Tag: ಉಚಿತ ಆಹಾರ

  • ಇನ್ಮುಂದೆ ತಡವಾಗಿ ರೈಲು ಬಂದರೆ ಪ್ರಯಾಣಿಕರಿಗೆ ಉಚಿತ ಆಹಾರ- ಎಲ್ಲ ರೈಲಿನಲ್ಲಿ ಸಿಗಲ್ಲ

    ಇನ್ಮುಂದೆ ತಡವಾಗಿ ರೈಲು ಬಂದರೆ ಪ್ರಯಾಣಿಕರಿಗೆ ಉಚಿತ ಆಹಾರ- ಎಲ್ಲ ರೈಲಿನಲ್ಲಿ ಸಿಗಲ್ಲ

    ನವದೆಹಲಿ: ಪ್ರಯಾಣಿಕರಿಗಾಗಿ ಆಹಾರ (Food) ಗುಣಮಟ್ಟವನ್ನು ಸುಧಾರಿಸಲು ಭಾರತೀಯ ರೈಲ್ವೇ (Railway) ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC) ಸ್ಥಾಪಿಸಿದ ನಂತರ ಹೊಸ ಕ್ರಮ ಅನುಷ್ಠಾನಗೊಳಿಸಲಾಗಿದೆ.

    ಇನ್ನುಮುಂದೆ ರಾಜಧಾನಿಗಳು, ಶತಾಬ್ದಿಗಳು (Shatabdis) ಹಾಗೂ ದುರಂತೋ ಪ್ರೀಮಿಯಂ ರೈಲುಗಳಲ್ಲಿ (Premium Trains) ಪ್ರಯಾಣಿಸುವ ಪ್ರಯಾಣಿಕರಿಗೆ ಉಚಿತ ಆಹಾರ ನೀಡಲು ತೀರ್ಮಾನಿಸಿದೆ.

    ಉಚಿತ ಊಟದಲ್ಲಿ ವೆಜ್ ಅಥವಾ ನಾನ್‌ವೆಜ್ ಯಾವುದನ್ನೂ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಪ್ರೀಮಿಯಂ ರೈಲುಗಳು (Premium Trains) 2 ಗಂಟೆ ವಿಳಂಬವಾದರೆ ಮಾತ್ರ ಉಚಿತ ಊಟದ (Free Food) ಸೌಲಭ್ಯವಿರಲಿದೆ. ವಿಳಂಬದ ಕಾರಣವನ್ನು ಲೆಕ್ಕಿಸದೇ ಉಚಿತ ಆಹಾರ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಉಚಿತ ಊಟವನ್ನು ಹೆಚ್ಚಾಗಿ ನೀಡುವುದು ಅಸಂಬದ್ಧ ಕ್ರಮವಾಗುತ್ತದೆ. ಹಾಗಾಗಿ ಪ್ರೀಮಿಯಂ ರೈಲುಗಳ ಚಾಲನೆಗೆ ಮಾತ್ರ ಈ ಆದ್ಯತೆ ನೀಡಲಾಗುತ್ತದೆ. ಇದನ್ನೂ ಓದಿ: ರಾಜಕಾಲುವೆ ಅತಿಕ್ರಮ ತೆರವು ಕಾರ್ಯಾಚರಣೆ – ಭೇದಭಾವದ ಪ್ರಶ್ನೆಯೇ ಇಲ್ಲವೆಂದ ಸಿಎಂ

    ಭಾರತೀಯ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC) ಅನ್ನು 1999 ರಲ್ಲಿ ಸ್ಥಾಪಿಸಿದ ಬಳಿಕ ಆಹಾರ ತಯಾರಿಕೆಯ ಗುಣಮಟ್ಟವನ್ನು ಸುಧಾರಿಸಲು ಮುಂದಾಗಿದೆ. ಐಆರ್‌ಸಿಟಿಸಿ ಈಗ ಹೊಸ ಅಡುಗೆಮನೆಗಳು ಸ್ಥಾಪಿಸಲು ಹಾಗೂ ಈಗಾಗಲೇ ಇರುವ ಅಡುಗೆ ಮನೆಗಳನ್ನು ಇನ್ನಷ್ಟು ನವೀಕರಣಗೊಳಿಸಲು ಮುಂದಾಗಿದೆ. ಇದನ್ನೂ ಓದಿ: ರಾಣಿ ಚೆನ್ನಮ್ಮ ವಿವಿಯಿಂದ ನಟ ರಮೇಶ್ ಅರವಿಂದ್ ಸೇರಿ ಮೂವರಿಗೆ ಗೌರವ ಡಾಕ್ಟರೇಟ್

    ಪ್ರಯಾಣಿಕರಿಗಾಗಿ ಊಟದ ಗುಣಮಟ್ಟ ಸುಧಾರಿಸಲು ಆನ್‌ಬೋರ್ಡ್ ಮೆನುಗಳನ್ನ ಪರಿಶೀಲಿಸಲಾಗುತ್ತಿದೆ. ಜೊತೆಗೆ ರಾಜಧಾನಿ ಹಾಗೂ ದುರಂತೋ ರೈಲುಗಳಲ್ಲಿ ಗಾಳಿಯಾಡದ ಕವರ್‌ಗಳೊಂದಿಗೆ ಪ್ಯಾಕೇಜ್ ಆಹಾರವನ್ನು ಪರಿಚಯಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಹಸಿದವರಿಗೆ ಉಚಿತ ಊಟ ನೀಡಲು ಡಿಕೆಶಿ ಸಂಚಾರಿ ಕ್ಯಾಂಟೀನ್ ಚಾಲನೆ

    ಹಸಿದವರಿಗೆ ಉಚಿತ ಊಟ ನೀಡಲು ಡಿಕೆಶಿ ಸಂಚಾರಿ ಕ್ಯಾಂಟೀನ್ ಚಾಲನೆ

    ಶಿವಮೊಗ್ಗ: ಜಿಲ್ಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಅಭಿಮಾನಿ ಬಳಗದ ಸದಸ್ಯರು ಹಸಿದವರಿಗೆ ಸಂಚಾರಿ ಕ್ಯಾಂಟೀನ್ ಮೂಲಕ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ.

    ಸಾರ್ವಜನಿಕರ ಅನುಕೂಲಕ್ಕಾಗಿ ಡಿ.ಕೆ. ಶಿವಕುಮಾರ್ ಸಂಚಾರಿ ಕ್ಯಾಂಟೀನ್ ಆರಂಭಿಸಲಾಗಿದ್ದು, ಈ ಸಂಚಾರಿ ಕ್ಯಾಂಟೀನ್‍ಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಇಂದು ಚಾಲನೆ ನೀಡಿದರು. ಈ ಸಂಚಾರಿ ಕ್ಯಾಂಟೀನ್ ನಗರದ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಸ್ಟಾಪ್, ನರ್ಸ್, ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳನ್ನು ನೋಡಿಕೊಳ್ಳುವ ಅಟೆಂಡರ್ ಹಾಗೂ ನಗರದಲ್ಲಿ ಆಹಾರಕ್ಕಾಗಿ ಪರಿತಪಿಸುತ್ತಿರುವ ಸಾರ್ವಜನಿಕರ ಅನುಕೂಲಕ್ಕಾಗಿ ಡಿ.ಕೆ.ಶಿ. ಸಂಚಾರಿ ಕ್ಯಾಂಟೀನ್ ಆರಂಭಿಸಲಾಗಿದೆ.

    ಪ್ರತಿ ದಿನಕ್ಕೆ 500 ರಿಂದ 600 ಜನರಿಗೆ ಉಪಹಾರ ನೀಡುವ ಯೋಜನೆ ಇದಾಗಿದ್ದು, ಹಸಿದವರಿಗೆ ಈ ಸಂಚಾರಿ ಕ್ಯಾಂಟೀನ್ ಮೂಲಕ ಹೊಟ್ಟೆ ತುಂಬಿಸುವ ಸೇವೆ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ ಉಪಹಾರದ ಜೊತೆಗೆ ನೀರಿನ ಬಾಟಲಿಯನ್ನು ಕೂಡ ಉಚಿತವಾಗಿ ವಿತರಣೆ ಮಾಡಲಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಪ್ರಚಾರ ಮಾಡಲಾಗಿದೆ.

    ಈ ಕ್ಯಾಂಟೀನ್ ಫೋನ್ ನಂ.ಗೆ ಒಂದು ಕರೆ ಮಾಡಿದರೆ ಸಾಕು ಉಚಿತವಾಗಿ, ಆಹಾರ ಮತ್ತು ನೀರನ್ನು ಒದಗಿಸುವ ಸೇವೆ ಇಂದಿನಿಂದ ಆರಂಭಿಸಲಾಗಿದೆ. ಜಿಲ್ಲಾ ಕಾಂಗ್ರೆಸ್ ಮುಖಂಡ ದೇವೆಂದ್ರಪ್ಪ ನೇತೃತ್ವದಲ್ಲಿ ಈ ಸಂಚಾರಿ ಕ್ಯಾಂಟೀನ್ ಇಂದಿನಿಂದ ಆರಂಭಗೊಂಡಿದೆ.

  • ಸರ್ಕಾರಿ ಆಸ್ಪತ್ರೆಗೆ ಹೋಗಿ ವ್ಯಕ್ತಿಯಿಂದ ರೋಗಿಯ ಕುಟುಂಬಸ್ಥರಿಗೆ ಉಚಿತ ಆಹಾರ

    ಸರ್ಕಾರಿ ಆಸ್ಪತ್ರೆಗೆ ಹೋಗಿ ವ್ಯಕ್ತಿಯಿಂದ ರೋಗಿಯ ಕುಟುಂಬಸ್ಥರಿಗೆ ಉಚಿತ ಆಹಾರ

    – ಪ್ರತಿದಿನ ಸಾವಿರಕ್ಕೂ ಹೆಚ್ಚು ಮಂದಿಗೆ ಊಟ
    – ಊಟಕ್ಕೆ ಪ್ರತಿನಿತ್ಯ 20,000 ರೂ. ಖರ್ಚು

    ಚೆನ್ನೈ: ತಮಿಳುನಾಡಿನ ತಿರುಚಿರಾಪಳ್ಳಿಯ ವ್ಯಕ್ತಿಯೊಬ್ಬರು ಪ್ರತಿದಿನ ಸರ್ಕಾರಿ ಆಸ್ಪತ್ರೆಗೆ ಹೋಗಿ ರೋಗಿಯ ಕುಟುಂಬಸ್ಥರಿಗೆ ಉಚಿತ ಊಟ ನೀಡುತ್ತಿದ್ದಾರೆ.

    ರವೀಂದ್ರ ಕುಮಾರ್ ಪ್ರತಿದಿನ ತಿರುಚ್ಚಿಯ ಸರ್ಕಾರಿ ಆಸ್ಪತ್ರೆಗೆ ಬಡರೋಗಿಗಳಿಗೆ ಹಾಗೂ ಅವರ ಕುಟುಂಬಸ್ಥರಿಗೆ ಉಚಿತ ಆಹಾರ ನೀಡುತ್ತಿದ್ದಾರೆ. ಈ ಕೆಲಸವನ್ನು ಅವರು ಸುಮಾರು 29 ವರ್ಷಗಳಿಂದ ಮಾಡುತ್ತಿದ್ದಾರೆ. ವರದಿಗಳ ಪ್ರಕಾರ ಅವರು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ತಲುಪುತ್ತಾರೆ. ಬಳಿಕ ಬೆಳಗ್ಗೆ 7 ಗಂಟೆಯಿಂದ 8 ಗಂಟೆವರೆಗೆ ಬಿಸಿಬಿಸಿ ತಿಂಡಿ ನೀಡುತ್ತಾರೆ. ಮಧ್ಯಾಹ್ನ 1 ಗಂಟೆ ಊಟ ನೀಡುತ್ತಾರೆ. ಸಂಜೆ 7 ಗಂಟೆಯಿಂದ 8 ಗಂಟೆವರೆಗೂ ರಾತ್ರಿಯ ಊಟ ನೀಡುತ್ತಾರೆ. ಇದನ್ನೂ ಓದಿ: ಹಣ್ಣುಗಳನ್ನು ಮಾರಾಟ ಮಾಡಿ 200 ಬಡ ಜನರಿಗೆ ಊಟ ನೀಡ್ತಿರೋ ವ್ಯಕ್ತಿ

    1990ರಲ್ಲಿ ರವೀಂದ್ರ ಅವರ ತಂದೆ ವಿ. ಗೋವಿಂದರಾಜು ಅವರು ಈ ಕೆಲಸವನ್ನು ಶುರು ಮಾಡಿದ್ದರು. ನನ್ನ ತಂದೆ ಯಾವಾಗಲೂ ಸಮಾಜ ಸೇವೆ ಮಾಡಬೇಕು ಎಂದುಕೊಳ್ಳುತ್ತಿದ್ದರು. ಅವರು ತಿರುಚ್ಚಿಯ ಸರ್ಕಾರಿ ಆಸ್ಪತ್ರೆಗೆ ತಲುಪಿದಾಗ ಬಡ ರೋಗಿಗಳನ್ನು ಹಾಗೂ ಅವರ ಕುಟುಂಬದವರನ್ನು ನೋಡಿ ತುಂಬಾ ದುಃಖ ಪಡುತ್ತಿದ್ದರು. ಆಗ ಅವರು ಜನರಿಗೆ ಕೇವಲ ಬಿಸಿ ನೀರು ನೀಡಲು ಶುರು ಮಾಡಿದ್ದರು. ಬಳಿಕ ಗಂಜಿ ನೀಡಲು ಪ್ರಾರಂಭಿಸಿದ್ದರು. ಇದನ್ನೂ ಓದಿ: ಕಾಲೇಜಿಗೆ ಹೋಗಿ ಕನಸು ನನಸು ಮಾಡಿಕೊಳ್ಳಲು ಕ್ಯಾಬ್ ಚಲಾಯಿಸುತ್ತಿದ್ದಾಳೆ 19ರ ಯುವತಿ

    ರವೀಂದ್ರ ಪ್ರತಿದಿನ ಸಾವಿರಕ್ಕೂ ಹೆಚ್ಚು ಮಂದಿಗೆ ಊಟ ನೀಡುತ್ತಾರೆ. ರವೀಂದ್ರ ಹಾಗೂ ಅವರ ಪತ್ನಿ ಮನೆಯಲ್ಲಿಯೇ ಊಟ ತಯಾರಿಸುತ್ತಾರೆ. ಪ್ರತಿದಿನ ಮುಂಜಾನೆ 3.30ಕ್ಕೆ ಎದ್ದು ಅಡುಗೆ ಕೆಲಸವನ್ನು ಶುರು ಮಾಡುತ್ತಾರೆ. ಬೆಳಗ್ಗಿನ ತಿಂಡಿಗಾಗಿ ಗಂಜಿ ಅಥವಾ ಪೊಂಗಲ್ ನೀಡುತ್ತಾರೆ. ಮಧ್ಯಾಹ್ನ ಅನ್ನದ ಜೊತೆ ಸಾಂಬಾರ್, ರಸಂ ಹಾಗೂ ಮೊಸರು ನೀಡುತ್ತಾರೆ. ಬೆಳಗ್ಗಿನ ತಿಂಡಿ ರವೀಂದ್ರಕುಮಾರ್ ಅವರು ತಯಾರಿಸಿದರೆ ಅವರ ಪತ್ನಿ ಮಧ್ಯಾಹ್ನದ ಹಾಗೂ ರಾತ್ರಿಯ ಊಟವನ್ನು ತಯಾರಿಸುತ್ತಾರೆ. ಇದನ್ನೂ ಓದಿ: ಪರೀಕ್ಷೆ ಬರೆಯಲು ಹೋದ ತಾಯಂದಿರು – ಮಕ್ಳನ್ನು ನೋಡ್ಕೊಂಡ ಪೇದೆಗಳಿಗೆ ಮೆಚ್ಚುಗೆ

    ಈ ಕೆಲಸಕ್ಕಾಗಿ ರವೀಂದ್ರ ಆಹಾರ ಸುರಕ್ಷತಾ ಇಲಾಖೆಯಿಂದ ಅನುಮತಿ ಕೂಡ ಪಡೆದಿದ್ದಾರೆ. ಅವರ ಜೊತೆ ಸ್ವಯಂ ಸೇವಕರಿದ್ದು, ಅಡುಗೆ ಮಾಡುವುದಕ್ಕೆ ಸಹಾಯ ಮಾಡುತ್ತಾರೆ. ರವೀಂದ್ರ ಅವರ ಟ್ರಸ್ಟ್ ಇದ್ದು, ಹಲವು ಮಂದಿ ಧನಸಹಾಯ ಮಾಡುತ್ತಾರೆ. ಪ್ರತಿದಿನ ಜನರಿಗೆ ಊಟ ಹಾಕಲು 20 ಸಾವಿರ ರೂ. ಖರ್ಚು ಆಗುತ್ತಿದೆ. ರವೀಂದ್ರ ಸ್ಟೀಲ್ ಪ್ಲೇಟಿನಲ್ಲಿ ಊಟ ನೀಡುತ್ತಿದ್ದು, ಅದನ್ನು ಸೇವಿಸಿದ ಬಳಿಕ ಜನರೇ ತೊಳೆಯಬೇಕು. ಊಟವನ್ನು ಮನೆಗೆ ತೆಗೆದುಕೊಂಡು ಹೋಗಬೇಕು ಎನ್ನುವವರು ಅವರೇ ಪಾತ್ರೆಗಳನ್ನು ತರಬೇಕು. ಇದನ್ನೂ ಓದಿ: ಗಂಗೆ ಮಲೀನವಾಗಬಾರದೆಂದು ಪ್ರತಿದಿನ ಕಸ ಎತ್ತುತ್ತಿರುವ ಮೀನುಗಾರ

    ನನ್ನ ಪತಿ ಒಂದು ವಾರ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ರವೀಂದ್ರ ಅವರ ಊಟ ನಮ್ಮ ಪಾಲಿಗೆ ಆಶೀರ್ವಾದ. ನಾನು ಈ ಊಟವನ್ನು ಮಾಡುತ್ತೇನೆ ಹಾಗೂ ನನ್ನ ಪತಿಗೂ ನೀಡುತ್ತೇನೆ ಎಂದು ರೋಗಿಯ ಪತ್ನಿ ಪ್ರೇಮ ತಿಳಿಸಿದ್ದಾರೆ. ಇನ್ನು ರವೀಂದ್ರ ಅವರು ಪ್ರತಿಕ್ರಿಯಿಸಿ, ಹಸಿದಿರುವ ವ್ಯಕ್ತಿಗೆ ಊಟ ನೀಡುವುದರಿಂದ ಸಿಗುವ ನೆಮ್ಮದಿ ಬೇರೆ ಕೆಲಸದಿಂದ ಸಿಗುವುದಿಲ್ಲ. ನಾನು ನನ್ನ ತಂದೆ ತೋರಿದ ದಾರಿಯಲ್ಲಿ ನಡೆಯುತ್ತಿದ್ದೇನೆ. ಜನರು ಊಟ ಮಾಡುವಾಗ ನನಗೆ ಅವರ ಕಣ್ಣಿನಲ್ಲಿ ದೇವರು ಕಾಣಿಸುತ್ತಾನೆ ಎಂದು ಹೇಳಿದ್ದಾರೆ.