ಬಿಗ್ ಬಾಸ್ ಮನೆಗೆ (Bigg Boss Kannada 10) ಬಂದ ಮೇಲೆ ಮೈಕಲ್ ಕನ್ನಡ ಮತ್ತಷ್ಟು ಕಲಿತು ಮಾತನಾಡುವ ಪ್ರಯತ್ನ ಮಾಡುತ್ತಿದ್ದಾರೆ. ಕನ್ನಡ ಗೊತ್ತಿದ್ದೂ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುವವರಿಗೆ ಸುದೀಪ್ ಹೇಳಿ, ಮೈಕಲ್ಗಿರುವ ಕನ್ನಡ ಭಾಷೆಯ ಮೇಲಿನ ಪ್ರೀತಿಗೆ ಚಪ್ಪಾಳೆ ನೀಡಿದ್ದಾರೆ. ಮೈಕಲ್ ಪ್ರಯತ್ನಕ್ಕೆ ಕಿಚ್ಚ (Sudeep) ಬೆನ್ನು ತಟ್ಟಿದ್ದಾರೆ.
ದೊಡ್ಮನೆಯಲ್ಲಿ ಕೋಪ ಬಂದಾಗ, ಅಪ್ಪಟ ಕನ್ನಡ ಮಾತಾನಾಡುವವರ ಬಾಯಲ್ಲೇ ಇಂಗ್ಲಿಷ್ ಬಂದುಬಿಡುತ್ತದೆ. ಆದರೆ ಮೊನ್ನೆ ಆದ ಗಲಾಟೆಯಯಲ್ಲಿ ನೀವು ಕೋಪದಲ್ಲಿದ್ರೂ ಕೂಡ ಹುಡುಕಿ ಕನ್ನಡ ಪದಗಳಲ್ಲೇ ಎದುರಾಳಿಗೆ ಉತ್ತರ ಕೊಡ್ತಾ ಇದ್ರಿ, ಅದಕ್ಕಾಗಿ ನಾನು ನಿಮ್ಮನ್ನು ಪ್ರಶಂಸಿಸುತ್ತೇನೆ. Opportunist ಅನ್ನೋ ಪದಕ್ಕೆ ಅರ್ಥ ಏನೆಂದು ತಿಳಿದುಕೊಂಡು ಕೊನೆಗೆ ಅವಕಾಶವಾದಿ ಅಂತ ಹೇಳಿದ್ದಕ್ಕೆ ಸುದೀಪ್ ಭೇಷ್ ಎಂದಿದ್ದಾರೆ.
ನನಗೆ ಕನ್ನಡ ಬರಲ್ಲ ಅನ್ನೋದನ್ನು ನೀವು ಬಳಸಿಕೊಳ್ಳಬಹುದಿತ್ತು. ಆದರೆ ನೀವು ಅದನ್ನು ಬಳಸದೇ, ಕನ್ನಡ ಮಾತನಾಡಲು ನೀವು ಹಾಕಿದ ಎಫರ್ಟ್ಗೆ ನಮ್ಮ ಮೆಚ್ಚುಗೆ ಇದೆ. ನಾನು ಏನಕ್ಕೆ ಇನ್ನು ಪ್ರಶಂಸಿಸುತ್ತಿದ್ದೇನೆ ಎಂದರೆ, ಕರ್ನಾಟಕದಲ್ಲೇ ಹುಟ್ಟಿ, ಬೆಳೆದ ಮಿಕ್ಕ ಸ್ಪರ್ಧಿಗಳು ಕೂಡ ಈ ಎಫರ್ಟ್ ಹಾಕಬಹುದಲ್ಲಾ. ನೀವು ಗುಂಪಲ್ಲಿ ನಿಮ್ಮ ನಿಮ್ಮಲ್ಲೇ ಮಾತನಾಡುವಾಗ ಎಷ್ಟೋ ವಿಚಾರಗಳು ಜನರಿಗೆ ಅರ್ಥ ಆಗಲ್ಲ. 20% ಜನರಿಗೆ ನಿಮ್ಮ ಮಾತುಗಳು ಅರ್ಥ ಆಗ್ತಿಲ್ಲ ಅಂದಾಗ, ಅದನ್ನು ಅರ್ಥಪಡಿಸಿ ಕನ್ನಡದಲ್ಲೇ ಮಾತನಾಡಿ ಎಂದು ಸುದೀಪ್ ಹೇಳಿದ್ದಾರೆ. ಇದನ್ನೂ ಓದಿ:ಬಾತ್ರೂಂ ಬಿಟ್ಟು ಕೊಡದೇ ಡ್ರೋನ್ಗೆ ಕಾಡಿಸಿದ ಸ್ನೇಹಿತ್ಗೆ ಸುದೀಪ್ ಕ್ಲಾಸ್
ಕಳೆದ ವಾರ ಕಿಚ್ಚನ ಚಪ್ಪಾಳೆ ನಡೆದಿರಲಿಲ್ಲ. ಆದರೆ ಈ ವಾರ ನೀಡುತ್ತಿದ್ದೇನೆ. ಈ ವಾರ ಒಬ್ಬ ವ್ಯಕ್ತಿಗೆ ಆಟದ ಮೇಲೆ ಫೋಕಸ್ ಜಾಸ್ತಿ ಆಗುತ್ತದೆ, ಎಫರ್ಟ್ ಜಾಸ್ತಿ ಕಾಣಿಸುತ್ತದೆ. ತಂತ್ರಗಾರಿಕೆ ಚೆನ್ನಾಗಿತ್ತು. ಅದ್ಭುತವಾಗಿ ನನ್ನ ಕಣ್ಣಿಗೆ ಕಾಣಿಸಿದ್ದು ಮೈಕಲ್ ಅವರು. ಈ ವಾರ ಕಿಚ್ಚನ ಚಪ್ಪಾಳೆ ಮೈಕಲ್ಗೆ ಹೋಗುತ್ತಿದೆ. ನೀವು ಕನ್ನಡ ಮಾತನಾಡಲು ಹಾಕಿದ ಎಫರ್ಟ್ ಎದ್ದು ಕಾಣಿಸ್ತು. ಅದೇ ತುಂಬ ಪ್ಲಸ್ ಆಯ್ತು, ಮೈಕಲ್ ನಡೆಗೆ ಸುದೀಪ್ ಹಾಡಿ ಹೊಗಳಿದ್ದಾರೆ. ಒಟ್ನಲ್ಲಿ ಭಾಷೆ ಗೊತ್ತಿದ್ದರೂ ಮಾತನಾಡದವರ ಮುಂದೆ ಭಾಷೆ ಬರದ ಮೈಕಲ್ (Michael) ಕನ್ನಡ ಕಲಿತು, ಕನ್ನಡ ಪ್ರೇಕ್ಷಕರಿಗೆ ಇಷ್ಟವಾಗಿದ್ದಾರೆ.
ಬಿಗ್ಬಾಸ್ (Bigg Boss Kannada) ಮನೆಯಿಂದ ಈ ಶನಿವಾರ ಹೊರಬಿದ್ದ ಸ್ಪರ್ಧಿ ಇಶಾನಿ (Ishani). ಇಷ್ಟು ವಾರಗಳ ಕಾಲದ ಅವರ ಬಿಗ್ಬಾಸ್ ಜರ್ನಿ ಹೇಗಿತ್ತು, ಅವರು ಹೊರಬೀಳಲು ಕಾರಣವಾದ ಸಂಗತಿಗಳು ಏನು, ಷೋ ಬಗ್ಗೆ ಅವರು ಏನು ಹೇಳುತ್ತಾರೆ, ಬಿಗ್ಬಾಸ್ ಮನೆಯಿಂದ ಹೊರಬಿದ್ದ ಮರುಕ್ಷಣವೇ ಅವರ ಎಕ್ಸ್ಕ್ಲೂಸೀವ್ ಸಂದರ್ಶನ ಇಲ್ಲಿದೆ. JioCinemaಗಾಗಿ ಅವರು ಹಲವಾರು ವಿಷಯಗಳನ್ನು ಮಾತನಾಡಿದ್ದಾರೆ.
ಬಿಗ್ ಬಾಸ್ ಮನೆಯಿಂದ ಬಂದಿದ್ದೀರಿ ಏನನಿಸ್ತಿದೆ?
ಏನು ಹೇಳಬೇಕು ಎಂದು ಗೊತ್ತಾಗ್ತಿಲ್ಲ. ಬಿಗ್ಬಾಸ್ ಮನೆಯಿಂದ ಆಚೆ ಬಂದಿದೀನಿ. 99 ಪರ್ಸೆಂಟ್ ನನಗೆ ನಾನು ಇರ್ತೀನಿ ಅಂತ ಕಾನ್ಫಿಡೆನ್ಸ್ ಇತ್ತು. ಉಳಿದ ಒಂದು ಪರ್ಸೆಂಟ್ ನನಗೆ ಆಗಲ್ಲ ಅನಿಸಿತ್ತು. ನನಗೆ ಹಟ ಜಾಸ್ತಿ ಇದೆ. ಗೇಮ್ ಆಡುವ ಅವಕಾಶ ಜಾಸ್ತಿ ಸಿಗಲಿಲ್ಲ. ಅದರಿಂದ ನನಗೆ ಬೇಜಾರಾಗಿತ್ತು. ನನ್ನನ್ನು ಯಾರೂ ಸೀರಿಯಸ್ ಆಗಿ ತಗೊಂಡಿರ್ಲಿಲ್ಲ. ಹಾಗಾಗಿ ನನ್ನ ಸ್ಟ್ರೆಂಥ್ ತೋರಿಸಲಾಗಲಿಲ್ಲ. ನಾನು ಸ್ವಲ್ಪ ಎಮೋಷನಲ್ ಆಗಿದೀನಿ. ಆದರೆ ಎಮೋಷನಲ್ ಆಗಿರುವುದು, ಅದು ವಲ್ನರಬಲ್ ಆಗಿದ್ರೆ ಅದು ವೀಕ್ನೆಸ್ ಅಲ್ವೇ ಅಲ್ಲ. ಅದು ಸ್ಟ್ರೆಂಥ್. ಆದರೆ ಅದನ್ನು ನೋಡಿ ಯಾವಾಗ್ಲೂ ನನ್ನ ನಾಮಿನೇಷನ್ನಲ್ಲಿ ಹಾಕ್ತಿದ್ರು. ಕಳಪೆಯಲ್ಲಿ ಹಾಕ್ತಿದ್ರು. ಇದನ್ನೇ ರೀಸನ್ ಕೊಡ್ತಿದ್ರು.
ನನ್ನ ಪ್ರಕಾರ ಅದು ಸರಿ ಎಂದು ನನಗೆ ಅನಿಸುವುದಿಲ್ಲ. ಮನೆಯೊಳಗೆ ಗುಂಪುಗಳಿದ್ದವು. ನಾನು ಬೇರೆ ಗುಂಪಿನಲ್ಲಿದ್ದರೆ ನನಗೆ ಇನ್ನೂ ಅವಕಾಶಗಳು ಸಿಗುತ್ತಿತ್ತು ಎಂದೂ ನನಗೆ ಅನಿಸುವುದಿಲ್ಲ. ವಿನಯ್ ಇರ್ಲಿ, ನಮ್ರತಾ, ಮೈಕಲ್, ಸ್ನೇಹಿತ್ ಎಲ್ಲರ ಜೊತೆ ನಾನು ಖುಷಿಯಾಗಿದ್ದೆ. ಅವರು ನನಗೆ ಯಾವಾಗಲೂ ಸಪೋರ್ಟ್ ಮಾಡಿದ್ದಾರೆ. ಅವರಿಂದ ನನಗೆ ಡಿಸ್ಟ್ರಾಕ್ಷನ್ ಆಗಿಲ್ಲ. ಆದರೆ ನನ್ನ ವೈಯಕ್ತಿಕ ಆಯ್ಕೆಗಳಿಂದ ನನಗೆ ತೊಂದರೆಯಾಗಿರುವುದು. ಅವರು ನನಗೆ ತುಂಬ ಒಳ್ಳೆಯ ಸ್ನೇಹಿತರು.
ಮತ್ತೆ ಹಿಂತಿರುಗಿ ಬಿಗ್ಬಾಸ್ ಮನೆಯೊಳಗೆ ಹೋಗಲು ಸಾಧ್ಯವಾದ್ರೆ?
ಮತ್ತೆ ಬಿಗ್ಬಾಸ್ಗೆ ಹೋಗುವುದು ಸಾಧ್ಯವಾದರೆ ನಾನು ನನ್ನದೇ ಲೆಕ್ಕಾಚಾರ ಇಟ್ಟುಕೊಂಡು ಆಟ ಆಡುತ್ತಿದ್ದೆ. ಯಾರು ಫೇಕ್, ಯಾರು ರಿಯಲ್ ಎಂದು ವಿಶ್ಲೇಷಿಸಿ ಮುಂದಡಿ ಇಡುತ್ತಿದ್ದೆ. ಟಾಸ್ಕ್ ವಿಷಯಲ್ಲಿಯೂ ನಾನು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದೆ. ಏನಾದರೂ ಇರಲಿ, ನಾನು ನನಗೋಸ್ಕರ ಆಡುತ್ತಿದ್ದೆ. ಇನ್ಯಾರಿಗೋಸ್ಕರನೋ ಅಲ್ಲ. ಟೀಮ್ನಲ್ಲಿ ಆಡಬೇಕು ಅಂದರೆ ನಾನು ನನಗೋಸ್ಕರ ಆಟ ಆಡ್ತಿದ್ದೆ. ಟೀಮ್ ಗೆಲ್ಲಬೇಕು ಅಂತಲೇ ಆಟ ಆಡ್ತಿದ್ದೆ, ಆದರೆ ನಾನು ಟೀಮ್ ಲೀಡರ್ ಆಗಬೇಕು ಎಂದು ಗಟ್ಟಿಯಾಗಿ ಹೇಳುತ್ತಿದ್ದೆ. ಎಂಪಥಿ ಮತ್ತು ಇಂಟಲಿಜೆನ್ಸ್ನಲ್ಲಿ ನನಗೆ ನಂಬಿಕೆ ಇದೆ. ಇವೆರಡನ್ನೂ ಉಪಯೋಗಿಸಿಕೊಳ್ಳಲು ಫೋಕಸ್ ಮಾಡುತ್ತಿದ್ದೆ.
ಯಾರು ಜೆನ್ಯೂನ್? ಯಾರು ಫೇಕ್?
ಮನೆಯೊಳಗೆ ವಿನಯ್, ನಮ್ರತಾ ಎಲ್ರೂ ಜೆನ್ಯೂನ್ ಆಗಿಯೇ ಇದ್ದರು. ನನ್ನ ಪ್ರಕಾರ ಮೈಕಲ್ ತುಂಬ ಜೆನ್ಯೂನ್ ಆಗಿದ್ದಾರೆ. ಆನಸ್ಟ್ ಆಗಿದ್ದರು. ಲಾಯಲ್ ಆಗಿದ್ದರು. ಅದು ಪ್ರಾರಂಭದಲ್ಲಿ ನನಗೆ ಕಾಣಿಸಲಿಲ್ಲ. ಕೊನೆಕೊನೆಗೆ ಕಾಣಿಸಿತು. ಈಗ ನಾನು ವಾಪಸ್ ಹೋಗಲು ಸಾಧ್ಯವಾದರೆ ಎಲ್ಲದಕ್ಕೂ ಮೈಕಲ್ ಸೈಡ್ ತಗೋತಿದ್ದೆ.
ತುಕಾಲಿ ಅವರನ್ನು ನಾನು ಊಸರವಳ್ಳಿ ಎಂದು ಕರೆದಿದ್ದೆ. ಅದಕ್ಕೆ ಕಾರಣವಿದೆ. ಯಾಕೆಂದರೆ ಅವರು ಒಂದ್ಸಲ ನನ್ನ ಜೊತೆ ಸರಿಯಾಗಿ ಮಾತಾಡ್ತಿದ್ರು. ಮತ್ತೊಮ್ಮೆ ಇನ್ನೊಂದು ಗ್ರೂಪಲ್ಲಿ ಹೋಗಿ ಇನ್ನೇನಾದ್ರೂ ಹೇಳ್ತಿದ್ರು. ಉದ್ದೇಶಪೂರ್ವಕವಾಗಿ ಡ್ರಾಮಾ ಕ್ರಿಯೇಟ್ ಮಾಡಿ ಕಾಣೆಯಾಗ್ತಿದ್ರು. ಹಾಗಾಗಿ ಅವರು ನನಗೆ ಒಂಚೂರು ಇಷ್ಟವಾಗಲಿಲ್ಲ. ಅವರು ನಂಬರ್ ಒನ್ ಫೇಕ್. ಎರಡನೇ ಫೇಕ್ ನೀತು. ಅವರಿಗೆ ಪರ್ಸನಾಲಿಟಿ ಇರಲೇ ಇಲ್ಲ.
ನನ್ನ ಪ್ರಕಾರ ಮನೆಯಲ್ಲಿ ಯಾರೂ ಇನೋಸೆಂಟ್ ಇಲ್ಲ. ಪ್ರತಾಪ್ ಇನೋಸೆಂಟ್ ಅಂದುಕೊಂಡಿದ್ದೆ. ಸ್ವಲ್ಪ ಮುಗ್ಧತೆ ಇದೆ ಅವರಲ್ಲಿ. ಆದರೆ ಅವರು ತುಂಬ ಬುದ್ಧಿವಂತರು. ಅಂದರೆ ಪಾಸಿಟೀವ್ ದೃಷ್ಟಿಯಿಂದಲೇ ಬುದ್ಧಿವಂತರು. ಗೇಮ್ ಹೇಗೆ ಆಡಬೇಕು ಎಂದು ಅವರಿಗೆ ಗೊತ್ತು. ಹಾಗಾಗಿ ಖಂಡಿತವಾಗಿ ಮನೆಯಲ್ಲಿ ಯಾರೂ ಇನೋಸೆಂಟ್ ಇಲ್ಲ.
ಇಶಾನಿ ಫೈನಲ್ ಲೀಸ್ಟ್!
ಬಿಗ್ಬಾಸ್ ಫಿನಾಲೆಯಲ್ಲಿ ಇರುವ ಐದು ಸ್ಫರ್ಧಿಗಳಲ್ಲಿ ನಾನೂ ಒಬ್ಬಳಾಗಬೇಕು ಎಂದು ನನಗೆ ಆಸೆ ಇತ್ತು. ಆದರೆ ಆಗಲಿಲ್ಲ. ನನ್ನ ಪ್ರಕಾರ ವಿನಯ್, ಮೈಕಲ್, ಸಂಗೀತಾ, ಕಾರ್ತೀಕ್ ಮತ್ತು ನಮ್ರತಾ ಇಷ್ಟು ಜನ ಕೊನೆಯಲ್ಲಿ ಉಳಿದುಕೊಳ್ಳುತ್ತಾರೆ. ಇವರಲ್ಲಿ ಮೈಕಲ್ ಗೆಲ್ಲಬೇಕು ಎಂಬುದು ನನ್ನ ಆಸೆ.
ಜಿಯೊ ಸಿನಿಮಾ ಟಾಸ್ಕ್ಗಳ ಮಜಾ
ಜಿಯೊ ಸಿನಿಮಾ ಫನ್ ಫ್ರೈಡೆ ಟಾಸ್ಕ್ಗಳು ತುಂಬ ಮಜವಾಗಿದ್ದವು. ಕಳೆದ ವಾರ ಲಗೋರಿ ಆಡಿದೆವು. ಅದು ತುಂಬ ಮಜವಾಗಿತ್ತು. ಯಾಕೆಂದರೆ ಫಸ್ಟ್ ಟೈಮ್ ನಾನು ಲಗೋರಿ ಆಡುತ್ತಿರುವುದು. ನನಗೆ ಲಗೋರಿ ಏನೆಂದೇ ಗೊತ್ತಿರಲಿಲ್ಲ. ಅದನ್ನು ಆಡಿ ಖುಷಿಯಾಯ್ತು. ಹಾಗೆಯೇ ಆನೆಗೆ ಬಾಲ ಬಿಡಿಸುವ ಟಾಸ್ಕ್ ಕೂಡ ಸಖತ್ ಎಂಜಾಯ್ ಮಾಡಿದೆ. ಆ ಥರ ಸಾಕಷ್ಟ ಟಾಸ್ಕ್ ಇದ್ದವು.
ಕನ್ನಡ ರಾಪ್ ಬರೆಯುವ ಆಸೆ ಇದೆ
ಕನ್ನಡ ಇನ್ನೂ ಕಲಿಯುತ್ತಿದ್ದೇನೆ. ಇನ್ನೂ ಚೆನ್ನಾಗಿ ಕಲಿಯಬೇಕು ಅಂತ ಆಸೆ ಇದೆ. ಇನ್ನಷ್ಟು ಸ್ಪಷ್ಟವಾಗಿ ಕನ್ನಡ ಕಲಿತು, ಕನ್ನಡದಲ್ಲಿಯೇ ರಾಪ್ ಸಾಂಗ್ ಬರೆಯಬೇಕು ಎಂಬ ಆಸೆ ಇದೆ. ಬಿಗ್ಬಾಸ್ ಮನೆಯೊಳಗೂ ಟ್ರೈ ಮಾಡುತ್ತಿದ್ದೆ. ಸ್ವಲ್ಪ ಟೈಮ್ ತಗೊಳ್ತು. ಸ್ನೇಹಿತರ ಹೆಲ್ಪ್ ತಗೊಳ್ತಿದ್ದೆ. ಅವರ ಜೊತೆ ಚರ್ಚಿಸುತ್ತಿದ್ದೆ. ಅದೆಲ್ಲ ಕಲಿಯುತ್ತಿದ್ದೆ. ಇನ್ನು ಮುಂದೆಯೂ ಕನ್ನಡದಲ್ಲಿ ಬರೆಯುವುದನ್ನು ಮುಂದುವರಿಸುತ್ತೇನೆ.
ಬಿಗ್ಬಾಸ್ ಮನೆ ನೆನಪಾದ್ರೆ ಅಳ್ತೀನಿ
ಬಿಗ್ಬಾಸ್ ಮನೆ ನೆನಪಾದ್ರೆ ಅಳು ಬರತ್ತೆ. ಮನೆಯೊಳಗೆ ಕುಕ್ ಮಾಡುವುದು, ಬಾತ್ ರೂಮ್ ಕ್ಲೀನ್ ಮಾಡುವುದು, ಕಿಚನ್ ಕ್ಲೀನ್ ಮಾಡುವುದು, ನನ್ನ ಹಾಸಿಗೆ ನಾನೇ ನೋಡಿಕೊಳ್ಳಬೇಕು, ಇದ್ಯಾವುದೂ ನನಗೆ ಗೊತ್ತಿರಲಿಲ್ಲ. ಇದೆಲ್ಲದರ ಮಹತ್ವ ಬಿಗ್ಬಾಸ್ ಮನೆಯೊಳಗೆಬಂದ ಮೇಲೆ ಅರ್ಥವಾಯ್ತು. ಅಲ್ಲಿನ ನನ್ನ ಫ್ರೆಂಡ್ಸ್ ಎಲ್ರನ್ನೂ ನಾನು ತುಂಬ ಮಿಸ್ ಮಾಡ್ಕೋತೀನಿ. ನಗುವಿರಲಿ, ಅಳುವಿರಲಿ ಜೊತೆಗೇ ಇರ್ತಿದ್ವಿ. ಅದನ್ನು ಮಿಸ್ ಮಾಡ್ಕೋತೀನಿ. ಸಂಗೀತಾ ಬಂದು ಎಲ್ಲರನ್ನು ಹೆದರಿಸುತ್ತಿದ್ರು, ತಲೆದಿಂಬಿನಲ್ಲಿ ಹೊಡೆದಾಡಿಕೊಳ್ತಿದ್ವಿ. ಅವೆಲ್ಲಾನೂ ಮಿಸ್ ಮಾಡ್ಕೋತೀನಿ. ಬಿಗ್ಬಾಸ್ ಷೋಗೆ ನಾನು ತುಂಬ ಕೃತಜ್ಞಳಾಗಿದೀನಿ. ನನಗೆ ಇನ್ನೊಮ್ಮೆ ಅವಕಾಶ ಸಿಕ್ರೆ ಬಂದೇ ಬರ್ತಿನಿ. ಬರುವ ಆಸೆಯೂ ಇದೆ.
ಬಿಗ್ ಬಾಸ್ ಮನೆಯ (Bigg Boss House) ಆಟ 6ನೇ ವಾರ ಪೂರೈಸಿ 7ನೇ ವಾರದತ್ತ ಮುನ್ನುಗ್ಗುತ್ತಿದೆ. ಈ ವಾರ ಮನೆಮಂದಿಗೆ ಡಬಲ್ ಎಲಿಮಿನೇಷನ್ ಜೊತೆ ಡಬಲ್ ಶಾಕ್ ಕೊಟ್ಟಿದೆ. ಇಶಾನಿ (Eshani) ಎಲಿಮಿನೇಷನ್ ಬೆನ್ನಲ್ಲೇ ಭಾಗ್ಯಶ್ರೀ ಕೂಡ ಬಿಗ್ ಬಾಸ್ ಔಟ್ ಆಗಿದ್ದಾರೆ. ಇದನ್ನೂ ಓದಿ:Bigg Boss: ಲವ್ ಯೂ ಎಂದ ಸಂಗೀತಾ- ನಾಚಿ ನೀರಾದ ಕಾರ್ತಿಕ್
ಈ ಹಿಂದೆ ಎರಡೆರೆಡು ಬಾರಿ ಎಲಿಮಿನೇಷನ್ (Elimination) ಪ್ರಕ್ರಿಯೆ ಮಿಸ್ ಆಗಿತ್ತು. ಈ ವಾರ ಇಬ್ಬರೂ ಸ್ಪರ್ಧಿಗಳು ಮನೆಯಿಂದ ಔಟ್ ಆಗಿದ್ದಾರೆ. ಈ ಬಾರಿ ವಾರಾಂತ್ಯದ ಮೊದಲ ಪಂಚಾಯಿತಿಯಲ್ಲೇ ಕಿಚ್ಚ ಎಲಿಮಿನೇಷನ್ ಶಾಕ್ ಕೊಟ್ಟರು. ಇಶಾನಿ ಕಳಪೆ ಆಟದಿಂದ ಬಿಗ್ ಬಾಸ್ ಮನೆಯಿಂದಲೇ (Bigg Boss House) ಗೇಟ್ ಪಾಸ್ ಸಿಕ್ಕಿದ್ರೆ, ಭಾನುವಾರ ಭಾಗ್ಯ ಅವರ ಆಟ ಅಂತ್ಯವಾಗಿದೆ.
ದಸರಾ ಹಬ್ಬವಿದ್ದ ಕಾರಣ ಭಾಗ್ಯಶ್ರೀ ಅವರು ಅಂದು ಜಸ್ಟ್ ಮಿಸ್ ಆಗಿದ್ದರು. ಎಲಿಮಿನೇಷನ್ ಬಿಸಿ ಇಟ್ಟಿದ ಮೇಲೆ ಭಾಗ್ಯ ಅವರು ಎಚ್ಚೆತ್ತುಕೊಂಡಿದ್ದರು. ಅದಾದ ಬಳಿಕ ಮನೆಯಲ್ಲಿ ಸಖತ್ ಆಗಿ ಭಾಗ್ಯ ಅವರು ಆಟ ಆಡಿದ್ದರು.
ಮನೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ರೂ, ಭಾಗ್ಯಶ್ರೀ ಅವರು ಬಿಗ್ ಮನೆಗೆ ಕಾಲಿಟ್ಟ ದಿನದಿಂದಲೇ ಟಾರ್ಗೆಟ್ ಆಗುತ್ತಲೇ ಬಂದಿದ್ದರು. ಮೊದಲ ವಿನಯ್ ಬಾಯಿಗೆ ಆಹಾರವಾಗಿದ್ದರು. ಆ ನಂತರ ಸ್ನೇಹಿತ್ ಕೆಂಗಣ್ಣಿಗೆ ಗುರಿಯಾಗಿದ್ದರು. ಬೇರೇ ಅವರ ವಿಚಾರದಲ್ಲಿ ಭಾಗ್ಯ ಮುಗುತುರಿಸುತ್ತಾರೆ ಎಂದು ಕಾರಣ ನೀಡಿ ಭಾಗ್ಯ ಕಳಪೆ ಎಂದಿದ್ದರು ಸ್ನೇಹಿತ್.
ಭಾಗ್ಯ ಅವರಿಗೆ ಕಳೆದ ಬಾರಿ ಎಲಿಮಿನೇಷನ್ ಬಿಸಿ ತಟ್ಟಿದ ಮೇಲೆ ಚುರುಕಾಗಿದ್ದರು. ಇತ್ತೀಚಿನ ದಿನಗಳಲ್ಲಿ ಕೊಂಚ ಸ್ವೀಡ್ ಕೂಡ ಆಗಿದ್ದರು. ಈಗ ಅವರ ಎಲಿಮಿನೇಷನ್ ಮನೆಮಂದಿಗೆ ಮತ್ತು ಫ್ಯಾನ್ಸ್ಗೆ ಶಾಕ್ ಕೊಟ್ಟಿದೆ. ಸ್ನೇಕ್ ಶ್ಯಾಮ್, ರಕ್ಷಕ್, ಇಶಾನಿ ನಂತರ ಭಾಗ್ಯಶ್ರೀಗೆ ಎಲಿಮಿನೇಟ್ ಆಗಿದ್ದಾರೆ.
ಕೊನೆಗೂ ಬಿಗ್ಬಾಸ್ ಮನೆಯಲ್ಲಿ ಇಶಾನಿ (Eshani) ಜರ್ನಿ ಎಂಡ್ ಆಗಿದೆ. ಕಳೆದ ವಾರ ವರ್ತೂರ್ ಸಂತೋಷ್ (Varthur Santhosh) ಅವರ ಕಾರಣದಿಂದ ಎಲಿಮಿನೇಷನ್ (Elimination) ನಡೆದಿರಲಿಲ್ಲ. ಈ ವಾರ ಡಬಲ್ ಎಲಿಮಿನೇಷನ್ ವೀಕ್. ಇಬ್ಬರು ಈ ಮನೆಯಿಂದ ಹೊರಗೆ ಹೋಗಲಿದ್ದಾರೆ ಎಂದು ಕಿಚ್ಚ ಹೇಳಿದ್ದರು.
ಶನಿವಾರದ ಎಪಿಸೋಡ್ ಕೊನೆಯಲ್ಲಿ ಕಿಚ್ಚ, ಈ ವಾರ ಒಬ್ಬರು ಮನೆಯಿಂದ ಹೊರಗೆ ಹೋಗುತ್ತಿದ್ದಾರೆ. ಅವರು ಯಾರು ಎಂದು ನಿಮಗೇ ಗೊತ್ತಿರಬೇಕು. ಅವರೇ ಎದ್ದು ನಿಂತುಕೊಳ್ಳಿ’ ಎಂದು ಕೇಳಿದರು. ಇಶಾನಿ ಎದ್ದು ನಿಂತುಕೊಂಡರು. ಈ ವೇಳೆ ಕಿಚ್ಚ (Kichcha Sudeepa), ನಿಜ. ನಿಮ್ಮ ಪಯಣ ಬಿಗ್ಬಾಸ್ (Bigg Boss Kannada) ಮನೆಯಲ್ಲಿ ಮುಗಿಯುತ್ತಿದೆ. ಆಲ್ದಿ ಬೆಸ್ಟ್ ಎಂದು ಹೇಳಿದರು. ಭಾನುವಾರದ ಎಪಿಸೋಡ್ನಲ್ಲಿ ಇನ್ನೊಬ್ಬರು ಬಿಗ್ಬಾಸ್ ಮನೆಯಿಂದ ಎಲಿಮಿನೇಟ್ ಆಗಲಿದ್ದಾರೆ.
ಹೊರಬಿದ್ದ ಇಬ್ಬರೂ ಸ್ಪರ್ಧಿಗಳ ಜೊತೆ ಇಂದಿನ ಎಪಿಸೋಡ್ನಲ್ಲಿ ಕಿಚ್ಚ ಸಂವಾದ ನಡೆಸಲಿದ್ದಾರೆ. ಕೊನೆಯದಾಗಿ ಇಶಾನಿ, ‘ನಾನು ಇನ್ನಷ್ಟು ಎಫರ್ಟ್ ಹಾಕಬೇಕಾಗಿತ್ತು, ಆಗಲಿಲ್ಲ. ಮನೆಯಿಂದ ಸಾಕಷ್ಟು ಕಲಿತುಕೊಂಡಿದ್ದೀನಿ. ಉಳಿದ ಎಲ್ಲ ಸ್ಪರ್ಧೆಗಳಿಗೆ ಆಲ್ ದಿ ಬೆಸ್ಟ್’ ಎಂದು ಹೇಳಿದರು. ಇದನ್ನೂ ಓದಿ: ಹಿರಿಯ ನಟಿ ಲೀಲಾವತಿ ಮನೆಗೆ ಭೇಟಿ ನೀಡಿದ ಅರ್ಜುನ್ ಸರ್ಜಾ
ಅಲ್ಲಿಗೆ ಶನಿವಾರದ ‘ಕಿಚ್ಚನ ಪಂಚಾಯಿತಿ’ ಮುಗಿದಿದೆ. ಇಂದು ಮತ್ಯಾವ ಸ್ಪರ್ಧಿ ಮನೆಯಿಂದ ಹೊರಬೀಳಲಿದ್ದಾರೆ ಎಂಬ ಕುತೂಹಲ ಹಾಗೆಯೇ ಉಳಿದುಕೊಂಡಿದೆ.
ದೊಡ್ಮನೆ (Bigg Boss Kannada 10) ಆಟ 5ನೇ ವಾರ ಪೂರೈಸಿದೆ. ಕಳೆದ ವಾರ ಬಳೆ ಜಗಳ ಹೈಲೆಟ್ ಆಗಿದ್ರೆ, ಈ ವಾರ ಉಸ್ತುವಾರಿ ನಿರ್ಣಯ ಬೇಸರ ತರಿಸಿದೆ. ಇದರ ನಡುವೆ ಇಶಾನಿ (Eshani) ಅವರು ಸುದೀಪ್ (Sudeep) ಮುಂದೆಯೇ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮೈಕಲ್ (Michael) ಅವರು ಎಲ್ಲ ತಪ್ಪಿಗೆ ನಾನೇ ಕಾರಣ ಅಂತ ಹೇಳಿದ್ದಕ್ಕೆ ಬೇಸರ ಆಯ್ತು ಎಂದು ಈಶಾನಿ ಕಣ್ಣೀರು ಹಾಕಿದ್ದಾರೆ. ನನ್ನ ಹಳೇ ರಿಲೇಶನ್ಶಿಪ್ನಲ್ಲಿಯೂ ನಾನೇ ತಪ್ಪು ಮಾಡಿದೆ ಅಂತ ಬಾಯ್ಫ್ರೆಂಡ್ಸ್ ಹೇಳಿದ್ರು, ನನಗೆ ಯಾರ ಮನಸ್ಸಿಗೂ ನೋವು ಮಾಡುವ ಉದ್ದೇಶ ಇಲ್ಲ ಎಂದು ಇಶಾನಿ ಕಣ್ಣೀರಿಟ್ಟಿದ್ದಾರೆ.
ನಾವಿಬ್ಬರೂ ಪ್ರೀತಿ ಮಾಡುತ್ತಿದ್ದೇವೆ ಅಂತ ಈಶಾನಿ, ಮೈಕಲ್ ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ಆಟವೊಂದರಲ್ಲಿ ಇಶಾನಿ, ಮೈಕಲ್ ಎರಡು ತಂಡಗಳಿಗೆ ಉಸ್ತುವಾರಿಯಾಗಿದ್ದರು. ಈಶಾನಿ ಉಳಿಯಬೇಕು ಅಂತ ಮೈಕಲ್ ಅವರು ತಮ್ಮ ಟೀಂ ಬಿಟ್ಟು, ಇಶಾನಿ ಟೀಂಗೆ ಹೇಗೆ ಆಟ ಆಡಬೇಕು, ತಂತ್ರ ಮಾಡಬೇಕು ಅಂತ ಸಲಹೆ ನೀಡಿದ್ದರು. ಅಷ್ಟೇ ಅಲ್ಲದೆ ಈಶಾನಿ ಮಾತಿಗೆ ಕಟ್ಟುಬಿದ್ದು ನಿರ್ಣಯ ನೀಡಿದ್ದರು. ಈ ಬಗ್ಗೆ ಕಿಚ್ಚ ಪಂಚಾಯಿತಿಯಲ್ಲಿ ಚರ್ಚೆ ಆಗಿದೆ. ಇದನ್ನೂ ಓದಿ:ದೀಪಾವಳಿಗೆ ಬಂತು ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರದ ಪೋಸ್ಟರ್
ಇಶಾನಿಗಾಗಿ ನಾನು ಆಟದಲ್ಲಿ ತಪ್ಪು ಮಾಡಿದ್ದೇನೆ, ಇದು ಸರಿ ಅಲ್ಲ, ನಾನು ಮಾಡಿರುವ ಕೆಲಸ ನನಗೆ ಸಮಾಧಾನ ಕೊಡ್ತಿಲ್ಲ. ನನಗೆ ತುಂಬ ಪಶ್ಚಾತ್ತಾಪ ಇದೆ ಅಂತ ಮೈಕಲ್ ಅವರು ಸುದೀಪ್ ಮುಂದೆ ಹೇಳಿದ್ದರು. ಅಷ್ಟೇ ಅಲ್ಲದೆ ಇಶಾನಿ ಅವರು ಮೈಕಲ್ ಬಳಿ ಬಂದು, ನಾನು ಮಾಡಿರೋದು ತಪ್ಪು ಅಂತ ಗೊತ್ತಾಗಿದೆ. ನನ್ನಿಂದ ನಿಮ್ಮನ್ನು ಎಲ್ಲರೂ ಅಪರಾಧಿ ಎನ್ನುವ ತರ ನೋಡ್ತಾರೆ ಅಂತ ಗೊತ್ತಿರಲಿಲ್ಲ, ಕ್ಷಮಿಸಿ ಅಂತ ಹೇಳಿದ್ದರು. ಆಗ ಮೈಕಲ್ ಅವರು, ನೀನಗೇನು ಅರ್ಥ ಆಗ್ತಿಲ್ಲ. ಬಿಗ್ ಬಾಸ್ ಮನೆಯಲ್ಲಿ ಇದ್ದೇವೆ, ನಾವಿಬ್ಬರೂ ಭೇಟಿ ಆಗಿ 1 ತಿಂಗಳು ಆಗಿದೆ ಅಷ್ಟೇ ಅಂತ ಮೈಕಲ್ ಖಡಕ್ ಆಗಿ ಮಾತನಾಡಿದರು.
ಎಲ್ಲ ತಪ್ಪು ನಾನೇ ಮಾಡಿರೋದು ಅಂತ ಮೈಕಲ್ ಹೇಳ್ತಿದ್ದಾರೆ. ನನಗೆ ಇಲ್ಲಿ ಇರೋಕೆ ಇಷ್ಟ ಇಲ್ಲ. ನಾನು ಹೊರಗಡೆ ಹೋಗ್ತೀನಿ ಅಂತ ಇಶಾನಿ ಅವರು ನಮ್ರತಾ ಗೌಡ, ಸ್ನೇಹಿತ್ ಮುಂದೆ ಹೇಳಿಕೊಂಡು ಅತ್ತಿದ್ದಾರೆ. ಆಗ ಸುದೀಪ್ ಅವರು ಇಶಾನಿಗೆ ಸಮಾಧಾನ ಮಾಡಿದ್ದಾರೆ. ಹಾಗೆಯೇ ನೀವು ಮೈಕಲ್ ಅವರ ನಿರ್ಧಾರವನ್ನು ಗೌರವಿಸಬೇಕು. ಬಿಗ್ ಬಾಸ್ ಮನೆಯಲ್ಲಿ ನಿಮಗೆ ತಪ್ಪು ತಿದ್ದಿಕೊಳ್ಳುವ ಅವಕಾಶ ಇದೆ. ನಾನು ಈ ಶೋನಲ್ಲಿ ಮಾತ್ರ ಯಾವ ಪಾತ್ರವನ್ನೂ ಮಾಡದೆ, ನಾನು ನಾನಾಗಿದ್ದೇನೆ. ನನಗೂ ಜನರಿಗೆ ತಲುಪುವ ಅವಕಾಶ ಸಿಕ್ಕಿದೆ ಎಂದು ಇಶಾನಿಗೆ ಸುದೀಪ್ ಪಾಠ ಮಾಡಿದ್ದಾರೆ.
ಬಿಗ್ ಬಾಸ್ ಮನೆಯ (Bigg Boss House) ಅಸಲಿ ಆಟ ಈಗ ಶುರುವಾಗಿದೆ. ಇಶಾನಿಗಾಗಿ (Eshani) ಮೈಕಲ್ (Michael) ಡಬಲ್ ಗೇಮ್ ಮಾಡಲು ಆಡಲು ಶುರು ಮಾಡಿದ್ದಾರೆ. ಇಶಾನಿ ತಂಡದ ಗೆಲುವಿಗಾಗಿ ತನ್ನ ತಂಡ ‘ಗಂಧದ ಗುಡಿ’ಗೆ ದ್ರೋಹ ಬಗೆಯುತ್ತಿದ್ದಾರೆ.
ಟಾಸ್ಕ್ ವಿಚಾರದಲ್ಲಿ ಮೈಕಲ್ ಸ್ಟ್ರಾಂಗ್ ಇರುವಾಗಲೂ ಡಬಲ್ ಗೇಮ್ ಶುರು ಮಾಡಿದ್ದಾರೆ. ಅದು ಗಂಧದ ಗುಡಿ ತಂಡದಲ್ಲಿದ್ದುಕೊಂಡು ವಜ್ರಕಾಯ ತಂಡಕ್ಕೆ ಬೆಂಬಲ ನೀಡಿದ್ದಾರೆ. ಗೆಲುವು ಸಾಧಿಸುವುದು ಹೇಗೆ ಎಂದು ಸ್ಟ್ಯಾಟರ್ ಜಿ ಹೇಳಿಕೊಟ್ಟಿದ್ದಾರೆ. ಇದನ್ನೂ ಓದಿ:ಮಗಳ ಹುಡುಕಿ ಕೊಟ್ಟವರಿಗೆ 50 ಸಾವಿರ ಬಹುಮಾನ: ನಟಿ ಸನ್ನಿ ಲಿಯೋನ್
ಮೈಕಲ್ ಸದ್ಯಕ್ಕೆ ‘ಗಂಧದ ಗುಡಿ’ ತಂಡದಲ್ಲಿದ್ದಾರೆ. ಆದರೆ, ಆಡುತ್ತಿರುವುದು ಮಾತ್ರ ವಜ್ರಕಾಯದ ಪರ. ಅದರಲ್ಲೂ ತಂಡದ ಸೀಕ್ರೆಟ್ಗಳನ್ನೇ ಅಲ್ಲಿ ಹೋಗಿ ಬಿಟ್ಟುಕೊಡುತ್ತಿದ್ದಾರೆ. ಬಲೂಮ್ ಒಡೆದು ನೀರು ಸಂಗ್ರಹಿಸುವ ಟಾಸ್ಕ್ನಲ್ಲಿ, ಮೈಕಲ್ ಉಸ್ತುವಾರಿ ವಹಿಸಿದ್ದಾರೆ. ಗಂಧದ ಗುಡಿ ಬಿಟ್ಟು ವಜ್ರಕಾಯದ ತಂಡದ ಬಳಿ ಬಂದು, ಈ ಟಾಸ್ಕ್ ಅನ್ನು ಈ ರೀತಿ ಆಡಿ. ಆಗ ಟಾಸ್ಕ್ ಗೆಲ್ಲುತ್ತೀರಿ ಎಂದು ಹೊಸ ಐಡಿಯಾ ಕೊಟ್ಟಿದ್ದಾರೆ.
‘ಗಂಧದ ಗುಡಿ’ ಟೀಮ್ ಜಾಸ್ತಿ ನೀರು ಹಾಕಿದ್ದರು. ಆದರೆ ಇಶಾನಿ ಅದನ್ನು ಒಪ್ಪುವುದಕ್ಕೆ ರೆಡಿ ಇಲ್ಲ. ತನಿಷಾ ಎರಡು ಬಲೂನ್ ಕೈಯಲ್ಲಿ ಒಡೆದರು. ಹೀಗಾಗಿ ನೀರು ತೆಗೆಯಬೇಕು ಎಂದು ವಾದ ಮಾಡಿದರು. ಒಂದು ಬಲೂನ್ ತೆಗೆದುಕೊಂಡು ಹೋಗಿ, ಒಡೆದು ನೀರು ಹಾಕಿ ಬಂದಿದ್ದಾರೆ. ಆದರೆ, ಬಿಗ್ ಬಾಸ್ ಅದನ್ನು ಪರಿಗಣನೆಗೆ ತೆಗದುಕೊಳ್ಳದೆ ಹೆಚ್ಚು ನೀರು ಇರುವುದನ್ನು ನೋಡಿ, ಗೆದ್ದವರನ್ನು ಘೋಷಿಸಿ ಎಂದಿದ್ದಾರೆ. ಆದರೆ, ಮೈಕಲ್ ಮಾತ್ರ, ‘ಗಂಧದ ಗುಡಿ’ ಗೆದ್ದಿದೆ ಎಂಬುದನ್ನು ಬೇಸರದಲ್ಲಿಯೇ ಹೇಳಿದ್ದಾರೆ.
ಇಶಾನಿ ಎರಡು ಟೀಂ ಅನ್ನು ಟೈ ಮಾಡಿದ್ದಾರೆ. ಇದಕ್ಕೆ ಬಿಗ್ ಬಾಸ್ ಸಿಟ್ಟಾಗಿದ್ದಾರೆ. ಕ್ಲಾಸ್ ತೆಗೆದುಕೊಂಡಿದ್ದಾರೆ. ಆಗ ಮೈಕೆಲ್, ನಂಗೆ ಚೀಟ್ ಮಾಡುವುದಕ್ಕೆ ಬರಲ್ಲ. ನಿಯಮದಲ್ಲಿ ಎಲ್ಲಿ ಬರೆದಿದೆ. ಕೈಯಲ್ಲಿ ಒಡೆಯಬಾರದು ಅಂತ. ಒಂದು ಬಲೂನ್ ಹಾಕಬೇಕು ಅಂದ್ರೆ ಹಾಕು ಎಂದು ಮೈಕೆಲ್ ಹೇಳಿದರೆ, ಆಗ ಇಶಾನಿ ಇದು ಚೀಟ್ ಅಲ್ಲ. ಮ್ಯಾಜಿಕ್ ಎಂದಿದ್ದಾರೆ.
ಈಗ ಗೊತ್ತಾಯ್ತು ನಿನ್ನ ನಿಜ ಮುಖ ಏನು ಅಂತ. ಈಗ ಬಲೂನ್ ಹಾಕುವುದಕ್ಕೆ ಏನು ಉಳಿಸಿದ್ದೀಯಾ. ಈಗಾಗಲೇ ಅನೌನ್ಸ್ ಮಾಡಿದ್ದೀಯಲ್ಲ ಎಂದು ರೇಗಾಡಿದ್ದಾರೆ. ಬಿಗ್ ಬಾಸ್ ಕೋಪ ಮಾಡಿಕೊಂಡಿದ್ದಕ್ಕೆ, ಉಸ್ತುವಾರಿಗಳು ನಡೆದುಕೊಂಡ ರೀತಿ ಸರಿ ಇಲ್ಲ ಎಂದು ಹೇಳಿದ್ದು, ಗಂಧದ ಗುಡಿ ತಂಡಕ್ಕೂ ಬೇಸರ ಆಗಿದೆ.
ಬಿಗ್ ಬಾಸ್ (Bigg Boss Kannada) ಮನೆಯ ಜೋಡಿ ಹಕ್ಕಿಗಳು ಎಂದೇ ಖ್ಯಾತರಾಗಿದ್ದ ಇಶಾನಿ (Ishani) ಮತ್ತು ಮೈಕಲ್ (Michael) ಮಧ್ಯೆ ಮನಸ್ತಾಪವಾಗಿದೆ. ಮೈಕಲ್ ನನ್ನು ಬಾಯ್ ಫ್ರೆಂಡ್ ಎಂದು ಬಾಯ್ತುಂಬಾ ಕರೆಯುತ್ತಿದ್ದ ಇಶಾನಿ, ಇದೀಗ ಮೈಕಲ್ ಮೇಲೆ ಕೋಪ ಮಾಡಿಕೊಂಡಿದ್ದಾರೆ. ಯಾವ ಬಾಯಿಯಿಂದ ಮೈಕಲ್ ನನ್ನು ಕೊಂಡಾಡುತ್ತಿದ್ದರೋ, ಅದೇ ಬಾಯಿಯಿಂದ ಥುಪುಕ್ ಅಂತ ಉಗಿದಿದ್ದಾರೆ.
ದೊಡ್ಮನೆಯ ಅಸಲಿ ಆಟ ಈಗ ಶುರುವಾಗಿದೆ. ಜೋಡಿಹಕ್ಕಿಗಳಾದ ಇಶಾನಿ ಮತ್ತು ಮೈಕಲ್ ನಡುವೆ ಕಿತ್ತಾಟ ಶುರುವಾಗಿದೆ. ಮೈಕಲ್ ನಡೆಗೆ.. ಥೂ ನೀನು ಒಬ್ಬ ಬಾಯ್ಫ್ರೆಂಡ್ ಆ ಎಂದು ಇಶಾನಿ ಛೀಮಾರಿ ಹಾಕಿದ್ದಾಳೆ. ಇಬ್ಬರ ಕಿತ್ತಾಟ ನೋಡಿ ಮನೆ ಮಂದಿ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಏನು ಆಯ್ತಪ್ಪ ಎಂದು ಅಂದುಕೊಳ್ತಿದ್ದೀರಾ.. ಇಲ್ಲಿದೆ ನೋಡಿ ಇಬ್ಬರ ಫೈಟ್ ಕಹಾನಿ.
ಬಿಗ್ ಬಾಸ್ ಸೀಸನ್ 10ರಲ್ಲಿ ಈ ಬಾರಿ ಜೋಡಿ ಹಕ್ಕಿಗಳ ದರ್ಬಾರ್ ಜೋರಾಗಿತ್ತು. ದೊಡ್ಮನೆಯಲ್ಲಿ 3 ಜೋಡಿಗಳು ಹೈಲೆಟ್ ಆಗಿದ್ದರು. ಅದರಲ್ಲಿ ಸಂಗೀತಾ-ಕಾರ್ತಿಕ್, ನಮ್ರತಾ-ಸ್ನೇಹಿತ್ ಮತ್ತು ಇಶಾನಿ-ಮೈಕಲ್ ಜೋಡಿಗಳಾಗಿ ಗುರುತಿಸಿಕೊಂಡಿದ್ದರು. ಇದೀಗ ಇಶಾನಿ- ಮೈಕಲ್ ನಡುವೆ ಗ್ಯಾಪ್ ಕ್ರಿಯೇಟ್ ಆಗಿದೆ. ಮಹಿಳೆಯರು ಪ್ರಬಲ ಸ್ಪರ್ಧಿಯಲ್ಲ ಎಂದಿದ್ದಕ್ಕೆ ಮನೆ ಈಗ ರಣರಂಗವಾಗಿದೆ. ಮೈಕಲ್ ಇಶಾನಿ ಕೂಪಕ್ಕೆ ಗುರಿಯಾಗಿದ್ದಾರೆ.
ಬಿಗ್ ಬಾಸ್ನಲ್ಲಿ ನೀನು ಒಬ್ಬಳೇ ನಿಂತು ನಿನ್ನ ಆಟ ಆಡೋಕೆ ಆಗಲ್ಲ ಅಂತ ಖಡಕ್ ಆಗಿ ಇಶಾನಿ ಮುಖಕ್ಕೆ ಹೊಡದ ಹಾಗೆ ಕಾರ್ತಿಕ್ ಮಾತನಾಡಿದ್ದಾರೆ. ನಿನಗೆ ಆ ತಾಖತ್ ಇಲ್ಲ ಎಂದಿದ್ದಾರೆ. ನಾನು ಹುಡುಗಿಯಾಗಿರೋದ್ದಕ್ಕೆ ಹೀಗೆ ಹೇಳ್ತಿದ್ದೀರಾ? ಈಗ ನಿಮ್ಮ ನಿಜರೂಪ ತಿಳಿಯಿತು ಎಂದು ಕಾರ್ತಿಕ್ಗೆ ಪ್ರತಿಯುತ್ತರ ಕೊಟ್ಟಿದ್ದಾರೆ ಇಶಾನಿ. ಅಷ್ಟಕ್ಕೆ ನಿಲ್ಲದ ಇಬ್ಬರ ಜಗಳ.. ಆಮೇಲೆ ಮೈಕಲ್ ಬಳಿ ಹೋಗಿದೆ. ಈ ವಿಚಾರಕ್ಕೆ ಮೈಕಲ್ಗೂ ಕೂಡ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಮಹಿಳೆಯರು ಆಡೋಕೆ ಆಗಲ್ಲ ಅಂತ ಹೇಳಿರೋ ಕಾರ್ತಿಕ್ ಜೊತೆ ಮೈಕಲ್ ಕೂಡ ಸೇರಿಕೊಂಡಿದ್ದಾರೆ ಎಂದು ಮೈಕಲ್ ವಿರುದ್ಧ ಇಶಾನಿ ಫುಲ್ ಗರಂ ಆಗಿದ್ದಾರೆ. ಕಾರ್ತಿಕ್ ಮಾತಿಗೆ ನೀವು ಸಪೋರ್ಟ್ ಮಾಡಿದ್ದೀರಾ ಅಂತ ಮೈಕಲ್ಗೂ ಇಶಾನಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ನನ್ನಿಂದ ದೂರು ಇರು… ನೀನು ಒಬ್ಬ ಬಾಯ್ಫ್ರೆಂಡ್ ಆ ಥೂ.. ಎಂದಿದ್ದಾರೆ ಇಶಾನಿ. ಬಳಿಕ ಸೈಕೋ ಎಂದ ಮೈಕಲ್ಗೆ ಇಶಾನಿ ಚಳಿ ಬಿಡಿಸಿದ್ದಾರೆ. ಪ್ರೇಮಪಕ್ಷಿಗಳಾಗಿ ಹಾರಾಡುತ್ತಿದ್ದ ಜೋಡಿಯ ನಡುವೆ ಕಿರಿಕ್ ಆಗಿರೋದು ನೋಡಿ ಮನೆಮಂದಿ ಕೂಡ ದಂಗಾಗಿದ್ದಾರೆ.
‘ಕವಿತೆ ಹುಟ್ಟಲು ಐಶಾರಾಮಿ ಜಾಗವೇ ಬೇಕಿಲ್ಲ, ಒಂದು ಪೆನ್ನು, ಒಂದು ಚೂರು ಖಾಲಿ ಕಾಗದ ಸಾಕು’ ಎಂಬ ಮಾತಿದೆ. ಇದು ಹೊರಜಗತ್ತಿನಲ್ಲಿ ಎಷ್ಟರಮಟ್ಟಿಗೆ ಸತ್ಯವೋ ಗೊತ್ತಿಲ್ಲ. ಆದರೆ ಬಿಗ್ಬಾಸ್ (Bigg Boss Kannada) ಮನೆಯಲ್ಲಿ ಮಾತ್ರ ಅಕ್ಷರಶಃ ಸತ್ಯವಾಗಿದೆ. ಏನಿದು ಕವಿಸಮಯ? JioCinemaದಲ್ಲಿ ನೇರಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡದ ‘ಅನ್ಸೀನ್ ಕಥೆಗಳು’ ಸೆಗ್ಮೆಂಟ್ನಲ್ಲಿ ಈ ಪ್ರಶ್ನೆಗೆ ಉತ್ತರವಿದೆ.
ಬಿಗ್ಬಾಸ್ ಸ್ಪರ್ಧಿಗಳಲ್ಲಿ ಪದ್ಯ ಬರೆಯುವ ಕೌಶಲ ಇರುವವರು ಇಶಾನಿ (Ishani) ಮಾತ್ರ. ರ್ಯಾಪ್ (Rap) ಹಾಡುಗಳನ್ನು ಕಟ್ಟಿ ಹಾಡುತ್ತಲೇ ಮುನ್ನಲೆಗೆ ಬಂದ ಇಶಾನಿ ಬಿಗ್ ಬಾಸ್ ಮನೆಯೊಳಗೆ ಸದ್ದುಮಡಿದ್ದು ಜೋರು ಧನಿಯ ಜಗಳ ಮತ್ತು ನಗುವಿನಿಂದಲೇ ಹೊರತು ರ್ಯಾಪ್ ಹಾಡುಗಳ ಮೂಲಕ ಅಲ್ಲ. ಹಿಂದೊಮ್ಮೆ ಅವರೊಂದು ಕನ್ನಡ ರ್ಯಾಪ್ ಸಾಂಗ್ ಕಟ್ಟಿದ್ದರಾದರೂ ಅದು ಅಷ್ಟೇನೂ ಸದ್ದು ಮಾಡಲಿಲ್ಲ. ಕಿಚನ್ ರೀಡಿಂಗ್ಗೇ ಮುಗಿದುಹೋಯಿತು. ಆದರೆ ಇಶಾನಿ ಪ್ರಯತ್ನವನ್ನು ಮಾತ್ರ ನಿಲ್ಲಿಸಿಲ್ಲ.
ಮತ್ತೆ ಮತ್ತೆ ಕನ್ನಡದಲ್ಲಿ ರ್ಯಾಪ್ ಸಾಂಗ್ ಕಟ್ಟುವ ಪ್ರಯತ್ನ ನಡೆಸಿಯೇ ಇದ್ದಾರೆ. ಈ ಬಾರಿ ಅವರಿಗೆ ಸಿಕ್ಕಿದ್ದು ಟಿಶ್ಯೂ. ಟಿಶ್ಯೂ ಪೇಪರ್ ಮೇಲೆಯೇ ಇಂಗ್ಲಿಷ್ ಲಿಪಿಯಲ್ಲಿ ಕನ್ನಡದ ಸಾಲುಗಳನ್ನು ಬರೆಯುತ್ತ ಪದ್ಯ ಕಟ್ಟುತ್ತಿದ್ದಾರೆ ಇಶಾನಿ. ಪದ್ಯದ ಒಂದೊಂದು ಸಾಲೂ ಉಳಿದ ಸ್ಪರ್ಧಿಗಳನ್ನು ರೋಸ್ಟ್ ಮಾಡುವಂತಿದೆ. ಇಶಾನಿ ರ್ಯಾಪ್ ಸಾಂಗ್ ಲಿರಿಕ್ಸ್ ಹೇಗಿದೆ ಗೊತ್ತಾ?
ನಾನ್ ಯಾರು ಅಂತ ನಿಮಗೆ ಗೊತ್ತಿಲ್ವಾ?
ಗೊತ್ತಿಲ್ಲ ಅಂತ ತಿಳಿಸೋಕೆ ಬಂದ್ನಲ್ವಾ?
ಉಪ್ಪಿನಕಾಯಿ ಟೇಸ್ಟು ನಿಮಗೆ ಸಾಲ್ತಿಲ್ವಾ?
ತಿಳ್ಕೊಳ್ರೋ ಇನ್ನು ನೀವಲ್ಲ
ಇನ್ಮುಂದೆ ನಿಮ್ದು ಏನು ನಡೆಯಲ್ಲ
ಈ ರಾಜ್ಯಕ್ಕೆ ರಾಣಿನೇ ನಾನಲ್ವಾ
ತಲೆಬಗ್ಸೀನೇ ನಡೀಬೇಕು ಈಗೆಲ್ಲ
ಸುಮ್ನಿದ್ರೆ ಮಾಡ್ತೀರಾ ಸೈಕು
ಹಿಡ್ದಿದ್ದೀನಿ ನಾನೀಗ ಮೈಕು
ಹೋಗ್ತೀನಿ ಒಂದೇ ಟೇಕು
ಮಾಡ್ತೀನಿ ನಿಮ್ ಈಗೊ ಬ್ರೇಕು
ತೋರಿಸ್ತೀನಿ ಯಾರೆಲ್ಲ ಫೇಕು
ತುಕಾಲಿಗೇ ಫಸ್ಟು ಸ್ಟ್ರೈಕು
ಮಾಡಿದ್ರೆ ತುಕಾಲಿ ಜೋಕು
ಪ್ರತಾಪ್ ನೀನಿರಲೇ ಬೇಕು
ಕ್ಯಾಮೆರಾ ಮುಂದೆ ನೀ ಬರೀ ಫೇಕು
ಇಲ್ದಿದ್ರೆ ನೀ ಸುಟ್ಟ ಕೇಕು
ಹೀಗೆ ಇಶಾನಿ ಹಾಡು ಬೆಳೆಯುತ್ತಲೇ ಇದೆ. ಅದು ಎಲ್ಲಿಗೆ ಹೋಗಿ ಮುಟ್ಟುತ್ತದೆ? ಯಾವಾಗ ಪ್ರೆಸೆಂಟ್ ಆಗುತ್ತದೆ? ಗೊತ್ತಿಲ್ಲ. ಆದರೆ ಮನೆಯೊಳಗಂತೂ ಹೊಸ ಸಂಚಲನ ಹುಟ್ಟು ಹಾಕುವುದು ಗ್ಯಾರಂಟಿ. ಎಲ್ಲ ಸ್ಪರ್ಧಿಗಳಿಗೂ ಹಾಡಿನ ಮೂಲಕವೇ ಟಾಂಗ್ ಕೊಡಲು ಸಜ್ಜಾಗುತ್ತಿರುವ ಇಶಾನಿ ತಮ್ಮ ಯತ್ನದಲ್ಲಿ ಯಶಸ್ವಿಯಾಗ್ತಾರಾ? ಕಾದು ನೋಡಬೇಕು.
ಬಿಗ್ ಬಾಸ್ ಮನೆಯಲ್ಲಿ (Bigg Boss Kannada) ಇಶಾನಿ- ಮೈಕಲ್, ಜೋಡಿಯಾಗಿ ಹೈಲೆಟ್ ಆಗ್ತಿದ್ದಾರೆ. ಇಬ್ಬರ ನಡುವೆ ಸಮ್ಥಿಂಗ್ ಸಮ್ಥಿಂಗ್ ಶುರುವಾಗಿದೆ. ಇದರ ಬಗ್ಗೆ ಇಶಾನಿ (Eshani) ತಂದೆ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಮೈಕಲ್ ಕಡೆಯಿಂದ ಮದುವೆ ಪ್ರಪೋಸಲ್ ಬಂದರೆ ಇಶಾನಿ ತಂದೆ ಶೇಖರ್ (Shekar) ಏನ್ಮಾಡ್ತಾರೆ ಎಂಬುದಕ್ಕೆ ಉತ್ತರಿಸಿದ್ದಾರೆ.
ಬಿಗ್ ಬಾಸ್ ಶೋ ನಂತರ ಮೈಕಲ್ (Michael) ಮನೆಯಿಂದ ಪ್ರಪೋಸಲ್ ಬಂದರೆ, ನಾನು ನನ್ನ ಮಗಳಿಗೆ ಬುದ್ಧಿ ಹೇಳ್ತೀನಿ ಎಂದಿದ್ದಾರೆ. ಮೈಕಲ್ನ ಒಪ್ಪಿಕೊಳ್ಳೋಕೆ ಕಷ್ಟ ಆಗುತ್ತೆ. ನನ್ನ ಮಗಳಿಗೆ ನಾನು ಏನು ಹೇಳಬೇಕೋ ಅದನ್ನ ನಾನು ಹೇಳೇ ಹೇಳ್ತೀನಿ. ಮದುವೆ ಅಂದರೆ ಇವತ್ತು ಇದ್ದು, ನಾಳೆ ಬಿಡೋದಲ್ಲ. ಸ್ಟ್ರಾಂಗ್ ರಿಲೇಷನ್ಶಿಪ್ ಅದು. ಹಾಗಾಗಿ ಮೈಕಲ್ ವಿಚಾರವಾಗಿ ಮಗಳಿಗೆ ಬುದ್ಧಿ ಹೇಳ್ತೀನಿ ಎಂದಿದ್ದಾರೆ. ಈ ಮೂಲಕ ಮೈಕಲ್ ಕಡೆಯಿಂದ ಮದುವೆ ಪ್ರಪೋಸಲ್ ಬಂದರೆ, ತಮ್ಮ ಕಡೆಯಿಂದ ನೋ ಎಂಬ ಉತ್ತರವಿರುತ್ತದೆ ಎಂದು ಹೇಳಿದ್ದಾರೆ.
ನನ್ನ ಮಗಳಿಗೆ ಗಂಡ ಆಗುವ ಹುಡುಗ, ಒಳ್ಳೆಯ ಮನುಷ್ಯನಾಗಿರಬೇಕು. ಲುಕ್ಸ್ನಲ್ಲೂ ಚೆನ್ನಾಗಿರಬೇಕು. ಲವ್ವಿಂಗ್ & ಕೇರಿಂಗ್ ವ್ಯಕ್ತಿಯಾಗಿರಬೇಕು ಎಂದು ಮನೆಗೆ ಅಳಿಯನಾಗುವರ ಬಗ್ಗೆ ಇಶಾನಿ ತಂದೆ ಮಾತನಾಡಿದ್ದಾರೆ. ಇದನ್ನೂ ಓದಿ:‘ಜಿಗರ್’ ಚಿತ್ರದಲ್ಲಿ ಪ್ರವೀಣ್ ತೇಜ್ ಮಾಸ್: ಟೀಸರ್ ರಿಲೀಸ್
ಇಶಾನಿ ದೊಡ್ಮನೆಗೆ ಎಂಟ್ರಿ ಕೊಟ್ಟಾಗ ಮೊದಲು ಸ್ನೇಹಿತ್ ಜೊತೆ ಲವ್ ಕಹಾನಿ ಶುರುವಾಗಿತ್ತು. ಈಗ ಮೈಕಲ್ ಜೊತೆ ಲವ್ವಿ-ಡವ್ವಿ ಶುರುವಾಗಿದೆ. ಬಿಗ್ ಬಾಸ್ ಆಟ ಮುಗಿಯೋದರೊಳಗೆ ಇಬ್ಬರ ಕಹಾನಿಗೆ ಕ್ಲ್ಯಾರಿಟಿ ಸಿಗುತ್ತಾ? ಕಾದುನೋಡಬೇಕಿದೆ.