Tag: ಆ್ಯಪ್

  • ಕರ್ನಾಟಕ ಪೊಲೀಸ್ ಆ್ಯಪ್ ಬಿಡುಗಡೆ – ವಿಶೇಷತೆ ಏನು? ಬಳಕೆ ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ

    ಕರ್ನಾಟಕ ಪೊಲೀಸ್ ಆ್ಯಪ್ ಬಿಡುಗಡೆ – ವಿಶೇಷತೆ ಏನು? ಬಳಕೆ ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ

    ಬೆಂಗಳೂರು: ಪೊಲೀಸ್ ಹಿರಿಯ ಅಧಿಕಾರಿಗಳ ಜೊತೆಗಿನ ಪರಿಶೀಲನಾ ಸಭೆಯಲ್ಲಿ ಕರ್ನಾಟಕ ಪೊಲೀಸ್ ಅಪ್ಲಿಕೇಶನ್ ಅನ್ನು ಸಿಎಂ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದು, ಪೊಲೀಸರ ಸೇವೆಯನ್ನು ಮತ್ತಷ್ಟು ಸರಳವಾಗಿ ಜನರಿಗೆ ಒದಗಿಸಲು ಸಹಕಾರಿಯಾಗಿದೆ.

    `ಕರ್ನಾಟಕ ಸ್ಟೇಟ್ ಪೊಲೀಸ್’ ಹೆಸರಿನಲ್ಲಿ ಆ್ಯಂಡ್ರಾಯ್ಡ್ ಹಾಗೂ ಐಒಎಸ್ ಮೊಬೈಲ್ ಫೋನ್ ಗಳಲ್ಲಿ ಬಳಕೆ ಮಾಡಲು ಅವಕಾಶವಿದೆ. ಅಲ್ಲದೇ ಆ್ಯಪ್ ಪ್ರಮುಖವಾಗಿ ಕನ್ನಡ ಹಾಗೂ ಇಂಗ್ಲಿಷ್ ಎರಡು ಭಾಷೆಯಲ್ಲಿ ಲಭ್ಯವಿದೆ.

    ವಿಶೇಷತೆಗಳೇನು?
    ಕರ್ನಾಟಕ ಪೊಲೀಸ್ ಆ್ಯಪ್ ಅನ್ನು ಎಲ್ಲರು ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದ್ದು, ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದು ಮಾಡುವ ಮೂಲಕ ಆ್ಯಪ್ ಗೆ ಚಾಲನೆ ನೀಡಬೇಕಾಗುತ್ತದೆ. ಬಳಿಕ ಬಳಕೆದಾರರು ನೀಡಿರುವ ನಂಬರ್ ಮೂಲಕ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಂದೇಶ ರವಾನೆ ಮಾಡಬಹುದಾಗಿದೆ.

    ಆ್ಯಪ್ ನಲ್ಲಿ ಎಸ್‍ಒಎಸ್ ಬಟನ್ ಸಹ ಲಭ್ಯವಿದ್ದು, ತುರ್ತು ಸಮಯದಲ್ಲಿ ಈ ಬಟನ್ ಮೇಲೆ ಒತ್ತುವ ಮೂಲಕ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದಾಗಿದೆ. ಫೋನ್ ನ ಜಿಪಿಎಸ್ ಲೋಕೇಶಷನ್ ಮೂಲಕ ತಾವಿರುವ ಸ್ಥಳದ ಬಗ್ಗೆಯೂ ಮಾಹಿತಿ ನೀಡಬಹುದಾಗಿದೆ.

    ವಿಶೇಷವಾಗಿ ಆ್ಯಪ್ ದೂರು ದಾಖಲಿಸಲು ಅವಕಾಶ ನೀಡಲಾಗಿದ್ದು, ಸಾರ್ವಜನಿಕರಿಗೆ ಹತ್ತಿರದ ಪೊಲೀಸ್ ಠಾಣೆಯ ಮಾಹಿತಿ, ಮೊಬೈಲ್ ನಂಬರ್, ಇ-ಮೇಲ್, ಪೊಲೀಸ್ ಅಧಿಕಾರಿಗಳ ಮಾಹಿತಿ ಸೇರಿದಂತೆ ಗೂಗಲ್ ಮ್ಯಾಪ್ ಜಿಪಿಎಸ್ ಮೂಲಕ ಪೊಲೀಸ್ ಠಾಣೆಯ ಮಾರ್ಗವನ್ನು ಪಡೆಯಬಹುದಾಗಿದೆ. ಈಗಾಗಲೇ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಬಗ್ಗೆ ಎಫ್‍ಐಆರ್ ಪ್ರತಿಯನ್ನು ಡೌನ್‍ಲೋಡ್ ಮಾಡಿಕೊಳ್ಳುವ ಹಾಗೂ ಕಳ್ಳತವಾದ ವಾಹನಗಳ ಬಗ್ಗೆ ವಿವರವನ್ನು ಪಡೆಯುವ ಆಯ್ಕೆ ಆ್ಯಪ್ ನಲ್ಲಿ ಲಭ್ಯವಿದೆ.

    https://www.facebook.com/CMofKarnataka/photos/a.720456501336150.1073741828.708459142535886/1718420591539731/?type=3&theater

    ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಫೋಟೋ, ವಿಡಿಯೋ, ಫೈಲ್ ಗಳು ಮತ್ತು ಆಡಿಯೋಗಳನ್ನು ಸಹ ಆಪ್ ಲೋಡ್ ಮಾಡಬಹುದಾಗಿದೆ. ಕರ್ನಾಟಕ ಯಾವುದೇ ಠಾಣೆಯಲ್ಲೂ ನಾಪತ್ತೆಯಾಗಿರುವ ಪ್ರಕರಣಗಳ ಮಾಹಿತಿಯನ್ನು ವಿಕ್ಷೀಸಬಹುದಾಗಿದೆ. ಅಲ್ಲದೇ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ನೀಡುವ ಎಲ್ಲಾ ಮಾಹಿತಿಯನ್ನು ಈ ಆ್ಯಪ್ ಮೂಲಕ ಪಡೆಯಬಹುದಾಗಿದೆ.

    ಪ್ರತಿಯೊಂದು ಪೊಲೀಸ್ ನಿರ್ವಹಣಾ ಕೊಠಡಿಯೂ ಸಹ ಆ್ಯಪ್ ನೊಂದಿಗೆ ಸಂಪರ್ಕ ಹೊಂದಿದ್ದು, ದೂರುಗಳ ಕುರಿತು ಪ್ರತಿಕ್ರಿಯೆ ಪಡೆಯಬಹುದು. ಸಾರ್ವಜನಿಕರು ನೀಡುವ ಪ್ರತಿ ದೂರಿಗೂ ಪ್ರತ್ಯೇಕ ಸಂಖ್ಯೆಯನ್ನು ನೀಡಲಾಗುತ್ತದೆ. ಅಲ್ಲದೇ ದೂರು ಸ್ವೀಕೃತಿ ಆಗಿರುವ ಕುರಿತು ಮೇಸೆಜ್ ದೂರದಾರರ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.

    ಈಗಾಗಲೇ ಗೂಗಲ್ ಸ್ಟೋರ್ ನಲ್ಲಿ ಬಿಡುಗಡೆಯಾಗಿರುವ ಕೆಎಸ್‍ಪಿ ಆ್ಯಪ್ ಕುರಿತು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 4.6 ಸ್ಟಾರ್ ರೇಟಿಂಗ್ ಪಡೆದಿದೆ. ಇದೂವರೆಗೂ 10 ಸಾವಿರಕ್ಕೂ ಅಧಿಕ ಮಂದಿ ಡೌನ್ಲೋಡ್ ಮಾಡಿದ್ದಾರೆ.

    ಆ್ಯಂಡ್ರಾಯ್ಡ್ ಅಪ್ಲಿಕೇಶನ್ ಡೌನ್‍ಲೋಡ್ ಮಾಡಲು ಕ್ಲಿಕ್ ಮಾಡಿ: ಕರ್ನಾಟಕ ಸ್ಟೇಟ್ ಪೊಲೀಸ್

    https://www.facebook.com/CMofKarnataka/photos/a.720456501336150.1073741828.708459142535886/1718300214885102/?type=3&theater

  • ಕರ್ನಾಟಕದ ಹೆಮ್ಮೆ ಕಾಂಗ್ರೆಸ್ ಮತ್ತೊಮ್ಮೆ – `ಮುಖ್ಯಮಂತ್ರಿ ಮಾತು ಆ್ಯಪ್’ ಬಿಡುಗಡೆ

    ಕರ್ನಾಟಕದ ಹೆಮ್ಮೆ ಕಾಂಗ್ರೆಸ್ ಮತ್ತೊಮ್ಮೆ – `ಮುಖ್ಯಮಂತ್ರಿ ಮಾತು ಆ್ಯಪ್’ ಬಿಡುಗಡೆ

    ಬೆಂಗಳೂರು: ಕಾಂಗ್ರೆಸ್ ನಾಯಕರು `ಮುಖ್ಯಮಂತ್ರಿ ಮಾತು ಆ್ಯಪ್’ ಅನ್ನು ಬಿಡುಗಡೆ ಮಾಡಿದ್ದಾರೆ. ನಗರದ ಖಾಸಗಿ ಹೋಟೆಲ್ ನಲ್ಲಿ ಈ ಆ್ಯಪ್ ಬಿಡುಗಡೆ ಮಾಡಿದ್ದು, ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಚುನಾವಣೆ ಉಸ್ತುವಾರಿ ವೇಣುಗೋಪಾಲ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ಡಿಕೆಶಿವಕುಮಾರ್, ಜಾರ್ಜ್ ರಿಂದ ಆ್ಯಪ್ ಬಿಡುಗಡೆ ಮಾಡಿಸಲಾಗಿದೆ.

    ಕರ್ನಾಟಕದ ಹೆಮ್ಮೆ ಕಾಂಗ್ರೆಸ್ ಮತ್ತೊಮ್ಮೆ ಅನ್ನೊ ಟ್ಯಾಗ್ ಲೈನ್ ಕೂಡ ಇದೆ. ಈ ಆ್ಯಪ್ ನಲ್ಲಿ ಮುಖ್ಯಮಂತ್ರಿಗಳ ಮಾತು, ಸಿದ್ದರಾಮಯ್ಯ ಭಾಷಣದ ವಿಡಿಯೋ ಲಭ್ಯವಾಗುತ್ತದೆ. ಅಷ್ಟೇ ಅಲ್ಲದೇ ಕಾಂಗ್ರೆಸ್ ಸರ್ಕಾರದ ಸಾಧನೆ ಮತ್ತು ಮುಂದಿನ ದಿನಗಳ ವಿಷನ್ ಕುರಿತಾತ ವಿಡಿಯೋ ಲಭ್ಯವಾಗುತ್ತದೆ. ಈ ಆ್ಯಪ್‍ನಲ್ಲಿ ಸಿಎಂ ಫೋಟೋ ಸ್ಕ್ಯಾನ್ ಮಾಡಿದರೆ ಸಿದ್ದರಾಮಯ್ಯ ಅವರ ಭಾಷಣ ಲಭ್ಯವಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಈ ಆ್ಯಪ್ ನಿರ್ಮಾಣ ಮಾಡಲಾಗಿದ್ದು, ಆಗ್ನೆಂಟೆಡ್ ರಿಯಾಲಿಟಿ ತಂತ್ರಜ್ಞಾನದ ಆ್ಯಪ್ ಆಗಿದೆ.

    ಈ ಕುರಿತು ಸಿಎಂ ಸಿದ್ದರಾಮಯ್ಯ ಮಾತನಾಡಿ, ತಂತ್ರಜ್ಞಾನ ಬೆಳೆಯಲು ಕಾಂಗ್ರೆಸ್ ಪಕ್ಷ ಕಾರಣ. ಪ್ರಜಾಪ್ರಭುತ್ವದಲ್ಲಿ 5 ವರ್ಷಕ್ಕೆ ಚುನಾವಣೆ ನಡೆಯುತ್ತದೆ. ಮತದಾರರ ನಿರೀಕ್ಷೆಗೆ ತಕ್ಕಂತೆ ಸರ್ಕಾರಗಳು ಕೆಲಸ ಮಾಡಬೇಕು. ಆಡಳಿತದಲ್ಲಿ ಪಾರದರ್ಶಕತೆ, ಅಭಿವೃದ್ಧಿ ಕೆಲಸವನ್ನು ಸರ್ಕಾರ ಮಾಡಬೇಕು. 2013ರಲ್ಲಿ ನಮ್ಮ ಸರ್ಕಾರ ನೀಡಿದ ಎಲ್ಲಾ ಭರವಸೆ ಈಡೇರಿಸಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಜನರೇ ಮಾಲೀಕರು. ವಿನೂತನ ತಂತ್ರಜ್ಞಾನ ಬಳಸಿಕೊಂಡು ಚುನಾವಣೆ ಪ್ರಚಾರ ಮಾಡುತ್ತೀವಿ. ಮತ್ತೆ ರಾಜ್ಯದ ಜನ ನಮಗೆ ಆಶೀರ್ವಾದ ಮಾಡುತ್ತಾರೆ ಅಂತ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

    ರಾಜ್ಯದ ಜನ ಅನ್ನ, ನೀರು ಕೊಟ್ಟವರನ್ನ ಕೈ ಬಿಡೊಲ್ಲ. ಬಿಜೆಪಿಯವರು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಸುಳ್ಳು ಹೇಳಿ ಜನರನ್ನ ದಾರಿ ತಪ್ಪಿಸಲು ಸಾಧ್ಯವಿಲ್ಲ. ಅಮಿತ್ ಶಾ, ಮೋದಿ, ಯಡಿಯೂರಪ್ಪ ಬರೀ ಸುಳ್ಳು ಹೇಳುತ್ತಾರೆ. ಕೇಂದ್ರದಲ್ಲಿ ಅವರ ಸಾಧನೆ ಇಲ್ಲ, ರಾಜ್ಯದಲ್ಲೂ ಸಾಧನೆ ಇಲ್ಲ. ಜೈಲಿಗೆ ಹೋಗಿದ್ದೇವೆ ಅಂತ ಹೇಳಲು ಆಗೊಲ್ಲ. ಅದಕ್ಕಾಗಿ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಜೆಡಿಎಸ್ ಗೆ ರಾಜ್ಯದಲ್ಲಿ ಶಕ್ತಿ ಇಲ್ಲ. ಕೆಲ ಜಿಲ್ಲೆಯಲ್ಲಿ ಮಾತ್ರ ಜೆಡಿಎಸ್ ಇದೆ. ಅತಂತ್ರ ವಿಧಾನಸಭೆ ಆಗಲಿ ಅಂತ ಜೆಡಿಎಸ್ ಕಾಯುತ್ತಿದೆ. ಬಿಜೆಪಿ, ಜೆಡಿಎಸ್ ಅಧಿಕಾರಕ್ಕೆ ಬರುತ್ತೆ ಅಂತ ಕನಸ್ಸು ಕಾಣುತ್ತಿದ್ದಾರೆ. ಅದು ಕನಸಾಗೇ ಇರುತ್ತದೆ. ಅವರು ಅಧಿಕಾರಕ್ಕೆ ಬರೊಲ್ಲ. ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೆ ಎಂದ್ರು.

  • ಶೇರುದಾರರಿಗೆ ಬರೆದ ಪತ್ರದಲ್ಲಿ 7 ಬಾರಿ ಭಾರತದ ಹೆಸರನ್ನು ಉಲ್ಲೇಖಿಸಿದ ಜೆಫ್ ಬೆಜೊಸ್

    ಶೇರುದಾರರಿಗೆ ಬರೆದ ಪತ್ರದಲ್ಲಿ 7 ಬಾರಿ ಭಾರತದ ಹೆಸರನ್ನು ಉಲ್ಲೇಖಿಸಿದ ಜೆಫ್ ಬೆಜೊಸ್

    ಕ್ಯಾಲಿಫೋರ್ನಿಯಾ: ಜಗತ್ತಿನ ಶ್ರೀಮಂತ ಉದ್ಯಮಿ, ಅಮೆಜಾನ್ ಸಿಇಒ ಜೆಫ್ ಬೆಜೊಸ್ ತಮ್ಮ ಕಂಪೆನಿಯ ವಾರ್ಷಿಕ ಹೂಡಿಕೆದಾರರಿಗೆ ಕಳುಹಿಸಿದ ಪತ್ರದಲ್ಲಿ 7 ಬಾರಿ ಭಾರತದ ಹೆಸರನ್ನು ಉಲ್ಲೇಖಿಸಿದ್ದಾರೆ. ಈ ಮೂಲಕ ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸುವುದಾಗಿ ತಿಳಿಸಿದ್ದಾರೆ.

    ವಿಶ್ವದ ನಂ. 1 ಇ-ಮಾರಾಟ ಸೇವಾ ಸಂಸ್ಥೆ ಎಂದು ಗುರುತಿಸಿಕೊಂಡಿರುವ ಅಮೆಜಾನ್ ಭಾರತದಲ್ಲಿ ಕಂಪೆನಿಯ ಹೂಡಿಕೆ ಪ್ರಮಾಣವನ್ನು ಹೆಚ್ಚಿಸಲು ನಿರ್ಧರಿಸಿದೆ. ಲ್ಲದೇ ಅಮೆಜಾನ್ ನೀಡುತ್ತಿರುವ ಅಲೆಕ್ಸಾ ವಾಯ್ಸ್ ಸೇವೆಯಲ್ಲಿ ಹಿಂದಿ ಭಾಷೆಯನ್ನು ಸೇರಿಸುವ ಕುರಿತು ಮಾಹಿತಿಯನ್ನು ನೀಡಿದ್ದಾರೆ. ಇದರಿಂದ ಭಾರತದಲ್ಲಿ ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಸಾಧ್ಯ ಎಂದು ಜೆಫ್ ಬೆಜೊಸ್ ಹೇಳಿದ್ದಾರೆ.

    ಅಮೆಜಾನ್ ಪ್ರೈಂ ವಿಡಿಯೋಗೆಂದೇ ಅಮೆರಿಕ, ಇಂಗ್ಲೆಂಡ್ ನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದಂತೆ ಭಾರತದಲ್ಲೂ ಮುಂದಿನ ದಿನಗಳಲ್ಲಿ ಭಾರತದ ಭಾಷೆಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ತಿಳಿಸಿದ್ದಾರೆ.

    ಭಾರತದಲ್ಲಿ ಮೊದಲ ಬಾರಿಗೆ ಅಮೆಜಾನ್ ಪ್ರೈಂ ಸದಸ್ಯತ್ವ ಪಡೆಯಲು ಅವಕಾಶ ನೀಡಿದ ಒಂದು ವರ್ಷದಲ್ಲೇ ಕಂಪೆನಿಯ ಇತಿಹಾಸದಲ್ಲಿ ಅತೀ ಹೆಚ್ಚು ಸದಸ್ಯರಾಗಿದ್ದಾರೆ. ಬೇರೆ ದೇಶಗಳ ಮಾರುಕಟ್ಟೆಗೆ ಹೋಲಿಸಿದರೆ ಇದೊಂದು ದಾಖಲೆ ಎಂದು ಉಲ್ಲೇಖಿಸಿದ್ದಾರೆ.

    ವೆಬ್‍ಸೈಟ್ ಟ್ರಾಫಿಕ್ ಲೆಕ್ಕ ಹಾಕುವ ಸಂಸ್ಥೆಗಳು ನೀಡಿದ ವರದಿಯನ್ನು ಉಲ್ಲೇಖಿಸಿ, ಅಮೆಜಾನ್ ಭಾರತದಲ್ಲಿ ಅತ್ಯಂತ ಹೆಚ್ಚು ವೇಗವಾಗಿ ಬೆಳೆಯುತ್ತಿದ್ದು, 2017 ರಲ್ಲಿ ಭಾರತದಲ್ಲಿ ಮೊಬೈಲ್ ಹಾಗೂ ಡೆಸ್ಕ್ ಟಾಪ್ ಮೂಲಕ ಅಮೆಜಾನ್ ತಾಣಕ್ಕೆ ಭೇಟಿ ನೀಡಿರುವುದು ಸಂತಸದ ಸಂಗತಿ. 2007ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಡೌನ್ ಲೋಡ್ ಆಗಿರುವ ಅಪ್ಲಿಕೇಶನ್‍ಗಳ ಪೈಕಿ ಅಮೆಜಾನ್.ಇನ್ ಅಪ್ಲಿಕೇಶನ್ ಒಂದಾಗಿದೆ ಎಂದು ಜೆಫ್ ಬೆಜೊಸ್ ತಿಳಿಸಿದ್ದಾರೆ.

    ಏನಿದು ಅಮೆಜಾನ್ ಪ್ರೈಂ?
    ಹಣವನ್ನು ಪಾವತಿಸಿ ಪಡೆಯುವ ಸೇವೆಯೇ ಅಮೆಜಾನ್ ಪ್ರೈಂ. ಪ್ರೈಂ ಸದಸ್ಯರಾದರೆ ಡೆಲಿವರಿಗಾಗಿ (ಒಂದು ದಿನ, ಎರಡು ದಿನ) ಹೆಚ್ಚುವರಿ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಅಷ್ಟೇ ಅಲ್ಲದೇ ಪ್ರೈಂ ವಿಡಿಯೋ, ಮ್ಯೂಸಿಕ್ ಗಳನ್ನು ಸಹ ಉಚಿತವಾಗಿ ನೋಡಬಹುದಾಗಿದೆ. ಹೊಸದಾಗಿ ರಿಲೀಸ್ ಆಗಿರುವ ಸಿನಿಮಾ ಗಳನ್ನು ಸಹ ಪ್ರೈಮ್ ಅಪ್ಲಿಕೇಶನ್ ಡೌನ್‍ಲೋಡ್ ಮಾಡಿ ನೋಡಬಹುದಾಗಿದೆ. ಈ ಸೇವೆಯನ್ನು ಮೊದಲ ಬಾರಿಗೆ 13 ವರ್ಷಗಳ ಹಿಂದೆ ಅಂದರೆ 2005 ರ ಜನವರಿ 2 ರಂದು ಆರಂಭಿಸಲಾಯಿತು. ಏಪ್ರಿಲ್ 2018ರ ವೇಳೆಗೆ ವಿಶ್ವದೆಲ್ಲೆಡೆ 10 ಕೋಟಿ ಪ್ರೈಂ ಸದಸ್ಯರು ಇದ್ದಾರೆ ಎಂದು ಅಮೆಜಾನ್ ತಿಳಿಸಿದೆ. ಭಾರತದಲ್ಲಿ ಈ ಸೇವೆಯನ್ನು 2016 ಜುಲೈ ತಿಂಗಳಿನಲ್ಲಿ ಆರಂಭಿಸಿತ್ತು. 999 ರೂ. ನೀಡಿದ್ದಲ್ಲಿ ವರ್ಷ ಕಾಲ ಪ್ರೈಂ ಸದಸ್ಯರಾಗಬಹುದು.

  • ಭೂಮಿ ಖರೀದಿ ಮಾಡೋ ಮಂದಿಗೆ ಗುಡ್ ನ್ಯೂಸ್- ನಿಮ್ಮ ನೆರವಿಗೆ ಬರಲಿದೆ `ದಿಶಾಂಕ್’ ಆ್ಯಪ್

    ಭೂಮಿ ಖರೀದಿ ಮಾಡೋ ಮಂದಿಗೆ ಗುಡ್ ನ್ಯೂಸ್- ನಿಮ್ಮ ನೆರವಿಗೆ ಬರಲಿದೆ `ದಿಶಾಂಕ್’ ಆ್ಯಪ್

    ಬೆಂಗಳೂರು: ಹೊಸ ಜಾಗ ಖರೀದಿ ಮಾಡಲು ನೀವು ಪ್ರಯತ್ನ ಮಾಡುತ್ತಿದ್ದೀರಾ? ನೀವು ಖರೀದಿ ಮಾಡಿದ ಜಾಗದಲ್ಲಿ ರಾಜಕಾಲುವೆ ಎಲ್ಲಿದೆ ಎನ್ನುವುದನ್ನು ತಿಳಿದುಕೊಳ್ಳಬೇಕೇ? ಹಾಗಾದ್ರೆ ನೀವು ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ನಿಮ್ಮ ಎಲ್ಲ ಸಂಶಯ, ಗೊಂದಲಗಳನ್ನು ಪರಿಹಾರ ಮಾಡುತ್ತೆ `ದಿಶಾಂಕ್’ ಆ್ಯಪ್. ಹೇಗೆ ಈ ಅಪ್ಲಿಕೇಶನ್ ಪರಿಹಾರ ಮಾಡುತ್ತೆ ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ.

    ಏನಿದು ಆ್ಯಪ್, ಯಾವ ಮಾಹಿತಿ ಸಿಗುತ್ತೆ?
    ಕಂದಾಯ ಇಲಾಖೆಯಲ್ಲಿ ಲಭ್ಯವಿರುವ 1960ರ ಸರ್ವೆ ನಕಾಶೆಗಳ ಆಧಾರದಲ್ಲಿ ದಿಶಾಂಕ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಈ ಆ್ಯಪ್‍ನಲ್ಲಿರುವ ನಕಾಶೆಯನ್ನು ನೋಡಿ ಆಸ್ತಿಯ ಕುರಿತ ಮೂಲ ವಿವರಗಳನ್ನು ತಿಳಿದುಕೊಳ್ಳಬಹುದಾಗಿದೆ. ದಿಶಾಂಕ್ ಆ್ಯಪ್ ಬೆಂಗಳೂರು ಮಾತ್ರವಲ್ಲದೇ ರಾಜ್ಯದ 30 ಜಿಲ್ಲೆಯಗಳ ಪ್ರತಿ ಭೂ ಭಾಗದ ಮಾಹಿತಿಯನ್ನು ಹೊಂದಿದೆ.

    ಯಾವುದಾದರೂ ಆಸ್ತಿಯ ನಿಖರವಾದ ಸರ್ವೆ ನಂಬರ್ ಹುಡುಕಲು ಹಾಗೂ ಆ ಭೂಮಿಯ ಬಗ್ಗೆ ವಿವರಗಳನ್ನು ಪಡೆಯಲು ದಿಶಾಂಕ್ ಆ್ಯಪ್ ಸಹಕಾರಿಯಾಗಲಿದೆ. ಭೂ ಭಾಗದ ವಿವರ, ರಾಜಕಾಲುವೆ, ಕೆರೆ ಕುಂಟೆ ಸುತ್ತಲಿನ ಪ್ರದೇಶ ಹಾಗೂ ಆಸ್ತಿಯ ಆಸುಪಾಸಿನಲ್ಲಿರುವ ಇತರೇ ಭೂ ಭಾಗದ ಮಾಹಿತಿಯನ್ನು ನೀಡಲಿದೆ. ಇದರಿಂದ ಭೂ ಒತ್ತುವರಿಯನ್ನೂ ಸುಲಭವಾಗಿ ಪತ್ತೆಹಚ್ಚಬಹುದುದಾಗಿದೆ.

    ಬಳಕೆ ಹೇಗೆ?
    ಮೊಬೈಲ್ ಫೋನ್‍ಗಳಲ್ಲಿ ಈ ಆ್ಯಪ್ ಡೌನ್‍ಲೋಡ್ ಮಾಡಿ, ಲೊಕೇಷನ್ ವಿವರವನ್ನು ಅಪ್‍ಡೇಟ್ ಮಾಡಿಕೊಳ್ಳಬೇಕು. ಈ ವೇಳೆ ವ್ಯಕ್ತಿ ಯಾವ ಪ್ರದೇಶದಲ್ಲಿ ಇರುತ್ತಾರೆ ಆ ಸ್ಥಳದ ಯಾವ ಸರ್ವೆ ನಂಬರ್ ನಲ್ಲಿದೆ ಎಂಬುದನ್ನು ತಿಳಿಸುತ್ತದೆ. ಇದರೊಂದಿಗ ಯಾವುದೇ ಆಸ್ತಿಯ ಸರ್ವೆ ನಂಬರ್ ನಮೂದಿದರೆ ಆ ನಿರ್ದಿಷ್ಟ ಜಾಗಕ್ಕೆ ಸಂಬಂಧಿಸಿದ ಮಾಹಿತಿ ಪಡೆಯಬಹುದು. ಆ ಜಾಗದಕ್ಕೆ ರಸ್ತೆ ಮಾರ್ಗ ಇದೆಯೇ ಎಂಬುದನ್ನೂ ತಿಳಿದುಕೊಳ್ಳಬಹುದಾಗಿದೆ.

    ಕಾನೂನು ಬದ್ಧ ದಾಖಲೆ ಅಲ್ಲ:
    ದಿಶಾಂಕ್ ಆ್ಯಪ್ ನೀಡುವ ಭೂಮಿಯ ವಿವರ ಕೇವಲ ಮಾಹಿತಿ ಆಗಿದೆ. ಇದನ್ನು ಕಾನೂನು ಬದ್ಧ ದಾಖಲೆ ಎಂದು ಪರಿಗಣಿಸಲಾಗುವುದಿಲ್ಲ.

    ಯಾರಿಗೆ ಉಪಯುಕ್ತ?
    ರಾಜ್ಯದ ಎಲ್ಲಾ ಸಾರ್ವಜನಿಕರು, ರಿಯಲ್ ಎಸ್ಟೇಟ್ ಉದ್ಯಮಿಗಳು ಸೇರಿಂತೆ ಎಲ್ಲರೂ ಭೂಮಿಯ ವಿವರ ಪಡೆಯಲು ಆ್ಯಪ್ ಉಪಯುಕ್ತವಾಗಿದೆ. ಆಸ್ತಿ ವ್ಯವಹಾರ, ಹೊಸ ಭೂಮಿ ಖರೀದಿ ಹಾಗೂ ಮಾರಾಟ ವೇಳೆ ಮಾಹಿತಿಗಾಗಿ ಆ್ಯಪ್ ಬಳಕೆ ಮಾಡಬಹುದು. ಭೂಮಿಯ ಖಾತೆ ವಿವರದಲ್ಲಿ ನಮೂದಿಸಿರುವ ಸರ್ವೆ ನಂಬರ್ ಸರಿಯಾಗಿದೆಯೇ ಎಂಬುದನ್ನೂ ಪರಿಶೀಲಿಸಬಹುದಾಗಿದೆ. ಆದರೆ ಇದರಲ್ಲಿ ಆಸ್ತಿಗಳ ಆಥವಾ ನಿವೇಶನಗಳ ಮೂಲ ಭೌಗೋಳಿಕ ವಿವರಗಳನ್ನು ಲಭಿಸುವುದಿಲ್ಲ.

    ಆ್ಯಪ್ ಸಿದ್ಧಪಡಿಸಿದ್ದು ಯಾರು?
    ದಿಶಾಂಕ್ ಆ್ಯಪ್ ಅನ್ನು ರಾಜ್ಯ ಸರ್ಕಾರದ ಕಂದಾಯ ಇಲಾಖೆ ಸತತ ಮೂರು ವರ್ಷಗಳಿಂದ ಪರಿಶ್ರಮವಹಿಸಿ ಸಿದ್ಧಪಡಿಸಿದೆ. ಇಲಾಖೆಯು 70 ಲಕ್ಷದಷ್ಟು ಸರ್ವೆನಂಬರ್‍ಗಳಿಗೆ ಸಂಬಂಧಿಸಿದ ವಿವರಗಳು ಇದರಲ್ಲಿ ಲಭ್ಯವಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಯಾವ ಭಾಗದಲ್ಲಿಯಾದರೂ ಭೂ ಮಾಹಿತಿ ಪಡೆಯುವವರ ನೆರವಿಗೆ ಬರಲು ಕಂದಾಯ ಇಲಾಖೆ `ದಿಶಾಂಕ್ ಆ್ಯಪ್’ ಬಿಡುಗಡೆಗೊಳಿಸಿದೆ.

    ಆ್ಯಪ್ ಉದ್ದೇಶ ಏನು?
    ಒಂದೇ ಆ್ಯಪ್‍ನಲ್ಲಿ ಭೂದಾಖಲೆಗಳಿಗೆ ಸಂಬಂಧಿಸಿದ ಎಲ್ಲ ಸೇವೆ ಸಿಗುವಂತೆ ಮಾಡುವುದು ಇಲಾಖೆಯ ಉದ್ದೇಶವಾಗಿದೆ. ದಿಶಾಂಕ್ ಆ್ಯಪ್ ತಯಾರಿಸಲು ಕಂದಾಯ ಇಲಾಖೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬಿಎಂಆರ್‍ಡಿಎ, ಬಿಬಿಎಂಪಿ ಮತ್ತು ಇತರ ನಗರ ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವವನನ್ನು ಪಡೆದುಕೊಂಡಿದೆ. ಆ್ಯಪ್ ಮತ್ತಷ್ಟು ಜನ ಸ್ನೇಹಿಯಾಗಿ ಮಾಡಲು ಕಂದಾಯ ಇಲಾಖೆ ಚಿಂತನೆ ನಡೆಸಿದೆ. ಮುಂದಿನ ಹಂತದಲ್ಲಿ ಆ್ಯಪ್‍ನಲ್ಲಿ ಆಸ್ತಿ ಮಾಲೀಕರಿಗೆ ಸಂಬಂಧಿಸಿದ ವಿವರಗಳನ್ನೂ ಜೋಡಿಸುವ ಮೂಲಕ ಮತ್ತಷ್ಟು ಉಪಯುಕ್ತ ಮಹಿತಿ ಕೇಂದ್ರವಾಗಿ ರೂಪಿಸಲು ಇಲಾಖೆ ಚಿತಿಂಸಿದೆ.

    ಎಲ್ಲಿ ಸಿಗುತ್ತೆ?
    ಗೂಗಲ್ ಆಂಡ್ರಾಯ್ಡ್ ಪ್ಲೇ ಸ್ಟೋರ್ ನಲ್ಲಿ ಈ ಆ್ಯಪ್ ಲಭ್ಯವಿದ್ದು 10 ಸಾವಿರಕ್ಕೂ ಹೆಚ್ಚು ಮಂದಿ ಡೌನ್‍ಲೋಡ್ ಮಾಡಿದ್ದಾರೆ. ಪ್ಲೇ ಸ್ಟೋರ್ ನಲ್ಲಿ ಲಭ್ಯವಿದ್ದರೂ, ಮಾಹಿತಿ ಕೊರತೆಯಿಂದ ಹೆಚ್ಚಿನ ಜನರು ಇದನ್ನು ಬಳಕೆ ಮಾಡಿಕೊಳ್ಳುತ್ತಿಲ್ಲ. ಆ್ಯಪ್ ಡೌನ್ ಲೋಡ್ ಮಾಡಲು ಕ್ಲಿಕ್ ಮಾಡಿ – ದಿಶಾಂಕ್ 

  • ಮೆಜೆಸ್ಟಿಕ್ ನ ಕೇಂದ್ರ ಭಾಗದಲ್ಲಿ ಬೇಬಿ ಸಿಟ್ಟಿಂಗ್ ತೆರೆಯಲು ಮೆಟ್ರೋ ನಿರ್ಧಾರ

    ಮೆಜೆಸ್ಟಿಕ್ ನ ಕೇಂದ್ರ ಭಾಗದಲ್ಲಿ ಬೇಬಿ ಸಿಟ್ಟಿಂಗ್ ತೆರೆಯಲು ಮೆಟ್ರೋ ನಿರ್ಧಾರ

    ಬೆಂಗಳೂರು: ನಗರದ ಜನರ ಅವಿಭಾಜ್ಯ ಅಂಗವಾಗಿರೋ ನಮ್ಮ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇದೀಗ ಈ ಯೋಜನೆಯಲ್ಲಿ ಬಹುಮುಖ್ಯವಾದ ಒಂದು ಯೋಜನೆಯೆಂದರೆ ಬೇಬಿ ಸಿಟ್ಟಿಂಗ್.

    ಐಟಿ ಬಿಟಿ ಜನತೆ ಸೇರಿದಂತೆ ಹಲವು ಉದ್ಯೋಗಿಗಳ ಬೇಡಿಕೆ ಹಿನ್ನಲೆಯಲ್ಲಿ ಬೆಂಗಳೂರಿನ ಕೇಂದ್ರ ಭಾಗ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಅತ್ಯಾಧುನಿಕವಾದ ಬೇಬಿ ಸಿಟ್ಟಿಂಗ್ ತೆರೆಯಲು ಮೆಟ್ರೋ ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ. ಈ ಬೇಬಿ ಸಿಟ್ಟಿಂಗ್ ಬೆಳಗ್ಗೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ.

    ಈ ಬೇಬಿ ಸಿಟ್ಟಿಂಗ್ ಬೆಂಗಳೂರಿನಲ್ಲಿರೋ ಇತರೆ ಬೇಬಿ ಸಿಟ್ಟಿಂಗ್ ಗಿಂತ ಅತ್ಯಾಧುನಿಕವಾಗಿರಲಿದ್ದು, ಜನ ಕುಳಿತಲ್ಲೇ ಮೊಬೈಲ್ ಮೂಲಕ ತಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ ಎಂಬುದನ್ನು ನೋಡಬಹುದಾಗಿದೆ.

    ಇದಕ್ಕಾಗಿ ಹೊಸ ಆ್ಯಪ್ ಸಿದ್ಧಪಡಿಸಲಾಗುತ್ತಿದ್ದು, ಪೋಷಕರು ಆ್ಯಪ್ ಮೂಲಕ ತಮ್ಮ ಮಕ್ಕಳ ಚಲನವಲನವನ್ನು ಗಮನಿಸಬಹುದು. ಕೆಲವೇ ದಿನಗಳಲ್ಲಿ ಈ ಬೇಬಿ ಸಿಟ್ಟಿಂಗ್ ಓಪನ್ ಆಗಲಿದೆ.

  • ಫೇಸ್‍ಬುಕ್, ಟ್ವಿಟ್ಟರ್ ಖಾತೆಗೆ ಚಾಲನೆ ನೀಡಿದ ಸಂಸದ ಪುಟ್ಟರಾಜು

    ಫೇಸ್‍ಬುಕ್, ಟ್ವಿಟ್ಟರ್ ಖಾತೆಗೆ ಚಾಲನೆ ನೀಡಿದ ಸಂಸದ ಪುಟ್ಟರಾಜು

    – ‘ಸಿಎಸ್‍ಪಿ ಮಂಡ್ಯ’ ಹೊಸ ಆ್ಯಪ್ ಗೆ ಚಾಲನೆ

    ಮಂಡ್ಯ: ಮಾಜಿ ಸಂಸದೆ ರಮ್ಯಾ ನಂತರ ಇದೀಗ ಹಾಲಿ ಸಂಸದ ಪುಟ್ಟರಾಜು ಸಾಮಾಜಿಕ ಜಾಲತಾಣದ ಮೂಲಕ ಮತದಾರರನ್ನು ತಲಪುವ ಪ್ರಯತ್ನ ಮಾಡುತ್ತಿದ್ದಾರೆ.

    ಇಂದು ಅಧಿಕೃತವಾಗಿ ಪುಟ್ಟರಾಜು ತಮ್ಮ ಫೇಸ್‍ಬುಕ್, ಟ್ವಿಟ್ಟರ್ ಖಾತೆಗೆ ಮಂಡ್ಯ ಸಂಸದರ ಕಚೇರಿಯಲ್ಲಿ ಚಾಲನೆ ನೀಡಿದರು. ಫೇಸ್‍ಬುಕ್, ಟ್ವಿಟರ್ ಖಾತೆ ಬಳಸದವರಿಗಾಗಿ `ಸಿಎಸ್‍ಪಿ ಮಂಡ್ಯ’ ಎಂಬ ಹೊಸ ಆ್ಯಪ್ ಕೂಡ ಓಪನ್ ಮಾಡಲಾಗಿದೆ.

    ಸಾಮಾಜಿಕ ಜಾಲತಾಣಗಳ ಮೂಲಕ ಮಂಡ್ಯ ಜನ ತಮ್ಮ ಸಮಸ್ಯೆ ಹೇಳಿಕೊಳ್ಳಬಹುದು. ತಮ್ಮ ಅಮೂಲ್ಯ ಸಲಹೆ ಇದ್ದರೆ ಅದನ್ನು ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ನೀಡಬಹುದು. ತಮ್ಮ ಸಮಸ್ಯೆಗೆ ತಕ್ಷಣ ಸ್ಪಂದಿಸುತ್ತೇನೆ ಅಂತ ಪುಟ್ಟರಾಜು ಹೇಳಿದ್ರು.

    ಇದೇ ಸಂದರ್ಭದಲ್ಲಿ ಮಾಜಿ ಸಂಸದೆ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರೂ ಜಿಲ್ಲೆಯಲ್ಲಿ ಮಾತ್ರ ಲಭ್ಯರಿಲ್ಲ ಎಂಬ ಬಗ್ಗೆ ಪ್ರಶ್ನಿಸಿದಾಗ ಅದರ ಬಗ್ಗೆ ಮಾತನಾಡಲು ನಿರಾಕರಿಸಿದ ಪುಟ್ಟರಾಜು, ಬೇರೆಯವರ ವಿಚಾರ ಪ್ರಸ್ತಾಪ ಮಾಡುವ ಅಗತ್ಯವಿಲ್ಲ. ನನ್ನ ಮೊಬೈಲ್ ನಂಬರ್ ಪ್ರತಿ ಮನೆಯಲ್ಲೂ ಇದೆ. ಯಾವಾಗ ಕರೆ ಮಾಡಿದರೂ ರಿಸೀವ್ ಮಾಡಿ ಜನರ ಸಮಸ್ಯೆ ಆಲಿಸುತ್ತೇನೆ ಎಂದರು.

    ಜಿ.ಟಿ. ದೇವೇಗೌಡರ ಬಗ್ಗೆ ಮಾತನಾಡಿ, ಅವರು ನಮ್ಮ ಮನೆಯ ಹಿರಿಯ ಮಗನಿದ್ದಂತೆ. ಎಲ್ಲ ಸಮಸ್ಯೆಗಳನ್ನೂ ಕೂತು ಬಗೆಹರಿಸಿಕೊಳ್ಳುತ್ತೇವೆ. ನಾವು ಪ್ರತಿನಿತ್ಯ ಅವರ ಸಂಪರ್ಕದಲ್ಲಿದ್ದೇವೆ. ಕೆಲವೊಂದು ನ್ಯೂನತೆಗಳ ಬಗ್ಗೆ ಹೇಳುತ್ತಿದ್ದಾರೆ. ಎಲ್ಲವನ್ನೂ ಸರಿಪಡಿಸಿಕೊಂಡು ಒಟ್ಟಿಗೆ ಹೋಗುತ್ತೇವೆ ಅಂದ್ರು.

    ಇನ್ನು ಸಂಸದರು ಸಾಮಾಜಿಕ ಜಾಲತಾಣಗಳ ಮೂಲಕ ಜನರ ಸಮಸ್ಯೆ ಆಲಿಸಲು ಹೊರಟಿರುವ ಬಗ್ಗೆ ಜಿಲ್ಲೆಯ ಜನರು ಸ್ವಾಗತಿಸಿದ್ದು, ಮಾಜಿ ಸಂಸದೆ ರಮ್ಯಾ ರೀತಿ ಬರೀ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸಕ್ರಿಯರಾಗಿರದೆ ಜಿಲ್ಲೆಯ ಜನರ ಮಧ್ಯೆಯಿದ್ದು ಕೆಲಸವನ್ನೂ ಮಾಡಬೇಕು ಎಂದು ಸಲಹೆ ನೀಡಿದರು.

     

  • ಕೆಲವೇ ನಿಮಿಷಗಳಲ್ಲಿ ಸಿಗುತ್ತೆ ಪ್ಯಾನ್ ನಂಬರ್, ಆ್ಯಪ್ ಮೂಲಕವೇ ಟ್ಯಾಕ್ಸ್ ಕಟ್ಟಿ

    ಕೆಲವೇ ನಿಮಿಷಗಳಲ್ಲಿ ಸಿಗುತ್ತೆ ಪ್ಯಾನ್ ನಂಬರ್, ಆ್ಯಪ್ ಮೂಲಕವೇ ಟ್ಯಾಕ್ಸ್ ಕಟ್ಟಿ

    ನವದೆಹಲಿ: ಇನ್ಮುಂದೆ ನೀವು ಪ್ಯಾನ್ ಕಾರ್ಡ್‍ಗಾಗಿ ವಾರಾನುಗಟ್ಟಲೆ ಕಾಯುವ ಅವಶ್ಯಕತೆ ಇರುವುದಿಲ್ಲ. ಶೀಘ್ರದಲ್ಲೇ ನೀವು ಕೆಲವೇ ನಿಮಿಷಗಳಲ್ಲಿ ಪ್ಯಾನ್ ನಂಬರ್ ಪಡೆಯಬಹುದು ಹಾಗೂ ನಿಮ್ಮ ಸ್ಮಾರ್ಟ್ ಫೋನ್ ಮೂಲಕವೇ ತೆರಿಗೆ ಕಟ್ಟಬಹುದಾಗಿದೆ.

    ತೆರಿಗೆ ಪಾವತಿದಾರರಿಗೆ ಸಹಾಯವಾಗುವಂತೆ ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಆಧಾರ್ ಇ-ಕೆವೈಸಿ ವ್ಯವಸ್ಥೆಯ ಮೂಲಕ ಪ್ಯಾನ್ ನಂಬರ್ ವಿತರಿಸಲು ಮುಂದಾಗಿದೆ. ಇದರ ಸಹಾಯದಿಂದ ವ್ಯಕ್ತಿ ತನ್ನ ವಿಳಾಸ ಮತ್ತು ಇನ್ನಿತರ ಮಾಹಿತಿಯನ್ನ ಹೆಬ್ಬೆರಳಿನ ಗುರುತು ಹಾಗೂ ಇತರೆ ಬಯೋಮೆಟ್ರಿಕ್ ಫೀಚರ್ಸ್ ಬಳಸಿ ಪರಿಶೀಲನೆ ಮಾಡಬಹುದಾಗಿದೆ. ಇ- ಕೆವೈಸಿ ಮೂಲಕ ಸಿಮ್ ಕಾರ್ಡ್ ನೀಡಬಹುದಾದ್ರೆ ಅದೇ ರೀತಿ ಪ್ಯಾನ್ ನಂಬರ್ ಕೂಡ ನೀಡಬಹುದಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಸದ್ಯಕ್ಕೆ ಪ್ಯಾನ್ ಕಾರ್ಡ್ ಪಡೆಯಲು 2 ರಿಂದ 3 ವಾರ ಬೇಕು. ಆದ್ರೆ ಈ ವ್ಯವಸ್ಥೆ ಬಂದ ನಂತರ 5 ರಿಂದ 6 ನಿಮಿಷಗಳಲ್ಲಿ ಪ್ಯಾನ್ ನಂಬರ್ ಸಿಗುತ್ತದೆ. ನಂತರ ಕಾರ್ಡನ್ನು ತಲುಪಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

    ಇದಲ್ಲದೆ ಹೊಸ ಕಂಪೆನಿಗಳಿಗೆ ಪ್ಯಾನ್ ವಿತರಿಸಲು ಈಗಾಗಲೇ ಸಿಬಿಡಿಟಿ ಹಾಗೂ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಸಹಯೋಗ ಮಾಡಿಕೊಂಡಿವೆ.

    ಇದಲ್ಲದೆ ಅನ್‍ಲೈನ್‍ನಲ್ಲಿ ತೆರಿಗೆ ಪಾವತಿ ಮಾಡಲು, ಪ್ಯಾನ್ ನಂಬರ್‍ಗಾಗಿ ಅರ್ಜಿ ಹಾಕಲು ತೆರಿಗೆ ಇಲಾಖೆ ಆ್ಯಪ್ ಸಿದ್ಧಪಡಿಸಿದೆ. ಈಗಾಗಲೇ ತೆರಿಗೆ ಇಲಾಖೆ ಆನ್‍ಲೈನ್ ಸೇವೆಗಳನ್ನು ಒದಗಿಸುತ್ತಿದ್ದು ಈ ಆ್ಯಪ್ ಮೂಲಕ ಹಿರಿಯ ಹಾಗೂ ಯುವ ತೆರಿಗೆದಾರರಿಗೆ ಮತ್ತಷ್ಟು ಸಹಾಯವಾಗಲಿದೆ ಎಂದು ಹೇಳಲಾಗಿದೆ.