Tag: ಆರ್ ತಿಮ್ಮಾಪುರ್

  • MSIL ಮಳಿಗೆ ಹರಾಜು ಮೂಲಕ ಮಾರಾಟ ಇಲ್ಲ: ತಿಮ್ಮಾಪುರ್

    MSIL ಮಳಿಗೆ ಹರಾಜು ಮೂಲಕ ಮಾರಾಟ ಇಲ್ಲ: ತಿಮ್ಮಾಪುರ್

    ಬೆಂಗಳೂರು: MSIL ಮಳಿಗೆಗಳನ್ನು ಹರಾಜು ಮೂಲಕ ಮಾರಾಟ ಮಾಡುವ ಯಾವುದೇ ನಿರ್ಧಾರ ಆಗಿಲ್ಲ ಎಂದು ಅಬಕಾರಿ ಸಚಿವ ತಿಮ್ಮಾಪುರ್ (Thimmapur) ತಿಳಿಸಿದರು.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಸುನೀಲ್ ವಲ್ಯಾಪುರ್ ಪ್ರಶ್ನಿಸಿದ ಅವರು, MSIL ಮಳಿಗೆಗಳನ್ನು ಹರಾಜು ಮೂಲಕ ಮಾಡಬಾರದು. ಇದು ಸರ್ಕಾರದ ಸಂಸ್ಥೆ ಆಗಿದೆ. ಇದನ್ನ ಹರಾಜು ಹಾಕಿದರೆ ಸರ್ಕಾರಕ್ಕೆ ನಷ್ಟ ಆಗುತ್ತದೆ. 463 ಮಳಿಗೆಗಳು ಇವೆ. ಇವುಗಳನ್ನು ಹರಾಜು ಮಾಡಿ ಮಾರಾಟ ಮಾಡುವ ಚಿಂತನೆ ಸರ್ಕಾರ ಮಾಡುತ್ತಿದೆ. ಸರ್ಕಾರ ಹರಾಜು ಪ್ರಕ್ರಿಯೆ ಕೈ ಬಿಡಬೇಕು ಎಂದರು. ಇದನ್ನೂ ಓದಿ: ಮಾತಾ ಮಾಣಿಕೇಶ್ವರಿ ದೇವಸ್ಥಾನವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ – ಹೆಚ್.ಕೆ.ಪಾಟೀಲ್

    ಸಚಿವ ತಿಮ್ಮಾಪುರ್ ಅವರು ಉತ್ತರಿಸಿ, MSIL ಮಳಿಗೆಯನ್ನ ಹರಾಜು ಹಾಕುವ ಯಾವುದೇ ನಿರ್ಧಾರ ಮಾಡಿಲ್ಲ. ಈ ಬಗ್ಗೆ ಚರ್ಚೆ ಆಗಿದೆ ಅಷ್ಟೇ. ಹರಾಜು ಹಾಕಲು ಯಾವುದೇ ಕಾನೂನು ತೊಡಕಾಗುವುದಿಲ್ಲ. ಹರಾಜು ಹಾಕುವ ನಿರ್ಧಾರ ಸಹ ಮಾಡಿಲ್ಲ. ಅಂತಹ ನಿರ್ಧಾರ ಮಾಡಿದರೆ ತಿಳಿಸುತ್ತೇವೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಅಂತರಾಷ್ಟ್ರೀಯ ಮಹಿಳಾ ದಿನದಿಂದ ಮಹಿಳಾ ಗ್ರಾಮಸಭೆಗಳಿಗೆ ಚಾಲನೆ: ಪ್ರಿಯಾಂಕ್ ಖರ್ಗೆ

  • ಸಿಎಂ ವಿರುದ್ಧ ಮುನಿಸಿಕೊಂಡ ಕಾಂಗ್ರೆಸ್ ಸಚಿವ

    ಸಿಎಂ ವಿರುದ್ಧ ಮುನಿಸಿಕೊಂಡ ಕಾಂಗ್ರೆಸ್ ಸಚಿವ

    ಬೆಂಗಳೂರು: ಸಂಪುಟ ವಿಸ್ತರಣೆ ನಡೆದು ಖಾತೆ ಹಂಚಿಕೆ ಮುಗಿದು ಹೋಗಿದೆ. ಆದರೆ ದೋಸ್ತಿಗಳ ನಡುವೆ ಖಾತೆಯ ಗೊಂದಲ ಮಾತ್ರ ಇನ್ನೂ ಕಡಿಮೆ ಆಗಿಲ್ಲ. ಈ ಮೂಲಕ ಸಿಎಂ ಅವರು ಮೈತ್ರಿ ಮಾತುಕತೆಯಂತೆ ಖಾತೆ ನೀಡೋಕೆ ಹಿಂದೇಟು ಹಾಕಿದ್ರಾ ಅನ್ನೋ ಅನುಮಾನ ಮೂಡಿದೆ.

    ಹೌದು. ಸ್ವತಃ ಕಾಂಗ್ರೆಸ್ ಹೈ ಕಮಾಂಡ್ ಆರ್.ಬಿ.ತಿಮ್ಮಾಪುರ್ ಅವರಿಗೆ ಖಾತೆ ಹಂಚಿಕೆ ಗ್ರೀನ್ ಸಿಗ್ನಲ್ ನೀಡಿದರು. ಹೀಗಾಗಿ ಪಕ್ಷದ ವತಿಯಿಂದ ಸಕ್ಕರೆ ಹಾಗೂ ಒಳನಾಡು ಮತ್ತು ಬಂದರು ಖಾತೆಯನ್ನ ಆರ್.ಬಿ ತಿಮ್ಮಾಪುರ್ ಅವರಿಗೆ ಹಂಚಿಕೆ ಮಾಡಲಾಗಿದೆ. ಆದರೆ ಆರ್.ಬಿ ತಿಮ್ಮಾಪುರ್ ಬಳಿ ಕೇವಲ ಸಕ್ಕರೆ ಖಾತೆ ಮಾತ್ರ ಇದೆ.

    ಬಂದರು ಮತ್ತು ಒಳನಾಡು ಖಾತೆಯನ್ನ ಇನ್ನೂ ಸಿಎಂ ಅವರು ತಿಮ್ಮಾಪುರ್ ಅವರಿಗೆ ಹಂಚಿಕೆ ಮಾಡಿಲ್ಲ. ಇದಕ್ಕೆ ಕಾರಣ ಏನು ಎಂಬುದು ಮಾತ್ರ ಕೈ ಪಾಳಯದ ನಾಯಕರಿಗೆ ಇನ್ನೂ ಗೊತ್ತಿಲ್ಲ. ಸ್ವತಃ ಮಾಜಿ ಸಿಎಂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೇ ಖಾತೆ ಕೊಡಿಸಲು ಯತ್ನಿಸಿ ಸೋತಿದ್ದಾರೆ ಎನ್ನಲಾಗಿದೆ.

    ಹೆಸರಿಗೆ ಎರಡು ಖಾತೆಯ ಸಚಿವರಾದರೂ ಒಂದು ಖಾತೆ ಅಧಿಕೃತವಾಗಿ ಸಚಿವರ ಕೈಯಲ್ಲೇ ಇಲ್ಲ. ತಿಮ್ಮಾಪುರ್ ಅವರ ಕೈಯಲ್ಲಿ ಸಕ್ಕರೆ ಖಾತೆಯ ಸಿಹಿ ಇದ್ದರೂ, ಪಕ್ಷವೇ ಕೊಡ ಮಾಡಿದ ಬಂದರು ಮತ್ತು ಒಳನಾಡು ಖಾತೆಯ ಸಿಹಿ ಮಾತ್ರ ಇದೂವರೆಗೆ ಸಿಕ್ಕಿಲ್ಲ. ಒಟ್ಟಾರೆ ದೋಸ್ತಿಗಳ ನಡುವೆ ಖಾತೆಯ ಟೆನ್ಷನ್ ಮಾತ್ರ ಇನ್ನು ತಣ್ಣಗಾಗಿಲ್ಲ ಅನ್ನೋದಂತು ಸತ್ಯವಾಗಿದೆ.