Tag: ಆರ್ಥಿಕ ಪ್ಯಾಕೇಜ್

  • ಆರ್ಥಿಕ ಚೇತರಿಕೆಗಾಗಿ ಕೇಂದ್ರದಿಂದ ಮತ್ತೊಂದು ಪ್ಯಾಕೇಜ್ ಘೋಷಣೆಗೆ ತಯಾರಿ

    ಆರ್ಥಿಕ ಚೇತರಿಕೆಗಾಗಿ ಕೇಂದ್ರದಿಂದ ಮತ್ತೊಂದು ಪ್ಯಾಕೇಜ್ ಘೋಷಣೆಗೆ ತಯಾರಿ

    ನವದೆಹಲಿ: ದೇಶದ ಅರ್ಥ ವ್ಯವಸ್ಥೆಯ ಚೇತರಿಕೆಗಾಗಿ ಕೇಂದ್ರ ಸರ್ಕಾರ ಮತ್ತೊಂದು ಆರ್ಥಿಕ ಪ್ಯಾಕೇಜ್ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಆರ್ಥಿಕ ಪ್ಯಾಕೇಜ್ ಘೋಷಣೆ ಕುರಿತು ಹಣಕಾಸು ಇಲಾಖೆಯ ಕಾರ್ಯದರ್ಶಿ ಅಜಯ್ ಭೂಷನ್ ಪಾಂಡೆ ಸುಳಿವು ನೀಡಿದ್ದಾರೆ.

    ಮಾಹಾಮಾರಿ ಕೊರೊನಾ ವೈರಸ್ ನಿಂದಾಗಿ ದೇಶದ ಯುವ ಜನತೆ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ಹೀಗಾಗಿ ಸರ್ಕಾರ ಮತ್ತೊಂದು ಪ್ಯಾಕೇಜ್ ಘೋಷಣೆ ಮಾಡಬಹುದು. ಈ ಸಂಬಂಧ ಸರ್ಕಾರ ಕೆಲಸ ಮಾಡುತ್ತಿದೆ. ತಳಮಟ್ಟದಿಂದ ಸರ್ಕಾರ ಪ್ರತಿಯೊಂದು ಅಂಶಗಳನ್ನ ಗಮನಿಸುತ್ತಿದೆ. ಯಾರಿಗೆ, ಯಾವಾಗ ಮತ್ತು ಯಾವ ವರ್ಗದವರಿಗೆ ಆರ್ಥಿಕ ಸಹಾಯವಿದೆ ಎಂಬುದರ ಬಗ್ಗೆ ಸರ್ಕಾರ ಎಲ್ಲ ಸಚಿವಾಲಯ, ಉದ್ಯಮಿ, ವ್ಯಾಪಾರಿ ಸಂಘಗಳು ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದೆ. ಸಲಹೆಗಳನ್ನು ಆಧರಿಸಿ ಉತ್ತಮ ಪ್ಯಾಕೇಜ್ ನೀಡಲಾಗುವುದು ಎಂದು ಅಜಯ್ ಭೂಷನ್ ಪಾಂಡೆ ತಿಳಿಸಿದ್ದಾರೆ.

    ದೇಶದ ಅರ್ಥವ್ಯವಸ್ಥೆ ಸಹಜ ಸ್ಥಿತಿಗೆ ಮರಳುತ್ತಿದೆ. ಅಕ್ಟೋಬರ್ ತಿಂಗಳ ಜಿಎಸ್‍ಟಿ ಸಂಗ್ರಹ 1,05,155 ಕೋಟಿ ರೂ.ಗೆ ತಲುಪಿದೆ. ಕಳೆದ ವರ್ಷದ ಈ ತಿಂಗಳಿಗಿಂತ ಜಿಎಸ್‍ಟಿ ಆದಾಯ ಶೇ.10ರಷ್ಟು ಏರಿಕೆಯಾಗಿದೆ. ಇದರ ಜೊತೆ ರಫ್ತು ಮತ್ತು ಆಮದು ವ್ಯಾಪಾರಗಳಲ್ಲಿ ಅಭಿವೃದ್ಧಿ ಕಂಡಿದೆ ಎಂದು ಮಾಹಿತಿ ನೀಡಿದರು.

    ಇ-ವೇ ಬಿಲ್, ಇ-ಚಾಲನ್ ಜಿಎಸ್‍ಟಿ ಸಂಗ್ರಹದಲ್ಲಿನ ಸುಧಾರಣೆಯ ಸೂಚನೆಯನ್ನ ನೀಡುತ್ತಿದೆ. ಭಾರತದ ಅರ್ಥವ್ಯವಸ್ಥೆಯೂ ಮೊದಲಿನ ಸ್ಥಿತಿಗೆ ಹಂತ ಹಂತವಾಗಿ ಮರಳುತ್ತಿದೆ. ಪ್ರಸಕ್ತ ವರ್ಷ ಅಂದ್ರೆ ಏಪ್ರಿಲ್ ನಿಂದ ಅಕ್ಟೋಬರ್ ವರೆಗಿನ ನೇರ ತೆರಿಗೆ ಸಂಗ್ರಹ ಕಳೆದ ಬಾರಿಗಿಂತ ಶೇ.22 ಕುಸಿತಗೊಂದು 4.95 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ ಎಂದು ಪಾಂಡೆ ತಿಳಿದರು.

  • ಕೇಂದ್ರದಿಂದ ಕೊನೆಯ ಹಂತದ ಆರ್ಥಿಕ ಪ್ಯಾಕೇಜ್ ಬಿಡುಗಡೆ? – ಯಾವ ಕ್ಷೇತ್ರಕ್ಕೆ ಇಂದು ಬಂಪರ್

    ಕೇಂದ್ರದಿಂದ ಕೊನೆಯ ಹಂತದ ಆರ್ಥಿಕ ಪ್ಯಾಕೇಜ್ ಬಿಡುಗಡೆ? – ಯಾವ ಕ್ಷೇತ್ರಕ್ಕೆ ಇಂದು ಬಂಪರ್

    ನವದೆಹಲಿ: ದೇಶದಲ್ಲಿ ಕೊರೊನಾ ಸಂಕಷ್ಟದಿಂದ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಈ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ 20 ಲಕ್ಷ ಕೋಟಿ ಮೌಲ್ಯದ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಈಗಾಗಲೇ ಎರಡು ಹಂತದಲ್ಲಿ ಈ ಪ್ಯಾಕೇಜ್ ಹಂಚಿಕೆ ಮಾಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಕೊನೆಯ ಹಂತವಾಗಿ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ.

    ಇಂದಿನ ಪ್ಯಾಕೇಜ್ ಸುಮಾರು 3.5 ಲಕ್ಷ ಕೋಟಿ ಮೌಲ್ಯದ್ದು ಇರಲಿದೆ ಎನ್ನಲಾಗಿದ್ದು, ದೊಡ್ಡ ಹಿಡುವಳಿ ಕೃಷಿಕರು, ಪ್ರವಾಸೋದ್ಯಮ ಅಭಿವೃದ್ಧಿ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಬಹುದು. ಇಲ್ಲದೇ ಲಾಕ್‍ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ವಿಮಾನಯಾನ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಬಹುದು ಎನ್ನಲಾಗುತ್ತಿದೆ.

    ಕೊರೊನಾ ಭೀತಿಯಿಂದ ಚೀನಾದಿಂದ ವಿದೇಶ ಕಂಪನಿಗಳು ಸ್ಥಳಾಂತರಗೊಳ್ಳುತ್ತಿದ್ದು, ಇವುಗಳನ್ನು ಸೆಳೆಯಲು ವಿದೇಶಿ ಹೂಡಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಲವು ಬದಲಾವಣೆ ಹಾಗೂ ಪ್ಯಾಕೇಜ್ ಕೆಲ ಭಾಗ ಹಂಚಿಕೆಯಾಗಬಹುದು ಎಂದು ಮೂಲಗಳು ಹೇಳಿವೆ. ಇಂದು ಸಂಜೆ 4 ಗಂಟೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೂರನೇ ಹಂತದ ಪ್ಯಾಕೇಜ್ ಘೋಷಣೆ ಮಾಡಲಿದ್ದು, ಇದರಲ್ಲಿ ಆತಿಥ್ಯ ಉದ್ಯಮಕ್ಕೂ ಪರಿಹಾರ ಕ್ರಮಗಳನ್ನು ಘೋಷಿಸುವ ಸಾಧ್ಯತೆ ಇದೆ.

    ನಿರ್ಮಲಾ ಸೀತಾರಾಮನ್ ಮೊದಲ ಹಂತದ ಪ್ಯಾಕೇಜ್ ನಲ್ಲಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಗೆಗಳಿಗೆ ಆರು ಲಕ್ಷ ಕೋಟಿ ಮೌಲ್ಯದ ಪ್ಯಾಕೇಜ್, ಎರಡನೇ ಹಂತದಲ್ಲಿ ರೈತರು ಕೃಷಿ ವಲಸೆ ಕಾರ್ಮಿಕರಿಗೆ ಸುಮಾರು ನಾಲ್ಕು ಲಕ್ಷ ಕೋಟಿ ಘೋಷಣೆ ಮಾಡಿದ್ದರು. ಇದಕ್ಕೂ ಮುನ್ನ ಕೇಂದ್ರ ಸರ್ಕಾರ 1.75 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿತ್ತು. ಆರ್.ಬಿ.ಐ ಸುಮಾರು ಐದು ಲಕ್ಷ ಕೋಟಿ ಮೌಲ್ಯದ ವಿವಿಧ ಹಂತದಲ್ಲಿ ವಿನಾಯತಿಗಳು ನೀಡಿತ್ತು. ಈ ಎಲ್ಲ ಅಂಶಗಳು 20 ಲಕ್ಷ ಕೋಟಿ ಪ್ಯಾಕೇಜ್ ನಲ್ಲಿ ಒಳಗೊಂಡಿದ್ದು ಸದ್ಯ 3.5 ಲಕ್ಷ ಕೋಟಿ ಬಾಕಿ ಉಳಿದುಕೊಂಡಿದ್ದ ಇಂದು ಕೊನೆಯ ಹಂತದಲ್ಲಿ ಸಂಜೆ 4 ಗಂಟೆಗೆ ಬಿಡುಗಡೆ ಮಾಡಬಹುದು.