Tag: ಆಸ್ತಿ

  • ಪತ್ನಿ ಹೆಸರಿನಲ್ಲಿದ್ದ 300 ಕೋಟಿ ರೂ. ಆಸ್ತಿಯನ್ನು ಸೊಸೆಗೆ ಕೊಟ್ಟ ಮುನಿಯಪ್ಪ!

    ಪತ್ನಿ ಹೆಸರಿನಲ್ಲಿದ್ದ 300 ಕೋಟಿ ರೂ. ಆಸ್ತಿಯನ್ನು ಸೊಸೆಗೆ ಕೊಟ್ಟ ಮುನಿಯಪ್ಪ!

    – ದಾಖಲೆ ಬಿಡುಗಡೆಯಾದ ಬೆನ್ನಲ್ಲೇ ಸೊಸೆಗೆ ಗಿಫ್ಟ್

    ಕೋಲಾರ: ಸಂಸದ ಕೆ.ಎಚ್ ಮುನಿಯಪ್ಪ ಆಸ್ತಿ ದಾಖಲೆ ಬಿಡುಗಡೆ ಹಿನ್ನೆಲೆ ವಿವಾದಕ್ಕೆ ಸಿಲುಕುತ್ತಿದ್ದಂತೆ, ತನ್ನ ಪತ್ನಿ ಹೆಸರಿನಲ್ಲಿದ್ದ 300 ಕೋಟಿ ರೂ. ಬೆಲೆಬಾಳುವ ಆಸ್ತಿಯನ್ನ ತಮ್ಮ ಸೊಸೆಗೆ ಉಡುಗೊರೆ ಕೊಟ್ಟಿದ್ದಾರೆ.

    ಕಳೆದ ವಾರ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಒಕ್ಕೂಟದ ಮುಖಂಡರು ಕೋಲಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಕೆ.ಎಚ್ ಮುನಿಯಪ್ಪನ ವಿರುದ್ಧ ಅಕ್ರಮ ಆಸ್ತಿ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು. ಈ ಆರೋಪ ಬಂದ ಕೂಡಲೇ ಕೊಡಗಿನಲ್ಲಿದ್ದ ಸುಮಾರು 204.42 ಎಕ್ರೆ ಏಲಕ್ಕಿ ತೋಟವನ್ನು ತನ್ನ ಸೊಸೆ ಎಸ್.ಎಲ್ ಶ್ರುತಿಶ್ರೀ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

    ಮಡಿಕೇರಿಯ ಅಕ್ರಮ ಆಸ್ತಿ ಸಂಪಾದನೆ ಕುರಿತು ಮಾ.19 ರಂದು ದಾಖಲೆಯನ್ನು ಬಿಡುಗಡೆ ಮಾಡಿದ್ದರು. ಅಂದು ಮಧ್ಯಾಹ್ನವೇ ಬಿಡುಗಡೆ ಮಾಡಿದ ದಾಖಲೆಗಳ ಆಸ್ತಿಯನ್ನು ಸೊಸೆ ಎಸ್.ಎಲ್ ಶ್ರುತಿಶ್ರೀ ಹೆಸರಿಗೆ ಮಡಿಕೇರಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಒಡಂಬಡಿಕೆ ನೋಂದಣಿ ಮಾಡಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

    ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ತನ್ನ ಆಸ್ತಿ ಘೋಷಣೆ ಮಾಡಬೇಕಾಗಿದ್ದ ಮುನಿಯಪ್ಪ ಅವರು ತಮ್ಮ ಪತ್ನಿ ನಾಗರತ್ನಮ್ಮ ಹೆಸರಿನಲ್ಲಿ ಮಡಿಕೇರಿಯ ಕುಂದಚೇರಿ ಗ್ರಾಮದ ಸರ್ವೇ ನಂ.1/10 ಸುಮಾರು 300 ಕೋಟಿ ಬೆಲೆಬಾಳುವ 204.42 ಎಕರೆ ಆಸ್ತಿ ಬಗ್ಗೆ ಮಾಹಿತಿ ತಿಳಿಸಿರಲಿಲ್ಲ ಎಂದು ಪರಿಶಿಷ್ಟ ಜಾತಿ ಪಂಗಡಗಳ ಮುಖಂಡರು ಆರೋಪಿಸಿದ್ದರು.

  • ಸುಮಲತಾ ಅಂಬರೀಶ್ ಬಳಿ ಚಿನ್ನ, ಆಸ್ತಿ ಎಷ್ಟಿದೆ – ಆಯೋಗಕ್ಕೆ ಸಲ್ಲಿಸಿದ ಮಾಹಿತಿ ಇಲ್ಲಿದೆ

    ಸುಮಲತಾ ಅಂಬರೀಶ್ ಬಳಿ ಚಿನ್ನ, ಆಸ್ತಿ ಎಷ್ಟಿದೆ – ಆಯೋಗಕ್ಕೆ ಸಲ್ಲಿಸಿದ ಮಾಹಿತಿ ಇಲ್ಲಿದೆ

    ಮಂಡ್ಯ: ಜಿಲ್ಲೆಯ ರಾಜಕೀಯ ಅಕ್ಷರಶಃ ಸ್ಟಾರ್ ರಣರಂಗವಾಗಿ ಮಾರ್ಪಟ್ಟಿದ್ದು, ಸುಮಲತಾ ಅಂಬರೀಶ್ ಅವರು ಇಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ವೇಳೆ ನಿಯಮಗಳಂತೆ ನಾಮಪತ್ರದೊಂದಿಗೆ ತಮ್ಮೊಂದಿಗೆ ಇದ್ದ ಹಣ, ಆಸ್ತಿ, ಸಂಪತ್ತಿನ ವಿವರದ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಿದ್ದಾರೆ.

    ಸುಮಲತಾ ಬಳಿ ಐದೂವರೆ ಕೆಜಿ ಚಿನ್ನ, 31 ಕೆಜಿ ಬೆಳ್ಳಿ ಹಾಗೂ 5 ಕೋಟಿ ರೂ. ಚರಾಸ್ತಿ, 17 ಕೋಟಿ ಸ್ಥಿರಾಸ್ತಿ ಸೇರಿ ಒಟ್ಟು 23 ಕೋಟಿ 41 ಲಕ್ಷ ರೂ. ಆಸ್ತಿ ಇದೆ. ಇದರ ಜೊತೆಯಲ್ಲಿ ಒಂದೂವರೆ ಕೋಟಿ ರೂ. ಸಾಲವೂ ಇದೆ.

    ಕಾಂಗ್ರೆಸ್ ಮುಖಂಡ ಸಚ್ಚಿದಾನಂದ ನಿವಾಸದಿಂದ ನೇರವಾಗಿ ಮಂಡ್ಯ ಡಿಸಿ ಕಚೇರಿಗೆ ಆಗಮಿಸಿದ ಸುಮಲತಾ ಅವರು 3 ಸೆಟ್‍ಗಳಲ್ಲಿ ನಾಮಪತ್ರ ಸಲ್ಲಿಸಿದರು. ಪ್ರತಿ ಸೆಟ್ ನಲ್ಲೂ ತಲಾ 10 ಸೂಚಕರ ಹೆಸರನ್ನು ಉಲ್ಲೇಖಿಸಿದ್ದರು.

    ಅಹಿಂದ ಅಸ್ತ್ರ:
    ನಾಮಪತ್ರ ಸಲ್ಲಿಕೆ ವೇಳೆಯೇ ಅಹಿಂದ ಅಸ್ತ್ರ ಪ್ರಯೋಗಿಸಿರುವ ಸುಮಲತಾ ಅವರು, ದಲಿತ, ಕುರುಬ, ಗಂಗಾಮತಸ್ಥ, ಮುಸ್ಲಿಂ ನಾಯಕರೊಂದಿಗೆ ಆಗಮಿಸಿ ಜಿಲ್ಲಾಧಿಕಾರಿ ಮಂಜುಶ್ರೀ ಅವರಲ್ಲಿ ನಾಮಪತ್ರ ಸಲ್ಲಿಸಿದರು. ಈ ವೇಳೆ, ಡಿಸಿ ಕಚೇರಿ ಹೊರಗಡೆ ಸುಮಲತಾ ಪರ ಜೈಕಾರ, ಘೋಷಣೆಗಳು ಮುಗಿಲು ಮುಟ್ಟಿದ್ದವು. ಸುಮಲತಾ ಅವರಿಗೆ ಪುತ್ರ ಅಭಿಷೇಕ್, ಅಂಬರೀಶ್ ಸಹೋದರ ಪುತ್ರ ಮಧುಸೂದನ್, ಅಂಬಿ ಆಪ್ತರಾದ ರಾಕ್‍ಲೈನ್ ವೆಂಕಟೇಶ್, ಶ್ರೀನಿವಾಸ್ ಅವರು ಸೇರಿದಂತೆ ಆತೃಪ್ತ ಕಾಂಗ್ರೆಸ್ ಮುಖಂಡರು, ಬಿಜೆಪಿಯ ಸತೀಶ್ ರೆಡ್ಡಿ ಸಾಥ್ ನೀಡಿದ್ದರು.

    ಬೃಹತ್ ಮೆರವಣಿಗೆ:
    ನಾಮಪತ್ರ ಸಲ್ಲಿಕೆ ಬಳಿಕ ಡಿಸಿ ಕಚೇರಿ ಬಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸುಮಲತಾ ಅವರು ಸಿಲ್ವರ್ ಜ್ಯುಬಿಲಿ ಪಾರ್ಕ್ ವರೆಗೂ ಸಮಾವೇಶಕ್ಕೆ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ನಟ ದರ್ಶನ್ ಮತ್ತು ಯಶ್ ಅವರು ಸಾಥ್ ನೀಡಿದರು. ಈ ರೋಡ್ ಶೋ ವೇಳೆ ಕೆಂಡದಂತೆ ಸೂರ್ಯ ಪ್ರಕಾಶಿಸುತ್ತಿದ್ದರೂ ಲೆಕ್ಕಿಸದ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇತ್ತ ಮದ್ದೂರಿನಿಂದ ಅಭಿಮಾನಿಗಳು ಒಂದು ಸಾವಿರ ಬೈಕ್‍ಗಳ ಮೂಲಕ ರ್ಯಾಲಿಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.

  • ಮಾವನ ಮೇಲೆ ಸೊಸೆಯಿಂದ ಹಲ್ಲೆ – ತಡೆಯಲು ಬಂದ ಪತಿಗೂ ಬಿತ್ತು ಏಟು

    ಮಾವನ ಮೇಲೆ ಸೊಸೆಯಿಂದ ಹಲ್ಲೆ – ತಡೆಯಲು ಬಂದ ಪತಿಗೂ ಬಿತ್ತು ಏಟು

    ಬೆಂಗಳೂರ: ಆಸ್ತಿ ವಿಚಾರವಾಗಿ ಸೊಸೆಯೇ ಮಾವನ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದ ಕೆ.ಜೆ. ಹಳ್ಳಿಯಲ್ಲಿ ನಡೆದಿದೆ.

    ಗುಲಾಬ್ ಜಾನ್ ಹಲ್ಲೆಗೊಳಗಾದ ಮಾವ. ಸೊಸೆ ಅಲಿಸ್ಮಾ ಭಾನು ಆಸ್ತಿಗಾಗಿ ಮಾವನ ಮೇಲೆ ಹಲ್ಲೆ ಮಾಡಿದ್ದಾಳೆ. ಇದನ್ನು ನೋಡಿ ತಂದೆಯನ್ನು ಕಾಪಾಡಲು ಪತ್ನಿಯನ್ನು ತಡೆಯಲು ಯತ್ನಿಸಿದ ಬುದ್ಧಿಮಾಂದ್ಯ ಗಂಡನ ಮೇಲೂ ಭಾನು ಹಲ್ಲೆ ಮಾಡಿದ್ದಾಳೆ. ಭಾನು ಹಲ್ಲೆ ಮಾಡಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.

    ಅಲಿಸ್ಮಾ ಭಾನು ಸುಮಾರು 30 ಕೋಟಿ ರೂಪಾಯಿ ಮೊತ್ತದ ಆಸ್ತಿ ಬರೆದುಕೊಡುವಂತೆ ಮಾವನ ಮೇಲೆ ಹಲ್ಲೆ ನಡೆಸಿದ್ದಾಳೆ. ಸೊಸೆಯ ದಬ್ಬಾಳಿಕೆಯಿಂದ ಹೈರಾಣಾಗಿರುವ ಮಾವ ಪೊಲೀಸರಿಗೆ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ 70 ವರ್ಷದ ಮುದುಕ ರೇಪ್ ಮಾಡಲು ಬಂದ ಎಂದು ಅಲಿಸ್ಮಾ ಭಾನು ಪ್ರತಿ ದೂರು ನೀಡಿದ್ದಾಳೆ.

    ಅಲಿಸ್ಮಾ ಭಾನು ರೌಡಿ ಶೀಟರ್ ಸಮೀರ್ ಜೊತೆ ಅಕ್ರಮ ಸಂಬಂಧ ಹೊಂದಿದ್ದು, ಆತನ ಜೊತೆ ಇದ್ದಾಗಲೇ ನನ್ನ ಬಳಿ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾಳೆ. ತನ್ನ ಅಕ್ರಮ ಸಂಬಂಧ ಮುಚ್ಚಿ ಹಾಕಲು ನನ್ನ ಮೇಲೆಯೇ ರೇಪ್ ಕೇಸ್ ದಾಖಲಿಸಿದ್ದಾಳೆ ಎಂದು ಮಾವ ಜಾನ್ ಆರೋಪಿಸಿದ್ದಾರೆ.

    ಹಲ್ಲೆ ಬಗ್ಗೆ ಹೇಳಿದರೆ ನನ್ನ ಮಗಳು ರಿಯಾನ್ ಮತ್ತು ಅಳಿಯ ರಿಯಾಝ್‍ಗೆ ಸೊಸೆ ಮತ್ತು ಅವನ ಅಣ್ಣ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಕೆ.ಜಿ ಹಳ್ಳಿ ಪೊಲೀಸರು ಸ್ಪಂದಿಸುತ್ತಿಲ್ಲ ಎಂದು ಗುಲಾಬ್ ಜಾನ್ ನ್ಯಾಯಕ್ಕಾಗಿ ಅಲೆದಾಟ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ವೆಯಾಗಿ ಮಕ್ಕಳಿದ್ರೂ ಲವ್ – ಪ್ರಿಯಕರನ ಸಹಾಯದಿಂದ ಪೋಷಕರನ್ನೇ ಕೊಂದು ಸೂಟ್‍ಕೇಸಿಗೆ ತುಂಬಿದ್ಳು

    ಮದ್ವೆಯಾಗಿ ಮಕ್ಕಳಿದ್ರೂ ಲವ್ – ಪ್ರಿಯಕರನ ಸಹಾಯದಿಂದ ಪೋಷಕರನ್ನೇ ಕೊಂದು ಸೂಟ್‍ಕೇಸಿಗೆ ತುಂಬಿದ್ಳು

    ನವದೆಹಲಿ: 26 ವರ್ಷದ ಯುವತಿಯೊಬ್ಬಳು ತನ್ನ ಪ್ರಿಯಕರನ ಸಹಾಯದಿಂದ ತನ್ನ ಪೋಷಕರನ್ನೇ ಕೊಲೆ ಮಾಡಿದ್ದಾಳೆ. ಬಳಿಕ ಮೃತದೇಹವನ್ನು ಸೂಟ್‍ಕೇಸ್‍ನಲ್ಲಿ ತುಂಬಿ ಚರಂಡಿಯಲ್ಲಿ ಎಸೆದಿರುವ ಅಮಾನವೀಯ ಘಟನೆ ಪಶ್ಚಿಮ ದೆಹಲಿಯ ಪಾಸ್ಟಿಮ್ ವಿಹಾರದಲ್ಲಿ ನಡೆದಿದೆ.

    ಮೃತರನ್ನು ಜಗೀರ್ ಕೌರ್(43) ಮತ್ತು ಅವರ ಪತಿ ಗುರ್ಮೆತ್ ಎಂದು ಗುರುತಿಸಲಾಗಿದೆ. ನಂಗ್ಲೋಯ್ ಸಯೆದ್ ಗ್ರಾಮದ ಬಳಿ ಚರಂಡಿಯಲ್ಲಿ ಸೂಟ್‍ಕೇಸ್ ಹರಿದು ಬಂದಿದೆ. ಅದನ್ನು ತೆಗೆದು ಪೊಲೀಸರು ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

    ಆರೋಪಿಗಳನ್ನು ದಾವೀಂದರ್ ಕೌರ್ ಮತ್ತು ಅವಳ ಗೆಳೆಯ ಪ್ರಿನ್ಸ್ ದೀಕ್ಷಿತ್ ಎಂದು ಗುರುತಿಸಲಾಗಿದೆ. ಸದ್ಯಕ್ಕೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿ ನಮ್ಮ ತಂದೆ-ತಾಯಿ ನಾಪತ್ತೆಯಾಗಿದ್ದಾಗ ನಾನು ದೆಹಲಿಯಲ್ಲಿ ಇರಲಿಲ್ಲ ಎಂದು ಹೇಳಿದ್ದಾಳೆ. ಆದರೆ ಆಕೆಯ ಫೋನ್ ಪರಿಶೀಲನೆ ಮಾಡಿದಾಗ ಆಕೆ ಸುಳ್ಳು ಹೇಳುತ್ತಿದ್ದಾಳೆ ಎಂದು ತಿಳಿಯಿತು. ನಂತರ ವಿಚಾರಣೆ ಮಾಡಿದಾಗ ಪ್ರಿಯಕರ ಪ್ರಿನ್ಸ್ ದಿಕ್ಷೀತ್ ಸಹಾಯದಿಂದ ಪೋಷಕರನ್ನೂ ನಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಡಿಸಿಪಿ ಸೆಜು ಕುರುವಿಲ್ಲಾ ಹೇಳಿದ್ದಾರೆ.

    ಏನಿದು ಪ್ರಕರಣ?
    ಆರೋಪಿಗೆ ದಾವೀಂದರ್ ಕೌರ್ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಆದರೆ ಒಂದು ವರ್ಷದ ಹಿಂದೆ ಪತಿಯನ್ನು ಬಿಟ್ಟು ಪಾಸ್ಟಿಮ್ ವಿಹಾರದಲ್ಲಿದ್ದ ತನ್ನ ತವರಿಗೆ ಬಂದಿದ್ದಾಳೆ. ಕೆಲವು ದಿನಗಳ ನಂತರ ಆಕೆಗೆ ಪ್ರಿನ್ಸ್ ಪರಿಚಯವಾಗಿದೆ. ಪರಿಚಯ ಸ್ನೇಹವಾಗಿ ಇಬ್ಬರ ನಡುವೆ ಅನೈತಿಕ ಸಂಬಂಧ ಇತ್ತು. ಪ್ರಿನ್ಸ್ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.

    ಆರೋಪಿ ಕೌರ್ ತನ್ನ ತಂದೆ-ತಾಯಿಗೆ 50 ಲಕ್ಷದ ಫ್ಲಾಟ್ ಅನ್ನು ತನ್ನ ಹೆಸರಿಗೆ ಬರೆಯುವಂತೆ ಒತ್ತಾಯಿಸಿದ್ದಾಳೆ. ಆದರೆ ಪೋಷಕರು ಇದಕ್ಕೆ ಒಪ್ಪಲಿಲ್ಲ. ಇದರಿಂದ ಕೋಪಗೊಂಡ ಆರೋಪಿ ಪೋಷಕರನ್ನೇ ಕೊಲೆ ಮಾಡಲು ಪ್ಲಾನ್ ಮಾಡಿದ್ದಾಳೆ. ಅದರಂತೆಯೇ ತಾಯಿಯೂ ಪಂಜಾಬ್‍ಗೆ ಹೋಗಿದ್ದರು. ಇದೇ ಒಳ್ಳೆಯ ಸಮಯ ಎಂದುಕೊಂಡು ತಂದೆಗೆ ನಿದ್ರೆ ಮಾತ್ರೆ ಕೊಟ್ಟಿದ್ದಾಳೆ. ಬಳಿಕ ಉಸಿರುಗಟ್ಟಿಸಿ ಕೊಂದಿದ್ದಾಳೆ. ಮರುದಿನ ತಾಯಿ ಮನೆಗೆ ಬಂದಿದ್ದಾರೆ. ಅವರಿಗೂ ನಿದ್ರೆ ಮಾತ್ರೆ ಕೊಟ್ಟು ಕೊಲೆ ಮಾಡಿದ್ದಾಳೆ. ಬಳಿಕ ಇಬ್ಬರ ಮೃತದೇಹವನ್ನು ಸೂಟ್‍ಕೇಸಿನಲ್ಲಿ ತುಂಬಿ ಚರಂಡಿಗೆ ಎಸೆದಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹಗಳನ್ನು ಸಾಗಿಸಲು ಸಹಾಯ ಮಾಡಿದ್ದ ಇಬ್ಬರು ಆರೋಪಿಗಳಿಗಾಗಿ ಹುಡುಕಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಸ್ತಿಗಾಗಿ ಅಪ್ಪ-ಅಮ್ಮನನ್ನು ಕೊಂದು ಜೈಲು ಸೇರಿದ..!

    ಆಸ್ತಿಗಾಗಿ ಅಪ್ಪ-ಅಮ್ಮನನ್ನು ಕೊಂದು ಜೈಲು ಸೇರಿದ..!

    ಭುನನೇಶ್ವರ: ತನ್ನ ಹೆಸರಿಗೆ ಆಸ್ತಿ ಬರೆದುಕೊಟ್ಟಿಲ್ಲವೆಂದು ಸಿಟ್ಟಿಗೆದ್ದ ಪಾಪಿ ಮಗ ಹೆತ್ತವರನ್ನೇ ಬರ್ಬರವಾಗಿ ಕೊಲೆ ಮಾಡಿದ ಘಟನೆ ಒಡಿಶಾದಲ್ಲಿ ನಡೆದಿದೆ.

    ಈ ಘಟನೆ ಕೊರಾಪುಟ್ ಜಿಲ್ಲೆಯ ಜಯನಗರ ಪ್ರದೇಶದಲ್ಲಿ ಮಾರ್ಚ್ 9ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧಿಸಿದಂತೆ ಆರೋಪಿ ಮಗನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

    ಲತಿಫ್ ರೆಹಮಾನ್ ಕೃತ್ಯ ಎಸಗಿ ಬಂಧಿತನಾಗಿರುವ ಪಾಪಿ ಮಗ. ಮಗನಿಂದಲೇ ಹತನಾದ ದುರ್ದೈವಿ ತಂದೆಯನ್ನು ಎಂ.ಕೆ ರೆಹಮಾನ್ ಹಾಗೂ ತಾಯಿಯನ್ನು ಫಕಿಝಾ ಬಿಬಿ ಎಂದು ಗುರುತಿಸಲಾಗಿದೆ.

    ಹೆತ್ತವರು ತಮ್ಮ ಆಸ್ತಿಯನ್ನು ಮಗನಿಗೆ ಬರೆದು ಕೊಡಲು ನಿರಾಕರಿಸುತ್ತಿದ್ದರು. ಹಲವು ಬಾರಿ ಮಗ ತನ್ನ ಹೆಸರಿಗೆ ಬರೆದುಕೊಡುವಂತೆ ಅಪ್ಪನಲ್ಲಿ ಹೇಳಿದ್ದನು. ಆದ್ರೆ ಪ್ರತಿ ಬಾರಿಯೂ ತಂದೆ ಮಗನ ಮಾತನ್ನು ಕ್ಯಾರೇ ಎನ್ನುತ್ತಿರಲಿಲ್ಲ. ಇದರಿಂದ ಸಿಟ್ಟುಗೊಂಡ ಪಾಪಿ ಮಗ ಅಪ್ಪ-ಅಮ್ಮನಿಗೆ ಚೆನ್ನಾಗಿ ಥಳಿಸಿ ಬಳಿಕ ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದಿದ್ದಾನೆ. ಪರಿಣಾಮ ಇಬ್ಬರೂ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ಅಲ್ಲದೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಎಸ್ ಡಿಪಿಒ ಸಾಗರಿಕಾನಾಥ್ ಘಟನೆಯ ಬಗ್ಗೆ ವಿವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಹುಟ್ಟೂರಲ್ಲಿ ಹೊಸ ಮನೆ, ತೋಟ ಖರೀದಿಸಿದ ಯಶ್!

    ಹುಟ್ಟೂರಲ್ಲಿ ಹೊಸ ಮನೆ, ತೋಟ ಖರೀದಿಸಿದ ಯಶ್!

    ಹಾಸನ: ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಹುಟ್ಟೂರಾದ ಜಿಲ್ಲೆಯ ಅರಸೀಕೆರೆ ತಾಲೂಕಿನ ಅಟ್ಟಾವರ ಗ್ರಾಮದಲ್ಲಿ ನೂತನವಾಗಿ ತೋಟ ಮನೆ ಖರೀದಿಸಿದ್ದಾರೆ. ಈ ಮೂಲಕ ಈ ಸ್ಥಳದಲ್ಲಿ ಕೃಷಿ ಮಾಡಿ ರೈತರಿಗೆ ಅರೀವು ಮೂಡಿಸುವ ಹೊಸ ಸಾಹಸಕ್ಕೆ ರಾಕಿ ಬಾಯ್ ಕೈ ಹಾಕಿದ್ದಾರೆ.

    ಜಿಲ್ಲೆಯ ವಿದ್ಯಾನಗರದಲ್ಲಿ ಯಶ್ ಮನೆ ಖರೀದಿಸಿದ್ದಾರೆ. ಹುಟ್ಟೂರಿನ ಮೇಲಿರುವ ಅಭಿಮಾನದಿಂದ ಜಿಲ್ಲೆಯಲ್ಲಿ ಯಶ್ ಆಸ್ತಿ ಖರೀದಿಸಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ತೋಟ ಮತ್ತು ಮನೆ ಖರೀದಿಸಿರುವ ಯಶ್ ತಮ್ಮ ತಾಯಿ ಅವರ ಹುಟ್ಟೂರು ಹಾಸನದ ದೊಡ್ಡಕೊಂಡಗೊಳ ಗ್ರಾಮದಲ್ಲಿ ಕೃಷಿ ಮಾಡಿ ರೈತರಿಗೆ ಅರಿವು ಮೂಡಿಸುವ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಮಗನ ಈ ಒಳ್ಳೆಯ ಕಾರ್ಯಕ್ಕೆ ಅವರ ತಂದೆ ತಾಯಿ ಕೂಡ ಸಾಥ್ ಕೊಟ್ಟಿದ್ದಾರೆ. ಈಗಾಗಲೇ ಕೃಷಿ ಕಾರ್ಯದಲ್ಲಿ ಯಶ್ ಪೋಷಕರು ತೊಡಗಿದ್ದಾರೆ. ಜನಪ್ರಿಯತೆ ಉತ್ತುಂಗದಲ್ಲಿ ಇದ್ದರೂ ಹುಟ್ಟೂರಿನ ಮಣ್ಣಿನ ಪ್ರೀತಿಗೆ ರಾಕಿ ಬಾಯ್ ಮನಸೋತಿದ್ದಾರೆ.

    ವಿದ್ಯಾನಗರದ 68*70 ವಿಸ್ತೀರ್ಣದ ವಿಶಾಲ ಮನೆಯನ್ನು ಯಶ್ ಖರೀದಿಸಿದ್ದು, ಶನಿವಾರ ಹಾಗೂ ಭಾನುವಾರ ಇಲ್ಲೇ ತಾಯಿಯೊಂದಿಗೆ ಕಾಲ ಕಳೆದಿದ್ದಾರೆ. ಮನೆಗೆ ಯಾವ ಬಣ್ಣ ಮಾಡಿಸಬೇಕು ಹಾಗೂ ಏನೆಲ್ಲ ಮಾಡಬೇಕು ಎಂದು ಚರ್ಚೆ ಮಾಡಿ, ತೋಟದಲ್ಲಿ ಒಂದು ಸುತ್ತು ಹಾಕಿ ಬಳಿಕ ಪತ್ನಿಯ ತವರೂರು ಕಡೆಗೆ ರಾಕಿ ಬಾಯ್ ಹೋಗಿದ್ದಾರೆ.

    ತಮ್ಮ ಕೆಲಸದ ಒತ್ತಡದಿಂದ ಹೊರಬಂದು ಬಿಡುವಿನ ವೇಳೆಯನ್ನು ಯಶ್ ತನ್ನೂರಲ್ಲೇ ಸಮಯ ಕಳೆಯಲು ಬಯಸಿದ್ದು, ಹುಟ್ಟೂರಿನ ಮೇಲೆ ಇರುವ ಅಭಿಮಾನವೇ ಯಶ್ ಅವರಿಗೆ ವಿದ್ಯಾನಗರದಲ್ಲೊಂದು ಸ್ವಂತಮನೆ ಖರೀದಿಸುವಂತೆ ಮಾಡಿದೆ. ಅಷ್ಟೇ ಅಲ್ಲ ಕೃಷಿ ಕುಟುಂಬದಿಂದ ಬಂದ ಯಶ್ ಅಟ್ಟಾವರ ಬಳಿ 80 ಎಕರೆ ವಿಶಾಲವಾದ ಮಾವು, ಸಪೋಟ, ಗೋಡಂಬಿ ತೋಟವನ್ನು ಖರೀದಿಸಿದ್ದಾರೆ.

    ನಮ್ಮ ಕುಟುಂಬಕ್ಕೆ ಹಾಗೂ ನಮ್ಮ ಮಗ ಯಶ್‍ಗೆ ಹಾಸನ ಎಂದರೆ ವಿಶೇಷ ಅಭಿಮಾನವಿದೆ. ಕೆಲ ತಿಂಗಳ ಹಿಂದೆಯೇ ಮನೆ, ತೋಟ ಖರೀದಿಸಲು ಮುಂದಾಗಿದ್ದೇವು. ಈಗ ಖರೀದಿ ಪ್ರಕ್ರಿಯೆ ಮುಗಿಸಿದ್ದೇವೆ ಅಷ್ಟೇ ಯಶ್ ತಾಯಿ ಪುಷ್ಪಾ ಅವರು ತಿಳಿಸಿದ್ದಾರೆ.

    ಯಶ್ ಹುಟ್ಟಿದ್ದು ಹಾಸನ ಜಿಲ್ಪಾಸ್ಪತ್ರೆಯಲ್ಲಿ. ಬೆಳೆದಿದ್ದು ಮೈಸೂರಿನಲ್ಲಿ. ಇರುವುದು ಬೆಂಗಳೂರಿನಲ್ಲಿ. ಮೈಸೂರಿನಲ್ಲೇ ಮನೆಮಾಡಿ ಎಂಬ ಒತ್ತಾಯ ಕೇಳಿ ಬಂದಿತ್ತು. ಆದರೆ ಹಾಸನದಲ್ಲಿ ಹುಟ್ಟಿದ ಹಿನ್ನೆಲೆಯಲ್ಲಿ ಇಲ್ಲೇ ಜಾಗ ಖರೀದಿಸಬೇಕೆಂದು ಯಶ್ ಕನಸು ಕಂಡಿದ್ದರು. ಆದರಂತೆ ಈಗ ಜಾಗ ಖರೀದಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕಲ್ಲು, ದೊಣ್ಣೆಯಿಂದ ಪರಸ್ಪರ ಹೊಡೆದಾಡಿಕೊಂಡ ಒಂದೇ ಕುಟುಂಬದವರು!

    ಕಲ್ಲು, ದೊಣ್ಣೆಯಿಂದ ಪರಸ್ಪರ ಹೊಡೆದಾಡಿಕೊಂಡ ಒಂದೇ ಕುಟುಂಬದವರು!

    ಬೆಂಗಳೂರು: ಒಂದು ನಿವೇಶನಕ್ಕಾಗಿ ಸೋದರರು ಮಚ್ಚು, ದೊಣ್ಣೆಗಳಿಂದ ಹೊಡೆದಾಡಿಕೊಂಡ ಘಟನೆ ಬೆಂಗಳೂರಿನ ಹೊರವಲಯದ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೆ ನಾರಾಯಣಪುರದಲ್ಲಿ ನಡೆದಿದೆ.

    ಕೆ. ನಾರಾಯಣಪುರದ ನಿವಾಸಿಗಳಾದ ರಾಮಪ್ಪ ಮತ್ತು ವೆಂಕಟಪ್ಪ ಎಂಬ ಸೋದರರ ಹೆಸರಲ್ಲಿ ಒಂದು ನಿವೇಶನವಿತ್ತು. ಇಬ್ಬರ ಪಾಲು ಬೇರೆಯಾಗಿರಲಿಲ್ಲ. ವೆಂಕಟಪ್ಪ ಅಕಾಲಿಕ ಮರಣ ಹೊಂದುತ್ತಲೇ ರಾಮಪ್ಪ ಯಾರಿಗೂ ತಿಳಿಯದಂತೆ ನಿವೇಶನವನ್ನು ಉದಯ್ ಎಂಬವರಿಗೆ ಮಾರಿದ್ದಾನೆ. ಸೈಟ್ ಖರೀದಿಸಿದ ಉದಯ್ ನಿವೇಶನದಲ್ಲಿ ಮನೆ ಕಟ್ಟಲು ಮುಂದಾಗುತ್ತಿದ್ದಂತೆ ವಿಷಯ ವೆಂಕಟಪ್ಪನ ಮಕ್ಕಳಿಗೆ ಗೊತ್ತಾಗಿದೆ.

    ಉದಯ್ ಮನೆ ಕಟ್ಟುತ್ತಿದ್ದ ಸ್ಥಳಕ್ಕೆ ಬಂದ ವೆಂಕಟಪ್ಪನ ಮಕ್ಕಳು ಜಗಳ ಆರಂಭಿಸಿದ್ದಾರೆ. ಇತ್ತ ರಾಮಪ್ಪ ಸಹ ತನ್ನ ಮಕ್ಕಳೊಂದಿಗೆ ಸ್ಥಳಕ್ಕೆ ಆಗಮಿಸಿದ್ದಾನೆ. ಆರಂಭದಲ್ಲಿ ಮಾತಿನಲ್ಲಿ ಆರಂಭವಾದ ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಎರಡು ಕುಟುಂಬದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನರು, ಕೈಗೆ ಸಿಕ್ಕ ಕಲ್ಲು, ದೊಣ್ಣೆಗಳಿಂದ ಅದೇ ಸೈಟ್ ಜಾಗದಲ್ಲಿ ಪರಸ್ಪರ ಹೊಡೆದಾಡಿದ್ದಾರೆ. ಈ ಗಲಾಟೆಯಲ್ಲಿ ಐವರಿಗೆ ಗಾಯವಾಗಿದ್ದು ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸದ್ಯ ಎರಡು ಕಡೆಯವರು ಮಹದೇವಪುರ ಪೋಲಿಸ್ ಠಾಣಾ ಮೆಟ್ಟಿಲು ಏರಿದ್ದು ಪರಸ್ಪರ ಒಬ್ಬರ ವಿರುದ್ಧ ಮತ್ತೊಬ್ಬರು ದೂರು ದಾಖಲಿಸಿದ್ದಾರೆ.

    https://www.youtube.com/watch?v=F3Xh0bhDanI

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮನೆಯ ನೀರಿನ ಸಂಪ್‍ಗೆ ಕ್ರಿಮಿನಾಶಕ, ಆಸಿಡ್ ಹಾಕಿದ ದುಷ್ಕರ್ಮಿಗಳು

    ಮನೆಯ ನೀರಿನ ಸಂಪ್‍ಗೆ ಕ್ರಿಮಿನಾಶಕ, ಆಸಿಡ್ ಹಾಕಿದ ದುಷ್ಕರ್ಮಿಗಳು

    ರಾಮನಗರ: ಆಸ್ತಿ ವಿಚಾರವಾಗಿ ದಾಯಾದಿಗಳ ನಡುವಿನ ಕಲಹದ ಹಿನ್ನೆಲೆಯಲ್ಲಿ ಮನೆಯ ಮುಂದಿನ ನೀರಿನ ಸಂಪ್ ಗೆ ಕ್ರಿಮಿನಾಶಕ, ಆಸಿಡ್ ಮಿಶ್ರಣ ಮಾಡಿರುವ ಘಟನೆ ರಾಮನಗರ ತಾಲೂಕಿನ ಅಂಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ತಡರಾತ್ರಿ ಗ್ರಾಮದ ರಮೇಶ್, ನಾಗರಾಜ್ ಎಂಬವರ ಮನೆಯ ಮುಂದಿನ ನೀರಿನ ಸಂಪ್ ಗೆ ಕಿಡಿಗೇಡಿಗಳು ಮಾವಿನ ಮರಕ್ಕೆ ಸಿಂಪಡಿಸುವ ಕ್ರಿಮಿನಾಶಕ ಹಾಗೂ ಆಸಿಡ್ ಮಿಶ್ರಣ ಮಾಡಿದ್ದಾರೆ. ತಡರಾತ್ರಿ ಮನೆಯ ನೀರಿನ ಸಂಪ್ ಗೆ ಕ್ರಿಮಿನಾಶಕ ಬೆರೆಸಿದ್ದಾರೆ.

    ತಿರುಗಾಡುವ ದಾರಿಯ ವಿಷಯಕ್ಕೆ ಜಗಳವಾಗುತ್ತಿತ್ತು. ಆಗ ಊರಿನ ಪ್ರಮುಖರು ರಾಜಿ ಸಂಧಾನ ಮಾಡಿಸಿದ್ದರು. ಆಗ ಇಬ್ಬರು ಕಾಂಪೌಂಡ್ ನಿರ್ಮಿಸಲು ನಿರ್ಧರಿಸಿದ್ದೇವು. ಶುಕ್ರವಾರ ರಾತ್ರಿ ನನ್ನ ಅಣ್ಣ ನೀರಿನ ಸಂಪ್‍ಗೆ ಕ್ರಿಮಿನಾಶಕ ಹಾಗೂ ಆಸಿಡ್ ಬೆರೆಸಿದ್ದಾನೆ. ಬೆಳಗ್ಗೆ ಎದ್ದು ನೋಡಿದ್ದಾಗ ನೀರು ಬೇರೆ ಬಣ್ಣಕ್ಕೆ ತಿರುಗಿತ್ತು ಎಂದು ರಮೇಶ್ ಆರೋಪಿಸಿದ್ದಾರೆ.

    ಬೆಳ್ಳಗೆ ನೀರು ತೆಗೆದುಕೊಳ್ಳಲು ಹೋದ ವೇಳೆ ನೀರು ಬೇರೆ ಬಣ್ಣಕ್ಕೆ ತಿರುಗಿ ವಾಸನೆ ಬರುತಿತ್ತು. ಅಲ್ಲದೇ ನೀರಿನಲ್ಲಿ ಕ್ರಿಮಿನಾಶಕ ಮಿಶ್ರಣದಿಂದ ನೊರೆ ಬಂದಿತ್ತು. ಇದರಿಂದ ಆತಂಕಗೊಂಡ ಮನೆಯವರು ನೀರು ಬಳಸದೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಸಂಬಂಧಿಕರೇ ಆಸ್ತಿ ವ್ಯಾಜ್ಯ ಹಿನ್ನೆಲೆಯಲ್ಲಿ ನೀರಿಗೆ ವಿಷ ಬೆರೆಸಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರೆ.

    ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯಶೋಮಾರ್ಗದ ಮೂಲಕ ಜನರ ಸೇವೆ ಮಾಡ್ತಿರೋ ಯಶ್ ಬಳಿ ಆಸ್ತಿ ಎಷ್ಟಿದೆ? – ಇಲ್ಲಿದೆ ವಿವರ

    ಯಶೋಮಾರ್ಗದ ಮೂಲಕ ಜನರ ಸೇವೆ ಮಾಡ್ತಿರೋ ಯಶ್ ಬಳಿ ಆಸ್ತಿ ಎಷ್ಟಿದೆ? – ಇಲ್ಲಿದೆ ವಿವರ

    ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯ ಬಳಿಕ ಇಂದು ಯಶ್ ಹಾಗೂ ಅವರ ತಾಯಿ ಐಟಿ ಅಧಿಕಾರಿಗಳ ಮುಂದೆ ಹಾಜರಾಗಿದ್ದು, ಈ ವೇಳೆ ಐಟಿ ಅಧಿಕಾರಿಗಳಿಗೆ ತಮ್ಮ ಬಳಿ ಇರುವ ಆಸ್ತಿ ಬಗ್ಗೆ ದಾಖಲೆ ಸಮೇತ ಮಾಹಿತಿ ನೀಡಿದ್ದಾರೆ. ಯಶ್ ಐಟಿ ಅಧಿಕಾರಿಗಳಿಗೆ ನೀಡಿರುವ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭಿಸಿದೆ.

    ಸಾಮಾನ್ಯ ವ್ಯಕ್ತಿಯಿಂದ ಸ್ಟಾರ್ ನಟರಾಗಿ ಬೆಳೆದ ಯಶ್, ತಮ್ಮ ಪ್ರತಿ ಸಿನಿಮಾದ ಸಂಭಾವನೆ ಸೇರಿದಂತೆ, ಆದಾಯ ಮೂಲಗಳಿಂದ ಗಳಿಸಿದ ಆಸ್ತಿಯ ಸಂರ್ಪೂಣ ಮಾಹಿತಿಯನ್ನು ಐಟಿ ಅಧಿಕಾರಿಗಳಿಗೆ ನೀಡಿದ್ದಾರೆ. ಇಂದು ಐಟಿ ಅಧಿಕಾರಿಗಳ ಮುಂದೆ ನಡೆದ ಸತತ 3 ಗಂಟೆಗಳ ವಿಚಾರಣೆಯಲ್ಲಿ ಮಾಹಿತಿ ನೀಡಿದ್ದು, ಯಾವುದೇ ಸಮಯದಲ್ಲಿ ಕರೆದರೂ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.

    ಆಸ್ತಿ ಎಷ್ಟಿದೆ?
    ನಟ ಯಶ್ ಬೆಂಗಳೂರಿನ ಗಾಲ್ಫ್ ಕ್ಲಬ್ ಬಳಿ 20 ಕೋಟಿ ರೂ. ಮೌಲ್ಯದ ಪ್ರೆಸ್ಟೀಜ್ ಪೆಂಟೌಸ್ ಹೊಂದಿದ್ದಾರೆ. ಇದನ್ನು ಯಶ್ ಖರೀದಿ ಮಾಡಲು ಪ್ರಮುಖ ಕಾರಣ ನಟ ಅಂಬರೀಶ್ ಅವರ ಮೇಲಿನ ಪ್ರೀತಿ. ಅಂಬರೀಶ್ ಅವರು ಇದೇ ಗಾಲ್ಫ್ ಕ್ಲಬ್‍ನ ಆಪಾರ್ಟ್‍ಮೆಂಟ್‍ನಲ್ಲಿ ವಾಸವಿದ್ದರು. ಅಂಬರೀಶ್ ಅವರೊಂದಿಗೆ ಇರಬೇಕು ಎನ್ನುವ ಕಾರಣದಿಂದ ಯಶ್ ಈ ಪೆಂಟೌಸನ್ನು ಖರೀದಿ ಮಾಡಿದ್ದಾರೆ. ಅಲ್ಲದೇ ಹುಟ್ಟೂರಿನ ಮೇಲೆ ಆಪಾರ ಪ್ರೀತಿಯನ್ನು ಹೊಂದಿರುವ ಯಶ್ ಮೈಸೂರಲ್ಲೂ ಒಂದು ಪೆಂಟೌಸ್ ಖರೀದಿ ಮಾಡಿದ್ದಾರೆ. ಮೈಸೂರಿನ ಬೋಗಾದಿ ಬಳಿ ವಿಲಾಸಿ ಫ್ಲಾಟ್ ಹಾಗೂ ರಿಂಗ್ ರಸ್ತೆಯಲ್ಲಿ 1 ಎಕರೆ ಜಮೀನು ಯಶ್ ಹೆಸರಿನಲ್ಲಿದೆ.

    ಸೂಪರ್ ಸ್ಟಾರ್ ರಜನಿಕಾಂತ್ ಅವರ ಪ್ರೇರಣೆ ಹಾಗೂ ಅಮ್ಮನ ಆಸೆಯಂತೆ ಯಶ್ ಮೈಸೂರಿನಲ್ಲಿ 78 ಎಕ್ರೆ ಜಮೀನು ಖರೀದಿ ಮಾಡಲು ಮುಂದಾಗಿದ್ದು, ಸದ್ಯಕ್ಕೆ ಈ ಜಮೀನು ಖರೀದಿ ಮಾಡಲು ಟೋಕನ್ ಅಡ್ವಾನ್ಸ್ ಮಾತ್ರ ನೀಡಿದ್ದಾರೆ. ಈ ಆಸ್ತಿ ಇನ್ನು ಕೂಡ ನೋಂದಣಿ ಆಗಬೇಕಿದೆ. ಈ ಆಸ್ತಿ ಖರೀದಿ ಮಾಡಲು ಒಂದು ವಿಶೇಷವಾದ ಪ್ರೇರಣೆಯಿದೆ. ಒಬ್ಬ ಮಾದರಿ ರೈತನಾಗಬೇಕು ಎನ್ನುವ ಕನಸನ್ನು ಯಶ್ ಕಾಣುತ್ತಿದ್ದು, ಈ ಕನಸು ನನಸು ಮಾಡಲು ಈ ಜಾಗವನ್ನು ಖರೀದಿ ಮಾಡಲು ಮುಂದಾಗಿದ್ದಾರೆ. ಕಷ್ಟ ಕಾಲದಲ್ಲಿ ಸಹಾಯವಾಗಲು ಊರಿನ ಹೊರಭಾಗದಲ್ಲಿ ವ್ಯವಸಾಯದ ಭೂಮಿ ಪಡೆಯುವಂತೆ ರಜಿನಿಕಾಂತ್ ಯಶ್ ಅವರಿಗೆ ಸಲಹೆ ನೀಡಿದ್ದರಂತೆ. ಈ ಕಾರಣಕ್ಕಾಗಿ ತನ್ನೂರಿನ ನೆಲದಲ್ಲಿ ವ್ಯವಸಾಯ ಮಾಡಲು ಯಶ್ ಜಾಗ ಖರೀದಿಗೆ ಮುಂಗಡ ಹಣವನ್ನು ಪಾವತಿಸಿದ್ದಾರೆ.

    ಮೈಸೂರಿನ ಬಳಿಕ ಹಾಸನದ ಮೇಲೆ ಅತಿ ಹೆಚ್ಚು ಪ್ರೀತಿಯನ್ನು ಹೊಂದಿರುವ ಯಶ್ ಅಲ್ಲಿಯೂ ಒಂದು ಮನೆಯನ್ನು ಹೊಂದಿದ್ದಾರೆ. ಅಲ್ಲದೇ ಕೋಲಾರ ಬಳಿ 10 ನಿವೇಶನಗಳನ್ನು ಹೊಂದಿದ್ದು. ಇದರಲ್ಲಿ ಕೆಲವು ಯಶ್ ಅವರ ತಾಯಿಯ ಹೆಸರಿನಲ್ಲಿದೆ. ಈ ಕಾರಣದಿಂದಲೇ ಐಟಿ ಅಧಿಕಾರಿಗಳು ಯಶ್ ತಾಯಿಯನ್ನು ವಿಚಾರಣೆಗೆ ಕರೆದಿದ್ದರು. ಇನ್ನು ಬೆಂಗಳೂರು ಸುತ್ತಮುತ್ತ ಅಂದರೆ ಬನ್ನೇರುಘಟ್ಟ ಸಮೀಪ 3 ಸೈಟ್, ಜೆ.ಪಿ.ನಗರದಲ್ಲಿ 1 ಸೈಟ್, ಹೊಸಕೆರೆ ಹಳ್ಳಿಯಲ್ಲಿ 1 ಮನೆ ಹಾಗೂ ಕತ್ರಿಗುಪ್ಪೆಯಲ್ಲಿ ತಂಗಿಗಾಗಿ ಒಂದು ಮನೆಯನ್ನು ಯಶ್ ಖರೀದಿ ಮಾಡಿದ್ದಾರೆ.

    ಎಷ್ಟು ದಾನ ಮಾಡಿದ್ದಾರೆ?
    ಪತ್ನಿ ರಾಧಿಕಾ ಹೆಸರಿಲ್ಲೂ ಕೆಲ ನಿವೇಶನಗಳನ್ನು ಹೊಂದಿದ್ದು, ಬೆಂಗಳೂರು-ಮೈಸೂರು ರಸ್ತೆಯಲ್ಲಿ ಒಂದು ನಿವೇಶನ ಹಾಗೂ ಬಿಡದಿ ಬಳಿ ಒಂದು ನಿವೇಶನ ಇದೆ. ಐಟಿ ಅಧಿಕಾರಿಗಳು ಇಷ್ಟೆಲ್ಲಾ ಆಸ್ತಿಯನ್ನು ಹೊಂದಿರುವ ಯಶ್ ಧಾನಧರ್ಮ ಮಾಡುವುದರಲ್ಲೂ ಎತ್ತಿದ ಕೈ ಆಗಿದ್ದು `ಯಶೋಮಾರ್ಗ’ ಹೆಸರಿನ ಸ್ವಯಂ ಸೇವಾ ಸಂಸ್ಥೆಯ ಮೂಲಕ ಸಾಮಾಜಿಕ ಸೇವೆಯನ್ನು ಮಾಡುತ್ತಿದ್ದಾರೆ. ಇದರಲ್ಲಿ ಕೆರೆ ಹೂಳು ತೆಗೆದಿದ್ದು ಸೇರಿದಂತೆ, ಎಷ್ಟೇ ಮಂದಿಗೆ ದಾನಧರ್ಮ ಮಾಡಿರುವ ಮಾಹಿತಿಯನ್ನು ನೀಡಿದ್ದಾರೆ. ಇದು ಕೂಡ ಐಟಿ ಅಧಿಕಾರಿಗಳಿಗೆ ಪ್ರಮುಖ ಮಾಹಿತಿಯಾಗಿದ್ದು, ಇದುವರೆಗೆ 5 ಕೋಟಿ ರೂ. ಧಾನಧರ್ಮ ಮಾಡಿದ್ದಾರೆ.

    ಕಾರು ಎಷ್ಟಿದೆ?
    ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಯಶ್ ಬಳಿ 3 ಬೆಂಜ್, 1 ಆಡಿ, 1 ಪಜೇರೋ, 1 ಫಾರ್ಚೂನರ್ ಐಷಾರಾಮಿ ಕಾರುಗಳಿವೆ. ಇವುಗಳ ಖರೀದಿ ಮಾಡಿರುವ ಮಾಹಿತಿ ಸೇರಿದಂತೆ ತೆರಿಗೆ ಪಾವತಿಸಿರುವ ದಾಖಲೆಗಳನ್ನು ಯಶ್ ಐಟಿ ಅಧಿಕಾರಿಗಳ ಮುಂದಿಟ್ಟಿದ್ದಾರೆ. ಐಟಿ ವಿಚಾರಣೆ ವೇಳೆ ತಾವು ದುಡಿದ ಪೈಸಾ, ಪೈಸಾ ರೂಪಾಯಿಗೂ ಮಾಹಿತಿ ಕೊಟ್ಟಿರುವ ಯಶ್ ಅವರು 15 ಬ್ಯಾಂಕುಗಳಲ್ಲಿ 16 ಕೋಟಿ ರೂ. ಸಾಲ ಮಾಡಿದ್ದಾರೆ. ಅಲ್ಲದೇ ಯಾವುದೇ ಸಮಯದಲ್ಲಿ ಕರೆದರೂ ನಾನು ವಿಚಾರಣೆಗೆ ಹಾಜರಾಗುವುದಾಗಿ ಐಟಿ ಅಧಿಕಾರಿಗಳಿಗೆ ಹೇಳಿದ್ದಾರೆ.  ಇದನ್ನು ಓದಿ: 40 ಕೋಟಿ ರೂ. ಸಾಲ : ಪ್ರಶ್ನೆಗೆ ಯಶ್ ಖಡಕ್ ಪ್ರತಿಕ್ರಿಯೆ 

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಟ ಪುನೀತ್, ಯಶ್ ಮನೆಯಲ್ಲಿ ಎಷ್ಟು ಆಸ್ತಿ ಪತ್ತೆಯಾಗಿದೆ?

    ನಟ ಪುನೀತ್, ಯಶ್ ಮನೆಯಲ್ಲಿ ಎಷ್ಟು ಆಸ್ತಿ ಪತ್ತೆಯಾಗಿದೆ?

    ಬೆಂಗಳೂರು: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನಿರಂತರವಾಗಿ ಸ್ಟಾರ್ ಗಳ ಮನೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು ಪುನೀತ್ ರಾಜ್ ಕುಮಾರ್ ಮನೆಯ ತಪಾಸಣೆ ಮುಗಿದಿದೆ.

    ಪ್ರತಿ ದಾಖಲೆ ಪತ್ರಗಳ ಪರಿಶೀಲನೆ ನಡೆಸುತ್ತಿದ್ದು, ಸಂಪಾದಿಸಿದ್ದ, ಸಂಪಾದನೆ ಮಾಡುತ್ತಿರುವ ಲೆಕ್ಕವನ್ನೆಲ್ಲಾ ಕ್ರೋಢೀಕರಿಸುತ್ತಿದ್ದಾರೆ. ಸ್ಟಾರ್ ನಟರು ಕೇವಲ ಆಕ್ಟಿಂಗ್‍ನಲ್ಲಿ ಮಾತ್ರ ತೊಡಗಿಸಿಕೊಂಡಿಲ್ಲ. ಆಕ್ಟರ್ ಕಮ್ ಬಿಸಿನೆಸ್‍ಮೆನ್‍ಗಳಾಗಿದ್ದೇ ಇವತ್ತಿನ ಐಟಿ ರೇಡ್‍ಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ತೆರಿಗೆ ಇಲಾಖೆಗೆ ನಾವು ನಾಗರಿಕರಾಗಿ ಸಹಕಾರ ನೀಡಿದ್ದೇವೆ – ಪುನೀತ್ ಮೊದಲ ಪ್ರತಿಕ್ರಿಯೆ

    ನಟ ಪುನೀತ್ ಮತ್ತು ಯಶ್ ಮನೆಯಲ್ಲಿ ದೊರೆತ ಆಸ್ತಿಯ ಲೆಕ್ಕಗಳನ್ನು ನೋಡುವುದಾದರೆ, ಬೆಂಗಳೂರಿನಲ್ಲಿ ಪುನೀತ್ ಹೆಸರಲ್ಲಿ 10 ಆಸ್ತಿ ಪತ್ತೆಯಾಗಿದೆ. ಗಾಂಧಿನಗರದ 6ನೇ ಕ್ರಾಸ್, ಹೆಣ್ಣೂರು, ಥಣಿಸಂದ್ರ, ಕೆಂಪಾಪುರ, ಚಿರಂಜೀವಿ ಲೇಔಟ್, ರಾಜಾಜಿನಗರದ 1ನೇ ಬ್ಲಾಕ್‍ನಲ್ಲಿ ಆಸ್ತಿ ಹೊಂದಿದ್ದು, ಕೆಂಪಾಪುರ, ಚಿರಂಜೀವಿ ಲೇಔಟ್‍ನಲ್ಲಿ 3, ಕೋರಮಂಗಲದಲ್ಲಿ ಕಮರ್ಷಿಯಲ್ ಪ್ರಾಪರ್ಟಿ ಮಾಡಿದ್ದಾರೆ. ಇನ್ನೂ ಪಿಆರ್ ಕೆ ಪ್ರೊಡಕ್ಷನ್, ಪಿಆರ್ ಕೆ ಆಡಿಯೋ ವ್ಯವಹಾರ ಬಗ್ಗೆ ಮಾಹಿತಿ ಸಂಗ್ರಹವಾಗಿದೆ. ಇಡೀ ವ್ಯವಹಾರದ ಬಗ್ಗೆ ಮಾಹಿತಿ ನೀಡಲು ನಟ ಪುನೀತ್ ಐಟಿ ಅಧಿಕಾರಿಗಳ ಬಳಿ ಕಾಲಾವಕಾಶ ಕೋರಿದ್ದಾರೆ. ಇದನ್ನೂ ಓದಿ: 20ಕೆಜಿ ಬೆಳ್ಳಿ, 450ಗ್ರಾಂ ಚಿನ್ನ, 1 ವಜ್ರದ ಸರ, 2 ಪ್ಲಾಟಿನಂ ಸರ- ಯಶ್ ಮನೆಯಲ್ಲಿ ಪತ್ತೆ..?

    ಇತ್ತ ಯಶ್ ಮನೆಯಲ್ಲಿ 20 ಕೆಜಿಗೂ ಅಧಿಕ ಬೆಳ್ಳಿ, ಸುಮಾರು 450 ಗ್ರಾಂ ಚಿನ್ನ, 1 ವಜ್ರದ ಸರ, 2 ಪ್ಲಾಟಿನಮ್ ಸರ ಪತ್ತೆಯಾಗಿವೆ. ಅಷ್ಟೇ ಅಲ್ಲದೇ 2 ಬ್ಯಾಂಕ್‍ಗಳಲ್ಲಿ 40 ಕೋಟಿ ಸಾಲ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಲಭಿಸಿದೆ. 8 ಬ್ಯಾಂಕ್ ಖಾತೆ ಹೊಂದಿರುವ ಯಶ್, ತಾಯಿ ಜೊತೆ 4 ಜಂಟಿ ಖಾತೆಯನ್ನು ಹೊಂದಿದ್ದಾರೆ. ಮಂಡ್ಯದಲ್ಲಿ 8 ಎಕರೆ ಜಮೀನು ಖರೀದಿ ಮಾಡಿದ್ದಾರೆ. ಅಧಿಕಾರಿಗಳ ಪ್ರತಿ ಪ್ರಶ್ನೆಗೂ ಸಹನೆಯಿಂದ ಯಶ್ ತಾಯಿ ಉತ್ತರಿಸಿದ್ದಾರೆ ಐಟಿ ಮೂಲಗಳಿಂದ ತಿಳಿದು ಬಂದಿದೆ.

    ಸದ್ಯಕ್ಕೆ ಇಬ್ಬರ ನಟರ ಆಸ್ತಿ ಮಾಹಿತಿ ಲಭ್ಯವಾಗಿದ್ದು, ಇನ್ನಿಬ್ಬರ ಮಾಹಿತಿಯನ್ನು ಐಟಿ ಅಧಿಕಾರಿಗಳು ಕಲೆಹಾಕಲಾಗುತ್ತಿದೆ. ನಟ ಪುನೀತ್ ರಾಜ್‍ಕುಮಾರ್ ಮನೆಯ ಮೇಲಿನ ಐಟಿ ರೇಡ್ ಮುಗಿದಿದ್ದು, ನಟ ಯಶ್, ಸುದೀಪ್ ಮತ್ತು ಶಿವರಾಜ್‍ಕುಮಾರ್ ಮನೆಯಲ್ಲಿ ಮೂರನೇ ದಿನವೂ ಐಟಿ ದಾಳಿ ಮುಂದುವರಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv