Tag: ಇಂಟರ್ ನೆಟ್

  • ಕತ್ತಲಲ್ಲಿ ಮುಳುಗಿದ ಪಾಕಿಸ್ತಾನ

    ಕತ್ತಲಲ್ಲಿ ಮುಳುಗಿದ ಪಾಕಿಸ್ತಾನ

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಭಾನುವಾರ ಮಧ್ಯರಾತ್ರಿಯಾಗುವ ಮುನ್ನವೇ ದೇಶದಾದ್ಯಂತ ವಿದ್ಯುತ್ ಸ್ಥಗಿತಗೊಂಡ ಪರಿಣಾಮ ಪಾಕ್ ದೇಶ ಕತ್ತಲಲ್ಲಿ ಮುಳುಗಿತು. ಅದರಲ್ಲೂ ಪಾಕಿಸ್ತಾನದ ಪ್ರಮುಖ ನಗರಗಳಾದ ಕರಾಚಿ, ಲಾಹೋರ್, ಇಸ್ಲಾಮಾಬಾದ್, ರಾವಲ್ಪಿಂಡಿ ಮತ್ತು ಮುಲ್ತಾನ್‍ನಲ್ಲಿ ಕತ್ತಲೆ ತೀವ್ರವಾಗಿ ಆವರಿಸಿತು.

    ವಿದ್ಯುತ್ ಸ್ಥಗಿತ ವಿಚಾರವಾಗಿ ಟ್ವೀಟ್ ಮಾಡಿರುವ ಪಾಕಿಸ್ತಾನ ವಿದ್ಯುತ್ ಸಚಿವ ಅಯೂಬ್ ಖಾನ್, ವಿದ್ಯುತ್ ಸ್ಥಗಿತಕ್ಕೆ ಕಾರಣವೆನೆಂಬುವುದನ್ನು ತಿಳಿದುಕೊಳ್ಳುವ ಎಲ್ಲಾ ಪ್ರಯತ್ನಗಳು ನಡೆಯುತ್ತಿದೆ. ರಾಷ್ಟ್ರೀಯ ವಿದ್ಯುತ್ ವಿತರಣಾ ವ್ಯವಸ್ಥೆಯಲ್ಲಿನ ಆವರ್ತನದಲ್ಲಿ ಗುಡುವಿನ ಗ್ರಿಡ್ ಇದ್ದಕ್ಕಿದ್ದಂತೆ 50 ರಿಂದ ಶೂನ್ಯಕ್ಕೆ ಇಳಿದಿದೆ. ಇದರಿಂದಾಗಿ ಧಿಡೀರ್ ವಿದ್ಯುತ್ ಪ್ರಸರಣ ವ್ಯವಸ್ಥೆಯ ಆವರ್ತನ ಸ್ಥಗಿತಗೊಂಡ ಪರಿಣಾಮ ದೇಶಾದ್ಯಂತ ವಿದ್ಯುತ್ ಸ್ಥಗಿತವಾಗಿದೆ. ಹಾಗಾಗಿ ಜನರು ಶಾಂತಿಯಾಗಿರಬೇಕೆಂದು ಎಂದು ಹೇಳಿದರು.

    ಪಾಕಿಸ್ತಾನದಲ್ಲಿ ವಿದ್ಯುತ್ ಸ್ಥಗಿತ ವಿಚಾರವಾಗಿ ಟ್ವೀಟ್ ಮಾಡಿರುವ ಇಸ್ಲಾಮಾಬಾದ್ ಜಿಲ್ಲಾಧಿಕಾರಿ ಹಮ್ಜಾ ಶಫ್ಕಾತ್, ನ್ಯಾಷನಲ್ ಟ್ರಾನ್ಸ್‍ಮಿಷನ್ ಡೆಸ್ಪ್ಯಾಚ್ ಕಂಪನಿಯ ಮಾರ್ಗಗಳು ವಿಫಲಗೊಂಡ ಪರಿಣಾಮ ವಿದ್ಯುತ್ ಸ್ಥಗಿತಗೊಂಡಿದೆ. ಎಲ್ಲವೂ ಸಹಜ ಸ್ಥಿತಿಗೆ ಬರಲು ಕೆಲವು ಸಮಯಬೇಕಾಗುತ್ತದೆ ಎಂದು ತಿಳಿಸಿದರು.

    ವಿದ್ಯುತ್ ಸ್ಥಗಿತದಿಂದ ಪಾಕಿಸ್ತಾನದಲ್ಲಿ ಮೊಬೈಲ್ ಮತ್ತು ಇಂಟರ್‍ನೆಟ್ ಸೇವೆಗಳ ಮೇಲೂ ಪರಿಣಾಮ ಬೀರಿತು. ಅಲ್ಲದೆ ಕರಾಚಿಯ ಜಿನ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೂಡ ಕತ್ತಲೆ ಆವರಿಸಿತು. ಇಡೀ ದೇಶದಲ್ಲಿ ವಿದ್ಯುತ್ ಸ್ಥಗಿತಗೊಂಡ ಪರಿಣಾಮ ಈವರೆಗೂ 68,000 ಕ್ಕೂ ಹೆಚ್ಚು ಜನರು ಟ್ವೀಟ್ ಮಾಡಿದ್ದಾರೆ ಎಂದು ಭಾರತ ಮತ್ತು ಪಾಕಿಸ್ತಾನದ ಉನ್ನತ ಟ್ವೀಟರ್ ಪ್ರವೃತ್ತಿ ತಿಳಿಸಿದೆ.

    https://twitter.com/OmarAyubKhan/status/1348003204315959298

    ವಿದ್ಯುತ್ ಸ್ಥಗಿತವನ್ನು ಕೆಲವರು ಅಪಹಾಸ್ಯ ಮಾಡಿದರೆ ಇನ್ನೂ ಕೆಲವರು ಆಸ್ಪತ್ರೆಗಳಲ್ಲಿ ವಿದ್ಯುತ್ ಬರಲೆಂದು ದೇವರಿಗೆ ಪ್ರಾರ್ಥಿಸಿದ್ದಾರೆ.

  • ಅರ್ಧಕ್ಕಿಂತ ಹೆಚ್ಚು ಆನ್‍ಲೈನ್ ವಿಡಿಯೋ ಗೇಮ್ಸ್ ಲೋಡಿಂಗ್ ಡೌನ್

    ಅರ್ಧಕ್ಕಿಂತ ಹೆಚ್ಚು ಆನ್‍ಲೈನ್ ವಿಡಿಯೋ ಗೇಮ್ಸ್ ಲೋಡಿಂಗ್ ಡೌನ್

    -ಜಾಗತಿಕ ಮಟ್ಟದಲ್ಲಿ ಇಂಟರ್ ನೆಟ್ ಬಳಕೆದಾರರಿಗೆ ಸಮಸ್ಯೆ

    ಬೆಂಗಳೂರು: ಇಂದು ಬೆಳಗ್ಗೆ ಆರು ಗಂಟೆಯಿಂದ ಅರ್ಧಕ್ಕಿಂತ ಹೆಚ್ಚು ಆನ್‍ಲೈನ್ ವಿಡಿಯೋ ಗೇಮ್ ಗಳ ಲೋಡಿಂಗ್ ಆಗದೇ ಬಳಕೆದಾರರು ತೊಂದರೆ ಅನುಭವಿಸಿದ್ದಾರೆ. ಜೊತೆ ಬಹುತೇಕ ವೆಬ್‍ಸೈಟ್ ಗಳು ಪಾಸ್ಟ್ ಎರರ್/ಲೋಡಿಂಗ್ ಪ್ರಾಬ್ಲಂ ಫೇಸ್ ಮಾಡಿವೆ.

    ಕ್ಲೌಡ್‍ಫ್ಲೇರ್ ಜಗತ್ತಿನ ಲಕ್ಷಾಂತರ ಇಂಟರ್ ನೆಟ್ ಪೈಸ್ ಜೊತೆ ಕಾರ್ಯನಿರ್ವಹಿಸುತ್ತಿದೆ. ಒಂದು ವೇಳೆ ಕ್ಲೌಡ್‍ಫ್ಲೇರ್ ನಲ್ಲಿ ಸಮಸ್ಯೆಯುಂಟಾದ್ರೆ ಅದು ನೇರವಾಗಿ ಹಲವು ಸೈಟ್ ಮತ್ತು ಸರ್ವಿಸ್ ಗಳ ಮೇಲೆ ಪರಿಣಾಮ ಬೀರುತ್ತದೆ.

    ಆನ್‍ಲೈನ್ ವಿಡಿಯೋ ಗೇಮ್ ಗಳಾದ ಕಾಲ್ ಆಫ್ ಡ್ಯೂಟಿ ಮಾಡರ್ನ್ ವಾರ್ ಫೇರ್, ವಾರ್ ಝೋನ್, ಜಿಟಿಎ 5, ಲೀಗ್ ಆಫ್ ಲಜೆಂಡ್ಸ್, ಅಪೆಕ್ಸ್ ಲೆಜೆಂಡ್ಸ್, ವಲೊರಂಟ್, ಡೆಸ್ಟಿನಿ 2, ಎಫ್‍ಐಎಫ್‍ಎ, ಫಾಲ್ ಗೈಸ್ ಬಳಕೆದಾರರು ಲೋಡಿಂಗ್ ಸಮಸ್ಯೆ ಎದುರಿಸಿದ್ದಾರೆ. ಇನ್ನು ಪಿಎಸ್‍ಎನ್, ಎಕ್ಸ್ ಬಾಕ್ಸ್ ಲೈವ್ ಆ್ಯಂಡ್ ಸ್ಟೀಮ್ ಇತ್ಯಾದಿ ಸರ್ವಿಸ್ ಗಳ ಕಾನ್ಟ್ ಲೋಡ್/ ಎರರ್ ಸಮಸ್ಯೆ ಎದುರಿಸಿವೆ.

    ಈ ಕುರಿತು ಪ್ರತಿಕ್ರಿಯಿಸಿರುವ ಕ್ಲೌಡ್‍ಫ್ಲೇರ್, ಹೆಚ್‍ಟಿಟಿಪಿ 522, 502, 503 ಎರರ್ ಸಮಸ್ಯೆ ಗಮನಕ್ಕೆ ಬಂದಿದೆ. ಇದು ಎಲ್ಲ ಟ್ರಾನ್ಸಿಟ್ ಪ್ರೈವಡೈರ್ ಡೇಟಾ ಸೆಂಟರ್ ಗಳಲ್ಲಿ ಅಫೆಕ್ಟ್ ಆಗಿದೆ. ಶೀಘ್ರದಲ್ಲಿಯೇ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದೆ.

  • ಕದಂಬ ನೌಕಾನೆಲೆಯಲ್ಲಿ ಸ್ಮಾರ್ಟ್ ಫೋನ್, ಇಂಟರ್‌ನೆಟ್ ಬಂದ್

    ಕದಂಬ ನೌಕಾನೆಲೆಯಲ್ಲಿ ಸ್ಮಾರ್ಟ್ ಫೋನ್, ಇಂಟರ್‌ನೆಟ್ ಬಂದ್

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಗಾ ಬಳಿ ಇರುವ ಕದಂಬ ನೌಕಾನೆಲೆ ಸೇರಿದಂತೆ ಭಾರತೀಯ ನೌಕಾದಳದಲ್ಲಿ ಇಂದಿನಿಂದಲೇ ಜಾರಿ ಬರುವಂತೆ ಸ್ಮಾರ್ಟ್ ಫೋನ್, ಫೇಸ್‍ಬುಕ್ ಹಾಗೂ ಇಂಟರ್‌ನೆಟ್ ಬಳಕೆಗೆ ಭಾರತೀಯ ನೌಕಾಪಡೆ ನಿಷೇಧ ಹೇರಿದೆ.

    ಕಳೆದ ತಿಂಗಳು ಪಾಕಿಸ್ತಾನದ ಹನಿಟ್ರ್ಯಾಪ್ ಬಲೆಗೆ ಸಿಲುಕಿ, ಭಾರತದ ಭದ್ರತೆಗೆ ಸಂಬಂಧಿಸಿದ ಬಹುಮುಖ್ಯ ರಹಸ್ಯ ಮಾಹಿತಿಗಳನ್ನು ರವಾನಿಸುತ್ತಿದ್ದ ಆರೋಪದ ಮೇರೆಗೆ ಸುಮಾರು 10 ಮಂದಿಯನ್ನು ಬಂಧಿಸಲಾಗಿತ್ತು. ಜಿಲ್ಲೆಯ ಕಾರವಾರದ ಅರಗಾದ ಕದಂಬ ನೌಕಾನೆಲೆಯ ಇಬ್ಬರು, ಭಾರತೀಯ ನೌಕಾಪಡೆಯ ಒಟ್ಟು 7 ಸಿಬ್ಬಂದಿ ಹಾಗೂ ಓರ್ವ ಹವಾಲ ವ್ಯವಹಾರದ ವ್ಯಕ್ತಿಯನ್ನು ಆಂಧ್ರ ಪೋಲೀಸರು ಬಂಧಿಸಿದ್ದರು.

    ಹೀಗಾಗಿ ಭಾರತೀಯ ನೌಕಾಪಡೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ನೌಕಾ ಸಿಬ್ಬಂದಿ ಸಮುದ್ರ ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳು ಹಾಗೂ ಸ್ಮಾರ್ಟ್ ಫೋನ್ ಬಳಸುವುದನ್ನು ನಿಷೇಧಿಸಿದೆ. ಈ ಹಿಂದೆ ಇಂಟರ್ ನೆಟ್, ಸ್ಮಾರ್ಟ್ ಫೋನ್ ಬಳಸುವುದಕ್ಕೆ ಯಾವುದೇ ಅಡ್ಡಿ ಇರಲಿಲ್ಲ. ಆದರೆ ಏಳು ಜನ ನೌಕಾ ಸಿಬ್ಬಂದಿ ಬಂಧನದ ನಂತರ ಮೊಬೈಲ್ ಬಳಕೆಯಿಂದಲೇ ದೊಡ್ಡ ದೊಡ್ಡ ಮಾಹಿತಿ ಪಾಕಿಸ್ತಾನ ಗುಪ್ತ ದಳಕ್ಕೆ ಹಂಚಿಕೆಯಾಗಿತ್ತು.

    ಇದಲ್ಲದೇ ದೊಡ್ಡ ಅಧಿಕಾರಿಗಳನ್ನು ಸಹ ಹನಿಟ್ರ್ಯಾಪ್ ಮೂಲಕ ಬಲೆಗೆ ಬೀಳಿಸಿಕೊಂಡ ಪಾಕಿಸ್ತಾನ ಗುಪ್ತದಳ ಇಲಾಖೆ ನೌಕಾದಳದವರಿಂದ ಹಲವು ಮಾಹಿತಿ ಪಡೆದಿತ್ತು. ಈ ಹಿನ್ನೆಲೆಯಲ್ಲಿ ಭಾರತೀಯ ನೌಕಾದಳ ಈ ನಿರ್ಧಾರ ಕೈಗೊಂಡಿದೆ.

  • ಸಚಿನ್, ಧೋನಿ ಬಳಿಕವೇ ಸನ್ನಿ ಲಿಯೋನ್- ಸರ್ಚ್ ಮಾಡುವ ಮುನ್ನ ಒಮ್ಮೆ ಯೋಚಿಸಿ

    ಸಚಿನ್, ಧೋನಿ ಬಳಿಕವೇ ಸನ್ನಿ ಲಿಯೋನ್- ಸರ್ಚ್ ಮಾಡುವ ಮುನ್ನ ಒಮ್ಮೆ ಯೋಚಿಸಿ

    ಮುಂಬೈ: ಭಾರತ ಕ್ರಿಕೆಟ್ ತಂಡದ ಎಂಎಸ್ ಧೋನಿ, ಸಚಿನ್ ತೆಂಡೂಲ್ಕರ್ ಅವರು ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆಟಗಾರರಾಗಿದ್ದು, ಇಬ್ಬರ ನಡೆಗಳು ಅದೆಷ್ಟೋ ಅಭಿಮಾನಿಗಳನ್ನು ಸೆಳೆದಿದೆ. ಈ ಇಬ್ಬರ ಕುರಿತು ಇಂಟರ್ ನೆಟ್‍ನಲ್ಲಿ ಹುಡುಕಾಟ ನಡೆಸುವವರ ಸಂಖ್ಯೆಯೂ ಹೆಚ್ಚಾಗಿದ್ದು, ಆದರೆ ಇವರ ಕುರಿತ ಮಾಹಿತಿಗಾಗಿ ಸರ್ಚ್ ಮಾಡಿದ ವೇಳೆ ಅತಿ ಹೆಚ್ಚು ನಕಲಿ ಲಿಂಕ್ ಗಳು ದೊರೆಯುತ್ತಿದೆ ಎಂದು ಪ್ರಮುಖ ಆ್ಯಂಟಿ ವೈರಸ್ ಮೆಕಾಫೆ ಸಂಸ್ಥೆ ತಿಳಿಸಿದೆ.

    ಹೌದು, ಸಚಿನ್ ಹಾಗೂ ಧೋನಿ ಅವರ ಬಗ್ಗೆ ಇಂಟರ್ ನೆಟ್‍ನಲ್ಲಿ ಮಾಹಿತಿ ಹುಡುಕಾಟ ವೇಳೆ ಅತಿ ಹೆಚ್ಚು ನಕಲಿ ಲಿಂಕ್ ಗಳು ಪತ್ತೆಯಾಗುತ್ತಿದ್ದು, ಇದನ್ನು ತಿಳಿಯದ ಅಭಿಮಾನಿಗಳು ಲಿಂಕ್ ಗಳನ್ನು ಕ್ಲಿಕ್ ಮಾಡಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಮೆಕಾಫೆ ಸಂಸ್ಥೆ ತಿಳಿಸಿದೆ.

    ಸಾಮಾನ್ಯವಾಗಿ ಜನರು ಕ್ರೀಡಾಪಟುಗಳು, ಸಿನಿಮಾ ಸ್ಟಾರ್, ಟಿವಿ ಶೋಗಳ ಹೆಚ್ಚು ಇಂಟರ್ ನೆಟ್‍ನಲ್ಲಿ ಹುಡುಕಾಟ ನಡೆಸುತ್ತಾರೆ. ತಮ್ಮ ನೆಚ್ಚಿನ ಸೆಲೆಬ್ರಿಟಿಯ ಕುರಿತು ಅಭಿಮಾನಿಗಳು ಹೆಚ್ಚು ಸರ್ಚ್ ಮಾಡುತ್ತಾರೆ. ದಿನ್ನೇ ತಮ್ಮ ಕೃತ್ಯಕ್ಕೆ ಬಳಕೆ ಮಾಡಿಕೊಳ್ಳುತ್ತಿರುವ ಸೈಬರ್ ಕ್ರೈಂ ಆರೋಪಿಗಳು, ನಕಲಿ ಲಿಂಕ್ ಗಳನ್ನು ಸೃಷ್ಟಿ ಮಾಡಿ ಹರಿಬಿಡುತ್ತಿದ್ದಾರೆ. ಆ ಮೂಲಕ ವ್ಯಕ್ತಿಗಳ ಮಾಹಿತಿಯನ್ನು ಕಳ್ಳತನ ಮಾಡುತ್ತಿದ್ದಾರೆ. ಅಲ್ಲದೇ ಬಳಕೆದಾರರ ಮೊಬೈಲ್, ಲ್ಯಾಪ್‍ಟಾಪ್, ಕಂಪ್ಯೂಟರ್ ಗಳು ವೈರಸ್ ಗಳಿಗೂ ಒಳಗಾಗುತ್ತಿದೆ. ಪರಿಣಾಮ ನೆಟಿಜನ್ಸ್ ಎಚ್ಚರಿಕೆಯಿಂದ ಇರಬೇಕು ಎಂದು ಸಂಸ್ಥೆ ಹೇಳಿದೆ.

    ಸಂಸ್ಥೆ ನೀಡಿರುವ ಪ್ರಮಾದಕರ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಧೋನಿ, ಸಚಿನ್ ಮೊದಲ ಸ್ಥಾನ ಪಡೆದಿದ್ದು, ಆ ಬಳಿಕವೇ ಬಿಗ್ ಬಾಸ್-8ರ ವಿನ್ನರ್ ಗೌತಮ್, ಬಾಲಿವುಡ್ ನಟಿ ಸನ್ನಿ ಲಿಯೋನ್, ರಾಧಿಕಾ ಅಪ್ಟೆ, ಪಿವಿ ಸಿಂಧು, ಅವರು ಸ್ಥಾನ ಪಡೆದಿದ್ದಾರೆ.

  • ಇನ್ನು ಮುಂದೆ ಸಿಗ್ನಲ್ ಇಲ್ದೇ ಇದ್ರೂ ಮೊಬೈಲ್, ಲ್ಯಾಂಡ್‍ಲೈನಿಗೆ ಕಾಲ್ ಮಾಡಬಹುದು!

    ಇನ್ನು ಮುಂದೆ ಸಿಗ್ನಲ್ ಇಲ್ದೇ ಇದ್ರೂ ಮೊಬೈಲ್, ಲ್ಯಾಂಡ್‍ಲೈನಿಗೆ ಕಾಲ್ ಮಾಡಬಹುದು!

    ನವದೆಹಲಿ: ಇನ್ನು ಮುಂದೆ ನೀವು ನೆಟ್‍ವರ್ಕ್ ಸಿಗ್ನಲ್ ಇಲ್ಲದೇ ಇದ್ದರೂ ಮೊಬೈಲ್ ಮೂಲಕವೇ ಲ್ಯಾಂಡ್‍ಲೈನ್, ಮೊಬೈಲ್‍ಗೆ ಕರೆ ಮಾಡಬಹುದು.

    ಹೌದು. ನೆಟ್ ವರ್ಕ್ ಸಿಗದಿರುವ ಜಾಗದಲ್ಲೂ ಇಂಟರ್ ನೆಟ್ ಟೆಲಿಫೋನಿ ಆಪ್ ಬಳಸಿ ಲ್ಯಾಂಡ್ ಲೈನ್, ಮೊಬೈಲ್ ಗಳಿಗೆ ಕರೆಗಳನ್ನು ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.

    ಮನೆ ಅಥವಾ ಕಚೇರಿಯ ವೈಫೈ ಬ್ರಾಡ್ ಬ್ಯಾಂಡ್ ನೆಟ್‍ವರ್ಕ್‍ಗೆ ಕನೆಕ್ಟ್ ಆಗಿ ಕರೆಗಳನ್ನು ಮಾಡಬಹುದಾದ ಇಂಟರ್ ನೆಟ್ ಟೆಲಿಫೋನಿ ತಂತ್ರಜ್ಞಾನವನ್ನು ದೇಶದಲ್ಲಿ ಪರಿಚಯಿಸುವಂತೆ ಕಳೆದ ಅಕ್ಟೋಬರ್ ನಲ್ಲಿ ಭಾರತೀಯ ದೂರಸಂಪರ್ಕ ಪ್ರಾಧಿಕಾರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಈ ಶಿಫಾರಸಿಗೆ ಸರ್ಕಾರ ಮಂಗಳವಾರ ಅಸ್ತು ಎಂದಿದೆ.

    ಏನಿದು ಟೆಲಿಫೋನಿ ಸೇವೆ?
    ಟೆಲಿಫೋನಿ ಪರವಾನಗಿ ಪಡೆದಿರುವ ಟೆಲಿಕಾಂ ಕಂಪನಿ ಅಥವಾ ಖಾಸಗಿ ಕಂಪನಿಗಳು ಗ್ರಾಹಕರಿಗೆ ಹೊಸ ಫೋನ್ ನಂಬರ್ ನೀಡುತ್ತವೆ. ಇದಕ್ಕೆ ಸಿಮ್ ಅವಶ್ಯಕತೆ ಇರುವುದಿಲ್ಲ. ಇಂಟರ್ ನೆಟ್ ಟೆಲಿಫೋನಿ ಆಪ್ ಡೌನ್ ಲೋಡ್ ಮಾಡಿಕೊಳ್ಳುವ ಮೂಲಕ ನಂಬರ್ ಅನ್ನು ಆಕ್ಟೀವ್ ಮಾಡಬಹುದಾಗಿದೆ.

    ರಿಲಯನ್ಸ್ ಜಿಯೋ, ಬಿಎಸ್‍ಎನ್‍ಎಲ್, ಏರ್‍ಟೆಲ್, ಹಾಗೂ ಇನ್ನಿತರ ಟೆಲಿಕಾಂ ಆಪರೇಟರ್ ಗಳು ಹೊಸ ಇಂಟರ್ ನೆಟ್ ಟೆಲಿಫೋನಿ ಸೇವೆಯನ್ನು ಒದಗಿಸಲಿವೆ ಎಂದು ಟ್ರಾಯ್ ಸಲಹೆಗಾರ ಅರವಿಂದ್ ಕುಮಾರ್ ತಿಳಿಸಿದ್ದಾರೆ.

    ಹೊಸ ವ್ಯವಸ್ಥೆಯನ್ನು ಬಳಸಲು ಟೆಲಿಕಾಂ ಕಂಪನಿ ತಯಾರಿಸಿದ ಇಂಟರ್ ನೆಟ್ ಟೆಲಿಫೋನಿ ಆಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಬಳಕೆದಾರನಿಗೆ 10 ಸಂಖ್ಯೆ ನಂಬರ್ ಸಿಗುತ್ತದೆ. ಉದಾಹರಣೆಗೆ ಏರ್‍ಟೆಲ್ ಸಿಮ್ ಬಳಸುತ್ತಿದ್ದರೆ ಜಿಯೋ ಆಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಈ ಸಂದರ್ಭದಲ್ಲಿ ಹೊಸ ನಂಬರ್ ಸಿಗಲಿದೆ. ಒಂದು ವೇಳೆ ನೀವು ಬಳಸುತ್ತಿರುವ ಸಿಮ್ ಕಂಪನಿಯ ಟೆಲಿಫೋನಿ ಆಪ್ ಅನ್ನು ಡೌನ್ ಲೋಡ್ ಮಾಡಿಕೊಂಡಲ್ಲಿ ಹೊಸ ಫೋನ್ ನಂಬರ್ ನ ಅವಶ್ಯಕತೆ ಇರುವುದಿಲ್ಲ. ಅದೇ ಫೋನ್ ನಂಬರ್ ಅನ್ನು ಬಳಸಿ ಕರೆಗಳನ್ನು ಮಾಡಬಹುದಾಗಿದೆ.

    ಟೆಲಿಕಾಂ ಕಂಪೆನಿಗಳ ಮಧ್ಯೆ ಕಾಲ್ ಡ್ರಾಪ್ (ಒಂದು ಕಂಪೆನಿಯಿಂದ ಮತ್ತೊಂದು ಕಂಪೆನಿಗೆ ಕರೆ ಮಾಡಿದಾಗ ಅರ್ಧದಲ್ಲೇ ಕರೆ ಕಡಿತಗೊಳ್ಳುವುದು) ಸಮಸ್ಯೆಗೆ ಟೆಲಿಫೋನಿ ಪರಿಹಾರವಾಗಬಲ್ಲದು ಎಂದು ಅರವಿಂದ್ ಕುಮಾರ್ ತಿಳಿಸಿದರು.

    ವೈಫೈ, ಬ್ರಾಡ್ ಬ್ಯಾಂಡ್ ಮೂಲಕ ಕರೆ ಮಾಡಿದಾಗ ಡೇಟಾಗೆ ಮಾತ್ರ ಶುಲ್ಕ ವಿಧಿಸುವುದರಿಂದ ಕಡಿಮೆ ದರದಲ್ಲಿ ಕರೆಗಳನ್ನು ಮಾಡಬಹುದಾಗಿದೆ. ಇದನ್ನೂ ಓದಿ: ಶೀಘ್ರದಲ್ಲಿ ಕಡಿಮೆಯಾಗಲಿದೆ ಕರೆ ದರ: ಏನಿದು ಐಯುಸಿ? ಈಗ ಈ ದರ ಎಷ್ಟಿದೆ?

  • ವೈಫೈ ಆಫ್ ಮಾಡಿದ್ದಕ್ಕೆ ವೈಫ್ ಮೇಲೆ ಹಲ್ಲೆ ಮಾಡಿದ ಪತಿ!

    ವೈಫೈ ಆಫ್ ಮಾಡಿದ್ದಕ್ಕೆ ವೈಫ್ ಮೇಲೆ ಹಲ್ಲೆ ಮಾಡಿದ ಪತಿ!

    ಹೈದರಾಬಾದ್: ಪತಿರಾಯ ಮಧ್ಯರಾತ್ರಿ ಕಳೆದರೂ ಮೊಬೈಲಲ್ಲಿ ಇಂಟರ್‍ನೆಟ್ ಜಾಲಾಡುತ್ತಾ ಕಾಲ ಕಳೆಯುತ್ತಾನೆ ಎಂದು ಪತ್ನಿ ವೈಫೈ ಆಫ್ ಮಾಡಿದ್ದಕ್ಕೆ ಪತಿರಾಯ ರಾಕ್ಷಸನಾಗಿದ್ದಾನೆ. ದುಂಡಿಗಲ್ ಎಂಬಲ್ಲಿ ಘಟನೆ ನಡೆದಿದ್ದು, ಸದ್ಯ ಪತ್ನಿ ರೇಷ್ಮಾ ಸುಲ್ತಾನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈಕೆಯ ಪತಿ ಒಮರ್ ಪಾಷಾ ವಿರುದ್ಧ ರೇಷ್ಮಾಳ ಅಜ್ಜಿ ಪುಂಜಗುಟ್ಟ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಆಗಿದ್ದೇನು?: ಬುಧವಾರ ರಾತ್ರಿ ಮನೆಯಲ್ಲಿದ್ದ ಒಮರ್ ಪಾಷಾ ಮೊಬೈಲಲ್ಲಿ ಇಂಟರ್ ನೆಟ್ ಜಾಲಾಟ ಶುರು ಮಾಡಿದ್ದಾನೆ. ಆದರೆ ಮಧ್ಯರಾತ್ರಿ ದಾಟಿದರೂ ಪತಿ ಮೊಬೈಲ್ ಆಫ್ ಮಾಡೋದು ಕಾಣಿಸಲಿಲ್ಲ. ಹೀಗಾಗಿ ರೇಷ್ಮಾ ಸುಲ್ತಾನಾ ವೈಫೈ ರೌಟರ್ ಆಫ್ ಮಾಡಿದ್ದಾಳೆ. ಇದರಿಂದ ಆತನ ಮೊಬೈಲ್ ಇಂಟರ್‍ನೆಟ್ ಸಂಪರ್ಕ ಕಡಿತಗೊಂಡಿದೆ. ಇದರಿಂದ ಸಿಟ್ಟಿಗೆದ್ದ ಪಾಷಾ ರೇಷ್ಮಾ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ತೀವ್ರತೆಗೆ ರೇಷ್ಮಾ ಬಲಕಣ್ಣಿನ ಕೆಳಭಾಗ ಊದಿಕೊಂಡಿದೆ.

    ನನ್ನ ಪತಿ ನನ್ನ ಮುಖ, ಎದೆ ಹಾಗೂ ತಲೆಗೆ ಹೊಡೆದಿದ್ದಾನೆ. ಈತನ ಹೊಡೆತ ತಾಳಲಾರದೇ ನಾನು ಮನೆಯಿಂದ ಹೊರಗೆ ಓಡಿ ಹೋದ ಬಳಿಕ ಹೊಡೆಯುವುದನ್ನು ನಿಲ್ಲಿಸಿದ್ದಾನೆ ಎಂದು ರೇಷ್ಮಾ ಸುಲ್ತಾನಾ ಹೇಳಿದ್ದಾಳೆ. ಇವರಿಬ್ಬರಿಗೂ ಮದುವೆಯಾಗಿ 6 ವರ್ಷವಾಗಿದ್ದು, ಮೂವರು ಹೆಣ್ಣು ಮಕ್ಕಳಿದ್ದಾರೆ.

    ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಪಂಜಗುಟ್ಟ ಪೊಲೀಸ್ ಇನ್ಸ್ ಪೆಕ್ಟರ್ ಎಸ್.ರವೀಂದ್ರ, ಸಂಬಂಧಿಕರು ರಾಜಿ ಸಂಧಾನಕ್ಕೆ ಪ್ರಯತ್ನಿಸುತ್ತಿದ್ದಾರೆ. ಒಂದು ವೇಳೆ ರಾಜಿಯಾಗದಿದ್ದರೆ ಈ ಘಟನೆಯನ್ನು ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸುತ್ತೇವೆ. ಅಲ್ಲಿ ಕೌನ್ಸೆಲಿಂಗ್ ಮಾಡಲು ಯತ್ನಿಸುತ್ತೇವೆ. ಇದಾದ ಬಳಿಕವೂ ಪ್ರಯೋಜನವಾಗದಿದ್ದರೆ, ಅಗತ್ಯಬಿದ್ದರೆ ನಂತರ ಪ್ರಕರಣ ದಾಖಲಿಸುತ್ತೇವೆ ಎಂದು ಹೇಳಿದ್ದಾರೆ. ಘಟನೆ ರೇಷ್ಮಾಳ ಅತ್ತೆ ಮನೆಯಲ್ಲೇ ನಡೆದಿದ್ದು, ಸಿಟ್ಟಿಗೆದ್ದ ಒಮರ್ ಆಕೆಯನ್ನು ಸೋಮಾಜಿಗುಡದಲ್ಲಿರುವ ತಾಯಿ ಮನೆಗೆ ತಂದು ಬಿಟ್ಟಿದ್ದಾನೆ ಎಂದು ಹೇಳಿದ್ದಾರೆ.