದರೆ ಉಂಟಾಗಬಾರದು ಎಂಬುದು ಅವನ ಉದ್ದೇಶವಾಗಿತ್ತು. ಆದ್ದರಿಂದ ಅವನು ನಾಗಪಂಚಮಿಯ ದಿನದಂದು ಮಾತ್ರ ದರ್ಶನಕ್ಕೆ ಲಭ್ಯವಿರುತ್ತಾನೆ ಎಂಬುದು ನಂಬಿಕೆಯಾಗಿದೆ.

    4 ಲಕ್ಷ ಭಕ್ತರು ಭೇಟಿ
    ಮಂಗಳವಾರ ನಾಗಪಂಚಮಿಯ ಸಂದರ್ಭದಲ್ಲಿ 4 ಲಕ್ಷಕ್ಕೂ ಹೆಚ್ಚು ಭಕ್ತರು ನಾಗಚಂದ್ರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಮಧ್ಯರಾತ್ರಿ 12 ಗಂಟೆಗೆ ದೇವಾಲಯದ ದ್ವಾರಗಳು ತೆರೆದವು. ಭಕ್ತರು ಪೂಜೆ ಸಲ್ಲಿಸಿದ್ದರು. ಇಂದು ರಾತ್ರಿ 12 ಗಂಟೆಯವರೆಗೆ ದೇವಾಲಯವು ದರ್ಶನಕ್ಕಾಗಿ ತೆರೆದಿರುತ್ತದೆ. ಮಂಗಳವಾರ ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸುಮಾರು 4 ಲಕ್ಷ ಭಕ್ತರು ಇಲ್ಲಿ ದರ್ಶನ ಪಡೆದಿದ್ದಾರೆ. ಇಂದು ಮಧ್ಯರಾತ್ರಿ 12 ಗಂಟೆಗೆ ಬಾಗಿಲು ಮುಚ್ಚುವ ಹೊತ್ತಿಗೆ ಕನಿಷ್ಠ 10 ಲಕ್ಷ ಭಕ್ತರು ಭೇಟಿ ನೀಡುವ ನಿರೀಕ್ಷೆಯಿದೆ. ಇದನ್ನೂ ಓದಿ: ಮಲೆನಾಡು – ಪ್ರಕೃತಿಯ ಆರಾಧನೆಯ ಭಾಗವಾಗಿ ನಾಗರ ಪಂಚಮಿ

    ಶಿವ, ಪಾರ್ವತಿ ಮತ್ತು ಸರ್ಪ ದೇವರು ಒಟ್ಟಿಗೆ ಕುಳಿತಿರುವ ದೇವಾಲಯದ ವಿಶಿಷ್ಟ ವಿಗ್ರಹವು ಭಕ್ತರಿಗೆ ಪ್ರಬಲ ಆಕರ್ಷಣೆಯ ಕೇಂದ್ರವಾಗಿದೆ. ದೇವಾಲಯದಲ್ಲಿ ಪೂಜೆ ಮಾಡುವುದರಿಂದ ಜಾತಕದಲ್ಲಿನ ಕಾಳಸರ್ಪ ದೋಷ ಮತ್ತು ಇತರ ಸರ್ಪ ದೋಷಗಳಿಂದ ಪರಿಹಾರ ಸಿಗುತ್ತದೆ ಎಂದು ನಂಬಲಾಗಿದೆ.

  • ಸುವರ್ಣಾವಕಾಶ ಕಳೆದುಕೊಳ್ಳಲು ಬಯಸದ ಡಿಕೆಶಿ!

    ಸುವರ್ಣಾವಕಾಶ ಕಳೆದುಕೊಳ್ಳಲು ಬಯಸದ ಡಿಕೆಶಿ!

    ಬೆಂಗಳೂರು: ಮುಂದೊಂದು ದಿನ ಈ ರಾಜ್ಯದ ಸಿಎಂ ಆಗಲೇ ಬೇಕು ಎಂಬ ಆಕಾಂಕ್ಷೆ ಹೊಂದಿರುವ ಈಗಿನ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (D.K Shivakumar) ತಮಗೆ ಬಂದೊದಗುವ ಯಾವುದೇ ಅವಕಾಶವನ್ನು ಕೈಚೆಲ್ಲಲು ಸಿದ್ಧರಿಲ್ಲ.

    ಹೌದು, ಸಂಕಷ್ಟ ಕಾಲದಲ್ಲಿ ಪಕ್ಷದ ಚುಕ್ಕಾಣಿ ಹಿಡಿಯುವ ಸಂದರ್ಭ ಬಂದಾಗ, ಅದು ಸೂಕ್ತ ಕಾಲವಲ್ಲ ಎಂಬ ಹಿತೈಷಿಗಳ ಕಿವಿಮಾತನ್ನು ಲೆಕ್ಕಿಸದೇ ಕೆಪಿಸಿಸಿ ಅಧ್ಯಕ್ಷ ಗಾದಿಯನ್ನು ಡಿಕೆಶಿ ಒಪ್ಪಿಕೊಂಡಿದ್ದರು. ಇದೀಗ ಮುಂದಿನ ಸರದಿಯಲ್ಲಿ ಸಿಎಂ ಗಾದಿ ಖಚಿತ ಎಂಬ ಹೈಕಮಾಂಡ್ (Congress HighCommand) ಭರವಸೆಯಲ್ಲಿ ಡಿಸಿಎಂ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ಮುಂದೊಂದು ದಿನ ಗುರಿ ತಲುಪುತ್ತೇನೆ ಎನ್ನುವ ಭರವಸೆಯಲ್ಲಿ ಇದ್ದಾರೆ.

    ಈಗ ವಿಷಯ ಏನಪ್ಪಾ ಅಂದ್ರೆ, ಕಾಂಗ್ರೆಸ್ ನ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಪೈಕಿ ಮೊದಲನೆಯದ್ದಕ್ಕೆ ನಾಳೆ ಅಧಿಕೃತ ಚಾಲನೆ ನೀಡಲಾಗುತ್ತಿದೆ. ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಕಾರ್ಯಕ್ರಮ ನಾಳೆ ನಡೆಯಲಿದೆ. ನಾಳಿನ ಮುಹೂರ್ತ ನಿಗದಿ ಮಾಡಿದ್ದೇ ಡಿ.ಕೆ ಶಿವಕುಮಾರ್ ಅಂತೆ. ಹೇಳಿ ಕೇಳಿ ಪರಮ ದೈವಭಕ್ತರಾದ ಅವರು, ಶುಭಮುಹೂರ್ತವನ್ನೇ ಆಯ್ಕೆ ಮಾಡಿಕೊಂಡಿದ್ದಾರಂತೆ. ಈ ನಡುವೆ ಅವರು ಚುನಾವಣೆಗೂ ಮುನ್ನ ಹರಕೆ ಹೊತ್ತುಕೊಂಡಂತೆ ಉಜ್ಜೈನಿ (Ujjaini) ಸೇರಿದಂತೆ ಉತ್ತರಭಾರತದ ಕೆಲವು ದೇವಾಲಯ ದರ್ಶನಕ್ಕೆ ಶನಿವಾರ ಹೊರಟು ನಿಂತಿದ್ದಾರೆ. ಇದನ್ನೂ ಓದಿ: ಶಕ್ತಿ ಯೋಜನೆಗೆ ಭಾನುವಾರ ಚಾಲನೆ- ಬಸ್ ಕಂಡಕ್ಟರ್ ಆಗಲಿದ್ದಾರೆ ಸಿದ್ದರಾಮಯ್ಯ

     ಶುಕ್ರವಾರ ನಿಗದಿಯಾದ ಕಾರ್ಯಕ್ರಮದಂತೆ ಅವರು ಭಾನುವಾರ ಸಂಜೆಯ ಹೊತ್ತಿಗೆ ವಾಪಸ್ಸಾಗಬೇಕಿತ್ತು. ಆದರೆ ಇದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ನೂತನ ಸರ್ಕಾರದ ಮಹತ್ವದ ಮೊದಲ ಗ್ಯಾರಂಟಿ ಕಾರ್ಯಕ್ರಮಕ್ಕೆ ಡಿಕೆಶಿ ಗೈರಾಗುತ್ತಿದ್ದಾರಲ್ಲ. ಪಕ್ಷ ಹಾಗೂ ಸರ್ಕಾರದ ಕಾರ್ಯಕ್ಕಿಂತ ದೇವಾಲಯ ದರ್ಶನವೇ ಮುಖ್ಯವಾಯಿತೇ ಎಂದು. ಆದರೆ ಸಿಎಂ ಸಿದ್ದರಾಮಯ್ಯ (Siddaramaiah) ಬಿಡಬೇಕಲ್ಲ. ಏನಪ್ಪಾ ಮುಹೂರ್ತ ನಿಗದಿಪಡಿಸಿ ನೀವೇ ಇಲ್ಲಾಂದ್ರೆ ಹೇಗೇ ಅಂತ ಕೇಳಿದ್ರಂತೆ. ತಕ್ಷಣ ಡಿ.ಕೆ ಶಿವಕುಮಾರ್ ತಮ್ಮ ಮುಂದಿರುವ ಸುವರ್ಣಾವಕಾಶವನ್ನು ತಪ್ಪಿಸಿಕೊಳ್ಳಲು ಬಯಸಲಿಲ್ಲ.

    ದೇವಾಲಯ ದರ್ಶನ ಕಾರ್ಯಕ್ರಮದಲ್ಲೇ ಸ್ವಲ್ಪ ಬದಲಾವಣೆ ಮಾಡಿ, ನಾಳೆ (ಭಾನುವಾರ) 11 ಗಂಟೆಗೆ ಬೆಂಗಳೂರಿಗೆ ಬರುವಂತೆ ಪ್ಲಾನ್ ಮಾಡಿದ್ದಾರೆ. ಸರ್ಕಾರ ಮೊದಲ ಗ್ಯಾರಂಟಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತೀರ್ಮಾನಿಸಿದ್ದಾರೆ. ಅಂದರೆ ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಡಿಕೆಶಿ, ತಮ್ಮ ಮುಂದೆ ಬರುವ ಯಾವುದೇ ಅವಕಾಶವನ್ನು ಕೈಚೆಲ್ಲುವ ತಪ್ಪನ್ನು ಮಾಡದಿರಲು ನಿರ್ಧರಿಸಿದಂತೆ ಕಾಣುತ್ತೆ. ಸದ್ಯ ಸಂಪುಟದಲ್ಲಿ ಎಲ್ಲರಿಗಿಂತ ಸ್ವಲ್ಪ ಹೆಚ್ಚಾಗಿಯೇ ನುಗ್ಗುತ್ತಿರುವ ಡಿಕೆಶಿವಕುಮಾರ್, ಕೆಲವೊಮ್ಮೆ ಸಿಎಂ ಸಿದ್ದರಾಮಯ್ಯ ಅವರನ್ನೂ ಓವರ್ ಟೇಕ್ ಮಾಡುವುದನನ್ನು ಗಮನಿಸಬಹುದು.

  • ಕಾಶಿ ಮಾದರಿಯಲ್ಲೇ ಉಜ್ಜೈನಿ ಮಹಾಕಾಲೇಶ್ವರ ಅಭಿವೃದ್ಧಿ- ಜ್ಯೋತಿರ್ಲಿಂಗಕ್ಕೆ ಮೋದಿ ಪೂಜೆ

    ಕಾಶಿ ಮಾದರಿಯಲ್ಲೇ ಉಜ್ಜೈನಿ ಮಹಾಕಾಲೇಶ್ವರ ಅಭಿವೃದ್ಧಿ- ಜ್ಯೋತಿರ್ಲಿಂಗಕ್ಕೆ ಮೋದಿ ಪೂಜೆ

    ನವದೆಹಲಿ: ಹತ್ತು ತಿಂಗಳ ಹಿಂದಷ್ಟೇ ಪ್ರಧಾನಿ ಮೋದಿ (Narendra Modi) ಕಾಶಿ ಕಾರಿಡಾರ್ ಉದ್ಘಾಟಿಸಿದ್ರು. ಇದೀಗ ದ್ವಾದಶ ಜ್ಯೋತಿರ್ಲಿಂಗಗಳು ನೆಲೆಸಿರುವ ಕ್ಷೇತ್ರಗಳಲ್ಲಿ ಒಂದಾದ ಉಜ್ಜೈನಿಯ ಮಹಾಕಾಲೇಶ್ವರ (Mahakaleshwara) ನ ಸನ್ನಿಧಿಯಲ್ಲಿ ಅತ್ಯದ್ಭುತ ಎನ್ನಬಹುದಾದ ಮಹಾಕಾಲ ಲೋಕವನ್ನು ಪ್ರಧಾನಿ ಮೋದಿ ಅನಾವರಣ ಮಾಡಿದ್ದಾರೆ.

    ಸಂಜೆ ಮಹಾಕಾಳೇಶ್ವರನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಗಂಧ, ರುದ್ರಾಕ್ಷಾಮಾಲಾಧಾರಿ ಮೋದಿ ದೇಶದ ಒಳಿತಿಗೆ ಭಗವಂತನ ಮುಂದೆ ಸಂಕಲ್ಪ ಮಾಡಿದರು. ಬಳಿಕ ರುದ್ರಸಾಗರ ಸರೋವರದ ಬಳಿಯಿರುವ ಶ್ರೀಮಹಾಕಾಳೇಶ್ವರಾಲಯ ಕಾರಿಡಾರ್‍ನ ಮೊದಲ ಹಂತವನ್ನು ಪ್ರಧಾನಿ ಮೋದಿ ದೇಶಕ್ಕೆ ಅರ್ಪಣೆ ಮಾಡಿದ್ರು. ಹೆಜ್ಜೆ ಹೆಜ್ಜೆಗೂ ಶಿವತತ್ತ್ವವೇ ಮೇಳೈಸಿರುವ, 900 ಮೀಟರ್‍ಗಿಂತ ಹೆಚ್ಚು ಉದ್ದವಿರುವ ಈ ಕಾರಿಡಾರ್‍ನಲ್ಲಿ ಪ್ರಧಾನಿ ಮೋದಿ ಹೆಜ್ಜೆ ಹಾಕಿ ಪ್ರತಿಯೊಂದನ್ನು ತಿಳಿದುಕೊಂಡರು.

    ಇದು ದೇಶದಲ್ಲೇ ಅತಿದೊಡ್ಡ ಧಾರ್ಮಿಕ ಕಾರಿಡಾರ್ ಎಂಬ ಗರಿಮೆಗೆ ಪಾತ್ರವಾಗಿದೆ. ಮಹಾಕಾಲ್ ಲೋಕ್ ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿದ ಪ್ರಧಾನಿ, ವಸಾಹತುಶಾಹಿ ಮನಸ್ಥಿತಿಯಿಂದ ದೇಶ ಹೊರಬಂದಿದೆ. ಇದು ಐದು ಪ್ರಾಣಗಳಿಗೆ ಧಾರೆ ಎರೆದಿದೆ. ಅಯೋಧ್ಯೆ ರಾಮಮಂದಿರ, ಕಾಶಿ ಕಾರಿಡಾಶರ್, ಕರ್ತಾರ್ ಪುರ ಕಾರಿಡಾರ್, ಈಗ ಮಹಾಕಾಲ ಲೋಕ್ (Mahakal Lok) ಉದ್ಘಾಟನೆಗೊಂಡಿದೆ. ಉಜ್ಜೈನಿ ಭಾರತದ ಹೆಮ್ಮೆಯ ಆಧ್ಯಾತ್ಮಿಕ ತಾಣಗಳಲ್ಲಿ ಒಂದು ಎಂದರು.

    ದೇಶದ ಪುರಾತನ ದೇಗುಲಗಳನ್ನು ಹೆಸರಿಸುವಾಗ ಬೇಲೂರು ಹಳೇಬೀಡನ್ನು ಕೂಡ ಪ್ರಧಾನಿ ಮೋದಿ ನೆನಪಿಸಿದ್ರು. ಇನ್ನು, ಎರಡನೇ ಹಂತದ ಕಾರಿಡಾರ್‍ನಲ್ಲಿ ಸೃಷ್ಟಿಯ ರಹಸ್ಯ, ಗಣೇಶನ ಹುಟ್ಟು, ಸತಿ, ದಕ್ಷ ಮುಂತಾದವರ ಕಥೆಗಳನ್ನು ಚಿತ್ರಿಸಲು ಯೋಜನೆ ರೂಪಿಸಲಾಗಿದೆ. ಸದ್ಯ ಉಜ್ಜೈನಿಗೆ ವರ್ಷಕ್ಕೆ 1.5 ಕೋಟಿ ಭಕ್ತರು ಭೇಟಿ ಕೊಡುತ್ತಿದ್ದು, ಇದನ್ನು ದುಪ್ಪಟ್ಟುಗೊಳಿಸುವ ಗುರಿ ಹೊಂದಲಾಗಿದೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ರಸ್ತೆ ಮೇಲೆ ರಾಹುಲ್, ಡಿಕೆಶಿ ಪುಷ್-ಅಪ್ಸ್‌

    ಮಹಾಕಾಲ್ ಲೋಕದ ವಿಶೇಷತೆಗಳು ಏನು..?: 856 ಕೋಟಿ ರೂ. ವೆಚ್ಚದ 2 ಹಂತದ ಯೋಜನೆ ಇದಾಗಿದೆ. 900 ಮೀ.ಗಿಂತ ಹೆಚ್ಚು ಉದ್ದದ ಕಾರಿಡಾರ್, 2 ಭವ್ಯ ಹೆಬ್ಬಾಗಿಲು – ನಂದಿದ್ವಾರ, ಪಿನಾಕಿದ್ವಾರವಿದೆ. 108 ಮರಳುಗಲ್ಲಿನ ಸಾಲಂಕೃತ ಸ್ತಂಭ, ಶಿವಪುರಾಣದಂತೆ 190 ಶಿವ ವಿಗ್ರಹ, ನಯನಮನೋಹರ ಶಿವಕಾರಂಜಿ, ಮಿಡ್ ವೇ ಜೋನ್, ಪಾರ್ಕ್ ಹಾಗೂ ಕಾರ್, ಬಸ್‍ಗಳಿಗಾಗಿ ಬಹು ಅಂತಸ್ತಿನ ಪಾರ್ಕಿಂಗ್ ಲಾಟ್ ಇದೆ.

    Live Tv
    [brid partner=56869869 player=32851 video=960834 autoplay=true]

  • ಭಾರತದ ಕೊರೊನಾ ಡೇಂಜರ್ ಡೆತ್ ಸ್ಪಾಟ್ ಉಜ್ಜೈನಿ- 235ರಲ್ಲಿ 45 ಸೋಂಕಿತರು ಸಾವು!

    ಭಾರತದ ಕೊರೊನಾ ಡೇಂಜರ್ ಡೆತ್ ಸ್ಪಾಟ್ ಉಜ್ಜೈನಿ- 235ರಲ್ಲಿ 45 ಸೋಂಕಿತರು ಸಾವು!

    ಉಜ್ಜೈನಿ (ಮಧ್ಯಪ್ರದೇಶ): ಕೋವಿಡ್ 19 ಅಥವಾ ಕೊರೋನಾ ಸೋಂಕಿನ ಭಾರತದ ಡೆಡ್ಲಿ ಡೇಂಜರ್ ಸ್ಪಾಟ್ ಕುಖ್ಯಾತಿಗೆ ಮಧ್ಯಪ್ರದೇಶದ ಉಜ್ಜೈನಿ ಪಾತ್ರವಾಗಿದೆ. ಕೊರೋನಾ ಸೋಂಕು ಬಾಧಿತರ ಸಂಖ್ಯೆ ಕಡಿಮೆ ಇದ್ದರೂ ಸೋಂಕಿನಿಂದ ಇಲ್ಲಿ ಸಾವನ್ನಪ್ಪುತ್ತಿರುವವರ ಮರಣ ಪ್ರಮಾಣ ಎಲ್ಲರನ್ನು ಬೆಚ್ಚಿ ಬೀಳಿಸುತ್ತಿದೆ. ಇಲ್ಲಿ ಸೋಂಕು ತಗುಲಿದ 100ರಲ್ಲಿ 19 ಜನ ಸಾವಿಗೀಡಾಗುತ್ತಿದ್ದಾರೆ. ಇದು ಇಲ್ಲಿನ ಆಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಈ ಅಂಕಿ ಅಂಶ ಜಗತ್ತಿನ ಎಲ್ಲ ರಾಷ್ಟ್ರಗಳನ್ನೂ ಮೀರಿಸುತ್ತಿದೆ.

    ಇದುವರೆಗೆ ಉಜ್ಜೈನಿಯಲ್ಲಿ 235 ಜನರಿಗೆ ಸೋಂಕು ತಗುಲಿದ್ದು ಇವರಲ್ಲಿ 45 ಜನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಕೋವಿಡ್ ಮರಣ ಪ್ರಮಾಣ ಶೇ.3.34ರಷ್ಟಿದ್ದರೆ, ಉಜ್ಜೈನಿಯಲ್ಲಿ ಇದು ಶೇ.19.15ರಷ್ಟಿದೆ. ಕೋವಿಡ್ ರೋಗಿಗಳ ಸಂಖ್ಯೆ ಹಾಗೂ ಮರಣದಲ್ಲಿ ಮುಂಬೈ, ದೆಹಲಿ, ಅಹಮದಾಬಾದ್ ಅಗ್ರಸ್ಥಾನದಲ್ಲಿದ್ದರೂ ಅಲ್ಲಿನ ಮರಣ ಪ್ರಮಾಣ ಉಜ್ಜೈನಿಯಷ್ಟಿಲ್ಲ. ಮುಂಬೈ – ಶೇ.3.91, ದೆಹಲಿ-ಶೇ.1.08, ಅಹಮದಾಬಾದ್ ನಲ್ಲಿ ಶೇ. 6.29ರಷ್ಟಿದೆ. ರೋಗ ಪತ್ತೆ ಹಚ್ಚುವಲ್ಲಿ ಉಂಟಾಗುತ್ತಿರುವ ವಿಳಂಬ, ಚಿಕಿತ್ಸೆಗೆ ಮುಂದಾಗದೇ ಇರುವುದೇ ಮರಣ ಪ್ರಮಾಣ ಹೆಚ್ಚಳಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

    ವಿಶ್ವದಲ್ಲಿ ಕೋವಿಡ್ ಸೋಂಕಿತರ ಮರಣ ಪ್ರಮಾಣ ಶೇ.6.8ರಷ್ಟಿದೆ. ಯುಕೆಯಲ್ಲಿ ಶೇ.14, ಫ್ರಾನ್ಸ್ ನಲ್ಲಿ ಶೇ.14, ಇಟಲಿಯಲ್ಲಿ ಶೇ. 13, ಸ್ಪೇನ್ ನಲ್ಲಿ ಶೇ.10.11, ಯುಎಸ್‍ಎಯಲ್ಲಿ ಶೇ.5.95 ಹಾಗೂ ರಷ್ಯಾದಲ್ಲಿ ಶೇ. 0.90ರಷ್ಟಿದೆ.

    ಕರ್ನಾಟಕದಲ್ಲಿ ಶೇ. 3.80: ಕೊರೋನಾ ಸೋಂಕಿತರ ಮರಣ ಪ್ರಮಾಣ ಶೇ.3.80 ರಷ್ಟಿದೆ. ಸೋಂಕು ಬಾಧಿತ 789 ಮಂದಿಯಲ್ಲಿ ಇದುವರೆಗೆ 30 ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ 379 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

    ಮಹಾರಾಷ್ಟ್ರ ಶೇ.3.80, ಮಧ್ಯಪ್ರದೇಶ ಶೇ. 5.90, ಗುಜರಾತ್ ಶೇ.6.06, ಪಶ್ಚಿಮ ಬಂಗಾಳ ಶೇ.9.75 ಹಾಗೂ ಕೇರಳದಲ್ಲಿ ಶೇ. 0.70 ಮರಣ ಪ್ರಮಾಣ ದಾಖಲಾಗಿದೆ.

  • ಆಪರೇಷನ್ ಥಿಯೇಟರ್‌ನಲ್ಲಿ ನರ್ಸ್‌ಗೆ ಕಿಸ್ ಮಾಡಿದ ವೈದ್ಯ: ವಿಡಿಯೋ ವೈರಲ್

    ಆಪರೇಷನ್ ಥಿಯೇಟರ್‌ನಲ್ಲಿ ನರ್ಸ್‌ಗೆ ಕಿಸ್ ಮಾಡಿದ ವೈದ್ಯ: ವಿಡಿಯೋ ವೈರಲ್

    ಉಜ್ಜೈನಿ: ವೈದ್ಯನೊಬ್ಬ ಆಪರೇಷನ್ ಥಿಯೇಟರ್‌ನಲ್ಲೇ ನರ್ಸ್‌ಗೆ ಕಿಸ್ ಮಾಡಿದ ಘಟನೆಯೊಂದು ಮಧ್ಯಪ್ರದೇಶದ ಉಜ್ಜೈನಿಯ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ. ವೈದ್ಯ ನರ್ಸ್‌ಗೆ ಕಿಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಆತನನ್ನು ಕೆಲಸದಿಂದ ವಜಾ ಮಾಡಲಾಗಿದೆ.

    49 ವರ್ಷದ ಸಿವಿಲ್ ಸರ್ಜನ್‍ನ ವರ್ತನೆಯಿಂದ ಆತನನ್ನು ಕೆಲಸದಿಂದ ವಜಾ ಮಾಡಲಾಗಿದ್ದು, ಘಟನೆ ಬಗ್ಗೆ ವಿವರಣೆ ನೀಡಬೇಕೆಂದು ಆತನಿಗೆ ನೋಟಿಸ್ ಜಾರಿ ಮಾಡಿದ್ದೇನೆ ಎಂದು ಜಿಲ್ಲಾಧಿಕಾರಿ ಶಶಾಂಕ್ ಮಿಶ್ರಾ ತಿಳಿಸಿದ್ದಾರೆ.

    ಡಿವಿಶನಲ್ ಕಮಿಷನರ್ ಈ ಘಟನೆ ಬಗ್ಗೆ ವಿಚಾರಣೆ ನಡೆಸುತ್ತಾರೆ. ವೈದ್ಯ, ನರ್ಸ್‌ಗೆ ಕಿಸ್ ಮಾಡುತ್ತಿರುವ ವಿಡಿಯೋ ಆಸ್ಪತ್ರೆಯಲ್ಲೇ ತೆಗೆದಿರುವುದೋ ಇಲ್ಲವೋ ಎನ್ನುವುದು ಖಚಿತವಾಗಿಲ್ಲ ಎಂದು ಜಿಲ್ಲಾ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ. ಮೋಹನ್ ಮಾಳವಿಯಾ ತಿಳಿಸಿದ್ದಾರೆ.

    ನರ್ಸಿಂಗ್ ಸ್ಟಾಫ್ ವಾಟ್ಸಪ್ ಗ್ರೂಪಿನಲ್ಲಿ ಈ ಅಸಭ್ಯ ವಿಡಿಯೋ ಬಂತು ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ. ಈ ವಿಡಿಯೋ ಆಕಸ್ಮಿಕವಾಗಿ ಗ್ರೂಪಿನಲ್ಲಿ ಸೆಂಡ್ ಆಯ್ತೇ ಅಥವಾ ಉದ್ದೇಶಪೂರ್ವಕವಾಗಿಯೇ ಸೆಂಡ್ ಮಾಡಿದ್ದಾರಾ ಎನ್ನುವುದರ ಬಗ್ಗೆ ಜಿಲ್ಲಾಧಿಕಾರಿ ತನಿಖೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv