Tag: ಇಸ್ಕಾನ್

  • ಪೌರಕಾರ್ಮಿಕರಿಗೆ ಇಸ್ಕಾನ್ ನೀಡಿದ ಅನ್ನ ತಿನ್ನಲು ಯೋಗ್ಯವಲ್ಲ- ಪಬ್ಲಿಕ್ ಹೆಲ್ತ್ ಇನ್ಸ್ ಟಿಟ್ಯೂಟ್ ವರದಿ

    ಪೌರಕಾರ್ಮಿಕರಿಗೆ ಇಸ್ಕಾನ್ ನೀಡಿದ ಅನ್ನ ತಿನ್ನಲು ಯೋಗ್ಯವಲ್ಲ- ಪಬ್ಲಿಕ್ ಹೆಲ್ತ್ ಇನ್ಸ್ ಟಿಟ್ಯೂಟ್ ವರದಿ

    ಬೆಂಗಳೂರು: ಇಸ್ಕಾನ್ ಸಂಸ್ಥೆಯವರು ಪೌರ ಕಾರ್ಮಿಕರಿಗೆ ಹಳಸಿದ ಅನ್ನ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಹೆಲ್ತ್ ಇನ್ಸ್ ಟಿಟ್ಯೂಟ್‍ನಿಂದ ವರದಿ ಬಂದಿದ್ದು, ಈ ಅನ್ನ ತಿನ್ನಲು ಯೋಗ್ಯವಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

    ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್ ನಲ್ಲಿ ಮಾರ್ಚ್ 27ರಂದು ಪೌರಕಾರ್ಮಿಕರಿಗೆ ವಿತರಿಸಿದ ಅನ್ನ ತಿನ್ನಲು ಯೋಗ್ಯವಲ್ಲ ಎಂದು ಮೈಕ್ರೊ ಬಯಾಲಜಿಸ್ಟ್ ಹೇಳಿದ್ದಾರೆ. ಮಾರ್ಚ್ 27 ರಂದು ಇಸ್ಕಾನ್ ನಿಂದ ಪೌರಕಾರ್ಮಿಕರಿಗೆ ಹಳಸಿದ ಅನ್ನ ನೀಡಲಾಗಿತ್ತು. ಹಳಸಿದ ಅನ್ನವನ್ನು ಮಾಜಿ ಕಾರ್ಪೋ ರೇಟರ್ ಧನರಾಜ್ ಬಿಬಿಎಂಪಿಗೆ ತೆಗೆದುಕೊಂಡು ಬಂದಿದ್ರು.

    ಧರ್ಮರಾಯ ಗುಡಿ ವಾರ್ಡ್ ನ ಕಾರ್ಪೋ ರೇಟರ್ ಪ್ರತಿಭಾ ಪತಿಯಾದ ಧನರಾಜ್, ಈ ಹಿಂದೆಯೂ ಸಹ ಹಳಸಿದ ಅನ್ನ ಕೊಟ್ಟಿದ್ದಾಗಿ ಆರೋಪ ಮಾಡಿದ್ರು. ವಾಸನೆ ಬರ್ತಿರೋ ಅನ್ನವನ್ನು ಬಿಬಿಎಂಪಿ ಸಭೆಯಲ್ಲಿ ತೋರಿಸಿ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಗಲಾಟೆ ಮಾಡಿದ್ರು. ಆ ಸಂಧರ್ಭದಲ್ಲಿ ಮೇಯರ್ ಪದ್ಮಾವತಿ ಇಸ್ಕಾನ್ ಅನ್ನವನ್ನು ಲ್ಯಾಬ್‍ನಲ್ಲಿ ಟೆಸ್ಟ್ ಮಾಡಿಸೋಕೆ ಹೇಳಿದ್ರು.

    ಇದೀಗ ಈ ಊಟ ತಿನ್ನಲು ಯೋಗ್ಯವಲ್ಲ ಅನ್ನೋದಾಗಿ ರಿಪೋರ್ಟ್  ಬಂದಿದೆ.

  • ನಮ್ಮ ಕ್ಯಾಂಟೀನ್ ಯೋಜನೆಗೆ ಇಸ್ಕಾನ್ ಅಕ್ಷಯ ಪಾತ್ರೆ ಜೊತೆ ಸರ್ಕಾರ ಒಪ್ಪಂದ

    ನಮ್ಮ ಕ್ಯಾಂಟೀನ್ ಯೋಜನೆಗೆ ಇಸ್ಕಾನ್ ಅಕ್ಷಯ ಪಾತ್ರೆ ಜೊತೆ ಸರ್ಕಾರ ಒಪ್ಪಂದ

    – ಬೆಂಗಳೂರಲ್ಲಿ 5 ರೂ.ಗೆ ತಿಂಡಿ, 10ರೂ.ಗೆ ಊಟ

    ಬೆಂಗಳೂರು: ರಾಜ್ಯ ಸರ್ಕಾರ ಬುಧವಾರದಂದು ಬಜೆಟ್‍ನಲ್ಲಿ ಪ್ರಕಟಿಸಿರುವ `ನಮ್ಮ ಕ್ಯಾಂಟೀನ್’ ಯೋಜನೆಗೆ ಇಸ್ಕಾನ್ ಜೊತೆ ಒಪ್ಪಂದ ಮಾಡಿಕೊಂಡಿದೆ. ನಮ್ಮ ಕ್ಯಾಂಟೀನ್ ಅನುಷ್ಠಾನಕ್ಕೆ ಅಕ್ಷಯ ಪಾತ್ರೆ ಫೌಂಡೇಷನ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ.

    ಬೆಂಗಳೂರಿನ 198 ವಾರ್ಡ್‍ಗಳಲ್ಲಿ ನಮ್ಮ ಕ್ಯಾಂಟೀನ್ ಆರಂಭವಾಗಲಿದ್ದು, ಅಕ್ಷಯ ಪಾತ್ರೆ ಫೌಂಡೇಷನ್ ಈ ಯೋಜನೆಯ ಹೊಣೆ ವಹಿಸಿಕೊಳ್ಳಲಿದೆ. ನಮ್ಮ ಕ್ಯಾಂಟೀನ್‍ಗಳಲ್ಲಿ 5 ರೂಪಾಯಿಗೆ ತಿಂಡಿ, 10 ರೂಪಾಯಿಗೆ ಮಧ್ಯಾಹ್ನ ಮತ್ತು ರಾತ್ರಿ ಊಟ ನೀಡುವುದಾಗಿ ಸರ್ಕಾರ ಪ್ರಕಟಿಸಿದೆ. ಅಕ್ಷಯ ಪಾತ್ರೆ ಫೌಂಡೇಷನ್ ಇದಕ್ಕೆ 60 ರೂ. ನಿಗದಿ ಮಾಡಿದ್ದು, 35 ರೂಪಾಯಿಯನ್ನು ಸರ್ಕಾರ ನೀಡಲಿದೆ.

    ಆಹಾರ ಮತ್ತು ನಾಗರೀಕ ಪೂರೈಕೆ ಸರಬರಾಜು ಇಲಾಖೆಯಿಂದ ನಮ್ಮ ಕ್ಯಾಂಟೀನ್ ನಡೆಸಲು ಯೋಜನೆ ರೂಪಿಸಲಾಗಿದ್ದು, ಜಾಗ ನಿಯೋಜನೆಗೆ ಆಹಾರ ಇಲಾಖೆ ಬಿಬಿಎಂಪಿ ಸಹಾಯ ಪಡೆಯಲಿದೆ. ಆಹಾರದ ಗುಣಮಟ್ಟ ಕಾಯ್ದುಕೊಳ್ಳೋ ದೃಷ್ಟಿಯಿಂದ ಆಲೋಚನೆ ಮಾಡಲಾಗಿದ್ದು, ಈಗಾಗ್ಲೇ ಆಹಾರ ಇಲಾಖೆ ಒಂದು ಸುತ್ತಿನ ಮಾತುಕತೆ ಪೂರ್ಣಗೊಳಿಸಿದೆ. ಪ್ರತಿ ನಿತ್ಯ ಒಂದು ಲಕ್ಷ ಜನರಿಗೆ ಮೂರು ಹೊತ್ತಿನ ಆಹಾರ ಪೂರೈಕೆ ಮಾಡುವ ಆಶಯ ಹೊಂದಲಾಗಿದೆ.

    ಇನ್ನೆರಡು ತಿಂಗಳ ಒಳಗೆ ನಮ್ಮ ಕ್ಯಾಂಟಿನ್‍ನಲ್ಲಿ ಊಟದ ಭಾಗ್ಯ ಸಿಗಲಿದೆ. ನಮ್ಮ ಕ್ಯಾಂಟಿನ್ ಯೋಜನೆಗೆ 100 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ.