Tag: ಇಂಡೊನೇಷ್ಯಾ

  • ಮದುವೆಗೂ ಮುನ್ನ ಸೆಕ್ಸ್ – ಸ್ಟೇಡಿಯಂನಲ್ಲಿ ಯುವತಿಗೆ 100 ಛಾಟಿ ಏಟು

    ಮದುವೆಗೂ ಮುನ್ನ ಸೆಕ್ಸ್ – ಸ್ಟೇಡಿಯಂನಲ್ಲಿ ಯುವತಿಗೆ 100 ಛಾಟಿ ಏಟು

    – ಯುವತಿಯರಿಗೆ ಅತಿ ಹತ್ತಿರವಾಗಿದ್ದ ಯುವಕನಿಗೆ ಥಳಿತ

    ಜಕರ್ತಾ: ಕಠಿಣ ಕಾನೂನು ಉಲ್ಲಂಘಿಸಿ ಮದುವೆಗೂ ಮುನ್ನ ಸೆಕ್ಸ್ ಮಾಡಿದ್ದ 22 ವರ್ಷ ಯುವತಿ ಸೇರಿದಂತೆ ಮೂವರಿಗೆ ಛಾಟಿ ಏಟು ಕೊಟ್ಟ ಘಟನೆ ಇಂಡೊನೇಷ್ಯಾದಲ್ಲಿ ನಡೆದಿದೆ.

    ಮುಸ್ಲಿಮರ ಪ್ರಾಬಲ್ಯವಿರುವ ಬಂದಾ ಅಚೆ ಪ್ರಾಂತ್ಯದಲ್ಲಿ ಶರಿಯಾ ಕಾನೂನು ಜಾರಿಗೆ ತರಲಾಗಿದೆ. ಈ ಕಾನೂನಿನ ಅನ್ವಯ ಜೂಜಾಟ, ಮದ್ಯಪಾನ ಹಾಗೂ ಸಲಿಂಗ ರತಿ ನಡೆಸುವವರು ಛಾಟಿಯೇಟಿನ ಶಿಕ್ಷೆಗೆ ಒಳಗಾಗುತ್ತಾರೆ. ಇಂತಹ ಕಠಿಣ ಶಿಕ್ಷೆಗೆ ಬುಧವಾದ ಗುರಿಯಾಗಿದ್ದ ಯುವತಿ ಛಾಟಿಯಿಂದ ಹೊಡೆಯದಂತೆ ಎಷ್ಟೇ ಬೇಡಿಕೊಂಡರೂ ಶಿಕ್ಷೆಯನ್ನು ನಿಲ್ಲಿಸಲಿಲ್ಲ. ಪರಿಣಾಮ ಯುವತಿ ವೇದಿಕೆಯಲ್ಲಿ ಕುಸಿದು ಬಿದ್ದಿದ್ದಾಳೆ. ತಕ್ಷಣವೇ ವೈದ್ಯರು ಯುವತಿಯನ್ನು ತಪಾಸಣೆಗೆ ಒಳಪಡಿಸಿದರು. ಇದಾದ ಸ್ವಲ್ಪ ಸಮಯದಲ್ಲಿಯೇ ಛಾಟಿಯೇಟಿನ ಶಿಕ್ಷೆಯನ್ನು ಪುನರಾರಂಭಿಸಲಾಯಿತು.

    ಸ್ಟೇಡಿಯಂ ಒಂದರಲ್ಲಿ ಮಹಿಳೆಯೊಬ್ಬರು ಹಲವಾರು ಮಂದಿ ಸಮ್ಮುಖದಲ್ಲೇ ಈ ಶಿಕ್ಷೆ ನೀಡಿದ್ದಾಳೆ. ಯುವತಿಯ ಜೊತೆಗೆ ಸಂಬಂಧ ಹೊಂದಿದ್ದ 22 ವರ್ಷದ ಯುವಕ ಕೂಡ 100 ಛಾಟಿ ಏಟಿನ ಶಿಕ್ಷೆಗೆ ಗುರಿಯಾಗಿದ್ದ. ಮತ್ತೊರ್ವ ಯುವಕ ಯುವತಿಯರಿಗೆ ಅತಿ ಹತ್ತಿರವಿದ್ದು ಶಿಕ್ಷೆಗೆ ಗುರಿಯಾಗಿದ್ದಾನೆ. ಅವಿವಾಹಿತ ಜೋಡಿಗಳು ಪರಸ್ಪರ ಮುಟ್ಟುವುದು, ಆಲಂಗಿಸುವುದು ಹಾಗೂ ಚುಂಬಿಸುವುದು ಇಸ್ಲಾಮಿಕ್ ಕಾನೂನಿನ ಪ್ರಕಾರ ಅಪರಾಧ.

    ಷರಿಯಾ ಕಾನೂನು ಜಾರಿಗೆ ತಂದಿರುವ ವಿಶ್ವದ ಏಕೈಕ ಅತ್ಯಂತ ಹೆಚ್ಚು ಮುಸ್ಲಿಮರನ್ನು ಹೊಂದಿರುವ ದೇಶವಾಗಿರುವ ಇಂಡೋನೇಷ್ಯಾದ ಏಕೈಕ ಪ್ರಾಂತ್ಯ ಅಚೆ ಆಗಿದೆ. ಸುಮಾತ್ರ ದ್ವೀಪದಲ್ಲಿರುವ ಈ ಪ್ರಾಂತ್ಯದಲ್ಲಿ 2001ರಿಂದಲೂ ಷರಿಯಾ ಕಾನೂನು ಜಾರಿಯಲ್ಲಿದೆ.

    ಈ ಹಿಂದೆ 22 ವರ್ಷದ ಯುವತಿಯೊಬ್ಬಳು ಛಾಟಿಯೇಟಿನ ಶಿಕ್ಷೆಗೆ ಗುರಿಯಾಗಿದ್ದಳು. ಆದರೆ ಆಕೆ ಗರ್ಭಿಣಿಯಾಗಿದ್ದರಿಂದ ಮಗುವಿಗೆ ಜನ್ಮ ನೀಡಿದ ಬಳಿಕ ಛಾಟಿಯೇಟು ನೀಡುವುದಾಗಿ ತಿಳಿಸಿ ಶಿಕ್ಷೆಯನ್ನು ಮುಂದೂಡಲಾಗಿತ್ತು. ಈ ವೇಳೆ ಒಟ್ಟು ಆರು ಜನರಿಗೆ ಶಿಕ್ಷೆ ನೀಡಲಾಗಿತ್ತು.

    ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟವಾಗುತ್ತಿದ್ದಂತೆ ಇಂಡೋನೇಷ್ಯಾದ ಅಧ್ಯಕ್ಷರು ಖಂಡಿಸಿದ್ದಾರೆ. ಪಾಕಿಸ್ತಾನ, ಸೌದಿ ಅರೇಬಿಯಾ, ನೈಜಿರಿಯಾ ಸೇರಿದಂತೆ ಹಲವು ದೇಶಗಳಲ್ಲಿ ಈಗಲೂ ಇಸ್ಲಾಂ ಕಾನೂನುಗಳು ಜಾರಿಯಲ್ಲಿದೆ.

  • ಚಂಡಮಾರುತದ ಹೊಡೆತಕ್ಕೆ ಪ್ರಯಾಣಿಕರ ಹಡಗು ಮುಳುಗಿ 31 ಸಾವು!

    ಚಂಡಮಾರುತದ ಹೊಡೆತಕ್ಕೆ ಪ್ರಯಾಣಿಕರ ಹಡಗು ಮುಳುಗಿ 31 ಸಾವು!

    ಜಕಾರ್ತ: ಚಂಡಮಾರತದ ಸಿಕ್ಕಿ ಪ್ರಯಾಣಿಕ ಹಡಗೊಂದು ಮುಳುಗಿ 31 ಜನ ಮಂದಿ ಸಾವಿಗೀಡಾದ ಧಾರುಣ ಘಟನೆ ಇಂಡೊನೇಷ್ಯಾದ ಸುಲಾವೆಸಿ ದ್ವೀಪದ ಬಳಿ ಸಂಭವಿಸಿದೆ.

    ಮಂಗಳವಾರ ಮಧ್ಯಾಹ್ನ ಪ್ರಯಾಣಿಕ ಹಡಗೊಂದು ಇಂಡೊನೇಷ್ಯಾದ ಬೀರಾ ಬಂದರಿನಿಂದ ಸೆಲಾಯಾರ್ ದ್ವೀಪಕ್ಕೆ ಸಂಚಾರ ಬೆಳೆಸಿತ್ತು. ಈ ವೇಳೆ ಸಮುದ್ರದಲ್ಲಿ ಚಂಡಮಾರುತದ ಹೊಡೆತಕ್ಕೆ ಸಿಲುಕಿ 31 ಪ್ರಯಾಣಿಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

    ಹಡಗಿನಲ್ಲಿ ಸಿಬ್ಬಂದಿಯೂ ಸೇರಿದಂತೆ ಒಟ್ಟು 164 ಮಂದಿ ಪ್ರಯಾಣ ಬೆಳೆಸುತ್ತಿದ್ದರು. ಅಲ್ಲದೇ ಹಡಗಿನಲ್ಲಿ 48 ವಾಹನಗಳನ್ನು ಸಾಗಿಸಲಾಗುತ್ತಿತ್ತು ಎಂದು ಇಂಡೊನೇಷ್ಯಾದ ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಪಡೆ ಅಧಿಕಾರಿಯಾದ ಅಮೀರುದ್ದೀನ್ ತಿಳಿಸಿದ್ದಾರೆ.

    ಹಡುಗು ಚಂಡಮಾರುತದ ದಾಳಿಗೆ ಸಿಲುಕುತ್ತಿದ್ದಂತೆ ಎಚ್ಚೆತ್ತುಕೊಂಡ ನಾವಿಕ ಹಡಗನ್ನು ಹತ್ತಿರದಲ್ಲಿದ್ದ ದಿಬ್ಬದ ಕಡೆ ಮುನ್ನಡೆಸಿದ್ದರಿಂದ ರಕ್ಷಣಾ ಕಾರ್ಯಕ್ಕೆ ಅನುಕೂಲವಾಗಿದೆ. ನಾವಿಕನ ಸಮಯಪ್ರಜ್ಞೆಯಿಂದಾಗಿ ಆಗಬಹುದಾಗಿದ್ದ ಅತಿದೊಡ್ಡ ದುರಂತ ತಪ್ಪಿದೆ ಎಂದು ಅವರು ತಿಳಿಸಿದ್ದಾರೆ.

    ಇಂದು ಹಡಗಿನಲ್ಲಿದ್ದ 130 ಮಂದಿಯನ್ನು ರಕ್ಷಿಸಲಾಗಿದ್ದು, ಮೂವರು ಪ್ರಯಾಣಿಕರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವವರು ಹಡಗಿನಲ್ಲೇ ಸಿಲುಕಿದ್ದಾರೆಂದು ತಿಳಿದು ಬಂದಿದೆ. ನಾವಿಕನ ಸಮಯಪ್ರಜ್ಞೆಯಿಂದ ನೂರಾರು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕೇಂದ್ರ ಸಮುದ್ರಯಾನ ಸಾರಿಗೆ ಸಚಿವಾಲಯದ ಅಧಿಕಾರಿಯಾದ ಆಗಸ್ ಪುರ್ನೊಮೊ ತಿಳಿಸಿದ್ದಾರೆ.

    ಪ್ರತಿಕೂಲ ಹವಾಮಾನ ನಡುವೆಯೂ ಪ್ರಯಾಣ ಆರಂಭಿಸಿದ್ದಲ್ಲದೇ ನಿಗದಿಗಿಂತ ಹೆಚ್ಚಿನ ಭಾರವನ್ನು ಹಡಗು ಹೊಂದಿದ್ದರಿಂದ ಚಂಡಮಾರುತದ ಹೊಡೆತಕ್ಕೆ ಸಿಕ್ಕಿ ಈ ಅವಘಡ ಸಂಭವಿಸಿದೆ ಎಂದು ರಕ್ಷಣಾ ಪಡೆಗಳು ತಿಳಿಸಿವೆ.

  • ಚರ್ಚ್ ಮೇಲೆ ಆತ್ಮಹತ್ಯಾ ಬಾಂಬ್ ದಾಳಿ – 13 ಸಾವು, 41ಕ್ಕೂ ಹೆಚ್ಚು ಜನರಿಗೆ ಗಾಯ

    ಚರ್ಚ್ ಮೇಲೆ ಆತ್ಮಹತ್ಯಾ ಬಾಂಬ್ ದಾಳಿ – 13 ಸಾವು, 41ಕ್ಕೂ ಹೆಚ್ಚು ಜನರಿಗೆ ಗಾಯ

    ಜಕಾರ್ತ: ಇಂಡೊನೇಷ್ಯಾದ ಮೂರು ಚರ್ಚ್‍ಗಳ ಮೇಲೆ ಆತ್ಮಹತ್ಯಾ ಬಾಂಬರ್ ಗಳು ನಡೆಸಿದ ದಾಳಿಯಲ್ಲಿ 13 ಮಂದಿ ಸಾವನ್ನಪ್ಪಿದ್ದು, 41ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    ದೇಶದ ಎರಡನೇ ದೊಡ್ಡ ನಗರವಾದ ಸುರಭಯದಲ್ಲಿರುವ ಸಂತ ಮೇರಿಯಾ ರೋಮ್ ಕ್ಯಾಥೋಲಿಕ್ ಚರ್ಚ್, ಡಿಪೊನಿಗೊರೊದ ಚರ್ಚ್ ಹಾಗೂ ಪಂಟಕೊಸ್ತಾ ಚರ್ಚ್ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ.

    ಕ್ಯಾಥೋಲಿಕ್ ಚರ್ಚ್ ನಲ್ಲಿ ಸಾಮೂಹಿಕ ಪ್ರಾರ್ಥನೆಯ ವೇಳೆ ಮೊದಲ ದಾಳಿ ನಡೆದಿದೆ. ಈ ವೇಳೆ ಶಂಕಿತ ಬಾಂಬರ್ ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ಇದಾದ ಕೆಲವೇ ನಿಮಿಷದಲ್ಲಿ ಡಿಪೊನಿಗೊರೊದ ಚರ್ಚ್ ನಲ್ಲಿ ಎರಡನೇ ಬಾಂಬ್ ಸ್ಪೋಟವಾಗಿದೆ. ಮೂರನೇ ಬಾಂಬ್ ದಾಳಿ ಪಂಟಕೊಸ್ತಾ ಚರ್ಚ್ ಮೇಲಾಗಿದೆ ಎಂದು ಪೊಲೀಸ್ ವಕ್ತಾರ ಪ್ರಾನ್ಸ್ ಬರುಂಗ್ ಮಾಂಗೇರಾ ಸುದ್ದಿಗಾರಿರಗೆ ಮಾಹಿತಿ ನೀಡಿದ್ದಾರೆ.

    ಘಟನೆ 13 ಮಂದಿ ಸಾವನ್ನಪ್ಪಿದ್ದು, ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಸೇರಿದಂತೆ 40 ಮಂದಿ ಗಾಯಗೊಂಡಿದ್ದಾರೆ. ಅಲ್ಲದೇ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಮುಸ್ಲಿಮರನ್ನು ಹೊಂದಿರುವ ಇಂಡೋನೇಷ್ಯಾದಲ್ಲಿ ಅಲ್ಪಸಂಖ್ಯಾತರಾಗಿರುವ ಕ್ರಿಶ್ಚಿಯನ್ ಸಮುದಾಯದ ಮೇಲೆ ಮೊದಲಿನಿಂದಲೂ ಇಲ್ಲಿ ದಾಳಿ ನಡೆಯುತ್ತಿದೆ. 2000ರಲ್ಲಿ ಕ್ರಿಸ್‍ಮಸ್ ದಿನ ಚರ್ಚ್ ಮೇಲೆ ದಾಳಿ ಮಾಡಲಾಗಿತ್ತು. ಈ ವೇಳೆ 15 ಮಂದಿ ಮೃತಪಟ್ಟಿದ್ದರು ಮತ್ತು ಸುಮಾರು 100 ಜನ ಗಾಯಗೊಂಡಿದ್ದರು.