Tag: ಆಸ್ತಿ

  • ಜೈಲಿನಿಂದ್ಲೇ ಸುಳ್ವಾಡಿ ಹಂತಕನ ದರ್ಬಾರ್ – ಮಠದ ಆಸ್ತಿಯನ್ನು ತನ್ನ ಹೆಸ್ರಿಗೆ ಮಾಡ್ಕೊಂಡ ಇಮ್ಮಡಿ

    ಜೈಲಿನಿಂದ್ಲೇ ಸುಳ್ವಾಡಿ ಹಂತಕನ ದರ್ಬಾರ್ – ಮಠದ ಆಸ್ತಿಯನ್ನು ತನ್ನ ಹೆಸ್ರಿಗೆ ಮಾಡ್ಕೊಂಡ ಇಮ್ಮಡಿ

    ಚಾಮರಾಜನಗರ: ಸುಳ್ವಾಡಿ ದುರಂತದ ಕ್ರಿಮಿ ಇಮ್ಮಡಿ ಮಹದೇವ ಸ್ವಾಮೀಜಿ ಜೈಲಿನಲ್ಲಿ ಇದ್ದುಕೊಂಡು ದರ್ಬಾರ್ ನಡೆಸುತ್ತಿದ್ದಾನೆ. ಈತನ ಪ್ಲಾನ್‍ಗೆ ಜೈಲಾಧಿಕಾರಿಗಳು ಫುಲ್ ಸಪೋರ್ಟ್ ಮಾಡಿದ್ದಾರೆ.

    ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ ಸುಳ್ವಾಡಿ ವಿಷಪ್ರಸಾದ ದುರಂತ ನಡೆದು 5 ತಿಂಗಳಾಯಿತು. ಚಾಮರಾಜನಗರ ಜಿಲ್ಲೆಯಲ್ಲಿರುವ ಸುಳ್ವಾಡಿ ಮಾರಮ್ಮ ದೇವಸ್ಥಾನದ ಆಡಳಿತದ ಚುಕ್ಕಾಣಿ ಹಿಡಿಯಲು ಟ್ರಸ್ಟ್ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮೀಜಿ, ಇತರ ಮೂವರು ಸೇರಿ ಮಾಡಿದ ಪಿತೂರಿಗೆ 17 ಮಂದಿ ಬಲಿಯಾಗಿ 112 ಮಂದಿ ಅಸ್ವಸ್ಥರಾಗಿದ್ದರು. ವಿಷವಿಕ್ಕಿದ ಪಾಪಿಗಳು ಜೈಲಲ್ಲಿದ್ದಾರೆ. ಆದರೆ ಇಮ್ಮಡಿ ಮಹದೇವಸ್ವಾಮಿ ಮಾತ್ರ ಜೈಲಿನಲ್ಲಿ ಇದ್ದುಕೊಂಡೇ ಸಾಲೂರು ಮಠದ ಆಸ್ತಿಯನ್ನು ತನ್ನ ವೈಯಕ್ತಿಕ ಖಾತೆ ಮಾಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

     

    1997ರಲ್ಲಿ ಇಮ್ಮಡಿ ಮಹದೇವಸ್ವಾಮಿ, ಕಾರ್ಯದರ್ಶಿ, ಮಲೆಮಹದೇಶ್ವರ ಕೃಪ ವಿದ್ಯಾಸಂಸ್ಥೆ ಹೆಸರಲ್ಲಿ ಲಿಂಗಣಾಪುರ ಎಂಬಲ್ಲಿ 2 ಎಕರೆ 44 ಸೆಂಟ್ಸ್ ಜಮೀನನ್ನು ಖರೀದಿಸಿದ್ದನು. ಆದರೆ ಈಗ ಈತ ಜೈಲಿಂದ ಹೇಗಾದ್ರೂ ಹೊರಬರಲು 1 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಈ ಆಸ್ತಿಯನ್ನು ಮಾರಾಟ ಮಾಡಲು ಇದೇ ಮೇ 3ರಂದು ತನ್ನ ಸ್ವಂತ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾನೆ ಎನ್ನಲಾಗಿದೆ.

    2018ರ ಫೆಬ್ರವರಿ 20 ರಂದು ಖಾತೆ ಮಾಡಿಕೊಡಲು ಇಮ್ಮಡಿ ಮಹದೇವಸ್ವಾಮೀಜಿ ಅರ್ಜಿ ಸಲ್ಲಿಸಿದ್ದ. ಅರ್ಜಿ ಕೊಟ್ಟ ಒಂದು ತಿಂಗಳೊಳಗೆ ವಿಲೇವಾರಿ ಮಾಡಬೇಕು. ಆದರೆ 1 ವರ್ಷವಾದ್ರೂ ಅರ್ಜಿಯ ಬಗ್ಗೆ ಕ್ರಮಕೈಗೊಳ್ಳದ ಅಧಿಕಾರಿಗಳು ಇದ್ದಕ್ಕಿದ್ದಂತೆ 2 ವಾರಗಳ ಹಿಂದೆ ಇಮ್ಮಡಿ ಮಹದೇವಸ್ವಾಮಿ ಹೆಸರಿಗೆ ಖಾತೆ ಮಾಡಿಕೊಟ್ಟಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.

  • ಚುನಾವಣೆಗೆ ನಿಂತ ಸ್ವಾಮೀಜಿಯ ಆಸ್ತಿ 3 ಕೋಟಿ

    ಚುನಾವಣೆಗೆ ನಿಂತ ಸ್ವಾಮೀಜಿಯ ಆಸ್ತಿ 3 ಕೋಟಿ

    – ಸ್ವಾಮೀಜಿ ಬಳಿ ಪಾನ್ ಕಾರ್ಡ್ ಇಲ್ಲ

    ಮುಂಬೈ: ಬಿಜೆಪಿ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸಿರುವ ಜಯಸಿದ್ದೇಶ್ವರ ಸ್ವಾಮೀಜಿ ಒಟ್ಟು 3 ಕೋಟಿ ರೂ. ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.

    ಮಹಾರಾಷ್ಟ್ರದ ಸೋಲಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಜಯಸಿದ್ದೇಶ್ವರ ಸ್ವಾಮೀಜಿ ಬಳಿ 6 ಲಕ್ಷ 46 ಸಾವಿರ ನಗದು ಮತ್ತು 2 ಕೋಟಿ 72 ಲಕ್ಷ ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ಆದ್ರೆ ಸ್ವಾಮೀಜಿ ಪಾನ್ ಕಾರ್ಡ್ ಹೊಂದಿಲ್ಲ. ಮೀಸಲು ಕ್ಷೇತ್ರವಾಗಿರುವ ಸೋಲಾಪುರದಲ್ಲಿ ಕಾಂಗ್ರೆಸ್ ನಾಯಕ ಸುಶೀಲ್ ಕುಮಾರ್ ಸಿಂಧೆ ಮತ್ತು ವಂಚಿತ್ ಬಹುಜನ್ ಅದಾಡಿ (ವಿಬಿಎ) ನಾಯಕ ಪ್ರಕಾಶ್ ಅಂಬೇಡ್ಕರ್ ವಿರುದ್ಧ ಸ್ವಾಮೀಜಿ ಸ್ಪರ್ಧಿಸಿದ್ದಾರೆ.

    ಮಹಾರಾಷ್ಟ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಪಾನ್ ಕಾರ್ಡ್ ಹೊಂದಿರದ ಏಕ ಮಾತ್ರ ಅಭ್ಯರ್ಥಿ ಜಯಸಿದ್ದೇಶ್ವರ ಸ್ವಾಮೀಜಿ. ನನಗೆ ಪಾನ್ ಕಾರ್ಡ್ ಅವಶ್ಯಕತೆ ಇಲ್ಲ. ಕಾರಣ ನಾನು ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡಲ್ಲ ಎಂದು ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.

    ಅಭ್ಯರ್ಥಿ ಬಳಿ ಪಾನ್ ಕಾರ್ಡ್ ಇಲ್ಲದಿದ್ರೂ ವಿಧಾನ ಸಭೆ ಮತ್ತು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಬಹುದು. ರೆಗ್ಯೂಲರ್ ಹಾಗು ನಿಶ್ಚಿತ ಆದಾಯವನ್ನು ಹೊಂದಿರದ ಕಾರಣ ಸ್ವಾಮೀಜಿ ಪಾನ್ ಕಾರ್ಡ್ ಹೊಂದಿಲ್ಲ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಹೇಳಿದ್ದಾರೆ.

  • ಆಸ್ತಿಗಾಗಿ ಸ್ವಂತ ಮಗನನ್ನೇ ಕೊಲ್ಲಲು ಮುಂದಾದ ತಂದೆ!

    ಆಸ್ತಿಗಾಗಿ ಸ್ವಂತ ಮಗನನ್ನೇ ಕೊಲ್ಲಲು ಮುಂದಾದ ತಂದೆ!

    ಕೊಪ್ಪಳ: ಆಸ್ತಿಗಾಗಿ ಸ್ವಂತ ಪುತ್ರನನ್ನು ಕೊಲ್ಲಲು ತಂದೆಯೇ ಮುಂದಾದ ಘಟನೆ ಜಿಲ್ಲೆಯ ಕಾರಟಗಿ ತಾಲೂಕಿನ ಬಸವಣ್ಣ ಕ್ಯಾಂಪ್‍ನಲ್ಲಿ ನಡೆದಿದೆ.

    ಕಾರಟಗಿ ತಾಲೂಕಿನ ಬಸವಣ್ಣ ಕ್ಯಾಂಪ್‍ನ ನಿವಾಸಿ ಮೆಳ್ಳುಪುಡಿ ಶ್ರೀರಾಮಮೂರ್ತಿ ತನ್ನ ಮಗ ವೆಂಕಟೇಶ್‍ನನ್ನು ಕೊಲ್ಲಲು ಮುಂದಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿವೆ. ಪಿತ್ರಾರ್ಜಿತ ಆಸ್ತಿಯನ್ನು ಮಗನಿಗೆ ತಿಳಿಸದೆ ಶ್ರೀರಾಮಮೂರ್ತಿ ಕಾರಟಗಿಯ ವಿ.ಬಿ ಚಿನಿವಾಲರ ಎಂಬ ಉದ್ಯಮಿಗೆ ಆಸ್ತಿ ಮಾರಾಟ ಮಾಡಿದ್ದನು. ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಬಳ್ಳಾರಿಯಲ್ಲಿ ವೆಂಕಟೇಶ್ ವಾಸವಾಗಿದ್ದರು. ಆದ್ರೆ 10 ವರ್ಷಗಳ ನಂತರ ಊರಿಗೆ ಬಂದಾಗ ಅಪ್ಪ ಆಸ್ತಿ ಮಾರಾಟ ಮಾಡಿರುವ ಬಯಲಾಗಿದೆ.

    ಬಹುವರ್ಷಗಳ ಬಳಿಕ ಮನೆಗೆ ಬಂದ ವೆಂಕಟೇಶ್‍ಗೆ ಮನೆ ಬಿಡುವಂತೆ ವಿ.ಬಿ.ಚಿನಿವಾಲ ಒತ್ತಾಯಿಸಿದ್ದಾನೆ. ಆದ್ರೆ ವೆಂಕಟೇಶ್ ಮನೆ ಬಿಡಲು ನಿರಾಕರಿಸಿದ್ದಾರೆ. ಆಗ ತಂದೆಯೇ ವಿ.ಬಿ.ಚಿನಿವಾಲ ಬೆಂಬಲಿಗರ ಮೂಲಕ ವೆಂಕಟೇಶ್ ಮತ್ತು ಪತ್ನಿ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಕುರಿತು ಸಮೀಪದ ಕಾರಟಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು ಏನೂ ಪ್ರಯೋಜನವಾಗಿಲ್ಲ. ಪೊಲೀಸರು ಹಲ್ಲೆ ನಡೆಸಿದ ಪ್ರಮುಖ ಆರೋಪಿಗಳನ್ನು ಬಂಧಿಸಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

    ಆಸ್ತಿ ವಿಚಾರವಾಗಿ ವೆಂಕಟೇಶ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಶ್ರೀರಾಮಮೂರ್ತಿ ವಿ.ಬಿ ಚಿನಿವಾಲ ಬೆಂಬಲಿಗರ ಮೂಲಕ ಪುತ್ರನಿಗೆ ಜೀವ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ರಕ್ಷಣೆ ಕೋರಿ ಹತ್ತಿರದ ಕಾರಟಗಿ ಪೊಲೀಸ್ ಠಾಣೆಗೆ ಹೋದರೂ ಪ್ರಯೋಜನವಾಗಿಲ್ಲ. ಪಿತ್ರಾರ್ಜಿತ ಆಸ್ತಿಗಾಗಿ ನಮ್ಮ ತಂದೆ ಅವರೊಡನೆ ಸೇರಿ ನಮ್ಮ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂದು ವೆಂಕಟೇಶ್ ಆರೋಪಿಸುತ್ತಿದ್ದಾರೆ.

    ಆಸ್ತಿ ಗೊಂದಲ ಪ್ರಕರಣ ಕೊರ್ಟ್ ನಲ್ಲಿ ಇರುವುದರಿಂದ ನ್ಯಾಯಾಂಗದ ತೀರ್ಪಿಗೆ ಬದ್ಧವಾಗಿರ್ತಿವಿ ಎಂದು ವೆಂಕಟೇಶ್ ದಂಪತಿ ಹೇಳಿದ್ದಾರೆ. ತೀರ್ಪು ಬರೊವರೆಗೂ ನಮಗೆ ರಕ್ಷಣೆ ಕೊಡಿಸಿ ಎಂದು ದಂಪತಿ ಕೊರ್ಟ್ ನಲ್ಲಿ ಮನವಿ ಮಾಡಿದ್ದಾರೆ.

  • ಆಸ್ತಿಗಾಗಿ ಹೆತ್ತವರನ್ನೇ ಕೂಡಿ ಹಾಕಿ ಹೊಡೆಯುತ್ತಿದ್ದ ಕಾಂಗ್ರೆಸ್ ಮುಖಂಡ!

    ಆಸ್ತಿಗಾಗಿ ಹೆತ್ತವರನ್ನೇ ಕೂಡಿ ಹಾಕಿ ಹೊಡೆಯುತ್ತಿದ್ದ ಕಾಂಗ್ರೆಸ್ ಮುಖಂಡ!

    – ಸಹೋದರಿಯರಿಂದ ಸಹೋದರನ ಮೇಲೆ ಆರೋಪ

    ಬೆಂಗಳೂರು: ಆಸ್ತಿಯನ್ನು ಬರೆದುಕೊಡದ್ದಕ್ಕೆ ಸಿಟ್ಟಾಗಿ ತಂದೆ, ತಾಯಿಯನ್ನು ಗೃಹ ಬಂಧನದಲ್ಲಿರಿಸಿ ಹಲ್ಲೆ ನಡೆಸಿದ ಆರೋಪ ಕಾಂಗ್ರೆಸ್ ಮುಖಂಡನ ಮೇಲೆ ಕೇಳಿ ಬಂದಿದೆ.

    ಸಹೋದರನಾದ ತೇಜುಮೂರ್ತಿ ನಮ್ಮ ತಂದೆ ಹಿರಪ್ಪ(80), ತಾಯಿ ಲಕ್ಷ್ಮಮ್ಮ(67) ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಹೋದರಿಯರು ಆರೋಪಿಸಿದ್ದಾರೆ.

    ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬನ್ನೇರುಘಟ್ಟದ ನಿವಾಸಿ ತೇಜುಮೂರ್ತಿ ಆಸ್ತಿ ನೀಡದ್ದಕ್ಕೆ ಪೋಷಕರನ್ನು ಗೃಹ ಬಂಧನದಲ್ಲಿ ಇರಿಸಿದ್ದಾನೆ. ಈ ವಿಚಾರವನ್ನು ಪ್ರಶ್ನಿಸಲು ಬಂದಿದ್ದಕ್ಕೆ ನಮ್ಮ ಮೇಲೆಯೆ ಹಲ್ಲೆಗೆ ಯತ್ನಿಸಿದ್ದಾನೆ ಎಂದು ಸಹೋದರಿಯರು ಹೇಳಿದ್ದಾರೆ. ತೇಜುಮೂರ್ತಿ ಹಲ್ಲೆ ನಡೆಸುವ ದೃಶ್ಯ ಮೊಬೈಲಿನಲ್ಲಿ ಸೆರೆ ಆಗಿದೆ.

    ಈ ವಿಚಾರಕ್ಕೆ ಸಂಬಂಧಿಸಿದಂತೆ ಬನ್ನೇರುಘಟ್ಟ ಠಾಣೆಯಲ್ಲಿ ದೂರು ದಾಖಲಿಸಿಸಲು ಹಿರಪ್ಪನ ಪುತ್ರಿಯರು ಹೋಗಿದ್ದರು. ಆದರೆ ತೇಜುಮೂರ್ತಿಯ ಒತ್ತಡಕ್ಕೆ ಮಣಿದ ಪೊಲೀಸರು ಕಾಟಾಚಾರಕ್ಕೆ ದೂರು ದಾಖಲಿಸಿಕೊಂಡಿದ್ದಾರೆ ಎಂದು ಹಿರಪ್ಪನ ಪುತ್ರಿ ಆರೋಪಿಸಿದ್ದಾರೆ.

    ಸದ್ಯ ಪುತ್ರಿಯರು ಪೋಷಕರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

  • ಪ್ರಧಾನಿ ಮೋದಿ ಬಳಿ ಆಸ್ತಿ ಎಷ್ಟಿದೆ?  ಕೈಯಲ್ಲಿರೋ ನಗದು ಎಷ್ಟು? ಎಷ್ಟು ಏರಿಕೆಯಾಗಿದೆ? – ಅಫಿಡವಿಟ್ ವಿವರ ಓದಿ

    ಪ್ರಧಾನಿ ಮೋದಿ ಬಳಿ ಆಸ್ತಿ ಎಷ್ಟಿದೆ? ಕೈಯಲ್ಲಿರೋ ನಗದು ಎಷ್ಟು? ಎಷ್ಟು ಏರಿಕೆಯಾಗಿದೆ? – ಅಫಿಡವಿಟ್ ವಿವರ ಓದಿ

    ನವದೆಹಲಿ: ಲೋಕಸಭಾ ಚುನಾವಣೆಗೆ ವಾರಣಾಸಿಯಿಂದ ಕಣಕ್ಕಿಳಿದಿರುವ ಪ್ರಧಾನಿ ಮೋದಿ ಅವರು ಇಂದು ತಮ್ಮ ನಾಮಪತ್ರ ಸಲ್ಲಿಸಿದ್ದು ತನ್ನ ಬಳಿ ಒಟ್ಟು 2.5 ಕೋಟಿ ರೂ. ಮೌಲ್ಯದ ಆಸ್ತಿಯಿದೆ ಎಂದು ಘೋಷಿಸಿಕೊಂಡಿದ್ದಾರೆ.

    4 ಬಾರಿ ಗುಜರಾತ್ ಸಿಎಂ ಆಗಿ ಕರ್ತವ್ಯ ನಿರ್ವಹಿಸಿ, ಈಗ ಪ್ರಧಾನ ಮಂತ್ರಿ ಆಗಿ ಆಡಳಿತ ನಡೆಸುತ್ತಿರುವ ಮೋದಿ ತಮ್ಮ ಸರ್ಕಾರಿ ವೇತನದಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಮೋದಿಯ ಆಸ್ತಿ ಮೌಲ್ಯದಲ್ಲಿ 86 ಲಕ್ಷ ರೂ. ಏರಿಕೆಯಾಗಿದೆ. ಜಶೋಧಾಬೇನ್ ಅವರನ್ನು ಮೋದಿ ತನ್ನ ಪತ್ನಿ ಎಂದು ಅಫಿಡವಿಟ್ ನಲ್ಲಿ  ಉಲ್ಲೇಖಿಸಿದ್ದಾರೆ.

    1967ರಲ್ಲಿ ಗುಜರಾತ್ ಬೋರ್ಡ್ ನಡೆಸುವ ಎಸ್‍ಎಸ್‍ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ 1978ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದಿಂದ ಕಲಾ ವಿಭಾಗದಲ್ಲಿ ಬಿ.ಎ ಪದವಿ, 1983ರಲ್ಲಿ ಗುಜರಾತ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದೇನೆ ಎಂದು ಮೋದಿ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಆಸ್ತಿ ಎಷ್ಟಿದೆ?
    ಅಧಿಕಾರ ಕೈಯಲ್ಲಿ ಇದ್ದರೂ ಮೋದಿ ಬಳಿ ಯಾವುದೇ ಮನೆ ಮತ್ತು ಜಮೀನು ಇಲ್ಲ. ಸರ್ಕಾರಿ ವೇತನ ಮತ್ತು ಬ್ಯಾಂಕ್ ಬಡ್ಡಿಯೇ ಮೋದಿ ಅವರ ಆದಾಯದ ಮೂಲವಾಗಿದ್ದು, ಯಾವುದೇ ಸಾಲ ಇಲ್ಲ, ಕ್ರಿಮಿನಲ್ ಕೇಸ್ ಸಹ ಇಲ್ಲ. ಮೋದಿ ಕೈಯಲ್ಲಿ ಕೇವಲ 38 ಸಾವಿರ ರೂ. ನಗದು ಹಣ ಇದೆ.

    ಮೋದಿಯ ಒಟ್ಟು ಆಸ್ತಿ 2.5 ಕೋಟಿ ರೂಪಾಯಿಗಳಿದ್ದು, ಅದರಲ್ಲಿ 1.27 ಕೋಟಿ ರೂ.ಗಳಷ್ಟು ಸ್ಥಿರ ಠೇವಣಿ(ಫಿಕ್ಸೆಡ್ ಡೆಪಾಸಿಟ್), ಹಾಗೆಯೇ 38,750 ರೂ. ನಗದು ಹಣ ಅವರ ಕೈಯಲ್ಲಿ ಇದೆ.

    ನಮೋ ಒಟ್ಟು 1.41 ಕೋಟಿ ರೂ. ಚರಾಸ್ತಿಯನ್ನು ಹೊಂದಿದ್ದು, ಸುಮಾರು 1.1 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಹಾಗೆಯೇ ತೆರೆಗೆ ಉಳಿತಾಯ ಇನ್ಫ್ರಾ ಬಾಂಡ್‍ಗಳ ಮೇಲೆ 20 ಸಾವಿರ ರೂ. ಹಾಕಿದ್ದು, ರಾಷ್ಟ್ರೀಯ ಉಳಿತಾಯ ಸರ್ಟಿಫಿಕೇಟ್‍ನಲ್ಲಿ(ಎನ್‍ಎಸ್‍ಸಿ) 7.61 ಲಕ್ಷ ರೂ ಹಾಗೂ 1.9 ಲಕ್ಷ ರೂಪಾಯಿಗಳ ಎಲ್‍ಐಸಿ ಪಾಲಿಸಿ ಹೊಂದಿದ್ದಾರೆ.

    ಖಾಸಗಿ ಬ್ಯಾಂಕ್ ಖಾತೆಯಲ್ಲಿ ಕೇವಲ 4,143 ರೂ. ಉಳಿತಾಯವನ್ನು ಮಾಡಿದ್ದಾರೆ. ಅಲ್ಲದೆ 45 ಗ್ರಾಂ ತೂಕದ ಒಟ್ಟು 4 ಬಂಗಾರದ ಉಂಗುರಗಳಿದ್ದು, ಅದು 1.13 ಲಕ್ಷ ರೂ. ಬೆಲೆಬಾಳುತ್ತದೆ. ಹಾಗೆಯೇ ಗಾಂಧಿನಗರದ ಸೆಕ್ಟರ್-1ರಲ್ಲಿ 1.1 ಕೋಟಿ ರೂ. ಮೌಲ್ಯದ 3,531 ಚದರ ಅಡಿ ವಿಸ್ತೀರ್ಣದ ಜಾಗ ಹೊಂದಿದ್ದೇನೆ ಎಂದು ಮೋದಿ ತಿಳಿಸಿದ್ದಾರೆ. ಈ ಹಿಂದೆ 2014ರಲ್ಲಿ ಅಫಿಡವಿಟ್‍ನ ಪ್ರಕಾರ ಮೋದಿ 1.56 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದರು.

    2019ರಲ್ಲಿ ಮೋದಿ ಬಳಿಯಿರುವ ಆಸ್ತಿ ಎಷ್ಟು?
    * 2.51 ಕೋಟಿ ಮೌಲ್ಯದ ಆಸ್ತಿ
    * ಸ್ಥಿರಾಸ್ತಿ ಮೌಲ್ಯ – 1.1 ಕೋಟಿ ರೂ.
    * ಚರಾಸ್ತಿ ಮೌಲ್ಯ – 1.41 ಕೋಟಿ ರೂ.
    * ವಾರ್ಷಿಕ ಆದಾಯ -19.92 ಲಕ್ಷ ರೂ.
    * ಆದಾಯದ ಮೂಲ – ಸರ್ಕಾರ ಕೊಡುವ ವೇತನ, ಬ್ಯಾಂಕ್‍ನ ಬಡ್ಡಿ ಹಣ
    * ಕೈಯಲ್ಲಿರುವ ನಗದು – 38,750 ರೂ.
    * ಬ್ಯಾಂಕ್‍ನಲ್ಲಿರುವ ನಗದು – 4,143 ರೂ.
    * ಫಿಕ್ಸೆಡ್ ಡಿಪಾಸಿಟ್ – 1,27,81,574 ರೂ.
    * ಬಾಂಡ್- 20,000 ರೂ.
    * ಇನ್ಶುರೆನ್ಸ್, ಎನ್‍ಎಸ್‍ಸಿ -9,51,813 ರೂ.
    * ಚಿನ್ನದ ಮೌಲ್ಯ -1,13,800 ರೂ. (4 ಉಂಗುರ)
    * ಇತರೆ ಆಸ್ತಿ -2,26,040 ರೂ.
    * ಗಾಂಧಿನಗರದಲ್ಲಿನ ಮನೆಯಲ್ಲಿ ಮೋದಿ ಪಾಲು ಶೇ.25

    2014ರಲ್ಲಿ ಮೋದಿ ಬಳಿಯಿದ್ದ ಆಸ್ತಿ ಎಷ್ಟು?
    * 1 ಕೋಟಿ 65 ಲಕ್ಷ ರೂ. ಮೊತ್ತದ ಆಸ್ತಿ
    * ಕೈಯಲ್ಲಿದ್ದ ದುಡ್ಡು – 29 ಸಾವಿರ ರೂ.
    * ಬ್ಯಾಂಕ್ ಠೇವಣಿ – 44 ಲಕ್ಷದ 23 ಸಾವಿರ ರೂ.
    * ಉಳಿತಾಯ ಬಾಂಡ್‍ಗಳು – 4 ಲಕ್ಷದ 34 ಸಾವಿರ ರೂ
    * ಆಭರಣ – 1 ಲಕ್ಷದ 35 ಸಾವಿರ ರೂ.
    * ಚಿರಾಸ್ತಿ ಒಟ್ಟು ಮೊತ್ತ – 51 ಲಕ್ಷದ 57 ಸಾವಿರ ರೂ.
    * ಗಾಂಧಿನಗರದಲ್ಲಿ 1 ಕೋಟಿ ರೂ. ಮೌಲ್ಯದ ಕಟ್ಟಡ

  • ಬಿಜೆಪಿಗೆ ಓಪನ್ ಚಾಲೆಂಜ್ ಹಾಕಿದ ಪ್ರಿಯಾಂಕ್ ಖರ್ಗೆ

    ಬಿಜೆಪಿಗೆ ಓಪನ್ ಚಾಲೆಂಜ್ ಹಾಕಿದ ಪ್ರಿಯಾಂಕ್ ಖರ್ಗೆ

    ಯಾದಗಿರಿ: ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಕ್ರಮ ಆಸ್ತಿ ಹೊಂದಿದ್ದಾರೆಂಬ ಬಿಜೆಪಿ ನಾಯಕರ ಆರೋಪಕ್ಕೆ ಖರ್ಗೆ ಪುತ್ರ ಸಚಿವ ಪ್ರಿಯಾಂಕ್ ಖರ್ಗೆ ಓಪನ್ ಚಾಲೆಂಜ್ ಹಾಕಿದ್ದಾರೆ.

    ಯಾದಗಿರಿಯ ಹತ್ತಿಕುಣಿ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ಕುಟುಂಬದ ಆಸ್ತಿ 50 ಸಾವಿರ ಕೋಟಿ ಇದ್ದರೆ ಬಿಜೆಪಿಯವರು ಅವರು ಅದನ್ನು ಸಾಬೀತು ಪಡಿಸಲಿ. ಆಸ್ತಿ ಹೊಂದಿದ್ದು ನಿಜವಾದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಇದು ಸುಳ್ಳಾದರೆ ಅವರು ರಾಜಕೀಯ ನಿವೃತ್ತಿ ಹೊಂದುತ್ತಾರಾ? ಅಂತ ಓಪನ್ ಚಾಲೆಂಜ್ ಹಾಕಿದ್ದಾರೆ.

    ಸಂಸದ ರವಿಕುಮಾರ್ ಗೆ ನನ್ನ ಬಗ್ಗೆ ಮಾತನಾಡಲು ಏನು ಅರ್ಹತೆ ಇದೆ, ಅವರು ನಾಮ ನಿರ್ದೇಶನದಿಂದ ಬಂದವರು. ನಾನು ಜನರಿಂದ ಆಯ್ಕೆಯಾದವನು. ಪುತ್ರ ವ್ಯಾಮೋಹದ ಬಗ್ಗೆ ಮಾತನಾಡುವ ಮಾಜಿ ಸಚಿವ ಮಾಲೀಕಯ್ಯ ಗುತ್ತೆದಾರ ತಮ್ಮ ಕುಟುಂಬದ ಸದಸ್ಯರ ಪದವಿಗಳ ಬಗ್ಗೆ ತುಟಿ ಬಿಚ್ಚಲಿ ಎಂದು ಖಡಕ್ ತಿರುಗೇಟು ನೀಡಿದರು.

  • ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಬಳಿಯಿವೆ 3 ಕುರಿ, 19 ಹಸು, 4 ಎತ್ತುಗಳು!

    ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಬಳಿಯಿವೆ 3 ಕುರಿ, 19 ಹಸು, 4 ಎತ್ತುಗಳು!

    – ದೇವೇಂದ್ರಪ್ಪಗಿಂತ ಪತ್ನಿಯೇ ಶ್ರೀಮಂತ!
    – ಕೋಟಿ ಕೋಟಿ ರೂ. ಸಾಲ ಮಾಡಿದ್ದಾರೆ ಉಗ್ರಪ್ಪ

    ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಬಳಿ ಸಾಕಷ್ಟು ಹಣವಿದೆ. ಅವರು ಬೇಕಾದಷ್ಟು ದುಡ್ಡು ಹಂಚುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಆರೋಪಿಸಿದ್ದರು. ಆದರೆ ವೈ.ದೇವೇಂದ್ರಪ್ಪ ಬಳಿ ಹಣಕ್ಕಿಂತ ಹಸು, ಕುರಿ ಎತ್ತುಗಳಿದ್ದು ಆದಾಯ ತೆರಿಗೆ ಪಾವತಿದಾರರಲ್ಲ.

    ವೈ.ದೇವೇಂದ್ರಪ್ಪ ಅವರಿಗಿಂತ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಶ್ರೀಮಂತರಾಗಿದ್ದಾರೆ. ಅಷ್ಟೇ ಅಲ್ಲದೇ ಉಗ್ರಪ್ಪ ಅವರು ಕೋಟಿ ರೂ. ಸಾಲಗಾರರು ಕೂಡ ಆಗಿದ್ದಾರೆ.

    ಬಿಜೆಪಿ ಅಭ್ಯರ್ಥಿ ವೈ ದೇವೇಂದ್ರಪ್ಪ 67 ವರ್ಷದವರಾಗಿದ್ದು, 7ನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದಾರೆ. ಅವರ ಒಟ್ಟು ಆಸ್ತಿಯ ಮೌಲ್ಯ 2.31 ಕೋಟಿ ರೂ. ಆಗಿದ್ದು, ಆದಾಯ ತೆರಿಗೆ ಪಾವತಿದಾರರಲ್ಲ. ದೇವೇಂದ್ರಪ್ಪ ಅವರ ಬಳಿ 1.50 ಲಕ್ಷ ರೂ. ನಗದು, 8.87 ಲಕ್ಷ ರೂ. ಮೌಲ್ಯದ ಚಿನ್ನ ಬೆಳ್ಳಿಯ ಆಭರಣ, ತಿಮ್ಮಲಾಪುರ, ಹಡಗಲಿ, ಮೈಸೂರು, ಬೆಂಗಳೂರು, ಅರಸಿಕೇರಿಯಲ್ಲಿ ಕೃಷಿಯೇತರ ಭೂಮಿ ಹೊಂದಿದ್ದಾರೆ. ಜೊತೆಗೆ ದಾವಣಗೆರೆ ಹಾಗೂ ಅರಸಿಕೇರೆಯಲ್ಲಿ ಅಪಾರ್ಟಮೆಂಟ್ ಸೇರಿ 1.17 ಕೋಟಿ ರೂ. ಮೌಲ್ಯದ ಚಿರಾಸ್ತಿ ಹೊಂದಿದ್ದಾರೆ. ಬ್ಯಾಂಕ್‍ನಲ್ಲಿ 32 ಲಕ್ಷ ರೂ. ಇಟ್ಟಿದ್ದು, 1.30 ಲಕ್ಷ ರೂ. ಸಾಲ ಪಡೆದಿದ್ದಾರೆ.

    ದೇವೇಂದ್ರಪ್ಪ ಪತ್ನಿ, ಜಿಲ್ಲಾ ಪಂಚಾಯತ್ ಕಾಂಗ್ರೆಸ್ ಸದಸ್ಯೆ ಸುಶೀಲಮ್ಮ ಆದಾಯ ತೆರಿಗೆ ಪಾವತಿದಾರರಾಗಿದ್ದು, 13.64 ಲಕ್ಷ ರೂ. ಆದಾಯ ಘೋಷಿಸಿದ್ದಾರೆ. ವಿವಿಧ ಬ್ಯಾಂಕ್‍ಗಳಲ್ಲಿ 49.59 ಲಕ್ಷ ರೂ. ಹೊಂದಿದ್ದು, 18.15 ಲಕ್ಷ ರೂ. ಮೌಲ್ಯದ ಆಭರಣ ಅವರ ಬಳಿ ಇದೆ. 62.93 ಲಕ್ಷ ರೂ. ಮೌಲ್ಯದ ಚರಾಸ್ತಿ ಹಾಗೂ 34.62 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

    ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅವರು ಬಿ.ಎಸ್ಸಿ, ಎಲ್‍ಎಲ್‍ಬಿ ಪದವೀಧರರಾಗಿದ್ದಾರೆ. ಅವರ ಬಳಿ 2.77 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ 8.05 ಕೋಟಿ ರೂ. ಸ್ಥಿರಾಸ್ತಿ ಇದೆ. ಜೊತೆಗೆ 2.2 ಕೆಜಿ ಚಿನ್ನಾಭರಣ ಹಾಗೂ 17 ಕೆಜಿ ಬೆಳ್ಳಿ ಹೊಂದಿದ್ದಾರೆ. ಉಗ್ರಪ್ಪ 2.22 ಕೋಟಿ ರೂ. ಸಾಲಗಾರರಾಗಿದ್ದು, ಅವರ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.

  • ಚಿಕ್ಕಪ್ಪ, ಚಿಕ್ಕಮ್ಮನ ತಲೆ ಕತ್ತರಿಸಿ, ರುಂಡ-ಮುಂಡ ಬೇರೆ ಮಾಡಿ ತಾನು ನೇಣಿಗೆ ಶರಣು

    ಚಿಕ್ಕಪ್ಪ, ಚಿಕ್ಕಮ್ಮನ ತಲೆ ಕತ್ತರಿಸಿ, ರುಂಡ-ಮುಂಡ ಬೇರೆ ಮಾಡಿ ತಾನು ನೇಣಿಗೆ ಶರಣು

    ಮಡಿಕೇರಿ: ಆಸ್ತಿ ಕಲಹಕ್ಕೆ ಸಂಬಂಧಿಸಿದಂತೆ ಯುವಕನೊಬ್ಬ ತನ್ನ ಚಿಕ್ಕಪ್ಪ, ಚಿಕ್ಕಮ್ಮನನ್ನು ಕತ್ತಿಯಿಂದ ಕಡಿದು ಭೀಕರವಾಗಿ ಕೊಲೆ ಮಾಡಿ ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರದಲ್ಲಿ ನಡೆದಿದೆ.

    ನಿವೃತ್ತ ಪೊಲೀಸ್ ಪೇದೆ ಸೂದನ ಗಣೇಶ್(63) ಮತ್ತು ಪತ್ನಿ ಮೋಹಿನಿ (58) ಕೊಲೆಯಾದವರು. ಗಣೇಶ್ ಅಣ್ಣನ ಮಗ ದಿಲೀಪ್ (32) ಕೊಲೆ ಮಾಡಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಗಣೇಶ್ ಮತ್ತು ದಿಲೀಪ್ ಕುಟುಂಬದ ಮಧ್ಯೆ ಹಿಂದಿನಿಂದಲೂ ಕಲಹಗಳು ನಡೆಯುತ್ತಿತ್ತು.

    ಬುಧವಾರ ಸಂಜೆಯೂ ಗಲಾಟೆ ನಡೆದಿದ್ದು, ಗಣೇಶ್ ಕತ್ತನ್ನು ದಿಲೀಪ್ ಕತ್ತರಿಸಿದ್ದಾನೆ. ಈ ವೇಳೆ ತಡೆಯಲು ಬಂದ ಗಣೇಶ್ ಪತ್ನಿ ಮೋಹಿನಿಯ ಕತ್ತನ್ನೂ ನಿರ್ದಯವಾಗಿ ಕತ್ತರಿಸಿದ್ದಾನೆ. ಇಬ್ಬರ ರುಂಡ ಮುಂಡ ಬೇರೆ ಬೇರೆಯಾಗಿದೆ. ಅಷ್ಟರಲ್ಲಿ ಅಡ್ಡ ಬಂದ ಗಣೇಶ್ ಪುತ್ರ ಹರ್ಷಿತ್ (23) ಮೇಲೂ ದಿಲೀಪ್ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ. ಮಾರಣಾಂತಿಕವಾಗಿ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಹರ್ಷಿತ್‍ನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

    ಈ ಘಟನೆ ನಂತರ ಗಣೇಶ್ ಅವರ ಮನೆಯಲ್ಲೇ ದಿಲೀಪ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ವೃತ್ತನಿರೀಕ್ಷಕ ನಂಜುಂಡೇ ಗೌಡ, ಠಾಣಾಧಿಕಾರಿ ತಿಮ್ಮಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಜೆ ವೇಳೆ ತಮ್ಮ ಊರಿನಲ್ಲಿ ನಡೆದ ಭೀಕರ ಘಟನೆಯಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ

  • ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಆಸ್ತಿ ವಿವರ ಘೋಷಣೆ

    ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಆಸ್ತಿ ವಿವರ ಘೋಷಣೆ

    ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾ ಅಖಾಡ ರಂಗೇರತೊಡಗಿದೆ. ಇವತ್ತು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ಹಾಗೂ ಬಿಜೆಪಿಯ ಅಭ್ಯರ್ಥಿ ಇವತ್ತು ನಾಮಪತ್ರ ಸಲ್ಲಿಸಿ ಅಧಿಕೃತವಾಗಿ ಚುನಾವಣಾ ಅಖಾಡಕ್ಕೆ ಧುಮುಕಿದರು.

    ಮೊದಲು ಬಿಜೆಪಿಯ ಅಭ್ಯರ್ಥಿ ಪ್ರತಾಪ್‍ಸಿಂಹ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿಂದ ಮೆರವಣಿಗೆ ಮೂಲಕ ಸಾಗಿದ ಪ್ರತಾಪ್ ಸಿಂಹ ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಮಾಜಿ ಡಿಸಿಎಂ ಅರ್ ಅಶೋಕ್, ಮಾಜಿ ಸಚಿವ ಎಸ್.ಎ ರಾಮದಾಸ್ ಸೇರಿದಂತೆ ಹಲವು ಮುಖಂಡರು ಸಾಥ್ ನೀಡಿದರು. ಇದಕ್ಕೂ ಮುನ್ನ ನಾಡದೇವತೆ ಚಾಮುಂಡೇಶ್ವರಿ ಸನ್ನಿಧಾನ ಚಾಮುಂಡಿ ಬೆಟ್ಟಕ್ಕೆ ಕುಟುಂಬ ಸಮೇತ ಆಗಮಿಸಿ ಪೂಜೆ ಸಲ್ಲಿಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಪ್ರಚಾರಕ್ಕೆ ಆಗಮಿಸುತ್ತಾರೆ ಎಂದು ತಿಳಿಸಿದರು.

    ಜೆಡಿಎಸ್, ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಸಿ.ಎಚ್ ವಿಜಯಶಂಕರ್ ಸಹ ನಾಮಪತ್ರ ಸಲ್ಲಿಸಿದರು. ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಸಾಗಿ ಮೈಸೂರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಇವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಎಚ್.ಸಿ ಮಹದೇವಪ್ಪ, ತನ್ವೀರ್ ಸೇಠ್ ಶಾಸಕರಾದ ಡಾ.ಯತೀಂದ್ರ ಸೇರಿ ಹಲವರು ಸಾಥ್ ನೀಡಿದರು. ಆದರೆ ಮೈತ್ರಿ ಪಕ್ಷದ ನಾಯಕರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಕೊನೆ ಕ್ಷಣದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸಚಿವ ಸಾ.ರಾ ಮಹೇಶ್ ಕೈ ನಾಯಕರಿಗೆ ಸಾಥ್ ನೀಡಿದರು.

    ಪ್ರತಾಪ್ ಸಿಂಹ್ ಆಸ್ತಿ ವಿವರ:
    ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಚುನಾವಣೆಯ ಅಫಿಡವಿಡ್‍ನಲ್ಲಿ ಆಸ್ತಿ ವಿವರ ಘೋಷಣೆ ಮಾಡಿದ್ದು, ಕಳೆದ ಚುನಾವಣೆಯಲ್ಲಿ ಘೋಷಿಸಿಸಿದ್ದಕ್ಕಿಂತ ಅಲ್ಪ ಪ್ರಮಾಣದ ಆಸ್ತಿ ಏರಿಕೆ ಆಗಿದೆ. ಕಳೆದ ಚುನಾವಣೆಗಿಂತ ಈ ಚುನಾವಣೆ ವೇಳೆಗೆ ಪ್ರತಾಪ್ ಸಿಂಹ ಆಸ್ತಿಯಲ್ಲಿ 7,29,380 ಲಕ್ಷ ರೂ ಹೆಚ್ಚಳವಾಗಿದ್ದು, ಚರಾಸ್ತಿ 11,09,697 ಹೊಂದಿದ್ದರೆ, ಸ್ಥಿರಾಸ್ತಿ 52,05,000 ರೂ. ಇದ್ದು, 23,64,087 ಸಾಲ ಹೊಂದಿದ್ದಾರೆ.

    ಕಳೆದ ಚುನಾವಣೆಯಲ್ಲಿ ಪ್ರತಾಪ್ ಸಿಂಹ 7.85.317 ರೂ. ಚರಾಸ್ತಿ, 48,00,000 ರೂ. ಸ್ಥಿರಾಸ್ತಿ ಹಾಗೂ 43,99,048 ಸಾಲ ಹೊಂದಿದ್ದರು. ಚರಾಸ್ತಿಯಲ್ಲಿ 3,24,380 ರೂ., ಸ್ಥಿರಾಸ್ತಿಯಲ್ಲಿ 4,05,000 ಏರಿಕೆ ಆಗಿದ್ದು, 20,34,961 ರೂ. ಸಾಲದಲ್ಲಿ ಇಳಿಕೆ ಆಗಿದೆ.

    ಪತ್ನಿ ಅರ್ಪಿತಾ ಸಿಂಹ ಹೆಸರಿನಲ್ಲಿ 40,35,435 ರೂ. ಚರಾಸ್ತಿ, 81,50,000 ರೂ. ಸ್ಥಿರಾಸ್ತಿ ಇದ್ದು, 23,74,917 ಸಾಲ ಹೊಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಅರ್ಪಿತಾ ಅವರ ಹೆಸರಿನಲ್ಲಿ 4,36,274 ರೂ. ಚರಾಸ್ತಿ, 30,00,00 ರೂ. ಸ್ಥಿರಾಸ್ತಿ ಹೊಂದಿದ್ದರು. ಕಳೆದ ಚುನಾವಣೆಗಿಂತ ಈ ಚುನಾವಣೆ ವೇಳೆಗೆ ಪ್ರತಾಪ್ ಸಿಂಹ ಕುಟುಂಬದಿಂದ ಒಟ್ಟು 1 ಕಾರು, 360 ಗ್ರಾಂ ಚಿನ್ನ ಹೆಚ್ಚುವರಿಯಾಗಿ ಘೋಷಣೆ ಆಗಿದೆ. ಅಲ್ಲದೇ ಪತ್ನಿ ಹೆಸರಿನಲ್ಲಿ 23,74,917 ಲಕ್ಷ ರೂ. ಸಾಲ ಹೆಚ್ಚುವರಿಯಾಗಿ ಘೋಷಣೆ ಆಗಿದ್ದು, ಪುತ್ರಿ ಹೆಸರಿನಲ್ಲಿ 1,22,623 ರೂ. ಲೈಫ್ ಇನ್ಸೂರೆನ್ಸ್ ಘೋಷಣೆ ಆಗಿದೆ.

  • ಡಿಕೆಶಿ 75 ಕೋಟಿ ಬೇನಾಮಿ ಆಸ್ತಿ ಜಪ್ತಿ

    ಡಿಕೆಶಿ 75 ಕೋಟಿ ಬೇನಾಮಿ ಆಸ್ತಿ ಜಪ್ತಿ

    ಬೆಂಗಳೂರು: ಸಚಿವ ಡಿ.ಕೆ. ಶಿವಕುಮಾರ್ ಅವರು ತಾಯಿ, ಸ್ನೇಹಿತರ ಹೆಸರಲ್ಲಿ ಇಟ್ಟಿದ್ದ 75 ಕೋಟಿ ಬೇನಾಮಿ ಆಸ್ತಿ ಜಪ್ತಿ ಮಾಡಲಾಗಿದೆ ಎಂದು ಐಟಿ ಇಲಾಖೆಯ ಡಿ.ಜಿ. ಬಾಲಕೃಷ್ಣನ್ ತಿಳಿಸಿದ್ದಾರೆ.

    ಸಚಿವ ಡಿ.ಕೆ.ಶಿವಕುಮಾರ್ ಅವರ ಮೇಲೆ ದಾಳಿ ನಡೆಸಿದಾಗ ಕೆಲ ದಾಖಲಾತಿಗಳು ಲಭ್ಯವಾಗಿದ್ದವು. ಆ ದಾಖಲೆಗಳನ್ನ ತೋರಿಸಿ ಡಿ.ಕೆ.ಶಿವಕುಮಾರ್ ತನಿಖೆಯಿಂದ ರಿಯಾಯಿತಿ ಪಡೆದುಕೊಳ್ಳಲು ಮುಂದಾಗಿದ್ದರು. ನಾವು ಯಾವುದೇ ಒಂದು ಪಕ್ಷದ ಪರವಾಗಿ ಕೆಲಸ ಮಾಡದ ಹಿನ್ನೆಲೆಯಲ್ಲಿ ನಮ್ಮ ಸಿಬ್ಬಂದಿ ಸಹಾಯ ಮಾಡಲಿಲ್ಲ. ಈ ವೇಳೆ ಲಭ್ಯವಾಗಿರುವ ಕೆಲ ದಾಖಲೆಗಳ ಲಾಭ ಪಡೆಯಲು ಸಚಿವರು ಮುಂದಾಗಿದ್ದರು. ಕಾನೂನು ಪ್ರಕಾರವಾಗಿ ಯಾವ ಕ್ರಮಕೈಗೊಳ್ಳಬೇಕು ಆ ಕ್ರಮಗಳನ್ನು ಇಲಾಖೆ ತೆಗೆದುಕೊಂಡಿದೆ ಎಂದು ಬಾಲಕೃಷ್ಣನ್ ತಿಳಿಸಿದರು.

     

    ಡೈರಿ ಆರೋಪ ಠುಸ್: ಲೋಕಸಭೆ ಚುನಾವಣೆ ಸಮಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ಬಿಡುಗಡೆ ಮಾಡಿದ್ದ 1800 ಕೋಟಿ ಕಪ್ಪ ಡೈರಿ ಆರೋಪ ಠುಸ್ ಆಗಿದೆ. ದೇಶಾದ್ಯಂತ ಸಂಚಲನ ಮೂಡಿಸಿದ ಈ ಡೈರಿ ನಕಲಿ ಅಂತ ಐಟಿ ಇಲಾಖೆಯ ಡಿ.ಜಿ. ಬಾಲಕೃಷ್ಣನ್ ಸ್ಟಷ್ಟಪಡಿಸಿದ್ದಾರೆ.

    ಒಂದು ಐಟಿ ದಾಳಿಯಲ್ಲಿ ದಾಖಲಾತಿಗಳು ಸಿಕ್ಕಿದ್ದವು. ಅದನ್ನು ಹೈದರಾಬಾದ್‍ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿದ್ವಿ. ಅದು ಫೋಟೋ ಕಾಫಿಗಳಾಗಿ ಇದ್ದಿದರಿಂದ ಸತ್ಯಾಂಶ ಬೆಳಕಿಗೆ ಬರಲಿಲ್ಲ. ನಮ್ಮ ಅಭಿಪ್ರಾಯದ ಪ್ರಕಾರ ಅದೊಂದು ಸುಳ್ಳು ದಾಖಲೆ. ಆದ್ರೆ, ನಿನ್ನೆ ಬಿಡುಗಡೆ ಮಾಡಿದ ಕೆಲ ದಾಖಲೆಗಳು ಫೋರ್ಜರಿ. ಮೊದಲ ಪೇಜ್ ಏನಿತ್ತು. ಅದು ನಾವು ಸೀಜ್ ಮಾಡಿದಾಗ ಸಿಕ್ಕಲೇ ಇಲ್ಲ. ಹಣದ ಬಗ್ಗೆ ಬರೆದಿರೋ ಪೇಜ್ ಶುದ್ಧ ಸುಳ್ಳು ಎಂದು ಬಾಲಕೃಷ್ಣನ್ ಎಂದು ತಿಳಿಸಿದ್ದಾರೆ.