Tag: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

  • ರಾಜ್ಯದಲ್ಲಿ 7 ಕೋಟಿ 50 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ: ಸುಧಾಕರ್

    ರಾಜ್ಯದಲ್ಲಿ 7 ಕೋಟಿ 50 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ: ಸುಧಾಕರ್

    ಬೆಂಗಳೂರು: ರಾಜ್ಯದಲ್ಲಿ ಒಟ್ಟಾರೆ 7 ಕೋಟಿ 50 ಲಕ್ಷ ಡೋಸ್ ಲಸಿಕೆ ನೀಡಲಾಗಿದ್ದು, ಬುಧವಾರ ಒಂದೇ ದಿನ 9 ಲಕ್ಷ ಡೋಸ್ ಲಸಿಕೆ ನೀಡಿದ್ದೇವೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶೇ. 92 ಜನರು ಮೊದಲ ಡೋಸ್ ಪಡೆದಿದ್ದರೇ, ಶೇ.62 ರಷ್ಟು ಜನರಿಗೆ ಸೆಕೆಂಡ್ ಡೋಸ್ ನೀಡಲಾಗಿದೆ. ಇಡೀ ದೇಶದಲ್ಲೇ ನಮ್ಮ ರಾಜ್ಯ ಲಸಿಕೆ ನೀಡುವುದರಲ್ಲಿ 2-3ನೇ ಸ್ಥಾನದಲ್ಲಿ ಇದ್ದೇವೆ. ಇದಕ್ಕೆ ಸಿಎಂ ಕೂಡಾ ಹೆಚ್ಚು ಸಹಕಾರ ನೀಡಿದ್ದಾರೆ. ಹಾಗೆಯೇ ಆರೋಗ್ಯ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಲಸಿಕೆ ಪಡೆದ ಜನರಿಗೂ ಅಭಿನಂದನೆ ಸಲ್ಲಿಸಿದ ಅವರು, ಜನರು ಆದಷ್ಟು ಬೇಗ ಲಸಿಕೆ ಪಡೆಯಬೇಕು ಎಂದು ಸಲಹೆ ನೀಡಿದರು.

    ಒಂದು ಡೋಸ್ ಲಸಿಕೆ ಪಡೆದರೆ, ಸ್ಪಲ್ಪ ರೋಗನಿರೋಧಕ ಶಕ್ತಿ ಬರುತ್ತದೆ. ಸಂಪೂರ್ಣ ರೋಗ ನಿರೋಧಕ ಶಕ್ತಿ ಬರಬೇಕಾದರೆ, 2 ಡೋಸ್ ಪಡೆಯಲೇಬೇಕು. ಹೀಗಾಗಿ ಜನ ಎರಡು ಡೋಸ್ ಲಸಿಕೆ ಪಡೆಯಬೇಕು ಎಂದು ಸೂಚಿಸಿದರು.

    ಓಮಿಕ್ರಾನ್ ಆತಂಕ: ಕೊರೊನಾ ರೂಪಾಂತರಿ ಓಮಿಕ್ರಾನ್ ಆತಂಕದಿಂದಾಗಿ ಏರ್‍ಪೋರ್ಟ್‍ನಲ್ಲಿ ವಿದೇಶಿ ಪ್ರಯಾಣಿಕರ ಪರೀಕ್ಷೆಗೆ ಎಲ್ಲ ಸಿದ್ಧತೆ ಮಾಡಿದ್ದೇವೆ. ಈ ಬಗ್ಗೆ ಖುದ್ದಾಗಿ ಹೋಗಿ ಪರಿಶೀಲನೆ ಮಾಡಿದ್ದೇನೆ. ಎಲ್ಲರಿಗೂ ಕಡ್ಡಾಯ ಟೆಸ್ಟ್ ಮಾಡಲಾಗುತ್ತದೆ. ಜೊತೆಗೆ ಟೆಸ್ಟ್ ವರದಿ 3-4 ಗಂಟೆ ಒಳಗೆ ಬರೋ ಹಾಗೆ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರು ಇದಕ್ಕೆ ಸಹಕಾರ ನೀಡಬೇಕು ಎಂದರು. ಇದನ್ನೂ ಓದಿ: ಎಸ್.ಆರ್. ವಿಶ್ವನಾಥ್ ಕೊಲೆಗೆ ಸಂಚು ಪ್ರಕರಣ- ಗೋಪಾಲಕೃಷ್ಣ ವಿರುದ್ಧ ಎಫ್‍ಐಆರ್

    ಅಬೋರ್ಡ್ ಟೆಸ್ಟ್: ತಕ್ಷಣವೇ ರಿಪೋರ್ಟ್ ಬರಲು ಅಬೋಡ್ ಟೆಸ್ಟ್ ಮಾಡಲಾಗುತ್ತಿದೆ. ಈ ಅಬೋರ್ಡ್ ಟೆಸ್ಟ್‍ಗೆ ಕೇಂದ್ರವೇ ದರ ನಿಗದಿಗೊಳಿಸಿದೆ. ಈ ಟೆಸ್ಟ್‍ಗೆ 3 ಸಾವಿರ ರೂ. ನೀಡಬೇಕು. ಅಬೋರ್ಡ್ ಟೆಸ್ಟ್ 1-2 ಗಂಟೆಯಲ್ಲಿ ಬರುತ್ತದೆ. ಈ ಟೆಸ್ಟ್ ಕೂಡಾ ನಿಖರವಾದ ವರದಿ ನೀಡುತ್ತದೆ. ಜೊತೆಗೆ ಆರ್‍ಟಿಪಿಸಿಆರ್ ಟೆಸ್ಟ್ ಕೂಡಾ 3-4 ಗಂಟೆ ಒಳಗೆ ರಿಪೋರ್ಟ್ ನೀಡಲು ಕ್ರಮವಹಿಸಲಾಗಿದೆ ಎಂದರು.

    ಕೆಲ ಎಂಎನ್‍ಸಿ ಕಂಪನಿ ಅವರು ನಮ್ಮ ಬಿಡಿ ಅಮೇಲೆ ಟ್ರ್ಯಾಕ್ ಮಾಡಿ ಅಂತಿದ್ದಾರೆ. ಆದರೆ ಅದು ಸಾಧ್ಯವಿಲ್ಲ. ಈ ಬಗ್ಗೆ ನಮಗೆ ಎರಡು ವರ್ಷಗಳ ಅನುಭವ ಆಗಿದೆ. ಹೀಗಾಗಿ ಎಲ್ಲರಿಗೂ ಟೆಸ್ಟ್ ಕಡ್ಡಾಯ ಮಾಡಿದ್ದೇವೆ. ಪ್ರಯಾಣಿಕರು ಇದಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದರು.

    ಮಾಲ್ ಸೇರಿದಂತೆ ಇನ್ನಿತರೆ ಸಾರ್ವಜನಿಕ ಸ್ಥಳಗಳಲ್ಲಿ ಎರಡು ಡೋಸ್ ಲಸಿಕೆ ಕಡ್ಡಾಯ ಮಾಡುವ ವಿಚಾರವಾಗಿ ಮಾತನಾಡಿದ ಅವರು, ಬಿಬಿಎಂಪಿಯಿಂದ ಈಗಾಗಲೇ ನಮಗೆ ಮನವಿ ಬಂದಿದೆ. ಆದರೆ ಇಂದು ಮುಖ್ಯಮಂತ್ರಿ ಅವರು ದೆಹಲಿಗೆ ತೆರಳುತ್ತಾರೆ. ದೆಹಲಿಯಿಂದ ಅವರು ಬಂದ ಕೂಡಲೇ ಚರ್ಚೆ ಮಾಡಿ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ಅಗತ್ಯ ಇರುವ ಕಡೆ ಎರಡು ಡೋಸ್ ಲಸಿಕೆ ಕಡ್ಡಾಯ ಮಾಡುವುದರ ಕುರಿತು ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಒಬ್ಬ ಜನಪ್ರತಿನಿಧಿ ಮೇಲೆ ಈ ರೀತಿ ಕೊಲೆ ಹಂತಕ್ಕೆ ಇಳಿದಿದ್ದು ಭಯ ತರಿಸಿದೆ: ಬಿ.ವೈ ವಿಜಯೇಂದ್ರ

    ಸಾರ್ವಜನಿಕ ಪ್ರದೇಶದಲ್ಲಿ ನಿರ್ಬಂಧದ ಕುರಿತು ಮಾತನಾಡಿದ ಅವರು, ಇನ್ನೂ ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಎರಡು ಡೋಸ್ ಆಗದವರಿಗೆ ನಿರ್ಬಂಧ ವಿಧಿಸುವ ಬಗ್ಗೆ ನಿರ್ಧಾರ ಆಗಿಲ್ಲ. ಆ ಬಗ್ಗೆ ಸಲಹೆಗಳು ಬಂದಿವೆ. ಇವೆಲ್ಲವನ್ನು ಸಿಎಂ ದೆಹಲಿಯಿಂದ ವಾಪಸಾದ ಬಳಿಕ ಚರ್ಚೆ ಮಾಡಿ ಅಂತಿಮ ನಿರ್ಧಾರ ಮಾಡುತ್ತೇವೆ ಎಂದು ಸುಧಾಕರ್ ಸ್ಪಷ್ಟನೆ ನೀಡಿದರು.

  • ವಂಚಕ ಯುವರಾಜ್ ದುಡ್ಡು ಮಾಡಿದ್ದೆಲ್ಲ ಹಿಂದಿನ ಸರ್ಕಾರದಲ್ಲೇ: ಸುಧಾಕರ್

    ವಂಚಕ ಯುವರಾಜ್ ದುಡ್ಡು ಮಾಡಿದ್ದೆಲ್ಲ ಹಿಂದಿನ ಸರ್ಕಾರದಲ್ಲೇ: ಸುಧಾಕರ್

    ಬೆಂಗಳೂರು: ವಂಚಕ ಯುವರಾಜ ದುಡ್ಡು ಮಾಡಿದ್ದೆಲ್ಲ ಹಿಂದಿನ ಸರ್ಕಾರದಲ್ಲೇ, ನಮ್ಮ ಸರ್ಕಾರ ಆತನನ್ನ ಬಂಧನ ಮಾಡಿ ಬಯಲಿಗೆ ಎಳೆದಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕಾಂಗ್ರೆಸ್ ಕಾಲೆಳೆದಿದ್ದಾರೆ.

    ಬಿಜೆಪಿ ಹಲವರು ನಾಯಕರ ಜೊತೆಯಲ್ಲಿ ವಂಚಕ ಯುವರಾಜ್ ಫೋಟೋದಲ್ಲಿ ಕಾಣಿಸಿಕೊಂಡಿರುವ ಕುರಿತಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ನಮ್ಮ ಸರ್ಕಾರ ಆತನ ಬಂಧನ ಮಾಡಿ ಪ್ರಕರಣವನ್ನು ಬಯಲಿಗೆ ಎಳೆದಿದೆ. ರಾಜಕಾರಣಿಗಳು ಎಂದರೆ ಜನರ ಗುಂಪಲ್ಲಿ ಎಲ್ಲರೂ ಬಂದು ಫೊಟೋವನ್ನು ತೆಗೆದುಕೊಳ್ಳುತ್ತಾರೆ ಬೇಡ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಆದರೆ ಅದನ್ನೇ ಗುರಿಯಾಗಿಟ್ಟುಕೊಳ್ಳುವುದು ಸರಿಯಲ್ಲ. ಯಾರೂ ಕೂಡಾ ಅವರೊಂದಿಗೆ ಸಂಪರ್ಕವನ್ನು ಹೊಂದಿಲ್ಲ. ಯುವರಾಜ್ ಜೊತೆಯಲ್ಲಿ ಏನಾದರೂ ವ್ಯವಹಾರ ನಡೆಸಿದ್ದರೆ ನಾವು ಕೇಳಬಹುದೇ ಹೊರತು ಫೋಟೋವನ್ನು ಮಾತ್ರ ಇಟ್ಟುಕೊಂಡು ಹೀಗೆ ಹೇಳುವುದು ಸರಿಯಾದುದ್ದಲ್ಲ ಎಂದು ಹೇಳಿದ್ದಾರೆ.

    ಯಾರು ಬಂದು ಸೆಲ್ಫಿ ತಗೋತಾರೋ ಯಾರು ನಮ್ಮಪಕ್ಕದಲ್ಲಿ ಬಂದು ನಿಲ್ಲುತ್ತಾರೋ ಎನ್ನುವುದು ನಮಗೆ ಗೊತ್ತಿರುವುದಿಲ್ಲ. ಇದು ಎಲ್ಲ ಪಕ್ಷದ ನಾಯಕರಿಗೂ ಈ ಸಮಸ್ಯೆಯಾಗುತ್ತಿದೆ. ನಾವು ಇನ್ನು ಮುಂದಿನ ದಿನಗಳಲ್ಲಿ ಜಾಗೃತರಾಗಿರಬೇಕು. ಮಹನೀಯರು, ಸಂತರು, ಸಾಧುಗಳು ಇದ್ದಾರೆ ಅಂಥವರ ಹೆಸರಲ್ಲಿ ವೇಷ ಧರಿಸಿ ವಂಚನೆ ಮಾಡುವ ಇವರು ಕ್ರಿಮಿನಲ್‍ಗಳು, ಇಂಥವರಿಗೆ ಶಿಕ್ಷೆಯಾಗಬೇಕು. ನಮ್ಮ ಸರ್ಕಾರ ಈ ಪ್ರಕರಣವನ್ನು ಬಯಲಿಗೆ ಎಳದಿದೆ ಎಂದಿದ್ದಾರೆ.

    ಕೆ ಸಿ ವೇಣುಗೋಪಾಲ್ ಜತೆಗೂ ಯುವರಾಜನ ಫೊಟೋ ಇದೆ. ವೇಣುಗೋಪಾಲ್ ಅವರಿಗೆ ಏನ್ ಹೇಳಿದ್ನೋ ಗೊತ್ತಿಲ್ಲ. ಪ್ರಧಾನಿ ಮಾಡಿಸ್ತೀನಿ ಅಂತ ವೇಣುಗೋಪಾಲ್ ಗೆ ಹೇಳಿದ್ದಾನೇನೋ ಎಂದು ಸುಧಾಕರ್ ವ್ಯಂಗ್ಯ ಮಾಡಿದ್ದಾರೆ.